Homeಅಂಕಣಗಳುಜೆಎನ್‍ಯು, ಜಾಮಿಯಾ ಮತ್ತು ಬೀದರ್‌ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?

ಜೆಎನ್‍ಯು, ಜಾಮಿಯಾ ಮತ್ತು ಬೀದರ್‌ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?

- Advertisement -
- Advertisement -

ಎಲ್ಲಾ ಮುಗದ ಮ್ಯಾಲ ಬರತಾರ. ಬೇಕಾದವರನ್ನ ಸಟಕ್ಕನ ಹಿಡೀತಾರ. ಬ್ಯಾಡಾದವರು ಕಣ್ಣೆದುರಿಗೆ ಇದ್ದರೂ ನೋಡದಂಗ ಇರತಾರ. ಎಲ್ಲಾ ಗೊತ್ತಿದ್ದೂ ತಪ್ಪು ಮಾಡತಾರೋ, ಅಥವಾ ಅವರಿಗೆ ತಿಳಿಯಂಗಿಲ್ಲೋ? ಸ್ವಂತ ಬುದ್ಧಿಯಿಂದ ಮಾಡತಾರೋ ಅಥವಾ ಯಾರದರ ಒತ್ತಡದಾಗ ಮಾಡತಾರೋ?

ಈ ಪ್ರಶ್ನೆಗಳಿಗೆ ಉತ್ತರ ಸರಳ. ಅವರು ದಡ್ಡರೇನಲ್ಲ. ಕಾಲಕ್ಕೆ ತಕ್ಕ ಹಂಗ ಬದಲಾಗೋ ಬುದ್ಧಿವಂತರು. ಆದರ ಅವರಿಗೆ ಸ್ವತಂತ್ರ ಇಲ್ಲ. ಅವರು ಆಳುವವರ ಹಂಗಿಗೆ ಬಿದ್ದವರು. ರಾಜಕೀಯ ಕಾರಣಕ್ಕಾಗಿ ನಿರ್ಧಾರ ಬದಲಿಸೋರು. ಅವರ ಕೆಲಸ ವೃತ್ತಿಪರತೆಗೆ ತಕ್ಕಂಗ ಅಲ್ಲ. ಅವರ ನಿಯತ್ತು ವಸ್ತು ನಿಷ್ಠ ಅಲ್ಲ. ವ್ಯಕ್ತಿ ನಿಷ್ಠ.
ಯಾಕ ಹಿಂಗ?

ಯಾಕಂದರ ಅವರು ರಾಜಕಾರಣಿಗಳ ಮುಲಾಜಿನ್ಯಾಗ ಇರತಾರ. ಅವರ ವರ್ಗಾವಣೆ- ನೇಮಕ- ಬದಲಾವಣೆಗೆ ಅವರು ಅಧಿಕಾರಿಗಳ ಕಡೆ ಹೋಗಂಗಿಲ್ಲ, ಎಮ್ಮೆಲ್ಲೆ ಸಾಹೇಬರ ಕಡೆ ಹೋಗತಾರ. ಅವರು ಹೂಂ ಅಂದರ ಇರತಾರ, ಇಲ್ಲಾ ಅಂದರ ಹೋಗತಾರ. ಅವರಿಗೆ ಬೇಕಾದಲ್ಲೆ, ಬೇಕಾಷ್ಟು ದಿನಾ ಇರತಾರ. ಅವರ ಮನಸು ತಗದರ ಹೋಗತಾರ.

ಹಿಂಗಿರುವಾಗ ಶಾಸಕರು ತಮ್ಮ ಕ್ಷೇತ್ರದ ಅನಭಿಷಕ್ತ ದೊರೆಯಾಗತಾರ. ದ್ವೇಷದ ರಾಜಕಾರಣ ಮಾಡತಾರ. ಬೇಕಾದವರನ್ನ ಒದ್ದ ಒಳಗ ಹಾಕಸತಾರ. ಬ್ಯಾಡಾದವರನ್ನ ಊರಾಗ ಮೆರಸತಾರ. ಒಮ್ಮೆ ಏನಾತಪಾ ಅಂದರ ಒಬ್ಬ ಪ್ರಭಾವಿ ರಾಜಕಾರಣಿಯ ಕ್ಷೇತ್ರದೊಳಗ ಒಂದು ಅತ್ಯಾಚಾರ ಪ್ರಕರಣ ಆತು. ಅದರ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಬ್ಯಾರೆ ಬ್ಯಾರೆ ಕೋಮಿನವರು ಇದ್ದರು. ಆರೋಪಿ ಶಾಸಕರ ಕೋಮಿನವರು ಆಗಿದ್ದರು. ಮುಂದ ಜಗಳ ಆಗತದ ಅಂತ ಹೇಳಿ ಶಾಸಕರು ತಲಿ ಓಡಿಸಿದರು. ಪೊಲೀಸ ಇನ್ಸಪೆಕ್ಟರ್‍ನ ಕರದು ಪ್ರಕರಣ ಬದಲಾವಣೆ ಮಾಡಿಸಿದರು. ಅತ್ಯಾಚಾರವನ್ನ ಗುಂಪು ಅತ್ಯಾಚಾರ ಅಂತ ಬದಲಾಯಿಸಲಾತು. ಸಂತ್ರಸ್ತೆಯ ಜಾತಿಯ ಹುಡುಗನೊಬ್ಬನ ಹೆಸರು ಅದರಾಗ ಸೇರಿಸಲಾಯಿತು. ಸಾರ್ವಜನಿಕ ಶಾಂತಿಗೆ ಭಂಗ ಬರಲಾರದಂಗ ಮಾಡೇವಿ ಅಂತ ಶಾಸಕರು ಹೇಳಿಕೊಂಡು ಅಡ್ಡಾಡಿದರು. ಸತ್ಯ ಏನಂದರ ಹೊಸದಾಗಿ ಹೆಸರು ಸೇರಿಸಿದ ಹುಡುಗ ಆ ಊರು ಬಿಟ್ಟು 20 ವರ್ಷ ಆಗಿತ್ತು. ಆತ ಕೆಲಸ ಹುಡುಕಿಕೊಂಡು ಬಾಂಬೆಗೆ ಹೋಗಿದ್ದ. ಅವನಿಗೆ ಈ ಪ್ರಕರಣದ ಬಗ್ಗೆ ಗೊತ್ತ ಇರಲಿಲ್ಲ.

