Homeಕರ್ನಾಟಕದಮನಿತರ ಸಿಟ್ಟಿನ ಏಕೀಕರಣ - ಅರುಣ್ ಜೋಳದಕೂಡ್ಲಿಗಿ

ದಮನಿತರ ಸಿಟ್ಟಿನ ಏಕೀಕರಣ – ಅರುಣ್ ಜೋಳದಕೂಡ್ಲಿಗಿ

- Advertisement -
- Advertisement -

`ಬಡವರ ಸಿಟ್ಟು ದವಡೆಗೆ ಮೂಲ’ ಎನ್ನುವ ಗಾದೆ, ಬಡವ ಸಿಟ್ಟಾದರೆ ಪರಿಣಾಮವನ್ನು ಆತನೆ ಎದುರಿಸಬೇಕು, ಹಾಗಾಗಿ ಬಾಯ್ಮುಚ್ಚಿರುವುದು ಲೇಸು ಎನ್ನುವಂತಿದೆ. ಅಂತೆಯೇ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎನ್ನುವ ನುಡಿಗಟ್ಟೂ ಚಾಲ್ತಿಯಲ್ಲಿದೆ. ಅಸಹಾಯಕತೆ ಕಟ್ಟೆಯೊಡೆದಾಗ, ದಬ್ಬಾಳಿಕೆ ಅತಿಯಾದಾಗ ಈ ನುಡಿಗಟ್ಟು ವಿರಳವಾಗಿ ಬಳಕೆಯಾಗುತ್ತದೆ. ಆಳುವ ಶಕ್ತಿಗಳು ಮೊದಲ ನುಡಿಗಟ್ಟನ್ನು ಕಟ್ಟಿ ಜನರಲ್ಲಿ ಆತಂಕ ಹುಟ್ಟಿಸಿದರೆ, ವಿರುದ್ಧವಾಗಿ ಜನರು ಪರ್ಯಾಯ ನುಡಿಗಟ್ಟಿನಲ್ಲಿ ನಮ್ಮ ಸಿಟ್ಟಿಗೂ ಶಕ್ತಿಯಿದೆ ಎಂದು ಆಳುವವರಲ್ಲಿ ಭಯ ಹುಟ್ಟಿಸಿದ್ದಾರೆ. ಇವೆರಡೂ ರಾಜಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯಲ್ಲಿ ಜೀವ ತಳೆದವು.

ಈ ನುಡಿಗಟ್ಟುಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿಯೂ ಮಾರುವೇಷದಲ್ಲಿವೆ. ಇಲ್ಲಿಯೂ ಬಡವರ ಸಂಖ್ಯೆ ಇಳಿದಿಲ್ಲ. ಅಂತೆಯೇ ಪ್ರಜಾಪ್ರಭುತ್ವದಲ್ಲಿಯೂ `ಬಡವನ ಸಿಟ್ಟು ದವಡೆಗೆ ಮೂಲ’ ಎನ್ನುವ ಸ್ಥಿತಿ ಪೂರ್ಣ ಬದಲಾಗಿಲ್ಲ. ಆದರೆ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎಂಬ ನುಡಿಗಟ್ಟಿಗೆ ಸಂವಿಧಾನಿಕ ಬಲ ಬಂದಿದೆ. ಜನರು ಮತ ಚಲಾಯಿಸಿ ಗೆಲ್ಲಿಸಿದ ಚುನಾಯಿತರು ಏನೊಂದು ಕೆಲಸ ಮಾಡದೆ ದರ್ಪ ನಡೆಸಿದವರನ್ನು ಅದೇ ಮತದಾರರರು ಮತ್ತೊಂದು ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿದ್ದಾರೆ. ಇಲ್ಲಿ ಮತದಾರರ ಸಿಟ್ಟು ಮತ್ತು ಆಕ್ರೋಶ `ಮತಚಲಾವಣೆ’ರೂಪದಲ್ಲಿ ಏಕೀಕರಣಗೊಂಡಿದೆ.

