Homeಚಳವಳಿ'ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ'

‘ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ’

ಮರಾಠಿ ಮೂಲ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ.

- Advertisement -
- Advertisement -

ಹೀಗೆ ಹೇಳಿದ್ದು, ಬೇರೆ ದೇಶದ ವಿಚಾರವಂತವನಲ್ಲ; ಮರಾಠಿ ಮೂಲದ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ಈ ಎಲ್ಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ. ಎರಡು ದಿನವೂ ಪೂರ್ಣವಾಗಿ ಶಾಲೆಗೆ ಹೋಗದ ಇವರು ವಿಶ್ವಮಾನ್ಯ ಸಾಹಿತ್ಯವನ್ನು ಸ್ವ-ಅನುಭವದಿಂದಲೆ ರಚಿಸಿದರು. ಇವರ ಮಹಾನ್ ಸಾಹಿತ್ಯ ಇಂದು ಜಾಗತಿಕವಾಗಿ 27 ಭಾಷೆಗಳಲ್ಲಿ ಅನುವಾದಗೊಂಡಿದೆ. ಅಗಸ್ಟ್‌ 1 ಇವರ ಜಯಂತಿ. ಈ ವರ್ಷ ಜನ್ಮ ಶತಮಾನೋತ್ಸವ. ಈ ಸಂಧರ್ಭದಲ್ಲಿ ಒಂದೆರಡು ಮಾತುಗಳು.

ಕರ್ನಾಟಕ ಸೀಮೆಗೆ ಹತ್ತಿಕೊಂಡಿರುವ ಸಾಂಗಲಿ ಜಿಲ್ಲೆಯ ವಾಳವಾ ತಾಲೂಕಿನ ವಾಟೆಗಾಂವ ಎಂಬ ಗ್ರಾಮದಲ್ಲಿ 1 ಅಗಸ್ಟ್‌ 1920 ರಂದು ಮಾಂಗ ಎಂಬ ಶೋಷಿತ ಜಾತಿಯಲ್ಲಿ ಜನಿಸಿದರು. ಬಾಲ್ಯದ ಹೆಸರು ತುಕಾರಾಮ. ತಂದೆ ಬಾವುರಾವ ಸಾಠೆ, ಕುಟುಂಬ ಪರಿಸ್ಥಿತಿ ಅತ್ಯಂತ ನಾಜೂಕು. ಶಾಲೆ ಕಲಿತು ದೊಡ್ಡವನಾಗುವ ಆಸೆಯಲ್ಲಿ ಶಾಲೆಗೆ ಹೋದರೆ ಜಾತಿ ಎಂಬ ಕ್ರೂರ ರಾಕ್ಷಸ. ಒಂದು ದಿನ ಪೂರ್ಣ ಹೋಗಿ ಮರುದಿನ ಮಧ್ಯಾಹ್ನನವೆ ಶಾಲೆಯಿಂದ ದೂರಾದರು.

ಮುಂದೆ 1932 ರಲ್ಲಿ ಉದರ ನಿರ್ವಣೆಗಾಗಿ ತಂದೆ ಜೊತೆ ಮುಂಬಯಿ ಸೇರಿದರು. ಇದ್ದಿಲು ಆರಿಸುವದು ಸೇರಿದಂತೆ ಸಿಕ್ಕ ಸಣ್ಣ-ಪುಟ್ಟ ಕೆಲಸ ಮಾಡುತಿದ್ದರು. ಬಿಡುವಿನ ಸಮಯದಲ್ಲಿ ಸ್ವತಃ ಪ್ರಯತ್ನ ಪೂರ್ವಕ ಅಕ್ಷರ ಜ್ಞಾನವನ್ನು ಕಲಿತರು. ಆಗಲೆ ಅವರಿಗೆ ಕಾರ್ಮಿಕರ ಕಷ್ಟದ, ದುಃಖದ ಬದುಕು ಅರಿವಿಗೆ ಬಂತು. ಮನದಲ್ಲಿ ಹೊತ್ತ ಕಿಡಿಯು ಕಾರ್ಮಿಕರ ಆಂದೋಲನದಲ್ಲಿ ಧುಮುಕುವಂತೆ ಮಾಡಿತು. 1936 ರಲ್ಲಿ ಭಾರತೀಯ ಕಮ್ಯುನಿಷ್ಟ್‌ ಪಕ್ಷದ ನಾಯಕ ಕಾ. ಶ್ರೀಪಾದ ಡಾಂಗೆಯವರ ಪ್ರಭಾವದಿಂದ ಕಮ್ಯುನಿಷ್ಟ್‌ ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾಗಿ ಕೆಲಸ ಮಾಡಿದರು.

