Homeಅಂಕಣಗಳುನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!

ನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!

- Advertisement -
- Advertisement -

ಮೋದಿ ಸರಕಾರ ಒಂಬತ್ತು ವರ್ಷ ತುಂಬಿಸಿದ ಸಂತಸವನ್ನು, ದೇಶದ ತುಂಬ ಸಭೆ ಸಮಾರಂಭ ಯಜ್ಞ ಹೋಮ ಹವನ ಇತ್ಯಾದಿ ವೈದಿಕಾಚರಣೆಗಳಿಂದ ವಿಜೃಂಭಿಸಲು ತಯಾರಾಗುತ್ತಿರುವಾಗಲೇ ಭೀಕರ ರೈಲ್ವೆ ಅಪಘಾತ ಸಂಭವಿಸಿದೆ. ಎದೆ ನಡುಗಿಸುವ ಈ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಗೆ ಕಾರಣರ್‍ಯಾರು, ಹೊಣೆಗಾರರಾರು ಎಂಬ ಚರ್ಚೆಯು ಅವ್ಯಾಹತವಾಗಿ ನಡೆದಿದೆ. ಇದು ಒಂದೆಡೆಯಾದರೆ ಮೋದಿಯವರ ಒಂಬತ್ತು ವರ್ಷದ ಸಂಭ್ರಮದ ಸಮಯದಲ್ಲಿ ಸಂಭವಿಸಿದ ಸಾವುಗಳನ್ನು ನೆನೆಯುವುದಾದರೆ: 2019ರಲ್ಲಿ ನಡೆದ ಘಟನೆಯಲ್ಲಿ, 40 ಜನ ಸೈನಿಕರ ಬಲಿದಾನಕ್ಕೆ ಸರಕಾರದ ನಿರ್ಲಕ್ಷವೇ ಕಾರಾಣವೆಂದು ಜಮ್ಮುಕಾಶ್ಮೀರದ ಮಾಜಿ ರಾಜ್ಯಪಾಲರು ಬಹಿರಂಗಂಪಡಿಸಿದ್ದಾರೆ; ನಂತರ ಕೃಷಿಕಾಯ್ದೆ ಜಾರಿಯನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ 750 ಜನ ರೈತರು ಅಸುನೀಗಿದರು. ಆ ಸಾವುಗಳ ಬಗ್ಗೆ ಮಾತನಾಡದ ಪ್ರಧಾನಿಯವರು, ಶಿವಮೊಗ್ಗ ಸುಬ್ಬಣ್ಣ ಎಂಬ ಗಾಯಕರೊಬ್ಬರು ತೀರಿಕೊಂಡಾಗ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾವಿನಂಚಿನಲ್ಲಿದ್ದ ಸಿದ್ದೇಶ್ವರ ಸ್ವಾಮಿಗಳಿಗೆ ಫೋನ್ ಮಾಡಿದರು; ಆದರೆ ಸಿದ್ದೇಶ್ವರರಿಗೆ ಮಾತನಾಡಲು ಸಾಧ್ಯವಾಯಿತೋ ಇಲ್ಲವೋ! ಇವೆಲ್ಲಾ ಘಟನೆ ಪ್ರಧಾನಿಯ ಒಂಬತ್ತು ವರ್ಷದ ಸಂಭ್ರಮದಲ್ಲಿ ನೆನೆಸುವ ಘಟನೆಗಳಂತಲ್ಲಾ, ಥೂತ್ತೇರಿ.

