Homeಕಥೆ"ಗಂಧರ್ವಸೇನಾ ಸತ್ತಾಗ?" : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

“ಗಂಧರ್ವಸೇನಾ ಸತ್ತಾಗ?” : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

- Advertisement -
- Advertisement -

ರಾಜ ತನ್ನ `ಪರಿವಾರ’ ಸಮೇತ ಒಡ್ಡೋಲಗದಲ್ಲಿ ಬ್ಯುಸಿಯಾಗಿದ್ದ. ಅಷ್ಟೊತ್ತು ಮಿಸ್ಸಿಂಗ್ ಆಗಿದ್ದ ಮಂತ್ರಿ, ಜೋರಾಗಿ ರೋಧಿಸುತ್ತ ಕಣ್ಣೀರ ಧಾರೆ ಸುರಿಸುತ್ತ ಓಡೋಡಿ ಒಡ್ಡೋಲಗ ಪ್ರವೇಶಿಸಿದ. ಮಂತ್ರಿಯ ಸ್ಥಿತಿ ನೋಡಿ ರಾಜನಿಗೆ ಗಾಬರಿಯಾಯ್ತು. “ಏನಾಯ್ತು ಮಂತ್ರಪ್ಪ. ಅದ್ಯಾಕಿಂಗೆ ಸಣ್ಣಮಕ್ಕಳ ಥರ ಅತ್ಕೊಂಡು ಬತ್ತಾ ಇದೀಯ? ಮನೆಯಲ್ಲಿ ಹೆಂಡ್ರು, ಮಕ್ಕಳು ಕ್ಷೇಮವೆ” ರಾಜ ವಿಚಾರಿಸಿದ. “ಅಯ್ಯೋ ಏನಂಥಾ ಹ್ಯೇಳೋದು ಮಾರಾಜುರೆ. ಗಂಧರ್ವ ಸೇನಾ ಸತ್ತೋದ್ನಂತೆ!” ಮಂತ್ರಿ ತನ್ನ ಸಂಕಟದ ಮೂಲವನ್ನು ಮುಂದಿಟ್ಟ.

“ಅಯ್ಯಯ್ಯೋ, ಎಂಥಾ ಸುದ್ದಿ ಹ್ಯೇಳ್ತಾ ಇದೀಯ ಮಂತ್ರಪ್ಪ. ಗಂಧರ್ವ ಸೇನಾ ಸತ್ತೋದ್ನಾ!!!” ಈಗ ಮಹಾರಾಜ ಕೂಡಾ ಮಂತ್ರಿಗೆ ಕೋರಸ್ ಕೊಟ್ಟು ರೋಧಿಸಲು ಶುರು ಮಾಡಿದ. ರಾಜನೆ ಕಣ್ಣೀರಿಟ್ಟ ಮೇಲೆ ಕೇಳಬೇಕೆ. ಇಡೀ ಒಡ್ಡೋಲಗವೆ

“ಅಯ್ಯಯ್ಯೋ, ಗಂಧರ್ವ ಸೇನಾ ಹೋಗ್ಬುಟ್ಟೆಯಾ” ಎಂಬ ರೋಧನೆಯಲ್ಲಿ ಮುಳುಗಿಹೋಯ್ತು.

ಹಾರ್ಟ್ ಬ್ರೇಕಿಂಗ್ ಸುದ್ದಿ ಕೇಳಿದಮೇಲೆ ಒಡ್ಡೋಲಗ ನಡೆಸುವ ಯಾವ ಉಮೇದಿಯೂ ರಾಜನಿಗೆ ಉಳಿಯಲಿಲ್ಲ. ರಾಜ್ಯದಲ್ಲಿ ಇಪ್ಪತ್ತೊಂದು ದಿನಗಳ ಶೋಕಾಚರಣೆ ಘೋಷಿಸಿ, ದುಃಖತಪ್ತ ಮೋರೆಯಲ್ಲಿ ಅಂತಃಪುರದ ಕಡೆ ನಡೆದ.

