Homeಮುಖಪುಟಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

ಜನತಾ ಕಫ್ರ್ಯೂ ಶುರುವಾದದ್ದು ಯಾಕೆ? ದುರ್ಬಳಕೆಯಾದೀತು ಜೋಕೆ!!

- Advertisement -
- Advertisement -

ಪೀಪಲ್ಸ್ ಕಫ್ರ್ಯೂ ಕಾನ್ಸೆಪ್ಟನ್ನು ಮೊಟ್ಟಮೊದಲ ಬಾರಿಗೆ ಕೊಟ್ಟವರು ಅಸ್ಸಾಮಿನ ವಿದ್ಯಾರ್ಥಿ ಗಣಪರಿಷತ್ ನಾಯಕರು. ಅಸ್ಸಾಮಿಗಳಿಗೆ ವಂಚನೆ ಮಾಡಿ ಬೆಂಗಾಳಿ ಬಾಬುಗಳಿಗೆ ಅಸ್ಸಾಂ ಆಡಳಿತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟುದುದರ ವಿರುದ್ಧ ಮೊದಲ ಬಾರಿಗೆ ಸೆಟೆದು ನಿಂತದ್ದು ಅಸ್ಸಾಂ ವಿದ್ಯಾರ್ಥಿ ಗಣಪರಿಷತ್. ಆ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಬಂತು. ಯಾವ ಅಸ್ಸಾಮಿ ಪ್ರಜೆಯೂ ಈ ಚುನಾವಣೆಯಲ್ಲಿ ಮತಹಾಕಲು ಮತಗಟ್ಟೆಗೆ ಹೋಗಬಾರದೆಂದು ಕರೆನೀಡಿ Peoples Curfew ಘೋಷಿಸಿತು.

Peoples Curfew ಒಂದು ಹೊಸ ಪ್ರಯೋಗ. ಸರ್ಕಾರ ಕಫ್ರ್ಯೂ ಹಾಕುವುದು ಬ್ರಿಟಿಷರ ಕಾಲದಿಂದ ಜಾರಿಯಲ್ಲಿರುವ ಕರಾಳ ಶಾಸನ. ಹೋರಾಟಗಾರರು ಐದು ಜನ ಒಟ್ಟಿಗೆ ಸೇರಿದರೆ ಅವರ ಮೇಲೆ ಗುಂಡು ಹಾರಿಸಲು ಪೊಲೀಸರಿಗೆ ಅನುಮತಿ ನೀಡುವ ಶಾಸನ ಅದು.

ಅಸ್ಸಾಂ ವಿದ್ಯಾರ್ಥಿ ಗಣಪರಿಷತ್ತಿನ Peoples curgfew ಸರ್ಕಾರ ಹಾಕುವ ಕಫ್ರ್ಯೂ ಅಲ್ಲ. ಜನತೆ ಹಾಕುವ ಕಫ್ರ್ಯೂ. ಆಶ್ಚರ್ಯವೆಂದರೆ ಜನತೆ, ತಮ್ಮ ಮೇಲೆ ತಾವೇ ಹಾಕಿಕೊಳ್ಳುವ ಪ್ರತಿಬಂಧಕ. ಆ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ಜನ ಮನೆಬಿಟ್ಟು ಹೊರಬೀಳಲೇ ಇಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಅಸ್ಸಾಮಿನ ಜನ ಭಾಗವಹಿಸಲಿಲ್ಲ. ಶೇ.10ರಷ್ಟು ಮಾತ್ರ ಮತದಾನ ನಡೆಯಿತು. ಆದರೂ ಆಡಳಿತ ಪಕ್ಷ ಆ ಚುನಾವಣೆಯ ಫಲಿತಾಂಶವನ್ನು ಘೋಷಿಸಿತು.

ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬಂದಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಿತು. ಆದರೆ ಆ ಸರ್ಕಾರ ಬಹಳ ದಿನ ಉಳಿಯಲಿಲ್ಲ. ರಾಷ್ಟ್ರಾಧ್ಯಕ್ಷರ ಆಳ್ವಿಕೆಯನ್ನು ಅಸ್ಸಾಮಿನ ಮೇಲೆ ಹೇರಲಾಯಿತು. ಆರು ತಿಂಗಳೊಳಗೆ ಮತ್ತೆ ಚುನಾವಣೆ ನಡೆದು ವಿದ್ಯಾರ್ಥಿ ಗಣಪರಿಷತ್ ಅಭೂತಪೂರ್ವ ಜಯಗಳಿಸಿ ಆಡಳಿತಕ್ಕೆ ಬಂತು. ಜನ ಮನಸ್ಸು ಮಾಡಿದರೆ ಜನರೇ ಕಫ್ರ್ಯೂ ಹಾಕುವುದು ಸಾಧ್ಯ. ಅದು ಯಶಸ್ವಿಯಾಗಿ ಜಾರಿಗೆ ಬರುವುದೂ ಸಾಧ್ಯ.

