Homeಅಂತರಾಷ್ಟ್ರೀಯಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಲಕ್ಷಾಂತರ ರೈತರನ್ನು ಒಮ್ಮೆಗೆ ಸಾವಿಗೆ ದೂಡುವ ಈ ಆರ್‌.ಸಿ.ಇ.ಪಿ ಒಪ್ಪಂದ ನಮಗೆ ಬೇಕೆ?

ಆರ್‌.ಸಿ.ಇ.ಪಿ ಒಪ್ಪಂದ ವಿರೋಧಿಸಿ ರೈತ ಚಳವಳಿಗಳಿಂದ ಅಕ್ಟೊಬರ್ 24 ರಂದು ಕರೆ ನೀಡಿರುವ ಭಾರತದಾದ್ಯಂತ ಪ್ರತಿಭಟನೆಗೆ ನಾವೇಕೆ ಭಾಗವಹಿಸಬೇಕು?

- Advertisement -
- Advertisement -

ಅದು 2015-16 ರ ಕಾಲ. ನರೇಂದ್ರ ಮೋದಿಯವರು ಸುಗ್ರಿವಾಜ್ಞೆಯ ಮೂಲಕ ಭೂಸ್ವಾಧೀನ ಕಾಯ್ದೆಯನ್ನು ತರಲು ಹೊರಟು ರೈತರ ಪ್ರತಿರೋಧಕ್ಕೆ ಮಣಿದು ಅವಮಾನಿತರಾಗಿದ್ದರು. ಅವರ ವಿದೇಶಿ ಪ್ರವಾಸಿಗಳು ಶುರುವಾಗಿದ್ದ ಕಾಲವಾದ್ದರಿಂದ ಹೋದ ದೇಶಗಳಿಗೆಲ್ಲಾ ಒಂದೊಂದು ಕೊಡುಗೆ ನೀಡಿಬರುತ್ತಿದ್ದರು. ಚೀನಾಕ್ಕೆ ಹೋದ ಪ್ರಧಾನಿಗಳು ಅವರನ್ನು ಖುಷಿಪಡಿಸಲು ರೇಷ್ಮೆ ಮೇಲಿನ ಆಮದು ಸುಂಕವನ್ನು ಏಕಾಏಕಿ 30% ನಿಂದ 15%ಗೆ ಇಳಿಸಿಬಿಟ್ಟರು. ಚೀನಾದಿಂದ ಭಾರೀ ಪ್ರಮಾಣದಲ್ಲಿ ರೇಷ್ಮೆ ಆಮದಾದುದ್ದರಿಂದ ಇಲ್ಲಿ ರೇಷ್ಮೆ ಬೆಲೆ ಸಂಪೂರ್ಣ ಕುಸಿಯಿತು. ಯಾವ ಮಟ್ಟಕ್ಕೆಂದರೆ 300 ರೂ ಇದ್ದ ಕೆ.ಜಿ ರೇಷ್ಮೆ 120 ರೂಗಳಿಗೆ ಕುಸಿಯಿತು. ರೇಷ್ಮೆ ಬೆಳೆಗಾರರು ಸಾಲು ಸಾಲಾಗಿ ಆತ್ಮಹತ್ಯೆಗೆ ಶರಣಾದರು.

ಅದೇ ಪರಿಸ್ಥಿತಿ ಕಬ್ಬು ಬೆಳೆದ ರೈತರಿಗೂ ಬಂದಿತು. ಏಕೆಂದರೆ ಸಕ್ಕರೆಯ ಮೇಲಿನ ಆಮದು ಸುಂಕವನ್ನು ಸರ್ಕಾರ ದೀಢಿರ್‌ ಎಂದು ಕಡಿಮೆ ಮಾಡಿದ್ದರ ಪರಿಣಾಮ ಬ್ರೆಜಿಲ್‌ ಕ್ಯೂಬಾ ದಂತಹ ಸಕ್ಕರೆ ನಾಡುಗಳಿಂದ ನುಗ್ಗಿದ ಆಮದು ಇಲ್ಲಿನ ರೈತರಿಗೆ ಕಬ್ಬಿಗೆ ಸಮರ್ಪಕ ಮತ್ತು ಸಕಾಲದಲ್ಲಿ ಬೆಲೆ ದೊರಕದಂತೆ ಮಾಡಿತ್ತು. ಇದರಿಂದ ಮಂಡ್ಯ ಜಿಲ್ಲೆಯೊಂದರಲ್ಲಿಯೇ ವರ್ಷಕ್ಕೆ ನೂರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸಿದ್ದವು.

