Homeಕರ್ನಾಟಕನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

ನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

- Advertisement -
- Advertisement -

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ.

ಇವ್ಯಾವುವೂ ಅನಿರೀಕ್ಷಿತವಲ್ಲ. ಅನರ್ಹ ಶಾಸಕರು ಗೆಲ್ಲದಿದ್ದರೆ ಒಂಥರಾ ಕಷ್ಟ; ಗೆದ್ದರೆ ಇನ್ನೊಂಥರಾ ಕಷ್ಟ ಎಂಬುದು ಬಿಜೆಪಿಯೊಳಗೆ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. ಆದರೆ, ಕೆಲವೇ ತಿಂಗಳ ಕೆಳಗೆ ಫಟಾಫಟ್ ತೀರ್ಮಾನಗಳನ್ನು ನಿಷ್ಠುರವಾಗಿ ಮಾಡುತ್ತಿದ್ದ ಬಿಜೆಪಿ ಹೈಕಮಾಂಡ್ ಇದೀಗ ಎಲ್ಲವನ್ನೂ ಎಳೆಯುತ್ತಿರುವುದಕ್ಕೆ ಮಾತ್ರ ವಿಶೇಷ ಕಾರಣಗಳಿವೆ. ಮೋದಿ – ಷಾ ಜೋಡಿಯನ್ನು ಮಣಿಸಲು ಯಡಿಯೂರಪ್ಪನವರ ಥರದ ಸೀಸನ್ಡ್ ರಾಜಕಾರಣಿಗಳು ಅವರದ್ದೇ ಪಟ್ಟುಗಳನ್ನು ಹಾಕಲು ಶುರು ಮಾಡಿದ್ದಾರೆ. ಪ್ರಧಾನಮಂತ್ರಿ ಮೋದಿಯ ಎದುರೇ ಯಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ಕೇಂದ್ರದಿಂದ ಅನುದಾನ ಸರಿಯಾಗಿ ಬಂದಿಲ್ಲ ಎಂಬಂತೆ ಮಾತಾಡಿದ್ದು, ಎರಡು ಬಿಜೆಪಿ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲೀಡ್ ನ್ಯೂಸ್ ಬರುವಂತೆ ನೋಡಿಕೊಂಡಿದ್ದು ಅಕಸ್ಮಾತ್ತಾಗಿ ನಡೆದ ಘಟನೆಗಳಲ್ಲ. ಹಾಗೆಯೇ ತಾನಿಷ್ಟು ಕಷ್ಟಪಟ್ಟು ಕರ್ನಾಟಕದೊಳಗೆ ಬಿಜೆಪಿ ಸರ್ಕಾರ ತಂದಿದ್ದೇನೆ; ಇದರ ಚುಕ್ಕಾಣಿ ಹಿಡಿದಿರುವ ತನ್ನ ಮಾತು ನಡೆಯದಿದ್ದರೆ ಪಟ್ಟು ಸಡಿಲಿಸುವವನಲ್ಲ ಎಂಬ ಸೂಚನೆಯನ್ನೂ ಕೊಟ್ಟಾಗಿದೆ.

ಇಷ್ಟು ಗಡುಸಾಗಿ ಯಡಿಯೂರಪ್ಪನವರ ಸಂಪುಟ ರಚನೆಯ ಸಂದರ್ಭದಲ್ಲಿ ಇರಲಿಲ್ಲ. ಹಾಗಾಗಿಯೇ ಮೂವರು ಡಿಸಿಎಂಗಳನ್ನು ಹೇರಿಸಿಕೊಳ್ಳಬೇಕಾಗಿ ಬಂದಿತ್ತು. ಉಪಮುಖ್ಯಮಂತ್ರಿ ನೇಮಕಕ್ಕೆ ಮುಂಚೆಯೇ ಸಂಪುಟ ಸಚಿವರ ಪಟ್ಟಿ ಹೊರಬಿದ್ದಾಗಲೇ ಸೀನಿಯರ್‍ಗಳಲ್ಲದ ಮೂವರು ಹೆಸರು ಮುಖ್ಯಮಂತ್ರಿ ನಂತರ ಇರುವಂತೆ ನೋಡಿಕೊಳ್ಳಲಾಗಿತ್ತು. ಅಂದರೆ, ಪಟ್ಟಿಯ ಅನುಕ್ರಮಣಿಕೆಯನ್ನೂ ಹೈಕಮಾಂಡ್‍ನ ಸಂತೋಷಕ್ಕೆ ತಕ್ಕಂತೆ ಮಾಡಿ ಕಳಿಸುವ ಮಟ್ಟಕ್ಕೆ ಯಡಿಯೂರಪ್ಪನವರ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು.

