Homeನಿಜವೋ ಸುಳ್ಳೋFact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಮಸೀದಿ ಕಾರಣವೇ? ಎಬಿಪಿ ಸುದ್ದಿ ಮಾಡಿದ್ದೇನು?

Fact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಮಸೀದಿ ಕಾರಣವೇ? ಎಬಿಪಿ ಸುದ್ದಿ ಮಾಡಿದ್ದೇನು?

- Advertisement -
- Advertisement -

ಏಪ್ರಿಲ್ 14 ರಂದು, ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಭಾರಿ ಸಂಖ್ಯೆಯಲ್ಲಿ ವಲಸಿಗರು ಜಮಾಯಿಸಿದ್ದರು. ತಮ್ಮ ಊರಿಗೆ ತೆರಳಲು ಸೇರಿದ್ದ ಆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದ ಸುದ್ದಿ ಮಾಧ್ಯಮಗಳಲ್ಲಿ ದಿನವಿಡೀ ಪ್ರಸಾರವಾಯಿತು.

ಮುಂಬೈನ ಬಾಂದ್ರದಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಬಂದಾಗ ಪೊಲೀಸರು ಲಾಠ ಪ್ರಹಾರ ನಡೆಸಿದ್ದಾರೆ. ಮೂರು ವಾರ ಲಾಕ್ ಡೌನ್ ಸಹಿಸಿದ ಅವರು ಮತ್ತೆ 19 ದಿನ ಸಾಧ್ಯವಿಲ್ಲವೆಂದು ಊರಿಗೆ ತೆರಳಲು ಮುಂದಾಗಿದ್ದರು.

Posted by Naanu Gauri on Tuesday, April 14, 2020

ಈ ಕುರಿತು ವದಂತಿ ಹಬ್ಬಿಸಿ ಜನರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮರಾಠಿ ಸುದ್ದಿ ಚಾನೆಲ್ ಎಬಿಪಿ ಮಜಾ ವರದಿಗಾರ ರಾಹುಲ್ ಕುಲಕರ್ಣಿ ಸೇರಿದಂತೆ ಇತರ 11 ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ವಲಸಿಗರನ್ನು ಮನೆಗೆ ಹಿಂದಿರುಗಿಸಲು ವಿಶೇಷ ರೈಲುಗಳು ಇದೆ ಎಂದು ಈ ವರದಿಗಾರರು ಸುದ್ದಿ ಪ್ರಸಾರ ಮಾಡಿದ್ದರು. ಆದರೆ ಎಬಿಪಿ ಚಾನೆಲ್ ತಮ್ಮ ವರದಿಗಾರನನ್ನು ಸಮರ್ಥಿಸಿಕೊಂಡಿದೆ. ಪತ್ರಕರ್ತನನ್ನು ಬಂಧಿಸುವ ಮೊದಲು ಸತ್ಯ ಮತ್ತು ಸನ್ನಿವೇಶಗಳ ಸರಿಯಾದ ಪರಿಶೀಲನೆ ಇರಬೇಕು ಎಂದು ಹೇಳಿಕೊಂಡಿದೆ. ನಂತರ ಮುಂಬೈನ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು.

ಎಬಿಪಿ ಗ್ರೂಪ್‌ನ ಹಿಂದಿ ಚಾನೆಲ್ ಆದ ಎಬಿಪಿ ನ್ಯೂಸ್ ಸಹ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನಿಲ್ದಾಣದ ಹೊರಗೆ ಹೇಗೆ ಸೇರಿದರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ, ಇದನ್ನ “ಪಿತೂರಿ” ಎಂದು ಕರೆದು ಘಟನೆಗೆ ಧಾರ್ಮಿಕ ಕಾರಣವಿದೆಯೆಂದು ಸೂಚಿಸಿತು.

