Homeಅಂಕಣಗಳುಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

ಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

- Advertisement -
- Advertisement -

ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ.

ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ. ಟ್ವಿಟರ್ ಅವರಿಗೆ ನೋಟಿಸ್ ನೀಡಿದೆ. ಅವರ ಟ್ವಿಟರ್ ಖಾತೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ’ಕಾನೂನಾತ್ಮಕ ವಿನಂತಿ’ಯನ್ನು ತನಗೆ ಮಾಡಿಕೊಂಡಿರುವುದಾಗಿ ಟ್ವಿಟರ್ ನೋಟಿಸಿನಲ್ಲಿ ವಿವರಿಸಿದೆ.

ಮಂಜುಲ್

ಭಾರತದ ವ್ಯಂಗ್ಯಚಿತ್ರ ಕಲೆಯ ಪಿತಾಮಹ ಎಂದೇ ಹೆಸರಾದವವರು ಕೇಶವನ್ ಶಂಕರ ಪಿಳ್ಳೆ.

ನೆಹರೂ ಅವರನ್ನು ಲೇವಡಿ ಮಾಡಿ ರೇಗಿಸುವ ನಾಲ್ಕು ಸಾವಿರದಷ್ಟು ವ್ಯಂಗ್ಯಚಿತ್ರಗಳನ್ನು ಶಂಕರ ಪಿಳ್ಳೆ ತಮ್ಮ ಪ್ರಸಿದ್ಧ ನಿಯತಕಾಲಿಕ ’ಶಂಕರ್ಸ್ ವೀಕ್ಲಿ’ಯಲ್ಲಿ ಪ್ರಕಟಿಸಿದ್ದುಂಟು. ವಿಡಂಬನೆ-ವಿನೋದದಿಂದ ತಿವಿದರೂ ಸವಿದು ನಗುವ ಗುಣ ನೆಹರೂಗಿತ್ತು.

ನೆಹರೂ ನಂತರ ನಮ್ಮ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ವ್ಯಂಗ್ಯಚಿತ್ರಗಳ ವಿಷಯವಸ್ತು ಆದವರು ಪ್ರಾಯಶಃ ಲಾಲೂ ಪ್ರಸಾದ್ ಯಾದವ್. ಆದರೆ ಈತ ಸರ್ವಾಧಿಕಾರಿಯಂತೆ ಉರಿದೆದ್ದ ಉದಾಹರಣೆಯಿಲ್ಲ.

ನಗೆಯಾಡುವ ಅವಕಾಶಗಳನ್ನು ಪ್ರಜೆಗಳಿಗೆ ನಿರಾಕರಿಸುವುದು ಸರ್ವಾಧಿಕಾರೀ ಆಡಳಿತದ ಪ್ರಧಾನ ಲಕ್ಷಣಗಳಲ್ಲೊಂದು. ತನ್ನ ಕುರಿತೇ ನಕ್ಕುಬಿಟ್ಟರೆ ಎಂಬ ಅಳುಕು ಸರ್ವಾಧಿಕಾರಿಯನ್ನು ಸದಾಸರ್ವದಾ ಕಾಡುತ್ತಿರುತ್ತದೆ. ಅಡಾಲ್ಫ್ ಹಿಟ್ಲರನ ಹಯಾಮಿನಲ್ಲಿ ಒಂದು ಒಳ್ಳೆಯ ಕಾಮಿಡಿ, ಒಂದು ಉತ್ತಮ ವ್ಯಂಗ್ಯಚಿತ್ರ, ಒಂದೇ ಒಂದು ವಿಡಂಬನೆ, ಅಣಕು ಕುಹಕದ ಪ್ರಸಂಗವೂ ಜರ್ಮನ್ನರಿಗೆ ನೋಡಲು ಸಿಗಲಿಲ್ಲ ಎಂದಿದ್ದಾರೆ ಶಂಕರಪಿಳ್ಳೆ. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಘೋಷಣೆಯ ನಂತರ ’ವೀಕ್ಲಿ’ಯನ್ನು ಬಂದ್ ಮಾಡಿದ್ದ ಸಂದರ್ಭವದು.

