Homeಅಂಕಣಗಳುಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

- Advertisement -
- Advertisement -

ನಾವು ಸಣ್ಣವರಿದ್ದಾಗ ದೊಡ್ಡವರೆಲ್ಲಾ ಫೈವ್ ಎನ್.ಪಿ, ಟೆನ್ ಎನ್.ಪಿ ಅಂತ ಮಾತಾಡ್ತಿದ್ದರು. ಹಂಗಂದರ ನಯಾ ಪೈಸಾ. ಅದು ಆಣೆ – ಬಿಲ್ಲಿ ಲೆಕ್ಕ ಎಲ್ಲ ಹೋಗಿ ಪೈಸಾ ಬಂದಿದ್ದ ಕಾಲ.

ಅದು ಹಳೇದು ಆತು. ಈಗ ಬಂದಿರೋದು ಎನ್.ಇ.ಪಿ. ಅದು ಒಂದು ಥರ ಆಣೆ – ಬಿಲ್ಲಿ ಲೆಕ್ಕ ಹೋಗಿ ನಯಾ ಪೈಸಾ ಬಂದಂಗ. ಈ ಎನ್.ಇ.ಪಿ ಎನಪಾ ಅಂದ್ರ ಅದು ಹೊಸ ಶಿಕ್ಷಣ ನೀತಿ.

ನೀವು ಇಷ್ಟು ದಿವಸ ಬಹಳ ನೀತಿ- ನಿಯಮ ನೋಡಿರಬಹುಡು. ಅವುಕುರ ಹಣೆಬರಹ ಅಷ್ಟ.

ನೀತಿ ನಿಯಮಗಳು ಬರೇ ಕಾಗದದಾಗ ಇರಬೇಕು, ಜಾರಿಗೆ ಮಾತ್ರ ಬರೋದಿಲ್ಲ ಅಂತ ನೀವು ಏನರ ತಿಳ್ಕೊಂಡಿರಬಹುದು. ಅದು ಗಾಡಿ ಓಡಿಸೋವಾಗ ಎಡಗಡೆಯಿಂದ ಮುಂದಕ್ಕ ಹೋಗಬಾರದು ಅನ್ನೋ ಸರಳ ನಿಯಮ ಇರಬಹುದು ಅಥವಾ ಅಭಯಾರಣ್ಯದಾಗಿನ ಹುಲಿ- ಸಿಂಹ ಎಲ್ಲ ಕೊಂದು ಕಾರಖಾನಿ ಮಾಲೀಕರಿಗೆ ಕೊಡಬಾರದು ಅನ್ನೋ ಸಹಜ ನೀತಿ ಇರಲಿ, ಎಲ್ಲಾನೂ ಮುರಿಯಬಹುದು. ನೀತಿ ನಿಯಮದ ವಿಷಯಕ್ಕ ಬಂದರ ನಮಗ ಪ್ರತಿ ದಿನಾನು ದಸರಾ. ಪ್ರತಿ ಸಂಜೆ ಸೀಮೋಲ್ಲಂಘನ. ಈ ವಿಷಯಕ್ಕ ಬಂದರ ನಾವು ಮಹಿಷ ಕುಲದವರು.

ನಾವು ಧಾರವಾಡದ ಹತ್ತರ ಎಮ್ಮಿಗನೂರಿನ ನಾಡಹಬ್ಬ ಮಾಡಲಿ, ಮಂಡ್ಯದ ಹತ್ತರ ಮಹಿಷಾಸುರ ಊರಿನೊಳಗ ಚಾಮುಂಡಿ ಬೆಟ್ಟದ ಹತ್ತರ ದಸರಾ ಆಚರಿಸಲಿ, ಅದಕ್ಕ ಭಾಳ ವ್ಯತ್ಯಾಸ ಏನೂ ಇಲ್ಲ.

