Homeಕರ್ನಾಟಕಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು.....

ಗೌಡರ ಕುಟುಂಬ ರಾಜಕಾರಣವೇ ಇದಕ್ಕೆಲ್ಲ ಕಾರಣವೇ? ಈ ವಾದದಲ್ಲಿ ಹುರುಳೆಷ್ಟು…..

- Advertisement -
- Advertisement -

| ಗೌರಿ ಡೆಸ್ಕ್ |

ಉಳಿದಿದ್ದೆಲ್ಲಾ ನಿಜವಿರಬಹುದು ಸಾರ್. ಆದರೆ, ಗೌಡರ ಕುಟುಂಬವನ್ನು ಸಹಿಸಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಒಬ್ಬ ಸಚಿವರ ಪ್ರಕಾರ ‘ಸಚಿವ ಸಂಪುಟದಲ್ಲಿ ರೇವಣ್ಣರ ಆರ್ಭಟ ಮತ್ತು ಎಲ್ಲದಕ್ಕೂ ಮೂಗು ತೂರಿಸುವುದು ನೋಡಿದರೆ ನಮಗೇ ಅಸಹ್ಯವಾಗುತ್ತದೆ. ಒಂಥರಾ ಮಾನ-ಮರ್ಯಾದೆ ಇಲ್ಲದಂತೆ ನಾವೆಲ್ಲರೂ ಅದರಲ್ಲಿದ್ದೇವೆ ಅಷ್ಟೇ. ಡಿಕೆಶಿ ಮತ್ತು ಪರಮೇಶ್ವರ ನಮ್ಮ ಪಕ್ಷದ ನಾಯಕರೋ ಅಥವಾ ಜೆಡಿಎಸ್ ಸೇರಿಬಿಟ್ಟಿದ್ದಾರೋ ಎಂದು ಸಂದೇಹವಾಗುತ್ತದೆ. ಹೀಗಾಗಿ ತೀರಾ ಕೆಲವರು ಬಿಟ್ಟರೆ ಮಿಕ್ಕೆಲ್ಲರಿಗೂ ಸಿದ್ದರಾಮಯ್ಯನವರ ಅಸಮಾಧಾನಿತ ಬಣವೇ ಅಪ್ಯಾಯಮಾನವಾಗಿತ್ತು’.

ಕಾಂಗ್ರೆಸ್ಸು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರಲ್ಲಿ ಕಾಂಗ್ರೆಸ್ಸಿನ ದೌರ್ಬಲ್ಯವೇ ಹೆಚ್ಚಿತ್ತು ಎಂಬುದೇನೋ ವಾಸ್ತವ. ಆದರೆ, ಜೆಡಿಎಸ್ ಅತ್ಯುತ್ತಮ ಪರಿಸ್ಥಿತಿಯಲ್ಲೇನೂ ಇರಲಿಲ್ಲ. ದಕ್ಷಿಣ ಕರ್ನಾಟಕದ 8 ಜಿಲ್ಲೆಗಳಲ್ಲೂ ಎರಡು ಜಿಲ್ಲೆಗಳಲ್ಲಿ ಪ್ರಭಾವ ತಗ್ಗುತ್ತಿತ್ತು. ಅಕಸ್ಮಾತ್ತಾಗಿ ಉತ್ತರದಲ್ಲಿ ಕೆಲವು ಸೀಟುಗಳನ್ನು ಗೆದ್ದಿತ್ತು. ಕುಟುಂಬದೊಳಗಿನ ಆಂತರಿಕ ಸಮಸ್ಯೆಗಳೂ ಹೆಚ್ಚಾಗುತ್ತಿದ್ದವು. ಕುಮಾರಸ್ವಾಮಿಯವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಿದ್ದಾಗ ತಮ್ಮ ಪಾಲಿಗೆ ಬಂದ ಅಧಿಕಾರವನ್ನು ಜನಪರವಾಗಿ ಬಳಸಿ, ಅದರ ಆಧಾರದ ಮೇಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಅವರದ್ದಾಗಿರಲಿಲ್ಲ.

