Homeಅಂಕಣಗಳುನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!

ನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!

- Advertisement -
- Advertisement -

ಮೋದಿ ಸರಕಾರ ಒಂಬತ್ತು ವರ್ಷ ತುಂಬಿಸಿದ ಸಂತಸವನ್ನು, ದೇಶದ ತುಂಬ ಸಭೆ ಸಮಾರಂಭ ಯಜ್ಞ ಹೋಮ ಹವನ ಇತ್ಯಾದಿ ವೈದಿಕಾಚರಣೆಗಳಿಂದ ವಿಜೃಂಭಿಸಲು ತಯಾರಾಗುತ್ತಿರುವಾಗಲೇ ಭೀಕರ ರೈಲ್ವೆ ಅಪಘಾತ ಸಂಭವಿಸಿದೆ. ಎದೆ ನಡುಗಿಸುವ ಈ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಗೆ ಕಾರಣರ್‍ಯಾರು, ಹೊಣೆಗಾರರಾರು ಎಂಬ ಚರ್ಚೆಯು ಅವ್ಯಾಹತವಾಗಿ ನಡೆದಿದೆ. ಇದು ಒಂದೆಡೆಯಾದರೆ ಮೋದಿಯವರ ಒಂಬತ್ತು ವರ್ಷದ ಸಂಭ್ರಮದ ಸಮಯದಲ್ಲಿ ಸಂಭವಿಸಿದ ಸಾವುಗಳನ್ನು ನೆನೆಯುವುದಾದರೆ: 2019ರಲ್ಲಿ ನಡೆದ ಘಟನೆಯಲ್ಲಿ, 40 ಜನ ಸೈನಿಕರ ಬಲಿದಾನಕ್ಕೆ ಸರಕಾರದ ನಿರ್ಲಕ್ಷವೇ ಕಾರಾಣವೆಂದು ಜಮ್ಮುಕಾಶ್ಮೀರದ ಮಾಜಿ ರಾಜ್ಯಪಾಲರು ಬಹಿರಂಗಂಪಡಿಸಿದ್ದಾರೆ; ನಂತರ ಕೃಷಿಕಾಯ್ದೆ ಜಾರಿಯನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ 750 ಜನ ರೈತರು ಅಸುನೀಗಿದರು. ಆ ಸಾವುಗಳ ಬಗ್ಗೆ ಮಾತನಾಡದ ಪ್ರಧಾನಿಯವರು, ಶಿವಮೊಗ್ಗ ಸುಬ್ಬಣ್ಣ ಎಂಬ ಗಾಯಕರೊಬ್ಬರು ತೀರಿಕೊಂಡಾಗ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾವಿನಂಚಿನಲ್ಲಿದ್ದ ಸಿದ್ದೇಶ್ವರ ಸ್ವಾಮಿಗಳಿಗೆ ಫೋನ್ ಮಾಡಿದರು; ಆದರೆ ಸಿದ್ದೇಶ್ವರರಿಗೆ ಮಾತನಾಡಲು ಸಾಧ್ಯವಾಯಿತೋ ಇಲ್ಲವೋ! ಇವೆಲ್ಲಾ ಘಟನೆ ಪ್ರಧಾನಿಯ ಒಂಬತ್ತು ವರ್ಷದ ಸಂಭ್ರಮದಲ್ಲಿ ನೆನೆಸುವ ಘಟನೆಗಳಂತಲ್ಲಾ, ಥೂತ್ತೇರಿ.

