Homeಕರ್ನಾಟಕಸ್ಪೀಕರ್ ಕೇವಲ ಮೂರು ಜನರನ್ನು ಮಾತ್ರ ಅನರ್ಹ ಮಾಡಿದ್ದೇಕೆ? ಯಡ್ಡಿ ಸಿಎಂ ಹಾದಿಗೆ ಅಡ್ಡಿ ಯಾರು...

ಸ್ಪೀಕರ್ ಕೇವಲ ಮೂರು ಜನರನ್ನು ಮಾತ್ರ ಅನರ್ಹ ಮಾಡಿದ್ದೇಕೆ? ಯಡ್ಡಿ ಸಿಎಂ ಹಾದಿಗೆ ಅಡ್ಡಿ ಯಾರು ಗೊತ್ತಾ?

- Advertisement -
- Advertisement -

ಸ್ಪೀಕರ್ ಕೇವಲ ಮೂರು ಜನರನ್ನು ಮಾತ್ರ ಅನರ್ಹ ಮಾಡಿದ್ದೇಕೆ? ಯಡ್ಡಿ ಸಿಎಂ ಹಾದಿಗೆ ಅಡ್ಡಿ ಯಾರು? ಇಂದು ಸಂಜೆ ಸ್ಪೀಕರ್ ರಮೇಶ್ ಕುಮಾರ್ ರವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ ರವರನ್ನು ಮಾತ್ರ 15ನೇ ವಿಧಾನಸಭಾ ಅವಧಿ ಮುಗಿಯುವ 2023ರವರೆಗೂ ಅವರ ಶಾಸಕ ಸ್ಥಾನಕ್ಕೆ ಅನರ್ಹ ಮಾಡಿದ ನಂತರ ಈ ಮೇಲಿನ ಪ್ರಶ್ನೆ ನಿಮಗೂ ಬಂದಿರಬಹುದು.

ಹೌದು ಒಮ್ಮೆಗೆ ರಾಜೀನಾಮೆ ಕೊಟ್ಟಿರುವ ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದರೆ ಯಾವುದಾದರೂ ಕ್ರಮಕ್ಕೆ ದಾರಿ ಸುಗಮವಿತ್ತು. ಆದರೆ ಈಗಹಾಗಾಗುತ್ತಿಲ್ಲ. ಸ್ಪೀಕರ್ ಕ್ರಮ ತೆಗೆದುಕೊಳ್ಳುವವರೆಗೆ ಹೊಸ ಸರ್ಕಾರ ಮಾಡುವುದು ಬೇಡ ಎಂದು ಸ್ಪಷ್ಟ ಸಂದೇಶ ನೀಡಿದ್ದ ಬಿಜೆಪಿ ಹೈಕಮಾಂಡ್ ಗೆ ಇನ್ನೂಗೊಂದಲ ಮುಂದುವರೆಯುತ್ತಿದೆ. ಅಷ್ಟರ ಮಟ್ಟಿಗೆ ಸ್ಪೀಕರ್ ರಮೇಶ್ ಕುಮಾರ್ ಚಾಣಾಕ್ಷ ನಡೆ ಇಟ್ಟಿದ್ದಾರೆ.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಉಸ್ತುವಾರಿ ಸಿಎಂ ಕುಮಾರಸ್ವಾಮಿ ಒಂದು ಮಾತು ಹೇಳಿದ್ದರು. ಅದೇನೆಂದರೆ ಮುಂದೆ ಬರುವ ಸರ್ಕಾರವೂ ಕೂಡ ಅಸ್ಥಿರ ಸರ್ಕಾರವೇ ಆಗಲಿದ್ದು ಎಷ್ಟು ದಿನ ಉಳಿಯುತ್ತೆ ಅಂತ ಖಚಿತವಾಗಿ ಹೇಳಲ್ಲಿಕ್ಕೆ ಬರುವುದಿಲ್ಲ, ಏನು ಬೇಕಾದರೂ ಆಗಬಹುದು ಎಂದಿದ್ದರು. ಆ ಮಾತನ್ನು ನಿಜ ಮಾಡುವಂತೆ ಇಂದು ಸ್ಪೀಕರ್ ರವರ ತೀರ್ಮಾನ ಹೊರಬಿದ್ದಿದೆ.

