ಚೆನ್ನೈಯಲ್ಲಿ ಕೊರೊನಾ ಸಾಂಕ್ರಮಿಕ ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ರಾಜಧಾನಿಯನ್ನು ಇನ್ನೂ ಸ್ವಲ್ಪ ದಿನ ಸಂಪೂರ್ಣ ಲಾಕ್ಡೌನ್ ಮಾಡುವ ಕುರಿತು ಸರ್ಕಾರ ಏಕೆ ಚಿಂತಿಸಬಾರದು? ಎಂದು ಪ್ರಶ್ನಿಸಿದೆ.
ತಮಿಳುನಾಡು ಸರ್ಕಾರ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಹೊರತಾಗಿಯೂ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಇದರಿಂದಾಗಿ ಮಹಾನಗರ ಮತ್ತು ಅದರ ಹೊರ ವಲಯದಲ್ಲಿ ಪ್ರಸ್ತುತ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ನ್ಯಾಯಮೂರ್ತಿಗಳಾದ ವಿನೀತ್ ಕೊಥಾರಿ ಮತ್ತು ಆರ್. ಸುರೇಶ್ ಕುಮಾರ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
“ನ್ಯಾಯಾಲಯ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೊಂಡಿಲ್ಲ, ಸ್ವಯಂ ಪ್ರೇರಿತವಾಗಿಯೂ ವಿಚಾರಣೆಗೆ ಮುಂದಾಗಿಲ್ಲ. ಬದಲಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ನಾವೂ ಸಹ ಈ ನಗರದ ಪ್ರಜೆಗಳಾಗಿ ಲಾಕ್ ಡೌನ್ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದೇವೆ.” ಎಂದು ನ್ಯಾಯಪೀಠ ಹೇಳಿದೆ.
“ಹೀಗಾಗಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸಂಪೂರ್ಣ ಲಾಕ್ಡೌನ್ ಅಥವಾ ಕರ್ಫ್ಯೂ ವಿಧಿಸುವ ಕುರಿತು ಸರ್ಕಾರ ಯಾವುದಾದರೂ ಯೋಜನೆ ರೂಪಿಸಿದೆಯೇ?” ಎಂದು ಹೈಕೋರ್ಟ್ ಬಯಸಿದೆ.
ಚೆನ್ನೈ ಮಹಾನಗರದಲ್ಲಿ ಈವರೆಗೆ 26,000 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಸುಮಾರು 326 ಜನ ಮೃತಪಟ್ಟಿದ್ದಾರೆ.
ಓದಿ: ವಲಸೆ ಕಾರ್ಮಿಕರ ಕಷ್ಟ ನಿವಾರಣಗೆ ಕೇಂದ್ರ, ರಾಜ್ಯ ಸರ್ಕಾರಗಳು ಮಾಡಿದ್ದೇನು?: ಮದ್ರಾಸ್ ಹೈಕೋರ್ಟ್ ಪ್ರಶ್ನೆ


