Homeಕರ್ನಾಟಕಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

ಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

- Advertisement -
- Advertisement -

ಕುಮಾರಸ್ವಾಮಿ ಸರ್ಕಾರದ ವಿಶ್ವಾಸಮತ ಯಾಚನೆಯಲ್ಲಿ ಎನ್.ಮಹೇಶ್ ರವರಿಗೆ ಜೆಡಿಎಸ್-ಕಾಂಗ್ರೆಸ್ ಪರವಾಗಿ ಮತ ಚಲಾಯಿಸಬೇಕೆಂದು ಬಿಎಸ್‍ಪಿಯ ನಾಯಕರು ಆದೇಶಿಸಿದ್ದರು. ಆದರೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎನ್ ಮಹೇಶ್‍ರವರು ಸದನಕ್ಕೆ ಹಾಜರಾಗದೆ ಪಕ್ಷದಿಂದಲೇ ಈಗ ಅಮಾನತಾಗಿದ್ದಾರೆ. ದಲಿತ ವಲಯದಲ್ಲಿ ಭರವಸೆ ಮೂಡಿಸಿದ್ದ ಎನ್.ಮಹೇಶ್ ಹೀಗೇಕೆ ಮಾಡಿದರು? ಅನ್ನೋದು ಈಗ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ.

ಕೊಳ್ಳೇಗಾಲದ ಎನ್.ಮಹೇಶ್‍ರವರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯಾಗಿದ್ದವರು. ಬಹುಜನ ಸಿದ್ದಾಂತಕ್ಕೆ ಮಾರುಹೋಗಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಚಳವಳಿಗೆ ಧುಮುಕಿದವರು. ತನ್ನ ಸ್ನೇಹಿತ ಗೋಪಿನಾಥ್ ಜೊತೆ ಸೇರಿ ರಾಜ್ಯದಲ್ಲಿ ಬಿಎಸ್‍ಪಿ ಮತ್ತು ಬಿವಿಎಸ್ ಕಟ್ಟುವುದರಲ್ಲಿ ಮಹತ್ವದ ಮುಖ್ಯ ಪಾತ್ರ ಇವರದು. ಕರ್ನಾಟಕದಲ್ಲಿ ಅಕ್ಷರಶಃ ಸಾವಿರಾರು ಜನ ಇವರನ್ನು ಇಂದಿಗೂ ತಮ್ಮ ಗುರುಗಳೆಂದು ಭಾವಿಸಿದ್ದಾರೆ. ಅಷ್ಟರಮಟ್ಟಿಗೆ ‘ಮಹೇಶಣ್ಣ’ ಆಗಿ ಅವರು ಬಿಎಸ್‍ಪಿಯಲ್ಲಿ ತೊಡಗಿಸಿಕೊಂಡಿದ್ದರು.

ಅಂತ ಎನ್.ಮಹೇಶ್‍ರವರು ಸತತ ಮೂರು ಸಲ ಕೊಳ್ಳೆಗಾಲದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡವರು. ಗೆಲ್ಲಲೇಬೇಕೆಂಬ ಶತಾಯಗತಾಯ ಪ್ರಯತ್ನದಿಂದ, ಎಲ್ಲಕ್ಕಿಂತ ಹೆಚ್ಚು ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕೊನೆಗೂ ಈ ಬಾರಿ ಗೆದ್ದರು ಮಾತ್ರವಲ್ಲ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸಹ ಆದರು. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತಾರೆ ಎಂದು ಹಲವಾರು ಜನ ನಂಬಿದ್ದರು. ಆದರೆ ಆದುದ್ದೇ ಬೇರೆ.