ಈ ಸಾರಿಯೂ ತಮ್ಮ ತಮ್ಮ ಕ್ಷೇತ್ರಗಳಿಗೆ ಅಥವಾ ಹಾಸನ ಜಿಲ್ಲೆಗೆ ಅನುದಾನದ ಹೆಚ್ಚಿನ ಭಾಗವನ್ನು ಕೊಂಡೊಯ್ಯುವ ಕೆಲಸ ಬಿಡಲಿಲ್ಲ. ನಾಲ್ಕು ಫಲವತ್ತಾದ ಖಾತೆಗಳಲ್ಲಿ (ಬೆಂಗಳೂರು ಅಭಿವೃದ್ಧಿ, ಲೋಕೋಪಯೋಗಿ, ಇಂಧನ ಮತ್ತು ಬೃಹತ್ ನೀರಾವರಿ) ತಲಾ ಎರಡನ್ನು ಎರಡೂ ಪಕ್ಷಗಳು ಹಂಚಿಕೊಂಡಿದ್ದವು. ಇವುಗಳಲ್ಲಿ ಎರಡನ್ನು (ಮುಖ್ಯಮಂತ್ರಿ, ಹಣಕಾಸು, ಅಬಕಾರಿಯಲ್ಲದೇ) ತಮ್ಮ ಕುಟುಂಬಕ್ಕೇ ಇಟ್ಟುಕೊಂಡರು. ಮಂಡ್ಯದ ಇಬ್ಬರು ಸಚಿವರಲ್ಲಿ (ಕಾಂಗ್ರೆಸ್, ಬಿಜೆಪಿಗಳೆರಡರಲ್ಲೂ ಇದ್ದು ಜೆಡಿಎಸ್‍ಗೆ ಬಂದ) ಬೀಗರಾದ ತಮ್ಮಣ್ಣರಿಗೆ ಸಾರಿಗೆ ಕೊಟ್ಟರೆ, ಜಿಲ್ಲೆಯ ಪ್ರಭಾವಿ ಹಾಗೂ ನಿಷ್ಠಾವಂತರಾದ ಪುಟ್ಟರಾಜುರಿಗೆ ಸಣ್ಣ ನೀರಾವರಿ ಕೊಟ್ಟರು. ತನಗೆ ಇದು ಬೇಡ ಎಂದು ಕೇಳಿದರೂ ಬಿಡದೇ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಕೊಟ್ಟರು. ಅಲ್ಲಿಯೂ ಬೀಗ ಕೆ.ಎಸ್.ರಂಗಪ್ಪರನ್ನು ಜಿಟಿಡಿ ತಲೆ ಮೇಲೆ ಕೂಡಿಸುವ ಇರಾದೆ ಕುಟುಂಬಕ್ಕಿತ್ತು. ಇನ್ನಿತರ ಇಲಾಖೆಗಳಲ್ಲೂ ಗೌಡರ ಕುಟುಂಬ ತಲೆ ಹಾಕುತ್ತದೆ ಎಂಬ ಕಿರಿಕಿರಿ ಹಲವು ಸಚಿವರಿಗಿತ್ತು. ಕುಟುಂಬವೊಂದರ ಈ ಪ್ರಮಾಣದ ಮಧ್ಯಪ್ರವೇಶವನ್ನು ಜೆಡಿಎಸ್ ಮಾತ್ರವಲ್ಲದೇ, ಕಾಂಗ್ರೆಸ್ ಸಹಾ ಒಪ್ಪಿಕೊಳ್ಳಬೇಕು ಎಂದರೆ ಸರ್ಕಾರ ಹೇಗೆ ಉಳಿಯಬೇಕು?

ವೃತ್ತಿಪರ ಬಿಸಿನೆಸ್‍ಮೆನ್ ಆಗಿದ್ದ ಎಚ್‍ಡಿಕೆ ಡೀಲ್‍ಗಳನ್ನು ಕುದುರಿಸುವುದರಲ್ಲಿ ಎತ್ತಿದ ಕೈ. ಹಾಗಾಗಿಯೇ ಭಿನ್ನಮತೀಯ ಕಾಂಗ್ರೆಸ್ಸಿಗರನ್ನೂ ಭೇಟಿಯಾಗಿ ಸಂತೃಪ್ತಿ ಪಡಿಸುತ್ತೇನೆಂಬ ವಿಶ್ವಾಸವೂ ಅವರಿಗಿತ್ತು. ಆದರೆ, ತಮ್ಮ ಜೊತೆ ಚೆನ್ನಾಗಿಲ್ಲದ ಶಾಸಕರಿಗೆ ಅಂತಹುದೇನನ್ನೂ ಅವರು ಮಾಡಲಿಲ್ಲ. ಹಣ ಮಾಡಿಕೊಳ್ಳಲು ಅವಕಾಶ ಕೊಡದಿದ್ದರೆ ಹಿಡಿತದಲ್ಲಿರುತ್ತಾರೆ ಎಂಬ ಅವರ ಲೆಕ್ಕಾಚಾರ ತಿರುಗೇಟು ನೀಡಿತು.