ಈಗ ನೋಡ್ರಿಪಾ, ಆ ನೀತಿ ಕೇಂದ್ರ ಸಚಿವ ಸಂಪುಟದಾಗ ಪಾಸು ಆಗಿ ಮೂರು ದಿವಸ ಆದ ಮ್ಯಾಲೆ ಅದನ್ನ ಕೇಂದ್ರ ಶಿಕ್ಷಣ ಇಲಾಖೆ ಜಾಲತಾಣದಾಗ ಬಿಟ್ಟಾರೂ. ಅದು ಸುಮಾರು 70 ಪುಟ ಐತಿ. ಅದರವು ಕೆಲವು ಪೇಜು ಅಷ್ಟ ನೋಡೋಣ.

ಮೊದಲಿಗೆ ಅದರಾಗ ಛಲೋ ಏನ ಐತಿ ಅನ್ನೋದು ನೋಡೋಣು. ಮೊದಲಿಗೆ, ಸಾಧ್ಯವಾದಷ್ಟು ಮಟ್ಟಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಅಂತ ಒಂದು ಮಾತು ಐತಿ.

ಇದು ಈಗ ಸದ್ಯ ಚಾಲ್ತಿ ಇರೋ ಆಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಪ್ರಕರಣದಾಗ ಸುಪ್ರೀಂ ಕೋರ್ಟು 2013ದೊಳಗ ನೀಡಿದ ತೀರ್ಪಿನ ವಿರುದ್ಧ ಐತಿ. ಯಾರಾದರೂ ಅದನ್ನು ಪ್ರಶ್ನಿಸಿದರ, ದೆಹಲಿಯೊಳಗಿನ ನಮ್ಮ ಲಾರ್ಡ್‍ಗಳು ನ್ಯಾಯಾಲಯದ ಲಾರ್ಡ್‍ಗಳನ್ನು ಹೆಂಗ ಒಪ್ಪಿಸತಾರ ನೋಡಬೇಕು.

ಎರಡನೇದು, ನಮ್ಮಂತಹ ಡ್ರಾಪ್‍ಔಟ್‍ಗಳು ಕಾಲೇಜು ಬಿಟ್ಟು ಹೋಗಿ ಹತ್ತು ವರ್ಷ ಆದ ಮ್ಯಾಲೆ ಮತ್ತ ಓದಬೇಕು ಅಂತ ಅನ್ನಿಸಿದರ ವಾಪಸ್ ಕಾಲೇಜಿಗೆ ಬಂದು ಎಲ್ಲಿಗೆ ಬಿಟ್ಟಿದ್ದಾರೋ ಅಲ್ಲಿಂದ ಶುರು ಮಾಡಬಹುದು.

ಮೂರನೇದು `ರೀಕಾಗ್ನಿಷನ್ ಆಫ್ ಪ್ರಯರ್ ಲರನಿಂಗ್’ ಅಂದ್ರ ಮುಂಚಿನ ಕಲಿಕೆಯನ್ನು ಗುರುತಿಸುವುದು ಅನ್ನೋ ಯೋಜನೆ ಒಳಗ, ಪ್ರಾಥಮಿಕ ಶಿಕ್ಷಣದ ನಂತರ ವಿದ್ಯಾರ್ಥಿಗಳು ಕರಕುಶಲ ಕಲೆ, ವೃತ್ತಿ ಶಿಕ್ಷಣ ಹಾಗೂ ಉದ್ಯೋಗ ಆಧಾರಿತ ಶಿಕ್ಷಣದ ತರಬೇತಿ ತೊಗೋಬಹುದು.

