Homeಕಥೆ"ಗಂಧರ್ವಸೇನಾ ಸತ್ತಾಗ?" : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

“ಗಂಧರ್ವಸೇನಾ ಸತ್ತಾಗ?” : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

- Advertisement -
- Advertisement -

ರಾಜ ತನ್ನ `ಪರಿವಾರ’ ಸಮೇತ ಒಡ್ಡೋಲಗದಲ್ಲಿ ಬ್ಯುಸಿಯಾಗಿದ್ದ. ಅಷ್ಟೊತ್ತು ಮಿಸ್ಸಿಂಗ್ ಆಗಿದ್ದ ಮಂತ್ರಿ, ಜೋರಾಗಿ ರೋಧಿಸುತ್ತ ಕಣ್ಣೀರ ಧಾರೆ ಸುರಿಸುತ್ತ ಓಡೋಡಿ ಒಡ್ಡೋಲಗ ಪ್ರವೇಶಿಸಿದ. ಮಂತ್ರಿಯ ಸ್ಥಿತಿ ನೋಡಿ ರಾಜನಿಗೆ ಗಾಬರಿಯಾಯ್ತು. “ಏನಾಯ್ತು ಮಂತ್ರಪ್ಪ. ಅದ್ಯಾಕಿಂಗೆ ಸಣ್ಣಮಕ್ಕಳ ಥರ ಅತ್ಕೊಂಡು ಬತ್ತಾ ಇದೀಯ? ಮನೆಯಲ್ಲಿ ಹೆಂಡ್ರು, ಮಕ್ಕಳು ಕ್ಷೇಮವೆ” ರಾಜ ವಿಚಾರಿಸಿದ. “ಅಯ್ಯೋ ಏನಂಥಾ ಹ್ಯೇಳೋದು ಮಾರಾಜುರೆ. ಗಂಧರ್ವ ಸೇನಾ ಸತ್ತೋದ್ನಂತೆ!” ಮಂತ್ರಿ ತನ್ನ ಸಂಕಟದ ಮೂಲವನ್ನು ಮುಂದಿಟ್ಟ.

“ಅಯ್ಯಯ್ಯೋ, ಎಂಥಾ ಸುದ್ದಿ ಹ್ಯೇಳ್ತಾ ಇದೀಯ ಮಂತ್ರಪ್ಪ. ಗಂಧರ್ವ ಸೇನಾ ಸತ್ತೋದ್ನಾ!!!” ಈಗ ಮಹಾರಾಜ ಕೂಡಾ ಮಂತ್ರಿಗೆ ಕೋರಸ್ ಕೊಟ್ಟು ರೋಧಿಸಲು ಶುರು ಮಾಡಿದ. ರಾಜನೆ ಕಣ್ಣೀರಿಟ್ಟ ಮೇಲೆ ಕೇಳಬೇಕೆ. ಇಡೀ ಒಡ್ಡೋಲಗವೆ

“ಅಯ್ಯಯ್ಯೋ, ಗಂಧರ್ವ ಸೇನಾ ಹೋಗ್ಬುಟ್ಟೆಯಾ” ಎಂಬ ರೋಧನೆಯಲ್ಲಿ ಮುಳುಗಿಹೋಯ್ತು.

ಹಾರ್ಟ್ ಬ್ರೇಕಿಂಗ್ ಸುದ್ದಿ ಕೇಳಿದಮೇಲೆ ಒಡ್ಡೋಲಗ ನಡೆಸುವ ಯಾವ ಉಮೇದಿಯೂ ರಾಜನಿಗೆ ಉಳಿಯಲಿಲ್ಲ. ರಾಜ್ಯದಲ್ಲಿ ಇಪ್ಪತ್ತೊಂದು ದಿನಗಳ ಶೋಕಾಚರಣೆ ಘೋಷಿಸಿ, ದುಃಖತಪ್ತ ಮೋರೆಯಲ್ಲಿ ಅಂತಃಪುರದ ಕಡೆ ನಡೆದ.