ಸ್ಪೀಕರ್ ಇಂದು ಕೇವಲ 3 ಶಾಸಕರನ್ನು ಅನರ್ಹತೆ ಮಾಡಿದ್ದರಿಂದ, ಉಳಿದ ಅತೃಪ್ತರ ನಡೆಯ ಬಗ್ಗೆ ಕುತೂಹಲ ಉಳಿಯುವಂತೆ ಆಗಿದೆ. ಈ ಮೂವರು ಸುಪ್ರೀಂಕೋರ್ಟ್ ಗೆ ಹೋಗುವ ಅವಕಾಶವಿದ್ದರೂ ಸಹ ಸ್ಪೀಕರ್ ತಮ್ಮ ಆದೇಶ ಕೋರ್ಟಿನಲ್ಲಿ ಅಷ್ಟು ಸುಲಭಕ್ಕೆ ಬಿದ್ದು ಹೋಗದಂತೆ ಬಹಳ ಎಚ್ಚರಿಕೆ ವಹಿಸಿದ್ದಾರೆ. ಇದರಿಂದಉಳಿದ ಶಾಸಕರು ಭಯಗೊಂಡು ವಾಪಸ್ ಬರಬಹುದು ಅಥವಾ ಬಿಜೆಪಿಗೆ ಬೆಂಬಲ ಕೊಡಲು ಹಿಂದೇಟು ಹಾಕಬಹುದು ಎಂಬುದು ಮೈತ್ರಿ ಪಕ್ಷಗಳ ಮೊದಲನೇ ಲೆಕ್ಕಾಚಾರ.

ಎರಡನೆಯದಾಗಿ ಈ ರೀತಿಯ ವಿಳಂಬದಿಂದ ಕುದ್ದು ಹೋಗುತ್ತಿರುವ, ಇದರಿಂದ ಹೆಚ್ಚು ನೊಂದುಕೊಂಡಿರುವ ವ್ಯಕ್ತಿಯೆಂದರೆ ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ. ಸಿಎಂ ಆಗಿಯೇ ತೀರಬೇಕೆಂಬ ಧಾವಂತದಲ್ಲಿದ್ದ ಯಡಿಯೂರಪ್ಪನವರ ತಾಳ್ಮೆ ಹೆಚ್ಚು ಕಾಲ ಉಳಿಯುತ್ತದಾ ಹೇಳಲು ಬಾರದು. ಅತ್ತ ಹೈಕಮಾಂಡ್ ಕೂಡ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ಘೋಷಿಸಿಲ್ಲ, ಇತ್ತ ಎಲ್ಲಾ ಶಾಸಕರ ಅನರ್ಹತೆ ದೂರು ಬೇಗ ಬಗೆಹರಿಯುತ್ತಿಲ್ಲವಾದ್ದರಿಂದ ಬಿಜೆಪಿಯೊಳಗೆಯೇ ಭಿನ್ನಮತ ಸ್ಫೋಟಗೊಳ್ಳಬಹುದೆಂಬುದು ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಲೆಕ್ಕಾಚಾರವಾಗಿದೆ.

ಹೌದು. ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ 76 ವರ್ಷದ ಯಡಿಯೂರಪ್ಪನವರಿಗೆ ಅಧಿಕಾರ ಕೊಡುವುದು ಮೋದಿ-ಶಾರು ಜಾರಿಗೆ ತಂದಿರುವ ಬಿಜೆಪಿಯ ಹೊಸ ನೀತಿಗೆ ವಿರುದ್ಧವಾದುದು. ಆದರೆ ಯಡಿಯೂರಪ್ಪನವರಿಗೆ ಅಧಿಕಾರ ಕೊಡದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಇದಕ್ಕೆ ಸ್ಪಷ್ಟ ಪುರಾವೆಯೂ ಈಗಾಗಲೇ ಸಿಕ್ಕಿದೆ. 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನೋಡಿ ಬಿಜೆಪಿ ಅನುಭವಿಸಿದ್ದಾಗಿದೆ.