ಇನ್ನೊಂದು ಮಜಾ ಅಂದ್ರ ಎಂ.ಫಿಲ್ ಅಂತ ಒಂದು ಯಾರಿಗೂ ಬ್ಯಾಡಾಗಿದ್ದು ಒಂದು ಕೋರ್ಸ್ ಇತ್ತು. ನಮ್ಮ ಧಾರವಾಡ ಯುನಿವರ್ಸಿಟಿ ಒಳಗ ಒಂದು ಜೋಕು ಇತ್ತು. ಕೆಲಸ ಸಿಗಲಾರದ ಗಂಡು ಮಕ್ಕಳು ಮತ್ತು ಮದುವೆ ಆಗಲಾರದ ಹೆಣ್ಣು ಮಕ್ಕಳು ಸೇರಿಕೊಳ್ಳುವಂತಹ ಯಾವುದಾದರೂ ಕೋರ್ಸ್ ಇತ್ತು ಅಂದ್ರ ಅದು ಎಂ.ಫಿಲ್ ಅಂತ. ಆನಂತರ ನಮ್ಮ ಬಾಗಲಕೋಟೆಯ ಬಜರಂಗಿ ಭಾಯಿಜಾನ ಅರವಿಂದ್ ಲಿಂಬಾವಳಿ ಅವರು ಸಚಿವರಾದ ಮೇಲೆ ಅದನ್ನ ಸರ್ಕಾರಿ ಅಧ್ಯಾಪಕರ ನೇಮಕಾತಿಗೆ ಕಡ್ಡಾಯ ಮಾಡಿದರು. ಹಂಗ ಮಾಡಿದ ಮ್ಯಾಲೆ ನಮ್ಮ ಊರಾಗ ಟೂ ಮಿನಿಟ್ ಮ್ಯಾಗಿ ಮಾಡಿಕೊಂಡು ಇದ್ದ ಸಾವಿರಾರು ಡಬಲ್ ಪದವೀಧರರು ತಮಿಳುನಾಡು- ಒರಿಸ್ಸಾ – ಆಂಧ್ರ- ಗುಜರಾತಿನ ನೂರಾರು ಯೂನಿವರ್ಸಿಟಿಗಳಲ್ಲಿ ಧಿಡೀರ ಎಂ.ಫಿಲ್ ಮಾಡಿಬಿಟ್ಟರು. ಅಷ್ಟೊಂದು ಓದಿದವರಿಗೆ ಹೆಣ್ಣು ಹುಡುಕುವುದು ಕಷ್ಟ ಆಯಿತು. ಎಲ್ಲಿಂದ ಎಂ.ಫಿಲ್ ಮಾಡಿದಿರೋ ಅಲ್ಲಿಂದನ ಹೆಣ್ಣು ತರಬೇಕಾಗಿತ್ತು ಅಂತ ಹಿರೇರು ಹೇಳೋ ಪರಿಸ್ಥಿತಿ ಬಂತು.

ಈ ಎಂ.ಫಿಲ್‍ಅನ್ನ ರದ್ದು ಮಾಡರಿ ಅಂತ ಎನ್.ಇ.ಪಿದಾಗ ಒಂದು ಶಿಫಾರಸು ಐತಿ. ಇದಕ್ಕೂ ಒಂದು ವೆಲ್‍ಕಂ ಇರಲಿ.

ಡಿಗ್ರಿ ಮೂರು ವರ್ಷ ಹೋಗಿ ನಾಕು ಮಾಡಿದಾರು. ಒಂದು ವರ್ಷ ಓದಿದರ ಪ್ರಮಾಣ ಪತ್ರ, ಎರಡು ಓದಿದರ ಡಿಪ್ಲೋಮಾ, ಮೂರು ಓದಿದರ ಡಿಗ್ರಿ, ಹಾಗೂ ನಾಕು ಓದಿದರ ಮಾಸ್ಟರ್ ಡಿಗ್ರಿ ಅಂತ ಐತಿ. ಇನ್ನೊಂದು ವರ್ಷ ಓದರಿ, ನೌಕರಿ ಕೊಡ್ತೇವಿ ಅಂತ ಇರಬೇಕಾಗಿತ್ತು. ಆದರ ಹಂಗ ಇಲ್ಲ.

