Homeಕರ್ನಾಟಕಬುಡಕಟ್ಟು ಹಾಲಕ್ಕಿ ಒಕ್ಕಲಿಗರನ್ನು ಎಸ್‌‌ಟಿಗೆ ಸೇರಿಸಲು ಅಡ್ಡಗಾಲು ಹಾಕುತ್ತಿರುವುದು ಯಾರು?

ಬುಡಕಟ್ಟು ಹಾಲಕ್ಕಿ ಒಕ್ಕಲಿಗರನ್ನು ಎಸ್‌‌ಟಿಗೆ ಸೇರಿಸಲು ಅಡ್ಡಗಾಲು ಹಾಕುತ್ತಿರುವುದು ಯಾರು?

ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಮಂದೊಂದು ದಿನ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗುತ್ತದೆಂಬ ಭೀತಿ ಬಲಾಡ್ಯ ಜಾತಿ ಶಕ್ತಿಗಳನ್ನು ಕಾಡುತ್ತಿದೆಯೆಂಬ ಚರ್ಚೆ ನಡೆದಿದೆ.

- Advertisement -
- Advertisement -

ಸಹ್ಯಾದ್ರಿ ತಪ್ಪಲಲ್ಲಿರುವ ಉತ್ತರ ಕನ್ನಡದ ಪ್ರಾಕೃತಿಕ ಸೊಬಗಿಗೆ ಮೆರಗು ನೀಡಿರುವ ಆದಿವಾಸಿ ಹಾಲಕ್ಕಿ ಒಕ್ಕಲಿಗ ಸಮುದಾಯ ಮುಖ್ಯವಾಹಿನಿಗೆ ಬರಲಾಗದೆ ತೊಂದರೆಪಡುಡುತ್ತಿದೆ. ಆಧುನಿಕ ಸ್ಪರ್ಧೆಯಲ್ಲಿ ಬಲಾಢ್ಯರೊಂದಿಗೆ ಪೈಪೋಟಿ ನಡೆಸಲಾಗದೆ ತೀರಾ ಹಿಂದುಳಿದಿರುವ ಈ ಬುಡಕಟ್ಟು ಜನಾಂಗದವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮುಂದುವರಿಕೆಗೆ ಅನುಕೂಲ ಕಲ್ಪಿಸುವಂತೆ ಬೇಡಿಕೆಯಿಟ್ಟು ಎರಡು ದಶಕಗಳೇ ಆಗಿಹೋಗಿದೆ. ಆದರೆ ಉತ್ತರ ಕನ್ನಡದ ಎಂಪಿ, ಎಂ.ಎಲ್‌.ಎ., ಮಂತ್ರಿಗಳ ಉದಾಸೀನ, ಇಚ್ಛಾ ಶಕ್ತಿಯ ಕೊರತೆಯಿಂದ ಹಾಲಕ್ಕಿ ಒಕ್ಕಲಿಗ ಸಮುದಾಯ ಅವಜ್ಞೆಗೀಡಾಗಿದೆ.

ಕಾರವಾರದ ಕಾಳಿ ನದಿಯಿಂದ ಹೊನ್ನಾವರದ ಶರಾವತಿ ನದಿ ತನಕದ ಕರಾವಳಿಯ ನಾಲ್ಕು ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ ಮತ್ತು ಹೊನ್ನಾವರದ ಕಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಹಾಲಕ್ಕಿ ಒಕ್ಕಲಿಗರು ಸರಿಸುಮಾರು ಒಂದೂವರೆ ಲಕ್ಷದಷ್ಟಿದ್ದಾರೆ. 7 ಸೀಮೆಗಳಲ್ಲಿ ಅಂದರೆ ಸುಮಾರು 169 ಹಳ್ಳಿಗಳಲ್ಲಿರುವ ಹಾಲಕ್ಕಿಗಳ ವಿಶಿಷ್ಟ ಉಡುಗೆ-ತೊಡುಗೆ, ಸಂಸ್ಕೃತಿ- ಸಂಪ್ರದಾಯ, ಕಲೆ-ಕಸಬು ಕಂಡರೆ ಎಂಥವರಿಗೂ ಇದೊಂದು ಬುಡಕಟ್ಟು ಸಮುದಾಯವೆಂಬುದು ನಿಸ್ಸಂಶಯವಾಗಿ ಖಾತ್ರಿಯಾಗುತ್ತದೆ. ಆದರೆ ಕುಲಶಾಸ್ತ್ರೀಯ ಅಧ್ಯಯದಿಂದಲೇ ಹಾಲಕ್ಕಿಗಳು ಬುಡಕಟ್ಟು ಮಂದಿಯೆಂಬುದು ಸಾಬೀತಾಗಿದ್ದರೂ ಆಳುವವರಿಗೆ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿಲ್ಲ!

