Homeಮುಖಪುಟಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ.

- Advertisement -
- Advertisement -

| ಯೋಗೇಂದ್ರ ಯಾದವ್ |

ಒಂದು ಅಸಾಮಾನ್ಯ ಅಸಾಧಾರಣ ಚುನಾವಣೆಯ ಅಸಾಧಾರಣ ಫಲಿತಾಂಶ ನಮ್ಮೆದುರಿಗಿದೆ. ಬಿಜೆಪಿಯ ಗೆಲುವಿನ ಅಂತರ ಎಲ್ಲರನ್ನೂ ಚಕಿತಗೊಳಿಸಿದೆ ಎನ್ನುವ ಕಾರಣಕ್ಕಷ್ಟೇ ಈ ಚುನಾವಣೆ ಅಸಾಧಾರಣವಾಗಿಲ್ಲ. ಮೊದಲ ಬಾರಿ ಕಾಂಗ್ರೆಸ್ಸೇತರ ಸರಕಾರವು ಬಹುಮತದಿಂದ ಆಯ್ಕೆಗೊಂಡಿದ್ದಕ್ಕೂ ಈ ಚುನಾವಣೆ ಅಸಾಧಾರಣವಾಗಿಲ್ಲ. ಈ ಚುನಾವಣೆಯ ಪರಿಣಾಮಗಳು ನಮ್ಮ ಪ್ರಜಾಪ್ರಭುತ್ವದ ದೀರ್ಘಕಾಲೀನ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನುವ ಕಾರಣಕ್ಕೆ ಈ ಚುನಾವಣೆ ಅಸಾಧಾರಣವಾಗಿದೆ.

ಒಂದಂತೂ ಸುಸ್ಪಷ್ಟ – ಈ ಚುನಾವಣೆಯಲ್ಲಿ ಬಿಜೆಪಿಗಿಂತ ನರೇಂದ್ರ ಮೋದಿಯವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ನಿಸ್ಸಂದೇಹವಾಗಿ ಈ ಚುನಾವಣೆಯಲ್ಲಿ ಬಹಳಷ್ಟು ತಾರತಮ್ಯವಾಗಿದೆ, ನಿಸ್ಸಂದೇಹವಾಗಿಯೂ ಚುನಾವಣಾ ಆಯೋಗವು ಅಂಪೈರ್ ಆಗಿರಬೇಕಾದ ಸಮಯದಲ್ಲಿ ಆಟಗಾರನಾಗಿ ನಿಂತಿದ್ದಿದೆ. ಆದರೆ ಬಿಜೆಪಿಯ ಗೆಲುವಿಗೆ ಈ ನೆಪಗಳನ್ನಷ್ಟೇ ಹೇಳಲಾಗದು. ವಾಸ್ತವವೇನೆಂದರೆ, ಮೋದಿ ಗೆದ್ದಿದ್ದು ಈ ಜನತೆ ಅವರಿಗೆ ಇನ್ನೊಂದು ಅವಕಾಶ ನೀಡಲಿಚ್ಛಿಸುತ್ತಾರೆ ಎನ್ನುವ ಕಾರಣದಿಂದ. ಈ ಜನಾದೇಶ ಕಲಿಸಿದ ಪಾಠಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆ ಅದರೊಂದಿಗೆ ಇದರಿಂದ ಆಗುವ ಅಪಾಯಗಳನ್ನೂ ನೋಡಬೇಕಿದೆ.

