Homeಕಥೆ"ಗಂಧರ್ವಸೇನಾ ಸತ್ತಾಗ?" : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

“ಗಂಧರ್ವಸೇನಾ ಸತ್ತಾಗ?” : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

- Advertisement -
- Advertisement -

ರಾಜ ತನ್ನ `ಪರಿವಾರ’ ಸಮೇತ ಒಡ್ಡೋಲಗದಲ್ಲಿ ಬ್ಯುಸಿಯಾಗಿದ್ದ. ಅಷ್ಟೊತ್ತು ಮಿಸ್ಸಿಂಗ್ ಆಗಿದ್ದ ಮಂತ್ರಿ, ಜೋರಾಗಿ ರೋಧಿಸುತ್ತ ಕಣ್ಣೀರ ಧಾರೆ ಸುರಿಸುತ್ತ ಓಡೋಡಿ ಒಡ್ಡೋಲಗ ಪ್ರವೇಶಿಸಿದ. ಮಂತ್ರಿಯ ಸ್ಥಿತಿ ನೋಡಿ ರಾಜನಿಗೆ ಗಾಬರಿಯಾಯ್ತು. “ಏನಾಯ್ತು ಮಂತ್ರಪ್ಪ. ಅದ್ಯಾಕಿಂಗೆ ಸಣ್ಣಮಕ್ಕಳ ಥರ ಅತ್ಕೊಂಡು ಬತ್ತಾ ಇದೀಯ? ಮನೆಯಲ್ಲಿ ಹೆಂಡ್ರು, ಮಕ್ಕಳು ಕ್ಷೇಮವೆ” ರಾಜ ವಿಚಾರಿಸಿದ. “ಅಯ್ಯೋ ಏನಂಥಾ ಹ್ಯೇಳೋದು ಮಾರಾಜುರೆ. ಗಂಧರ್ವ ಸೇನಾ ಸತ್ತೋದ್ನಂತೆ!” ಮಂತ್ರಿ ತನ್ನ ಸಂಕಟದ ಮೂಲವನ್ನು ಮುಂದಿಟ್ಟ.

“ಅಯ್ಯಯ್ಯೋ, ಎಂಥಾ ಸುದ್ದಿ ಹ್ಯೇಳ್ತಾ ಇದೀಯ ಮಂತ್ರಪ್ಪ. ಗಂಧರ್ವ ಸೇನಾ ಸತ್ತೋದ್ನಾ!!!” ಈಗ ಮಹಾರಾಜ ಕೂಡಾ ಮಂತ್ರಿಗೆ ಕೋರಸ್ ಕೊಟ್ಟು ರೋಧಿಸಲು ಶುರು ಮಾಡಿದ. ರಾಜನೆ ಕಣ್ಣೀರಿಟ್ಟ ಮೇಲೆ ಕೇಳಬೇಕೆ. ಇಡೀ ಒಡ್ಡೋಲಗವೆ

“ಅಯ್ಯಯ್ಯೋ, ಗಂಧರ್ವ ಸೇನಾ ಹೋಗ್ಬುಟ್ಟೆಯಾ” ಎಂಬ ರೋಧನೆಯಲ್ಲಿ ಮುಳುಗಿಹೋಯ್ತು.

ಹಾರ್ಟ್ ಬ್ರೇಕಿಂಗ್ ಸುದ್ದಿ ಕೇಳಿದಮೇಲೆ ಒಡ್ಡೋಲಗ ನಡೆಸುವ ಯಾವ ಉಮೇದಿಯೂ ರಾಜನಿಗೆ ಉಳಿಯಲಿಲ್ಲ. ರಾಜ್ಯದಲ್ಲಿ ಇಪ್ಪತ್ತೊಂದು ದಿನಗಳ ಶೋಕಾಚರಣೆ ಘೋಷಿಸಿ, ದುಃಖತಪ್ತ ಮೋರೆಯಲ್ಲಿ ಅಂತಃಪುರದ ಕಡೆ ನಡೆದ.