*****

ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು, ಸರ್ಕಾರ ರಚಿಸಿದ ಮೇಲೆ ಜಾರಿ ಮಾಡಲು ತೆಗೆದುಕೊಂಡ ಹದಿನೈದು ದಿನಗಳ ಅವಧಿಯಲ್ಲಿ, ಮನೆಯಿಂದ ಈಚೆಗೆದ್ದು ಬಂದ ಸೋತ ಬಿಜೆಪಿ ಎಮ್ಮೆಲ್ಲೆಗಳು, ಗ್ಯಾರಂಟಿಗಳನ್ನು ತಕ್ಷಣವೇ ಜಾರಿ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದಿದ್ದರು. ದಳದ ಕುಮಾರಣ್ಣನವರು ಬೀದಿಗಿಳಿಯುವ ಬೆದರಿಕೆ ಹಾಕಿದರು. ಇದಾವುದಕ್ಕೂ ಕಿವಿಗೊಡದ ಸಿದ್ದು ಟೀಮು ಗ್ಯಾರಂಟಿಗಳನ್ನು ಜಾರಿ ಮಾಡಿಯೇಬಿಟ್ಟಿತು. ಇದರಿಂದ ಆಘಾತಗೊಂಡಂತಾದ ಟಿ.ವಿ ಮಾಧ್ಯಮದವರು ಸರಕಾರವನ್ನು ಅಕಾರಣವಾಗಿ ಟೀಕಿಸುವ ಅಡ್ನಾಡಿಗಳನ್ನು ತಂದು ಕೂರಿಸಿಕೊಂಡು ಎರಡು ಸಾವಿರ ರೂಗಳಿಂದ ಅತ್ತೆ ಸೊಸೆ ಜಗಳ ಶುರುವಾಗುತ್ತೆ, ಲಕ್ಷ ರೂಗಳ ಸಂಬಳ ತೆಗೆಯುವ ಕೆಲ ಮಹಿಳೆಯರಿಗೆ 2000 ಕೊಡುವುದು ಎಷ್ಟು ಸರಿ, ಈ ಭಾಗ್ಯಗಳಿಂದ ದೇಶ ದಿವಾಳಿಯಾಗುತ್ತೆ, ಇವುಗಳ ಮುಂದುವರಿಕೆ ಸಾಧ್ಯವಿಲ್ಲ ಎಂದು ಬೊಬ್ಬೆ ಹೊಡೆದವಲ್ಲ. ಸಾಮಾನ್ಯವಾಗಿ ಬಿಜೆಪಿ ಮನಸ್ಸುಗಳು ಬಡವರು ಸಫಲರಾಗುವುದನ್ನು ಸಹಿಸುವುದಿಲ್ಲವಂತಲ್ಲಾ, ಥೂತ್ತೇರಿ.

*****

ಬಿಜೆಪಿ ಮನಸ್ಸುಗಳಿಗೆ ಗ್ಯಾರಂಟಿ ಭಾಗ್ಯಗಳನ್ನು ಏಕೆ ಸಹಿಸಲಾಗುವುದಿಲ್ಲ ಎಂದರೆ ಅವರ ಧರ್ಮಗುರುವಾದ ಗೋಳವಲಕರ ಬಡವರ ಉದ್ಧಾರದ ವಿರೋಧಿ; ಬಡವರು ಅದರಲ್ಲೂ ಶೋಷಿತಜಾತಿ ಜನರಿಗೆ ಯಾವ ಸವಲತ್ತನ್ನು ಕೊಡಬಾರದು, ಅವರು ಉನ್ನತ ಹುದ್ದೆಗೆ ಬರದಂತೆ ನೋಡಿಕೊಳ್ಳಬೇಕು, ಅವರು ಎ.ಸಿ ಮತ್ತು ಡಿ.ಸಿ ಹಾಗೂ ತಹಸೀಲ್ದಾರನಾಗದಂತೆ ನೋಡಿಕೊಳ್ಳಬೇಕು, ನಿಮ್ಮನ್ನ ನೋಡಿದ ಕೂಡಲೇ ಅವರು ನಿಮ್ಮ ಪಾದ ನೋಡುತ್ತ ನಿಲ್ಲಬೇಕು, ಅದು ಬಿಟ್ಟು ಸರಿಸಮಾನರಾಗಿ ವರ್ತಿಸಬಾರದು, ಬಡವರು ಮತ್ತು ಕೆಳಜಾತಿಗಳು ಎಂದಿನವರೆಗೆ ಬಡವರಾಗಿರುತ್ತಾರೊ ಅಲ್ಲಿಯವರೆಗೆ ನೀವು ಸುಖವಾಗಿರುತ್ತೀರಿ ತಿಳಿಯಿರಿ ಎಂದು ಆತ ಹೇಳಿದ್ದಾನೆ. ಈ ವೇದವಾಕ್ಯ ಅವರ ಬರವಣಿಗೆಯಲ್ಲಿ ದಾಖಲಾಗಿದೆ. ಅನುಮಾನಗೊಂಡವರು ಗೋಳವಲಕರನನ್ನ ಓದಬಹುದು. ಅದನ್ನು ಓದಿಕೊಂಡ ಬಿಜೆಪಿಗಳು ಗ್ಯಾರಂಟಿ ಜಾರಿಯಾದಂದಿನಿಂದ ನಿದ್ದೆಯನ್ನೆ ಕಳೆದುಕೊಂಡು, ಗ್ಯಾರಂಟಿ ನಂಬಬೇಡಿ ಎಂದು ಕೂಗಾಡುತ್ತ ತಿರುಗುತ್ತಿವೆಯಂತಲ್ಲಾ, ಥೂತ್ತೇರಿ.