ಮೊದಲ ಪಾಠ ವಿರೋಧಪಕ್ಷಗಳಿಗಾಗಿ ಇದೆ. ಪ್ರಶ್ನೆ ಇರುವುದು, ಜನರು ಮೋದಿಗೆ ಇನ್ನೊಂದು ಅವಕಾಶ ಕೋಡಬೇಕೆಂದು ಯಾವ ಕಾರಣಕ್ಕೆ ಇಚ್ಛಿಸಿದರು? ಗೆಲುವಿನ ಅಂತರ ನೋಡಿದರೆ ಈ ಜನಾದೇಶ ಮೋದಿ ಸರಕಾರದ 5 ವರ್ಷಗಳ ರೆಕಾರ್ಡ್ ಮೇಲೆ ಸ್ವೀಕೃತಿಯ ಮೊಹರ್ ಹಾಕಿದಂತೆ ಎಂಬ ಭ್ರಮೆ ಉಂಟಾಗಬಹುದು. ಆದರೆ ಇದು ಸತ್ಯವಲ್ಲ. 2014 ಮತ್ತು 2019ರ ಗೆಲುವುಗಳು ಒಂದೆ ತರಹದ್ದು ಅನಿಸುತ್ತವೆ. ಆದರೆ ಈ ಎರಡೂ ಚುನಾವಣೆಗಳ ಇತಿಹಾಸದಲ್ಲಿ ಬಹಳ ದೊಡ್ಡ ಅಂತರವಿದೆ. 2014ರಲ್ಲಿ ಜನರ ಮನಸ್ಸಿನಲ್ಲಿ ಮತ್ತೊಂದು ಕಾಂಗ್ರೆಸ್‍ನ ಭ್ರಷ್ಟ ಮತ್ತು ನಿರುಪಯುಕ್ತ ಸರಕಾರದ ಬಗ್ಗೆ ಆಕ್ರೋಶವಿತ್ತು. ಹಾಗೂ ಎರಡನೆಯದಾಗಿ, ಮೋದಿಯವರ ಬಗ್ಗೆ ಆಶಾಭಾವನೆ ಇತ್ತು. ಈ ಸಲ ಮೋದಿ ಸರಕಾರದೊಂದಿಗೆ ಆಶಾಭಂಗ ಶುರು ಆಗಿತ್ತು, ಸಂದೇಹಗಳಿದ್ದವು, ಆತಂಕಗಳೂ ಇದ್ದವು. ಆದರೆ ಮತದಾರರು ವಿರೋಧಪಕ್ಷಗಳ ಕಡೆ ನೋಡಿದಾಗ ಅಲ್ಲಿ ಯಾವ ಭರವಸೆಯೂ ಕಂಡುಬರುತ್ತಿಲ್ಲ.

ಕೊನೆಗೆ ಮೋದಿ ವಿರುದ್ಧದ ಅಸಂತೋಷ ಮುಚ್ಚಿಹೋಯಿತು ಹಾಗೂ ವಿರೋಧಪಕ್ಷಗಳ ಮೇಲಿನ ಅವಿಶ್ವಾಸ ಕೆಲಸ ಮಾಡಿತು. ಈ ಜನಾದೇಶ ಎಷ್ಟು ಮೋದಿಯವರದ್ದಾಗಿದೆಯೋ ಅಷ್ಟೇ ವಿರೋಧಪಕ್ಷಗಳ ನಿರುಪಯುಕ್ತತೆಯ ವಿರುದ್ಧದ್ದೂ ಆಗಿದೆ.