ಒಡ್ಡೋಲಗದಲ್ಲಿರಬೇಕಿದ್ದ ರಾಜ ಹೀಗೆ ಹೊತ್ತಲ್ಲದಹೊತ್ತಲ್ಲಿ ಅಂತಃಪುರಕ್ಕೆ ಧಾವಿಸಿದ್ದನ್ನು, ಅದರಲ್ಲು ದುಖತಪ್ತನಾಗಿ ರಾಣಿನಿವಾಸ ಹೊಕ್ಕಿದ್ದನ್ನು ನೋಡಿ ಅವನ ರಾಣಿಯರಿಗೆ ಅಚ್ಚರಿಯಾಯ್ತು. ಪಟ್ಟದರಸಿ ರಾಜನ ಬಳಿ ಬಂದು “ಯಾಕೆ ಮಾಸ್ವಾಮಿ, ಶ್ಯಾನೆ ಬ್ಯಾಸರದಲ್ಲಿ ಇದೀರಿ. ಮಟಮಟ ಮಧ್ಯಾನುವೆ ಮಂಚದ ಮನೆಯತ್ತ ಬಂದಿದೀರಿ. ಏನ್ಸಮಾಚಾರ?” ತುಸು ಅಳುಕಿನಲ್ಲೆ ಕೇಳಿದಳು. “ಏನಂಥಾ ಹ್ಯೇಳ್ಳಿ ಮಾರಾಣಿ, ಗಂಧರ್ವಸೇನಾ ಸತ್ತೋದ್ನಂತೆ” ರಾಜನ ಮಾತಿನ್ನು ಬಾಯೊಳಗೇ ಇತ್ತೇನೊ, ಮಹಾರಾಣಿ ದೊಪ್ಪನೆ ನೆಲಕ್ಕೆ ಕುಸಿದುಬಿದ್ದಳು. “ಏನಂದ್ರಿ ಪ್ರಭು, ಗಂಧರ್ವಸೇನ ಸತ್ತೋದ್ನ? ಅಯ್ಯೋ ದುರ್ವಿಧಿಯೇ?..!” ಮಹಾರಾಣಿ ಚಿತ್ರವಿಚಿತ್ರವಾಗಿ ರೋಧಿಸುತ್ತ ಕೋಣೆ ಹೊಕ್ಕು ರಾಜನ ಇನ್ನುಳಿದ ಮಡದಿಯರು, ಉಪಮಡದಿಯರಿಗೆ ಗಂಧರ್ವಸೇನಾ ಮೃತನಾದ ಸುದ್ದಿ ಅರುಹಿದಳು. ಇಡಿ ಅಂತಃಪುರವೆ ಶೋಕದ ಕಡಲಲ್ಲಿ ಮುಳುಗಿತು. ಕಿರಿಯರಸಿ ತನ್ನ ಖಾಸಗಿ ಕೋಣೆಯಲ್ಲಿ ಮುಸಿಮುಸಿ ಅಳುತ್ತಿರೋದನ್ನ ಕಂಡ ಆಕೆಯ ಸೇವಕಿಗೆ ಕುತೂಹಲ ಹೆಚ್ಚಾಗಿ ಕೇಳಿದಳು, “ಯಾಕೆ ರಾಣ್ಯವ್ವ ಹಿಂಗ ಅಳಾಕತ್ತಿದ್ದೀಯ? ಅಂತದ್ದೇನಾತಾ?”.

“ಏನಂಥಾ ಹ್ಯೇಳ್ಲೇ ಗೆಳತಿ, ಗಂಧರ್ವಸೇನಾ ಸತ್ತೋದ್ನಂತೆ!” ಕಿರಿಯರಸಿಯ ಶೋಕಸುದ್ದಿ ಕೇಳಿ ಸೇವಕಿಗು ಆಘಾತವಾಯ್ತು. “ಹೌದೇನೆ ನನ್ನವ್ವ. ಪಾಪಾ, ಹಿಂಗಾಗಬಾರದಿತ್ತು ಬಿಡು. ಅದಂಗಿರುಲಿ. ಈ ಗಂಧರ್ವಸೇನಾ ಯಾರು? ಅವ ನಿನುಗೆ, ಮಾರಾಜುಗೆ ಏನು ಸಮಂದ ಆಗಬೇಕಾ?” ಸೇವಕಿ ತನ್ನ ಅನುಮಾನ ತೆರೆದಿಟ್ಟಳು. ಕಿರಿಯರಸಿಗೆ ಜ್ಞಾನೋದಯ ಆದಂತಾಯ್ತು.