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಮುಂಬರುವ ವರ್ಷಗಳಲ್ಲಿ ಯಾವ ಬೆಳೆ ಬೆಳೆಯುವ ರೈತರೂ ಸಹ ಬದುಕುಳಿಯಲು ಸಾಧ್ಯವಾಗದಂತಹ ಒಪ್ಪಂದವನ್ನು ಭಾರತ ಸರ್ಕಾರ ಮಾಡಿಕೊಳ್ಳುತ್ತಿದೆ. ಅದೇ ರೈತರನ್ನು ಬೀದಿಗೆ ತಳ್ಳಲಿರುವ ಆರ್‌.ಸಿ.ಇ.ಪಿ ಒಪ್ಪಂದವಾಗಿದೆ.

ಭಾರತದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜಾಗತೀಕರಣದ WTO ಒಪ್ಪಂದದ ಸುಳಿಗೆ ಸಿಲುಕಿ 4 ಲಕ್ಷಕ್ಕೂ ಅಧಿಕ ರೈತರು ತಮ್ಮ ಜೀವತೆತ್ತಿದ್ದಾರೆ. ಸತತ ಬರ ಮತ್ತು ಅನಿರೀಕ್ಷಿತ ಪ್ರವಾಹಗಳಿಂದಾಗಿ ಬೆಳೆ ಕಳೆದುಕೊಂಡು ಕಂಗೆಟ್ಟಿದ್ದಾರೆ. ಇಂತಹ ಕಡುಕಷ್ಟದ ಸಮಯದಲ್ಲಿ ರೈತರ ಗಾಯದ ಮೇಲೆ ಬರೆ ಎಳೆಯಲು ದುಷ್ಟ ಕೇಂದ್ರ ಸರ್ಕಾರ ಆರ್‌.ಸಿ.ಇ.ಪಿ ಒಪ್ಪಂದಕ್ಕೆ ಮುಂದಾಗಿದೆ.

ಏನಿದು ಆರ್‌.ಸಿ.ಇ.ಪಿ ಒಪ್ಪಂದ??

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌.ಸಿ.ಇ.ಪಿ) ಎಂದು ಕರೆಸಿಕೊಳ್ಳುವ ಈ ಒಪ್ಪಂದವನ್ನು ಭಾರತ ಇತರ ನೆರಹೊರೆಯ 15 ದೇಶಗಳೊಂದಿಗೆ ಮಾಡಿಕೊಳ್ಳುತ್ತಿದೆ. ಇದರಲ್ಲಿ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂತಹ ಬಲಾಢ್ಯ ದೇಶಗಳೂ ಸೇರಿವೆ.

ಒಪ್ಪಂದದನ್ವಯ ನಮ್ಮ ಆಹಾರ ಮತ್ತು ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ ಈ ದೇಶಗಳಲ್ಲಿ ಯಾವುದೇ ಆಮದು ಸುಂಕಗಳಿರುವುದಿಲ್ಲ. ಅಂದರೆ ಮುಕ್ತ ವ್ಯಾಪಾರ. ಒಪ್ಪಂದಕ್ಕೆ ಒಳಪಟ್ಟ ಯಾವ ದೇಶಗಳು ಬೇಕಾದರೂ, ಯಾವ ದೇಶದಲ್ಲಾದರೂ ತಮ್ಮ ಸರಕುಗಳನ್ನು ಮುಕ್ತವಾಗಿ ಮಾರಬಹುದು. ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.

ನಮಗೇನು ತೊಂದರೆ??

