Homeನಿಜವೋ ಸುಳ್ಳೋFact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಮಸೀದಿ ಕಾರಣವೇ? ಎಬಿಪಿ ಸುದ್ದಿ ಮಾಡಿದ್ದೇನು?

Fact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಮಸೀದಿ ಕಾರಣವೇ? ಎಬಿಪಿ ಸುದ್ದಿ ಮಾಡಿದ್ದೇನು?

- Advertisement -
- Advertisement -

ಏಪ್ರಿಲ್ 14 ರಂದು, ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಭಾರಿ ಸಂಖ್ಯೆಯಲ್ಲಿ ವಲಸಿಗರು ಜಮಾಯಿಸಿದ್ದರು. ತಮ್ಮ ಊರಿಗೆ ತೆರಳಲು ಸೇರಿದ್ದ ಆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದ ಸುದ್ದಿ ಮಾಧ್ಯಮಗಳಲ್ಲಿ ದಿನವಿಡೀ ಪ್ರಸಾರವಾಯಿತು.

ಮುಂಬೈನ ಬಾಂದ್ರದಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಬಂದಾಗ ಪೊಲೀಸರು ಲಾಠ ಪ್ರಹಾರ ನಡೆಸಿದ್ದಾರೆ. ಮೂರು ವಾರ ಲಾಕ್ ಡೌನ್ ಸಹಿಸಿದ ಅವರು ಮತ್ತೆ 19 ದಿನ ಸಾಧ್ಯವಿಲ್ಲವೆಂದು ಊರಿಗೆ ತೆರಳಲು ಮುಂದಾಗಿದ್ದರು.

Posted by Naanu Gauri on Tuesday, April 14, 2020

ಈ ಕುರಿತು ವದಂತಿ ಹಬ್ಬಿಸಿ ಜನರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮರಾಠಿ ಸುದ್ದಿ ಚಾನೆಲ್ ಎಬಿಪಿ ಮಜಾ ವರದಿಗಾರ ರಾಹುಲ್ ಕುಲಕರ್ಣಿ ಸೇರಿದಂತೆ ಇತರ 11 ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ವಲಸಿಗರನ್ನು ಮನೆಗೆ ಹಿಂದಿರುಗಿಸಲು ವಿಶೇಷ ರೈಲುಗಳು ಇದೆ ಎಂದು ಈ ವರದಿಗಾರರು ಸುದ್ದಿ ಪ್ರಸಾರ ಮಾಡಿದ್ದರು. ಆದರೆ ಎಬಿಪಿ ಚಾನೆಲ್ ತಮ್ಮ ವರದಿಗಾರನನ್ನು ಸಮರ್ಥಿಸಿಕೊಂಡಿದೆ. ಪತ್ರಕರ್ತನನ್ನು ಬಂಧಿಸುವ ಮೊದಲು ಸತ್ಯ ಮತ್ತು ಸನ್ನಿವೇಶಗಳ ಸರಿಯಾದ ಪರಿಶೀಲನೆ ಇರಬೇಕು ಎಂದು ಹೇಳಿಕೊಂಡಿದೆ. ನಂತರ ಮುಂಬೈನ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು.

ಎಬಿಪಿ ಗ್ರೂಪ್‌ನ ಹಿಂದಿ ಚಾನೆಲ್ ಆದ ಎಬಿಪಿ ನ್ಯೂಸ್ ಸಹ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನಿಲ್ದಾಣದ ಹೊರಗೆ ಹೇಗೆ ಸೇರಿದರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ, ಇದನ್ನ “ಪಿತೂರಿ” ಎಂದು ಕರೆದು ಘಟನೆಗೆ ಧಾರ್ಮಿಕ ಕಾರಣವಿದೆಯೆಂದು ಸೂಚಿಸಿತು.

