Homeಅಂಕಣಗಳುಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

ಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

- Advertisement -
- Advertisement -

ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ.

ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ. ಟ್ವಿಟರ್ ಅವರಿಗೆ ನೋಟಿಸ್ ನೀಡಿದೆ. ಅವರ ಟ್ವಿಟರ್ ಖಾತೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ’ಕಾನೂನಾತ್ಮಕ ವಿನಂತಿ’ಯನ್ನು ತನಗೆ ಮಾಡಿಕೊಂಡಿರುವುದಾಗಿ ಟ್ವಿಟರ್ ನೋಟಿಸಿನಲ್ಲಿ ವಿವರಿಸಿದೆ.

ಮಂಜುಲ್

ಭಾರತದ ವ್ಯಂಗ್ಯಚಿತ್ರ ಕಲೆಯ ಪಿತಾಮಹ ಎಂದೇ ಹೆಸರಾದವವರು ಕೇಶವನ್ ಶಂಕರ ಪಿಳ್ಳೆ.

ನೆಹರೂ ಅವರನ್ನು ಲೇವಡಿ ಮಾಡಿ ರೇಗಿಸುವ ನಾಲ್ಕು ಸಾವಿರದಷ್ಟು ವ್ಯಂಗ್ಯಚಿತ್ರಗಳನ್ನು ಶಂಕರ ಪಿಳ್ಳೆ ತಮ್ಮ ಪ್ರಸಿದ್ಧ ನಿಯತಕಾಲಿಕ ’ಶಂಕರ್ಸ್ ವೀಕ್ಲಿ’ಯಲ್ಲಿ ಪ್ರಕಟಿಸಿದ್ದುಂಟು. ವಿಡಂಬನೆ-ವಿನೋದದಿಂದ ತಿವಿದರೂ ಸವಿದು ನಗುವ ಗುಣ ನೆಹರೂಗಿತ್ತು.

ನೆಹರೂ ನಂತರ ನಮ್ಮ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ವ್ಯಂಗ್ಯಚಿತ್ರಗಳ ವಿಷಯವಸ್ತು ಆದವರು ಪ್ರಾಯಶಃ ಲಾಲೂ ಪ್ರಸಾದ್ ಯಾದವ್. ಆದರೆ ಈತ ಸರ್ವಾಧಿಕಾರಿಯಂತೆ ಉರಿದೆದ್ದ ಉದಾಹರಣೆಯಿಲ್ಲ.

ನಗೆಯಾಡುವ ಅವಕಾಶಗಳನ್ನು ಪ್ರಜೆಗಳಿಗೆ ನಿರಾಕರಿಸುವುದು ಸರ್ವಾಧಿಕಾರೀ ಆಡಳಿತದ ಪ್ರಧಾನ ಲಕ್ಷಣಗಳಲ್ಲೊಂದು. ತನ್ನ ಕುರಿತೇ ನಕ್ಕುಬಿಟ್ಟರೆ ಎಂಬ ಅಳುಕು ಸರ್ವಾಧಿಕಾರಿಯನ್ನು ಸದಾಸರ್ವದಾ ಕಾಡುತ್ತಿರುತ್ತದೆ. ಅಡಾಲ್ಫ್ ಹಿಟ್ಲರನ ಹಯಾಮಿನಲ್ಲಿ ಒಂದು ಒಳ್ಳೆಯ ಕಾಮಿಡಿ, ಒಂದು ಉತ್ತಮ ವ್ಯಂಗ್ಯಚಿತ್ರ, ಒಂದೇ ಒಂದು ವಿಡಂಬನೆ, ಅಣಕು ಕುಹಕದ ಪ್ರಸಂಗವೂ ಜರ್ಮನ್ನರಿಗೆ ನೋಡಲು ಸಿಗಲಿಲ್ಲ ಎಂದಿದ್ದಾರೆ ಶಂಕರಪಿಳ್ಳೆ. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಘೋಷಣೆಯ ನಂತರ ’ವೀಕ್ಲಿ’ಯನ್ನು ಬಂದ್ ಮಾಡಿದ್ದ ಸಂದರ್ಭವದು.