PC : The Economic Times (ಮಾರ್ಗರೆಟ್ ಆಳ್ವ)

ಹಲವು ಮುಖ್ಯ ಮಂತ್ರಿಗಳು, ಮಂತ್ರಿಗಳು, ಸಂಸದರು, ಶಾಸಕರುಗಳ ಬಳಿ ಎಡತಾಕಿ ಮನವಿಗಳನ್ನು ಕೊಟ್ಟು ಸುಸ್ತಾಗಿರುವ ಹಾಲಕ್ಕಿಗಳೀಗ ಬೀದಿಗಿಳಿದು ಹೋರಾಡಬೇಕಾಗಿ ಬಂದಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಹಾಲಕ್ಕಿ ಸುಮುದಾಯದ ಹಲವು ಕುಟುಂಬಗಳಿಗೆ ಸೂರು ಕಟ್ಟಿಕೊಳ್ಳಲು ಕೂಡ ಒಂದು ಗುಂಟೆ ಜಾಗವಿಲ್ಲ. ಉತ್ತರ ಕನ್ನಡದ ಸಾಕ್ಷರತೆ ಶೆ.76ರಷ್ಟಿದೆ. ಆದರೆ ಹಾಲಕ್ಕಿಗಳ ಸಾಕ್ಷರತೆ ಪ್ರಮಾಣ ಶೇ.10 ಮಾತ್ರ! ಮೀಸಲಾತಿ ವ್ಯವಸ್ಥೆಯಲ್ಲಿ ಪ್ರ ವರ್ಗ-1ರಲ್ಲಿ ಸೇರಿಸಲ್ಪಟ್ಟಿರುವ ಹಾಲಕ್ಕಿಗಳಿಗೆ ಘನ ಘೋರ ಅನ್ಯಾಯ ಮಾಡಲಾಗಿದೆ ಎಂಬುದು ಸರ್ವವಿಧಿತ. ಪ್ರವರ್ಗ-1ರಲ್ಲಿರುವ ಪ್ರಬಲ ಜಾತಿಯ ಜನರೊಂದಿಗೆ ಅವಕಾಶಗಳಿಗಾಗಿ ಬಡಿದಾಡುವ ತ್ರಾಣ ಈ ಮುಗ್ದ ಸಮುದಾಯಕ್ಕಿಲ್ಲ. ಕೃಷಿ ಮತ್ತು ಕೃಷಿ ಕೂಲಿಗಳಾದ ಹಾಲಕ್ಕಿಗಳಿಗೆ ನಿರಂತರವಾಗಿ ಆಳುವವರು ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. 25 ವರ್ಷದಿಂದ ತಮಗೆ ಮೀಸಲಾತಿಯಲ್ಲಾಗಿರುವ ವಂಚನೆ ಸರಿಪಡಿಸುವಂತೆ ಪರಿಪರಿಯಾಗಿ ಬೇಡುತ್ತಿದ್ದರು ಬದ್ಧತೆಯಿಂದ ಸ್ಪಂದಿಸುತ್ತಿಲ್ಲ.