ಅಮೆರಿಕ – ಯುರೋಪಿನ ಪದ್ಧತಿಯಂತೆ ನಾಕು ವರ್ಷ ಡಿಗ್ರಿ, ಆನಂತರ ನೇರವಾಗಿ ಪಿ. ಎಚ್ ಡಿ. ಅಂತ ನಿಯಮ ಮಾಡಿದಾರು. ಹಂಗಾರ ಎಂಎ, ಎಂ ಕಾಂ, ಎಂಎಸ್ಸಿ ಕಲಿಸಿಗೋತ ನೂರಾರು ಎಕರೆ ಕ್ಯಾಂಪಸ್ಸುದೊಳಗ ಎರಡೂವರೆ ಎಕರೆ ಸರಕಾರಿ ಮನೆ ಒಳಗ ಇರೋ ಯೂಜಿಸಿ ಸಂಬಳದ ಪ್ರೊ.ಲಕ್ಷ್ಮೀಪತಿ ಅವರು ಮುಂದ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಇಲ್ಲ.

ಸರಕಾರಿ ಸಾಲಿ ಒಳಗ ಮೂರನೇ ವರ್ಷದಿಂದ ಮಕ್ಕಳಿಗೆ ಪ್ರವೇಶ ಕೊಡರಿ ಅಂತ ಹೇಳಿದಾರ. ಅದರ ಅದಕ್ಕ ತಕ್ಕ ತರಬೇತಿ, ಮೂಲ ಸೌಕರ್ಯ ಮುಂತಾದರ ಮಾತು ಇಲ್ಲ.

ಎಲ್ಲ ರೀತಿಯ ಉನ್ನತ ಶಿಕ್ಷಣದ ಮೂಗುದಾರ ಹಿಡಿಯಲಿಕ್ಕೆ ಒಂದೇ ಸಂಸ್ಥೆ ಮಾಡ್ತೇವಿ ಅಂತ ಘೋಷಣೆ ಹಾಕಿದಾರು. ಯುಜಿಸಿ, ಎ.ಐ.ಸಿ.ಟಿ.ಇ., ಕೃಷಿ ಶಿಕ್ಷಣ ಪರಿಷತ್ತು, ಮುಂತಾದಾವೆಲ್ಲ ಸೇರಿಸಿ ಒಂದ ಸಂಘಟನೆ ಆಗೋ ವಿಚಾರ ಐತಿ. ಇದು ಒಂದು ಲೆಕ್ಕದಾಗ ಅಪಾಯಕಾರಿ. ಸರಕಾರಿ ಸಂಘಟೆನೆಗಳಿಗೆ ಸಾಮಾನ್ಯವಾಗಿ ರಾಜಕೀಯ ನೇಮಕಾತಿ ಆಗತದ. ಅದರಗೂ ಆಳುವ ಪಕ್ಷದವರು, ಬರೆ ಸಿದ್ಧಾಂತದ ಆಧಾರದ ಮೇಲೆ ನೇಮಕ ಆಗತಾರ. ಏನರ ಓದಿದವರು, ರಾಜಕೀಯ ಕಾರಣಕ್ಕಾಗಿ ಇದರಾಗ ಸೇರಿಕೊಂಡು ಏನೇನರ ಬದಲಾವಣೆ ಮಾಡಲಿಕ್ಕ ಹತ್ತಿದರ ಏನು ಕತಿ?

