Homeಮುಖಪುಟಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

ಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

- Advertisement -
- Advertisement -

ಪೀಪಲ್ಸ್ ಕಫ್ರ್ಯೂ ಕಾನ್ಸೆಪ್ಟನ್ನು ಮೊಟ್ಟಮೊದಲ ಬಾರಿಗೆ ಕೊಟ್ಟವರು ಅಸ್ಸಾಮಿನ ವಿದ್ಯಾರ್ಥಿ ಗಣಪರಿಷತ್ ನಾಯಕರು. ಅಸ್ಸಾಮಿಗಳಿಗೆ ವಂಚನೆ ಮಾಡಿ ಬೆಂಗಾಳಿ ಬಾಬುಗಳಿಗೆ ಅಸ್ಸಾಂ ಆಡಳಿತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟುದುದರ ವಿರುದ್ಧ ಮೊದಲ ಬಾರಿಗೆ ಸೆಟೆದು ನಿಂತದ್ದು ಅಸ್ಸಾಂ ವಿದ್ಯಾರ್ಥಿ ಗಣಪರಿಷತ್. ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಬಂತು. ಯಾವ ಅಸ್ಸಾಮಿ ಪ್ರಜೆಯೂ ಈ ಚುನಾವಣೆಯಲ್ಲಿ ಮತಹಾಕಲು ಮತಗಟ್ಟೆಗೆ ಹೋಗಬಾರದೆಂದು ಕರೆನೀಡಿ Peoples Curfew ಘೋಷಿಸಿತು.

Peoples Curfew ಒಂದು ಹೊಸ ಪ್ರಯೋಗ. ಸರ್ಕಾರ ಕಫ್ರ್ಯೂ ಹಾಕುವುದು ಬ್ರಿಟಿಷರ ಕಾಲದಿಂದ ಜಾರಿಯಲ್ಲಿರುವ ಕರಾಳ ಶಾಸನ. ಹೋರಾಟಗಾರರು ಐದು ಜನ ಒಟ್ಟಿಗೆ ಸೇರಿದರೆ ಅವರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಅನುಮತಿ ನೀಡುವ ಶಾಸನ ಅದು.

ಅಸ್ಸಾಂ ವಿದ್ಯಾರ್ಥಿ ಗಣಪರಿಷತ್ತಿನ Peoples curgfew ಸರ್ಕಾರ ಹಾಕುವ ಕಫ್ರ್ಯೂ ಅಲ್ಲ. ಜನತೆ ಹಾಕುವ ಕಫ್ರ್ಯೂ. ಆಶ್ಚರ್ಯವೆಂದರೆ ಜನತೆ, ತಮ್ಮ ಮೇಲೆ ತಾವೇ ಹಾಕಿಕೊಳ್ಳುವ ಪ್ರತಿಬಂಧಕ. ಆ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ಜನ ಮನೆಬಿಟ್ಟು ಹೊರಬೀಳಲೇ ಇಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಅಸ್ಸಾಮಿನ ಜನ ಭಾಗವಹಿಸಲಿಲ್ಲ. ಶೇ.10ರಷ್ಟು ಮಾತ್ರ ಮತದಾನ ನಡೆಯಿತು. ಆದರೂ ಆಡಳಿತ ಪಕ್ಷ ಆ ಚುನಾವಣೆಯ ಫಲಿತಾಂಶವನ್ನು ಘೋಷಿಸಿತು.

ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬಂದಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಿತು. ಆದರೆ ಆ ಸರ್ಕಾರ ಬಹಳ ದಿನ ಉಳಿಯಲಿಲ್ಲ. ರಾಷ್ಟ್ರಾಧ್ಯಕ್ಷರ ಆಳ್ವಿಕೆಯನ್ನು ಅಸ್ಸಾಮಿನ ಮೇಲೆ ಹೇರಲಾಯಿತು. ಆರು ತಿಂಗಳೊಳಗೆ ಮತ್ತೆ ಚುನಾವಣೆ ನಡೆದು ವಿದ್ಯಾರ್ಥಿ ಗಣಪರಿಷತ್ ಅಭೂತಪೂರ್ವ ಜಯಗಳಿಸಿ ಆಡಳಿತಕ್ಕೆ ಬಂತು. ಜನ ಮನಸ್ಸು ಮಾಡಿದರೆ ಜನರೇ ಕಫ್ರ್ಯೂ ಹಾಕುವುದು ಸಾಧ್ಯ. ಅದು ಯಶಸ್ವಿಯಾಗಿ ಜಾರಿಗೆ ಬರುವುದೂ ಸಾಧ್ಯ.