*****

ರಾಜಕಾರಣದಲ್ಲಿದ್ದರೆ ಮಾತ್ರ ಎಲ್ಲ ರೀತಿಯ ಮಜಗಳನ್ನೂ ಮಾಡುತ್ತ, ಆಸ್ತಿಪಾಸ್ತಿ ಗಳಿಸುತ್ತ, ಅದನ್ನು ನಿಭಾಯಿಸುತ್ತಾ ಇರಬಹುದುದೆಂದು ನಂಬಿರುವ ರಾಜಕಾರಣಿಗಳ ಪೈಕಿ ಮುಂಚೂಣಿಯಲ್ಲಿರುವ ಹೊನ್ನಾಳಿ ರೇಣುಕಾಚಾರಿ ಚುನಾವಣಾ ಫಲಿತಾಂಶ ಬಂದಕೂಡಲೇ ಸಿಡಿಲು ಬಡಿದವನಂತೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಹೊನ್ನಾಳಿಯ ಜೊತೆಗೆ ಇಡೀ ನಾಡೇ ಬೆಚ್ಚುವಂತೆ ಮಾಡಿಬಿಟ್ಟರಲ್ಲಾ. ಬಿಜೆಪಿಯ ಜೊತೆಗೆ ಇಡೀ ನಾಡನ್ನೇ ಡಲ್ಲು ಮಾಡಿದ ರೇಣುಕಾಚಾರಿಯನ್ನು ಮಾತನಾಡಿಸಿ ಸಾಂತ್ವಾನ ಹೇಳುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್‌ಟೋನ್: “ನೀವು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ”; ಮತ್ತೆಮತ್ತೆ ಫೋನ್ ಮಾಡಲಾಗಿ ರಿಂಗಾಯ್ತು. “ಕ್ಯಂಚಾಲೊ ಮಚ್ಚಾಲೊ ಯಂಗವುಲಾ ನಿನ್ ಡವ್‌ಗಳು”..

“ಹಲೊ ಯಾರ್ರಿ?”

“ನಾನು ಸಾರ್ ಯಾಹು. ನಿಮ್ಮ ಬಾಮೈದುನ ಗೆಳೆಯ.”

“ಬಾಮೈದನ ಗೆಳೆಯ ಆಗಿದ್ರೆ ಅವುನಿಗೆ ಫೋನ್ ಮಾಡ್ರಿ.”

“ನಿಮ್ಮತ್ರ ಒಂದೆರಡು ಮಾತಾಡಬೇಕು ಸಾರ್.”

“ಅದೇನು ಜಲ್ದಿ ಹೇಳ್ರಿ.”

