HomeಮುಖಪುಟYes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

Yes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

- Advertisement -
- Advertisement -

ಅಮೆರಿಕಾ ಗಾಟ್ ಟ್ಯಾಲೆಂಟ್’ (AGT) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮುಂಬೈನ 28 ಬಾಲಕ ಬಾಲಕಿಯರು ತಮ್ಮ ಡ್ಯಾನ್ಸ್ ಪ್ರದರ್ಶನದಲ್ಲಿ ಟ್ರೋಫಿಯನ್ನು ಗೆದ್ದು ಅಮೆರಿಕನ್ನರನ್ನು ಮಾತ್ರವಲ್ಲ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದಾರೆ.

ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡುವ ಅಮೆರಿಕಾ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಹೃದಯವೇ ನಿಂತುಹೋಗುವಂತಹ ಡ್ಯಾನ್ಸ್ ಪ್ರದರ್ಶನ ನೀಡಿ ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಈ ಯುವಜನರು ಪ್ರಪಂಚದ ಗಮನ ಸೆಳೆದಿದ್ದಾರೆ.

ಯಾರು ಈ “ವಿ ಅನ್‍ಬೀಟಬಲ್”

ವಿ ಅನ್‍ಬೀಟಬಲ್ ತಂಡ ಮುಂಬೈನ ಹಲವಾರು ಸ್ಲಂಗಳಲ್ಲಿ ವಾಸಿಸುವ ಯುವಜನರ ತಂಡ. ಮುಂಬೈನ ಸ್ಲಂಗಳಲ್ಲಿ ದುಸ್ತರವಾದ ಬದುಕು. ಕುಡಿಯಲು ಶುದ್ಧ ನೀರು ಸಿಗದೆ, ಕಾಲು ಚಾಚಿ ಮಲಗುವಷ್ಟು ಜಾಗವೂ ಇಲ್ಲದೆ, ಚಿಕ್ಕ ಶೆಡ್ಡುಗಳಂತಹ ಮನೆಗಳಲ್ಲಿ ಬದುಕುವ ಜನರ ಅಲ್ಲಿನ ನೋವುಗಳನ್ನು ಅನುಭವಿಸುತ್ತಾ ಬೆಳೆಯುತ್ತಿದ್ದ ಈ 28 ಯುವಜನರ ತಂಡವೇ ವಿ ಅನ್ಬೀಟಬಲ್.

ಮುಂಬೈನ ಸ್ಲಂಗಳಲ್ಲಿ ವಾಸಿಸುತ್ತಿರುವ 12ರಿಂದ 27ವಯಸ್ಸಿನವರೆಗಿನ ಬಾಲಕಬಾಲಕಿಯರು ಅವರು. “ಸ್ಲಂಗಳು ಅತ್ಯಂತ ಜನನಿಬಿಡವಾಗಿವೆ, ಕೊಳಕಾಗಿರುತ್ತದೆ, ಸೂಕ್ತ ವಿದ್ಯುತ್ ಸೌಲಭ್ಯ ಅಲ್ಲಿಲ್ಲ, ಒಂದೊಂದು ಸಣ್ಣ ಕೋಣೆಯಲ್ಲಿ 10 ಜನ ಇರಬೇಕಾಗುತ್ತದೆ, ಅಲ್ಲಿ ಬದುಕು ಉಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇಂತಹ ಕಷ್ಟದ ಬದುಕಿನಲ್ಲಿ ಅವರು ಪ್ರಾರ್ಥಿಸುತ್ತಿದ್ದದ್ದು ಉತ್ತಮವಾದ, ಸ್ವಾವಲಂಬಿ-ಸ್ವಾಭಿಮಾನದ ಘನತೆಯ ಬದುಕಿಗಾಗಿ. ಆದರೆ ಆ ಯುವಜನರಿಗೆ ಸ್ಲಂಗಳಲ್ಲಿ ಸಿಗುತ್ತಿದ್ದ ಅವಕಾಶವೇ ಕಡಿಮೆ.., ಆದರೂ, ಬೆಳಗ್ಗೆಯಿಂದ ಸಂಜೆಯವರೆಗೂ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಈ ಯುವಜನರು, ಸಂಜೆಯ ಸಮಯದಲ್ಲಿ ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡುತ್ತಾ ತಮ್ಮೆಲ್ಲರ ಮನಸ್ಸಿನ ಮಾನಸಿಕ ದುಗುಡ, ತಳಮಳ, ಬದುಕಿನ ಮೇಲಿನ ಆಕ್ರೋಶವನ್ನು ಕಳೆದುಕೊಂಡು, ಮನಸ್ಸನ್ನು ಹಗುರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ 28 ಯುವಜನರ ತಂಡ ತಾವು ಒಟ್ಟುಗೂಡಿ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ತಮ್ಮ ಡ್ಯಾನ್ಸಿನ ಸ್ಕಿಲ್ಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೂಟ್ಯೂಬ್‌ನಲ್ಲಿ ನಾನಾ ರೀತಿಯ ಶೋಗಳನ್ನು ನೋಡುತ್ತಿದ್ದರು. ಡ್ಯಾನ್ಸ್ ಬಗ್ಗೆ ತುಡಿತ ಹೊಂದಿದ್ದ ಈ ಯುವಜನರ ಕಣ್ಣಿಗೆ ಕಂಡದ್ದು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋ. ಆ ಕಾರ್ಯಕ್ರಮವನ್ನು ನೋಡುವಾಗ ಆ ಯುವ ಮನಸ್ಸುಗಳಲ್ಲಿ ಮೂಡಿದ್ದು ನಾವು ಒಂದು ದಿನ ಅಲ್ಲಿಗೆ ಹೋಗಬಹುದಾ ಎಂಬ ಕನಸು. ಆ ಕನಸಿನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದ ಆ ತಂಡ ’ವಿ ಅನ್‍ಬೀಟಬಲ್’ ಹೆಸರನ್ನಿಟ್ಟುಕೊಂಡು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ವೇದಿಯ ಮೇಲೇರಿ ತಮ್ಮ ಕನಸನ್ನ ನನಸಾಗಿಸಿಕೊಂಡಿದ್ದಾರೆ.