ದೀರ್ಘಕಾಲದ ಆಳ್ವಿಕೆಯ ಮದವೇರಿ ಜಿಡ್ಡುಗಟ್ಟಿದ ಕಾಂಗ್ರೆಸ್ ವಿರುದ್ಧದ ಬಹುಸಂಖ್ಯಾತ ಯುವ ಸಮುದಾಯದ ಸಿಟ್ಟು ಏಕೀಕರಣಗೊಂಡ ಫಲವೆ, ಕಳೆದ 2014 ರ ಚುನಾವಣೆಯಲ್ಲಿ ಭಾಜಪ ಬಹುಮತ ಪಡೆದು ನರೇಂದ್ರ ಮೋದಿಯವರು ಪ್ರಧಾನಿಯಾದರು. ಇದೀಗ ಮತ್ತೊಂದು ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಈ 5 ವರ್ಷದ ಮೋದಿಯವರ ಆಡಳಿತದಲ್ಲಿನ ನೋಟುರದ್ಧತಿ, ಜಿಎಸ್‍ಟಿ, ಕೈಗೆಟುಕದಂತಾದ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ, ಸಾರ್ವಜನಿಕ ಸಂಸ್ಥೆಗಳ ದಮನ, ಪರಿಶಿಷ್ಟರ ಸೌಲಭ್ಯಗಳ ಕಡೆಗಣನೆ, ಕಾರ್ಪೋರೇಟರುಗಳ ಪರವಾದ ಆಳ್ವಿಕೆ, ರೈತ ಸಮುದಾಯದ ನಿರ್ಲಕ್ಷ್ಯ, ಹೆಚ್ಚಿದ ರೈತರ ಆತ್ಮಹತ್ಯೆ, ದಲಿತ ಆದಿವಾಸಿಗಳ ದಮನ, ಸಂವಿಧಾನ ಬದಲಾಯಿಸುವ ಧೋರಣೆ, ನಿರುದ್ಯೋಗ ಹೆಚ್ಚಳ ಮೊದಲಾದ ಸಂಗತಿಗಳೂ ಜನಸಾಮಾನ್ಯರ ಆಕ್ರೋಶವನ್ನು ಹೆಚ್ಚಿಸಲಿಲ್ಲವೇ? ದೆಹಲಿಗೆ ತೆರಳಿದ ಎಡಪಕ್ಷಗಳು ಆಯೋಜಿಸಿದ ರೈತ ಸಮುದಾಯದ ಬೃಹತ್ ರ್ಯಾಲಿಗಳು ಈ ಆಕ್ರೋಶವನ್ನು ಕಾಣಿಸಿಯೂ ಇದು ಮತ ಚಲಾವಣೆಯಾಗಿ ಏಕೆ ಬದಲಾಗಲಿಲ್ಲ ಎನ್ನುವ ಪ್ರಶ್ನೆಗಳು ಸಹಜವಾಗಿ ಕಾಡುತ್ತವೆ. ಬಹುಶಃ ಈ ಬಗೆಯ ದಮನಿತರ ಸಿಟ್ಟು ಆಕ್ರೋಶಗಳು ಈ ಬಾರಿಯ ಮತಚಲಾವಣೆಯಲ್ಲಿ ಏಕೀಕರಣಗೊಳ್ಳಬೇಕಿತ್ತು, ಆದರೂ ಏಕೀಕರಣಗೊಳ್ಳಲಿಲ್ಲವೇ ? ಅಥವಾ ಇವಿಎಂ ಮಿಷನ್ನಿನ ಪವಾಡ ಈ ಪ್ರಶ್ನೆಯ ದಾರಿಯನ್ನೂ ತಪ್ಪಿಸುತ್ತಿದೆಯೇ?