`ಹೌದು ಯಾರು ಈ ಗಂಧರ್ವಸೇನ? ನಾನ್ಯಾಕಿಷ್ಟು ಅಳ್ತಾ ಇದೀನಿ’. ತನ್ನ ಗೊಂದಲ ಬಗೆಹರಿಸಿಕೊಳ್ಳಲು ಪಟ್ಟದರಸಿಯ ಬಳಿ ಬಂದು ಗಂಧರ್ವಸೇನನ ಬಗ್ಗೆ ವಿಚಾರಿಸಿದಳು. ಆಕೆಗೂ ನಯಾಪೈಸೆಯ ಮಾಹಿತಿಯಿಲ್ಲ. ಆದರು ಲೀಟರುಗಟ್ಟಲೆ ಕಣ್ಣೀರು ಸುರಿಸಿ ರೋಧಿಸಿದ್ದಾಗಿತ್ತು. ರಾಜನ ಮುಂದೆ ನಿಂತ ಆಕೆ

“ಮಾರಾಜ, ಆಗ್ಲೆ ಗಂಧರ್ವಸೇನ ಸತ್ತೋದ ಅಂದ್ರಲ್ಲ, ಯಾರು ಆ ಪುಣ್ಯಾತ್ಮ? ನಿಮ್ಮ ಆತ್ಮೀಯ ಗೆಣೆಕಾರನೆ, ಹತ್ತಿರದ ಸಮಂಧಿಕನೆ?”. ಇನ್ನೂ ಶೋಕಸಾಗರದಲ್ಲೆ ಬಡಿದಾಡುತ್ತ ಬಿದ್ದುಕೊಂಡಿದ್ದ ರಾಜನಿಗೆ ರಾಣಿಯ ಪ್ರಶ್ನೆ ಕೇಳಿ ಜ್ಯೋತಿಯೊಂದು ದಿಗ್ಗನೆ ಜ್ವಲಿಸಿದಂತಾಯ್ತು. `ಅರೆರೆ, ಹೌದಲ್ಲವಾ? ಯಾರು ಈ ಗಂಧರ್ವಸೇನಾ? ಮಂತ್ರಿಯನ್ನು ವಿಚಾರಿಸದೆ ಇಷ್ಟು ವ್ಯರ್ಥವಾಗಿ ರೋಧಿಸಿದೆನಲ್ಲ. ಅವನನ್ನೆ ಕೇಳಿಬಿಡೋಣ’ ರಾಜನ ಸ್ವಗತ ಥಟ್ಟನೆ ಅನುಷ್ಟಾನಕ್ಕೆ ಬಂದು ಮಂತ್ರಿಗೆ ಕರೆ ಹೋಯ್ತು.

ಮಂತ್ರಿ ಆಗಮಿಸಿದ. “ಅಲ್ಲಾ ಮಂತ್ರಪ್ಪ, ಅವಾಗ್ಲೆ ಗಂಧರ್ವಸೇನಾ ಸತ್ತೋದ ಅಂತ ಗೋಳಾಡ್ತಾ ಹ್ಯೇಳಿದ್ಯಲ್ಲಪ್ಪ, ಯಾರು ಆ ಗಂಧರ್ವಸೇನ?”. “ಗೊತ್ತಿಲ್ಲ ಮಾಸ್ವಾಮಿ” ಮಂತ್ರಿ ಪ್ರಾಮಾಣಿಕವಾಗಿ ನುಡಿದ, “ಒಡ್ಡೋಲುಗಕ್ಕೆ ತಡವಾಯ್ತು ಅಂತ ಓಡೋಡಿ ಬರ್ತಿದ್ನಾ, ಅವಾಗ ಅಗಸೆ ಬಾಗುಲತ್ರ ನಮ್ಮ ಸೇನಾಧಿಪತಿ ಅತ್ಕಂಡು ನಿಂತಿದ್ದ. ಏನಾಯ್ತು ಅಂತ ಕೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹ್ಯೇಳಿ ಜೋರಾಗಿ ಅತ್ತ. ಅದುಕ್ಕೆ ನಾನೂ ಅಳ್ತಾ ಬಂದು ನಿಮುಗೆ ಸುದ್ದಿ ಮುಟ್ಟಿಸಿದೆ ಆಟೆಯ”.