*****

ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು, ಸರ್ಕಾರ ರಚಿಸಿದ ಮೇಲೆ ಜಾರಿ ಮಾಡಲು ತೆಗೆದುಕೊಂಡ ಹದಿನೈದು ದಿನಗಳ ಅವಧಿಯಲ್ಲಿ, ಮನೆಯಿಂದ ಈಚೆಗೆದ್ದು ಬಂದ ಸೋತ ಬಿಜೆಪಿ ಎಮ್ಮೆಲ್ಲೆಗಳು, ಗ್ಯಾರಂಟಿಗಳನ್ನು ತಕ್ಷಣವೇ ಜಾರಿ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದಿದ್ದರು. ದಳದ ಕುಮಾರಣ್ಣನವರು ಬೀದಿಗಿಳಿಯುವ ಬೆದರಿಕೆ ಹಾಕಿದರು. ಇದಾವುದಕ್ಕೂ ಕಿವಿಗೊಡದ ಸಿದ್ದು ಟೀಮು ಗ್ಯಾರಂಟಿಗಳನ್ನು ಜಾರಿ ಮಾಡಿಯೇಬಿಟ್ಟಿತು. ಇದರಿಂದ ಆಘಾತಗೊಂಡಂತಾದ ಟಿ.ವಿ ಮಾಧ್ಯಮದವರು ಸರಕಾರವನ್ನು ಅಕಾರಣವಾಗಿ ಟೀಕಿಸುವ ಅಡ್ನಾಡಿಗಳನ್ನು ತಂದು ಕೂರಿಸಿಕೊಂಡು ಎರಡು ಸಾವಿರ ರೂಗಳಿಂದ ಅತ್ತೆ ಸೊಸೆ ಜಗಳ ಶುರುವಾಗುತ್ತೆ, ಲಕ್ಷ ರೂಗಳ ಸಂಬಳ ತೆಗೆಯುವ ಕೆಲ ಮಹಿಳೆಯರಿಗೆ 2000 ಕೊಡುವುದು ಎಷ್ಟು ಸರಿ, ಈ ಭಾಗ್ಯಗಳಿಂದ ದೇಶ ದಿವಾಳಿಯಾಗುತ್ತೆ, ಇವುಗಳ ಮುಂದುವರಿಕೆ ಸಾಧ್ಯವಿಲ್ಲ ಎಂದು ಬೊಬ್ಬೆ ಹೊಡೆದವಲ್ಲ. ಸಾಮಾನ್ಯವಾಗಿ ಬಿಜೆಪಿ ಮನಸ್ಸುಗಳು ಬಡವರು ಸಫಲರಾಗುವುದನ್ನು ಸಹಿಸುವುದಿಲ್ಲವಂತಲ್ಲಾ, ಥೂತ್ತೇರಿ.

*****

ಬಿಜೆಪಿ ಮನಸ್ಸುಗಳಿಗೆ ಗ್ಯಾರಂಟಿ ಭಾಗ್ಯಗಳನ್ನು ಏಕೆ ಸಹಿಸಲಾಗುವುದಿಲ್ಲ ಎಂದರೆ ಅವರ ಧರ್ಮಗುರುವಾದ ಗೋಳವಲಕರ ಬಡವರ ಉದ್ಧಾರದ ವಿರೋಧಿ; ಬಡವರು ಅದರಲ್ಲೂ ಶೋಷಿತಜಾತಿ ಜನರಿಗೆ ಯಾವ ಸವಲತ್ತನ್ನು ಕೊಡಬಾರದು, ಅವರು ಉನ್ನತ ಹುದ್ದೆಗೆ ಬರದಂತೆ ನೋಡಿಕೊಳ್ಳಬೇಕು, ಅವರು ಎ.ಸಿ ಮತ್ತು ಡಿ.ಸಿ ಹಾಗೂ ತಹಸೀಲ್ದಾರನಾಗದಂತೆ ನೋಡಿಕೊಳ್ಳಬೇಕು, ನಿಮ್ಮನ್ನ ನೋಡಿದ ಕೂಡಲೇ ಅವರು ನಿಮ್ಮ ಪಾದ ನೋಡುತ್ತ ನಿಲ್ಲಬೇಕು, ಅದು ಬಿಟ್ಟು ಸರಿಸಮಾನರಾಗಿ ವರ್ತಿಸಬಾರದು, ಬಡವರು ಮತ್ತು ಕೆಳಜಾತಿಗಳು ಎಂದಿನವರೆಗೆ ಬಡವರಾಗಿರುತ್ತಾರೊ ಅಲ್ಲಿಯವರೆಗೆ ನೀವು ಸುಖವಾಗಿರುತ್ತೀರಿ ತಿಳಿಯಿರಿ ಎಂದು ಆತ ಹೇಳಿದ್ದಾನೆ. ಈ ವೇದವಾಕ್ಯ ಅವರ ಬರವಣಿಗೆಯಲ್ಲಿ ದಾಖಲಾಗಿದೆ. ಅನುಮಾನಗೊಂಡವರು ಗೋಳವಲಕರನನ್ನ ಓದಬಹುದು. ಅದನ್ನು ಓದಿಕೊಂಡ ಬಿಜೆಪಿಗಳು ಗ್ಯಾರಂಟಿ ಜಾರಿಯಾದಂದಿನಿಂದ ನಿದ್ದೆಯನ್ನೆ ಕಳೆದುಕೊಂಡು, ಗ್ಯಾರಂಟಿ ನಂಬಬೇಡಿ ಎಂದು ಕೂಗಾಡುತ್ತ ತಿರುಗುತ್ತಿವೆಯಂತಲ್ಲಾ, ಥೂತ್ತೇರಿ.