ಎಲ್ಲಾ ಕಾಲಕ್ಕೂ ಪ್ರಜಾಪ್ರಭುತ್ವ ಸರಕಾರಗಳು ದಮನಿತರ ಸಿಟ್ಟು ಮತ್ತು ಆಕ್ರೋಶವನ್ನು ನಿರಸನಗೊಳಿಸಿ ಒಟ್ಟಾಗಬಹುದಾದ ದಮನಿತರನ್ನು ತುಂಡಾಗಿಸಿ ಶಕ್ತಿ ಕುಂದಿಸಿದ್ದಿದೆ. ಇಂದಿರಾಗಾಂಧಿಯ ಗರೀಬಿ ಹಟಾವೋ ಯೋಜನೆಗಳು ದಮನಿತರ ಸಿಟ್ಟನ್ನು ದೊಡ್ಡಮಟ್ಟದಲ್ಲಿ ನಿರಸನಗೊಳಿಸಿದವು. ಇಂದೂ ಕೂಡ ದಮನಿತರ ಸಿಟ್ಟು ಒಟ್ಟಾಗಿ ಸ್ಫೋಟಟಗೊಳ್ಳದಂತೆ ನಾನಾರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಇಂದಿರಾ ಕಾಲಕ್ಕೂ ಈಗಿನ ಸಂದರ್ಭಕ್ಕೂ ಇರುವ ಮುಖ್ಯ ವ್ಯತ್ಯಾಸವೆಂದರೆ ಕೆಲವಾದರೂ ಆಮೂಲಾಗ್ರ ಬದಲಾವಣೆಯ, ಮತ್ತೆ ಕೆಲವು ತಾತ್ಕಾಲಿಕವಾಗಿಯಾದರೂ ಸಮಸ್ಯೆಗಳನ್ನು ಬಗೆಹರಿಸಿ ಜನರ ಸಿಟ್ಟನ್ನು ಮುದುಡಿಸಲಾಗುತ್ತಿತ್ತು. ಆಗ ಬಂದ ಬಹುಪಾಲು ಯೋಜನೆಗಳು ಬೇರೆ ಬೇರೆ ಹೆಸರನ್ನು ಅಂಟಿಸಿಕೊಂಡು ಇಂದಿಗೂ ಚಾಲ್ತಿಯಲ್ಲಿವೆ. ಆದರೆ ಇಂದು ಒಟ್ಟಾಗಬಹುದಾದ ಜನರ ಸಿಟ್ಟು ಆಕ್ರೋಶವನ್ನು ತಾತ್ಕಾಲಿಕ ಯೋಜನೆಗಳೂ ಇಲ್ಲದಂತೆ ಜನರನ್ನು ವಿಭಜಿಸಿ ನಿಶಕ್ತಗೊಳಿಸಲಾಗುತ್ತಿದೆ. ಮುಖ್ಯವಾಗಿ ಜನರ ಸಿಟ್ಟನ್ನು ನಿರಸನಗೊಳಿಸಲು ಆಡಳಿತ ಸರಕಾರದ ಬಗೆಗೆ ಜನಪರವೆಂಬ ಸುಳ್ಳುಗಳ ಉತ್ಪಾದನೆ ಅವ್ಯಾಹತವಾಗಿ ನಡೆದಿದೆ. ಇದನ್ನು ವಿಶೇಷವಾಗಿ ದೃಶ್ಯಮಾಧ್ಯಮಗಳು ಜನರಲ್ಲಿ ಬಿತ್ತುತ್ತಿವೆ.

ಹಾಗಾಗಿ ಇಂದು ಜನರ ಸಿಟ್ಟನ್ನು ಕಡಿಮೆಗೊಳಿಸುವ ಲಕ್ಷಾಂತರ ಕ್ಷುಲ್ಲಕ ಸಂಗತಿಗಳ ಉತ್ಪಾದನೆ ಕ್ಷಣಕ್ಷಣವೂ ನಡೆಯುತ್ತಿದೆ. ಇದರಿಂದಾಗಿಯೇ ದೇಶಕ್ಕೆ ಮಾರಕವಾಗುವ ವಿದ್ಯಮಾನಗಳು ಘಟಿಸಿದಾಗಲೂ ಇಡೀ ದೇಶದಲ್ಲಿ ಆಕ್ರೋಶ ಭುಗಿಲೇಳುತ್ತದೆಂದು ಎದುರು ನೋಡುವಾಗಲೆ, ಏನೂ ನಡೆದೇ ಇಲ್ಲವೆಂಬಂತೆ ವಿದ್ಯಮಾನಗಳು ಕಣ್ಮರೆಯಾಗುತ್ತವೆ. ಇದೀಗ ಕೇಂದ್ರೀಕರಣವಾಗಬೇಕಾದ ಜನರ ಸಮಸ್ಯೆಗಳನ್ನು ವಿಕೇಂದ್ರೀಕರಣ ಮಾಡಲಾಗುತ್ತಿದೆ. ದೇಶದಾದ್ಯಂತ ನಿರುದ್ಯೋಗಿ ಯುವಜನರ ಸಿಟ್ಟು ಶೇಖರಣೆಗೊಳ್ಳುತ್ತಿದೆ. ಇಂತಹ ಬಹುಪಾಲು ಯುವಕರ ತಲೆಯಲ್ಲಿ ಧರ್ಮದ ಅಫೀಮು ತುಂಬಿ ಕಾಲಾಳುಗಳಂತೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ಕೋಮುವಾದಿ ಶಕ್ತಿಗಳು ಅನ್ಯ ಕೋಮಿನ ಬಗೆಗೆ ಸಿಟ್ಟನ್ನು ಉತ್ಪಾದಿಸಿ ಅಂತಹ ಉತ್ಪಾದಿತ ಸಿಟ್ಟಿನ ಏಕೀಕರಣದಿಂದ ಕೋಮುಗಲಭೆಯಂತಹ ಹಿಂಸೆಯ ನಡೆಗಳು ಸಾಧ್ಯವಾಗುತ್ತವೆ.

