Homeಎಂಟರ್ತೈನ್ಮೆಂಟ್ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

- Advertisement -
- Advertisement -

ಸಿನಿಮಾ ಎಂದಾಕ್ಷಣ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಸಿನಿಮಾ ಬಗ್ಗೆ ತಿಳಿದುಕೊಳ್ಳುವ, ವಿಮರ್ಶಿಸುವ, ಚರ್ಚಿಸುವ ಸಿನಿಮಾಸಕ್ತರಿಗೆ ‘ಮನುಜಮತ ಸಿನಿಯಾನ’ ತಂಡ ನಡೆಸಿಕೊಡುವ ಸಿನಿಮಾ ಪ್ರದರ್ಶನದ ಸಿನಿಹಬ್ಬಗಳು ವಿಶಿಷ್ಟ ಪ್ರಯೋಗಗಳಿಗೆ ಹಿಡಿದ ಕನ್ನಡಿಯಂತಿವೆ. ಈ ತಂಡದಲ್ಲಿ ವಿಶ್ವದ ಸಿನಿಮಾಗಳ ಬಗ್ಗೆ ವಿಭಿನ್ನವಾಗಿ ಚಿಂತಿಸುವ ಹಲವು ಮುಖಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಸದಾಕಾಲ ಸಿನಿಪ್ರೇಮಿಗಳಿಗೆ ಚಲನಚಿತ್ರ ರಸಗ್ರಹಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುವ ಸಫಲ ಪ್ರಯತ್ನಗಳನ್ನು ಮಾಡಿಕೊಂಡು ಬಂದಿದ್ದಾರೆ.

ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೊಂದಿರುವ ಫಣಿರಾಜ್‍ರಂತಹ ಸಿನಿ ಮೇಧಾವಿಗಳು ತಮ್ಮ ಸಿನಿಮಾ ಜ್ಞಾನವನ್ನು ಹಲವರಿಗೆ ಧಾರೆ ಎರೆಯುತ್ತಾ, ಈ ತಂಡವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ. ಬರೀ ಮಾಸ್, ಕ್ಲಾಸ್, ಹೊಡೆದಾಟ, ಕಾಮಿಡಿ ಡೈಲಾಗ್‍ಗಳ ಸಿನಿಮಾಗಳಿಗೆ ಮೀಸಲಾದ ಹಲವು ಯುವ ಮನಸ್ಸುಗಳಿಗೆ ಪ್ರಾಪಂಚಿಕ ಸಿನಿಮಾಗಳ ಕಡೆ ಒಲವು ಮೂಡಿಸಿದ ಕೀರ್ತಿ ತಂಡದ ಎಲ್ಲಾ ಸಂಘಟಕರಿಗೂ ಸಲ್ಲುತ್ತದೆ. ಅದರಲ್ಲೂ ಯದುನಂದನ್, ರೋಹಿತ್ ಅಗಸರಹಳ್ಳಿ, ಕುಮಾರ್ ರೈತ, ಮನು ಮೈಸೂರು, ಐವನ್ ಡಿ ಸಿಲ್ವ, ಹರ್ಷ ಕುಮಾರ್ ಕುಗ್ವೆ, ಜಿ.ಟಿ ಸತೀಶ್ ಹಾಗೂ ಹೊನ್ನಾಳಿ ಚಂದ್ರಶೇಖರ್ ಸೇರಿದಂತೆ ಹಲವು ಘಟಾನುಘಟಿ ಸಿನಿ ಸಂಘಟಕರು ಈ ಕೆಲಸಕ್ಕೆ ಕೈಹಾಕಿರುವುದು ಸಿನಿಹಬ್ಬಗಳ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ಗಂಡು-ಹೆಣ್ಣು, ಜಾತಿ-ಮತ, ಪ್ರಾಂತ್ಯಗಳ ಭೇದವಿಲ್ಲದೇ ಒಂದೇ ಸ್ಥಳದಲ್ಲಿ ಒಟ್ಟಾಗಿ ಕುಳಿತು ಸಿನಿಮಾಗಳನ್ನು ನೋಡಿ, ಆ ಸಿನಿಮಾದ ಹಲವು ಆಯಾಮಗಳನ್ನು ಚರ್ಚಿಸಿ, ವಿಮರ್ಶಿಸುವ, ಸಿನಿಮಾಗಳ ಬಗ್ಗೆ ಸಲಹೆ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ನಡೆಯುವ ಇಂತಹ ಸಿನಿಹಬ್ಬಗಳ ಪ್ರಯತ್ನ ನಿಜಕ್ಕೂ ಸಾರ್ಥಕ. ಇದಲ್ಲದೇ ಮನುಜಮತ ಸಿನಿಯಾನ ವಾಟ್ಸಾಪ್ ಗ್ರೂಪಿನಲ್ಲಿ ಹಲವು ಸಿನಿಮಾಗಳ ಬಗ್ಗೆ ಚರ್ಚೆಯಾಗುತ್ತವೆ. ಉತ್ತಮ ಮಾಹಿತಿಗಳು ಪರಸ್ಪರ ಹಂಚಿಕೆಯಾಗುತ್ತಿವೆ.

