Homeಮುಖಪುಟಈ ಸೋಲು ಕಾಂಗ್ರೆಸ್ಸಿನದೋ? ಪ್ರಗತಿಪರರದ್ದೋ?

ಈ ಸೋಲು ಕಾಂಗ್ರೆಸ್ಸಿನದೋ? ಪ್ರಗತಿಪರರದ್ದೋ?

- Advertisement -
- Advertisement -

ಇಲ್ಲಿ ಕಾಂಗ್ರೆಸ್ ಎಂದಾಗ ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ಎಂದೂ, ಪ್ರಗತಿಪರರು ಎಂದಾಗ ಎಡ, ಲಿಬರಲ್ ಇತ್ಯಾದಿ ಎಂದೂ ಓದಿಕೊಳ್ಳಬಹುದು. 2019ರ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ಫಲಿತಾಂಶವು ಸಮಾಜದಲ್ಲಿ ಆಗಿರುವ ಬದಲಾವಣೆಯ ಪ್ರತೀಕ ಎಂಬುದು ಈಗಂತೂ ಸಾಬೀತಾಗಿದೆ. ಸೋತು ಸೊರಗಿ ಹೋಗಿರುವ ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿಯವರು ರಾಜೀನಾಮೆ ಕೊಟ್ಟರಲ್ಲದೇ, ಅದು ನಾಟಕವಲ್ಲ ಎಂದು ಸ್ಪಷ್ಟಪಡಿಸಿದರು. ಅವರು ರಾಜೀನಾಮೆ ಕೊಟ್ಟಾಗ, ಪಕ್ಷದೊಳಗೆ ಇನ್ನಷ್ಟು ಅಧಿಕಾರ ಪಡೆದುಕೊಳ್ಳಲು ಮತ್ತು ಕೆಲವು ಹಿರಿಯರನ್ನು ದೂರಲು ಮಾಡಿರುವ ನಾಟಕ ಎಂದು ಭಾವಿಸಲಾಯಿತು. ಬಿಜೆಪಿಯು ವಂಶಾಡಳಿತದ ಮೇಲೆ ನಡೆಸುತ್ತಿರುವ ದಾಳಿಯಿಂದ ತಪ್ಪಿಸಿಕೊಳ್ಳಲು ರಾಹುಲ್‍ಗಾಂಧಿ ನಿಜಕ್ಕೂ ಅಧಿಕಾರ ತ್ಯಜಿಸುತ್ತಿದ್ದಾರೆ ಎಂದೂ ಹೇಳಲಾಯಿತು. ಇವೆರಡರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದು ಪತ್ತೆಯಾಗುವುದು ಕಷ್ಟ. ಗಾಂಧಿ ಕುಟುಂಬ ಅಧಿಕಾರ ಬೇಡವೆಂದರೂ, ಅವರಿಗೇ ಅಂಟಿಕೊಂಡಿರಬೇಕಾದ ಅನಿವಾರ್ಯತೆ ಕಾಂಗ್ರೆಸ್ಸಿಗಿರಬಹುದು. ಇಲ್ಲವೇ ಅವರಿಗೂ ಅಧಿಕಾರ ಅಭ್ಯಾಸವಾಗಿರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಸೋನಿಯಾಗಾಂಧಿ ಮತ್ತೆ ‘ಹಂಗಾಮಿ’ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಎಷ್ಟು ತಾತ್ಕಾಲಿಕ ಎಂಬುದನ್ನು ಮುಂದಿನ ದಿನಗಳು ಹೇಗೂ ತಿಳಿಸುತ್ತವೆ.