ಒಡ್ಡೋಲಗದಲ್ಲಿರಬೇಕಿದ್ದ ರಾಜ ಹೀಗೆ ಹೊತ್ತಲ್ಲದಹೊತ್ತಲ್ಲಿ ಅಂತಃಪುರಕ್ಕೆ ಧಾವಿಸಿದ್ದನ್ನು, ಅದರಲ್ಲು ದುಖತಪ್ತನಾಗಿ ರಾಣಿನಿವಾಸ ಹೊಕ್ಕಿದ್ದನ್ನು ನೋಡಿ ಅವನ ರಾಣಿಯರಿಗೆ ಅಚ್ಚರಿಯಾಯ್ತು. ಪಟ್ಟದರಸಿ ರಾಜನ ಬಳಿ ಬಂದು “ಯಾಕೆ ಮಾಸ್ವಾಮಿ, ಶ್ಯಾನೆ ಬ್ಯಾಸರದಲ್ಲಿ ಇದೀರಿ. ಮಟಮಟ ಮಧ್ಯಾನುವೆ ಮಂಚದ ಮನೆಯತ್ತ ಬಂದಿದೀರಿ. ಏನ್ಸಮಾಚಾರ?” ತುಸು ಅಳುಕಿನಲ್ಲೆ ಕೇಳಿದಳು. “ಏನಂಥಾ ಹ್ಯೇಳ್ಳಿ ಮಾರಾಣಿ, ಗಂಧರ್ವಸೇನಾ ಸತ್ತೋದ್ನಂತೆ” ರಾಜನ ಮಾತಿನ್ನು ಬಾಯೊಳಗೇ ಇತ್ತೇನೊ, ಮಹಾರಾಣಿ ದೊಪ್ಪನೆ ನೆಲಕ್ಕೆ ಕುಸಿದುಬಿದ್ದಳು. “ಏನಂದ್ರಿ ಪ್ರಭು, ಗಂಧರ್ವಸೇನ ಸತ್ತೋದ್ನ? ಅಯ್ಯೋ ದುರ್ವಿಧಿಯೇ?..!” ಮಹಾರಾಣಿ ಚಿತ್ರವಿಚಿತ್ರವಾಗಿ ರೋಧಿಸುತ್ತ ಕೋಣೆ ಹೊಕ್ಕು ರಾಜನ ಇನ್ನುಳಿದ ಮಡದಿಯರು, ಉಪಮಡದಿಯರಿಗೆ ಗಂಧರ್ವಸೇನಾ ಮೃತನಾದ ಸುದ್ದಿ ಅರುಹಿದಳು. ಇಡಿ ಅಂತಃಪುರವೆ ಶೋಕದ ಕಡಲಲ್ಲಿ ಮುಳುಗಿತು. ಕಿರಿಯರಸಿ ತನ್ನ ಖಾಸಗಿ ಕೋಣೆಯಲ್ಲಿ ಮುಸಿಮುಸಿ ಅಳುತ್ತಿರೋದನ್ನ ಕಂಡ ಆಕೆಯ ಸೇವಕಿಗೆ ಕುತೂಹಲ ಹೆಚ್ಚಾಗಿ ಕೇಳಿದಳು, “ಯಾಕೆ ರಾಣ್ಯವ್ವ ಹಿಂಗ ಅಳಾಕತ್ತಿದ್ದೀಯ? ಅಂತದ್ದೇನಾತಾ?”.

“ಏನಂಥಾ ಹ್ಯೇಳ್ಲೇ ಗೆಳತಿ, ಗಂಧರ್ವಸೇನಾ ಸತ್ತೋದ್ನಂತೆ!” ಕಿರಿಯರಸಿಯ ಶೋಕಸುದ್ದಿ ಕೇಳಿ ಸೇವಕಿಗು ಆಘಾತವಾಯ್ತು. “ಹೌದೇನೆ ನನ್ನವ್ವ. ಪಾಪಾ, ಹಿಂಗಾಗಬಾರದಿತ್ತು ಬಿಡು. ಅದಂಗಿರುಲಿ. ಈ ಗಂಧರ್ವಸೇನಾ ಯಾರು? ಅವ ನಿನುಗೆ, ಮಾರಾಜುಗೆ ಏನು ಸಮಂದ ಆಗಬೇಕಾ?” ಸೇವಕಿ ತನ್ನ ಅನುಮಾನ ತೆರೆದಿಟ್ಟಳು. ಕಿರಿಯರಸಿಗೆ ಜ್ಞಾನೋದಯ ಆದಂತಾಯ್ತು.

