Homeಅಂಕಣಗಳುಕಂಡದ್ದನ್ನು ಕಂಡಹಾಗೆ ಹೇಳಿದವರು....

ಕಂಡದ್ದನ್ನು ಕಂಡಹಾಗೆ ಹೇಳಿದವರು….

- Advertisement -
- Advertisement -

 ಗೌರಿ ಲಂಕೇಶ್
ಅಕ್ಟೋಬರ್ 26, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಅಮೆರಿಕಾ ಸರ್ಕಾರ ಕೊತಕೊತ ಕುದಿಯುತ್ತಿದೆ. ಯಾವ ದೇಶದ ಮೇಲೆ ಬೇಕಾದರು ದಾಳಿ ಮಾಡಿ ಮಾಡುವ ದೈವಾಜ್ಞೆ ತನಗಿದೆ ಎಂದು ಹೇಳುವ ಅದರ ಅಧ್ಯಕ್ಷ ಜಾರ್ಜ್ ಬುಷ್‍ಗೆ ಕಪಾಳಮೋಕ್ಷವಾಗಿದೆ.
ಸ್ವೀಡನ್ ದೇಶದಲ್ಲಿನ ನೊಬೆಲ್ ಸಮಿತಿ ಈ ವರ್ಷ ಮೊಹ್ಮದ್ ಎಲ್‍ಬರದೈಗೆ ಶಾಂತಿ ಪ್ರಶಸ್ತಿ ಪ್ರಕಟಿಸಿ ಬುಷ್‍ಗೆ ಸೆಡ್ಡು ಹೊಡೆದಿತ್ತಲ್ಲದೆ, ಈ ವಾರ ಹೆರಾಲ್ಡ್ ಪಿಂಟರ್ ಎಂಬ ಬ್ರಿಟಿಷ್ ನಾಟಕಕಾರನಿಗೆ ಪ್ರಶಸ್ತಿ ನೀಡಿ ಅಮೆರಿಕಕ್ಕೆ ಅವಮಾನಿಸಿದೆ. ನೊಬೆಲ್ ಪ್ರಶಸ್ತಿಗಳು ರಾಜಕೀಯ ಪ್ರೇರಿತಗೊಂಡು ಹಲವು ದಶಕಗಳೇ ಕಳೆದಿವೆ. ಹಾಗಾಗಿ ಅಮೆರಿಕಾಕ್ಕೆ ಎದುರಾಗಿ ಈ ಪ್ರಶಸ್ತಿಗಳನ್ನು ಘೋಷಿಸಿರುವುದು ರಾಜಕೀಯ ಕಾರಣಕ್ಕೂ ವಿಪರೀತ ಕುತೂಹಲ ಮೂಡಿಸಿವೆ.
2003ರಲ್ಲಿ ಇರಾಕ್‍ನಲ್ಲಿ weapons of mass destruction ಇದೆ ಎಂಬ ನೆಪವೊಡ್ಡಿ, ಸದ್ದಾಂ ಹುಸೇನ್‍ನಿಂದ ಜಗತ್ತನ್ನೇ ರಕ್ಷಿಸಬೇಕಿದೆ ಎಂದುಹೇಳಿ ಆ ದೇಶದ ಮೇಲೆ ಅಮೆರಿಕಾ ಹರಿಹಾಯ್ದುಹೋಗಲು ಸಜ್ಜಾಗುತ್ತಿದ್ದಾಗ, ಇಂಟರ್‍ನ್ಯಾಶನಲ್ ಅಟೋಮಿಕ್ ಎನರ್ಜಿ ಅಸೋಸಿಯೇಷನ್‍ನ ಮುಖ್ಯಸ್ಥರಾಗಿರುವ ಬರದೈರವರು `ಇರಾಕ್‍ನಲ್ಲಿ ಯಾವ weapons of mass destruction ಇಲ್ಲ’ ಎಂದೇಳಿ ಬುಷ್‍ಗೆ ಸವಾಲೊಡ್ಡಿದ್ದರು. ಆದರೂ ಬುಷ್ ಇರಾಕ್ ಮೇಲೆ ದಾಳಿಯಿಟ್ಟು ಬ್ರಿಟಿಷ್ ಸೈನ್ಯದ ಜೊತೆಗೂಡಿ ಸಾವಿರಾರು ಇರಾಕಿಗಳನ್ನು ಕೊಂದುಹಾಕಿ, ಆ ದೇಶದ ಆತ್ಮವನ್ನೇ ಸರ್ವನಾಶ ಮಾಡಿದ ತರುವಾಯ ಬುಷ್ ಮತ್ತು ಬ್ರಿಟನ್ನಿನ ಬ್ಲೇರ್ ಹೇಳಿದ್ದು ಅಪ್ಪಟ ಸುಳ್ಳು, ಬರದೈ ಹೇಳಿದ್ದೇ ಸತ್ಯ ಎಂದು ಇಡೀ ಜಗತ್ತಿಗೇ ಗೊತ್ತಾಗಿತ್ತು. ತನ್ನ ಕಪಟತನವನ್ನು ಬಹಿರಂಗಪಡಿಸಿದ ಬರದೈಗೆ ಶಾಂತಿ ಪ್ರಶಸ್ತಿ ಸಿಕ್ಕರೆ ಬುಷ್ ಸರ್ಕಾರಕ್ಕೆ ಅವಮಾನವಾಗದೇ ಮತ್ತಿನ್ನೇನು?