ಆದರೆ, ದೇಶಕ್ಕೊಂದು ಪ್ರತಿಪಕ್ಷವೂ ಗತಿಯಿರದ ಸ್ಥಿತಿಗೆ ಭಾರತದ ಪ್ರಜಾಪ್ರಭುತ್ವ ತಲುಪಿದೆ. ಸರ್ವಾಧಿಕಾರ ಲಕ್ಷಣಗಳು ಬಹಳ ಹಿಂದೆಯೇ ಕಾಣಿಸಿತ್ತಾದರೂ, ಅದು ಜಾರಿಗೆ ಬರುತ್ತಿರುವುದು ಕಣ್ಣ ಮುಂದೆಯೇ ಕಾಣುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದ್ದರೂ, ದೇಶವಾಳುತ್ತಿರುವ ಪಕ್ಷವನ್ನು ಕಾಪಾಡಲು ಹೊರಗೆ ಪಾಕಿಸ್ತಾನವಿದೆ. ಒಳಗೆ ಜಾತಿ-ಧರ್ಮ ಮತ್ತು ಹಣಬಲವಿದೆ. ಹೀಗಿರುವಾಗ ಜನರೊಳಗಿಂದಲೇ ಪ್ರತಿಪಕ್ಷವು ಹುಟ್ಟಿಕೊಳ್ಳಬೇಕು ಎಂಬ ಮಾತು ಎಷ್ಟೇ ಕ್ಲೀಷೆಯೆನಿಸಿದರೂ ಬೇರೆ ಯಾವ ಷಾರ್ಟ್‍ಕಟ್ ಸಹಾ ಇದಕ್ಕಿಲ್ಲ.

ಮುಂದಣ ದಾರಿಯನ್ನು ಕಂಡುಕೊಳ್ಳುವಾಗ, ಹಿಂದಣ ಹೆಜ್ಜೆಯನ್ನು ಒಮ್ಮೆ ತಿರುಗಿ ನೋಡಿಕೊಳ್ಳಬೇಕು. ಕಳೆದ ಎರಡು ದಶಕಗಳಿಂದ, ಅದರಲ್ಲೂ 2019ರ ಚುನಾವಣೆಯ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಒಂದು ವಾದವನ್ನು ಒರೆಗೆ ಹಚ್ಚಿ ನೋಡುವ ಅಗತ್ಯವಿದೆ. ಬಿಜೆಪಿಗೆದುರಾಗಿ ಕಾಂಗ್ರೆಸ್ ಬಿಟ್ಟರೆ ಬೇರೆ ದಾರಿಯಿಲ್ಲವೆಂತಲೂ, ಕಾಂಗ್ರೆಸ್‍ನ ನೇತೃತ್ವದಲ್ಲಿ ಪ್ರತಿಪಕ್ಷಗಳೆಲ್ಲವೂ ಒಂದಾಗಬೇಕೆಂತಲೂ ಬಿಜೆಪಿ ವಿರೋಧಿಗಳು ಬಯಸಿದರು. ಅದೇ ಮುಳುವಾಯಿತು ಎಂದು ಹೇಳಲಾಗದಿದ್ದರೂ, ಅದು ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬರಲಿಲ್ಲ ಎಂಬುದಂತೂ ವಾಸ್ತವ.

ಈ ಒತ್ತಡವನ್ನು ವಿವಿಧ ರಾಜಕೀಯ ಪಕ್ಷಗಳ ಮೇಲೆ ಜನಪರವಾಗಿ ಆಲೋಚನೆ ಮಾಡುವ ಶಕ್ತಿಗಳಿಗಿಂತಲೂ ಮುಸ್ಲಿಂ ಮತಗಳ ಪ್ರಮಾಣವು ಉಂಟು ಮಾಡಿದ್ದವು. ಅದಕ್ಕೆ ಬೇಕಾದ ಆಟವನ್ನು ಒಂದಲ್ಲಾ ಒಂದು ರೀತಿಯಲ್ಲಿ ವಿವಿಧ ಪಕ್ಷಗಳು ಹೂಡಿದವು. ಆಮ್‍ಆದ್ಮಿ ಪಕ್ಷವು ಕಾಂಗ್ರೆಸ್‍ನೊಂದಿಗೆ ನಡೆಸಿದ ಮೈತ್ರಿಯ ವಿಫಲ ನಾಟಕವೂ ಅದಕ್ಕೇ ಆಗಿತ್ತು. ಬಲಶಾಲಿಯಲ್ಲದ ಕಾಂಗ್ರೆಸ್‍ಗೆ ಮತ ಹಾಕಬೇಡಿ ಎಂದು ಮಾಯಾವತಿಯವರು ಕರೆ ಕೊಟ್ಟಿದ್ದೂ ಮುಸ್ಲಿಮರಿಗೆ.