*****

ರಾಜಕಾರಣದಲ್ಲಿದ್ದರೆ ಮಾತ್ರ ಎಲ್ಲ ರೀತಿಯ ಮಜಗಳನ್ನೂ ಮಾಡುತ್ತ, ಆಸ್ತಿಪಾಸ್ತಿ ಗಳಿಸುತ್ತ, ಅದನ್ನು ನಿಭಾಯಿಸುತ್ತಾ ಇರಬಹುದುದೆಂದು ನಂಬಿರುವ ರಾಜಕಾರಣಿಗಳ ಪೈಕಿ ಮುಂಚೂಣಿಯಲ್ಲಿರುವ ಹೊನ್ನಾಳಿ ರೇಣುಕಾಚಾರಿ ಚುನಾವಣಾ ಫಲಿತಾಂಶ ಬಂದಕೂಡಲೇ ಸಿಡಿಲು ಬಡಿದವನಂತೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಹೊನ್ನಾಳಿಯ ಜೊತೆಗೆ ಇಡೀ ನಾಡೇ ಬೆಚ್ಚುವಂತೆ ಮಾಡಿಬಿಟ್ಟರಲ್ಲಾ. ಬಿಜೆಪಿಯ ಜೊತೆಗೆ ಇಡೀ ನಾಡನ್ನೇ ಡಲ್ಲು ಮಾಡಿದ ರೇಣುಕಾಚಾರಿಯನ್ನು ಮಾತನಾಡಿಸಿ ಸಾಂತ್ವಾನ ಹೇಳುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್‌ಟೋನ್: “ನೀವು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ”; ಮತ್ತೆಮತ್ತೆ ಫೋನ್ ಮಾಡಲಾಗಿ ರಿಂಗಾಯ್ತು. “ಕ್ಯಂಚಾಲೊ ಮಚ್ಚಾಲೊ ಯಂಗವುಲಾ ನಿನ್ ಡವ್‌ಗಳು”..

“ಹಲೊ ಯಾರ್ರಿ?”

“ನಾನು ಸಾರ್ ಯಾಹು. ನಿಮ್ಮ ಬಾಮೈದುನ ಗೆಳೆಯ.”

“ಬಾಮೈದನ ಗೆಳೆಯ ಆಗಿದ್ರೆ ಅವುನಿಗೆ ಫೋನ್ ಮಾಡ್ರಿ.”

“ನಿಮ್ಮತ್ರ ಒಂದೆರಡು ಮಾತಾಡಬೇಕು ಸಾರ್.”

“ಅದೇನು ಜಲ್ದಿ ಹೇಳ್ರಿ.”