ಇನ್ನ ಹಳ್ಳಿಯ ಸಣ್ಣ ಶಾಲೆಗಳನ್ನ ಬಂದು ಮಾಡಿ 5-10 ಕಿಲೋಮೀಟರು ಅಂತರದಾಗ ದೊಡ್ಡ ಶಾಲೆ ತಗಿಬೇಕು ಅಂತ ಇದರಾಗ ಒಂದು ಉದ್ಧಘೋಷ ಐತಿ. ಇದು ಖಂಡಿತ ಅಡ್ಡಡ್ಡ ಪರಿಣಾಮ ಬೀರತೇತಿ. ಈಗ ಪ್ರಾಥಮಿಕ ಶಾಲೆಗಳು ಒಂದು ಕಿಲೋಮೀಟರು ಅಂತರದೊಳಗ ಇರಬೇಕು ಅಂತ ಐತಿ. ಇದನ್ನ ತಗದು ಹತ್ತು ಕಿಲೋಮೀಟರು ಅಂತರ ಮಾಡಿದರ ಅದರ ದುಷ್ಪರಿಣಾಮ ಹತ್ತು ಪಟ್ಟುಗಿಂತ ಜಾಸ್ತಿ ಆಗತದ ಅಂತ ಒಂದು ಅಂದಾಜು.

ಸಾವಿರಾರು ವರ್ಷದಿಂದ ಶಿಕ್ಷಣದಿಂದ ದೂರ ಉಳಿದ ಸಮುದಾಯಗಳು ಇವತ್ತು ಸಾಲಿ ಮೆಟ್ಟಲ ಹತ್ತಲಿಕ್ಕೆ ಸಾಧ್ಯ ಆಗಿದ್ದು ಈ ಒಂದು ಕಿಲೋಮೀಟರು ಅಂತರದ ಕಾನೂನಿನಿಂದನ. ಇದು ದೊಡ್ಡವರಿಗೆ ತಿಳಿಯದೇ ಇರಲಿಕ್ಕೆ ಸಾಧ್ಯ ಇಲ್ಲ.

ಈ ಜಿ.ಇ.ಆರ್ ಅಂತ ಒಂದು ಐತಿ. ಅದು ಎಂ.ಜಿ.ಆರ್, ಎನ್.ಟಿ.ಆರ್‍ರಷ್ಟು ಜನಪ್ರಿಯ ಅಲ್ಲ. ಚಾಲ್ತಿ ಒಳಗೂ ಇಲ್ಲ. ಅದು ಏನಪ ಅಂದ್ರ ನಿಮ್ಮ ಊರಾಗ ಒಂದು ನೂರು ಹುಡುಗರು ಒಂದನೇ ತರಗತಿಗೆ ಸಾಲಿಗೆ ಹೋದರ ಆದರಾಗ ಎಷ್ಟು ಮಂದಿ ಯುನಿವರ್ಸಿಟಿಗೆ ಹೋಗತಾರ ಅನ್ನೋ ಲೆಕ್ಕ.

ಅದು ಈಗ ದಕ್ಷಿಣ ಭಾರತದಾಗ ಸುಮಾರು 30-50ರ ಒಳಗ ಐತಿ. ಉತ್ತರ ಹಿಂದೂಸ್ತಾನದಾಗ 5-25 ರವರೆಗೂ ಐತಿ. ಈ ಹಿನ್ನೆಲೆಯೊಳಗ 2035 ರವರೆಗೆ ಸಮಗ್ರ ಭಾರತ ರಾಷ್ಟ್ರದ ಸರಾಸರಿ ಜಿ.ಇ.ಆರ್ ಅನ್ನು 50 ಮಾಡಬೇಕು ಅಂತ ಎನ್.ಇ.ಪಿ ಒಳಗ ಐತಿ.

ಅದರ ಅದನ್ನ ಹೆಂಗ ಮಾಡಬೇಕು ಅನ್ನೋ ಮಾತು ಇದರಾಗ ಇಲ್ಲ. ಈಗ ದೇಶದ ತಲಾ ಉತ್ಪನ್ನದ ಶೇಕಡಾ 2-4 ರ ಒಳಗ ಇರೋ ಬಾಬತ್ತು 4-8 ಆಗಬೇಕು ಅನ್ನೋ ಮಾತು ಇಲ್ಲ. ಇದು ಹೆಂಗ ಅಂದ್ರ ಮನಿಗ ಹಾಲು, ಸಕ್ಕರಿ, ಶಾವಿಗೆ ತಂದು ಕೊಡಲಾರದ ಗಂಡ `ನಾಳೆ ಪಾಯಸ ಮಾಡು ಇಲ್ಲಾಂದರ ಬಡಿತೇನಿ’ ಅಂತ ಹೆಂಡತಿಗೆ ಹೇಳಿದ ಹಂಗ.