ಆದರೆ ಇಂದು ಜನತಾ ಕಫ್ರ್ಯೂ ಹೇರಿರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ! ಇದೊಂದು ವಿರೋಧಾಭಾಸವೇ ಸರಿ. ಮೋದಿಗೆ ಶಾಸನಾನುಸಾರ ಸರ್ಕಾರದಿಂದ ಜಾರಿಯಾಗುವ ಕಫ್ರ್ಯೂ ಹಾಕುವ ಅಧಿಕಾರವಿದೆ. ಜನತಾ ಕಫ್ರ್ಯೂ ಹಾಕುವ ಅಧಿಕಾರವಿಲ್ಲ. ಅದು ಇರುವುದು ಜನರಿಗೆ ಮತ್ತು ಜನರನ್ನು ಪ್ರತಿನಿಧಿಸುವ ಪ್ರಭುತ್ವೇತರ ವೇದಿಕೆಗೆ. ಸರ್ಕಾರಿ ಕಾಯಿದೆ ಪ್ರಕಾರ ಕಫ್ರ್ಯೂ ಹೇರಿದರೆ ಜನ ಎದುರುಬಿದ್ದಾರೆಂದು ಮೋದಿಯವರು ಜನತಾ ಕಫ್ರ್ಯೂ ಹೇರಿದ್ದಾರೆ.

ಅಸ್ಸಾಂನಲ್ಲಿ ವಿದ್ಯಾರ್ಥಿ ಗಣಪರಿಷತ್ ಕಫ್ರ್ಯೂವನ್ನು ಜನತೆ ಮಾತ್ರ ಪಾಲನೆ ಮಾಡಿತು. ಸರ್ಕಾರ ಜನತಾ ಕಫ್ರ್ಯೂವನ್ನು ಮನ್ನಣೆ ಮಾಡಲಿಲ್ಲ. ಈಗ ಮೋದಿ ಸರ್ಕಾರ ಜನತಾ ಕಫ್ರ್ಯೂ ಹೇರಿ ಈ ಜನತಾ ಕಫ್ರ್ಯೂವನ್ನು ಸರ್ಕಾರವೂ ಪಾಲಿಸಬೇಕು, ಪ್ರಜೆಗಳೂ ಪಾಲಿಸಬೇಕು ಎಂದು ಫರ್ಮಾನ್ ನೀಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ?

ಏಕೆಂದರೆ ಸರ್ಕಾರಕ್ಕೆ ಜನತಾ ಕಫ್ರ್ಯೂ ಹಾಕಲು ಬರುವುದಿಲ್ಲ. ಅದು ಜನತೆಯ ಹಕ್ಕು. ಜನತೆಯ ಹಕ್ಕನ್ನು ಸರ್ಕಾರ ಕಿತ್ತುಕೊಂಡು ಆ ಹಕ್ಕನ್ನು ಸರ್ಕಾರ ಚಲಾಯಿಸುವುದು ವಿಪರ್ಯಾಸ.

ಕೊರೊನಾ ಭೂತ ನಮ್ಮನ್ನು ಕಾಡುತ್ತಿರುವಾಗ, ಜನರು ಯಾರೂ ಒಂದು ಭಾನುವಾರ ದಯವಿಟ್ಟು ಮನೆಬಿಟ್ಟು ಬರಬೇಡಿ ಎಂದು ಹೇಳುವ ಮತ್ತು ಅದಕ್ಕಾಗಿ ಸರ್ಕಾರಿ ಕಫ್ರ್ಯೂ ಹೇರುವ ಅಧಿಕಾರ ಮೋದಿ ಸರ್ಕಾರಕ್ಕೆ ಇದೆ. ಇದರ ಅವಶ್ಯಕತೆಯನ್ನು ಅರಿತು ಸರ್ಕಾರದೊಡನೆ ಜನ ಸಹಕರಿಸುವುದೂ ಅಗತ್ಯ. ಆದರೆ ಜನತೆಯ ಕಫ್ರ್ಯೂವನ್ನು ಮೋದಿ ಸರ್ಕಾರ ಜಾರಿ ಮಾಡಲು ಹೊರಟಿರುವುದು ವಿರೋಧಾಭಾಸ ಎಂದು ಹೇಳಬೇಕಾಗುತ್ತದೆ. ಇದರ ಬಗೆಗೆ ಮೋದಿಯವರು ಒಂದು ವಿವರಣೆ ನೀಡಬೇಕೆಂದು ಕೇಳಬಯಸುತ್ತೇನೆ. ಸರ್ಕಾರ ತನಗಿಲ್ಲದ ಅಧಿಕಾರ ಬಳಸಿಕೊಂಡು ಜನತಾ ಕಫ್ರ್ಯೂ ಹಾಕಿತು. ಜನ ಇದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಕಾರಣ ಜನಕ್ಕಿರುವ ಪ್ರಾಣಭಯ. ಜನತಾ ಕಫ್ರ್ಯೂವನ್ನು ಒಳ್ಳೇಕಾರಣಕ್ಕೆ ಈಗ ಮೋದಿ ಬಳಸಿದ್ದಾರೆ. ಜನ ಚೆನ್ನಾಗಿಯೂ ಸ್ಪಂದಿಸಿದ್ದಾರೆ. ಮೋದಿಯವರ ಸರ್ಕಾರ ಮುಂದೆ ಜನತಾ ಕಫ್ರ್ಯೂವನ್ನು ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಅದರ ಬಗೆಗೆ ಜನ ಎಚ್ಚರಿಕೆಯಿಂದಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...