ಕೆಳಗಿನ ವೀಡಿಯೊದಲ್ಲಿ, ನಿರೂಪಕಿ ಶೋಭನಾ ಯಾದವ್, “ಎಬಿಪಿ ನ್ಯೂಸ್ ಇದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಜನರನ್ನು ಒಟ್ಟುಗೂಡಿಸಲು ಮಸೀದಿಯಿಂದ ಪ್ರಚೋದಿಸಲಾಗಿದೆಯೇ? ಎಂಬುವುದು ದೊಡ್ಡ ಪ್ರಶ್ನೆ. ಮುಸ್ಲಿಂ ನಾಯಕರು ಭಾಷಣ ಮಾಡುವ ಮೂಲಕ ಜನರನ್ನು ಕೆರಳಿಸಿ ಜನಸಮೂಹವನ್ನು ಒಟ್ಟುಗೂಡಿಸಿದ್ದಾರೆಯೇ? ಈ ಜನಸಮೂಹ ನೆರೆಯಲು ಜಮಾ ಮಸೀದಿ ಕಾರಣವೇ? ಮಸೀದಿಯಿಂದ ಸಾವಿರಾರು ಜನರನ್ನು ಒಟ್ಟುಗೂಡಿಸಲಾಗಿದೆ. ಈ ಜನಸಮೂಹವನ್ನು ವಾಟ್ಸಾಪ್ ಸಂದೇಶ ಅಥವಾ ಫೋನ್ ಕರೆಯೊಂದಿಗೆ ಒಟ್ಟುಗೂಡಿಸಲಾಗಿದೆಯೇ? ಮುಂಬೈ ಪೊಲೀಸರು ಏಕೆ ನಿದ್ದೆ ಮಾಡುತ್ತಿದ್ದರು? ಅವರ ಬುದ್ಧಿಮತ್ತೆ ಏನು ಮಾಡಿದೆ? ” ಎಂದು ಹೇಳುತ್ತಿದ್ದಾರೆ.

ಎಬಿಪಿ ನ್ಯೂಸ್ ಎತ್ತಿದ ಐದು ಪ್ರಶ್ನೆಗಳು ಹೀಗಿವೆ:

ಜನರನ್ನು ಒಟ್ಟುಗೂಡಿಸಲು ಮಸೀದಿಯಿಂದ ಪ್ರಚೋದಿಸಲಾಗಿದೆಯೇ?
ಮುಸ್ಲಿಂ ನಾಯಕರು ನೀಡಿದ ಭಾಷಣವು ಜನರನ್ನು ಒಟ್ಟುಗೂಡಿಸಲು ಪ್ರೇರೇಪಿಸಿತೆ?
ಈ ಜನಸಮೂಹಕ್ಕೆ ಜಮಾ ಮಸೀದಿ ಕಾರಣವೇ?
ಈ ಗುಂಪನ್ನು ವಾಟ್ಸಾಪ್ ಅಥವಾ ಫೋನ್ ಕರೆಗಳ ಮೂಲಕ ಕಳುಹಿಸಿದ ಸಂದೇಶಗಳೊಂದಿಗೆ ಒಟ್ಟುಗೂಡಿಸಲಾಗಿದೆಯೇ?
ಮುಂಬೈ ಪೊಲೀಸರು ಮಲಗಿದ್ದಾರೆಯೇ?
ಪ್ರಸಾರದ ಸಮಯದಲ್ಲಿ ಪರದೆಯಲ್ಲಿ ಮುಖ್ಯವಾಗಿ “ಜನ ಗುಂಪುಗೂಡಲು ಜಮಾ ಮಸೀದಿ ಜವಾಬ್ದಾರಿ?” ಎಂದು ಓಡುತ್ತಿತ್ತು.

ಶೋಭನಾ ಯಾದವ್ ವಿಡಿಯೋದಲ್ಲಿ ಮುಂದುವರೆದು ಚಾನೆಲ್ ವರದಿಗಾರರಾದ ಅಜಯ್ ದುಬೆಗೆ , “ಅಜಯ್ ದುಬೆ, ಎಬಿಪಿ ನ್ಯೂಸ್ ದೊಡ್ಡ ಪ್ರಶ್ನೆಗಳನ್ನು ಎತ್ತುತ್ತಿದೆ. ನಿಮ್ಮ ಮಾಹಿತಿ ಏನು ಹೇಳುತ್ತಿದೆ, ಮಸೀದಿಯ ಜನರು ಇಲ್ಲಿಗೆ ಸೇರಲು ಅವರನ್ನು ಪ್ರಚೋದಿಸಿದ್ದಾರೆಯೇ? ” ಎಂದು ಕೇಳಿದ್ದಾರೆ.