ವ್ಯಂಗ್ಯಚಿತ್ರಗಳು ಮತ್ತು ತಮ್ಮನ್ನು ಕುರಿತು ತಾವೇ ನಗುವ ಸ್ವಸ್ಥಮನಸ್ಸಿನ ಪ್ರವವೃತ್ತಿಯ ಕುರಿತು ನೆಹರೂ ಮತ್ತು ಖುದ್ದು ಶಂಕರ ಪಿಳ್ಳೆ ಹೇಳಿರುವ ವಿವೇಕದಮಾತುಗಳು ಅರ್ಧ ಶತಮಾನದಷ್ಟು ಹಳೆಯವಾದರೂ ಅತ್ಯಂತ ಪ್ರಸ್ತುತ.

‘Don`t spare me Shankar… Hit me, hit me hard’ ಎಂದು ಶಂಕರ ಪಿಳ್ಳೆಯವರಿಗೆ ಹೇಳುತ್ತಿದ್ದರು ನೆಹರೂ. ಅವರ ಈ ಕೆಳಗಿನ ಮಾತುಗಳು ಇಂದಿಗೂ ಪ್ರಸ್ತುತ.

ನಮ್ಮಲ್ಲಿ ಬಹಳ ಮಂದಿ ಶಂಕರ್ ವ್ಯಂಗ್ಯಚಿತ್ರಕ್ಕಾಗಿ ನಿತ್ಯ ಕಾಯುತ್ತಿದ್ದೆವು. ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಆ ದಿನದ ಪ್ರಮುಖ ಸುದ್ದಿಯನ್ನು ಬಿಟ್ಟು ನೇರವಾಗಿ ಶಂಕರ್ ವ್ಯಂಗ್ಯಚಿತ್ರ ಇರುತ್ತಿದ್ದ ಪುಟ ತೆರೆಯುತ್ತಿದ್ದೆವು. ಮನಸ್ಸನ್ನು ಮುದಗೊಳಿಸುತ್ತಿದ್ದುದು ಮಾತ್ರವಲ್ಲ, ಪ್ರಚಲಿತ ವಿದ್ಯಮಾನಗಳಿಗೆ ಒಳನೋಟವನ್ನು ಕಟ್ಟಿಕೊಡುತ್ತಿದ್ದವು ಶಂಕರ್ ವ್ಯಂಗ್ಯಚಿತ್ರಗಳು.

“ಶಂಕರ್ ಬಿಡಿಸುತ್ತಿದ್ದ ವ್ಯಂಗ್ಯಚಿತ್ರಗಳು ಸಮಾಜಸೇವೆಯೇ ಹೌದು. ನಾವೆಲ್ಲ ಋಣಿಯಾಗಿರಬೇಕಾದ ಸೇವೆಯಿದು. ಒಂದಲ್ಲ ಒಂದು ಹಂತದಲ್ಲಿ ಸ್ವಾರ್ಥಕೇಂದ್ರಿತರೂ ಬೊಗಳೆ ಬಿಟ್ಟು ಬಡಾಯಿ ಕೊಚ್ಚಿಕೊಳ್ಳುವವರೂ ಆಗಿಬಿಡಬಹುದಾದ ನಮ್ಮಂತಹವರ ಕಣ್ಣಿಗೆ ಕಟ್ಟುವ ಪೊರೆಯನ್ನು
ಹರಿಯುವುದು ಒಳಿತಿನ ಕೆಲಸ” ಎಂದಿದ್ದರು ನೆಹರೂ.

ಅಂದಿನ ರಾಜಕಾರಣಿಗಳು ಮತ್ತು ಮಂತ್ರಿಗಳ ವಲಯದಲ್ಲಿ ಡೆಲ್ಲಿ ಡೆವಿಲ್ ಎಂದೇ ಹೆಸರಾಗಿದ್ದರು ಶಂಕರ ಪಿಳ್ಳೆ. ಅವರು ತಮ್ಮ ಪತ್ರಿಕೆಯ ಓದುಗರನ್ನು ಉದ್ದೇಶಿಸಿ ಬರೆದಿದ್ದ ಈ ಕೆಳಕಂಡ ಮಾತುಗಳನ್ನು ಮತ್ತೆ ನೆನೆಯಬೇಕಿದೆ.

