Homeಕರ್ನಾಟಕನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

ನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

- Advertisement -
- Advertisement -

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ.

ಇವ್ಯಾವುವೂ ಅನಿರೀಕ್ಷಿತವಲ್ಲ. ಅನರ್ಹ ಶಾಸಕರು ಗೆಲ್ಲದಿದ್ದರೆ ಒಂಥರಾ ಕಷ್ಟ; ಗೆದ್ದರೆ ಇನ್ನೊಂಥರಾ ಕಷ್ಟ ಎಂಬುದು ಬಿಜೆಪಿಯೊಳಗೆ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. ಆದರೆ, ಕೆಲವೇ ತಿಂಗಳ ಕೆಳಗೆ ಫಟಾಫಟ್ ತೀರ್ಮಾನಗಳನ್ನು ನಿಷ್ಠುರವಾಗಿ ಮಾಡುತ್ತಿದ್ದ ಬಿಜೆಪಿ ಹೈಕಮಾಂಡ್ ಇದೀಗ ಎಲ್ಲವನ್ನೂ ಎಳೆಯುತ್ತಿರುವುದಕ್ಕೆ ಮಾತ್ರ ವಿಶೇಷ ಕಾರಣಗಳಿವೆ. ಮೋದಿ – ಷಾ ಜೋಡಿಯನ್ನು ಮಣಿಸಲು ಯಡಿಯೂರಪ್ಪನವರ ಥರದ ಸೀಸನ್ಡ್ ರಾಜಕಾರಣಿಗಳು ಅವರದ್ದೇ ಪಟ್ಟುಗಳನ್ನು ಹಾಕಲು ಶುರು ಮಾಡಿದ್ದಾರೆ. ಪ್ರಧಾನಮಂತ್ರಿ ಮೋದಿಯ ಎದುರೇ ಯಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ಕೇಂದ್ರದಿಂದ ಅನುದಾನ ಸರಿಯಾಗಿ ಬಂದಿಲ್ಲ ಎಂಬಂತೆ ಮಾತಾಡಿದ್ದು, ಎರಡು ಬಿಜೆಪಿ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲೀಡ್ ನ್ಯೂಸ್ ಬರುವಂತೆ ನೋಡಿಕೊಂಡಿದ್ದು ಅಕಸ್ಮಾತ್ತಾಗಿ ನಡೆದ ಘಟನೆಗಳಲ್ಲ. ಹಾಗೆಯೇ ತಾನಿಷ್ಟು ಕಷ್ಟಪಟ್ಟು ಕರ್ನಾಟಕದೊಳಗೆ ಬಿಜೆಪಿ ಸರ್ಕಾರ ತಂದಿದ್ದೇನೆ; ಇದರ ಚುಕ್ಕಾಣಿ ಹಿಡಿದಿರುವ ತನ್ನ ಮಾತು ನಡೆಯದಿದ್ದರೆ ಪಟ್ಟು ಸಡಿಲಿಸುವವನಲ್ಲ ಎಂಬ ಸೂಚನೆಯನ್ನೂ ಕೊಟ್ಟಾಗಿದೆ.

ಇಷ್ಟು ಗಡುಸಾಗಿ ಯಡಿಯೂರಪ್ಪನವರ ಸಂಪುಟ ರಚನೆಯ ಸಂದರ್ಭದಲ್ಲಿ ಇರಲಿಲ್ಲ. ಹಾಗಾಗಿಯೇ ಮೂವರು ಡಿಸಿಎಂಗಳನ್ನು ಹೇರಿಸಿಕೊಳ್ಳಬೇಕಾಗಿ ಬಂದಿತ್ತು. ಉಪಮುಖ್ಯಮಂತ್ರಿ ನೇಮಕಕ್ಕೆ ಮುಂಚೆಯೇ ಸಂಪುಟ ಸಚಿವರ ಪಟ್ಟಿ ಹೊರಬಿದ್ದಾಗಲೇ ಸೀನಿಯರ್‍ಗಳಲ್ಲದ ಮೂವರು ಹೆಸರು ಮುಖ್ಯಮಂತ್ರಿ ನಂತರ ಇರುವಂತೆ ನೋಡಿಕೊಳ್ಳಲಾಗಿತ್ತು. ಅಂದರೆ, ಪಟ್ಟಿಯ ಅನುಕ್ರಮಣಿಕೆಯನ್ನೂ ಹೈಕಮಾಂಡ್‍ನ ಸಂತೋಷಕ್ಕೆ ತಕ್ಕಂತೆ ಮಾಡಿ ಕಳಿಸುವ ಮಟ್ಟಕ್ಕೆ ಯಡಿಯೂರಪ್ಪನವರ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು.