ಆದರೆ ವರದಿಗಾರ ಪ್ರಶ್ನೆಯನ್ನು ತಪ್ಪಿಸಿ, “ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಾರೆ. ಮುಖ್ಯವಾಗಿ ಈಗಾಗಲೇ ಪೊಲೀಸರು ಜನಸಮೂಹವನ್ನು ಚದುರಿಸಿದ್ದಾರೆ. ಆದಾಗ್ಯೂ, ಯಾವುದೇ ಯೋಜನೆ ಇಲ್ಲದೆ ಜನಸಮೂಹವು ಸ್ಥಳದಲ್ಲಿ ನೆರೆದಿದೆ ಎಂದು ನಂಬುವುದು ಕಷ್ಟ” ಎಂದು ದುಬೆ ಹೇಳಿದರು. ಪ್ರಸಾರದ ಈ ಸಮಯದಲ್ಲೂ, ಮಸೀದಿಯ ಬಳಿ ಜನಸಮೂಹ ಜಮಾಯಿಸಿದ್ದ ‘ಪಾಯಿಂಟ್’ ಅನ್ನು ಚಾನೆಲ್ ಎತ್ತಿ ತೋರಿಸುತ್ತಲೇ ಇತ್ತು.

ಎಬಿಪಿ ನ್ಯೂಸ್ v/s ಎಬಿಪಿ ನಿರೂಪಕಿ ರುಬಿಕಾ ಲಿಯಾಕತ್

ನಂತರದ ದಿನಗಳಲ್ಲಿ, ಎಬಿಪಿ ನ್ಯೂಸ್ ಪತ್ರಕರ್ತೆ ರುಬಿಕಾ ಲಿಯಾಕತ್ ಎಬಿಪಿ ನ್ಯೂಸ್‌ನ ಅಧಿಕೃತ ಫೇಸ್‌ಬುಕ್ ಪುಟದಿಂದ ಫೇಸ್‌ಬುಕ್ ಲೈವ್ ಮಾಡಿ, ಮುಸ್ಲಿಂ ಸಮುದಾಯದ ಜನರು ನಿಲ್ದಾಣದಲ್ಲಿ ಜಮಾಯಿಸಿದ್ದಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ ಪ್ರಕಾರ, “ಮುಸ್ಲಿಂ ಜನರು ಅಲ್ಲಿ ಒಟ್ಟುಗೂಡಿದ್ದರು ಎಂದು ಹೇಳುತ್ತಿರುವ ಜನರು ಸುಳ್ಳುಗಾರರು ಎಂಬುದನ್ನು ನಾನು ಅದನ್ನು ನಿಮಗೆ ಸ್ಪಷ್ಟಪಡಿಸುತ್ತೇನೆ. ಇದು ಮಸೀದಿಯವರು ಸೇರಿಸಿದ ಜನರ ಗುಂಪು ಅಲ್ಲ ಎಂದು ಸ್ಪಷ್ಟ ಪಡಿಸುತ್ತೇನೆ. ಇದು ನಿಜವಾಗಿಯು ಮುಂದೆ ಏನು ಮಾಡಬೇಕೆಂದು ತಿಳಿಯದೆ ತೊಂದರೆಗೀಡಾದ ವಲಸಿಗರ ಸಮಸ್ಯೆಯಾಗಿದೆ. ” ಎಂದು ಹೇಳಿದ್ದಾರೆ.