ಕೂಡಲೆ ಸೇನಾ ಅಧಿಪತಿಗೆ ಕರೆ ಹೋಯ್ತು. “ಏನಯ್ಯಾ ಸೇನಾಧಿಪತಿ, ಮಾಮಂತ್ರಿ ಹತ್ರ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಗೋಳಾಡಿದ್ಯಂತಲ್ಲ. ಯಾರಯ್ಯ ಆ ಗಂಧರ್ವ ಸೇನಾ?”.

“ಗೊತ್ತಿಲ್ಲ ಮಾಪ್ರಬು. ಬ್ಯೆಳಿಗ್ಗೆ ಅಗಸೆ ಬಾಗುಲತ್ರ ನಿಂತಿದ್ನಾ, ಊರುಗುಡಿ ಪೂಜಾರಪ್ಪ ಅತ್ಕಂತ ಗುಡಿ ಕಡೆ ಹ್ವೊಂಟಿದ್ದ. ಯಾಕಪ್ಪಾ ಅಂತ ಕ್ಯೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹೊಯ್ಕೊಂತ ಹ್ವೋದ. ಅದುಕ್ಕೆ ನಾನುವೆ ಅತ್ಕಂತ ನಿಂತಿದ್ದೆ” ಸೇನಾಧಿಪತಿ ಕೊಟ್ಟ ಮಾಹಿತಿ ಇಷ್ಟು. ಕೂಡಲೇ ಪೂಜಾರಪ್ಪನಿಗೆ ರಾಜನ ಕರೆ ಹೋಯ್ತು.

“ಏನು ಅಯ್ನೋರೆ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಅಳ್ತಿದ್ರಂತಲ್ಲ. ಯಾರು ಆ ಗಂಧರ್ವಸೇನಾ?” ರಾಜ ಪ್ರಶ್ನಿಸಿದ.

“ಗೊತ್ತಿಲ್ಲ ಮಾರಾಜ. ಬ್ಯೆಳಿಗ್ಗೆ ದ್ಯೇವುಸ್ಥಾನುಕ್ಕೆ ಪೂಜೆಗೆ ಅಂತ ಹೊಂಟ್ನಾ. ನನ್ನ ಹೆಂಡ್ರು ಸಿಕ್ಕಾಪಟ್ಟೆ ಅಳ್ತಾ ಇದ್ಳು. ಕ್ಯೇಳಿದ್ದುಕ್ಕೆ ಗಂಧರ್ವಸೇನ ಸತ್ತೋದ ಅಂದ್ಲು. ಅದುಕ್ಕೆ ನಾನೂ ಅತ್ಕಂತ ಹೊಂಟಿದ್ದೆ” ಪೂಜಾರಪ್ಪ ಪ್ರತಿಕ್ರಿಯಿಸಿದ.

ಯಥಾ ಪ್ರಕಾರ ಪೂಜಾರಪ್ಪನ ಹೆಂಡತಿಯನ್ನು ಕರೆದು ಕೇಳಲಾಯ್ತು. “ನನಿಗೆ ಗೊತ್ತಿಲ್ಲ ಸ್ವಾಮಿ. ಬೆಳಿಗ್ಗೆ ಮೈಲಿಗೆ ಬಟ್ಟೆ ಇಸ್ಕೊಂಡು ಹೋಗಕ್ಕೆ ಅಂತ ಅಗಸರವನ ಹೆಂಡತಿ ಬಂದಿದ್ಳಾ, ಅವುಳು ತುಂಬಾ ಗೋಳಾಡ್ತಾ ಗಂಧರ್ವಸೇನ ಸತ್ತೋದ ಅಂತ ಹ್ಯೇಳಿದ್ಳು. ಅದುಕ್ಕೆ ನಾನೂ ಅತ್ತೆ.”