ತಂದೆಯ ಅವಸಾನದ ನಂತರ ಮನೆಯ ಜವಾಬ್ದಾರಿ ಇವರ ಹೆಗಲಿಗೆ ಬಂತು. ಆಗ ಮತ್ತೆ ತಮ್ಮೂರಿಗೆ ಬಂದರು. ಅಲ್ಲಿ ಸಹೋದರನ ತಮಾಷಾ ಕಂಪನಿಯಲ್ಲಿ ಕೆಲಸ ಮಾಡಿದರು. ಇಲ್ಲಿಯ ತಮಾಷಾ ಕಲೆಯು ಮುಂದೆ ಪ್ರಸಿದ್ಧ ಲೋಕನಾಟ್ಯವನ್ನಾಗಿ ಮಾಡುವಲ್ಲಿ ಬಹಳಷ್ಟು ಸಹಾಯಕಾರಿ ಆಯಿತು. ನಂತರ ಮತ್ತೆ ಮುಂಬಯಿಯನ್ನು ಸೇರಿದರು.

ಈ ಸಲದ ಮುಂಬಯಿ ವಲಸೆ ಅವರಲ್ಲಿ ಬಹಳಷ್ಟು ಬದಲಾವಣೆ ತಂದಿತು. ಏಕೆಂದರೆ ಮ್ಯಾಕ್ಸಿಮ್ ಗೊರ್ಕಿಯ ಸಾಹಿತ್ಯ ಓದಲು ದೊರೆಯಿತು. ಬರಹಕ್ಕೆ ಸ್ಪೂರ್ತಿ ಸಿಕ್ಕಿದ್ದು ಇಲ್ಲಿಂದಲೆ. ಮುಂದೆ ಅವರ ಭೇಟಿ ಖ್ಯಾತ ಲೋಕಶಾಹೀರ ‘ಅಮರ ಶೇಖ’ರ ಜೊತೆ ಆಯಿತು, ಆಗ ಇವರಲ್ಲಿದ್ದ ಅಗಾಧ ಪ್ರತಿಭೆ ಕಂಡು ಇವರನ್ನು ಸಹ ಲೋಕಶಾಹಿರ ಎಂದು ಕರೆದರು.

ಸಾಹಿತಿಗಿಂತ ಶಾಹಿರ ಎಂದು ಹೆಚ್ಚು ಪ್ರಸಿದ್ಧರಾಗಿದ್ದರು. ಸ್ಫೂರ್ತಿದಾಯಕ ಮಾತು, ನಟನೆ, ಗಾಯನ ಒಟ್ಟಿನಲ್ಲಿ ಇವರಲ್ಲಿದ್ದ ಬಹುಮುಖಿ ಪ್ರತಿಭೆಗೆ ಜನರ ಮೆಚ್ಚುಗೆ ಬಹಳಷ್ಟು ಇತ್ತು. ಮರಾಠಿಯ ಪೋವಾಡಾ ಕಲೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದ ಮೊದಲಿಗರು ಇವರು. ಇದರಿಂದ ಕಮ್ಯುನಿಷ್ಟ್‌ ವಿಚಾರಗಳ್ನು ಪ್ರಸಿದ್ಧಿ ಮಾಡಿದವರಿವರು. ಅದಕ್ಕೆ ಇವರನ್ನು ಕಮ್ಯುನಿಷ್ಟ್‌ ಶಾಹಿರ ಎಂದು ಕರೆಯುತ್ತಾರೆ.

ಇವರು ರಚಿಸಿದ ಸ್ಟಾಲಿನ್‍ಗ್ರಾಡ್ ಪೋವಾಡಾ ಪ್ರಸಿದ್ಧವಾದದ್ದು. ರಶಿಯಾದಲ್ಲಿಯೂ ಸಹ ಪೋವಾಡಾ ಸಾದರ ಪಡಿಸಿ ರಶಿಯಾದ ಅಧ್ಯಕ್ಷರಿಂದ ಮೆಚ್ಚುಗೆಗೆ ಪಡೆದಿದ್ದರು. ವಿಶೇಷವೆಂದರೆ ಭಾರತದಲ್ಲಿ ಮಾರ್ಕ್ಸ್‌ವಾದಿ ವಿಚಾರಗಳ ಅವಿಷ್ಕಾರವನ್ನು ಈ ಪೋವಾಡಾ ಮತ್ತು ಲೋಕನಾಟ್ಯಗಳಿಂದ ಮಾಡಿದರು. ಜನಪದ ಶೈಲಿಯಲ್ಲಿಯೆ ತತ್ವಜ್ಞಾನ ಮತ್ತು ಸೌಮ್ಯವಾದಿ ವಿಚಾರಗಳನ್ನು ಜನರ ಮುಂದೆ ಇಟ್ಟರು.