Bandra की भीड़ किसने जुटायी? साज़िश या लापरवाही? Live session with Rubika

Posted by ABP News on Tuesday, April 14, 2020

ಫ್ಯಾಕ್ಟ್-ಚೆಕ್‌

ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ “ಭೂಮ್ ಲೈವ್” ಪೊಲೀಸರನ್ನು ಸಂಪರ್ಕಿಸಿದೆ. ವಲಸಿಗ ಕಾರ್ಮಿಕರು ಈ ರೀತಿಯಾಗಿ ಸೇರಿರುವುದಕ್ಕೆ ಯಾವುದೇ ಕೋಮು ದೃಷ್ಟಿಕೋನ ಇಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಅಲ್ಲಿಗೆ ವಲಸೆ ಕಾರ್ಮಿಕರು ಬಾಂದ್ರಾ ನಿಲ್ದಾಣದಲ್ಲಿ ಸೇರುವುದಕ್ಕೆ ಯಾವುದೇ ಮುಸ್ಲಿಮರು ಅಥವಾ ಮಸೀದಿ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಿಗೆ ಎಬಿಪಿ ನ್ಯೂಸ್‌ ಸೇರಿದಂತೆ ಹಲವು ಟಿವಿ ಚಾನೆಲ್‌ಗಳು ವಲಸೆ ಕಾರ್ಮಿಕರಿಗೆ ವಿಶೇಷ ರೈಲುವ್ಯವಸ್ಥೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರಿಂದ ಜನರು ಒಟ್ಟುಗೂಡಿದ್ದಾರೆ ಎಂಬು ತಿಳಿದುಬಂದಿದೆ.

ಇಡೀ ಘಟನೆಯ ಬಗ್ಗೆ ಎಬಿಪಿ ನ್ಯೂಸ್‌ನ ಎರಡು ವೀಡಿಯೊಗಳೆ ಚಾನೆಲ್‌ನಲ್ಲಿ ಇರುವ ದ್ವಂದ್ವವನ್ನು ತೋರಿಸುತ್ತದೆ. ಘಟನೆಯನ್ನು ಕೋಮು ದೃಷ್ಟಿಕೋನ ನೀಡುವುದರೊಂದಿಗೆ, ಮಸೀದಿಯ ವಿರುದ್ಧ “ದೊಡ್ಡ ಪ್ರಶ್ನೆಗಳನ್ನು” ಹುಟ್ಟುಹಾಕಿ ಕಡೆಗೆ ಅದನ್ನು ವದಂತಿಗಳೆಂದು ಸಂಪೂರ್ಣವಾಗಿ ತಳ್ಳಿಹಾಕುವವರೆಗೆ ಎಲ್ಲಾ ಪಾತ್ರವನ್ನು ತಾನೇ ನಿರ್ವಹಿಸುತ್ತದೆ. ಎಬಿಪಿ ಮಜಾ ವಿರುದ್ಧ ವದಂತಿಗಳ ಆರೋಪಗಳು ತನಿಖೆಯ ವಿಷಯವಾಗಿದ್ದರೂ, ಎಬಿಪಿ ಗ್ರೂಪ್‌ನ ಹಿಂದಿ ಚಾನೆಲ್ ಎಬಿಪಿ ನ್ಯೂಸ್ ಕೋಮು ಆಧಾರಿತ ನಿರೂಪಣೆಯನ್ನು ನೀಡಿದ್ದಕ್ಕಾಗಿ ಹಾಗೂ ಘಟನೆಗೆ ಅಲ್ಪಸಂಖ್ಯಾತ ಸಮುದಾಯ ಕಾರಣವೆಂದು ದೂಷಿಸಿದ್ದಕ್ಕಾಗಿ ಖಂಡಿತವಾಗಿಯೂ ಶಿಕ್ಷಿಸಬೇಕಾಗಿದೆ.

ಮಾರ್ಚ್ ನಲ್ಲಿ ದೆಹಲಿಯ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರಿಗೆ COVID-19 ಇರುವುದು ಪತ್ತೆಯಾದ ನಂತರ ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು, ಕೊರೊನಾ ವೈರಸ್ ಹರಡುವಿಕೆಯನ್ನು ಕೋಮುವಾದೀಕರಣಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಸಭೆಯನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವುದರಿಂದ, ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕಾಗಿ ಚಾನೆಲ್‌ಗಳು ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಗುರಿಯಾಗಿರಿಸಿಕೊಂಡಿರುವುದು ಮಾತ್ರವಲ್ಲದೆ ಹಲವಾರು ಸುಳ್ಳು ಸುದ್ದಿಯನ್ನು ಹರಡಿದೆ.


ಇದನ್ನೂ ಓದಿ: ಇಡೀ ಪ್ರಪಂಚ ಎದುರಿಸುವಷ್ಟು ಕೊರೊನಾವನ್ನು ಭಾರತವೊಂದೇ ಎದುರಿಸುತ್ತಿದೆ ಎಂಬುದು ನಿಜವೇ? ಈ ನಕ್ಷೆ ಯಾವಾಗಿನದು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...