“ಬ್ಯುಸಿನಾ ಸಾರ್?”

“ಇಲ್ಲಿ ಕ್ರಿಕೆಟ್ ಆಡ್ತಾಯಿದ್ದಿನಿ ಕಂಡ್ರಿ.”

“ಎಲ್ಲಿ ಸಾರ್?”

“ನಮ್ಮೂರ ಸ್ಕೂಲು ಮೈದಾನದಲ್ಲಿ.”

“ಯಾರ ಜೊತೆ ಸಾರ್?”

“ಇನ್ಯಾರು.. ನಮ್ಮೂರ ಹುಡುಗರ ಜೊತೆ ಆಡ್ತಾಯಿದ್ದಿನಿ ಕಂಡ್ರೀ.”

“ನಿಜಕ್ಕೂ ನೀವು ಅಪರೂಪದ ರಾಜಕಾರಣಿ ಸಾರ್. ಮಂಡಿ ಉದ್ದ ನೀರಲ್ಲಿ ತೆಪ್ಪ ನಡುಸ್ತಿರಿ. ಸಣ್ಣುಡಗರ ಜೊತೆ ಕ್ರಿಕೆಟ್ ಆಡ್ತಿರಿ. ರಾಜಕಾರಣಿ ಈ ತರ ತಮಾಸಿಯಾಗಿರಬೇಕು ಸಾರ್.”

“ನಾನು ಯಾವತ್ತು ತಮಾಸಿ ಕಂಡ್ರಿ. ಯಾವುದ್ನೂ ಸೀರಿಯಸ್ಸಾಗಿ ತಗಳದಿಲ್ಲ.”

“ತಗೊಬಾರ್ದು ಸಾ. ಅಂಗೆ ತಗಂಡಿದ್ರೆ ಇಷ್ಟೊತ್ತಿಗೆ ಮನೆ ಬಿಟ್ಟು ಎಲ್ಲೋ ಇರ್ತಿದ್ರಿ ಅಲ್ಲುವಾ ಸರ್?”

“ಮುಗದೋದ ಕತೆನೆಲ್ಲ ನಾನೇ ಯೋಚನೆ ಮಾಡ್ತಯಿಲ್ಲ, ಇನ್ನ ನೀವ್ಯಾಕೆ ತಲೆ ಕೆಡಿಸಿಕೊಳ್ತಿರಿ.”

“ಈಶ್ವರಪ್ಪ ಅಂಥ ವ್ಯಕ್ತಿ ಮತ್ತೆ ನೀವು ಜೊತೆಲಿ ಸೋತರಿ; ಅವುರು ಚುನಾವಣಾ ರಾಜಕೀಯದಿಂದ ನಿವೃತ್ತರಾದ್ರೆ ನೀವು ರಾಜಕಾರಣದಿಂದ್ಲೇ ನಿವೃತ್ತರಾದರಲ್ಲಾ ಸಾರ್.”

“ರೀ ನಾನಿನ್ನೂ ನಿವೃತ್ತಿಯಾಗಿಲ್ಲ ಕಂಡ್ರಿ.”

“ಮತ್ತೆ ಘೋಷಣೆ ಮಾಡಿದರಲ್ಲಾ ಸಾರ್?”

“ಅದು ರಿಜಲ್ಟ್ ಬಂದಾಗ ಅಂಗಂದೆ; ಈಗ ನಮ್ಮ ಕ್ಷೇತ್ರದ ಜನತೆ ನೀವು ನಿವೃತ್ತಿಯಾದ್ರೆ ನಮ್ಮ ಕತೆಯೇನು ಅಂತಾವುರೆ..”

“ಗೆದ್ದಿರೋರು ನೋಡಕತರೆ ಬುಡಿ ಸಾರ್.”

“ಗೆದ್ದಿರೋರು ಅವುರ ಕಡಿಯೋರ್ನ ನೋಡಕತರೆ ಕಂಡ್ರಿ. ನನ್ನ ಪಾಲೊಯರ್ಸ್‌ನ ಯಾರು ರಕ್ಷಣೆ ಮಾಡ್ತರ್ರಿ?”