ಎರಡನೆಯ ಪಾಠ, ಚುನಾವಣೆ ಗೆಲ್ಲುವ ಹಳೆಯ ತಂತ್ರಗಳು ಈಗ ಕೆಲಸ ಮಾಡುವುದಿಲ್ಲ. ಬರೀ ಮೋದಿ ವಿರೋಧದ ರಾಜಕೀಯ ಜನತೆ ಸ್ವೀಕರಿಸುವುದಿಲ್ಲ. ಇದರಿಂದ ನರೇಂದ್ರ ಮೋದಿಯವರಿಗಿಂತ ಮೋದಿ ವಿರೋಧಗಳಿಗೇ ಹೆಚ್ಚಿನ ನಷ್ಟವಿದೆ. ಅತ್ತ ಉತ್ತರಪ್ರದೇಶದ ಫಲಿತಾಂಶದಿಂದ ಸ್ಪಷ್ಟವಾಗಿದ್ದೇನೆಂದರೆ, ಜಾತಿಯ ಲೆಕ್ಕಾಚಾರಗಳನ್ನು ಮಾಡಿ ಜನರ ವಿಶ್ವಾಸವನ್ನು ಗಳಿಸುವುದು ಅಸಾಧ್ಯ. ಕೇವಲ ದಲಿತ, ಮುಸ್ಲಿಮ್ ಹಾಗೂ ಯಾದವ್ ಸಮೀಕರಣದ ಮಾತುಗಳನ್ನಾಡಿದರೆ ಈ ಜಾತಿಗಳ ಮತಗಳೂ ದಕ್ಕುವುದಿಲ್ಲ. ಪಕ್ಷಗಳ ಮೈತ್ರಿ ಉಪಯುಕ್ತ ಹಾಗೂ ಅವಶ್ಯಕವೂ ಇದೆ, ಆದರೆ ಬರೀ ಮೈತ್ರಿ ರಚಿಸುವುದರಿಂದ ಸಾಕಾಗುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹಾಳೆಯ ಮೇಲೆ ಎಷ್ಟು ಬಲಶಾಲಿಯಾಗಿ ತೋರುತ್ತಿತ್ತು, ಮಹಾರಾಷ್ಟ್ರದ ಮೈತ್ರಿಯೂ ಗಟ್ಟಿಯಾಗಿತ್ತು, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯ ಮೈತ್ರಿಗಳೂ ತುಂಬಾ ದೊಡ್ಡವು, ಆದರೆ ಇವ್ಯಾವೂ ಕೆಲಸ ಮಾಡಲಿಲ್ಲ.

ಮೂರನೇ ಪಾಠ, ಜನಾದೇಶದ ನಿರ್ಮಾಣ ಮಾಡಬೇಕೆಂದರೆ, ಜನತೆಯನ್ನು ದೇಶದೊಂದಿಗೆ ಬೆಸೆಯುವುದು ಅತ್ಯವಶ್ಯಕ. ಮೋದಿಯವರು ದೇಶದ ಸರಾಸರಿ ನಾಗರಿಕನೊಂದಿಗೆ ಸಂವಾದ ಮಾಡಿದರು. ನಿಸ್ಸಂದೇಹವಾಗಿಯೂ ಅವರ ಸಂವಾದದಲ್ಲಿ ಸುಳ್ಳೇ ಹೆಚ್ಚಿತ್ತು. ನಿಸ್ಸಂದೇಹವಾಗಿಯೂ ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಮಾತುಗಳೇ ಹೆಚ್ಚಿದ್ದವು. ಈ ಸಲ ಅವರ ಮಾತುಗಳಲ್ಲಿ ನಿರೀಕ್ಷೆಗಳಿಗಿಂತ ಆತಂಕವನ್ನು ಸೃಷ್ಟಿಸುವ ಪ್ರಯತ್ನವೇ ಹೆಚ್ಚಿತ್ತು, ಒಡೆದು ಆಳುವ ನೀತಿಯೂ ಇತ್ತು. ಪ್ರಧಾನ ಮಂತ್ರಿಯವರು ನಿಸ್ಸಂದೇಹವಾಗಿಯೂ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯ ಹುದ್ದೆಗೆ ಶೋಭೆಗೆ ತಕ್ಕದ್ದಲ್ಲದ್ದ ಬಹಳಷ್ಟು ಮಾತುಗಳನ್ನಾಡಿದರು. ನಿಸ್ಸಂದೇಹವಾಗಿಯೂ ದೇಶದ ಹೆಚ್ಚಿನ ಮಾಧ್ಯಮಗಳು ಮೋದಿಯವರ ಪರವಾಗಿ ಕೆಲಸ ಮಾಡಿದ್ದವು. ಆದರೆ ಈ ಎಲ್ಲವುಗಳ ಸಹಾಯದಿಂದ ಮೋದಿಯವರು ಒಬ್ಬ ಸರಾಸರಿ ಮತದಾರನಿಗೆ ಅವನು/ಳು ತನ್ನ ಲಾಭ-ನಷ್ಟಗಳಿಗಾಗಿ ಅಲ್ಲದೇ, ದೇಶಕ್ಕಾಗಿ ಮತ ನೀಡುತ್ತಿದ್ದಾರೆ ಎಂದು ಭಾವಿಸುವಂತೆ ಮಾಡಿದರು. ವಿರೋಧಪಕ್ಷಗಳ ಬಳಿ ಮತದಾರರ ಸಲುವಾಗಿ ಇಂತಹ ಯಾವುದೇ ದೊಡ್ಡ ಸಂದೇಶವೂ ಇದ್ದಿಲ್ಲ, ಯಾವ ದೊಡ್ಡ ಕನಸೂ ಇದ್ದಿಲ್ಲ ಮತ್ತು ಯಾವ ನಿರೀಕ್ಷೆಯೂ ಇದ್ದಿಲ್ಲ.