“ಬ್ಯುಸಿನಾ ಸಾರ್?”

“ಇಲ್ಲಿ ಕ್ರಿಕೆಟ್ ಆಡ್ತಾಯಿದ್ದಿನಿ ಕಂಡ್ರಿ.”

“ಎಲ್ಲಿ ಸಾರ್?”

“ನಮ್ಮೂರ ಸ್ಕೂಲು ಮೈದಾನದಲ್ಲಿ.”

“ಯಾರ ಜೊತೆ ಸಾರ್?”

“ಇನ್ಯಾರು.. ನಮ್ಮೂರ ಹುಡುಗರ ಜೊತೆ ಆಡ್ತಾಯಿದ್ದಿನಿ ಕಂಡ್ರೀ.”

“ನಿಜಕ್ಕೂ ನೀವು ಅಪರೂಪದ ರಾಜಕಾರಣಿ ಸಾರ್. ಮಂಡಿ ಉದ್ದ ನೀರಲ್ಲಿ ತೆಪ್ಪ ನಡುಸ್ತಿರಿ. ಸಣ್ಣುಡಗರ ಜೊತೆ ಕ್ರಿಕೆಟ್ ಆಡ್ತಿರಿ. ರಾಜಕಾರಣಿ ಈ ತರ ತಮಾಸಿಯಾಗಿರಬೇಕು ಸಾರ್.”

“ನಾನು ಯಾವತ್ತು ತಮಾಸಿ ಕಂಡ್ರಿ. ಯಾವುದ್ನೂ ಸೀರಿಯಸ್ಸಾಗಿ ತಗಳದಿಲ್ಲ.”

“ತಗೊಬಾರ್ದು ಸಾ. ಅಂಗೆ ತಗಂಡಿದ್ರೆ ಇಷ್ಟೊತ್ತಿಗೆ ಮನೆ ಬಿಟ್ಟು ಎಲ್ಲೋ ಇರ್ತಿದ್ರಿ ಅಲ್ಲುವಾ ಸರ್?”

“ಮುಗದೋದ ಕತೆನೆಲ್ಲ ನಾನೇ ಯೋಚನೆ ಮಾಡ್ತಯಿಲ್ಲ, ಇನ್ನ ನೀವ್ಯಾಕೆ ತಲೆ ಕೆಡಿಸಿಕೊಳ್ತಿರಿ.”

“ಈಶ್ವರಪ್ಪ ಅಂಥ ವ್ಯಕ್ತಿ ಮತ್ತೆ ನೀವು ಜೊತೆಲಿ ಸೋತರಿ; ಅವುರು ಚುನಾವಣಾ ರಾಜಕೀಯದಿಂದ ನಿವೃತ್ತರಾದ್ರೆ ನೀವು ರಾಜಕಾರಣದಿಂದ್ಲೇ ನಿವೃತ್ತರಾದರಲ್ಲಾ ಸಾರ್.”

“ರೀ ನಾನಿನ್ನೂ ನಿವೃತ್ತಿಯಾಗಿಲ್ಲ ಕಂಡ್ರಿ.”

“ಮತ್ತೆ ಘೋಷಣೆ ಮಾಡಿದರಲ್ಲಾ ಸಾರ್?”

“ಅದು ರಿಜಲ್ಟ್ ಬಂದಾಗ ಅಂಗಂದೆ; ಈಗ ನಮ್ಮ ಕ್ಷೇತ್ರದ ಜನತೆ ನೀವು ನಿವೃತ್ತಿಯಾದ್ರೆ ನಮ್ಮ ಕತೆಯೇನು ಅಂತಾವುರೆ..”

“ಗೆದ್ದಿರೋರು ನೋಡಕತರೆ ಬುಡಿ ಸಾರ್.”

“ಗೆದ್ದಿರೋರು ಅವುರ ಕಡಿಯೋರ್ನ ನೋಡಕತರೆ ಕಂಡ್ರಿ. ನನ್ನ ಪಾಲೊಯರ್ಸ್‌ನ ಯಾರು ರಕ್ಷಣೆ ಮಾಡ್ತರ್ರಿ?”