ಕೇಶವನ್ ಶಂಕರ ಪಿಳ್ಳೆ

“ನೀವು ನಗಲು ನೆರವಾಗೋದು ನಮ್ಮ ಪತ್ರಿಕೆಯ ಉದ್ದೇಶ. ಜಗತ್ತಿನ ಇತರೆ ದೇಶಗಳ ಜನ ಸಂಘರ್ಷಗಳ ನಡುವೆಯೂ ಮನಸಾರೆ ನಗುತ್ತಿದ್ದಾರೆ. ವಿನೋದ ವಿಡಂಬನೆಗಳೇ ಇಲ್ಲದ ಪೀಳಿಗೆ ನಮ್ಮದು, ಒಂಥರಾ ವರ್ಣರಹಿತ ಬೊಂಬೆಗಳ ಮೆರವಣಿಗೆ. ನಗುವ ವರವನ್ನು ವರ್ಷಗಳ ಹಿಂದೆಯೇ ಕಳೆದುಕೊಂಡವರು. ಜಡ್ಡಿನಂತಹ ಗಾಂಭೀರ್ಯವನ್ನು ಗಳಿಸಿಕೊಂಡುಬಿಟ್ಟಿದ್ದೇವೆ. ಹೆಚ್ಚೆಂದರೆ ಕೃತಕ ಹುಸಿನಗೆ ಧರಿಸಿ ಹಲ್ಲು ಕಿರಿದೇವು. ಆಕಳಿಸಿ ಕಿಸಿಕಿಸಿ ನಕ್ಕೇವು. ಹೊಟ್ಟೆ ತುಂಬ ನಗುವುದೆಂದರೆ ಅಸಭ್ಯವೆಂದು ತಿಳಿದವರು ನಾವು, ನಮ್ಮ ಕುರಿತು ನಾವೇ ನಗುವುದಂತೂ ಇಲ್ಲವೇಇಲ್ಲ. ಇತರರ ಕುರಿತು ಮತ್ತು ನಿಮ್ಮನ್ನೇ ಕುರಿತು ನಗುವುದಕ್ಕೆ ನೆರವಾಗಲಿದೆ ಶಂಕರ್ಸ್ ವೀಕ್ಲಿ… ಭಾರೀ ಬೋರುಗಳ ದೇಶವಾಗಬಾರದು ನಾವು.. ಜನರನ್ನು ನಗಿಸೋ ಪಾಲಿಸಿ ಬಿಟ್ರೆ ಈ ಪ್ರಯತ್ನದ ಹಿಂದೆ ಬೇರೆ ಯಾವ ಪಾಲಿಸಿಯೂ ಇಲ್ಲ. ನಮ್ಮನ್ನು ಏನೆಂದು ಬೇಕಾದರೂ ಕರೀರಿ. ಸೋಷಲಿಸ್ಟರು, ಕಮ್ಯುನಿಸ್ಟರು, ಹುಚ್ಚರು ಇಲ್ಲವೇ ವಕ್ರರು… ಆದ್ರೆ ನಗುವಿಗೆ ಸೈದ್ಧಾಂತಿಕ ಇಲ್ಲವೇ ಇಸಮ್ಮುಗಳ ಅಂಟು ಇರೋದು ಸಾಧ್ಯ ಇಲ್ಲ.

ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲವೂ ಸಂಪೂರ್ಣ ಇಂಡಿಯನ್. ಇಂಗ್ಲಿಷ್ ಸಾಹೇಬರಿಗೆ ಬದಲಾಗಿ ಇಂಡಿಯನ್ ಸಾಹೇಬರುಂಟು. ನಮ್ಮ ದೌರ್ಬಲ್ಯಗಳು ರಾಷ್ಟ್ರೀಯ ದೌರ್ಬಲ್ಯಗಳು, ನಗಬೇಕು ಇಲ್ಲವೇ ಸಾಯಬೇಕು ನಾವು. ಹಾಸ್ಯಾಸ್ಪದ ಸ್ವಸಂತುಷ್ಟಿಯನ್ನು ನಗೆಯಲ್ಲಿ ಉಡಾಯಿಸಬೇಕು. ನಗಬೇಕೆಂದರೆ ತಲೆ ಕೆಳಗಾಗಿ ನಿಲ್ಲಬೇಕಿಲ್ಲ. ಪಾದ ಊರಿಯೇ ನಿಲ್ಲಿರಿ. ಬದುಕು ತಲೆ ಊರಿ ತಿರುಗುವುದನ್ನು ನೋಡಿ ಅದರ ಹತ್ತು ಹಲವು ಮುಖಗಳನ್ನು ಕಂಡು ಮನಸಾರೆ ನಗೋಣ.