ಇಂತಹ ದ್ವಂದ್ವ ವೈರುಧ್ಯಗಳ ಪರಿಸ್ಥಿತಿ ಈಗ ಬಿಜೆಪಿಯದ್ದಾಗಿದೆ. ಇದನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಎಂಜಾಯ್ ಮಾಡುತ್ತಾ ನೋಡುತ್ತಿದೆ. ನಾವು ಸರ್ಕಾರ ರಚಿಸದಿದ್ದರೂ ಪರವಾಗಿಲ್ಲ, ನಮ್ಮ ಸರ್ಕಾರ ಬೀಳಿಸಿ ತೊಂದರೆ ಕೊಟ್ಟ ಬಿಜೆಪಿಯವರಿಗೆ ತೊಂದರೆ ಕೊಡಬೇಕೆನ್ನುವ ತಂತ್ರವನ್ನು ಆ ಎರಡುಪಕ್ಷಗಳು ಹೂಡಿದ್ದಂತಿದೆ.

ಇನ್ನು ಬಿಜೆಪಿ 105+ಒಬ್ಬರು ಪಕ್ಷೇತರ ಶಾಸಕರನ್ನು ನಂಬಿಕೊಂಡು ಸರಳ ಬಹುಮತವನ್ನಿಟ್ಟುಕೊಂಡು ಸರ್ಕಾರ ರಚನೆ ಮಾಡುವುದು ಅಪಾಯಕಾರಿ. ಅಂತಹ ಸನ್ನಿವೇಶದಲ್ಲಿ ಏನಾಗಬಹುದೆಂಬ ಪಾಠವನ್ನು ಈಗಾಗಲೇ ಜೆಡಿಎಸ್ ಕಾಂಗ್ರೆಸ್ ಗೆ ಸ್ವತಃ ಬಿಜೆಪಿಯೇ ಕಲಿಸಿದೆ. ಅದೇ ಪರಿಸ್ಥಿತಿ ತಮಗೆ ಬರುವುದಿಲ್ಲವೆನ್ನುವುದಕ್ಕೆ ಯಾವ ಗ್ಯಾರಂಟಿ. ಆಗಲಿ ಡಿಸಿಎಂ ಹುದ್ದೆಯ ವಿಚಾರದಲ್ಲಿ ಬಿಜೆಪಿಯೊಳಗೆ ದೊಡ್ಡ ಚರ್ಚೆಗಳು ಶುರುವಾಗಿ ಮುಂದೆ ಅಧಿಕಾರಕ್ಕಾಗಿ ಎಂತಹ ಪೈಪೋಟಿ ಇರುತ್ತದೆಎಂಬುದರ ಟ್ರೇಲರ್ ತೋರಿಸುತ್ತಿದ್ದಾರೆ. ಪಿಕ್ಚರ್ ಇನ್ನು ಹಾರಿಬಲ್ ಆಗಿರುವುದರಲ್ಲಿ ಸಂಶಯವಿಲ್ಲ.

ಇದೆಲ್ಲಾ ಕಷ್ಟ ಇರುವುದರಿಂದ ‘ರಾಷ್ಟ್ರಪತಿ ಆಡಳಿತ ತರೋಣ, ನೇರವಾಗಿ ಚುನಾವಣೆಗೆ ಹೋಗೋಣ’ ಎಂದರೆ ಅದಕ್ಕೆ ಯಡಿಯೂರಪ್ಪ ಸುತರಾಂ ಒಪ್ಪುವುದಿಲ್ಲ. ಇನ್ನು ಆರು ತಿಂಗಳು ಅಲ್ಲ ಇನ್ನು ದಿನ ಕಾಯುವುದು ಸಹ ಅವರಿಂದ ಸಾಧ್ಯವಿಲ್ಲ. ಎಷ್ಟೆಲ್ಲಾ ಕಷ್ಟಪಟ್ಟು ಪಕ್ಷ ಕಟ್ಟಿ, ಒಮ್ಮೆ ಅಧಿಕಾರಕ್ಕೆ ತಂದು ಎರಡೇ ವರ್ಷದಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು. ಅಲ್ಲಿಂದ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುತ್ತಿರುವ ಯಡಿಯೂರಪ್ಪ ಕಳೆದ ವರ್ಷ ಮುಖ್ಯಮಂತ್ರಿಯೂ ಆಗಿ ಕೇವಲ 3 ದಿನಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದ ಅವಮಾನವನ್ನು ಇನ್ನು ಮರೆತಿಲ್ಲ.