ಎಲ್ಲೆಲ್ಲಿ ಶೋಷಿತರ ಸಿಟ್ಟು ಆಕ್ರೋಶ ಒಟ್ಟಾಗಿ ಸ್ಫೋಟಗೊಂಡಿದೆಯೋ ಅಲ್ಲೆಲ್ಲಾ ಕ್ರಾಂತಿ ಮೊಳಗಿದೆ. ಬದಲಾವಣೆ ಸಾಧ್ಯವಾಗಿದೆ. ಜನರ ಸಿಟ್ಟನ್ನು ಏಕೀಕರಿಸುವ ಯೋಚನೆ ಇಂದು ನಿನ್ನೆಯದಲ್ಲ, ಕಾರ್ಲ್‍ಮಾರ್ಕ್ಸ್ ಒಳಗೊಂಡಂತೆ ಅಂಬೇಡ್ಕರ್ ಗಾಂಧಿ ಲೋಹಿಯಾ ಪೆರಿಯಾರ್‍ತನಕ ಭಿನ್ನ ನೆಲೆಗಳಲ್ಲಿ ದಮನಿತರ ಸಿಟ್ಟು ಆಕ್ರೋಶದ ಏಕೀಕರಣದ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರ ವಿರುದ್ಧದ ಜನರ ಸಿಟ್ಟನ್ನು ಗಾಂಧಿ ಏಕೀಕರಣ ಮಾಡಿದ್ದರ ಫಲವೇ ಸ್ವಾತಂತ್ರ್ಯ ಹೋರಾಟ.

ಹೀಗೆ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ತಳೆಯುವ ಸಣ್ಣಪುಟ್ಟ ಸಿಟ್ಟು ಒಟ್ಟಾಗಿ ಚಳವಳಿಯ ಸಾಗರವಾಗಬೇಕಿದೆ. ಈ ಹೊತ್ತಿನ ಮಹಾಘಟಬಂಧನ್, ಜನಾಂದೋಲನಗಳ ಮಹಾಮೈತ್ರಿ, ದಲಿತ ಸಂಘಟನೆಗಳ ಒಕ್ಕೂಟದಂತಹ ಜನಚಳವಳಿಗಳನ್ನು ಒಟ್ಟಾಗಿಸುವ ಪ್ರಯತ್ನಗಳು ಈ ಕಾರಣಕ್ಕೆ ಒಂದಾಗಲೆತ್ನಿಸುತ್ತಿವೆ. ಆದರೆ ಕಾಲಕಾಲಕ್ಕೆ ಹೀಗೆ ಜನ ಸಾಮಾನ್ಯರ ಸಿಟ್ಟನ್ನು ಒಟ್ಟಾಗದಂತೆ ಮೇಲ್ಜಾತಿ ಮತ್ತು ಮೇಲ್ವರ್ಗಗಳನ್ನೊಳಗೊಂಡ ಪ್ರಭುತ್ವ ಛಿದ್ರಗೊಳಿಸುತ್ತಲೇ ಬಂದಿದೆ. ವಾಸ್ತವವಾಗಿ ವರ್ತಮಾನದ ಭಾರತದಲ್ಲಿ ಜನಸಾಮಾನ್ಯರಲ್ಲಿ ಹುಟ್ಟುತ್ತಿರುವ ಸಿಟ್ಟು ಆಕ್ರೋಶದ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಈ ಸಿಟ್ಟು ಏಕೀಕರಣಗೊಂಡು ಬದಲಾವಣೆಗೆ ಬೇಕಾಗುವ ದೊಡ್ಡ ಶಕ್ತಿಯಾಗುವ ಸಾಮಥ್ರ್ಯ ಕುಗ್ಗುತ್ತಿದೆ. ಇದೊಂದು ವೈರುಧ್ಯದ ಚಲನೆ. ಮತ್ತೊಂದೆಡೆ ಕಾರ್ಪೋರೇಟ್ ಶಕ್ತಿಗಳು ಜನರನ್ನು ಗಿರಾಕಿಗಳನ್ನಾಗಿ ಏಕೀಕರಣಗೊಳಿಸಿ ಮಾರುಕಟ್ಟೆಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಇದಕ್ಕೆ ಪ್ರಭುತ್ವವೂ ಜೊತೆಯಾಗಿದೆ. ಇದು ಸದ್ಯಕ್ಕೆ ಪ್ರತಿ ಭಾರತೀಯ ಪ್ರಜೆಯೂ ಯೋಚಿಸಬೇಕಾದ ಸಂಗತಿ.