ಒಡ್ಡೋಲಗದಲ್ಲಿರಬೇಕಿದ್ದ ರಾಜ ಹೀಗೆ ಹೊತ್ತಲ್ಲದಹೊತ್ತಲ್ಲಿ ಅಂತಃಪುರಕ್ಕೆ ಧಾವಿಸಿದ್ದನ್ನು, ಅದರಲ್ಲು ದುಖತಪ್ತನಾಗಿ ರಾಣಿನಿವಾಸ ಹೊಕ್ಕಿದ್ದನ್ನು ನೋಡಿ ಅವನ ರಾಣಿಯರಿಗೆ ಅಚ್ಚರಿಯಾಯ್ತು. ಪಟ್ಟದರಸಿ ರಾಜನ ಬಳಿ ಬಂದು “ಯಾಕೆ ಮಾಸ್ವಾಮಿ, ಶ್ಯಾನೆ ಬ್ಯಾಸರದಲ್ಲಿ ಇದೀರಿ. ಮಟಮಟ ಮಧ್ಯಾನುವೆ ಮಂಚದ ಮನೆಯತ್ತ ಬಂದಿದೀರಿ. ಏನ್ಸಮಾಚಾರ?” ತುಸು ಅಳುಕಿನಲ್ಲೆ ಕೇಳಿದಳು. “ಏನಂಥಾ ಹ್ಯೇಳ್ಳಿ ಮಾರಾಣಿ, ಗಂಧರ್ವಸೇನಾ ಸತ್ತೋದ್ನಂತೆ” ರಾಜನ ಮಾತಿನ್ನು ಬಾಯೊಳಗೇ ಇತ್ತೇನೊ, ಮಹಾರಾಣಿ ದೊಪ್ಪನೆ ನೆಲಕ್ಕೆ ಕುಸಿದುಬಿದ್ದಳು. “ಏನಂದ್ರಿ ಪ್ರಭು, ಗಂಧರ್ವಸೇನ ಸತ್ತೋದ್ನ? ಅಯ್ಯೋ ದುರ್ವಿಧಿಯೇ?..!” ಮಹಾರಾಣಿ ಚಿತ್ರವಿಚಿತ್ರವಾಗಿ ರೋಧಿಸುತ್ತ ಕೋಣೆ ಹೊಕ್ಕು ರಾಜನ ಇನ್ನುಳಿದ ಮಡದಿಯರು, ಉಪಮಡದಿಯರಿಗೆ ಗಂಧರ್ವಸೇನಾ ಮೃತನಾದ ಸುದ್ದಿ ಅರುಹಿದಳು. ಇಡಿ ಅಂತಃಪುರವೆ ಶೋಕದ ಕಡಲಲ್ಲಿ ಮುಳುಗಿತು. ಕಿರಿಯರಸಿ ತನ್ನ ಖಾಸಗಿ ಕೋಣೆಯಲ್ಲಿ ಮುಸಿಮುಸಿ ಅಳುತ್ತಿರೋದನ್ನ ಕಂಡ ಆಕೆಯ ಸೇವಕಿಗೆ ಕುತೂಹಲ ಹೆಚ್ಚಾಗಿ ಕೇಳಿದಳು, “ಯಾಕೆ ರಾಣ್ಯವ್ವ ಹಿಂಗ ಅಳಾಕತ್ತಿದ್ದೀಯ? ಅಂತದ್ದೇನಾತಾ?”.

“ಏನಂಥಾ ಹ್ಯೇಳ್ಲೇ ಗೆಳತಿ, ಗಂಧರ್ವಸೇನಾ ಸತ್ತೋದ್ನಂತೆ!” ಕಿರಿಯರಸಿಯ ಶೋಕಸುದ್ದಿ ಕೇಳಿ ಸೇವಕಿಗು ಆಘಾತವಾಯ್ತು. “ಹೌದೇನೆ ನನ್ನವ್ವ. ಪಾಪಾ, ಹಿಂಗಾಗಬಾರದಿತ್ತು ಬಿಡು. ಅದಂಗಿರುಲಿ. ಈ ಗಂಧರ್ವಸೇನಾ ಯಾರು? ಅವ ನಿನುಗೆ, ಮಾರಾಜುಗೆ ಏನು ಸಮಂದ ಆಗಬೇಕಾ?” ಸೇವಕಿ ತನ್ನ ಅನುಮಾನ ತೆರೆದಿಟ್ಟಳು. ಕಿರಿಯರಸಿಗೆ ಜ್ಞಾನೋದಯ ಆದಂತಾಯ್ತು.