ನಾಲ್ಕನೇ ದೊಡ್ಡ ಪಾಠವೆಂದರೆ, ಜನರು ಇಂತಹ ಆಸೆಯ, ನಿರೀಕ್ಷೆಗಳ ಒಂದು ಸಗುಣ ಮುಖವನ್ನು ನೋಡಲಿಚ್ಛಿಸುತ್ತಾರೆ. ತಾವು ಭರವಸೆ ಇಡಬಲ್ಲಂತಹ ಒಬ್ಬ ನಾಯಕನನ್ನು ಬಯಸುತ್ತಾರೆ. ಜನರು ಒಂದು ವೇಳೆ ನರೇಂದ್ರ ಮೋದಿ ಅವರನ್ನು ಇಂತಹ ಮುಖದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂದರೆ ಅದಕ್ಕೆ ಕಾರಣ ಅವರ ಕೆಲಸ ಜನರಿಗೆ ಇಷ್ಟ ಎಂದು ಇಲ್ಲ. ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ. ಮೋದಿಯಿಂದ ನಿರಾಸೆಗೊಂಡ ಜನರು ರಾಹುಲ್ ಗಾಂಧಿಯ ಕಡೆ ನೋಡಿದಾಗ ಹೆದರಿಕೊಂಡು ಮತ್ತೇ ಮೋದಿಯವರಲ್ಲೇ ಸದ್ಗುಣಗಳನ್ನು ಹುಡುಕತೊಡಗುತ್ತಾರೆ. ಅಲ್ಲಿ ಸತ್ಯ ಕಾಣದಿದ್ದರೂ ಗಟ್ಟಿತನವಂತೂ ಅವರಿಗೆ ಕಾಣಿಸುತ್ತದೆ. ವಿರೋಧಪಕ್ಷಗಳ ಬಳಿ ಸಂದೇಶವೂ ಇರಲಿಲ್ಲ, ಸಂದೇಶಕಾರರೂ ಇರಲಿಲ್ಲ. ನಾವು ನೀವು ಇಷ್ಟಪಡಬಹುದು ಅಥವಾ ಬಿಡಬಹುದು ಆದರೆ, ವಿಶ್ವಾದ್ಯಂತ ನೇರವಾಗಿ ವ್ಯಕ್ತಿತ್ವಗಳ ಸ್ಪರ್ಧೆ ಆಗುತ್ತಿವೆ. ಹಾಗೂ ಇಂದು ದೇಶವು ಒಂದು ವಿಶ್ವಾಸಾರ್ಹ ಮುಖದ ಹುಡುಕಾಟದಲ್ಲಿದೆ.