ರಾಜನಿಗೆ ಕುತೂಹಲ ಅದೆಷ್ಟು ಹೆಚ್ಚಾಗಿಹೋಯ್ತೆಂದರೆ, ಈ ಸಲ ಅಗಸರವನ ಹೆಂಡತಿಯನ್ನು ಕರೆಸುವ ತಾಳ್ಮೆಯೂ ಇಲ್ಲದೆ, ತನ್ನ `ಪರಿವಾರ’ ಸಮೇತ ಅಗಸನ ಮನೆಯತ್ತ ನಡೆದ. ಮನೆಯಲ್ಲಿ ದಂಪತಿ ಇರಲಿಲ್ಲ, ಕಾಯಕದ ಸಲುವಾಗಿ ಹೊಳೆದಂಡೆ ಬಳಿ ಹೋಗಿದ್ದರು. ಅಲ್ಲಿಗೇ ಸವಾರಿ ಹೊರಟಿತು. ಕೊನೆಗೂ ಆ ಹೆಂಗಸು ಸಿಕ್ಕಳು. “ಏನಮ್ಮಾ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ತುಂಬಾ ಅಳ್ತಿದ್ದ್ಯಂತೆ. ಯಾರು ಆ ಪುಣ್ಯಾತ್ಮ?” ಮಹಾರಾಜ ಪ್ರಶ್ನಿಸಿದ.“ಅಯ್ಯಾ ಸಾಮಿ, ಮೊನ್ನೆಯಿನು ಅರಾಮಾಗಿದ್ದ ಸಾಮಿ. ಬಾಳ ಪಿರೂತಿಯಿಂದ ಸಾಕಿದ್ದೆ. ನಿನ್ನೆ ನಮ್ಮುನ್ನೆಲ್ಲ ಬಿಟ್ಟೋದ. ನ್ಯೆನಿಸಿಕಂಡ್ರೆ ಅಳು ಬತ್ತದೆ ಸಾಮಿ” ಮತ್ತೆ ಆ ಹೆಂಗಸಲ್ಲಿ ದುಖ ಉಮ್ಮಳಿಸಿತು, ಕಣ್ಣೀರಿಡಲು ಶುರು ಮಾಡಿದಳು.

“ಯಾರಮ್ಮ, ನಿನ್ನ ಮಗನಾ ಅವನು?” ರಾಜ ಪ್ರಶ್ನಿಸಿದ.

“ಮಗನಿಗಿಂತ ಜಾಸ್ತಿ ಪಿರೂತಿಯಿಂದ ಸಾಕಿದ್ದೆ ಸಾಮಿ. ನನ್ನ ಕತ್ತೆಯ ಹೆಸ್ರು ಅದು?.!!!”

ಆ ಹೆಂಗಸಿನ ಉತ್ತರ ಕೇಳಿಸಿಕೊಂಡ ತರುವಾಯ ಅಲ್ಲಿ ನೆರೆದಿದ್ವರಿಗೆಲ್ಲ ತಮ್ಮ ಮುಠ್ಠಾಳತನದ ಅರಿವಾಗಿ ಮೂರ್ಛೆ ಹೋಗುವುದೊಂದು ಬಾಕಿ. ಇಪ್ಪತ್ತೊಂದು ದಿನ ಶೋಕಾಚಾರಣೆ ಘೋಷಿಸಿದ್ದ ರಾಜ ಮೆತ್ತಗೆ ಅಲ್ಲಿಂದ ನುಣುಚಿಕೊಂಡು ಅರಮನೆಯತ್ತ ದೌಡಾಯಿಸಿದ.

(ಸೂಚನೆ: ಇದೊಂದು ಬಂಗಾಳಿ ಜನಪದ ಕಥೆ. ಪ್ರಸ್ತುತ ಯಾವುದೇ ವಿದ್ಯಮಾನ, ವ್ಯಕ್ತಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...