ಇನ್ನು ಚುನಾವಣೆಯಲ್ಲಿ ಬಿಜೆಪಿ ಬರುತ್ತದೆ ಎಂಬುದಕ್ಕೆ ಗ್ಯಾರಂಟಿಯೇನು? ರಾಜ್ಯದ ಚುನಾವಣೆಗಳು ನಡೆಯುವುದು ರಾಜ್ಯದ ಇಶ್ಯೂಗಳ ಮೇಲೆ. ಹಾಗೆ ನೋಡಿದರೆ ರಾಜ್ಯಕ್ಕೆ ಬಿಜೆಪಿ ಮಾಡಿದ್ದು ಅಷ್ಟರಲ್ಲೇ ಇದೆ. ಇನ್ನು ಈ ವರ್ಷ ಆಪರೇಷನ್ ಕಮಲ ಮಾಡುವ ಮೂಲಕ ರಾಜ್ಯ ಸರ್ಕಾರ ಕೆಡವಿರುವ ಅಪವಾದವೂ  ಬಿಜೆಪಿಯ ಮೇಲಿದೆ. ಜನ ಅತೃಪ್ತ ಶಾಸಕರ ಬಗ್ಗೆ ವಿಶೇಷ ಒಲವು ತೋರುತ್ತಾರೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಈ ಮುಖವನ್ನಿಟ್ಟುಕೊಂಡು ಚುನಾವಣೆಗೆ ಹೋದರೆ ಗೆಲುವು ಸುಲಭವಿಲ್ಲ. ಮುಖ್ಯವಾಗಿ ಒಕ್ಕಲಿಗ ಸಮುದಾಯದವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಕೋಪದಿಂದ ಕುದಿಯುತ್ತಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಗೆ ಅನುಕಂಪದ ವಾತವಾರಣವಿದೆ ಎಂಬುದು ಬಿಜೆಪಿಗೂ ಗೊತ್ತು.

ಸರಿ ಅಂತೂ ಚುನಾವಣೆಗೆ ಹೋಗಿ ಗೆದ್ದರೂ ಯಡಿಯೂರಪ್ಪನವರೆ ಮುಖ್ಯಮಂತ್ರಿ ಎಂಬುದಕ್ಕೆ ಗ್ಯಾರಂಟಿಯೇನು? ಬಿಜೆಪಿಯಲ್ಲಿ ಸಂಘಪರಿವಾರದ ಹಿನ್ನೆಲೆಯ, ಆದರೆ ಭ್ರಷ್ಟಾಚಾರದ ಹಿನ್ನೆಲೆಯಿರದ ವ್ಯಕ್ತಿ ಸಿಎಂ ಆದರೆ ಒಳ್ಳೆಯದು ಎಂಬುದು ಹೈಕಮಾಂಡ್ ಆಸೆ. ಹಾಗಾದಾಗ ಮಾತ್ರ ಇಡೀ ದಕ್ಷಿಣ ಭಾರತದಲ್ಲಿ ಪ್ರವೇಶ ಪಡೆಯಲುಸಾಧ್ಯ ಎಂಬ ನಿಲುವು ಅವರದು. ಅದಕ್ಕೆ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಯಡಿಯೂರಪ್ಪನವರನ್ನೇ ಸಿಎಂ ಮಾಡಿ ಏನಾದರೂ ಅವಾಂತರವಾಗಿ ಮತ್ತೆ ಚುನಾವಣೆಗೆ ಹೋದರೆ ಗೆಲ್ಲುವುದು ಸಾಧ್ಯವಿಲ್ಲ. ಇನ್ನು ಯಡಿಯೂರಪ್ಪನವರನ್ನು ಸಿಎಂ ಮಾಡದಿದ್ದರೆ ಪಾರ್ಟಿ ಹೋಳಾಗುವುದರಲ್ಲಿ ಎರಡು ಮಾತಿಲ್ಲ. ತ್ರಿಶಂಕು ಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಒದ್ದಾಡುತ್ತಿದೆ.