ಈ ಜನಾದೇಶವು ಹೇಳಿದ ಪಾಠಗಳೊಂದಿಗೆ ಇದರ ಅಪಾಯಗಳನ್ನೂ ತಿಳಿದುಕೊಳ್ಳಬೇಕಿದೆ. ಇಂತಹ ಜನಾದೇಶ ಅಹಂಕಾರ ಹುಟ್ಟಿಸಬಲ್ಲುದು. ಹಿಂದು-ಮುಸ್ಲಿಮ್ ದ್ವೇಷ ಹುಟ್ಟಿಸಿ ಗೆದ್ದುಕೊಂಡ ಚುನಾವಣೆ ಭಯವನ್ನೂ ಹುಟ್ಟಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಸ್ವಧರ್ಮದ ಎರಡು ದೊಡ್ಡ ಆಧಾರಸ್ತಂಭಗಳಾದ ಲೋಕತಂತ್ರ ಮತ್ತು ವಿವಿಧತೆಗಳಿಗೆ ದೊಡ್ಡ ಅಪಾಯವಿದೆ. ಪ್ರಶ್ನೆ ಇರುವುದು ಈ ಪ್ರಶ್ನೆಗಳನ್ನು ಮುಖಾಮುಖಿ ಎದುರಿಸುವವರ್ಯಾರು? ಸದ್ಯದ ವಿರೋಧಪಕ್ಷಗಳು ಈ ಸ್ಪರ್ಧೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಪ್ರಮುಖ ರಾಷ್ಟ್ರೀಯ ವಿರೋಧ ಪಕ್ಷದ ರೂಪದಲ್ಲಿ ಕಾಂಗ್ರೆಸ್ ಅಂತೂ ಈ ಕೆಲಸದಲ್ಲಿ ಅಪ್ರಸ್ತುತವಷ್ಟೇ ಅಲ್ಲ, ಆ ಕಾರ್ಯಕ್ಕೆ ಒಂದು ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಸ್ವಧರ್ಮದ ರಕ್ಷಣೆಗೆ ಒಂದು ಹೊಸ ಪರ್ಯಾಯದ ಅವಶ್ಯಕತೆ ಇದೆ. ಈ ಪರ್ಯಾಯದ ದಾರಿ ಸುಗಮವಾಗಿರುವುದಿಲ್ಲ. ಅದಕ್ಕೆ ಅಧಿಕಾರ, ಹಣ ಮತ್ತು ಮಾಧ್ಯಮ, ಈ ಮೂರರೊಂದಿಗೂ ಸೆಣಸುವ ಸವಾಲು ಎದುರಾಗುವುದು. ಆದರೆ, ಸ್ವಧರ್ಮದ ರಕ್ಷಣೆಯಲ್ಲಿ ತೊಡಗಿರುವ ಸಿಪಾಯಿಗಳೊಂದಿಗೆ ಈ ದೇಶದ ಮಣ್ಣಿದೆ, ದೇಶದ ಸಂವಿಧಾನವಿದೆ, ರಾಷ್ಟ್ರಪಿತ ಗಾಂಧೀಜಿಯ ಪರಂಪರೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾರ್ವತ್ರಿಕ ಮುಷ್ಕರ | ಕೆಲ ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ; ಬ್ಯಾಂಕಿಂಗ್, ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 'ಕಾರ್ಮಿಕ, ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳ' ವಿರುದ್ಧ ಕಾರ್ಮಿಕ ಸಂಘಟನೆಗಳು ಗುರುವಾರ (ಫೆ.12) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಿಂದ ವಿವಿಧ ರಾಜ್ಯಗಳಲ್ಲಿ ಜನ ಜೀವನ...

ಅದಾನಿ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್‌ಗೆ ಶಿಕ್ಷೆ: ‘ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೊಡೆತ’ ಎಂದ ಪತ್ರಕರ್ತರ ಸಂಘಟನೆಗಳು

ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತನಿಖಾ ಪತ್ರಕರ್ತ ರವಿ ನಾಯರ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಹಲವಾರು ಪತ್ರಿಕಾ ಸಂಸ್ಥೆಗಳು...