ರಾಜೀನಾಮೆ ಸಲ್ಲಿಸಿದ ಒಂದು ಡಜನ್‍ಗೂ ಹೆಚ್ಚು ಶಾಸಕರಲ್ಲಿ ಕೆಲವರು ಕೊಟ್ಟ ಕಾರಣಗಳು ಕುತೂಹಲಕರವಾಗಿವೆ. ಕಾಂಗ್ರೆಸ್ ಸದಸ್ಯ ಪಿ.ಮುನಿರತ್ನ ಮಾತನಾಡುತ್ತಾ ತಮ್ಮ ಅಸಮಾಧಾನಕ್ಕೆ ಎಚ್.ಡಿ.ರೇವಣ್ಣ ಕಾರಣ ಎಂದಿದ್ದಾರೆ. ಲೋಕೋಪಯೋಗಿ ಸಚಿವರಾದ ಅವರು ಬೆಂಗಳೂರು ಅಭಿವೃದ್ಧಿ ಬಗ್ಗೆ ಒಮ್ಮೆಯೂ ನಗರದ ಶಾಸಕರ ಸಭೆ ಕರೆಯಲಿಲ್ಲ. ಎಲ್ಲಾ ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರ ದೂರು. ಹಾಗೆಯೇ ಭೀಮಾನಾಯ್ಕ ರಾಜೀನಾಮೆ ಕೊಟ್ಟಿಲ್ಲವಾದರು ಕೂಡಾ ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ. ಮೈತ್ರಿ ಒಪ್ಪಂದದಂತೆ ತನ್ನ ಪಾಲಿಗೆ ಬರಬೇಕಿದ್ದ ಕೆಎಂಎಫ್ ಅಧ್ಯಕ್ಷ ಗಾದಿಗೂ ರೇವಣ್ಣ ಕರ್ಚೀಫು ಹಾಕಿ ಕೂತಿರೋದು ಅವರ ಸಿಟ್ಟಿನ ಸಹಜ ಕಾರಣ. ಜೆಡಿಎಸ್‍ನ ಶಾಸಕ ಕೆ.ಸಿ.ನಾರಾಯಣ ಗೌಡರೂ ದೇವೇಗೌಡರ ಪುತ್ರಿಯ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಅತ್ತ ಬಿಜೆಪಿಯಿಂದ ಬರುತ್ತಿರುವ ಆಮಿಷಗಳ ಜೊತೆ ಕೆಲವು ರಾಜೀನಾಮೆಗಳ ಮೇಲೆ ಪ್ರಭಾವ ಬೀರುವಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಬೇಸರವೂ ಇದೆ ಎಂಬುದು ಸತ್ಯ. ಕೆಲವರು ಮಂತ್ರಿಪಟ್ಟ ಸಿಗಲಿಲ್ಲವೆಂದು ಸಿಟ್ಟಾಗಿದ್ದಾರೆ ನಿಜ. ಆದರೆ ಮಂತ್ರಿಸ್ಥಾನದ ನಿರೀಕ್ಷೆ ಇಲ್ಲದವರೂ ಹೊರಗೆ ಹೆಜ್ಜೆ ಇಡಲು ರೇವಣ್ಣ ಕಾರಣ. ಅವರು ತಮ್ಮ ಇಲಾಖೆಯಲ್ಲದೆ ಇತರರ ಖಾತೆಗೂ ಮೂಗು ತೂರಿಸುವುದಷ್ಟೇ ಅಲ್ಲ, ತಾವೇ ಹೋಗಿ ಕೂರುವ ಅಭ್ಯಾಸ. ಅದೇ ಕಾರಣಕ್ಕೆ ಹಾಸನದಲ್ಲಿ ತಮ್ಮ ಹೊರತಾಗಿ ಬೇರಾರಿಗೂ ಮಂತ್ರಿ ಸ್ಥಾನ ದೊರಕದಂತೆ ನೋಡಿಕೊಂಡರು. ಏಳರಲ್ಲಿ ಆರು ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದುಕೊಂಡರೂ ಮತ್ತಾರಿಗೂ ಮಂತ್ರಿಸ್ಥಾನದ ಅವಕಾಶ ಸಿಗಲಿಲ್ಲ. ಪಕ್ಷದ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೂರು ಜನ ಮಂತ್ರಿಗಳಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಕೆ.ಕುಮಾರಸ್ವಾಮಿ ಮಂತ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅವರೂ ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಆಗಲಿಲ್ಲ. ಕೊನೆಗೆ ಮೊನ್ನೆ ಮೊನ್ನೆಯಷ್ಟೇ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯ್ತು.