1942 ರ ಸ್ವತಂತ್ರ ಚಳುವಳಿಯಲ್ಲಿ ಸಕ್ರೀಯ ಸಹಭಾಗದ ಕಾರಣ ಬ್ರೀಟಿಷ್ ಸರಕಾರವು ಇವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತು. ಮುಂಬಯಿ ಬಂದು ತಪ್ಪಿಸಿಕೊಂಡರು. ಆದರೂ ಚಳುವಳಿಯಲ್ಲಿ ಸಕ್ರೀಯತೆ ಇತ್ತು. ಮಹಾತ್ಮಾ ಫುಲೆ, ಶಾಹು ಮಹಾರಾಜ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರರ ದಮನಿತ ಮತ್ತು ಶೋಷಿತ ವರ್ಗದ ಏಳಿಗೆಯ ಚಳುವಳಿಯನ್ನು ಅತ್ಯಂತ ಸಮರ್ಥರಾಗಿ ಮುನ್ನಡಿಸಿಕೊಂಡು ಬಂದರು. ಇವರು ಪ್ರಖರ ಅಂಬೇಡ್ಕರವಾದಿ; ಅಷ್ಟೆ ಮಾರ್ಕ್ಸವಾದಿ ಕೂಡ. ಅಂಬೇಡ್ಕರವಾದ ಮತ್ತು ಮಾರ್ಕ್ಸವಾದವನ್ನು ಸಮನ್ವಯ ಸಾಧಿಸಿದ ಏಕೈಕರು.

ದೇಶಕ್ಕೆ ಸ್ವತಂತ್ಯ್ರ ದೊರೆತ ತಕ್ಷಣ 1947 ಅಗಸ್ಟ 16 ರಂದು “ಈ ಸ್ವಾತಂತ್ರ ಸುಳ್ಳು, ಜನರು ಹಸಿವೆಯಿಂದ ಕಂಗಾಲಾಗಿದ್ದಾರೆ..” ’’ಮೊದಲು ಜನರ ಹೊಟ್ಟೆ ತುಂಬಿಸಿ’’ ಎಂಬ ಘೋಷಣೆ ಮಾಡುತ್ತಾ ಶಿವಾಜಿ ಪಾರ್ಕಿನಲ್ಲಿ ಧರಣಿ ಕುಳಿತರು. ಮಹಾಭಯಂಕರ ಮಳೆ ಬಂದರು ಹಿಂದೆ ಸರಿಯಲಿಲ್ಲ. ಅದಲ್ಲದೆ ಗೋವಾ ಮುಕ್ತಿ ಸಂಗ್ರಾಮ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳುವಳಿಯಲ್ಲಿ ಮುಂಚೂಣಿಯಲ್ಲಿ ಇದ್ದರು.

ಅಲ್ಪ ಶಿಕ್ಷಿತರಾದ ಇವರು ಸತತ ಚಿಂತನೆ ಮತ್ತು ವೈಶ್ವಿಕ ಕಾರ್ಯಗಳಿಂದ ಸಾಹಿತ್ಯಕ್ಕೆ ಬಹುದೊಡ್ಡ ಕಾಣಿಕೆ ನೀಡಿದರು. ಇವರು ಬರೆದ ಸಾಹಿತ್ಯ ಲೋಕನಾಟ್ಯ-13, ನಾಟಕ –3, ಕಥಾಸಂಗ್ರಹ –13, ಕಾದಂಬರಿ-35, ಪೋವಾಡ-15, ಪ್ರವಾಸ ವರ್ಣನೆ-1, ಚಿತ್ರಪಟ ಕಥೆ-7 ಇದಲ್ಲದೆ 100 ಕ್ಕಿಂತ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವೊಂದು ಲಾವಣಿಗಳೆಂದು ಪ್ರಸಿದ್ಧವಾಗಿವೆ.

