Homeಕರ್ನಾಟಕಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

ಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

- Advertisement -
- Advertisement -

ಕುಮಾರಸ್ವಾಮಿ ಸರ್ಕಾರದ ವಿಶ್ವಾಸಮತ ಯಾಚನೆಯಲ್ಲಿ ಎನ್.ಮಹೇಶ್ ರವರಿಗೆ ಜೆಡಿಎಸ್-ಕಾಂಗ್ರೆಸ್ ಪರವಾಗಿ ಮತ ಚಲಾಯಿಸಬೇಕೆಂದು ಬಿಎಸ್‍ಪಿಯ ನಾಯಕರು ಆದೇಶಿಸಿದ್ದರು. ಆದರೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎನ್ ಮಹೇಶ್‍ರವರು ಸದನಕ್ಕೆ ಹಾಜರಾಗದೆ ಪಕ್ಷದಿಂದಲೇ ಈಗ ಅಮಾನತಾಗಿದ್ದಾರೆ. ದಲಿತ ವಲಯದಲ್ಲಿ ಭರವಸೆ ಮೂಡಿಸಿದ್ದ ಎನ್.ಮಹೇಶ್ ಹೀಗೇಕೆ ಮಾಡಿದರು? ಅನ್ನೋದು ಈಗ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ.

ಕೊಳ್ಳೇಗಾಲದ ಎನ್.ಮಹೇಶ್‍ರವರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯಾಗಿದ್ದವರು. ಬಹುಜನ ಸಿದ್ದಾಂತಕ್ಕೆ ಮಾರುಹೋಗಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಚಳವಳಿಗೆ ಧುಮುಕಿದವರು. ತನ್ನ ಸ್ನೇಹಿತ ಗೋಪಿನಾಥ್ ಜೊತೆ ಸೇರಿ ರಾಜ್ಯದಲ್ಲಿ ಬಿಎಸ್‍ಪಿ ಮತ್ತು ಬಿವಿಎಸ್ ಕಟ್ಟುವುದರಲ್ಲಿ ಮಹತ್ವದ ಮುಖ್ಯ ಪಾತ್ರ ಇವರದು. ಕರ್ನಾಟಕದಲ್ಲಿ ಅಕ್ಷರಶಃ ಸಾವಿರಾರು ಜನ ಇವರನ್ನು ಇಂದಿಗೂ ತಮ್ಮ ಗುರುಗಳೆಂದು ಭಾವಿಸಿದ್ದಾರೆ. ಅಷ್ಟರಮಟ್ಟಿಗೆ ‘ಮಹೇಶಣ್ಣ’ ಆಗಿ ಅವರು ಬಿಎಸ್‍ಪಿಯಲ್ಲಿ ತೊಡಗಿಸಿಕೊಂಡಿದ್ದರು.

ಅಂತ ಎನ್.ಮಹೇಶ್‍ರವರು ಸತತ ಮೂರು ಸಲ ಕೊಳ್ಳೆಗಾಲದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡವರು. ಗೆಲ್ಲಲೇಬೇಕೆಂಬ ಶತಾಯಗತಾಯ ಪ್ರಯತ್ನದಿಂದ, ಎಲ್ಲಕ್ಕಿಂತ ಹೆಚ್ಚು ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕೊನೆಗೂ ಈ ಬಾರಿ ಗೆದ್ದರು ಮಾತ್ರವಲ್ಲ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸಹ ಆದರು. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತಾರೆ ಎಂದು ಹಲವಾರು ಜನ ನಂಬಿದ್ದರು. ಆದರೆ ಆದುದ್ದೇ ಬೇರೆ.