ಇನ್ನ ಖಾಸಗಿ ಸಹಭಾಗಿತ್ವದ ಮಾತಿಗೆ ಬರೋಣ. ಖಾಸಗಿ ಕ್ಷೇತ್ರ ಸರಕಾರದ ಭಾರ ಹಂಚಿಕೊಳ್ಳಬೇಕು. ಬಡವರಿಗೆ ಹೊರೆ ಆಗದಂತೆ ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು ಅಂತ ಇದಾರಗ ಒಂದು ಫರಮಾನು ಐತಿ.

ಸರಕಾರಿ ಹಾಗೂ ಖಾಸಗಿ ಶಾಲೆ- ಕಾಲೇಜುಗಳಿಗೆ ಒಂದೇ ಮಾನದಂಡ. ಅವಕ್ಕೆ ಒಂದೇ ನಿಗರಾಣಿ ಸಂಸ್ಥೆ ಅಂತ ಒಂದು ಶೀಲಾಲೇಖ ಐತಿ. ಕಲ್ಲಿನ ಮ್ಯಾಲೆ ಬರದ ಮಾತು ಸುಳ್ಳು ಆಗತದ? ಇಲ್ಲ. ಆ ನಿಗರಾಣಿ ಸಂಸ್ಥೆಯೊಳಗ ನಮ್ಮ ನಿರಾಣಿ ಸಾಹೇಬರು ಅಥವಾ ಅಂತವರು ಸೇರಿಕೊಂಡರ ಮುಂದ ಏನು?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

ಹಿಂದ ಟಿ.ಎಂ.ಎ. ಪೈ ಪ್ರಕರಣದಾಗ ನ್ಯಾಯಾಧೀಶರು `ಯೋಗ್ಯ ಲಾಭ’ ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅದನ್ನು ಕೇಂದ್ರ ಸರಕಾರ 2020 ರೊಳಗ ಅಫಿಶಿಯಲ್ ನೀತಿಯನ್ನಾಗಿ ಪ್ರಕಟಮಾಡಿತು.

ನಮ್ಮ ಪಂಥ ಪ್ರಧಾನ ಸೇವಕರು ಈ ನೀತಿ ನೌಕರಿ ಹುಡುಕುವರನ್ನು ಹುಟ್ಟು ಹಾಕುವುದಿಲ್ಲ. ನೌಕರಿ ಸೃಷ್ಟಿ ಮಾಡುವರನ್ನು ತಯಾರಿಸುತ್ತಾದೆ ಅಂತ ಹೇಳಿದಾರು. ಎಂಥ ಗಹನವಾದ ವಿಷಯಗಳನ್ನು ಅವರು ಎಷ್ಟು ಸರಳವಾದ ಭಾಷೆಯೊಳಗ ತಿಳಿ ಹೇಳತಾರ. ಮತ್ತು ಅದನ್ನ ಕೇಳಿಸಿಕೊಂಡವರು ಹೂಂ ಅಂತ ತಲೆದೂಗಿ ಚಪ್ಪಾಳೆ ತಟ್ಟಿ ವ್ಹಾ ವ್ಹಾ ಅಂತಾರ. ಈ ಗಹನವಾದ ಆಡಳಿತ ನೀತಿಯನ್ನು ಮೊದಲು ನಾವು ತಿಳಿದುಕೊಳ್ಳಬೇಕು.


ಇದನ್ನು ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...