ಬಿಜೆಪಿ ಮಾಜಿ ಶಾಸಕ ಕುಲದೀಪ್ ಸೆಂಗಾರ್ ಮತ್ತು ಅತ್ಯಾಚಾರ ಆರೋಪಿಯಾದ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ಫೋಟೋಗಳಿರುವ ಹೋರ್ಡಿಂಗ್ ಅನ್ನು ಹಾಕಲಾಗಿದ್ದು, ಇದನ್ನು ಸಮಾಜವಾದಿ ನಾಯಕರೊಬ್ಬರು ಮಾಡಿದ್ದಾರೆ ಎನ್ನಲಾಗಿದೆ. ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರದ ಆರೋಪಿಗಳೆಂದು ಆರೋಪಿಸಿ ಸರ್ಕಾರ ಹಾಕಲಾಗಿರುವ ಹೋರ್ಡಿಂಗ್ ಪಕ್ಕದಲ್ಲೇ ಈ ಬ್ಯಾನರ್ ಹಾಕಲಾಗಿದೆ.
ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಐ.ಪಿ.ಸಿಂಗ್ ಅವರು “ಇದು ಈ ರಾಜ್ಯದ ಅಪರಾಧಿಗಳು, ಇವರಿಂದ ದೂರವಿರಿ” ಎಂಬ ಶೀರ್ಷಿಕೆಯಲ್ಲಿ ಕುಲದೀಪ್ ಸೆಂಗಾರ್ ಮತ್ತು ಚಿನ್ಮಯಾನಂದ್ ಅವರ ವಿರುದ್ಧದ ಆರೋಪಗಳ ವಿವರವಿರುವ ಹಾಗೂ ಅವರ ಫೋಟೋಗಳ ಸಹಿತವಿರುವ ಬ್ಯಾನರನ್ನು ರಾತ್ರಿ ಹಾಕಿದ್ದರು. ಬೆಳಿಗ್ಗೆ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.
“ಪ್ರತಿಭಟನಾಕಾರರಿಗೆ ಯಾವುದೇ ಖಾಸಗಿತನ ಇಲ್ಲದಿರುವಾಗ ಹಾಗೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ಸೂಚನೆಯ ಹೊರತಾಗಿಯೂ ಆದಿತ್ಯನಾಥ್ ಸರ್ಕಾರವು ಹೋರ್ಡಿಂಗ್ಗಳನ್ನು ತೆಗೆದುಹಾಕದಿದ್ದಾಗ, ಲೋಹಿಯಾ ಜಂಕ್ಷನ್ನಲ್ಲಿ ನ್ಯಾಯಾಲಯಗಳ ಹೆಸರಿಸಿದ ಕೆಲವು ಅಪರಾಧಿಗಳ ಪೋಸ್ಟರನ್ನು ನಾನು ಕೂಡ ‘ಹೆಣ್ಣುಮಕ್ಕಳು ಹುಷಾರಾಗಿರಿ’ ಎಂದು ಸಾರ್ವಜನಿಕರ ಮಾಹಿತಿಗಾಗಿ ಹಾಕಿದ್ದೇನೆ” ಎಂದು ಐಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.
जब प्रदर्शनकारियों की कोई निजता नहीं है और उच्चन्यायालय और सर्वोच्च न्यायालय के आदेश के बाद भी योगी सरकार होर्डिंग नहीं हटा रही है तो ये लीजिए फिर। लोहिया चौराहे पर मैंने भी कुछ कोर्ट द्वारा नामित अपराधियों का पोस्टर जनहित में जारी कर दिया है, इनसे बेटियाँ सावधान रहें। pic.twitter.com/9AqGBxMoJR
— I.P. Singh (@IPSinghSp) March 12, 2020
ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್ ಮೇಲೆ ಉನ್ನಾವೊದಲ್ಲಿ ಹದಿಹರೆಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವಿದೆ. ಮಾಜಿ ಬಿಜೆಪಿ ನಾಯಕರಾಗಿರುವ ಚಿನ್ಮಯಾನಂದ್ ಅವರನ್ನು ಶಹಜಹಾನ್ಪುರದಲ್ಲಿ ತನ್ನ ಶಿಕ್ಷಣ ಸಂಸ್ಥೆಯ ಕಾನೂನು ವಿದ್ಯಾರ್ಥಿಯನ್ನು ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.
ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರದ ಆರೋಪಿಗಳೆಂದು ಆರೋಪಿಸಿ ಹಾಕಲಾಗಿರುವ ಹೋರ್ಡಿಂಗ್ಗಳನ್ನು ಕೂಡಲೇ ತೆಗೆದುಹಾಕಬೇಕೆಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ ಸಹ ತೆಗೆದುಹಾಕಲು ತಾಕೀತು ಮಾಡಿದೆ. ಆದರೂ ಯೋಗಿ ಸರ್ಕಾರ ಹೋರ್ಡಿಂಗ್ ತೆರವುಗೊಳಿಸಿಲ್ಲ..