“ರಕ್ಷಣೆ ಮಾಡಬೇಕಾದ ಸ್ಥಿತಿಯಿದಿಯಾ ಸಾರ್?”

“ಇಲ್ಲಿನ ಮುಸ್ಲಿಮರಿಗೂ ನನಿಗೂ ಆಗಲ್ಲ ಕಂಡ್ರಿ.”

“ಶಾಸಕನಾದವನು ಎಲ್ಲಾ ಜನಾಂಗದ ರಕ್ಷಕನಾಗಬೇಕು ಸಾರ್. ಅದು ಬಿಟ್ಟು ಒಂದು ಜನಾಂಗನ ಅಪಾಯಕಾರಿಗಳು ದೇಶದ್ರೋಹಿಗಳು, ನಂಬಿಕೆಗೆ ಯೋಗ್ಯರಲ್ಲ ಅಂತ ಸುಳ್ಳುಸುಳ್ಳೆ ಬೈದರೆ ಅವರ ಮನಸ್ಸಿಗೆ ನೋವಾಗಲ್ಲಾವಾ ಸಾರ್?”

“ನೋವಾಗೋ ಅಂತ ಕೆಲಸ ಯಾಕ್ ಮಾಡಬೇಕ್ರಿ?”

“ಹೊನ್ನಾಳಿಲಿ ಯಾರಿಗೂ ಆಗದೆಯಿರೊ ಸಮಸ್ಯೆ ನಿಮಗ್ಯಂಗಾಯ್ತು ಸಾರ್? ಅಲ್ಲಿನ ಮುಸ್ಲಿಮರು, ಕುರುಬರು, ಲಿಂಗಾಯತರು ಮತ್ತು ಇತರೆ ಶೋಷಿತ ಜಾತಿಗಳ ಜೊತೆ ಆರಾಮಾಗಿರುವಾಗ, ನೀವು ಬಂದು ಈ ಮುಸ್ಲಿಮರ ನಂಬಬೇಡಿ ಅವರ ಮಸೀದಿಲಿ ವೆಪನ್ನಿವೆ, ಮಾರಕಾಸ್ತ್ರಗಳಿವೆ ಅಂತ ರೈಲು ಬುಟ್ಟು ಬೊಬ್ಬೆ ಹೊಡೆದರಲ್ಲಾ, ಇದು ಹೊನ್ನಾಳಿ ಜನಗಳಿಗೆ ಸುಳ್ಳು ಅನ್ನಸ್ತು. ಅದಕ್ಕೆ ತಕ್ಕ ಶಿಕ್ಷೆ ಅಂದ್ರೆ ನಿಮ್ಮನ್ನ ಚುನಾವಣೆಲಿ ಸೋಲುಸೋದನ್ನ ಯಲ್ಲ ಜನಾಂಗ ಮಾಡಿ ತೋರಿಸಿದಾವೆ ಸಾರ್. ಈ ಟೈಮಲ್ಲಿ ನಿಮ್ಮ ನಿವೃತ್ತಿ ಘೋಷಣೆ ಬಹಳ ಸೂಕ್ತವಾಗಿದೆ ಸಾರ್. ನಿಜಕ್ಕೂ ಪ್ರಾಯಶ್ಚಿತ್ತ ಅಂದ್ರೆ ಇದೆನೆ.”

“ನಾನು ನಿವೃತ್ತಿಯಾಗಿಲ್ಲ ಕಣ್ರಿ. ಮತ್ತೆ ಚುನಾವಣೆಗೆ ಬರ್ತಿನಿ.”

“ಜನ ಪುನಹ ಸೋಲಿಸಿದ್ರೆ?”

“ಆಗ ಬೇಕಾದ್ರೆ ನಿವೃತ್ತಿ ಘೋಷಣೆ ಮಾಡ್ತಿನಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...