ಗ್ಲೋರಿ ಸಿನಿಮಾದ ದೃಶ್ಯ

ಸಿನಿಹಬ್ಬಕ್ಕೆ ಸಂಬಂಧಿಸಿದಂತೆ ಮೊದಲು ಸಿನಿಹಬ್ಬ ನಡೆಸುವ ಸ್ಥಳ ನಿಗದಿಯಾಗಿ, ದಿನ ಗೊತ್ತು ಮಾಡಿ, ಥೀಮ್ ಆಯ್ಕೆ ಮಾಡಿ, ಆ ಥೀಮ್‍ಗೆ ಸಂಬಂಧಿಸಿದ ಸಿನಿಮಾಗಳನ್ನು ಹೆಕ್ಕಿ ತೆಗೆದು, ಆ ಸಿನಿಮಾಗಳನ್ನು ವೀಕ್ಷಿಸಿ ಅತ್ಯುತ್ತಮವಾದ ಸಾಕ್ಷ್ಯಚಿತ್ರ, ಕಿರುಚಿತ್ರ ಸೇರಿದಂತೆ ಸುಮಾರು 7-8 ಸಿನಿಮಾಗಳನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿ, ಸಿನಿಹಬ್ಬದಂದು ಪ್ರದರ್ಶಿಸಲಾಗುತ್ತದೆ. ಸಿನಿಹಬ್ಬದ ಮತ್ತೊಂದು ವಿಶೇಷವೆಂದರೆ ಊಟದ ಮೆನು. ಯಾವ ಯಾವ ಭಾಗದಲ್ಲಿ ಸಿನಿಹಬ್ಬ ಜರುಗುತ್ತದೆಯೋ ಆ ಭಾಗದಲ್ಲಿ ವಿಶೇಷ ತಿನಿಸುಗಳನ್ನು ಉಣಬಡಿಸುವುದು ವಿಶೇಷ. ಸಿನಿಮಾಗಳ ಹೂರಣ ಹಾಗೂ ನಿಸರ್ಗದ ಕಡೆ ಚಾರಣ – ಇದು ಸಿನಿಹಬ್ಬದ ಪ್ಲಸ್ ಪಾಯಿಂಟ್.

ಇದನ್ನು ಓದಿ: ಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

ಮಂಡ್ಯ ಸಿನಿಮಾ ಹಬ್ಬ

ಈ ಬಾರಿ ಮನುಜಮತ ಸಿನಿಯಾದ ಸಂಘಟಕರು ಮಂಡ್ಯದಲ್ಲಿ ಸಿನಿಹಬ್ಬವನ್ನು ಆಯೋಜಿಸಿದ್ದರು. ಯಾವುದೇ ಕೊರತೆಗಳು ನುಸುಳದಂತೆ ಅಚ್ಚುಕಟ್ಟಾಗಿ ನಿಭಾಯಿಸಿದ ಸಿನಿಹಬ್ಬದ ಸಂಘಟಕರು ಅಭಿನಂದನಾರ್ಹರು. ಇಲ್ಲಿ ‘ಮಾಧ್ಯಮ ರಾಜಕಾರಣ’ ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಅನುಸರಿಸುತ್ತಿರುವ ಧೋರಣೆಗಳು ಹಾಗೂ ಕೆಲವು ಮಾಧ್ಯಮಗಳ ಕರಾಳ ಮುಖವನ್ನು ತೆರೆದಿಡಲು ಪ್ರಯತ್ನಿಸಿತು. ಮಾಧ್ಯಮಗಳು ತಮ್ಮ ಟಿ.ಆರ್.ಪಿ ಎಂಬ ವ್ಯಾವಹಾರಿಕ ಪ್ರಜ್ಞೆಯಿಂದ ಸಾಮಾಜಿಕ ಪ್ರಜ್ಞೆಯನ್ನು ಮರೆತಿದ್ದಾರೆ. ಮಾಧ್ಯಮಗಳ ಕೆಲವು ಸುಳ್ಳು ಸುದ್ದಿಗಳ ಪ್ರಸಾರದಿಂದ ನಿಜ ಯಾವುದು? ಸುಳ್ಳು ಯಾವುದು? ಎಂಬ ಗೊಂದಲ ಮೂಡುವುದಂತೂ ಸತ್ಯ. ಇದು ಹುಲಿ ಬಂತು ಹುಲಿ ಕಥೆಯ ಹಾಗೇ ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ.