ಕೆಳಗಿನ ವೀಡಿಯೊದಲ್ಲಿ, ನಿರೂಪಕಿ ಶೋಭನಾ ಯಾದವ್, “ಎಬಿಪಿ ನ್ಯೂಸ್ ಇದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಜನರನ್ನು ಒಟ್ಟುಗೂಡಿಸಲು ಮಸೀದಿಯಿಂದ ಪ್ರಚೋದಿಸಲಾಗಿದೆಯೇ? ಎಂಬುವುದು ದೊಡ್ಡ ಪ್ರಶ್ನೆ. ಮುಸ್ಲಿಂ ನಾಯಕರು ಭಾಷಣ ಮಾಡುವ ಮೂಲಕ ಜನರನ್ನು ಕೆರಳಿಸಿ ಜನಸಮೂಹವನ್ನು ಒಟ್ಟುಗೂಡಿಸಿದ್ದಾರೆಯೇ? ಈ ಜನಸಮೂಹ ನೆರೆಯಲು ಜಮಾ ಮಸೀದಿ ಕಾರಣವೇ? ಮಸೀದಿಯಿಂದ ಸಾವಿರಾರು ಜನರನ್ನು ಒಟ್ಟುಗೂಡಿಸಲಾಗಿದೆ. ಈ ಜನಸಮೂಹವನ್ನು ವಾಟ್ಸಾಪ್ ಸಂದೇಶ ಅಥವಾ ಫೋನ್ ಕರೆಯೊಂದಿಗೆ ಒಟ್ಟುಗೂಡಿಸಲಾಗಿದೆಯೇ? ಮುಂಬೈ ಪೊಲೀಸರು ಏಕೆ ನಿದ್ದೆ ಮಾಡುತ್ತಿದ್ದರು? ಅವರ ಬುದ್ಧಿಮತ್ತೆ ಏನು ಮಾಡಿದೆ? ” ಎಂದು ಹೇಳುತ್ತಿದ್ದಾರೆ.

ಎಬಿಪಿ ನ್ಯೂಸ್ ಎತ್ತಿದ ಐದು ಪ್ರಶ್ನೆಗಳು ಹೀಗಿವೆ:

ಜನರನ್ನು ಒಟ್ಟುಗೂಡಿಸಲು ಮಸೀದಿಯಿಂದ ಪ್ರಚೋದಿಸಲಾಗಿದೆಯೇ?
ಮುಸ್ಲಿಂ ನಾಯಕರು ನೀಡಿದ ಭಾಷಣವು ಜನರನ್ನು ಒಟ್ಟುಗೂಡಿಸಲು ಪ್ರೇರೇಪಿಸಿತೆ?
ಈ ಜನಸಮೂಹಕ್ಕೆ ಜಮಾ ಮಸೀದಿ ಕಾರಣವೇ?
ಈ ಗುಂಪನ್ನು ವಾಟ್ಸಾಪ್ ಅಥವಾ ಫೋನ್ ಕರೆಗಳ ಮೂಲಕ ಕಳುಹಿಸಿದ ಸಂದೇಶಗಳೊಂದಿಗೆ ಒಟ್ಟುಗೂಡಿಸಲಾಗಿದೆಯೇ?
ಮುಂಬೈ ಪೊಲೀಸರು ಮಲಗಿದ್ದಾರೆಯೇ?
ಪ್ರಸಾರದ ಸಮಯದಲ್ಲಿ ಪರದೆಯಲ್ಲಿ ಮುಖ್ಯವಾಗಿ “ಜನ ಗುಂಪುಗೂಡಲು ಜಮಾ ಮಸೀದಿ ಜವಾಬ್ದಾರಿ?” ಎಂದು ಓಡುತ್ತಿತ್ತು.

ಶೋಭನಾ ಯಾದವ್ ವಿಡಿಯೋದಲ್ಲಿ ಮುಂದುವರೆದು ಚಾನೆಲ್ ವರದಿಗಾರರಾದ ಅಜಯ್ ದುಬೆಗೆ , “ಅಜಯ್ ದುಬೆ, ಎಬಿಪಿ ನ್ಯೂಸ್ ದೊಡ್ಡ ಪ್ರಶ್ನೆಗಳನ್ನು ಎತ್ತುತ್ತಿದೆ. ನಿಮ್ಮ ಮಾಹಿತಿ ಏನು ಹೇಳುತ್ತಿದೆ, ಮಸೀದಿಯ ಜನರು ಇಲ್ಲಿಗೆ ಸೇರಲು ಅವರನ್ನು ಪ್ರಚೋದಿಸಿದ್ದಾರೆಯೇ? ” ಎಂದು ಕೇಳಿದ್ದಾರೆ.