‘ನಾವು ಯಾರನ್ನೂ ನಿಂದಿಸಿಲ್ಲ’: ಚೇಂಬರ್ ‘ದುರ್ವರ್ತನೆ’ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ 

ನವದೆಹಲಿ: ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ತಮ್ಮ ಪಕ್ಷದ ಸಂಸದರು "ಅನುಚಿತವಾಗಿ ವರ್ತಿಸಿದ್ದಾರೆ" ಎಂದು ಆರೋಪಿಸಿದಾಗ, ಅವರನ್ನು ಬೆಂಬಲಿಸಿದ್ದೇನೆ ಎಂದು ಹೇಳಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸದೀಯ ವ್ಯವಹಾರಗಳ...

‘ಭಾರತಕ್ಕೆ ಮರಳಲು ಇದು ಕೊನೆಯ ಅವಕಾಶ’: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್‌ ಎಚ್ಚರಿಕೆ

ಭಾರತದ ಹೊರಗೆ ಇರುವ ಉದ್ಯಮಿ ವಿಜಯ್ ಮಲ್ಯ ನ್ಯಾಯಾಲಯದ ಪ್ರಕ್ರಿಯೆಗಳಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಅವರಿಗೆ ಭಾರತಕ್ಕೆ ಮರಳಲು “ಒಂದು ಕೊನೆಯ ಅವಕಾಶ” ನೀಡಿದೆ. ಒಂದು ವೇಳೆ...

ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯದ ಬಗ್ಗೆ ರಾಜ್ಯಸಭೆಯಲ್ಲಿ ಖರ್ಗೆ ಕಳವಳ; ಒಡಿಶಾ ಅಂಗನವಾಡಿ ಘಟನೆ ಉಲ್ಲೇಖ

ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ಕುರಿತು ರಾಜ್ಯಸಭೆಯಲ್ಲಿ ಗುರುವಾರ (ಫೆ.12) ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಒಡಿಶಾದ ಅಂಗನವಾಡಿಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರವನ್ನು...

ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ...

‘ಆಕೆಯ ಜೀವ ಮುಖ್ಯ’: ಅಮೆರಿಕದ ಪೊಲೀಸ್ ಅಧಿಕಾರಿ ವೇಗದ ಚಾಲನೆಯಿಂದ ಸಾವನ್ನಪ್ಪಿದ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ 260 ಕೋಟಿ ಪರಿಹಾರ

2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಚಾಲನೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಡಿಕ್ಕಿ ಹೊಡೆದ ಕಾರಣ ಸಾವನ್ನಪ್ಪಿದ ಭಾರತದ 23 ವರ್ಷದ ಪದವೀಧರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಸಿಯಾಟಲ್ ನಗರವು...

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ಲೋಕಸಭೆ ಅಧಿವೇಶನದಲ್ಲಿ ಗುರುವಾರ (ಫೆ.12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್...

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಪುತ್ರ ಶಿವಂ ಮಿಶ್ರಾ ಬಂಧನ

2026 ಫೆಬ್ರವರಿ 8, ಭಾನುವಾರದಂದು ವಿಐಪಿ ರಸ್ತೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದ ಹೈ ಪ್ರೊಫೈಲ್ ಲ್ಯಾಂಬೋರ್ಗಿನಿ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು...

ಫೆಬ್ರವರಿ 12 ರಂದು ಭಾರತ್ ಬಂದ್| ಹಲವು ರಾಜ್ಯಗಳಲ್ಲಿ ಬಂದ್ ಗೆ ಪೂರ್ಣ ಬೆಂಬಲ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12, ಗುರುವಾರ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿದೆ. ಕರ್ನಾಟಕದಲ್ಲಿಯೂ ಕಾರ್ಮಿಕ ಸಂಘಟನೆಗಳು ಮುಷ್ಕರವನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರದ 4...