Homeಮುಖಪುಟಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

ಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

- Advertisement -
- Advertisement -

ಪೀಪಲ್ಸ್ ಕಫ್ರ್ಯೂ ಕಾನ್ಸೆಪ್ಟನ್ನು ಮೊಟ್ಟಮೊದಲ ಬಾರಿಗೆ ಕೊಟ್ಟವರು ಅಸ್ಸಾಮಿನ ವಿದ್ಯಾರ್ಥಿ ಗಣಪರಿಷತ್ ನಾಯಕರು. ಅಸ್ಸಾಮಿಗಳಿಗೆ ವಂಚನೆ ಮಾಡಿ ಬೆಂಗಾಳಿ ಬಾಬುಗಳಿಗೆ ಅಸ್ಸಾಂ ಆಡಳಿತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟುದುದರ ವಿರುದ್ಧ ಮೊದಲ ಬಾರಿಗೆ ಸೆಟೆದು ನಿಂತದ್ದು ಅಸ್ಸಾಂ ವಿದ್ಯಾರ್ಥಿ ಗಣಪರಿಷತ್. ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಬಂತು. ಯಾವ ಅಸ್ಸಾಮಿ ಪ್ರಜೆಯೂ ಈ ಚುನಾವಣೆಯಲ್ಲಿ ಮತಹಾಕಲು ಮತಗಟ್ಟೆಗೆ ಹೋಗಬಾರದೆಂದು ಕರೆನೀಡಿ Peoples Curfew ಘೋಷಿಸಿತು.

Peoples Curfew ಒಂದು ಹೊಸ ಪ್ರಯೋಗ. ಸರ್ಕಾರ ಕಫ್ರ್ಯೂ ಹಾಕುವುದು ಬ್ರಿಟಿಷರ ಕಾಲದಿಂದ ಜಾರಿಯಲ್ಲಿರುವ ಕರಾಳ ಶಾಸನ. ಹೋರಾಟಗಾರರು ಐದು ಜನ ಒಟ್ಟಿಗೆ ಸೇರಿದರೆ ಅವರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಅನುಮತಿ ನೀಡುವ ಶಾಸನ ಅದು.

ಅಸ್ಸಾಂ ವಿದ್ಯಾರ್ಥಿ ಗಣಪರಿಷತ್ತಿನ Peoples curgfew ಸರ್ಕಾರ ಹಾಕುವ ಕಫ್ರ್ಯೂ ಅಲ್ಲ. ಜನತೆ ಹಾಕುವ ಕಫ್ರ್ಯೂ. ಆಶ್ಚರ್ಯವೆಂದರೆ ಜನತೆ, ತಮ್ಮ ಮೇಲೆ ತಾವೇ ಹಾಕಿಕೊಳ್ಳುವ ಪ್ರತಿಬಂಧಕ. ಆ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ಜನ ಮನೆಬಿಟ್ಟು ಹೊರಬೀಳಲೇ ಇಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಅಸ್ಸಾಮಿನ ಜನ ಭಾಗವಹಿಸಲಿಲ್ಲ. ಶೇ.10ರಷ್ಟು ಮಾತ್ರ ಮತದಾನ ನಡೆಯಿತು. ಆದರೂ ಆಡಳಿತ ಪಕ್ಷ ಆ ಚುನಾವಣೆಯ ಫಲಿತಾಂಶವನ್ನು ಘೋಷಿಸಿತು.

ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬಂದಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಿತು. ಆದರೆ ಆ ಸರ್ಕಾರ ಬಹಳ ದಿನ ಉಳಿಯಲಿಲ್ಲ. ರಾಷ್ಟ್ರಾಧ್ಯಕ್ಷರ ಆಳ್ವಿಕೆಯನ್ನು ಅಸ್ಸಾಮಿನ ಮೇಲೆ ಹೇರಲಾಯಿತು. ಆರು ತಿಂಗಳೊಳಗೆ ಮತ್ತೆ ಚುನಾವಣೆ ನಡೆದು ವಿದ್ಯಾರ್ಥಿ ಗಣಪರಿಷತ್ ಅಭೂತಪೂರ್ವ ಜಯಗಳಿಸಿ ಆಡಳಿತಕ್ಕೆ ಬಂತು. ಜನ ಮನಸ್ಸು ಮಾಡಿದರೆ ಜನರೇ ಕಫ್ರ್ಯೂ ಹಾಕುವುದು ಸಾಧ್ಯ. ಅದು ಯಶಸ್ವಿಯಾಗಿ ಜಾರಿಗೆ ಬರುವುದೂ ಸಾಧ್ಯ.