ಆದರೆ ವರದಿಗಾರ ಪ್ರಶ್ನೆಯನ್ನು ತಪ್ಪಿಸಿ, “ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಾರೆ. ಮುಖ್ಯವಾಗಿ ಈಗಾಗಲೇ ಪೊಲೀಸರು ಜನಸಮೂಹವನ್ನು ಚದುರಿಸಿದ್ದಾರೆ. ಆದಾಗ್ಯೂ, ಯಾವುದೇ ಯೋಜನೆ ಇಲ್ಲದೆ ಜನಸಮೂಹವು ಸ್ಥಳದಲ್ಲಿ ನೆರೆದಿದೆ ಎಂದು ನಂಬುವುದು ಕಷ್ಟ” ಎಂದು ದುಬೆ ಹೇಳಿದರು. ಪ್ರಸಾರದ ಈ ಸಮಯದಲ್ಲೂ, ಮಸೀದಿಯ ಬಳಿ ಜನಸಮೂಹ ಜಮಾಯಿಸಿದ್ದ ‘ಪಾಯಿಂಟ್’ ಅನ್ನು ಚಾನೆಲ್ ಎತ್ತಿ ತೋರಿಸುತ್ತಲೇ ಇತ್ತು.

ಎಬಿಪಿ ನ್ಯೂಸ್ v/s ಎಬಿಪಿ ನಿರೂಪಕಿ ರುಬಿಕಾ ಲಿಯಾಕತ್

ನಂತರದ ದಿನಗಳಲ್ಲಿ, ಎಬಿಪಿ ನ್ಯೂಸ್ ಪತ್ರಕರ್ತೆ ರುಬಿಕಾ ಲಿಯಾಕತ್ ಎಬಿಪಿ ನ್ಯೂಸ್‌ನ ಅಧಿಕೃತ ಫೇಸ್‌ಬುಕ್ ಪುಟದಿಂದ ಫೇಸ್‌ಬುಕ್ ಲೈವ್ ಮಾಡಿ, ಮುಸ್ಲಿಂ ಸಮುದಾಯದ ಜನರು ನಿಲ್ದಾಣದಲ್ಲಿ ಜಮಾಯಿಸಿದ್ದಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ ಪ್ರಕಾರ, “ಮುಸ್ಲಿಂ ಜನರು ಅಲ್ಲಿ ಒಟ್ಟುಗೂಡಿದ್ದರು ಎಂದು ಹೇಳುತ್ತಿರುವ ಜನರು ಸುಳ್ಳುಗಾರರು ಎಂಬುದನ್ನು ನಾನು ಅದನ್ನು ನಿಮಗೆ ಸ್ಪಷ್ಟಪಡಿಸುತ್ತೇನೆ. ಇದು ಮಸೀದಿಯವರು ಸೇರಿಸಿದ ಜನರ ಗುಂಪು ಅಲ್ಲ ಎಂದು ಸ್ಪಷ್ಟ ಪಡಿಸುತ್ತೇನೆ. ಇದು ನಿಜವಾಗಿಯು ಮುಂದೆ ಏನು ಮಾಡಬೇಕೆಂದು ತಿಳಿಯದೆ ತೊಂದರೆಗೀಡಾದ ವಲಸಿಗರ ಸಮಸ್ಯೆಯಾಗಿದೆ. ” ಎಂದು ಹೇಳಿದ್ದಾರೆ.