ಜನಪರವಾಗಿ ಆಲೋಚನೆ ಮಾಡುವ ಚುನಾವಣೇತರ ಶಕ್ತಿಗಳು ಮತ್ತು ಎಡಚಿಂತಕರು ಕಾಂಗ್ರೆಸ್ ಮೇಲೆ ಒಂದು ಒತ್ತಡ ಸೃಷ್ಟಿಸಲು ಯಶಸ್ವಿಯಾಗಿದ್ದರು. ಅದು ಒಂದು ಅಸಲೀ ಜನಪರ ನೆರೇಟಿವ್ ಮುಂದಿಡಬೇಕು ಮತ್ತು ಜನಸಾಮಾನ್ಯರ ನಿಜವಾದ ಕಷ್ಟಗಳಿಗೆ ಸ್ಪಂದಿಸಲು ಬೇಕಾದ ನೀತಿಗಳನ್ನು ಜಾರಿಗೆ ತರುವ ಆಶ್ವಾಸನೆ ಕೊಡಬೇಕು ಎಂಬ ಒತ್ತಡ ಕಾಂಗ್ರೆಸ್‍ನ ಮೇಲೆ ಉಂಟಾಗಿತ್ತು. ರಾಹುಲ್‍ಗಾಂಧಿ ನೇರವಾಗಿ ಅನಿಲ್ ಅಂಬಾನಿಯ ಮೇಲೆ ಪದೇ ಪದೇ ಆರೋಪಗಳನ್ನು ಮಾಡಿದ್ದಲ್ಲದೇ, ದೇಶದ 15-20 ಉದ್ದಿಮೆಪತಿಗಳ ಹಿತಕ್ಕಾಗಿ ಈ ಸರ್ಕಾರವು ನಡೆಯುತ್ತಿದೆ ಎಂದು ಯಾವ ಮುಲಾಜಿಲ್ಲದೇ ಹೇಳಿದರು. ಅದರ ಪ್ರಣಾಳಿಕೆಯಲ್ಲಿದ್ದ ನ್ಯಾಯ್, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಹಿಂಪಡೆತ, ರೈತರ ಸಾಲಮನ್ನಾ ಒಳಗೊಂಡಂತೆ ಹಲವು ಜನಪರ ಅಂಶಗಳು ಅದನ್ನು ಸೂಚಿಸುತ್ತಿತ್ತು. ಇವತ್ತಿನ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್ ಪಕ್ಷವೊಂದು ಮುಂದಿಡಬಹುದಾದ ಹಲವು ಭರವಸೆಗಳು ಅದರಲ್ಲಿದ್ದವು.

ಪಿ.ಚಿದಂಬರಂರಂತಹ ಮುಕ್ತ ಮಾರುಕಟ್ಟೆ ಪ್ರತಿಪಾದಕ, ಭಾರತದಲ್ಲಿ ಜಾಗತೀಕರಣ ನೀತಿಗಳನ್ನು ಜಾರಿಗೆ ತಂದ ಮನಮೋಹನ್‍ಸಿಂಗ್‍ರಿಂದ ಹಿಡಿದು, ಕಾಂಗ್ರೆಸ್ ಪಕ್ಷವು ತನ್ನ ಮಧ್ಯಮ ಮಾರ್ಗಕ್ಕೆ ಅಂಟಿಕೊಂಡಿರಬೇಕು ಎಂದು ಒತ್ತಾಯಿಸುವ ಕ್ವಿಂಟ್‍ನ ಸಂಪಾದಕ ರಾಘವ್ ಬೆಹ್ಲ್ ಸಹಾ ಅದನ್ನು ಸಮರ್ಥಿಸಿ ಮಾತನಾಡಿದರು. ಹೆಚ್ಚು ಕಡಿಮೆ ಒಂದು ವರ್ಷದ ಮುಂಚೆಯೇ ಪ್ರಣಾಳಿಕೆ ತಯಾರಿಯ ಪ್ರಕ್ರಿಯೆ ಆರಂಭಿಸಿದ ಕಾಂಗ್ರೆಸ್ಸು, ಅದನ್ನು ಬಿಡುಗಡೆ ಮಾಡಿದ್ದು ತಡವಾಗಿ. ಅದನ್ನು ಜನರಿಗೆ ತಲುಪಿಸಲು ಬೇಕಿದ್ದ ಸಮಯವಾಗಲೀ, ತಲುಪಿಸಬಲ್ಲ ಯಂತ್ರಾಂಗವಾಗಲೀ ಅದಕ್ಕಿರಲೇ ಇಲ್ಲ. ಒಂದು ವೇಳೆ ತಲುಪಿದ್ದರೂ ಅಂತಹ ದೊಡ್ಡ ಪ್ರಯೋಜವಾಗುತ್ತಿರಲಿಲ್ಲ ಎಂಬುದನ್ನು ಫಲಿತಾಂಶವು ಎತ್ತಿ ತೋರಿಸಿತು.