ಇದರಿಂದ ಭಾರತಕ್ಕೇನೂ ತೊಂದರೆ ಎಂದು ನೀವು ಕೇಳಬಹುದು. ಮುಂದುವರಿದ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ಕೃಷಿ ಮೇಲಿನ ಹೂಡಿಕೆ ಸಾಕಷ್ಟು ಹೆಚ್ಚಿದೆ. ಉದಾಹರಣೆಗೆ ಒಂದು ಟನ್‌ ಕಬ್ಬು ಬೆಳೆಯಲು ಭಾರತದ ರೈತ ಅಂದಾಜು 2000 ಖರ್ಚು ಮಾಡಿದರೆ ಅದು ಮುಂದುವರಿದ ದೇಶಗಳಲ್ಲಿ ಕೇವಲ 1000 ಖರ್ಚು ಮಾಡಿ ಒಂದು ಟನ್ ಕಬ್ಬು ಬೆಳೆಯುತ್ತಾರೆ. ಕಾರಣವೆಂದರೆ ಬೀಜ, ಗೊಬ್ಬರ ಸೇರಿದಂತೆ ಆ ದೇಶಗಳಲ್ಲಿ ರೈತರಿಗೆ ಹೆಚ್ಚಿನ ಸಬ್ಸಿಡಿ ದೊರೆಯುತ್ತಿದೆ. ಆದರೆ ಭಾರತದಲ್ಲಿ ಈ ಸಬ್ಸಿಡಿಯನ್ನು ದಿನೇ ದಿನೇ ಕಡಿಮೆ ಮಾಡುತ್ತಿದ್ದು ಸಂಪೂರ್ಣ ನಿಲ್ಲಿಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಭಾರತ ಮಾಡಿಕೊಂಡಿರುವ WTO ಒಪ್ಪಂದದ ಭಾಗವಾಗಿ ಈ ಸಬ್ಸಿಡಿ ಕಡಿತ ನಡೆಯುತ್ತಿದೆ. ರೈತರಿಗೆ ನೀಡುತ್ತಿರುವ ಸಬ್ಸಿಡಿ ನಿಲ್ಲಿಸದಿದ್ದರೆ ನಿಮಗೆ ಸಾಲ ಕೊಡುವುದಿಲ್ಲ ಎಂದು IMF ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಮೇಲೆ ಒತ್ತಡ ತರುತ್ತಿವೆ.

ಹಾಗಾಗಿ ಕಡಿಮೆ ಖರ್ಚಿನಲ್ಲಿ ಕೃಷಿ ಉತ್ಪಾದನೆಗಳನ್ನು ಆ ದೇಶಗಳು ಉತ್ಪಾದಿಸಿ ನಮ್ಮಲ್ಲಿ ಬಂದು ನಮಗಿಂತಲೂ ಕಡಿಮೆ ದರಕ್ಕೆ ಮಾರುವುದರಿದ ಇಲ್ಲಿನ ರೈತರ ಸ್ಥಿತಿ ಹೇಗಾಗುತ್ತದೆ ನೀವೇ ಊಹಿಸಿ? ರೇಷ್ಮೆ ಮತ್ತು ಮತ್ತು ಸಕ್ಕರೆಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದಾಗ ರೈತರು ಸತ್ತರಲೇ ಥೇಟ್ ಅದೇ ಸ್ಥಿತಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸೃಷ್ಟಿಯಾಗುತ್ತದೆ ಅಷ್ಟೇ..

ಇನ್ನು ಬೀಜ ಸ್ವಾವಲಂಬನೆಯೆಂಬುದು ಇಂದು ಮರೀಚಿಕೆಯ ಮಾತಾಗಿದೆ. 20 ವರ್ಷಗಳ ಹಿಂದೆ ಬಿತ್ತನೆಗೆ ಬೀಜಗಳನ್ನು ಖರೀದಿಸಬೇಕಾಗುತ್ತೆಂಬ ಸುಳಿವು ಯಾರಿಗೂ ಇರಲಿಕ್ಕಿಲ್ಲ ಬಿಡಿ. ಆದರೆ ಈಗ ಪ್ರತಿಯೊಂದು ಬೀಜಗಳಿಗೂ ಬಹುರಾಷ್ಟ್ರೀಯ ದರೋಡೆಕೋರ ಕಂಪನಿಗಳನ್ನು ನಂಬಿಕೂರಬೇಕಿದೆ. ಅವರೋ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯಡಿ ಎಲ್ಲಾ ಬೀಜಗಳಿಗೂ ಪೇಟೆಂಟ್‌ ಮಾಡಿಕೊಂಡಿದ್ದಾರೆ. ಇನ್ನ ನಮ್ಮ ರೈತರು ಅವರೇಳಿದ ರೇಟಿಗೆ ಬೀಜಗಳನ್ನು ಕೊಳ್ಳುವ ದುಸ್ಥಿತಿ ಬರಲಿದೆ. ಬೇಡ ನಾವೇ ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಳ್ಳಲು ಹೋದರೆ ಅದಕ್ಕೂ ಅಪರಾಧಿಗಳೆಂಬ ಪಟ್ಟ ಕಟ್ಟಲು ಅವರ ಬಳಿ ಕಾನೂನಿನ ಕುಣಿಗೆ ಇದೆ.