ಆದರೆ ಈಗಿನ ಯಡಿಯೂರಪ್ಪನವರು ಬೇರೆ. ಕಾಂಗ್ರೆಸ್, ಜೆಡಿಎಸ್‍ಗಳಿಂದ ಎತ್ತಾಕಿಕೊಂಡು ಬಂದವರ ಪೈಕಿ ಬಹುತೇಕರನ್ನು ಅವರು ಗೆಲ್ಲಿಸಿಕೊಂಡಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಬಿಜೆಪಿ ಪ್ರಥಮ ಬಾರಿಗೆ ಖಾತೆ ತೆರೆದಿದೆ. ಮಹಾರಾಷ್ಟ್ರ ಮುಖಭಂಗದ ನಂತರ ದೆಹಲಿ ಚಾಣಕ್ಯರ ಸಾಮಥ್ರ್ಯದ ಮಿತಿಯೂ ಬಯಲಿಗೆ ಬಂದಿದೆ. ಹಾಗಾಗಿ ಯಡಿಯೂರಪ್ಪನವರೂ ಪಟ್ಟು ಹಾಕತೊಡಗಿದ್ದಾರೆ. ಇದನ್ನು ಈಗಿಂದೀಗಲೇ ಮಣಿಸಲಾಗದು ಎಂಬುದರ ಅರಿವು ಇರುವ ಬಿಜೆಪಿಯ ದೆಹಲಿ ತ್ರೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯನ್ನೇ ಎಳೆಯುತ್ತಿದ್ದಾರೆ.

ಹಳೇ ಡಿಸಿಎಂಗಳಾದ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪರಿಗೆ ಏನೇ ಅಸಮಾಧಾನವಿದ್ದರೂ ತಮ್ಮನ್ನೂ ಡಿಸಿಎಂ ಮಾಡಿ ಎಂದು ಕೇಳುವ ಸ್ಥಿತಿಯಲ್ಲೇನೂ ಇಲ್ಲ. ಆದರೆ, ಸವದಿ, ಅಶ್ವತ್ಥನಾರಾಯಣ ಮತ್ತು ಕಾರಜೋಳ ಡಿಸಿಎಂ ಪದವಿಯಿಂದ ಇಳಿದರೆ ಅವರಿಗೆ ಸಂತೋಷವೇ. ಹೊಸ ಡಿಸಿಎಂಗಳಾಗಲು ತುದಿಗಾಲಲ್ಲಿ ನಿಂತಿರುವವರೆಂದರೆ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ. ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಇನ್ನೊಬ್ಬರು ಮುನಿಸಿಕೊಳ್ಳುತ್ತಾರೆ. ಆದರೆ ಅವರಿಬ್ಬರೂ ಡಿಸಿಎಂಗೆ ಪಟ್ಟು ಹಾಕಿದಷ್ಟೂ ಯಡಿಯೂರಪ್ಪನವರಿಗೆ ಒಳ್ಳೆಯದೇ. ಈ ರೀತಿ ನಾಲ್ಕೈದು ಡಿಸಿಎಂಗಳಿರುವ ಹಾಸ್ಯಾಸ್ಪದ ಸನ್ನಿವೇಶಕ್ಕಿಂತ ಇರುವ ಡಿಸಿಎಂಗಳನ್ನೂ ತೆಗೆಯಿರಿ ಎಂದು ವಾದ ಮಂಡಿಸಲು ಅನುಕೂಲವಾಗುತ್ತದೆ. ಆದರೆ, ಕೆಲವೇ ತಿಂಗಳ ಹಿಂದಷ್ಟೇ ಮೇಲಿನಿಂದ ಹೇರಲಾದ ಡಿಸಿಎಂಗಳನ್ನು ಇಷ್ಟು ಬೇಗ ತೆಗೆದುಬಿಡಲು ಹೈಕಮಾಂಡ್ ಒಪ್ಪುವುದೂ ಕಷ್ಟ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ. ಇದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಸಂಗತಿಗಳು ಆಶ್ಚರ್ಯಕರವಾಗಿದೆ. ಇಬ್ಬರೂ ವೀರಶೈವ ಮಹಾಸಭಾ ಲಾಬಿಯೊಳಗೆ ತಮ್ಮನ್ನು ವೀರಶೈವ ಸಮಾಜದಲ್ಲಿ ಯಡಿಯೂರಪ್ಪನವರ ನಂತರದ ನಂ.2 ಸ್ಥಾನದಲ್ಲಿ ಕಲ್ಪಿಸಿಕೊಂಡು ಆ ರೀತಿ ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆಂದು ಸಿಎಂ ಬಳಗಕ್ಕೆ ಅನಿಸಿದೆ. ಆ ಜಾಗದಲ್ಲಿ ತಮ್ಮ ಎರಡನೆಯ ಪುತ್ರನನ್ನು ಈಗಾಗಲೇ ಕಲ್ಪಿಸಿಕೊಂಡಿರುವ ಯಡಿಯೂರಪ್ಪನವರಿಗೆ ಈಗಲೇ ಮುನ್ನೆಚ್ಚರಿಕೆ ವಹಿಸಬೇಕೆನಿಸಿದ್ದರೆ ಆಶ್ಚರ್ಯವಿಲ್ಲ.