`ಹೌದು ಯಾರು ಈ ಗಂಧರ್ವಸೇನ? ನಾನ್ಯಾಕಿಷ್ಟು ಅಳ್ತಾ ಇದೀನಿ’. ತನ್ನ ಗೊಂದಲ ಬಗೆಹರಿಸಿಕೊಳ್ಳಲು ಪಟ್ಟದರಸಿಯ ಬಳಿ ಬಂದು ಗಂಧರ್ವಸೇನನ ಬಗ್ಗೆ ವಿಚಾರಿಸಿದಳು. ಆಕೆಗೂ ನಯಾಪೈಸೆಯ ಮಾಹಿತಿಯಿಲ್ಲ. ಆದರು ಲೀಟರುಗಟ್ಟಲೆ ಕಣ್ಣೀರು ಸುರಿಸಿ ರೋಧಿಸಿದ್ದಾಗಿತ್ತು. ರಾಜನ ಮುಂದೆ ನಿಂತ ಆಕೆ

“ಮಾರಾಜ, ಆಗ್ಲೆ ಗಂಧರ್ವಸೇನ ಸತ್ತೋದ ಅಂದ್ರಲ್ಲ, ಯಾರು ಆ ಪುಣ್ಯಾತ್ಮ? ನಿಮ್ಮ ಆತ್ಮೀಯ ಗೆಣೆಕಾರನೆ, ಹತ್ತಿರದ ಸಮಂಧಿಕನೆ?”. ಇನ್ನೂ ಶೋಕಸಾಗರದಲ್ಲೆ ಬಡಿದಾಡುತ್ತ ಬಿದ್ದುಕೊಂಡಿದ್ದ ರಾಜನಿಗೆ ರಾಣಿಯ ಪ್ರಶ್ನೆ ಕೇಳಿ ಜ್ಯೋತಿಯೊಂದು ದಿಗ್ಗನೆ ಜ್ವಲಿಸಿದಂತಾಯ್ತು. `ಅರೆರೆ, ಹೌದಲ್ಲವಾ? ಯಾರು ಈ ಗಂಧರ್ವಸೇನಾ? ಮಂತ್ರಿಯನ್ನು ವಿಚಾರಿಸದೆ ಇಷ್ಟು ವ್ಯರ್ಥವಾಗಿ ರೋಧಿಸಿದೆನಲ್ಲ. ಅವನನ್ನೆ ಕೇಳಿಬಿಡೋಣ’ ರಾಜನ ಸ್ವಗತ ಥಟ್ಟನೆ ಅನುಷ್ಟಾನಕ್ಕೆ ಬಂದು ಮಂತ್ರಿಗೆ ಕರೆ ಹೋಯ್ತು.

ಮಂತ್ರಿ ಆಗಮಿಸಿದ. “ಅಲ್ಲಾ ಮಂತ್ರಪ್ಪ, ಅವಾಗ್ಲೆ ಗಂಧರ್ವಸೇನಾ ಸತ್ತೋದ ಅಂತ ಗೋಳಾಡ್ತಾ ಹ್ಯೇಳಿದ್ಯಲ್ಲಪ್ಪ, ಯಾರು ಆ ಗಂಧರ್ವಸೇನ?”. “ಗೊತ್ತಿಲ್ಲ ಮಾಸ್ವಾಮಿ” ಮಂತ್ರಿ ಪ್ರಾಮಾಣಿಕವಾಗಿ ನುಡಿದ, “ಒಡ್ಡೋಲುಗಕ್ಕೆ ತಡವಾಯ್ತು ಅಂತ ಓಡೋಡಿ ಬರ್ತಿದ್ನಾ, ಅವಾಗ ಅಗಸೆ ಬಾಗುಲತ್ರ ನಮ್ಮ ಸೇನಾಧಿಪತಿ ಅತ್ಕಂಡು ನಿಂತಿದ್ದ. ಏನಾಯ್ತು ಅಂತ ಕೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹ್ಯೇಳಿ ಜೋರಾಗಿ ಅತ್ತ. ಅದುಕ್ಕೆ ನಾನೂ ಅಳ್ತಾ ಬಂದು ನಿಮುಗೆ ಸುದ್ದಿ ಮುಟ್ಟಿಸಿದೆ ಆಟೆಯ”.