ವ್ಯಂಗ್ಯಚಿತ್ರಗಳು ಮತ್ತು ತಮ್ಮನ್ನು ಕುರಿತು ತಾವೇ ನಗುವ ಸ್ವಸ್ಥಮನಸ್ಸಿನ ಪ್ರವವೃತ್ತಿಯ ಕುರಿತು ನೆಹರೂ ಮತ್ತು ಖುದ್ದು ಶಂಕರ ಪಿಳ್ಳೆ ಹೇಳಿರುವ ವಿವೇಕದಮಾತುಗಳು ಅರ್ಧ ಶತಮಾನದಷ್ಟು ಹಳೆಯವಾದರೂ ಅತ್ಯಂತ ಪ್ರಸ್ತುತ.

‘Don`t spare me Shankar… Hit me, hit me hard’ ಎಂದು ಶಂಕರ ಪಿಳ್ಳೆಯವರಿಗೆ ಹೇಳುತ್ತಿದ್ದರು ನೆಹರೂ. ಅವರ ಈ ಕೆಳಗಿನ ಮಾತುಗಳು ಇಂದಿಗೂ ಪ್ರಸ್ತುತ.

ನಮ್ಮಲ್ಲಿ ಬಹಳ ಮಂದಿ ಶಂಕರ್ ವ್ಯಂಗ್ಯಚಿತ್ರಕ್ಕಾಗಿ ನಿತ್ಯ ಕಾಯುತ್ತಿದ್ದೆವು. ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಆ ದಿನದ ಪ್ರಮುಖ ಸುದ್ದಿಯನ್ನು ಬಿಟ್ಟು ನೇರವಾಗಿ ಶಂಕರ್ ವ್ಯಂಗ್ಯಚಿತ್ರ ಇರುತ್ತಿದ್ದ ಪುಟ ತೆರೆಯುತ್ತಿದ್ದೆವು. ಮನಸ್ಸನ್ನು ಮುದಗೊಳಿಸುತ್ತಿದ್ದುದು ಮಾತ್ರವಲ್ಲ, ಪ್ರಚಲಿತ ವಿದ್ಯಮಾನಗಳಿಗೆ ಒಳನೋಟವನ್ನು ಕಟ್ಟಿಕೊಡುತ್ತಿದ್ದವು ಶಂಕರ್ ವ್ಯಂಗ್ಯಚಿತ್ರಗಳು.

“ಶಂಕರ್ ಬಿಡಿಸುತ್ತಿದ್ದ ವ್ಯಂಗ್ಯಚಿತ್ರಗಳು ಸಮಾಜಸೇವೆಯೇ ಹೌದು. ನಾವೆಲ್ಲ ಋಣಿಯಾಗಿರಬೇಕಾದ ಸೇವೆಯಿದು. ಒಂದಲ್ಲ ಒಂದು ಹಂತದಲ್ಲಿ ಸ್ವಾರ್ಥಕೇಂದ್ರಿತರೂ ಬೊಗಳೆ ಬಿಟ್ಟು ಬಡಾಯಿ ಕೊಚ್ಚಿಕೊಳ್ಳುವವರೂ ಆಗಿಬಿಡಬಹುದಾದ ನಮ್ಮಂತಹವರ ಕಣ್ಣಿಗೆ ಕಟ್ಟುವ ಪೊರೆಯನ್ನು
ಹರಿಯುವುದು ಒಳಿತಿನ ಕೆಲಸ” ಎಂದಿದ್ದರು ನೆಹರೂ.

ಅಂದಿನ ರಾಜಕಾರಣಿಗಳು ಮತ್ತು ಮಂತ್ರಿಗಳ ವಲಯದಲ್ಲಿ ಡೆಲ್ಲಿ ಡೆವಿಲ್ ಎಂದೇ ಹೆಸರಾಗಿದ್ದರು ಶಂಕರ ಪಿಳ್ಳೆ. ಅವರು ತಮ್ಮ ಪತ್ರಿಕೆಯ ಓದುಗರನ್ನು ಉದ್ದೇಶಿಸಿ ಬರೆದಿದ್ದ ಈ ಕೆಳಕಂಡ ಮಾತುಗಳನ್ನು ಮತ್ತೆ ನೆನೆಯಬೇಕಿದೆ.