Bandra की भीड़ किसने जुटायी? साज़िश या लापरवाही? Live session with Rubika

Posted by ABP News on Tuesday, April 14, 2020

ಫ್ಯಾಕ್ಟ್-ಚೆಕ್‌

ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ “ಭೂಮ್ ಲೈವ್” ಪೊಲೀಸರನ್ನು ಸಂಪರ್ಕಿಸಿದೆ. ವಲಸಿಗ ಕಾರ್ಮಿಕರು ಈ ರೀತಿಯಾಗಿ ಸೇರಿರುವುದಕ್ಕೆ ಯಾವುದೇ ಕೋಮು ದೃಷ್ಟಿಕೋನ ಇಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಅಲ್ಲಿಗೆ ವಲಸೆ ಕಾರ್ಮಿಕರು ಬಾಂದ್ರಾ ನಿಲ್ದಾಣದಲ್ಲಿ ಸೇರುವುದಕ್ಕೆ ಯಾವುದೇ ಮುಸ್ಲಿಮರು ಅಥವಾ ಮಸೀದಿ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಿಗೆ ಎಬಿಪಿ ನ್ಯೂಸ್‌ ಸೇರಿದಂತೆ ಹಲವು ಟಿವಿ ಚಾನೆಲ್‌ಗಳು ವಲಸೆ ಕಾರ್ಮಿಕರಿಗೆ ವಿಶೇಷ ರೈಲುವ್ಯವಸ್ಥೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರಿಂದ ಜನರು ಒಟ್ಟುಗೂಡಿದ್ದಾರೆ ಎಂಬು ತಿಳಿದುಬಂದಿದೆ.

ಇಡೀ ಘಟನೆಯ ಬಗ್ಗೆ ಎಬಿಪಿ ನ್ಯೂಸ್‌ನ ಎರಡು ವೀಡಿಯೊಗಳೆ ಚಾನೆಲ್‌ನಲ್ಲಿ ಇರುವ ದ್ವಂದ್ವವನ್ನು ತೋರಿಸುತ್ತದೆ. ಘಟನೆಯನ್ನು ಕೋಮು ದೃಷ್ಟಿಕೋನ ನೀಡುವುದರೊಂದಿಗೆ, ಮಸೀದಿಯ ವಿರುದ್ಧ “ದೊಡ್ಡ ಪ್ರಶ್ನೆಗಳನ್ನು” ಹುಟ್ಟುಹಾಕಿ ಕಡೆಗೆ ಅದನ್ನು ವದಂತಿಗಳೆಂದು ಸಂಪೂರ್ಣವಾಗಿ ತಳ್ಳಿಹಾಕುವವರೆಗೆ ಎಲ್ಲಾ ಪಾತ್ರವನ್ನು ತಾನೇ ನಿರ್ವಹಿಸುತ್ತದೆ. ಎಬಿಪಿ ಮಜಾ ವಿರುದ್ಧ ವದಂತಿಗಳ ಆರೋಪಗಳು ತನಿಖೆಯ ವಿಷಯವಾಗಿದ್ದರೂ, ಎಬಿಪಿ ಗ್ರೂಪ್‌ನ ಹಿಂದಿ ಚಾನೆಲ್ ಎಬಿಪಿ ನ್ಯೂಸ್ ಕೋಮು ಆಧಾರಿತ ನಿರೂಪಣೆಯನ್ನು ನೀಡಿದ್ದಕ್ಕಾಗಿ ಹಾಗೂ ಘಟನೆಗೆ ಅಲ್ಪಸಂಖ್ಯಾತ ಸಮುದಾಯ ಕಾರಣವೆಂದು ದೂಷಿಸಿದ್ದಕ್ಕಾಗಿ ಖಂಡಿತವಾಗಿಯೂ ಶಿಕ್ಷಿಸಬೇಕಾಗಿದೆ.

ಮಾರ್ಚ್ ನಲ್ಲಿ ದೆಹಲಿಯ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರಿಗೆ COVID-19 ಇರುವುದು ಪತ್ತೆಯಾದ ನಂತರ ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು, ಕೊರೊನಾ ವೈರಸ್ ಹರಡುವಿಕೆಯನ್ನು ಕೋಮುವಾದೀಕರಣಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಸಭೆಯನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವುದರಿಂದ, ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕಾಗಿ ಚಾನೆಲ್‌ಗಳು ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಗುರಿಯಾಗಿರಿಸಿಕೊಂಡಿರುವುದು ಮಾತ್ರವಲ್ಲದೆ ಹಲವಾರು ಸುಳ್ಳು ಸುದ್ದಿಯನ್ನು ಹರಡಿದೆ.


ಇದನ್ನೂ ಓದಿ: ಇಡೀ ಪ್ರಪಂಚ ಎದುರಿಸುವಷ್ಟು ಕೊರೊನಾವನ್ನು ಭಾರತವೊಂದೇ ಎದುರಿಸುತ್ತಿದೆ ಎಂಬುದು ನಿಜವೇ? ಈ ನಕ್ಷೆ ಯಾವಾಗಿನದು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...