ಆದರೆ ಈಗಿನ ಯಡಿಯೂರಪ್ಪನವರು ಬೇರೆ. ಕಾಂಗ್ರೆಸ್, ಜೆಡಿಎಸ್‍ಗಳಿಂದ ಎತ್ತಾಕಿಕೊಂಡು ಬಂದವರ ಪೈಕಿ ಬಹುತೇಕರನ್ನು ಅವರು ಗೆಲ್ಲಿಸಿಕೊಂಡಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಬಿಜೆಪಿ ಪ್ರಥಮ ಬಾರಿಗೆ ಖಾತೆ ತೆರೆದಿದೆ. ಮಹಾರಾಷ್ಟ್ರ ಮುಖಭಂಗದ ನಂತರ ದೆಹಲಿ ಚಾಣಕ್ಯರ ಸಾಮಥ್ರ್ಯದ ಮಿತಿಯೂ ಬಯಲಿಗೆ ಬಂದಿದೆ. ಹಾಗಾಗಿ ಯಡಿಯೂರಪ್ಪನವರೂ ಪಟ್ಟು ಹಾಕತೊಡಗಿದ್ದಾರೆ. ಇದನ್ನು ಈಗಿಂದೀಗಲೇ ಮಣಿಸಲಾಗದು ಎಂಬುದರ ಅರಿವು ಇರುವ ಬಿಜೆಪಿಯ ದೆಹಲಿ ತ್ರೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯನ್ನೇ ಎಳೆಯುತ್ತಿದ್ದಾರೆ.

ಹಳೇ ಡಿಸಿಎಂಗಳಾದ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪರಿಗೆ ಏನೇ ಅಸಮಾಧಾನವಿದ್ದರೂ ತಮ್ಮನ್ನೂ ಡಿಸಿಎಂ ಮಾಡಿ ಎಂದು ಕೇಳುವ ಸ್ಥಿತಿಯಲ್ಲೇನೂ ಇಲ್ಲ. ಆದರೆ, ಸವದಿ, ಅಶ್ವತ್ಥನಾರಾಯಣ ಮತ್ತು ಕಾರಜೋಳ ಡಿಸಿಎಂ ಪದವಿಯಿಂದ ಇಳಿದರೆ ಅವರಿಗೆ ಸಂತೋಷವೇ. ಹೊಸ ಡಿಸಿಎಂಗಳಾಗಲು ತುದಿಗಾಲಲ್ಲಿ ನಿಂತಿರುವವರೆಂದರೆ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ. ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಇನ್ನೊಬ್ಬರು ಮುನಿಸಿಕೊಳ್ಳುತ್ತಾರೆ. ಆದರೆ ಅವರಿಬ್ಬರೂ ಡಿಸಿಎಂಗೆ ಪಟ್ಟು ಹಾಕಿದಷ್ಟೂ ಯಡಿಯೂರಪ್ಪನವರಿಗೆ ಒಳ್ಳೆಯದೇ. ಈ ರೀತಿ ನಾಲ್ಕೈದು ಡಿಸಿಎಂಗಳಿರುವ ಹಾಸ್ಯಾಸ್ಪದ ಸನ್ನಿವೇಶಕ್ಕಿಂತ ಇರುವ ಡಿಸಿಎಂಗಳನ್ನೂ ತೆಗೆಯಿರಿ ಎಂದು ವಾದ ಮಂಡಿಸಲು ಅನುಕೂಲವಾಗುತ್ತದೆ. ಆದರೆ, ಕೆಲವೇ ತಿಂಗಳ ಹಿಂದಷ್ಟೇ ಮೇಲಿನಿಂದ ಹೇರಲಾದ ಡಿಸಿಎಂಗಳನ್ನು ಇಷ್ಟು ಬೇಗ ತೆಗೆದುಬಿಡಲು ಹೈಕಮಾಂಡ್ ಒಪ್ಪುವುದೂ ಕಷ್ಟ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ. ಇದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಸಂಗತಿಗಳು ಆಶ್ಚರ್ಯಕರವಾಗಿದೆ. ಇಬ್ಬರೂ ವೀರಶೈವ ಮಹಾಸಭಾ ಲಾಬಿಯೊಳಗೆ ತಮ್ಮನ್ನು ವೀರಶೈವ ಸಮಾಜದಲ್ಲಿ ಯಡಿಯೂರಪ್ಪನವರ ನಂತರದ ನಂ.2 ಸ್ಥಾನದಲ್ಲಿ ಕಲ್ಪಿಸಿಕೊಂಡು ಆ ರೀತಿ ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆಂದು ಸಿಎಂ ಬಳಗಕ್ಕೆ ಅನಿಸಿದೆ. ಆ ಜಾಗದಲ್ಲಿ ತಮ್ಮ ಎರಡನೆಯ ಪುತ್ರನನ್ನು ಈಗಾಗಲೇ ಕಲ್ಪಿಸಿಕೊಂಡಿರುವ ಯಡಿಯೂರಪ್ಪನವರಿಗೆ ಈಗಲೇ ಮುನ್ನೆಚ್ಚರಿಕೆ ವಹಿಸಬೇಕೆನಿಸಿದ್ದರೆ ಆಶ್ಚರ್ಯವಿಲ್ಲ.