ಜನಪರವಾದ ನೆರೇಟಿವ್ ಕಟ್ಟಿಕೊಟ್ಟಿದ್ದು ತಪ್ಪಲ್ಲ. ಅದಕ್ಕಿಂತ ಒಳ್ಳೆಯದೇನಿದೆ? ಆದರೆ ಕಾಂಗ್ರೆಸ್ಸಿನ ಬಾಯಲ್ಲಿ ಜನಪರವಾದ, ಉದ್ದಿಮೆಪತಿಗಳ ವಿರುದ್ಧದ ಮಾತುಗಳನ್ನು ಜನರು ನಂಬುವುದು ಕಷ್ಟ. ಈ ಮಾತುಗಳನ್ನು ಅದರ ಸರ್ವೋಚ್ಚ ನಾಯಕ ಆಡುತ್ತಿರುವಾಗಲೇ ಅದೇ ಪಕ್ಷದಲ್ಲಿ ಸಾವಿರಾರು ಕೋಟಿ ಆಸ್ತಿ ಹೊಂದಿರುವ ಎಷ್ಟೋ ಮರಿನಾಯಕರಿದ್ದಾರೆ. ಬಿಜೆಪಿಯ ನೀತಿಗಳಿಗಿಂತ ಭಿನ್ನವಾದ ಸಾಮಾಜಿಕ ನಿಲುವನ್ನೇನೂ ಹೊಂದಿರದ ಕಾಂಗ್ರೆಸ್ ನಾಯಕರನ್ನು ಜನರು ತಮ್ಮ ಕಣ್ಣೆದುರಿಗೆ ನೋಡುತ್ತಿದ್ದರು. ಇದನ್ನೆಲ್ಲಾ ಜನರನ್ನು ಮೋಸಗೊಳಿಸಿ ಓಟು ಪಡೆಯಲು ಮಾತ್ರ ಮಾಡಬೇಕೆಂದಿದ್ದಲ್ಲಿ ಅದನ್ನು ಬಿಜೆಪಿ ಇನ್ನೂ ಅದ್ಭುತವಾಗಿ ಮಾಡುತ್ತಿತ್ತು.

ಕಾಂಗ್ರೆಸ್ಸು ಒಂದು ಮಧ್ಯಮಮಾರ್ಗದ ಪಕ್ಷವಾಗಿಯೇ ಉಳಿದುಕೊಳ್ಳುವುದು ಒಳಿತು. ದೆಹಲಿಯಿಂದ ಹಳ್ಳಿಯ ಮೂಲೆಗಳ ತನಕ ಅದಕ್ಕಿರುವ ತಳಹದಿಯನ್ನು ರಾಹುಲ್‍ಗಾಂಧಿಯೂ ಬದಲಿಸುವುದು ಸಾಧ್ಯವಿಲ್ಲ. ಹೊಸ ಅಧ್ಯಕ್ಷೆಗೂ ಸಾಧ್ಯವಿಲ್ಲ.

ಇಲ್ಲಿ ನಿಜಕ್ಕೂ ಸೋಲುಂಡಿದ್ದು ಜನಪರ ಶಕ್ತಿಗಳು. ತಮ್ಮದೇ ಪರ್ಯಾಯವನ್ನು ಸಮಾಜದಲ್ಲಿ ಮತ್ತು ಸಂಸತ್ತಿನಲ್ಲಿ ಕಟ್ಟಲು ಸಾಧ್ಯವಾಗದೇ ಈಗಾಗಲೇ ತಿರಸ್ಕೃತಗೊಂಡಿರುವ ರಾಜಕೀಯ ಪಕ್ಷಗಳೇ ಅದನ್ನು ಮಾಡಲಿ ಎಂದು ಅವು ಬಯಸಿದವು. ಫಲಿತಾಂಶದ ತಕ್ಷಣದ ಶಾಕ್‍ನಿಂದ ಹೊರಬಂದ ಮೇಲಾದರೂ ಆ ನಿಟ್ಟಿನಲ್ಲಿ ಯೋಚಿಸಿ ಸಮಾಜದಲ್ಲೂ, ಸಂಸತ್ತಿನಲ್ಲೂ ಬದಲಾವಣೆ ತರಲು ಬೇಕಾದ ಸುದೀರ್ಘ ಕಷ್ಟಕರ ಪ್ರಯಾಣಕ್ಕೆ ಮುಂದಾದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಛತ್ತೀಸ್‌ಗಢ| ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿ ಗುಂಪಿನಿಂದ ಹಲ್ಲೆ; ‘ಜೈ ಶ್ರೀ ರಾಮ್’ ಕೂಗುವಂತೆ ಒತ್ತಾಯ

ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಹಲ್ಲೆ ನಡೆಸಿ, ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಇಂದು (ಮಾ.18) ನಡೆದಿದೆ ಎನ್ನಲಾದ ಈ ಘಟನೆಯ...

ಯುಪಿಎಸ್‌ಸಿ 440 ನೇ ರ‍್ಯಾಂಕ್ ಎಂದು ಸುಳ್ಳು ಹೇಳಿ ಸಂಭ್ರಮಾಚರಣೆ ಮಾಡಿದ್ದ ಬಿಹಾರದ ಯುವಕನ ಬಂಧನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) 2025 ರಲ್ಲಿ ಅಖಿಲ ಭಾರತ ರ‍್ಯಾಂಕ್ (ಎಐಆರ್) 440 ಗಳಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡ ಕೆಲವು ದಿನಗಳ ನಂತರ, ಬಿಹಾರದ ಶೇಖ್‌ಪುರ...

‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಆರೋಪ: ಮಹಿಳೆಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರಿನ ಹೆಬ್ಬಗೂಡಿಯಲ್ಲಿ ಅಕ್ರಮ ಎನ್ನಲಾದ ಶೆಡ್‌ಗಳ ತೆರವು ಕಾರ್ಯಾಚರಣೆ ವೇಳೆ 'ಜೈ ಬಾಂಗ್ಲಾ' ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾದ ಪಶ್ಚಿಮ ಬಂಗಾಳದ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಎಸ್.ರಾಚಯ್ಯ...

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿಜೆ, ಐಟಂ ಹಾಡು ನಿಷೇಧಿಸಲು ಕರ್ನಾಟಕ ಯೋಜನೆ; ವಿಧಾನಸಭೆಯಲ್ಲಿ ಸಂತೋಷ್ ಲಾಡ್ ಪ್ರಸ್ತಾಪ

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಮೆರವಣಿಗೆಗಳಲ್ಲಿ ಅಬ್ಬರದ ಸಂಗೀತ ಮತ್ತು "ಐಟಂ ಹಾಡುಗಳನ್ನು" ನುಡಿಸುವ ಡಿಸ್ಕ್ ಜಾಕಿಗಳನ್ನು (ಡಿಜೆ) ನಿಷೇಧಿಸುವ ಪರವಾಗಿ ಕರ್ನಾಟಕ ಸರ್ಕಾರವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ...

ದೆಹಲಿಯ ಪಾಲಂನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ ಏಳು ಮಂದಿ ಸಾವು

ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ...

ವಾರಣಾಸಿ: ಗಂಗಾ ನದಿಯ ದೋಣಿಯಲ್ಲಿ ‘ಇಫ್ತಾರ್’ ಕೂಟ ಆಯೋಜಿಸಿದ್ದಕ್ಕಾಗಿ 14 ಜನರ ಬಂಧನ 

ವಾರಣಾಸಿಯಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ 'ಇಫ್ತಾರ್' (ರಂಜಾನ್ ಸಮಯದಲ್ಲಿ ಸೂರ್ಯಾಸ್ತದ ನಂತರ ತಿನ್ನುವ ಊಟ) ಕೂಟವನ್ನು ಆಯೋಜಿಸಿದ್ದಕ್ಕಾಗಿ ಹದಿನಾಲ್ಕು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.  ದೈನಂದಿನ ಮುಸ್ಲಿಂ ಜೀವನವನ್ನು ಅಪರಾಧೀಕರಿಸುವ ಮತ್ತೊಂದು ಪ್ರಕರಣ ಇದಾಗಿದ್ದು,...

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಮಂಗಳವಾರ (ಮಾ.17) ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ನೌಗಾಂಗ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಮೂವರು ಶಾಸಕರನ್ನು ಅಮಾನತುಗೊಳಿಸಿದ ಒಡಿಶಾ ಕಾಂಗ್ರೆಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ. ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ...

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...