ಎರಡು ದಿನಗಳ ಕಾಲ ನಡೆದ ಮಂಡ್ಯ ಸಿನಿಹಬ್ಬದಲ್ಲಿ ಮೊದಲಿಗೆ ಫಾಲನ್ ಆರ್ಟ್ ಎಂಬ ಕಿರುಚಿತ್ರದೊಂದಿಗೆ ಪ್ರಾರಂಭವಾಗಿ ಸ್ಪಾಟ್‍ಲೈಟ್, ಪೀಪ್ಲಿಲೈವ್, ದಿ ರೆವಲ್ಯೂಷನ್ ವಿಲ್ ನಾಟ್ ಬಿ ಟೆಲಿವೈಸ್ಡ್, ಈಡಿ ಟಿವಿ ಹಾಗೂ ಗ್ಲೋರಿ ಚಲನಚಿತ್ರ ಪ್ರದರ್ಶನಗಳೊಂದಿಗೆ ಸಿನಿಹಬ್ಬ ಮುಕ್ತಾಯಗೊಂಡಿತು.

ಪೋಲ್ಯಾಂಡಿನ ‘ಫಾಲನ್ ಆರ್ಟ್’ ಕಿರುಚಿತ್ರವು ಪೋಲ್ಯಾಂಡಿನ ರಾಜಕೀಯ ವ್ಯವಸ್ಥೆಯನ್ನು ಹಾಗೂ ಅಲ್ಲಿನ ಮಾಧ್ಯಮಗಳ ಕಠೋರತೆಯನ್ನು ತಿಳಿಸುತ್ತದೆ. 2015ರಲ್ಲಿ ತೆರೆಕಂಡ ಹಾಲಿವುಡ್‍ನ ‘ಸ್ಪಾಟ್‍ಲೈಟ್’ ಚಿತ್ರವು ಪತ್ರಿಕೆಯಲ್ಲಿ ಪ್ರಕಟವಾದ ಸತ್ಯಘಟನೆಯನ್ನು ಆಧರಿಸಿದೆ. ಬೋಸ್ಟನ್ ನಗರದ ಚರ್ಚ್‍ಗಳಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಹೊರಗೆಳೆಯುವ ಸಂದರ್ಭದಲ್ಲಿ ಪತ್ರಕರ್ತರು ಅನುಭವಿಸಿದ ನೋವು-ಅವಮಾನಗಳನ್ನು ಚಿತ್ರವು ತೆರೆದಿಡುತ್ತದೆ.

2010ರಲ್ಲಿ ಭಾರತದಲ್ಲಿ ತೆರೆಕಂಡ ಅನುಷ್ಕ ರಿಜ್ವಿ ನಿರ್ದೇಶನದ ‘ಪೀಪ್ಲಿ ಲೈವ್’ ಚಿತ್ರವು ಒಬ್ಬ ಸಾಮಾನ್ಯ ಬಡರೈತನ ಬದುಕನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ ಎಂಬುದನ್ನು ತೋರಿಸುತ್ತದೆ. ಭೂಮಿ ಕಳೆದುಕೊಂಡು ಸಾಲ ತೀರಿಸಲಾಗದೇ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ಸರ್ಕಾರದಿಂದ ತನ್ನ ಕುಟುಂಬಕ್ಕೆ ಪರಿಹಾರಧನ ಕೊಡಿಸಲು ಹೆಣಗಾಡುವ ನಾಥೂದಾಸ್ ಎಂಬ ಬಡರೈತ ಒಂದು ಕಡೆ, ಅದನ್ನೇ ದುರುಪಯೋಗ ಪಡಿಸಿಕೊಂಡು ರೈತನ ಆತ್ಮಹತ್ಯೆಯನ್ನು ಲೈವ್ ಆಗಿ ತೋರಿಸುವ ಪ್ರಯತ್ನಿಸುವ ಮಾಧ್ಯಮಗಳ ಕೆಟ್ಟ ಮನಸ್ಥಿತಿಯನ್ನು ಈ ಚಿತ್ರವು ಬಿಚ್ಚಿಡುತ್ತದೆ.

2003ರಲ್ಲಿ ತಯಾರಾದ ‘The Revolution will not be televisied’ ಎಂಬ ಸಾಕ್ಷ್ಯಾಚಿತ್ರವು ವೆನಿಜುವೆಲಾದ ಅಧ್ಯಕ್ಷ ಹ್ಯುಗೋ ಚಾವೆಝ್‍ರ ಪರ, ವಿರೋಧಗಳ ಜನತೆ ನಡೆಸಿದ ಪ್ರತಿಭಟನೆಯನ್ನು ತೆರೆದಿಡುತ್ತದೆ. ಮಿಲಿಟರಿ ಮತ್ತು ನಿರಂಕುಶ ಆಡಳಿತದ ತಾರ್ಕಿಕ ಸಂಘರ್ಷಗಳ ಬಗ್ಗೆ ಹಾಗೂ ಅಲ್ಲಿನ ಜನರಿಗೆ ಚಾವೆಝ್ ಮೇಲಿದ್ದ ಅಭಿಮಾನವನ್ನು ಚಿತ್ರವು ಸಾರಿ ಹೇಳುತ್ತದೆ. ನೈಜವಾಗಿ ಚಿತ್ರೀಕರಿಸಿರುವ ಈ ಸಾಕ್ಷ್ಯಾಚಿತ್ರವು ತುಂಬಾ ಅದ್ಭುತವಾಗಿ ಮೂಡಿಬಂದಿದೆ.