`ಹೌದು ಯಾರು ಈ ಗಂಧರ್ವಸೇನ? ನಾನ್ಯಾಕಿಷ್ಟು ಅಳ್ತಾ ಇದೀನಿ’. ತನ್ನ ಗೊಂದಲ ಬಗೆಹರಿಸಿಕೊಳ್ಳಲು ಪಟ್ಟದರಸಿಯ ಬಳಿ ಬಂದು ಗಂಧರ್ವಸೇನನ ಬಗ್ಗೆ ವಿಚಾರಿಸಿದಳು. ಆಕೆಗೂ ನಯಾಪೈಸೆಯ ಮಾಹಿತಿಯಿಲ್ಲ. ಆದರು ಲೀಟರುಗಟ್ಟಲೆ ಕಣ್ಣೀರು ಸುರಿಸಿ ರೋಧಿಸಿದ್ದಾಗಿತ್ತು. ರಾಜನ ಮುಂದೆ ನಿಂತ ಆಕೆ

“ಮಾರಾಜ, ಆಗ್ಲೆ ಗಂಧರ್ವಸೇನ ಸತ್ತೋದ ಅಂದ್ರಲ್ಲ, ಯಾರು ಆ ಪುಣ್ಯಾತ್ಮ? ನಿಮ್ಮ ಆತ್ಮೀಯ ಗೆಣೆಕಾರನೆ, ಹತ್ತಿರದ ಸಮಂಧಿಕನೆ?”. ಇನ್ನೂ ಶೋಕಸಾಗರದಲ್ಲೆ ಬಡಿದಾಡುತ್ತ ಬಿದ್ದುಕೊಂಡಿದ್ದ ರಾಜನಿಗೆ ರಾಣಿಯ ಪ್ರಶ್ನೆ ಕೇಳಿ ಜ್ಯೋತಿಯೊಂದು ದಿಗ್ಗನೆ ಜ್ವಲಿಸಿದಂತಾಯ್ತು. `ಅರೆರೆ, ಹೌದಲ್ಲವಾ? ಯಾರು ಈ ಗಂಧರ್ವಸೇನಾ? ಮಂತ್ರಿಯನ್ನು ವಿಚಾರಿಸದೆ ಇಷ್ಟು ವ್ಯರ್ಥವಾಗಿ ರೋಧಿಸಿದೆನಲ್ಲ. ಅವನನ್ನೆ ಕೇಳಿಬಿಡೋಣ’ ರಾಜನ ಸ್ವಗತ ಥಟ್ಟನೆ ಅನುಷ್ಟಾನಕ್ಕೆ ಬಂದು ಮಂತ್ರಿಗೆ ಕರೆ ಹೋಯ್ತು.

ಮಂತ್ರಿ ಆಗಮಿಸಿದ. “ಅಲ್ಲಾ ಮಂತ್ರಪ್ಪ, ಅವಾಗ್ಲೆ ಗಂಧರ್ವಸೇನಾ ಸತ್ತೋದ ಅಂತ ಗೋಳಾಡ್ತಾ ಹ್ಯೇಳಿದ್ಯಲ್ಲಪ್ಪ, ಯಾರು ಆ ಗಂಧರ್ವಸೇನ?”. “ಗೊತ್ತಿಲ್ಲ ಮಾಸ್ವಾಮಿ” ಮಂತ್ರಿ ಪ್ರಾಮಾಣಿಕವಾಗಿ ನುಡಿದ, “ಒಡ್ಡೋಲುಗಕ್ಕೆ ತಡವಾಯ್ತು ಅಂತ ಓಡೋಡಿ ಬರ್ತಿದ್ನಾ, ಅವಾಗ ಅಗಸೆ ಬಾಗುಲತ್ರ ನಮ್ಮ ಸೇನಾಧಿಪತಿ ಅತ್ಕಂಡು ನಿಂತಿದ್ದ. ಏನಾಯ್ತು ಅಂತ ಕೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹ್ಯೇಳಿ ಜೋರಾಗಿ ಅತ್ತ. ಅದುಕ್ಕೆ ನಾನೂ ಅಳ್ತಾ ಬಂದು ನಿಮುಗೆ ಸುದ್ದಿ ಮುಟ್ಟಿಸಿದೆ ಆಟೆಯ”.