ಆತ ಪ್ರಕರಣ ನಡದ ದಿವಸ ಊರಾಗ ಇರಲಿಲ್ಲ ಅಂದದ್ದಕ್ಕ, ಮತ್ತು ಇತರ ಕಾರಣಗಳಿಗೆ ಆ ಪ್ರಕರಣ ಬಿದ್ದು ಹೋತು. ನಿಜವಾದ ಆರೋಪಿ ಹೊರಗ ಬಂದ.

ಇಷ್ಟೆಲ್ಲಾ ಯಾಕ ಆತು ಅಂದರ ಆ ಇನ್ಸಪೆಕ್ಟರ್ ಆ ಶಾಸಕರ ಶಿಫಾರಸಿನ ಮೇಲೆ ಆ ಪೊಲೀಸ ಠಾಣೆಗೆ ಬಂದಿದ್ದ. ಆತ ಕಾನೂನಿಗೆ – ವ್ಯವಸ್ಥೆಗೆ- ಹಿರಿಯ ಅಧಿಕಾರಿಗಳ ಸಕಾರಣ ಸಲಹೆಗೆ ತಲೆ ಬಾಗದೇ ತನ್ನನ್ನು ತಂದ ಶಾಸಕರಿಗೆ ತಲೆ ಬಾಗಿದ. ಹಿಂಗ ಮಾಡೋ ಶಿಫಾರಸಿಗೆ ಮಿನಿಟ್ ಸಿಸ್ಟಂ ಅಂತ ಹೆಸರು. ಅದು ಹೋಗದ ಹೊರತು ಆ ಇಲಾಖೆ ಉದ್ಧಾರ ಸಾಧ್ಯ ಇಲ್ಲ ಅಂತ ತಿಳಿದವರ ಅಂಬೋಣ.

ಈ ಶಿಫಾರಸು ಮಾಡಬಾರದು ಅಂತ ಒಂದು ಕಾನೂನು ಅದ. ಅದು ಎಲ್ಲಿಂದ ಬಂತಪಾ ಅಂದರ, ಸುಪ್ರೀಂ ಕೋರ್ಟಿನ ಆದೇಶದಿಂದಾ ಬಂತು.

ಪದ್ಮಶ್ರೀ ಪ್ರಕಾಶ ಸಿಂಗ ಅವರು 1996 ದಾಗ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಾಗಿ ನಿವೃತ್ತರಾದರು. ಅದೇ ವರ್ಷ ಅವರು ಸುಪ್ರೀಂಕೋರ್ಟಿನ್ಯಾಗ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.

ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನಿಂದ 2007ದಾಗ ಒಂದು ತೀರ್ಪು ಬಂತು. ಅದರ ಪ್ರಕಾರ ಪೊಲೀಸ ವ್ಯವಸ್ಥೆಯ ರಾಜಕೀಕರಣ ನಿಲ್ಲಬೇಕು. ಪೊಲೀಸರ ವರ್ಗಾವರ್ಗಿ, ವಿವಿಧ ಸ್ಥಾನಗಳಿಗೆ ನೇಮಕ ಮುಂತಾದವು ಕೇವಲ ಅವರವರ ಸಾಮಥ್ರ್ಯದ ಮ್ಯಾಲ ಇರಬೇಕು. ಅವರ ರಾಜಕೀಯ ನಿಲುವುಗಳಿಗೆ ತಕ್ಕಂಗ ಇರಬಾರದು. ಇದನ್ನ ಸಾಧಿಸಲಿಕ್ಕೆ ವಲಯ ಹಾಗೂ ರಾಜ್ಯ ಮಟ್ಟದಾಗ ಹಿರಿಯ ಅಧಿಕಾರಿಗಳ ಸಮಿತಿ ನೇಮಕ ಮಾಡಬೇಕು, ಮಾನವ ಸಂಪನ್ಮೂಲಕ್ಕ ಸಂಬಂಧಪಟ್ಟಂಗ, ವರ್ಗಾವರ್ಗಿ ಸಂಬಂಧಪಟ್ಟಂಗ ಎಲ್ಲಾ ನಿರ್ಧಾರ ಅವರ ತೊಗೋಬೇಕು ಅಂತ ತೀರ್ಪು ಬಂತು. ಯಾವುದೇ ಅಧಿಕಾರಿನ ಎರಡು ವರ್ಷಕ್ಕಿಂತ ಕಮ್ಮಿ ಸಮಯದಾಗ ವರ್ಗ ಮಾಡಬಾರದು ಅಂತ ಆದೇಶ ಬಂತು.

ಇದನ್ನ ಒಂದು ವರ್ಷದ ತನಕಾ ಕಟ್ಟುನಿಟ್ಟಿನ ಆದೇಶ ಅಂತ ಹೇಳಿ ಪಾಲಸಬೇಕು. ನಂತರ ಇದೇ ಮಾದರಿಯ ಕಾನೂನು ರಾಜ್ಯ ಶಾಸನಸಭೆಯೊಳಗ ಪಾಸು ಮಾಡಬೇಕು ಅಂತ ಆತು. ಅದಕ್ಕ ಕರ್ನಾಟಕದ ಘನ ಸರಕಾರ ಪಟಕ್ಕನ `ಎಸ್ ಸರ್’ ಅಂತ ಹೇಳಿತು. `ಹಂಗ ಮಾಡತೇವಿ’ ಅಂತ ಹೇಳಿ ಬರವಣಿಗೆಯೊಳಗ ಮಾತು ಕೊಟ್ಟಿತು.
ಮೊದಲ ಎರಡು ವರ್ಷ ಅಜಯ ಕುಮಾರ ಸಿಂಗ ಪೊಲೀಸ ಮಹಾ ನಿರ್ದೇಶಕರು ಇದ್ದರು, ಎಸ್‌. ಎಮ್ ಜಾಮದಾರ ಗೃಹ ಇಲಾಖೆ ಕಾರ್ಯದರ್ಶಿ ಇದ್ದರು. ಆವಾಗ ಎಲ್ಲಾ ಸುಪ್ರೀಂಕೊರ್ಟಿನ ಆದೇಶ ಪ್ರಕಾರ ನಡೀತು. ಸಿಂಗ ನಿವೃತ್ತರಾದರು, ಜಾಮದಾರ ಅವರು ವರ್ಗಾವಣೆ ಆದರು. ಆ ನಂತರ ಬಂದ ಹಿರಿಯ ಅಧಿಕಾರಿಗಳಿಗೆ ಅದು ಇಷ್ಟ ಇರಲಿಲ್ಲ. ಅವರು ಮತ್ತ ಮೊದಲಿನ ಹಂಗ ರಾಜಕೀಯ ನಾಯಕರ ಮಾತು ಕೇಳಿ ವರ್ಗಾವಣೆ ಶುರು ಮಾಡಿದರು.

ಈಗ ಮತ್ತ ಹಂಗ ಆಗೇದ. ದೆಹಲಿಯ ಜೆಎನ್‍ಯುದಾಗ, ಜಾಮಿಯಾದಾಗ, ಉತ್ತರ ಪ್ರದೇಶದಾಗ, ಬೀದರಿನ ಶಾಹೀನ ಸಾಲಿ ಪ್ರಕರಣದಾಗ, ಪೊಲೀಸರು ವಸ್ತುನಿಷ್ಠವಾಗಿ ನಡೆದುಕೊಳ್ಳದೇ ವ್ಯಕ್ತಿ ನಿಷ್ಠವಾಗಿ ನಡೆದುಕೊಂಡಿದ್ದಕ್ಕ ಅವರು ತಪ್ಪು ಮಾಡಲಾರದ ಸಜ್ಜನರ ವಿರುದ್ಧವಾಗಿ, ಅಪರಾಧಿಗಳ ಪರವಾಗಿ ನಡಕೊಂಡಾರ.

ಯಾಕಂದರ ನಾವು ಸುಪ್ರೀಂಕೋರ್ಟನ್ನ ನಮಗ ಬೇಕಂದಾಗ ಉಪಯೋಗಿಸತೇವಿ. ನಮಗ ಅನುಕೂಲ ಇದ್ದಾಗ ಪಾಲಸತೇವಿ, ಇಲ್ಲದಾಗ ಬಿಡತೇವಿ ಅದಕ್ಕ ಇಷ್ಟಲ್ಲಾ ರಂಜ್-ತಂಜ್ ಆಗಲಿಕ್ಕೆ ಹತ್ತೇದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...