ಇದ್ದಕ್ಕಿದ್ದಂತೆ ಎನ್.ಮಹೇಶ್‍ರವರು ತಮ್ಮ ಅಮೂಲ್ಯ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾರಣ ಹುಡುಕುತ್ತಾ ಹೋದಾಗ ಗೊತ್ತಾಗಿದ್ದು ಬಿಎಸ್‍ಪಿಯ ನಾಯಕಿ ಮಾಯವತಿಯವರ ಗಮನಕ್ಕೆ ತಾರದೇ ರಾಜ್ಯದಲ್ಲಿ ದಶಕಗಳಿಗೂ ಹೆಚ್ಚು ಕಾಲ ಬಿವಿಎಸ್ ಎಂಬ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿದ್ದರು ಮಾತ್ರವಲ್ಲ ಅದನ್ನು ಬಿಎಸ್‍ಪಿಯ ಚುನಾವಣಾ ರಾಜಕಾರಣಕ್ಕೂ ಬಳಸಿಕೊಂಡಿದ್ದರು. ಆ ತಪ್ಪಿಗೆ ಎನ್.ಮಹೇಶ್ ತಮ್ಮ ಸಚಿವ ಸ್ಥಾನವನ್ನೇ ಬಲಿಕೊಡಬೇಕಾಯಿತು. ಅಷ್ಟು ಮಾತ್ರವಲ್ಲ ಅಂದು ಮಾಯಾವತಿಯವರು “ಪ್ರೆಸ್ ಮೀಟ್ ಮಾಡಿ, ಬಹಿರಂಗವಾಗಿ ಕ್ಷಮೆ ಕೇಳಬೇಕು” ಎಂದು ಸಹ ಆದೇಶಿಸಿದ್ದರು. ಆದರೆ ಎನ್.ಮಹೇಶ್ ಹೇಗೊ ಮಾಡಿ ಅದರಿಂದ ನುಣಚಿಕೊಂಡಿದ್ದರು.

ಅಂತಹ ಎನ್.ಮಹೇಶ್‍ರವರು ರಾಜ್ಯ ರಾಜಕೀಯ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿದ್ದಾಗ ಸದನಕ್ಕೆ ಹಾಜರಾಗದೇ ದೊಡ್ಡ ಪ್ರಮಾದ ಮಾಡಿದರು. ಬಿಎಸ್‍ಪಿ ಪಕ್ಷ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಆದೇಶಿಸಿದ್ದನ್ನು ಬೇಕಂತಲೇ ಉಲ್ಲಂಘಿಸಿದರು. ಬಿಜೆಪಿಯ ಕುದುರೆ ವ್ಯಾಪಾರ, ಅಪಾಯದಲ್ಲಿರುವ ಪ್ರಜಾತಂತ್ರ ಇತ್ಯಾದಿಗಳ ಕುರಿತು ಅತ್ಯಂತ ಮಹತ್ವದ ಮೌಲ್ಯಯುತ ಚರ್ಚೆ ನಡೆಯುತ್ತಿರಬೇಕಾದರೆ ಎನ್.ಮಹೇಶ್‍ರವರು ಸದನದಿಂದ ದೂರ ಉಳಿದುದ್ದನ್ನು ಬಹಳಷ್ಟು ಪ್ರಜ್ಞಾವಂತರು ಟೀಕಿಸಿದರು.

ಸದನದಲ್ಲಿ ಅವರು ಯಾವೊಂದು ಪಕ್ಷದ ಪರವಹಿಸಬೇಕಾದ ಅಗತ್ಯವೇನಿರಲಿಲ್ಲ. ಬದಲಿಗೆ ಪ್ರಜಾತಂತ್ರ, ಅಂಬೇಡ್ಕರ್‍ರವರು ರಚಿಸಿದ ಸಂವಿಧಾನ, ದೇಶದ ಇಂದಿನ ಸ್ಥಿತಿ, ದಲಿತರ ಪರಿಸ್ಥಿತಿಯ ಕುರಿತಾಗಿ ಅದ್ಭುತವಾಗಿ ಮಾತನಾಡಿ ಇಡೀ ದೇಶದ ಗಮನ ಸೆಳೆಯಬಹುದಿತ್ತು. ಮಾಧ್ಯಮಗಳ ಮೂಲಕ ಕರ್ನಾಟಕದ ಮೂರು ರಾಜಕೀಯ ಪಕ್ಷಗಳಿಗೂ ಅವರ ತಪ್ಪುಗಳನ್ನು ಮುಖಕ್ಕೆ ಹೊಡೆದಂತೆ ಹೇಳಬಹುದಿತ್ತು. ಸದನದ ಘನತೆ, ಜನರಿಗಾಗಿ ಶಾಸಕರು ಮಾಡಬೇಕಾದುದ್ದೇನು ಎಂಬುದರ ಕುರಿತು ಇಡೀ ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಬಹುದಿತ್ತು. ಅಂತಹ ವಿಫುಲ ಅವಕಾಶವನ್ನು ಎನ್.ಮಹೇಶ್ ಹಾಳು ಮಾಡಿಕೊಂಡರು.