ಕನಕವೃತ್ತದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೇ ವಿಜಯೇಂದ್ರ ಜೊತೆ ಸಹಾ ಸಂಬಂಧ ಕೆಡಿಸಿಕೊಂಡಿರುವುದು ಮಾಧುಸ್ವಾಮಿಯವರಿಗೆ ತೊಡಕು ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯ ಸಾದರ ಲಿಂಗಾಯಿತ ಬಿ.ಸಿ.ಪಾಟೀಲ್ ಅರ್ಹರಾಗಿ ಸಂಪುಟಕ್ಕೆ ಸೇರುವಾಗ, ಅದೇ ಜಿಲ್ಲೆಯ ಇನ್ನೊಬ್ಬ ಸಾದರ ಲಿಂಗಾಯಿತ ಬೊಮ್ಮಾಯಿಯವರೂ ಇರುವುದು ಅಸಮತೋಲನವಾಗುತ್ತದೆ ಎಂಬ ವಾದವೂ ಇದೆ. ಅಂತಿಮವಾಗಿ ಒಬ್ಬ ಲಿಂಗಾಯಿತರನ್ನು ಕೈಬಿಡುವುದಂತೂ ಖಚಿತವಾಗಿದೆ. ಉಮೇಶ್ ಕತ್ತಿಯನ್ನೂ ತೆಗೆದುಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಯಡಿಯೂರಪ್ಪನವರು ಇದ್ದಾರೆ. ಹೀಗಾಗಿ ಲಿಂಗಾಯಿತರ ಭಾರದಿಂದ ಸಂಪುಟ ನೆಲಕಚ್ಚದಿರಬೇಕಾದರೆ ಯಾವುದೋ ರೀತಿಯ ಬ್ಯಾಲೆನ್ಸಿಂಗ್ ಕೆಲಸ ಆಗುತ್ತದೆ.

ಹಿಂದಿನ ಸಾರಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರನ್ನೂ ತೆಗೆದುಕೊಂಡಿರಲಿಲ್ಲ; ಜೊತೆಗೆ ದಲಿತ ಬಲಗೈ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಲು ಹಿರಿಯ ಶಾಸಕ ಸುಳ್ಯದ ಅಂಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪನವರು ತಮ್ಮ ನೀಲಿ ಕಣ್ಣಿನ ಹುಡುಗ ಲಿಂಬಾವಳಿಯನ್ನೂ ಬೋವಿ ಕೋಟಾದಲ್ಲಿ ತೆಗೆದುಕೊಳ್ಳಬೇಕೆಂದು ನಿಶ್ಚಯಿಸಿದ್ದಾರೆ. ಆದರೆ, ಅದಕ್ಕೆ ಸಿಡಿಗಳು ಹೊರಬೀಳುವ ಗುಮ್ಮ ತೋರಿಸಿ ಅಡ್ಡಿ ಮಾಡಬಹುದು ಎಂಬ ಸಂತೋಷವೂ ಕೆಲವರಲ್ಲಿ ಮನೆ ಮಾಡಿದೆ.