ಇದನ್ನೂ ಓದಿರಿ: ಉತ್ತರ ಕನ್ನಡಕ್ಕೆ ಏಮ್ಸ್ ಆದರೂ ಕೊಡಿ; ಸಾಮಾಜಿಕ ಜಾಲತಾಣದಲ್ಲಿ ಹಕ್ಕೊತ್ತಾಯ

ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುತ್ತಿರುವ ಪದ್ಮಶ್ರೀ ಸುಕ್ರಿ ಗೌಡರು. ಹಾಲಕ್ಕಿ ನಿಯೋಗ

ಹಾಲಕ್ಕಿ ಒಕ್ಕಲಿಗ ಮುಖಂಡರು ಜಿಲ್ಲೆಯನ್ನು ಬಹುಕಾಲ ಮಂತ್ರಿಯಾಗಿ ಆಳಿದ ಆರ್.ವಿ.ದೇಶಪಾಂಡೆಯವರನ್ನು ಪದೇ ಪದೇ ಭೇಟಿಯಾಗಿ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಯತ್ನಿಸುವಂತೆ ಒತ್ತಡ ಹಾಕಹತ್ತಿದ್ದರು. ಹಾಗಾಗಿ 2002ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ದೇಶಪಾಂಡೆಯವರು ಹಾಲಕ್ಕಿಗಳ ಬೇಡಿಕೆಯತ್ತ ಗಮನ ಹರಿಸಬೇಕಾಗಿ ಬಂತು. ಒಂಚೂರು ಆಸಕ್ತಿಯಿಂದ ಹಾಲಕ್ಕಿಗಳತ್ತ ಪ್ರಮಾಣಿಕವಾಗಿ ಗಮನಹರಿಸಿದಿದ್ದೆಂದರೆ ಸ್ಥಳೀಯ ಸಂಸದೆಯಾಗಿದ್ದ ಮಾರ್ಗರೆಟ್ ಆಳ್ವ ಒಬ್ಬರೇ. ಆನಂತರ ರಾಜ್ಯ ಸರ್ಕಾರ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿವಂತೆ ಶಿಫಾರಸು ಮಾಡಿತ್ತು. ಆದರೆ ಸಂಸದ ಅನಂತಕುಮಾರ್ ಹೆಗಡೆಯವರ ನಿರಾಸಕ್ತಿಯಿಂದ ದಿಲ್ಲಿಯಲ್ಲಿ ಕಡತ ಮುಂದಕ್ಕೆ ಹೋಗದೆ ಧೂಳುತ್ತಿನ್ನುತ ಕೂತಿದೆ ಎಂಬ ಅಳಲು ಹಾಲಕ್ಕಿ ಸಮುದಾಯಲ್ಲಿದೆ.

ಈಗ ಹಾಲಕ್ಕಿ ಮುಂದಾಳುಗಳು ಸಂಸದ ಹೆಗಡೆಯವರ ಬೆನ್ನುಬಿದ್ದಿದ್ದಾರೆ. ಹೆಗಡೆ ಒಂದೊಂದೇ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದಾರೆಂದು ಹೆಸರು ಹೇಳಲಿಚ್ಚಿಸದ ಹಾಲಕ್ಕಿ ಹಿರಿಯರೊಬ್ಬರು ‘ನಾನು ಗೌರಿ.ಕಾಂ’ ನೊಂದಿಗೆ ಮಾತನಾಡುತ್ತ ಬೇಸರಿಸಿದರು. ಕಳೆದ ವರ್ಷ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮಂತ್ರಿಯನ್ನು ಬೇಟಿ ಮಾಡಿಸುವೆನೆಂದು ಸಂಸದ ಹೆಗಡೆಯವರು ಹಾಲಕ್ಕಿ ಮುಖಂಡರಿಗೆ ಹೇಳಿದ್ದರಂತೆ. ಹಾಲಕ್ಕಿಗಳ ನಿಯೋಗ ವಿಮಾನ ಟಿಕೆಟ್ ತೆಗೆದು ಪ್ರಯಾಣಕ್ಕೆ ಸಿದ್ದವಾಗಿತ್ತು. ಆದರೆ ಅದೇ ಸಮಯದಲ್ಲಿ ಚೀನಾದಲ್ಲಿ ಕೊರೊನಾ ಶುರುವಾಗಿತ್ತು. ಇದೆ ನೆಪ ಮಾಡಿ ಹಾಲಕ್ಕಿ ನಿಯೋಗಕ್ಕೆ ದಿಲ್ಲಿಗೆ ಬರುವುದು ಬೇಡವೆಂದು ಸಂಸದರು ಹೇಳಿದರಂತೆ! ಹಾಲಕ್ಕಿ ಹೋರಾಟಗರರು ಸಂಸದರಿಗೆ ಪೋನಾಯಿಸುತ್ತಲೇ ಇದ್ದಾರೆ. ಸದ್ಯ ಕೊರೊನಾ ಹಾವಳಿಯಿರುವುದರಿಂದ ದಿಲ್ಲಿಗೆಲ್ಲ ಬರುವುದು ಬೇಡ; ಕರ್ನಾಟಕದವರೆ ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆಗೆ ಸಹಾಯಕ ಮಂತ್ರಿ[ನಾರಾಯಣಸ್ವಾಮಿ] ಆಗಿದ್ದಾರೆ. ಅವರನ್ನು ಬೆಂಗಳೂರಲ್ಲೇ ಭೇಟಿ ಮಾಡಿಸುತ್ತೇನೆ ಎಂದು ಈಗ ಸಂಸದರು ಹೇಳುತ್ತಿದ್ದಾರಂತೆ.