ಇನ್ನು ತನ್ನ ಬರಹಗಳಲ್ಲಿ ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಅನ್ಯಾಯವನ್ನು ವಿಶ್ಲೇಷಿಸುವ ನಾಟಕಕಾರ ಹೆರಾಲ್ಡ್ ಪಿಂಟರ್ ಅದೆಂತಹ ಅಗ್ರಸ್ಥಾನದಲ್ಲಿದ್ದಾರೆಂದರೆ ಶೇಕ್ಸ್‍ಪಿರಿಯನ್, ಶೆಕಾವಿಯನ್ ಎಂಬ ಪದಗಳು ಗುಣವಾಚಕಗಳಾಗಿವೆಯೋ ಹಾಗೆ ಪಿಂಟರೆಸ್ಕ್ ಎಂಬ ಪದವೂ ಇಂಗ್ಲಿಷ್ ಭಾಷೆಯ ಅಂಗವಾಗಿ ಹೋಗಿದೆ. ಇವರು ಕಳೆದ ಮೂರು ವರ್ಷದಿಂದ ಬುಷ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಬುಷ್ ಹೇಳಿದ್ದಕ್ಕೆಲ್ಲ ತಲೆದೂಗುವ ತನ್ನ ದೇಶದ ಪ್ರಧಾನಿ ಬ್ಲೇರ್‍ಗೂ ಕ್ಯಾಕರಿಸಿ ಉಗಿದಿದ್ದಾರೆ. ಅಮೆರಿಕಾದಲ್ಲಿ ಅಧಿಕಾರ ಹಿಡಿದಿರುವವರನ್ನು ಕ್ರಿಮಿನಲ್‍ಗಳ ಗ್ಯಾಂಗ್ ಎಂದೂ, ಬ್ಲೇರ್ ಅನ್ನು ಅಮೆರಿಕಾ ಸರ್ಕಾರದ ಬಾಡಿಗೆಗೆ ಹಿಡಿದಿರುವ ಕ್ರಿಶ್ಚಿಯನ್ ಗೂಂಡಾ ಎಂದೂ ಲೇವಡಿ ಮಾಡಿದ್ದರು. ಅಮೆರಿಕಾ ಮತ್ತು ಬ್ರಿಟನ್ ಸರ್ಕಾರಗಳಿಗೆ ಕಡಿವಾಣ ಹಾಕದಿದ್ದರೆ ಇಡೀ ಜಗತ್ತನ್ನೇ ಮುಳುಗಿಸಿಬಿಡುತ್ತಾರೆ ಎಂಬುದು ಅವರ ಪ್ರಾಮಾಣಿಕ ಆತಂಕ.
ಇಲ್ಲಿ ಬುಷ್ ಮತ್ತು ಬ್ಲೇರ್ ಬಗ್ಗೆ ಪಿಂಟರ್‍ರವರು ನೀಡಿರುವ ಹೇಳಿಕೆಯ ಸ್ಯಾಂಪಲ್‍ಗಳಿವೆ ನೋಡಿ; “ಇರಾಕ್ ಮೇಲೆ ನಡೆದದ್ದು ಭಯೋತ್ಪಾದನೆ. ಆದ್ದರಿಂದ ಬುಷ್ ಮತ್ತು ಬ್ಲೇರ್ ಭಯೋತ್ಪಾದಕರು. ಅವರಿಬ್ಬರನ್ನು ಬಂಧಿಸಿ ಯುದ್ಧಕೋರರೆಂದು ವಿಚಾರಣೆಗೊಳಪಡಿಸಿ ಶಿಕ್ಷಿಸಬೇಕು…..”, “ಅಮೆರಿಕಾ ಈಗ ನಾಜಿಗಳ ಜರ್ಮನಿಯನ್ನು ಹೋಲುತ್ತಿದೆ”, “ಜಗತ್ತಿನ ಅತಿ ಅನಾಹುತಕಾರಿ ಅಸ್ತ್ರಗಳು ಅತಿ ಅನಾಹುತಕಾರಿ ನಾಯಕರ ಕೈಯಲ್ಲಿರದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾನೆ ಬುಷ್. ಆದ್ದರಿಂದ ಅತಿ ಅನಾಹುತಕಾರಿ ನಾಯಕ ಯಾರೆಂದು ತಿಳಿದುಕೊಳ್ಳಲು ಆತ ಒಮ್ಮೆ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳಲಿ”, “ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಬಿಡುಗಡೆಯ ಬಗ್ಗೆ ಮಾತಾಡುವ ಬುಷ್ ಹಾಗೂ ಬ್ಲೇರ್ ನಿಜವಾಗಲೂ ಹೇಳುತ್ತಿರುವುದು ಸಾವು, ನಾಶ ಮತ್ತು ಅಭದ್ರತೆಯ ಬಗ್ಗೆ”…..
ಇವೆಲ್ಲ ಇಂದು ಅಮೆರಿಕಾ ಸರ್ಕಾರ ಕೊತಕೊತ ಕುದಿಯುವಂತೆ ಮಾಡಿರುವುದು ಅಚ್ಚರಿಯೇನಲ್ಲ. ಭಿನ್ನಮತ, ವಾಕ್ ಸ್ವಾತಂತ್ರ್ಯ, ಮಾನವಹಕ್ಕುಗಳು, ದಬ್ಬಾಳಿಕೆ ವಿರೋಧಗಳು ನಿಜಕ್ಕೂ, `ನೋಬಲ್’, ಅಲ್ಲವೇ!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...