“ಆಹಾ ಎಂಥಾ ಬದುಕಿದು! ಬುಶ್ಟ್ ಶರ್ಟ್ ನಾಗರಿಕತೆ, ಕಾಕ್ಟೇಲ್ಸ್ ಮತ್ತು ಮೊನಾಲಿಸಾ ನಗೆ ಹೊತ್ತ ಮೇಮ್ ಸಾಹೇಬ್, ಸೆಕ್ರೆಟೆರಿಯಟೀನಲ್ಲಿ ಖಾಲಿ ರುಂಡಗಳನ್ನು ಹೊತ್ತು ತಿರುಗುವ ಭ್ರಷ್ಟ ಮುಂಡಗಳು. ಕಪಟ ನಗುವಿನ ಕಳ್ಳಸಂತೆಕೋರರು, ಜನರ ಆದಾಯ ವೆಚ್ಚಗಳನ್ನು ನಿಯಂತ್ರಿಸುವ ಬಿಗ್ ಬಿಸಿನೆಸ್ಸುಗಳು, ಸಡಗರದ ಕುಪ್ಪಳಿಕೆಯ ರಾಜಕಾರಣಿಗಳು, ಅರಮನೆ ಕ್ರಾಂತಿಗಳ ಪ್ರಮೋಟರುಗಳು, ದೇಶೀ ರುಚಿಗಳು, ವಿದೇಶೀ ವಿಲಾಸಗಳು, ಯಾತಕ್ಕಾಗಿ ಇಂಥ ಕತ್ತೆ ಚಾಕರಿಯೆಂದು ಅರಿಯದೆ ಗುಲಾಮಗಿರಿ ಮಾಡ್ತಿರೋ ಶ್ರಮಜೀವಿ, ಏರುತ್ತಿರುವ ಸಂಬಳ-ಕೂಲಿಯ ಜೊತೆಜೊತೆಗೇ ಜಿಗಿಯುತ್ತಿರುವ ದರಗಳು, ಲೈಸೆನ್ಸ್ ಇರೋ ಲಂಚಗುಳಿತನ ಮತ್ತು ವಿಶೇಷಾಧಿಕಾರ ಎಂಬಂತಹ ಲಾಭಬಡುಕತನ, ಅರೆನಿಯಂತ್ರಿತ ಬದುಕಿನ ಅರಾಜಕತೆ, ಜನಿಸಲು ಒಲ್ಲದ ಸಂಸ್ಕೃತಿಯೊಂದರ ಎಲ್ಲ ತಮಾಷೆ ಮತ್ತು ವಿಕಟ ಹಾಸ್ಯ. ಬದುಕನ್ನು ನೋಡಬೇಕಿದ್ದರೆ ಅದು ಆರಾಮವಾಗಿ ಹರಿಯುವುದನ್ನು ಕಾಣಬೇಕೇ ವಿನಾ ಅದರ ಪಾರ್ಶ್ವನೋಟವನ್ನಷ್ಟೇ ಕಂಡರೆ ಸಾಲದು. ಒಂದಷ್ಟು ಪೀಡನೆ ಇಲ್ಲವೇ ಕೇಡಿಗತನ, ಪ್ರಾಯಶಃ ಪ್ರೀತಿ ಸಹಿಷ್ಟುತೆಗಿಂತ ಹೆಚ್ಚು ಪೀಡನೆಯೇ ಎನಿಸೀತು. ಆದರೆ ನಗೆಗೆ ಲಾಯಕ್ಕಾದ ಎಲ್ಲವನ್ನು ಕಂಡು ನಗಲೇಬೇಕು”.


ಇದನ್ನೂ ಓದಿ: ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...