PC : Prajavani (ಅನಂತಕುಮಾರ್ ಹೆಗಡೆ)

ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆ ಪ್ರಕ್ರಿಯೆ ಪಾರ್ಲಿಮೆಂಟಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಹಂತಕ್ಕೆ ಬಂದಿದೆ. ಸಂಸದ ಹೆಗಡೆ ಸ್ವಲ್ಪ ಮುತುರ್ವಜಿ ವಹಿಸಿದರೆ ತಮ್ಮ ಬಹುದಿನದ ಕನಸು ನನಸಾಗುತ್ತದೆಯೆಂದು ಹಾಲಕ್ಕಿ ಹೋರಾಟದ ಮುಂಚೂಣಿಯಲ್ಲಿರುವವರು ಹೇಳುತ್ತಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ಮಾಡುತ್ತೇವೆಂದು ಹಾಲಕ್ಕಿ ನೇತಾರರು ಎಚ್ಚರಿಕೆ ಕೊಟ್ಟಿದ್ದಾರೆ. ಹಾಲಕ್ಕಿ ಸಮುದಾಯದ ಜಾನಪದ ಕೋಗಿಲೆ ಖ್ಯಾತಿಯ ಸುಕ್ರಿ ಗೌಡ ತಮ್ಮ ಶೋಷಿತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತನಗೆ ಬಂದಿರುವ ಪದ್ಮಶ್ರೀ ಪ್ರಶಸ್ತಿ ಮರುಳಿಸಿ ಈ ಇಳಿವಯಸ್ಸಿನಲ್ಲಿ ಹೋರಾಟಕ್ಕೆ ಧುಮುಕಲು ಸಿದ್ದರೆಂದು ಹೇಳುತ್ತಿದ್ದಾರೆ! ಹಾಲಕ್ಕಿಗಳ ಮೀಸಲಾತಿ ಹೋರಾಟ ಜೋರಾಗುವ ಎಲ್ಲ ಲಕ್ಷಣಗಳೀಗ ಗೋಚರಿಸುತ್ತದೆ.

ಸಾಮಾಜಿಕ ನ್ಯಾಯ ತತ್ವದಂತೆ ಪರಿಶಿಷ್ಟ ಪಂಗಡಕ್ಕೆ ಸೇರುವ ಸಕಲ ಅರ್ಹತೆಯಿರುವ ಹಾಲಕ್ಕಿ ಒಕ್ಕಲಿಗರನ್ನು ವಂಚಿಸುತ್ತಿರುವುದರ ಹಿಂದೆ ಮೇಲು ವರ್ಗದ ಪಟ್ಟಭದ್ರ ರಾಜಕೀಯ ಹಿತಾಸಕ್ತಿ ಅಡಗಿದೆಯೆಂಬ ಭಾವನೆ ಉತ್ತರ ಕನ್ನಡದಲ್ಲಿದೆ. ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಮಂದೊಂದು ದಿನ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗುತ್ತದೆಂಬ ಭೀತಿ ಬಲಾಡ್ಯ ಜಾತಿ ಶಕ್ತಿಗಳನ್ನು ಕಾಡುತ್ತಿದೆಯೆಂಬ ಚರ್ಚೆ ನಡೆದಿದೆ.


ಇದನ್ನೂ ಓದಿ: ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...