ಇವರ ಸಾಹಿತ್ಯ ಜಾತಿ, ಧರ್ಮ ಬಿಟ್ಟು ಜಾಗತಿಕ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತದ್ದು. ಹಾಗಂತಲೆ ಅದು ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಅನುವಾದಗೊಂಡಿದೆ. ಮೌಢ್ಯದ ಸಾಮಾಜಿಕ ಚಿಂತನೆಯಲ್ಲಿ ಸಾಠೆಯವರ ಸಾಹಿತ್ಯ ಹರಿತವಾದ ಖಡ್ಗದಂತೆ ಪ್ರಹಾರ ಮಾಡುತ್ತದೆ. 1959 ರಲ್ಲಿ ಪ್ರಕಟಣೆಯಾದ ’ಫಕೀರಾ’ ಕಾದಂಬರಿಯು ಬಹಳ ಪ್ರಸಿದ್ಧವಾಯಿತು. ಅವರ ಫಕೀರಾ ಕಾದಂಬರಿ ಜೊತೆ ಇನ್ನೂ ಹಲವು ಸಾಹಿತ್ಯ ಕನ್ನಡಕ್ಕೂ ಸಹ ಅನುವಾದಗೊಂಡಿದೆ.

ಸಾಠೆಯವರು ತಮ್ಮ ಸಾಹಿತ್ಯದಲ್ಲಿ ಸಮತೆ, ವ್ಯಾಸ್ತವ್ಯತೆ ಮತ್ತು ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ತಮ್ಮ ಸಾಹಿತ್ಯದ ಬಗ್ಗೆ, “ನಾನು ಹೇಗೆ ಬದಕುತ್ತೇನೆ, ಏನು ನೋಡುತ್ತೇನೆ, ಯಾವುದನ್ನು ಅನುಭವಿಸುತ್ತೇನೆ, ಅದನ್ನೆ ಬರೆಯುತ್ತೇನೆ. ನಾನು ಆಳ ನೀರಿನ ಕಪ್ಪೆ. ನನಗೆ ಕಲ್ಪನೆಯ ರೆಕ್ಕೆ ಹಚ್ಚಿ ಹಾರಲು ಬರುವದಿಲ್ಲ” ಎಂದು ಹೇಳುತ್ತಾರೆ. ಇದು ಅವರ ಲೇಖನದ ಹಿಂದಿನ ಸ್ಪಷ್ಟವಾದ ನಿಲುವು. “ನನಗೆ ಬದುಕಿನ ಮೇಲೆ ನಿಷ್ಠೆ. ನನಗೆ ಶ್ರಮಜೀವಿಗಳೆಂದರೆ ಬಹಳ ಇಷ್ಟ. ಅವರ ಶ್ರಮಶಕ್ತಿ ಅತ್ಯಂತ ಶ್ರೇಷ್ಠವಾದದ್ದು, ಅವರಿಂದಲೆ ಈ ಜಗತ್ತು ಮುನ್ನಡೆಯುತ್ತದೆ. ಅವರ ಪ್ರಯಾಸ ಮತ್ತು ಯಶಸ್ಸಿನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.” ಇದು ಅವರ ಶ್ರಮಿಕರ ಬಗೆಗಿನ ಗೌರವ ಮತ್ತು ಅವರ ಸಾಹಿತ್ಯದ ಕೇಂದ್ರಸ್ಥಾನದಲ್ಲಿ ಈ ಜನರೇ ಇದ್ದಾರೆ.

ಇವರ ಸಮರ ಅಜ್ಞಾನದ ಅಂಧಕಾರದಲ್ಲಿ ಮಲಗಿದ ಸಮಾಜದ ವಿರುದ್ಧದಲ್ಲಿತ್ತು. ಮೇಲ್ವರ್ಗದವರ ದಬ್ಬಾಳಿಕೆಯ ರೂಢಿ-ಪರಂಪರೆಗಳ ವಿರುದ್ಧದಲ್ಲಿತ್ತು. ಧರ್ಮದಲ್ಲಿದ್ದ ಅನಿಷ್ಠತೆಯೆ ದಮನಿತ ಮತ್ತು ಶೋಷಿತರನ್ನು ಗುಲಾಮರನ್ನಾಗಿಸಿತು. ಅದಕ್ಕಾಗಿ ಅವರು ಹೇಳುತಿದ್ದರು, “ಅನಿಷ್ಠ ಧರ್ಮದ ಆಚರಣೆಯಿಂದ ಜನರನ್ನು ಹೀನರನ್ನಾಗಿ ಕಾಣುವದು ಧರ್ಮವಲ್ಲ ಅದೊಂದು ರೋಗವಾಗಿದೆ.” ಅದಕ್ಕೆ ಅವರು, “ಓ.. ಮನುಜನೆ ನೀನು ಗುಲಾಮನಲ್ಲ; ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಎಂದು ಹೇಳುತಿದ್ದರು. ದೇಶದಲ್ಲಿಯ ಜಾತಿ ಉಚ್ಛಾಟನೆ ಮಾಡದೆ ದೇಶದ ಪ್ರಗತಿ ಅಸಾಧ್ಯ ಎಂಬುದು ಅವರಿಗೆ ಗೊತ್ತಿತ್ತು. ಅದಕ್ಕೆ “ಜಾತಿ ವಾಸ್ತವ್ಯವಿದ್ದರೆ ಬಡತನ ಕೃತ್ರಿಮ. ಬಡತನ ನಿರ್ಮೂಲನೆ ಮಾಡುವದು ಸಹಜ. ಆದರೆ ಜಾತಿ ನಷ್ಟ ಮಾಡುವದು ನಮ್ಮೆಲ್ಲರ ಕೆಲಸವಾಗಿದೆ…” ಎಂದು ಹೇಳಿ ಜಾತಿ ನಿರ್ಮೂಲನೆ ಮಾಡಲು ಕರೆ ಕೊಟ್ಟರು.