ಈ ಒಪ್ಪಂದದನ್ವಯ ನಮ್ಮ ಕೋರ್ಟುಗಳಲ್ಲಿ ವಿದೇಶಿಗರ ಆಟಾಟೋಪಗಳನ್ನು ಪ್ರಶ್ನಿಸಲು ಬರುವುದಿಲ್ಲ. ಖಾಸಗಿ ಮಧ್ಯಸ್ಥಿಕೆ ನ್ಯಾಯಮಂಡಳಿಗಳಲ್ಲಿ ಮಾತ್ರ ಪ್ರಶ್ನಿಸಬಹುದಾದರೆ ಆ ಶಕ್ತಿ ನಮ್ಮ ರೈತರಿಗೆಲ್ಲಿಂದ ಬರಬೇಕು? ಇನ್ನು ನಮ್ಮ ಸರ್ಕಾರಗಳು ಸಬ್ಸಿಡಿ ರೀತಿಯ ಯಾವುದೇ ಸಹಾಯಗಳನ್ನು ಮಾಡಿದರೆ ಅವರ ಮೆಲೆಯೇ ದೂರು ದಾಖಲಾಗುವ ಅಪಾಯವಿದೆ ಎಂದಾದರೆ ಅವರೆಲ್ಲಿ ರೈತರಿಗೆ ಸಹಾಯ ಮಾಡುತ್ತಾರೆ?

ರೈತರು ಬೆಳೆಯುವುದನ್ನು ಒಂದು ದಿನ ನಿಲ್ಲಿಸಿದರೆ ಸಾಕು ದೇಶ ಅಲ್ಲಾಡಿಹೋಗುತ್ತದೆ… ಇದು ನಿಜವೇ?

ಈ ಮಾತನ್ನು ನಾವು ಆಗ್ಗಾಗ್ಗೆ ಕೇಳುತ್ತಿರುತ್ತೇವೆ. ರೈತರಿದ್ದರೆ ಅನ್ನ, ಇಲ್ಲದಿದ್ದರೆ ಯಾವ ಸರ್ಕಾರಗಳು ಏನು ಮಾಡಲಾಗುವುದಿಲ್ಲ, ರೈತರು ಬೆಳೆಯುವುದನ್ನು ನಿಲ್ಲಿಸಿದರೆ ಸರ್ಕಾರಗಳು ಬಗ್ಗಿಬಿಡುತ್ತವೆ ಎಂದು ಹಲವರು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದಾರೆ. ಆದರೆ ವಾಸ್ತವವೆನೇಂದರೆ ಆ ಪರಿಸ್ಥಿತಿ ಸದ್ಯಕ್ಕಿಲ್ಲ.