ಕೊನೆಯದಾಗಿ ರಾಜೀನಾಮೆ ಕೊಟ್ಟು, ಸರ್ಕಾರ ಬೀಳಲು ಕಾರಣವಾಗಿರುವ ಈ ಅತೃಪ್ತ ಶಾಸಕರೆನಿಸಿಕೊಂಡವರ ಬಗ್ಗೆ ಈಗ ಬಿಜೆಪಿಯ ಅಭಿಪ್ರಾಯವೇನು? 15 ಜನಇದ್ದಾರೆ. ಅವರು ಅನರ್ಹವಾಗದೇ ಬಿಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಹೆಚ್ಚು ಕಮ್ಮಿ ಒಟ್ಟು ಸಚಿವ ಸ್ಥಾನಗಳಲ್ಲಿ ಅರ್ಧದಷ್ಟನ್ನು ಇವರಿಗೆ ಕೊಡಬೇಕು. ಇದರಿಂದ ಪಕ್ಷದಲ್ಲಿ ಬಂಡಾಯವೇಳುವುದು ಸಾಧ್ಯ. ಅದರ ಬದಲು ಇವರಿಗೆ ಬೇರೆ ರೀತಿಯಲ್ಲಿ ಸಮಾಧಾನಪಡಿಸಿ ಕೈತೊಳೆದುಕೊಳ್ಳಬೇಕೆಂಬುದು ಬಿಜೆಪಿಯ ಇನ್ನೊಂದು ಬಣದ ಹುನ್ನಾರವಿದ್ದಂತೆ ತೋರುತ್ತಿದೆ. ಹಾಗಾಗಿ ಅವರೆಲ್ಲರೂ ಅನರ್ಹರಾದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ. ಇನ್ನು ಜೆಡಿಎಸ್ ಕಾಂಗ್ರೆಸ್ ಬೆನ್ನಿಗೆಚೂರಿ ಹಾಕಿ ಪಕ್ಷಕ್ಕೆ ದ್ರೋಹ ಬಗೆದ ಇವರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದು ಆಯಾ ಪಕ್ಷದ ನಾಯಕರುಗಳು ಖಡಕ್ ಆಗಿ ಹೇಳಿದ್ದಾರೆ.

ಹಾಗಾಗಿಯೇ ಸ್ಪೀಕರ್ ರಮೇಶ್ ಕುಮಾರ್ ರವರು ಭಾರೀ ಪ್ಲಾನ್ ಮಾಡಿ ಎಲ್ಲರನ್ನು ಅನರ್ಹ ಮಾಡುವ ಬದಲು ಕೆಲವರನ್ನೇ ಮಾಡುವ ಮೂಲಕ ಅತ್ತ ಶಾಸಕರನ್ನು, ಇತ್ತ ಬಿಜೆಪಿಯನ್ನು ಆಡಿಸುತ್ತಿದ್ದಾರೆ. ಹೇಗೂ ಅಧಿಕಾರ ಹೋಗಿದೆ. ಬಿಜೆಪಿಗೆ ಸಾಕಷ್ಟು ತೊಂದರೆ ಕೊಡೋಣ ಎಂದು ನಿರ್ಧರಿಸಿದಂತಿದೆ.ಆಗ ಬಿಜೆಪಿ ಆಟ ಮೈತ್ರಿಗೆ ಸಂಕಟ: ಈಗ ಸ್ಪೀಕರ್ ಆಟ ಬಿಜೆಪಿಗೆ ಮಹಾಸಂಕಟವಾಗಿದೆ.

ಅಸ್ಥಿರ ಸರ್ಕಾರ ಹೀಗೇ ಮುಂದುವರೆದು, ಜುಲೈ 31ರೊಳಗೆ ಫೈನಾನ್ಸ್ ಬಿಲ್ ಸಹಾ ಅಂಗೀಕಾರ ಪಡೆದುಕೊಳ್ಳದೇ ಇದ್ದರೆ ರಾಜ್ಯದಲ್ಲಿ ತಲೆದೋರುವ ಬಿಕ್ಕಟ್ಟಿಗೆ ಯಾರನ್ನು ಹೊಣೆ ಮಾಡುವುದು? ಬಹುಶಃ ಮಾರಾಟ ಮಾಡಿಕೊಳ್ಳಲು ಸಿದ್ಧವಿರುವ ಜನಪ್ರತಿನಿಧಿಗಳನ್ನು ಆರಿಸಿದ ಜನರನ್ನೇ ಹೊಣೆ ಮಾಡಬೇಕೇನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...