ಕನಕವೃತ್ತದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೇ ವಿಜಯೇಂದ್ರ ಜೊತೆ ಸಹಾ ಸಂಬಂಧ ಕೆಡಿಸಿಕೊಂಡಿರುವುದು ಮಾಧುಸ್ವಾಮಿಯವರಿಗೆ ತೊಡಕು ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯ ಸಾದರ ಲಿಂಗಾಯಿತ ಬಿ.ಸಿ.ಪಾಟೀಲ್ ಅರ್ಹರಾಗಿ ಸಂಪುಟಕ್ಕೆ ಸೇರುವಾಗ, ಅದೇ ಜಿಲ್ಲೆಯ ಇನ್ನೊಬ್ಬ ಸಾದರ ಲಿಂಗಾಯಿತ ಬೊಮ್ಮಾಯಿಯವರೂ ಇರುವುದು ಅಸಮತೋಲನವಾಗುತ್ತದೆ ಎಂಬ ವಾದವೂ ಇದೆ. ಅಂತಿಮವಾಗಿ ಒಬ್ಬ ಲಿಂಗಾಯಿತರನ್ನು ಕೈಬಿಡುವುದಂತೂ ಖಚಿತವಾಗಿದೆ. ಉಮೇಶ್ ಕತ್ತಿಯನ್ನೂ ತೆಗೆದುಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಯಡಿಯೂರಪ್ಪನವರು ಇದ್ದಾರೆ. ಹೀಗಾಗಿ ಲಿಂಗಾಯಿತರ ಭಾರದಿಂದ ಸಂಪುಟ ನೆಲಕಚ್ಚದಿರಬೇಕಾದರೆ ಯಾವುದೋ ರೀತಿಯ ಬ್ಯಾಲೆನ್ಸಿಂಗ್ ಕೆಲಸ ಆಗುತ್ತದೆ.

ಹಿಂದಿನ ಸಾರಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರನ್ನೂ ತೆಗೆದುಕೊಂಡಿರಲಿಲ್ಲ; ಜೊತೆಗೆ ದಲಿತ ಬಲಗೈ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಲು ಹಿರಿಯ ಶಾಸಕ ಸುಳ್ಯದ ಅಂಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪನವರು ತಮ್ಮ ನೀಲಿ ಕಣ್ಣಿನ ಹುಡುಗ ಲಿಂಬಾವಳಿಯನ್ನೂ ಬೋವಿ ಕೋಟಾದಲ್ಲಿ ತೆಗೆದುಕೊಳ್ಳಬೇಕೆಂದು ನಿಶ್ಚಯಿಸಿದ್ದಾರೆ. ಆದರೆ, ಅದಕ್ಕೆ ಸಿಡಿಗಳು ಹೊರಬೀಳುವ ಗುಮ್ಮ ತೋರಿಸಿ ಅಡ್ಡಿ ಮಾಡಬಹುದು ಎಂಬ ಸಂತೋಷವೂ ಕೆಲವರಲ್ಲಿ ಮನೆ ಮಾಡಿದೆ.