ಕೂಡಲೆ ಸೇನಾ ಅಧಿಪತಿಗೆ ಕರೆ ಹೋಯ್ತು. “ಏನಯ್ಯಾ ಸೇನಾಧಿಪತಿ, ಮಾಮಂತ್ರಿ ಹತ್ರ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಗೋಳಾಡಿದ್ಯಂತಲ್ಲ. ಯಾರಯ್ಯ ಆ ಗಂಧರ್ವ ಸೇನಾ?”.

“ಗೊತ್ತಿಲ್ಲ ಮಾಪ್ರಬು. ಬ್ಯೆಳಿಗ್ಗೆ ಅಗಸೆ ಬಾಗುಲತ್ರ ನಿಂತಿದ್ನಾ, ಊರುಗುಡಿ ಪೂಜಾರಪ್ಪ ಅತ್ಕಂತ ಗುಡಿ ಕಡೆ ಹ್ವೊಂಟಿದ್ದ. ಯಾಕಪ್ಪಾ ಅಂತ ಕ್ಯೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹೊಯ್ಕೊಂತ ಹ್ವೋದ. ಅದುಕ್ಕೆ ನಾನುವೆ ಅತ್ಕಂತ ನಿಂತಿದ್ದೆ” ಸೇನಾಧಿಪತಿ ಕೊಟ್ಟ ಮಾಹಿತಿ ಇಷ್ಟು. ಕೂಡಲೇ ಪೂಜಾರಪ್ಪನಿಗೆ ರಾಜನ ಕರೆ ಹೋಯ್ತು.

“ಏನು ಅಯ್ನೋರೆ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಅಳ್ತಿದ್ರಂತಲ್ಲ. ಯಾರು ಆ ಗಂಧರ್ವಸೇನಾ?” ರಾಜ ಪ್ರಶ್ನಿಸಿದ.

“ಗೊತ್ತಿಲ್ಲ ಮಾರಾಜ. ಬ್ಯೆಳಿಗ್ಗೆ ದ್ಯೇವುಸ್ಥಾನುಕ್ಕೆ ಪೂಜೆಗೆ ಅಂತ ಹೊಂಟ್ನಾ. ನನ್ನ ಹೆಂಡ್ರು ಸಿಕ್ಕಾಪಟ್ಟೆ ಅಳ್ತಾ ಇದ್ಳು. ಕ್ಯೇಳಿದ್ದುಕ್ಕೆ ಗಂಧರ್ವಸೇನ ಸತ್ತೋದ ಅಂದ್ಲು. ಅದುಕ್ಕೆ ನಾನೂ ಅತ್ಕಂತ ಹೊಂಟಿದ್ದೆ” ಪೂಜಾರಪ್ಪ ಪ್ರತಿಕ್ರಿಯಿಸಿದ.

ಯಥಾ ಪ್ರಕಾರ ಪೂಜಾರಪ್ಪನ ಹೆಂಡತಿಯನ್ನು ಕರೆದು ಕೇಳಲಾಯ್ತು. “ನನಿಗೆ ಗೊತ್ತಿಲ್ಲ ಸ್ವಾಮಿ. ಬೆಳಿಗ್ಗೆ ಮೈಲಿಗೆ ಬಟ್ಟೆ ಇಸ್ಕೊಂಡು ಹೋಗಕ್ಕೆ ಅಂತ ಅಗಸರವನ ಹೆಂಡತಿ ಬಂದಿದ್ಳಾ, ಅವುಳು ತುಂಬಾ ಗೋಳಾಡ್ತಾ ಗಂಧರ್ವಸೇನ ಸತ್ತೋದ ಅಂತ ಹ್ಯೇಳಿದ್ಳು. ಅದುಕ್ಕೆ ನಾನೂ ಅತ್ತೆ.”