ಆದರೆ ಜಾತಿಭೇದವು ಇವರನ್ನು ಕೊನೆಯವರೆಗೂ ಕಾಡಿತು. ಅವರು ಸ್ವತಃ ಸಾಲ ಮಾಡಿ “ಫಕೀರಾ” ಚಲನಚಿತ್ರವನ್ನು ಅದ್ಭುತವಾಗಿ ನಿರ್ಮಿಸಿದರು. ಯಶವಂತರಾವ ಚವ್ಹಾಣರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಜಾತಿ ಅಡ್ಡಬಂದು ಚಲನಚಿತ್ರ ನಡೆಯಲಿಲ್ಲ. ಸಾಲ ತಿರಲಿಲ್ಲ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚಾದವು. ನೈರಾಶ್ಯದಿಂದ ಆರೋಗ್ಯವು ಹದಗೆಟ್ಟಿತು. ಹೀಗಾಗಿ ಕೇವಲ 49ನೇ ವಯಸ್ಸಿನಲ್ಲಿ ಅಂದರೆ 1969 ರಲ್ಲಿ ತೀರಿಕೊಂಡರು.

ವಿಪರ್ಯಾಸ ನೋಡಿ, ಜಾತಿ ನಿರ್ಮೂಲನೆಗೆ ಹೋರಾಟ ಮಾಡಿದ ಇವರನ್ನು ಮತ್ತೆ ನಾವು ಒಂದು ಜಾತಿಗೆ ಮಾತ್ರ ಮಿಸಲಿಟ್ಟಿದ್ದೇವೆ. ಇವರು ಅಲ್ಪ ಶಿಕ್ಷಿತರಾಗಿ ಮಾಡಿದ ಕ್ರಾಂತಿ ನಮ್ಮೆಲ್ಲರಿಗೆ ಪ್ರೇರಣೆ ಎಂದು ತಿಳಿದುಕೊಂಡು ದೇಶದಲ್ಲಿ ಸೌಹಾರ್ದತೆ ತರಬೇಕಿದೆ. ಇಂದು ನಾವೆಲ್ಲರೂ ಹೆಸರಾಂತ ವಿಶ್ವವಿದ್ಯಾಲಯದಲ್ಲಿ ಉನ್ನತದ ಮಟ್ಟದ ಹೈಟೆಕ್ ಶಿಕ್ಷಣ ಪಡೆಯುತ್ತಿದ್ದೇವೆ. ಆದರೆ ನಮ್ಮ ವಿಚಾರಗಳು ಮಾತ್ರ ಹೈಟೆಕ್ ಆಗಲೆ ಇಲ್ಲ. ಸಾಮಾಜಿಕ ತಾಣಗಳಲ್ಲಿ ಸಕ್ರೀಯರಾದ ಇಂದು ನಾವು ಇಂತಹ ಮಹಾನ್ ಜನರ ಕಾರ್ಯಗಳನ್ನು ಅರಿಯಬೇಕಿದೆ. ಶ್ರಮ ಜೀವಿಗಳ ಬೆನ್ನಿಗೆ ನಿಲ್ಲಬೇಕಿದೆ. ವಿಶ್ವ ಮನುಕುಲದ ಏಳಿಗೆಗಾಗಿ ದುಡಿಯಬೇಕಿದೆ. ಭೇದಭಾವವನ್ನು ಮರೆಮಾಚದೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ನಡೆಯಬೇಕಿದೆ.

ಬರಹ: ಮಲಿಕಜಾನ ಶೇಖ, ಅಕ್ಕಲಕೋಟ, ಸೊಲ್ಲಾಪುರ


ಓದಿ: ಜನಸಂಕಷ್ಟಕ್ಕೆ ದನಿಯಾದ ಜೀವನಾಡಿಗಳು


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...