ಏಕೆಂದರೆ ಈ ಮೊದಲೇ ಹೇಳಿದಂತೆ ಭಾರತ ಸರ್ಕಾರ ಆಹಾರಕ್ಕಾಗಿ ಇಂದು ದೇಶಿ ರೈತರನ್ನು ನಂಬಿ ಕೂತಿಲ್ಲ. ಒಂದು ವಿದೇಶದಿಂದ ಬೇಕಾದಷ್ಟು ಆಮದು ಮಾಡಿಕೊಳ್ಳುತ್ತದೆ. ಎರಡನೇದಾಗಿ ಅಂಬಾನಿ, ಅದಾನಿ ಥರದ ದೊಡ್ಡ ದೊಡ್ಡ ಉದ್ದಿಮೆಪತಿಗಳು ಕೃಷಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ಹೆಕರೆ ಭೂಮಿ ಖರೀದಿಸಿರುವ ಅವರು ಮುಂದೆ ಕೈಗಾರಿಕೆ ಮಾದರಿಯಲ್ಲಿ ಲಕ್ಷಾಂತರ ಹೆಕರೆ ಪ್ರದೇಶದಲ್ಲಿ ಯಂತ್ರಚಾಲಿತ ಕೃಷಿ ಮಾಡಲು ಸಿದ್ದವಿದ್ದಾರೆ. ಈ ರೀತಿಯ ದೊಡ್ಡ ಕೃಷಿಯಿಂದ ಅವರ ಉತ್ಪಾದನಾ ವೆಚ್ಚ ನಮ್ಮ ಊಹೆ ಮೀರಿ ಕಡಿಮೆಯಾಗುತ್ತದೆ. ಉತ್ಪಾದಿಸಿದ ವಸ್ತುಗಳನ್ನು ಮಾರಲು ಅವರದೇ ಮಾಲ್‌ಗಳು, ಚಿಲ್ಲರೆ ಮಳಿಗೆಗಳು ಎಲ್ಲೆಂದರೆ ತಲೆಯೆತ್ತಿವೆ. ಕಂಗಾಲಾದ ರೈತರಿಂದ ಜಮೀನು ಕಿತ್ತುಕೊಂಡು ಈ ರೀತಿಯ ದೊಡ್ಡ ಬಂಡವಾಳಿಗರು ಕೃಷಿ ನಡೆಸಿದರೆ ರೈತರೂ ಮುಗಿದಂತೆಯೇ, ಅವರನ್ನು ನಂಬಿರುವ ಚಿಲ್ಲರೆ ಮಾರಟಗಾರರು ಮುಗಿದಂತೆಯೇ ಸರಿ. ತಮ್ಮ ಜಮೀನು ಮಾರಿದ ರೈತರ ಅದೇ ಜಮೀನನಲ್ಲಿ ಕೂಲಿಯಾಳಾಗಿ ಬಿಡಿಗಾಸಿಗೆ ದುಡಿಯುವ ದಿನ ಖಂಡಿತಾ ದೂರವಿಲ್ಲ.

ಐಕ್ಯ ಹೋರಾಟವೊಂದೇ ದಾರಿ..

ಒಟ್ಟಿನಲ್ಲಿ ಬಹುಮುಖ ಹೊಡೆತ ನೀಡುವ, ಈ ದೇಶದ ರೈತರನ್ನು ಒಳಗೊಂಡಂತೆ ಬಡವರನ್ನು ಮತ್ತೆ ಜೀತಕ್ಕೆ ದೂಡುವ ಭಾರೀ ಹುನ್ನಾರವೊಂದು ಮುಂದಿನ ದಿನಗಳಲ್ಲಿ ಕಾದಿದೆ ಎಂಬುದರಲ್ಲಿ ಸಂದೇಹವೇ ಬೇಡ. ಹಾಗಾಗಿ ನಮ್ಮ ಉಳಿವಿಗಾಗಿ ದೊಡ್ಡ ಹೋರಾಟ ನಡೆಯಲೇಬೇಕಿದೆ. ಆದ್ದರಿಂದ ಈ ಆರ್‌.ಸಿ.ಇ.ಪಿ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಅಕ್ಟೋಬರ್ 24 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಭಾರೀ ಹೋರಾಟಕ್ಕೆ ರೈತ ಚಳವಳಿಗಳು ಮುಂದಾಗಿವೆ.

“ದೇಶದಲ್ಲಿ ಎರಡೇ ರೀತಿಯ ರೈತರಿದ್ದಾರೆ. ಒಂದು ಆತ್ಮಹತ್ಯೆ ಮಾಡಿಕೊಂಡಿರುವ ರೈತರು ಇನ್ನೊಂದು ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಎಂದು ಹಿರಿಯ ಸಾಮಾಜಿಕ ಚಿಂತಕರಾದ ಶಿವಸುಂದರ್‌ರವರು ಹೇಳಿದ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ”. ಇಷ್ಟು ದಿನ ರೈತರು ಬೆಳೆದ ಅನ್ನತಿಂದು ಅವರ ಋಣದಲ್ಲಿರುವ ಸಾಮಾನ್ಯ ನಾಗರೀಕರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತರನ್ನು ಸಾಯದಂತೆ ತಡೆಯುವುದು ಅತೀ ಜರೂರಿನ ಕೆಲಸವಾಗಿದೆ. ಕೇವಲ ಒಂದು ದಿನದ ಹೋರಾಟ ಮಾತ್ರವಲ್ಲದೇ ಈ ವಿಚಾರವನ್ನು ನೂರಾರು ಜನರಿಗೆ ತಲುಪಿಸಿ ಎಚ್ಚರಿಸುವ ಹೋರಾಟವನ್ನು ನಿರಂತರವಾಗಿ ಕಾಪಾಡುವ ಹೊಣೆ ನಮ್ಮೆಲ್ಲದರಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...