ಕೇಶವನ್ ಶಂಕರ ಪಿಳ್ಳೆ

“ನೀವು ನಗಲು ನೆರವಾಗೋದು ನಮ್ಮ ಪತ್ರಿಕೆಯ ಉದ್ದೇಶ. ಜಗತ್ತಿನ ಇತರೆ ದೇಶಗಳ ಜನ ಸಂಘರ್ಷಗಳ ನಡುವೆಯೂ ಮನಸಾರೆ ನಗುತ್ತಿದ್ದಾರೆ. ವಿನೋದ ವಿಡಂಬನೆಗಳೇ ಇಲ್ಲದ ಪೀಳಿಗೆ ನಮ್ಮದು, ಒಂಥರಾ ವರ್ಣರಹಿತ ಬೊಂಬೆಗಳ ಮೆರವಣಿಗೆ. ನಗುವ ವರವನ್ನು ವರ್ಷಗಳ ಹಿಂದೆಯೇ ಕಳೆದುಕೊಂಡವರು. ಜಡ್ಡಿನಂತಹ ಗಾಂಭೀರ್ಯವನ್ನು ಗಳಿಸಿಕೊಂಡುಬಿಟ್ಟಿದ್ದೇವೆ. ಹೆಚ್ಚೆಂದರೆ ಕೃತಕ ಹುಸಿನಗೆ ಧರಿಸಿ ಹಲ್ಲು ಕಿರಿದೇವು. ಆಕಳಿಸಿ ಕಿಸಿಕಿಸಿ ನಕ್ಕೇವು. ಹೊಟ್ಟೆ ತುಂಬ ನಗುವುದೆಂದರೆ ಅಸಭ್ಯವೆಂದು ತಿಳಿದವರು ನಾವು, ನಮ್ಮ ಕುರಿತು ನಾವೇ ನಗುವುದಂತೂ ಇಲ್ಲವೇಇಲ್ಲ. ಇತರರ ಕುರಿತು ಮತ್ತು ನಿಮ್ಮನ್ನೇ ಕುರಿತು ನಗುವುದಕ್ಕೆ ನೆರವಾಗಲಿದೆ ಶಂಕರ್ಸ್ ವೀಕ್ಲಿ… ಭಾರೀ ಬೋರುಗಳ ದೇಶವಾಗಬಾರದು ನಾವು.. ಜನರನ್ನು ನಗಿಸೋ ಪಾಲಿಸಿ ಬಿಟ್ರೆ ಈ ಪ್ರಯತ್ನದ ಹಿಂದೆ ಬೇರೆ ಯಾವ ಪಾಲಿಸಿಯೂ ಇಲ್ಲ. ನಮ್ಮನ್ನು ಏನೆಂದು ಬೇಕಾದರೂ ಕರೀರಿ. ಸೋಷಲಿಸ್ಟರು, ಕಮ್ಯುನಿಸ್ಟರು, ಹುಚ್ಚರು ಇಲ್ಲವೇ ವಕ್ರರು… ಆದ್ರೆ ನಗುವಿಗೆ ಸೈದ್ಧಾಂತಿಕ ಇಲ್ಲವೇ ಇಸಮ್ಮುಗಳ ಅಂಟು ಇರೋದು ಸಾಧ್ಯ ಇಲ್ಲ.

ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲವೂ ಸಂಪೂರ್ಣ ಇಂಡಿಯನ್. ಇಂಗ್ಲಿಷ್ ಸಾಹೇಬರಿಗೆ ಬದಲಾಗಿ ಇಂಡಿಯನ್ ಸಾಹೇಬರುಂಟು. ನಮ್ಮ ದೌರ್ಬಲ್ಯಗಳು ರಾಷ್ಟ್ರೀಯ ದೌರ್ಬಲ್ಯಗಳು, ನಗಬೇಕು ಇಲ್ಲವೇ ಸಾಯಬೇಕು ನಾವು. ಹಾಸ್ಯಾಸ್ಪದ ಸ್ವಸಂತುಷ್ಟಿಯನ್ನು ನಗೆಯಲ್ಲಿ ಉಡಾಯಿಸಬೇಕು. ನಗಬೇಕೆಂದರೆ ತಲೆ ಕೆಳಗಾಗಿ ನಿಲ್ಲಬೇಕಿಲ್ಲ. ಪಾದ ಊರಿಯೇ ನಿಲ್ಲಿರಿ. ಬದುಕು ತಲೆ ಊರಿ ತಿರುಗುವುದನ್ನು ನೋಡಿ ಅದರ ಹತ್ತು ಹಲವು ಮುಖಗಳನ್ನು ಕಂಡು ಮನಸಾರೆ ನಗೋಣ.