ಎನ್ ಮಹೇಶ್ ಹೀಗೇಕೆ ಮಾಡಿದರು?
ಅವಕಾಶವಾದಿತನವೇ ಮಹೇಶ್‍ರವರು ಹೀಗೆ ಮಾಡಲು ಪ್ರಮುಖ ಕಾರಣವಾಗಿದೆ. ಇದು ಈಗ ಮಾತ್ರ ಗೋಚರಿಸುತ್ತಿರುವುದಲ್ಲ ಬದಲಿಗೆ ಇದರ ಲಕ್ಷಣಗಳು ಈ ಹಿಂದೆಯೇ ಕಾಣಿಸಿಕೊಂಡಿದ್ದವು. ಹಲವು ವರ್ಷಗಳ ಹಿಂದೆಯೇ ಎನ್.ಮಹೇಶ್‍ರವರು ಬಿಜೆಪಿ ಬಿ.ಶ್ರೀರಾಮುಲು ಜೊತೆ ಸಖ್ಯ ಹೊಂದಿದ್ದರು ಮಾತ್ರವಲ್ಲದೇ ಅವರೊಡನೆ ಕೂಡಿ ರೆಸಾರ್ಟ್‍ನಲ್ಲಿ ಹಲವು ಯೋಜನೆಗಳನ್ನು ಸಹ ರೂಪಿಸಿದ್ದರು ಎಂದು ಅವರ ಸಮೀಪವರ್ತಿಗಳೇ ಹೇಳುತ್ತಾರೆ.

ಮಾಯಾವತಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಯಾವಾಗ ಆದೇಶಿಸಿದ್ದರೋ ಅಂದಿನಿಂದಲೂ ಅವರ ವಿರುದ್ಧ ಎನ್.ಮಹೇಶ್ ತಿರುಗಿ ಬಿದ್ದಿದ್ದಾರೆ. ಅವಕಾಶ ಕಾಯುತ್ತಿದ್ದ ಅವರು ಈಗ ಬೇಕಂತಲೇ ಸದನಕ್ಕೆ ಹಾಜರಾಗಿಲ್ಲ. ಪಕ್ಷದಿಂದ ಉಚ್ಚಾಟಿಸುವುದು ಅವರು ಸಹ ಬೇಕಿದ್ದಂತೆ ತೋರುತ್ತದೆ. ಇದರಿಂದ ಅವರ ಶಾಸಕ ಸ್ಥಾನಕ್ಕೇನೂ ಚ್ಯುತಿಯಾಗುವುದಿಲ್ಲ. ಇನ್ನು ಮುಂದೆ ಅವರು ಬಿಜೆಪಿ ಜೊತೆ ಸೇರಿಯೂ ಸಚಿವರಾಗುವ ಅವಕಾಶವಿದೆ. ಅದನ್ನು ಅವರು ನಿರಾಕರಿಸುವುದಿಲ್ಲ ಎಂಬುದು ಸಹ ಸತ್ಯವೆ.

ಅತ್ಯಂತ ಘನತೆಯಿಂದ ಚಳವಳಿ ಆರಂಭಿಸಿದ್ದ ಅವರು ಇಂದು ಈ ಸ್ಥಿತಿ ತಲುಪಿರುವುದು ದುರಂತ ಮಾತ್ರವಲ್ಲ ದಲಿತ ರಾಜಕಾರಣಕ್ಕಾದ ನಷ್ಟವೂ ಹೌದು. ಅವರನ್ನೇ ನಂಬಿದ್ದ ಅವರ ಅನುಯಾಯಿಗಳಿಗೆ ಮಾಡಿದ ದ್ರೋಹವೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಾಮ್ ವಿಲಾಸ್ ಪಾಸ್ವಾನ್, ರಾಮದಾಸ್ ಅಠಾವಳೆ, ಉದಿತ್ ರಾಜ್ ಮತ್ತು ಈಗ ಎನ್.ಮಹೇಶ್ ಎಲ್ಲರೂ ಅಂಬೇಡ್ಕರ್ ಸಿದ್ದಾಂತಕ್ಕೆ ಹಾಡುಹಗಲೇ ಚೂರಿ ಹಾಕಿದವರು. ಇವರ ರಾಜಕೀಯ ಗುಲಾಮಗಿರಿಗೆ ದಿಕ್ಕಾರವಿರಲಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...