ಕೂಡಲೆ ಸೇನಾ ಅಧಿಪತಿಗೆ ಕರೆ ಹೋಯ್ತು. “ಏನಯ್ಯಾ ಸೇನಾಧಿಪತಿ, ಮಾಮಂತ್ರಿ ಹತ್ರ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಗೋಳಾಡಿದ್ಯಂತಲ್ಲ. ಯಾರಯ್ಯ ಆ ಗಂಧರ್ವ ಸೇನಾ?”.

“ಗೊತ್ತಿಲ್ಲ ಮಾಪ್ರಬು. ಬ್ಯೆಳಿಗ್ಗೆ ಅಗಸೆ ಬಾಗುಲತ್ರ ನಿಂತಿದ್ನಾ, ಊರುಗುಡಿ ಪೂಜಾರಪ್ಪ ಅತ್ಕಂತ ಗುಡಿ ಕಡೆ ಹ್ವೊಂಟಿದ್ದ. ಯಾಕಪ್ಪಾ ಅಂತ ಕ್ಯೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹೊಯ್ಕೊಂತ ಹ್ವೋದ. ಅದುಕ್ಕೆ ನಾನುವೆ ಅತ್ಕಂತ ನಿಂತಿದ್ದೆ” ಸೇನಾಧಿಪತಿ ಕೊಟ್ಟ ಮಾಹಿತಿ ಇಷ್ಟು. ಕೂಡಲೇ ಪೂಜಾರಪ್ಪನಿಗೆ ರಾಜನ ಕರೆ ಹೋಯ್ತು.

“ಏನು ಅಯ್ನೋರೆ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಅಳ್ತಿದ್ರಂತಲ್ಲ. ಯಾರು ಆ ಗಂಧರ್ವಸೇನಾ?” ರಾಜ ಪ್ರಶ್ನಿಸಿದ.

“ಗೊತ್ತಿಲ್ಲ ಮಾರಾಜ. ಬ್ಯೆಳಿಗ್ಗೆ ದ್ಯೇವುಸ್ಥಾನುಕ್ಕೆ ಪೂಜೆಗೆ ಅಂತ ಹೊಂಟ್ನಾ. ನನ್ನ ಹೆಂಡ್ರು ಸಿಕ್ಕಾಪಟ್ಟೆ ಅಳ್ತಾ ಇದ್ಳು. ಕ್ಯೇಳಿದ್ದುಕ್ಕೆ ಗಂಧರ್ವಸೇನ ಸತ್ತೋದ ಅಂದ್ಲು. ಅದುಕ್ಕೆ ನಾನೂ ಅತ್ಕಂತ ಹೊಂಟಿದ್ದೆ” ಪೂಜಾರಪ್ಪ ಪ್ರತಿಕ್ರಿಯಿಸಿದ.

ಯಥಾ ಪ್ರಕಾರ ಪೂಜಾರಪ್ಪನ ಹೆಂಡತಿಯನ್ನು ಕರೆದು ಕೇಳಲಾಯ್ತು. “ನನಿಗೆ ಗೊತ್ತಿಲ್ಲ ಸ್ವಾಮಿ. ಬೆಳಿಗ್ಗೆ ಮೈಲಿಗೆ ಬಟ್ಟೆ ಇಸ್ಕೊಂಡು ಹೋಗಕ್ಕೆ ಅಂತ ಅಗಸರವನ ಹೆಂಡತಿ ಬಂದಿದ್ಳಾ, ಅವುಳು ತುಂಬಾ ಗೋಳಾಡ್ತಾ ಗಂಧರ್ವಸೇನ ಸತ್ತೋದ ಅಂತ ಹ್ಯೇಳಿದ್ಳು. ಅದುಕ್ಕೆ ನಾನೂ ಅತ್ತೆ.”