“ಆಹಾ ಎಂಥಾ ಬದುಕಿದು! ಬುಶ್ಟ್ ಶರ್ಟ್ ನಾಗರಿಕತೆ, ಕಾಕ್ಟೇಲ್ಸ್ ಮತ್ತು ಮೊನಾಲಿಸಾ ನಗೆ ಹೊತ್ತ ಮೇಮ್ ಸಾಹೇಬ್, ಸೆಕ್ರೆಟೆರಿಯಟೀನಲ್ಲಿ ಖಾಲಿ ರುಂಡಗಳನ್ನು ಹೊತ್ತು ತಿರುಗುವ ಭ್ರಷ್ಟ ಮುಂಡಗಳು. ಕಪಟ ನಗುವಿನ ಕಳ್ಳಸಂತೆಕೋರರು, ಜನರ ಆದಾಯ ವೆಚ್ಚಗಳನ್ನು ನಿಯಂತ್ರಿಸುವ ಬಿಗ್ ಬಿಸಿನೆಸ್ಸುಗಳು, ಸಡಗರದ ಕುಪ್ಪಳಿಕೆಯ ರಾಜಕಾರಣಿಗಳು, ಅರಮನೆ ಕ್ರಾಂತಿಗಳ ಪ್ರಮೋಟರುಗಳು, ದೇಶೀ ರುಚಿಗಳು, ವಿದೇಶೀ ವಿಲಾಸಗಳು, ಯಾತಕ್ಕಾಗಿ ಇಂಥ ಕತ್ತೆ ಚಾಕರಿಯೆಂದು ಅರಿಯದೆ ಗುಲಾಮಗಿರಿ ಮಾಡ್ತಿರೋ ಶ್ರಮಜೀವಿ, ಏರುತ್ತಿರುವ ಸಂಬಳ-ಕೂಲಿಯ ಜೊತೆಜೊತೆಗೇ ಜಿಗಿಯುತ್ತಿರುವ ದರಗಳು, ಲೈಸೆನ್ಸ್ ಇರೋ ಲಂಚಗುಳಿತನ ಮತ್ತು ವಿಶೇಷಾಧಿಕಾರ ಎಂಬಂತಹ ಲಾಭಬಡುಕತನ, ಅರೆನಿಯಂತ್ರಿತ ಬದುಕಿನ ಅರಾಜಕತೆ, ಜನಿಸಲು ಒಲ್ಲದ ಸಂಸ್ಕೃತಿಯೊಂದರ ಎಲ್ಲ ತಮಾಷೆ ಮತ್ತು ವಿಕಟ ಹಾಸ್ಯ. ಬದುಕನ್ನು ನೋಡಬೇಕಿದ್ದರೆ ಅದು ಆರಾಮವಾಗಿ ಹರಿಯುವುದನ್ನು ಕಾಣಬೇಕೇ ವಿನಾ ಅದರ ಪಾರ್ಶ್ವನೋಟವನ್ನಷ್ಟೇ ಕಂಡರೆ ಸಾಲದು. ಒಂದಷ್ಟು ಪೀಡನೆ ಇಲ್ಲವೇ ಕೇಡಿಗತನ, ಪ್ರಾಯಶಃ ಪ್ರೀತಿ ಸಹಿಷ್ಟುತೆಗಿಂತ ಹೆಚ್ಚು ಪೀಡನೆಯೇ ಎನಿಸೀತು. ಆದರೆ ನಗೆಗೆ ಲಾಯಕ್ಕಾದ ಎಲ್ಲವನ್ನು ಕಂಡು ನಗಲೇಬೇಕು”.


ಇದನ್ನೂ ಓದಿ: ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...