ಆದರೆ ಇಂದು ಜನತಾ ಕಫ್ರ್ಯೂ ಹೇರಿರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ! ಇದೊಂದು ವಿರೋಧಾಭಾಸವೇ ಸರಿ. ಮೋದಿಗೆ ಶಾಸನಾನುಸಾರ ಸರ್ಕಾರದಿಂದ ಜಾರಿಯಾಗುವ ಕಫ್ರ್ಯೂ ಹಾಕುವ ಅಧಿಕಾರವಿದೆ. ಜನತಾ ಕಫ್ರ್ಯೂ ಹಾಕುವ ಅಧಿಕಾರವಿಲ್ಲ. ಅದು ಇರುವುದು ಜನರಿಗೆ ಮತ್ತು ಜನರನ್ನು ಪ್ರತಿನಿಧಿಸುವ ಪ್ರಭುತ್ವೇತರ ವೇದಿಕೆಗೆ. ಸರ್ಕಾರಿ ಕಾಯಿದೆ ಪ್ರಕಾರ ಕಫ್ರ್ಯೂ ಹೇರಿದರೆ ಜನ ಎದುರುಬಿದ್ದಾರೆಂದು ಮೋದಿಯವರು ಜನತಾ ಕಫ್ರ್ಯೂ ಹೇರಿದ್ದಾರೆ.

ಅಸ್ಸಾಂನಲ್ಲಿ ವಿದ್ಯಾರ್ಥಿ ಗಣಪರಿಷತ್ ಕಫ್ರ್ಯೂವನ್ನು ಜನತೆ ಮಾತ್ರ ಪಾಲನೆ ಮಾಡಿತು. ಸರ್ಕಾರ ಜನತಾ ಕಫ್ರ್ಯೂವನ್ನು ಮನ್ನಣೆ ಮಾಡಲಿಲ್ಲ. ಈಗ ಮೋದಿ ಸರ್ಕಾರ ಜನತಾ ಕಫ್ರ್ಯೂ ಹೇರಿ ಈ ಜನತಾ ಕಫ್ರ್ಯೂವನ್ನು ಸರ್ಕಾರವೂ ಪಾಲಿಸಬೇಕು, ಪ್ರಜೆಗಳೂ ಪಾಲಿಸಬೇಕು ಎಂದು ಫರ್ಮಾನ್ ನೀಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ?

ಏಕೆಂದರೆ ಸರ್ಕಾರಕ್ಕೆ ಜನತಾ ಕಫ್ರ್ಯೂ ಹಾಕಲು ಬರುವುದಿಲ್ಲ. ಅದು ಜನತೆಯ ಹಕ್ಕು. ಜನತೆಯ ಹಕ್ಕನ್ನು ಸರ್ಕಾರ ಕಿತ್ತುಕೊಂಡು ಆ ಹಕ್ಕನ್ನು ಸರ್ಕಾರ ಚಲಾಯಿಸುವುದು ವಿಪರ್ಯಾಸ.

ಕೊರೊನಾ ಭೂತ ನಮ್ಮನ್ನು ಕಾಡುತ್ತಿರುವಾಗ, ಜನರು ಯಾರೂ ಒಂದು ಭಾನುವಾರ ದಯವಿಟ್ಟು ಮನೆಬಿಟ್ಟು ಬರಬೇಡಿ ಎಂದು ಹೇಳುವ ಮತ್ತು ಅದಕ್ಕಾಗಿ ಸರ್ಕಾರಿ ಕಫ್ರ್ಯೂ ಹೇರುವ ಅಧಿಕಾರ ಮೋದಿ ಸರ್ಕಾರಕ್ಕೆ ಇದೆ. ಇದರ ಅವಶ್ಯಕತೆಯನ್ನು ಅರಿತು ಸರ್ಕಾರದೊಡನೆ ಜನ ಸಹಕರಿಸುವುದೂ ಅಗತ್ಯ. ಆದರೆ ಜನತೆಯ ಕಫ್ರ್ಯೂವನ್ನು ಮೋದಿ ಸರ್ಕಾರ ಜಾರಿ ಮಾಡಲು ಹೊರಟಿರುವುದು ವಿರೋಧಾಭಾಸ ಎಂದು ಹೇಳಬೇಕಾಗುತ್ತದೆ. ಇದರ ಬಗೆಗೆ ಮೋದಿಯವರು ಒಂದು ವಿವರಣೆ ನೀಡಬೇಕೆಂದು ಕೇಳಬಯಸುತ್ತೇನೆ. ಸರ್ಕಾರ ತನಗಿಲ್ಲದ ಅಧಿಕಾರ ಬಳಸಿಕೊಂಡು ಜನತಾ ಕಫ್ರ್ಯೂ ಹಾಕಿತು. ಜನ ಇದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಕಾರಣ ಜನಕ್ಕಿರುವ ಪ್ರಾಣಭಯ. ಜನತಾ ಕಫ್ರ್ಯೂವನ್ನು ಒಳ್ಳೇಕಾರಣಕ್ಕೆ ಈಗ ಮೋದಿ ಬಳಸಿದ್ದಾರೆ. ಜನ ಚೆನ್ನಾಗಿಯೂ ಸ್ಪಂದಿಸಿದ್ದಾರೆ. ಮೋದಿಯವರ ಸರ್ಕಾರ ಮುಂದೆ ಜನತಾ ಕಫ್ರ್ಯೂವನ್ನು ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಅದರ ಬಗೆಗೆ ಜನ ಎಚ್ಚರಿಕೆಯಿಂದಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...