ಇದ್ದಕ್ಕಿದ್ದಂತೆ ಎನ್.ಮಹೇಶ್‍ರವರು ತಮ್ಮ ಅಮೂಲ್ಯ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾರಣ ಹುಡುಕುತ್ತಾ ಹೋದಾಗ ಗೊತ್ತಾಗಿದ್ದು ಬಿಎಸ್‍ಪಿಯ ನಾಯಕಿ ಮಾಯವತಿಯವರ ಗಮನಕ್ಕೆ ತಾರದೇ ರಾಜ್ಯದಲ್ಲಿ ದಶಕಗಳಿಗೂ ಹೆಚ್ಚು ಕಾಲ ಬಿವಿಎಸ್ ಎಂಬ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿದ್ದರು ಮಾತ್ರವಲ್ಲ ಅದನ್ನು ಬಿಎಸ್‍ಪಿಯ ಚುನಾವಣಾ ರಾಜಕಾರಣಕ್ಕೂ ಬಳಸಿಕೊಂಡಿದ್ದರು. ಆ ತಪ್ಪಿಗೆ ಎನ್.ಮಹೇಶ್ ತಮ್ಮ ಸಚಿವ ಸ್ಥಾನವನ್ನೇ ಬಲಿಕೊಡಬೇಕಾಯಿತು. ಅಷ್ಟು ಮಾತ್ರವಲ್ಲ ಅಂದು ಮಾಯಾವತಿಯವರು “ಪ್ರೆಸ್ ಮೀಟ್ ಮಾಡಿ, ಬಹಿರಂಗವಾಗಿ ಕ್ಷಮೆ ಕೇಳಬೇಕು” ಎಂದು ಸಹ ಆದೇಶಿಸಿದ್ದರು. ಆದರೆ ಎನ್.ಮಹೇಶ್ ಹೇಗೊ ಮಾಡಿ ಅದರಿಂದ ನುಣಚಿಕೊಂಡಿದ್ದರು.

ಅಂತಹ ಎನ್.ಮಹೇಶ್‍ರವರು ರಾಜ್ಯ ರಾಜಕೀಯ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿದ್ದಾಗ ಸದನಕ್ಕೆ ಹಾಜರಾಗದೇ ದೊಡ್ಡ ಪ್ರಮಾದ ಮಾಡಿದರು. ಬಿಎಸ್‍ಪಿ ಪಕ್ಷ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಆದೇಶಿಸಿದ್ದನ್ನು ಬೇಕಂತಲೇ ಉಲ್ಲಂಘಿಸಿದರು. ಬಿಜೆಪಿಯ ಕುದುರೆ ವ್ಯಾಪಾರ, ಅಪಾಯದಲ್ಲಿರುವ ಪ್ರಜಾತಂತ್ರ ಇತ್ಯಾದಿಗಳ ಕುರಿತು ಅತ್ಯಂತ ಮಹತ್ವದ ಮೌಲ್ಯಯುತ ಚರ್ಚೆ ನಡೆಯುತ್ತಿರಬೇಕಾದರೆ ಎನ್.ಮಹೇಶ್‍ರವರು ಸದನದಿಂದ ದೂರ ಉಳಿದುದ್ದನ್ನು ಬಹಳಷ್ಟು ಪ್ರಜ್ಞಾವಂತರು ಟೀಕಿಸಿದರು.

ಸದನದಲ್ಲಿ ಅವರು ಯಾವೊಂದು ಪಕ್ಷದ ಪರವಹಿಸಬೇಕಾದ ಅಗತ್ಯವೇನಿರಲಿಲ್ಲ. ಬದಲಿಗೆ ಪ್ರಜಾತಂತ್ರ, ಅಂಬೇಡ್ಕರ್‍ರವರು ರಚಿಸಿದ ಸಂವಿಧಾನ, ದೇಶದ ಇಂದಿನ ಸ್ಥಿತಿ, ದಲಿತರ ಪರಿಸ್ಥಿತಿಯ ಕುರಿತಾಗಿ ಅದ್ಭುತವಾಗಿ ಮಾತನಾಡಿ ಇಡೀ ದೇಶದ ಗಮನ ಸೆಳೆಯಬಹುದಿತ್ತು. ಮಾಧ್ಯಮಗಳ ಮೂಲಕ ಕರ್ನಾಟಕದ ಮೂರು ರಾಜಕೀಯ ಪಕ್ಷಗಳಿಗೂ ಅವರ ತಪ್ಪುಗಳನ್ನು ಮುಖಕ್ಕೆ ಹೊಡೆದಂತೆ ಹೇಳಬಹುದಿತ್ತು. ಸದನದ ಘನತೆ, ಜನರಿಗಾಗಿ ಶಾಸಕರು ಮಾಡಬೇಕಾದುದ್ದೇನು ಎಂಬುದರ ಕುರಿತು ಇಡೀ ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಬಹುದಿತ್ತು. ಅಂತಹ ವಿಫುಲ ಅವಕಾಶವನ್ನು ಎನ್.ಮಹೇಶ್ ಹಾಳು ಮಾಡಿಕೊಂಡರು.