ಏನೇ ಇದ್ದರೂ ಅಂತಿಮವಾಗಿ 2-3 ಸೀಟುಗಳನ್ನು ಖಾಲಿ ಇಟ್ಟುಕೊಳ್ಳುವುದಂತೂ ಕಾಯಂ. ಒಂದೆಡೆ ಅತೃಪ್ತರಿಗೆ ಕ್ಯಾರೆಟ್ ತೋರಿಸಲು ಅನುಕೂಲ; ಇನ್ನೊಂದೆಡೆ ‘ಈ ಸರ್ಕಾರ ಬರಲು ಕಾರಣರಾದ ಯಾರನ್ನೂ ಯಡಿಯೂರಪ್ಪನವರು ಕೈಬಿಡಲಿಲ್ಲ’ವೆಂಬ ಖ್ಯಾತಿ ಉಳಿದುಕೊಳ್ಳಬೇಕು. ಹಾಗಾಗಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಇಬ್ಬರಿಗೂ ಸಚಿವ ಸ್ಥಾನ ಕಲ್ಪಿಸುವ ಅಗತ್ಯವಿದೆ. ರಿಜ್ವಾನ್ ಅರ್ಷದ್‍ರ ಎಂಎಲ್‍ಸಿ ಸೀಟು ಖಾಲಿಯಾದಾಗ ಅಲ್ಲಿ ಇಬ್ಬರಲ್ಲೊಬ್ಬರನ್ನು ಕೂರಿಸಿ ಮಂತ್ರಿ ಮಾಡಬಹುದು. ಆದರೆ, ಆಗಲೂ ಇರುವುದು ಒಂದೇ ಸೀಟು ಎಂಬ ಚಿಂತೆ ಈ ಎಲ್ಲರಲ್ಲೂ ಇದೆ. ಶರತ್ ಬಚ್ಚೇಗೌಡರ ಮೇಲೆ ಯಡಿಯೂರಪ್ಪನವರ ಸಿಟ್ಟು ಇನ್ನೂ ಮುಂದುವರೆದಿರುವುದನ್ನು ಶಾಸಕರ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ವ್ಯಕ್ತವಾದುದನ್ನು ನೋಡಿದರೆ ಎಂ.ಟಿ.ಬಿ ಪರವಾಗಿ ಯಡ್ಡಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದ್ದೇ ಇದೆ.

ಆದರೆ, ಅದೇ ಎಂ.ಎಲ್.ಸಿ ಸ್ಥಾನದ ಮೇಲೆ ಕಣ್ಣಿಟ್ಟ ಇನ್ನೂ ಇಬ್ಬರಿದ್ದಾರೆ. ಒಬ್ಬರು ಡಿಸಿಎಂ ಸವದಿ. ಅವರ ಡಿಸಿಎಂ ಪಟ್ಟ ಮುಂದುವರೆಯಲು ಈಗ ಬೇರೆ ಯಾವ ದಾರಿಯೂ ಇಲ್ಲ. ಹಾಗೆಯೇ ತನ್ನಂತಹ ‘ಮುತ್ಸದ್ದಿ’ಗೆ ಸ್ಥಾನ ಕಲ್ಪಿಸದಿದ್ದರೆ ಹೇಗೆ ಎಂಬ ವಾದ ಎಚ್.ವಿಶ್ವನಾಥ್‍ರದ್ದೂ ಇರುತ್ತದೆ. ಅಂತಿಮವಾಗಿ ಸಂಪುಟ ರಚನೆಯಲ್ಲಿ ಯಡಿಯೂರಪ್ಪನವರಿಗೆ ಒಂದಷ್ಟು ಬಿಟ್ಟುಕೊಟ್ಟು ಎಂಎಲ್‍ಸಿ ಸೀಟು ಸವದಿ ಪಾಲಾಗಿ ಉಳಿದವರಿಗೆ ಫಲವತ್ತಾದ ನಿಗಮ ಮಂಡಳಿಗಳ ತುಪ್ಪ ಸವರುವ ಸಾಧ್ಯತೆಯೇ ಎದ್ದು ಕಾಣುತ್ತಿದೆ.
ಅದೇನೇ ಇದ್ದರೂ ಬಿಜೆಪಿಯೊಳಗೆ ಇನ್ನೊಂದು ಸುತ್ತು ಯಡಿಯೂರಪ್ಪ ವರ್ಸಸ್ ತ್ರೈಕಮಾಂಡ್‍ನ ಮುಸುಕಿನ ಗುದ್ದಾಟ ನಡೆಯುವುದಂತೂ ಖಾಯಂ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...