ರಾಜನಿಗೆ ಕುತೂಹಲ ಅದೆಷ್ಟು ಹೆಚ್ಚಾಗಿಹೋಯ್ತೆಂದರೆ, ಈ ಸಲ ಅಗಸರವನ ಹೆಂಡತಿಯನ್ನು ಕರೆಸುವ ತಾಳ್ಮೆಯೂ ಇಲ್ಲದೆ, ತನ್ನ `ಪರಿವಾರ’ ಸಮೇತ ಅಗಸನ ಮನೆಯತ್ತ ನಡೆದ. ಮನೆಯಲ್ಲಿ ದಂಪತಿ ಇರಲಿಲ್ಲ, ಕಾಯಕದ ಸಲುವಾಗಿ ಹೊಳೆದಂಡೆ ಬಳಿ ಹೋಗಿದ್ದರು. ಅಲ್ಲಿಗೇ ಸವಾರಿ ಹೊರಟಿತು. ಕೊನೆಗೂ ಆ ಹೆಂಗಸು ಸಿಕ್ಕಳು. “ಏನಮ್ಮಾ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ತುಂಬಾ ಅಳ್ತಿದ್ದ್ಯಂತೆ. ಯಾರು ಆ ಪುಣ್ಯಾತ್ಮ?” ಮಹಾರಾಜ ಪ್ರಶ್ನಿಸಿದ.“ಅಯ್ಯಾ ಸಾಮಿ, ಮೊನ್ನೆಯಿನು ಅರಾಮಾಗಿದ್ದ ಸಾಮಿ. ಬಾಳ ಪಿರೂತಿಯಿಂದ ಸಾಕಿದ್ದೆ. ನಿನ್ನೆ ನಮ್ಮುನ್ನೆಲ್ಲ ಬಿಟ್ಟೋದ. ನ್ಯೆನಿಸಿಕಂಡ್ರೆ ಅಳು ಬತ್ತದೆ ಸಾಮಿ” ಮತ್ತೆ ಆ ಹೆಂಗಸಲ್ಲಿ ದುಖ ಉಮ್ಮಳಿಸಿತು, ಕಣ್ಣೀರಿಡಲು ಶುರು ಮಾಡಿದಳು.

“ಯಾರಮ್ಮ, ನಿನ್ನ ಮಗನಾ ಅವನು?” ರಾಜ ಪ್ರಶ್ನಿಸಿದ.

“ಮಗನಿಗಿಂತ ಜಾಸ್ತಿ ಪಿರೂತಿಯಿಂದ ಸಾಕಿದ್ದೆ ಸಾಮಿ. ನನ್ನ ಕತ್ತೆಯ ಹೆಸ್ರು ಅದು?.!!!”

ಆ ಹೆಂಗಸಿನ ಉತ್ತರ ಕೇಳಿಸಿಕೊಂಡ ತರುವಾಯ ಅಲ್ಲಿ ನೆರೆದಿದ್ವರಿಗೆಲ್ಲ ತಮ್ಮ ಮುಠ್ಠಾಳತನದ ಅರಿವಾಗಿ ಮೂರ್ಛೆ ಹೋಗುವುದೊಂದು ಬಾಕಿ. ಇಪ್ಪತ್ತೊಂದು ದಿನ ಶೋಕಾಚಾರಣೆ ಘೋಷಿಸಿದ್ದ ರಾಜ ಮೆತ್ತಗೆ ಅಲ್ಲಿಂದ ನುಣುಚಿಕೊಂಡು ಅರಮನೆಯತ್ತ ದೌಡಾಯಿಸಿದ.

(ಸೂಚನೆ: ಇದೊಂದು ಬಂಗಾಳಿ ಜನಪದ ಕಥೆ. ಪ್ರಸ್ತುತ ಯಾವುದೇ ವಿದ್ಯಮಾನ, ವ್ಯಕ್ತಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...