ಆದರೆ ಇಂದು ಜನತಾ ಕಫ್ರ್ಯೂ ಹೇರಿರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ! ಇದೊಂದು ವಿರೋಧಾಭಾಸವೇ ಸರಿ. ಮೋದಿಗೆ ಶಾಸನಾನುಸಾರ ಸರ್ಕಾರದಿಂದ ಜಾರಿಯಾಗುವ ಕಫ್ರ್ಯೂ ಹಾಕುವ ಅಧಿಕಾರವಿದೆ. ಜನತಾ ಕಫ್ರ್ಯೂ ಹಾಕುವ ಅಧಿಕಾರವಿಲ್ಲ. ಅದು ಇರುವುದು ಜನರಿಗೆ ಮತ್ತು ಜನರನ್ನು ಪ್ರತಿನಿಧಿಸುವ ಪ್ರಭುತ್ವೇತರ ವೇದಿಕೆಗೆ. ಸರ್ಕಾರಿ ಕಾಯಿದೆ ಪ್ರಕಾರ ಕಫ್ರ್ಯೂ ಹೇರಿದರೆ ಜನ ಎದುರುಬಿದ್ದಾರೆಂದು ಮೋದಿಯವರು ಜನತಾ ಕಫ್ರ್ಯೂ ಹೇರಿದ್ದಾರೆ.

ಅಸ್ಸಾಂನಲ್ಲಿ ವಿದ್ಯಾರ್ಥಿ ಗಣಪರಿಷತ್ ಕಫ್ರ್ಯೂವನ್ನು ಜನತೆ ಮಾತ್ರ ಪಾಲನೆ ಮಾಡಿತು. ಸರ್ಕಾರ ಜನತಾ ಕಫ್ರ್ಯೂವನ್ನು ಮನ್ನಣೆ ಮಾಡಲಿಲ್ಲ. ಈಗ ಮೋದಿ ಸರ್ಕಾರ ಜನತಾ ಕಫ್ರ್ಯೂ ಹೇರಿ ಈ ಜನತಾ ಕಫ್ರ್ಯೂವನ್ನು ಸರ್ಕಾರವೂ ಪಾಲಿಸಬೇಕು, ಪ್ರಜೆಗಳೂ ಪಾಲಿಸಬೇಕು ಎಂದು ಫರ್ಮಾನ್ ನೀಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ?

ಏಕೆಂದರೆ ಸರ್ಕಾರಕ್ಕೆ ಜನತಾ ಕಫ್ರ್ಯೂ ಹಾಕಲು ಬರುವುದಿಲ್ಲ. ಅದು ಜನತೆಯ ಹಕ್ಕು. ಜನತೆಯ ಹಕ್ಕನ್ನು ಸರ್ಕಾರ ಕಿತ್ತುಕೊಂಡು ಆ ಹಕ್ಕನ್ನು ಸರ್ಕಾರ ಚಲಾಯಿಸುವುದು ವಿಪರ್ಯಾಸ.

ಕೊರೊನಾ ಭೂತ ನಮ್ಮನ್ನು ಕಾಡುತ್ತಿರುವಾಗ, ಜನರು ಯಾರೂ ಒಂದು ಭಾನುವಾರ ದಯವಿಟ್ಟು ಮನೆಬಿಟ್ಟು ಬರಬೇಡಿ ಎಂದು ಹೇಳುವ ಮತ್ತು ಅದಕ್ಕಾಗಿ ಸರ್ಕಾರಿ ಕಫ್ರ್ಯೂ ಹೇರುವ ಅಧಿಕಾರ ಮೋದಿ ಸರ್ಕಾರಕ್ಕೆ ಇದೆ. ಇದರ ಅವಶ್ಯಕತೆಯನ್ನು ಅರಿತು ಸರ್ಕಾರದೊಡನೆ ಜನ ಸಹಕರಿಸುವುದೂ ಅಗತ್ಯ. ಆದರೆ ಜನತೆಯ ಕಫ್ರ್ಯೂವನ್ನು ಮೋದಿ ಸರ್ಕಾರ ಜಾರಿ ಮಾಡಲು ಹೊರಟಿರುವುದು ವಿರೋಧಾಭಾಸ ಎಂದು ಹೇಳಬೇಕಾಗುತ್ತದೆ. ಇದರ ಬಗೆಗೆ ಮೋದಿಯವರು ಒಂದು ವಿವರಣೆ ನೀಡಬೇಕೆಂದು ಕೇಳಬಯಸುತ್ತೇನೆ. ಸರ್ಕಾರ ತನಗಿಲ್ಲದ ಅಧಿಕಾರ ಬಳಸಿಕೊಂಡು ಜನತಾ ಕಫ್ರ್ಯೂ ಹಾಕಿತು. ಜನ ಇದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಕಾರಣ ಜನಕ್ಕಿರುವ ಪ್ರಾಣಭಯ. ಜನತಾ ಕಫ್ರ್ಯೂವನ್ನು ಒಳ್ಳೇಕಾರಣಕ್ಕೆ ಈಗ ಮೋದಿ ಬಳಸಿದ್ದಾರೆ. ಜನ ಚೆನ್ನಾಗಿಯೂ ಸ್ಪಂದಿಸಿದ್ದಾರೆ. ಮೋದಿಯವರ ಸರ್ಕಾರ ಮುಂದೆ ಜನತಾ ಕಫ್ರ್ಯೂವನ್ನು ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಅದರ ಬಗೆಗೆ ಜನ ಎಚ್ಚರಿಕೆಯಿಂದಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...