ರಾಜನಿಗೆ ಕುತೂಹಲ ಅದೆಷ್ಟು ಹೆಚ್ಚಾಗಿಹೋಯ್ತೆಂದರೆ, ಈ ಸಲ ಅಗಸರವನ ಹೆಂಡತಿಯನ್ನು ಕರೆಸುವ ತಾಳ್ಮೆಯೂ ಇಲ್ಲದೆ, ತನ್ನ `ಪರಿವಾರ’ ಸಮೇತ ಅಗಸನ ಮನೆಯತ್ತ ನಡೆದ. ಮನೆಯಲ್ಲಿ ದಂಪತಿ ಇರಲಿಲ್ಲ, ಕಾಯಕದ ಸಲುವಾಗಿ ಹೊಳೆದಂಡೆ ಬಳಿ ಹೋಗಿದ್ದರು. ಅಲ್ಲಿಗೇ ಸವಾರಿ ಹೊರಟಿತು. ಕೊನೆಗೂ ಆ ಹೆಂಗಸು ಸಿಕ್ಕಳು. “ಏನಮ್ಮಾ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ತುಂಬಾ ಅಳ್ತಿದ್ದ್ಯಂತೆ. ಯಾರು ಆ ಪುಣ್ಯಾತ್ಮ?” ಮಹಾರಾಜ ಪ್ರಶ್ನಿಸಿದ.“ಅಯ್ಯಾ ಸಾಮಿ, ಮೊನ್ನೆಯಿನು ಅರಾಮಾಗಿದ್ದ ಸಾಮಿ. ಬಾಳ ಪಿರೂತಿಯಿಂದ ಸಾಕಿದ್ದೆ. ನಿನ್ನೆ ನಮ್ಮುನ್ನೆಲ್ಲ ಬಿಟ್ಟೋದ. ನ್ಯೆನಿಸಿಕಂಡ್ರೆ ಅಳು ಬತ್ತದೆ ಸಾಮಿ” ಮತ್ತೆ ಆ ಹೆಂಗಸಲ್ಲಿ ದುಖ ಉಮ್ಮಳಿಸಿತು, ಕಣ್ಣೀರಿಡಲು ಶುರು ಮಾಡಿದಳು.

“ಯಾರಮ್ಮ, ನಿನ್ನ ಮಗನಾ ಅವನು?” ರಾಜ ಪ್ರಶ್ನಿಸಿದ.

“ಮಗನಿಗಿಂತ ಜಾಸ್ತಿ ಪಿರೂತಿಯಿಂದ ಸಾಕಿದ್ದೆ ಸಾಮಿ. ನನ್ನ ಕತ್ತೆಯ ಹೆಸ್ರು ಅದು?.!!!”

ಆ ಹೆಂಗಸಿನ ಉತ್ತರ ಕೇಳಿಸಿಕೊಂಡ ತರುವಾಯ ಅಲ್ಲಿ ನೆರೆದಿದ್ವರಿಗೆಲ್ಲ ತಮ್ಮ ಮುಠ್ಠಾಳತನದ ಅರಿವಾಗಿ ಮೂರ್ಛೆ ಹೋಗುವುದೊಂದು ಬಾಕಿ. ಇಪ್ಪತ್ತೊಂದು ದಿನ ಶೋಕಾಚಾರಣೆ ಘೋಷಿಸಿದ್ದ ರಾಜ ಮೆತ್ತಗೆ ಅಲ್ಲಿಂದ ನುಣುಚಿಕೊಂಡು ಅರಮನೆಯತ್ತ ದೌಡಾಯಿಸಿದ.

(ಸೂಚನೆ: ಇದೊಂದು ಬಂಗಾಳಿ ಜನಪದ ಕಥೆ. ಪ್ರಸ್ತುತ ಯಾವುದೇ ವಿದ್ಯಮಾನ, ವ್ಯಕ್ತಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...