ಇಡೀ ರಾಜಕೀಯ ಈ ಪ್ರಮಾಣಕ್ಕೆ ಹೊಲಸೆದ್ದಿದ್ದು, ಅಧಿಕಾರ ದಾಹ ಮತ್ತು ಹಣ ಬಾಚಿಕೊಳ್ಳುವುದೇ ದಂಧೆಯಾಗಿದೆ. ಹೀಗಿರುವಾಗ ಅದರ ಪ್ರಧಾನ ಪಾಲು ತಮ್ಮ ಕುಟುಂಬಕ್ಕೆ ಮಾತ್ರ ಎನ್ನುವ ಗೌಡರ ಕುಟುಂಬದ ಧೋರಣೆ ಬಿಕ್ಕಟ್ಟಿಗೆ ಕಾರಣವಾಗಿದೆ ಎಂಬುದು ಹಲವು ಜೆಡಿಎಸ್-ಕಾಂಗ್ರೆಸ್ ಸಚಿವರು ಮತ್ತು ಶಾಸಕರ ಅನಿಸಿಕೆಯಾಗಿದೆ.

ಇದನ್ನು ಓದಿರಿ: ಈ ಅವಾಂತರದ ಕೇಂದ್ರ ಪಾತ್ರಧಾರಿ ಸಿದ್ದು!!??

ಶುರುವಾಯ್ತಾ ನಿಖಿಲ್ ವರ್ಸಸ್ ಪ್ರಜ್ವಲ್ ಕೆಮಿಸ್ಟ್ರಿ

ಬಿಐಟಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗಿನಿಂದಲೇ ಹಾಸನ ಜಿಲ್ಲೆಯ ಕಡೆಗೆ ಕಣ್ಣಿಟ್ಟಿದ್ದ ಪ್ರಜ್ವಲ್, ಆ ನಂತರ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ನಿಖಿಲ್‍ಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಪ್ರಜ್ವಲ್ ಪ್ರಕಾರ ತಾನು ಹಾಸನಕ್ಕೆ ಸಹಜ ಆಯ್ಕೆ. ಆದರೆ, ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ತನ್ನನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆಂಬ ಅಸಮಾಧಾನ ಪ್ರಜ್ವಲ್ ಮತ್ತು ಅವರ ತಾಯಿ ಭವಾನಿಯವರಿಗೆ ಮೊದಲಿಂದ ಇತ್ತು. ಕೆ.ಆರ್.ನಗರ, ಹುಣಸೂರು ಅಥವಾ ರಾಜರಾಜೇಶ್ವರಿನಗರಕ್ಕೆ ಹೋದರೆ ಹಾಸನದಿಂದಲೂ ಹೊರಗೆ ಪ್ರಭಾವ ಬೆಳೆಸಿಕೊಳ್ಳಬಹುದು ಎಂಬ ಇರಾದೆ ಅವರದ್ದಾಗಿತ್ತು. ಆದರೆ, ಅದಕ್ಕೆ ಕುಮಾರಸ್ವಾಮಿ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ‘ನಮ್ಮ ಪಕ್ಷದಲ್ಲಿ ಸೂಟ್‍ಕೇಸ್ ಸಂಸ್ಕøತಿ ಇದೆ’ ಎಂದು ಪ್ರಜ್ವಲ್ ಬಹಿರಂಗ ಹೇಳಿಕೆ ನೀಡಿದ್ದರು.

ಮಂಡ್ಯದಲ್ಲಿ ಸೋತ ನಿಖಿಲ್‍ರನ್ನು ಇತ್ತೀಚೆಗೆ ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನೇಮಿಸಿದರು. ಅದೇ ದಿನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪರನ್ನೂ ನೇಮಿಸಲಾಗಿತ್ತು. ದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಉಳಿದವರಿಗೆ ಅಭಿನಂದಿಸಿದ್ದ ಪ್ರಜ್ವಲ್, ನಿಖಿಲ್‍ರನ್ನು ಮಾತ್ರ ಅಭಿನಂದಿಸಲಿಲ್ಲ. ಪ್ರಶ್ನೆ ಕೇಳಿದ ಪತ್ರಕರ್ತರಿಗೆ ‘ಹೌದಾ, ನಿಖಿಲ್ ಆಯ್ಕೆಯಾಗಿರುವುದು ತನಗೆ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದರು.
ಇಂತಹ ಕುಟುಂಬಕಾರಣವೂ ಇರುವ ಗೌಡರ ಕುಟುಂಬ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡಲಿ ಎಂಬ ನಿರೀಕ್ಷೆ ಬಹುಶಃ ಬಹಳ ದುಬಾರಿಯಾದುದೇನೋ?

ಇದನ್ನು ಓದಿರಿ: ಮಾನಗೇಡಿ ಶಾಸಕರೂ, ಹೊಣೆಗೇಡಿ ನಾಯಕರೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...