ಎನ್ ಮಹೇಶ್ ಹೀಗೇಕೆ ಮಾಡಿದರು?
ಅವಕಾಶವಾದಿತನವೇ ಮಹೇಶ್‍ರವರು ಹೀಗೆ ಮಾಡಲು ಪ್ರಮುಖ ಕಾರಣವಾಗಿದೆ. ಇದು ಈಗ ಮಾತ್ರ ಗೋಚರಿಸುತ್ತಿರುವುದಲ್ಲ ಬದಲಿಗೆ ಇದರ ಲಕ್ಷಣಗಳು ಈ ಹಿಂದೆಯೇ ಕಾಣಿಸಿಕೊಂಡಿದ್ದವು. ಹಲವು ವರ್ಷಗಳ ಹಿಂದೆಯೇ ಎನ್.ಮಹೇಶ್‍ರವರು ಬಿಜೆಪಿ ಬಿ.ಶ್ರೀರಾಮುಲು ಜೊತೆ ಸಖ್ಯ ಹೊಂದಿದ್ದರು ಮಾತ್ರವಲ್ಲದೇ ಅವರೊಡನೆ ಕೂಡಿ ರೆಸಾರ್ಟ್‍ನಲ್ಲಿ ಹಲವು ಯೋಜನೆಗಳನ್ನು ಸಹ ರೂಪಿಸಿದ್ದರು ಎಂದು ಅವರ ಸಮೀಪವರ್ತಿಗಳೇ ಹೇಳುತ್ತಾರೆ.

ಮಾಯಾವತಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಯಾವಾಗ ಆದೇಶಿಸಿದ್ದರೋ ಅಂದಿನಿಂದಲೂ ಅವರ ವಿರುದ್ಧ ಎನ್.ಮಹೇಶ್ ತಿರುಗಿ ಬಿದ್ದಿದ್ದಾರೆ. ಅವಕಾಶ ಕಾಯುತ್ತಿದ್ದ ಅವರು ಈಗ ಬೇಕಂತಲೇ ಸದನಕ್ಕೆ ಹಾಜರಾಗಿಲ್ಲ. ಪಕ್ಷದಿಂದ ಉಚ್ಚಾಟಿಸುವುದು ಅವರು ಸಹ ಬೇಕಿದ್ದಂತೆ ತೋರುತ್ತದೆ. ಇದರಿಂದ ಅವರ ಶಾಸಕ ಸ್ಥಾನಕ್ಕೇನೂ ಚ್ಯುತಿಯಾಗುವುದಿಲ್ಲ. ಇನ್ನು ಮುಂದೆ ಅವರು ಬಿಜೆಪಿ ಜೊತೆ ಸೇರಿಯೂ ಸಚಿವರಾಗುವ ಅವಕಾಶವಿದೆ. ಅದನ್ನು ಅವರು ನಿರಾಕರಿಸುವುದಿಲ್ಲ ಎಂಬುದು ಸಹ ಸತ್ಯವೆ.

ಅತ್ಯಂತ ಘನತೆಯಿಂದ ಚಳವಳಿ ಆರಂಭಿಸಿದ್ದ ಅವರು ಇಂದು ಈ ಸ್ಥಿತಿ ತಲುಪಿರುವುದು ದುರಂತ ಮಾತ್ರವಲ್ಲ ದಲಿತ ರಾಜಕಾರಣಕ್ಕಾದ ನಷ್ಟವೂ ಹೌದು. ಅವರನ್ನೇ ನಂಬಿದ್ದ ಅವರ ಅನುಯಾಯಿಗಳಿಗೆ ಮಾಡಿದ ದ್ರೋಹವೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಾಮ್ ವಿಲಾಸ್ ಪಾಸ್ವಾನ್, ರಾಮದಾಸ್ ಅಠಾವಳೆ, ಉದಿತ್ ರಾಜ್ ಮತ್ತು ಈಗ ಎನ್.ಮಹೇಶ್ ಎಲ್ಲರೂ ಅಂಬೇಡ್ಕರ್ ಸಿದ್ದಾಂತಕ್ಕೆ ಹಾಡುಹಗಲೇ ಚೂರಿ ಹಾಕಿದವರು. ಇವರ ರಾಜಕೀಯ ಗುಲಾಮಗಿರಿಗೆ ದಿಕ್ಕಾರವಿರಲಿ.

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...