ವಿ ಅನ್‍ಬೀಟಬಲ್ ಗೆಲುವಿನ ಹಾದಿ!

V Unbeatable ಎಂಬ ಡ್ಯಾನ್ಸ್ ತಂಡ ಕಟ್ಟಿಕೊಂಡು ವಾರಗಳ ಕಾಲ ತಾಲೀಮು ನಡೆಸಿಕೊಂಡು ಎನ್‍ಬಿಸಿ ರಿಯಾಲಿಟಿ ಟಿವಿ ನಡೆಸುವ ‘ಅಮೆರಿಕ ಗಾಟ್ ಟ್ಯಾಲೆಂಟ್’ (AGT) ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬಂದು ನಿಂತಾಗ ತಮ್ಮೆದುರು ತೀರ್ಪುಗಾರರಾಗಿ ಕುಳಿತ ಸೈಮನ್ ಕೌವೆಲ್, ಹೌವೀ ಮಂಡೆಲ್, ಗ್ಯಾಬ್ರಿಯೆಲ್ ಯೂನಿಯನ್ ಮತ್ತು ಜ್ಯೂಲಿಯನ್ ಹೌ ಅವರಿಗಾಗಲೀ, ಪ್ರೇಕ್ಷಕರಿಗಾಗಲೀ ಆ ಕಂದು ಬಣ್ಣದ ಹುಡುಗರು ಏನು ಮಾಡಲಿದ್ದಾರೆ ಎಂಬ ಊಹೆಯೂ ಇರಲಿಲ್ಲ.

ಶೋ ಆರಂಭದ ಮೊದಲ ದಿನ, ವಿಶಾಲ್ ದಾದ್ಲಾನಿಯ “ಮಲ್ಹಾರಿ” ಹಾಡಿಗೆ ಹುಡುಗರು ಮಾಡುವ ಡ್ಯಾನ್ಸ್ ಕೆಲ ನಿಮಿಷಗಳ ಕಾಲ ಎಲ್ಲರ ಎದೆಬಡಿತ ಹೆಚ್ಚಿಸುತ್ತದೆ. ಅದರಲ್ಲೂ ಸಣ್ಣ ಹುಡುಗರನ್ನು ಎತ್ತಿ ಹಾರಿಸುವ ಕೆಲವು ದೃಶ್ಯಗಳಂತೂ ಮೈ ಜುಮ್ ಎನಿಸಿದ್ದವು. ಬೊಂಬುಗಳನ್ನು ತಂದು ನಿಲ್ಲಿಸಿ ಅದರ ಮೇಲೆ ಕಾಲ್ಬೆರಳ ತುದಿಯಲ್ಲಿ ನಡೆದು, ನೆಗೆದು ತೋರಿಸುವ ದೃಶ್ಯಗಳಂತೂ ಚೇತೋಹಾರಿಯಾಗಿದ್ದವು.

ಆ ದೃಶ್ಯಗಳನ್ನು ನೋಡಿದರೆ, ಅಂತಹ ಪ್ರದರ್ಶನಗಳನ್ನು ಚೀನಾದ ತಂಡಗಳು ಮಾತ್ರ ನೀಡಲು ಸಾಧ್ಯ, ಮತ್ತಾರೂ ಮಾಡಲಾರರು ಎನ್ನುವಂತಿದ್ದವು. ಅಂತಹ ನೃತ್ಯವನ್ನು ಸೂಕ್ತ ತರಬೇತಿ ಸಿಕ್ಕಿದರೆ ಭಾರತದಲ್ಲಿ ವಾಸಿಸುವ ಸ್ಲಂ ಮಕ್ಕಳೂ ಸಹ ಅಸಾಧ್ಯವಾದುದನ್ನು ಸಾಧಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಬಲ್ಲರು ಎಂಬುದನ್ನು ವಿ ಅನ್ ಬೀಟಬಲ್ ತಂಡ ತೋರಿಸಿದೆ.