ಏನೇ ಇದ್ದರೂ ಅಂತಿಮವಾಗಿ 2-3 ಸೀಟುಗಳನ್ನು ಖಾಲಿ ಇಟ್ಟುಕೊಳ್ಳುವುದಂತೂ ಕಾಯಂ. ಒಂದೆಡೆ ಅತೃಪ್ತರಿಗೆ ಕ್ಯಾರೆಟ್ ತೋರಿಸಲು ಅನುಕೂಲ; ಇನ್ನೊಂದೆಡೆ ‘ಈ ಸರ್ಕಾರ ಬರಲು ಕಾರಣರಾದ ಯಾರನ್ನೂ ಯಡಿಯೂರಪ್ಪನವರು ಕೈಬಿಡಲಿಲ್ಲ’ವೆಂಬ ಖ್ಯಾತಿ ಉಳಿದುಕೊಳ್ಳಬೇಕು. ಹಾಗಾಗಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಇಬ್ಬರಿಗೂ ಸಚಿವ ಸ್ಥಾನ ಕಲ್ಪಿಸುವ ಅಗತ್ಯವಿದೆ. ರಿಜ್ವಾನ್ ಅರ್ಷದ್‍ರ ಎಂಎಲ್‍ಸಿ ಸೀಟು ಖಾಲಿಯಾದಾಗ ಅಲ್ಲಿ ಇಬ್ಬರಲ್ಲೊಬ್ಬರನ್ನು ಕೂರಿಸಿ ಮಂತ್ರಿ ಮಾಡಬಹುದು. ಆದರೆ, ಆಗಲೂ ಇರುವುದು ಒಂದೇ ಸೀಟು ಎಂಬ ಚಿಂತೆ ಈ ಎಲ್ಲರಲ್ಲೂ ಇದೆ. ಶರತ್ ಬಚ್ಚೇಗೌಡರ ಮೇಲೆ ಯಡಿಯೂರಪ್ಪನವರ ಸಿಟ್ಟು ಇನ್ನೂ ಮುಂದುವರೆದಿರುವುದನ್ನು ಶಾಸಕರ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ವ್ಯಕ್ತವಾದುದನ್ನು ನೋಡಿದರೆ ಎಂ.ಟಿ.ಬಿ ಪರವಾಗಿ ಯಡ್ಡಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದ್ದೇ ಇದೆ.

ಆದರೆ, ಅದೇ ಎಂ.ಎಲ್.ಸಿ ಸ್ಥಾನದ ಮೇಲೆ ಕಣ್ಣಿಟ್ಟ ಇನ್ನೂ ಇಬ್ಬರಿದ್ದಾರೆ. ಒಬ್ಬರು ಡಿಸಿಎಂ ಸವದಿ. ಅವರ ಡಿಸಿಎಂ ಪಟ್ಟ ಮುಂದುವರೆಯಲು ಈಗ ಬೇರೆ ಯಾವ ದಾರಿಯೂ ಇಲ್ಲ. ಹಾಗೆಯೇ ತನ್ನಂತಹ ‘ಮುತ್ಸದ್ದಿ’ಗೆ ಸ್ಥಾನ ಕಲ್ಪಿಸದಿದ್ದರೆ ಹೇಗೆ ಎಂಬ ವಾದ ಎಚ್.ವಿಶ್ವನಾಥ್‍ರದ್ದೂ ಇರುತ್ತದೆ. ಅಂತಿಮವಾಗಿ ಸಂಪುಟ ರಚನೆಯಲ್ಲಿ ಯಡಿಯೂರಪ್ಪನವರಿಗೆ ಒಂದಷ್ಟು ಬಿಟ್ಟುಕೊಟ್ಟು ಎಂಎಲ್‍ಸಿ ಸೀಟು ಸವದಿ ಪಾಲಾಗಿ ಉಳಿದವರಿಗೆ ಫಲವತ್ತಾದ ನಿಗಮ ಮಂಡಳಿಗಳ ತುಪ್ಪ ಸವರುವ ಸಾಧ್ಯತೆಯೇ ಎದ್ದು ಕಾಣುತ್ತಿದೆ.
ಅದೇನೇ ಇದ್ದರೂ ಬಿಜೆಪಿಯೊಳಗೆ ಇನ್ನೊಂದು ಸುತ್ತು ಯಡಿಯೂರಪ್ಪ ವರ್ಸಸ್ ತ್ರೈಕಮಾಂಡ್‍ನ ಮುಸುಕಿನ ಗುದ್ದಾಟ ನಡೆಯುವುದಂತೂ ಖಾಯಂ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...