“ರಕ್ಷಣೆ ಮಾಡಬೇಕಾದ ಸ್ಥಿತಿಯಿದಿಯಾ ಸಾರ್?”

“ಇಲ್ಲಿನ ಮುಸ್ಲಿಮರಿಗೂ ನನಿಗೂ ಆಗಲ್ಲ ಕಂಡ್ರಿ.”

“ಶಾಸಕನಾದವನು ಎಲ್ಲಾ ಜನಾಂಗದ ರಕ್ಷಕನಾಗಬೇಕು ಸಾರ್. ಅದು ಬಿಟ್ಟು ಒಂದು ಜನಾಂಗನ ಅಪಾಯಕಾರಿಗಳು ದೇಶದ್ರೋಹಿಗಳು, ನಂಬಿಕೆಗೆ ಯೋಗ್ಯರಲ್ಲ ಅಂತ ಸುಳ್ಳುಸುಳ್ಳೆ ಬೈದರೆ ಅವರ ಮನಸ್ಸಿಗೆ ನೋವಾಗಲ್ಲಾವಾ ಸಾರ್?”

“ನೋವಾಗೋ ಅಂತ ಕೆಲಸ ಯಾಕ್ ಮಾಡಬೇಕ್ರಿ?”

“ಹೊನ್ನಾಳಿಲಿ ಯಾರಿಗೂ ಆಗದೆಯಿರೊ ಸಮಸ್ಯೆ ನಿಮಗ್ಯಂಗಾಯ್ತು ಸಾರ್? ಅಲ್ಲಿನ ಮುಸ್ಲಿಮರು, ಕುರುಬರು, ಲಿಂಗಾಯತರು ಮತ್ತು ಇತರೆ ಶೋಷಿತ ಜಾತಿಗಳ ಜೊತೆ ಆರಾಮಾಗಿರುವಾಗ, ನೀವು ಬಂದು ಈ ಮುಸ್ಲಿಮರ ನಂಬಬೇಡಿ ಅವರ ಮಸೀದಿಲಿ ವೆಪನ್ನಿವೆ, ಮಾರಕಾಸ್ತ್ರಗಳಿವೆ ಅಂತ ರೈಲು ಬುಟ್ಟು ಬೊಬ್ಬೆ ಹೊಡೆದರಲ್ಲಾ, ಇದು ಹೊನ್ನಾಳಿ ಜನಗಳಿಗೆ ಸುಳ್ಳು ಅನ್ನಸ್ತು. ಅದಕ್ಕೆ ತಕ್ಕ ಶಿಕ್ಷೆ ಅಂದ್ರೆ ನಿಮ್ಮನ್ನ ಚುನಾವಣೆಲಿ ಸೋಲುಸೋದನ್ನ ಯಲ್ಲ ಜನಾಂಗ ಮಾಡಿ ತೋರಿಸಿದಾವೆ ಸಾರ್. ಈ ಟೈಮಲ್ಲಿ ನಿಮ್ಮ ನಿವೃತ್ತಿ ಘೋಷಣೆ ಬಹಳ ಸೂಕ್ತವಾಗಿದೆ ಸಾರ್. ನಿಜಕ್ಕೂ ಪ್ರಾಯಶ್ಚಿತ್ತ ಅಂದ್ರೆ ಇದೆನೆ.”

“ನಾನು ನಿವೃತ್ತಿಯಾಗಿಲ್ಲ ಕಣ್ರಿ. ಮತ್ತೆ ಚುನಾವಣೆಗೆ ಬರ್ತಿನಿ.”

“ಜನ ಪುನಹ ಸೋಲಿಸಿದ್ರೆ?”

“ಆಗ ಬೇಕಾದ್ರೆ ನಿವೃತ್ತಿ ಘೋಷಣೆ ಮಾಡ್ತಿನಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...