ಅಂದು ರಿಯಾಲಿಟಿ ಶೋ ವೇದಿಕೆ ಮೇಲೆ ನಿಂತ ಈ ಯುವಜನರನ್ನು ಅಮೆರಿಕಾ ಗಾಟ್ ಟ್ಯಾಲೆಂಟ್ ವಿನ್ನರ್ಸ್ ಪಟ್ಟಿಯಲ್ಲಿ ಸೇರಿದರೆ ನಿಮ್ಮ ಭವಿಷ್ಯಕ್ಕೆ ಏನು ಲಾಭ ಎಂದು ಜಡ್ಜ್ ಗ್ಯಾಬ್ರಿಯೆಲ್ ಕೇಳಿದ್ದಕ್ಕೆ ಮುಂಬೈ ಹುಡುಗ, “ಗೆಲುವು ಸಾಧಿಸಿದ್ದು ವಿ ಅನ್ ಬೀಟಬಲ್” ಎಂದು ಇಡೀ ಜಗತ್ತಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಇಂದು ಇಲ್ಲಿ ಸಿಕ್ಕಿರುವ ಅವಕಾಶ ನಮ್ಮ ಬದುಕನ್ನು ಬದಲಿಸಬಹುದು ಎಂಬ ಕನಸು ಹೊತ್ತು ಎಲ್ಲರೂ ಇಲ್ಲಿದ್ದೇವೆ ಎಂದು ಹೇಳಿದ್ದ.

ತಮ್ಮೆಲ್ಲರ ಕನಸನ್ನು ನನಸಾಗಿಸಿಕೊಂಡು ಅಮೆರಿಕಾ ಗಾಟ್ ಟ್ಯಾಲೆಂಟ್ ವೇದಿಕೆ ಏರಿದ್ದಷ್ಟೇ ಅಲ್ಲದೆ, ಈ ಶೋನ ಟ್ರೋಫಿಯನ್ನೂ ಗೆದ್ದು, ತಾವು ಬಯಸಿದ್ದ ಸಾಧನೆಯನ್ನು ಮಾಡಿ ಇಂದು ತಾವು ಗೆದ್ದಿದ್ದೇವೆಂದು ಆ 28 ಜನರ ತಂಡ ಇಡೀ ಜಗತ್ತಿಗೆ ಸಾರಿದ್ದಾರೆ.

ಇದು ಕೇವಲ ಮುಂಬೈನ ಸ್ಲಂ ಯುವಜನರ ಕತೆ ಅಷ್ಟೇ ಅಲ್ಲ, ಇಂತಹ ಎಲೆ ಮರೆಯ ಪ್ರತಿಭೆಗಳು ಈ ದೇಶದ ಅಸಮಾನತೆ ಮತ್ತು ಅವಕಾಶ ವಂಚನೆಯಿಂದಾಗಿ ತೆರೆಮರೆಯಲ್ಲೇ ಹುದುಗಿ ಹೋಗುತ್ತಿವೆ. ಕೆಲವು ವರ್ಷಗಳ ಹಿಂದೆ ಮಂಡ್ಯ ನಗರದ ಸ್ಲಂ ಹುಡುಗರೂ ಸಹ ಇಂತಹುದೇ ಡ್ಯಾನ್ಸ್ ತಂಡ ಕಟ್ಟಿಕೊಂಡಿದ್ದರು, ಉತ್ತರ ಕರ್ನಾಟಕದ ಬೀದರ್ ನಗರದ ಸ್ಲಂಗಳಲ್ಲಿಯೂ ಅಲೆಮಾರಿ ಸಮುದಾಯಗಳ ಹುಡುಗರು ಅದ್ಭುತ ಡ್ಯಾನ್ಸ್ ತಂಡಗಳನ್ನು ಕಟ್ಟಿಕೊಂಡಿದ್ದರು. ದೇಶದ ಸ್ಲಂಗಳಲ್ಲಿ/ಹಳ್ಳಿಗಳಲ್ಲಿ ಅಡಗಿರುವ ಈ ಸುಪ್ತ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಕ್ಕಿದ್ದೇ ಆದಲ್ಲಿ ಭಾರತೀಯ ಯುವಜನರ ಹೊಸ ಯಶೋಗಾಥೆಯನ್ನು ಬರೆಯುವುದರಲ್ಲಿ ಸಂಶಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...