ಆಮೂಲಾಗ್ರವಾಗಿ ಒಟ್ಟಂದದ ಬದಲಾವಣೆಗೆ ಏಕೀಕರಣಗೊಳ್ಳಬೇಕಾದ ಸಿಟ್ಟು ಆಕ್ರೋಶಗಳು ಇಂದು ಚಿಕ್ಕಪುಟ್ಟ ಆಸೆಗಳಿಗೆ ಬಲಿಯಾಗುತ್ತಿವೆ. ಅಂತೆಯೇ ದಮನಿತರ ದೊಡ್ಡ ದೊಡ್ಡ ಕನಸುಗಳು ಚೂರುಚೂರಾಗುತ್ತಿವೆ. ಜನಸಾಮಾನ್ಯರ ಸಿಟ್ಟು ಆಕ್ರೋಶವನ್ನು ಏಕೀಕರಣ ಮಾಡಬಯಸುವ ಜೀವಪರ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರನ್ನು `ನಗರನಕ್ಸಲರು’ ಎನ್ನುವ ಹಣೆಪಟ್ಟಿ ಅಂಟಿಸುವ ಮೂಲಕ ಸಿಟ್ಟಿನ ಏಕೀಕರಣವನ್ನೆ ದೇಶದ್ರೋಹದ ಸಂಗತಿಯನ್ನಾಗಿಸಲಾಗಿದೆ. ಹಾಗಿದ್ದೂ, ದಮನಿತರ ಸಿಟ್ಟು ಏಕೀಕರಣಗೊಳ್ಳದೆ ಅವರ ಬದಲಾವಣೆ ಅಸಾಧ್ಯ. ಜನಸಾಮಾನ್ಯರ ದಮನದ ಅತಿರೇಕದ ತುಟ್ಟತುದಿಯಲ್ಲಿ ಸಿಟ್ಟು ಏಕೀಕರಣಗೊಳ್ಳುವುದನ್ನು ಯಾರಿಂದಲೂ ತಪ್ಪಿಸಲಾಗದು. ಇದೀಗ ಅದೊಂದೆ ಭವಿಷ್ಯದ ಭರವಸೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಆಹಾರ ಉತ್ಪಾದನೆ ಯಿಂದ ಹಿಡಿದು ಅವರು ದರಿಸುವ ಉಡುಪುಗಳನ್ನು ಮಾತ್ರವಲ್ಲ,
    ಹಾಕುವ ಚಪ್ಪಲಿ,ಅವರ ಹೇರ್ ಕಟ್,ಅವರ ಮನೆ ಬಾತ್ ರೂಮ್ ನಿಂದ ಹಿಡಿದು ಸಪ್ಟಿಕ್ ಟ್ಯಾಂಕ್, ಅವರ ಬೀದಿ ಗುಡಿಸಲೂ ಸಹ ಅವರ ಧರ್ಮದ ವರನ್ನೇ ಆಯ್ಕೆ ಮಾಡಿಕೊಳ್ಳಬೇಕು….

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...