1999ರಲ್ಲಿ ತೆರೆಕಂಡ ಹಾಲಿವುಡ್‍ನ ‘ಈಡಿ ಟಿವಿ’ ಚಿತ್ರದಲ್ಲಿ ಮಾಧ್ಯಮಗಳ ಮತ್ತೊಂದು ಮುಖವನ್ನು ಅನಾವರಣ ಮಾಡಲಾಗಿದೆ. ಭಾರತದಲ್ಲಿ ಪ್ರಸ್ತುತವಾಗಿ ರಿಯಾಲಿಟಿ ಷೋಗಳದ್ದೇ ಕಾರುಬಾರು. ಈ ರಿಯಾಲಿಟಿ ಷೋಗಳಿಂದ ವ್ಯಕ್ತಿಗಳ ವೈಯಕ್ತಿಕ ಬದುಕು ಹರಣವಾಗುತ್ತಿದೆ ಎಂಬುದನ್ನು ಈ ಚಿತ್ರವು ತಿಳಿಸುತ್ತದೆ. ಕೆಲವು ವರ್ಷಗಳ ಹಿಂದೆ ನಡೆದ ಸಿದ್ದಿ ಜನಾಂಗದ ಆದಿವಾಸಿ ಹುಡುಗ ರಾಜೇಶ್‍ನ ದುರಂತ ಅಂತ್ಯವನ್ನು ಈ ಚಿತ್ರವು ನೆನಪಿಸುತ್ತದೆ. ಪ್ರೇಕ್ಷಕರ ಮನೋರಂಜನಾ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಟಿ.ಆರ್.ಪಿ ತೆವಲಿಗಾಗಿ ಮಾಧ್ಯಮಗಳು ಏನೇನೆಲ್ಲಾ ಪ್ರಸಾರ ಮಾಡುತ್ತವೆ ಎಂಬುದನ್ನು ತಿಳಿಸುತ್ತದೆ.

ಇನ್ನೂ 2016ರಲ್ಲಿ ತೆರೆಕಂಡ ಬಲ್ಗೇರಿಯಾದ ‘ಗ್ಲೋರಿ’ ಚಿತ್ರವು ಒಬ್ಬ ಸಾಮಾನ್ಯ ರೈಲ್ವೆ ಕಾರ್ಮಿಕನ ಮುಗ್ಧತೆ, ಪ್ರಾಮಾಣಿಕತೆಯನ್ನು ಹೇಗೆ ಸಮಾಜ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಪೆಟ್ರೋವ್ ಅನುಭವಿಸುವ ನೋವು-ಯಾತನೆ, ಅವನಿಗಿರುವ ಮುಗ್ಧತೆ, ಪ್ರಾಮಾಣಿಕತೆ, ಸಮಯಪ್ರಜ್ಞೆ, ಪ್ರಾಣಿಪ್ರಜ್ಞೆಯನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಸಾರಿಗೆ ಮಂತ್ರಿಯ ಭ್ರಷ್ಟಾಚಾರವನ್ನು ಹೊರಗೆಳೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ, ಕಳೆದುಕೊಂಡ ವಾಚನ್ನು ಹುಡುಕಲು ಕಷ್ಟ ಪಡುವ ಪೆಟ್ರೋವ್‍ನ ಚಿತ್ರಣ ಈ ಚಿತ್ರದಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮಾಧ್ಯಮಗಳು ಸಕಾರಾತ್ಮಕ ಸಂಗತಿಗಳಿಗಿಂತ ನಕಾರಾತ್ಮಕ ಅಂಶಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿರುವುದು ದುರಂತದ ಸಂಗತಿ. ಈ ಬಗ್ಗೆ ಜನ ಸಮುದಾಯ ಜಾಗೃತ ಆಗಬೇಕೆಂದು ಈ ಥೀಮ್‍ನ ಆಶಯವಾಗಿದೆ.

ನಿಮ್ಮ ಓದಿಗಾಗಿ ಮತ್ತಷ್ಟು

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಏನಿದು ಫಿಲ್ಮ್ ಡೈರೆಕ್ಷನ್?

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...