Homeಮುಖಪುಟಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಕಾರ್ಪೊರೇಟ್ ಹೋಂಚೊಗಳು ಎನ್ನುವರಿರ್ತಾರೆ. ಇವರು ಕಾರ್ಪೊರೇಟ್ ಜಗತ್ತಿನಲ್ಲಿ ಇತರರೊಂದಿಗೆ ಸೆಣೆಸಿ ಯಶಸ್ಸಿನ ಏಣಿ ಹತ್ತಿದವರು. ಇವರು ಜೀವನವನ್ನು ಅತಿಯಾಗಿ ಎಂಜಾಯ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಒಂದೇ ಒಂದು ತಪ್ಪು ಮಾಡಿದಲ್ಲಿ ಇವರು ಸರ್ರನೇ ಕೆಳಗಿಳಿಯುತ್ತಾರೆ. ತಂತ್ರಜ್ಞಾನದಲ್ಲಿ ಮತ್ತು ಆ ತಂತ್ರಜ್ಞಾನವನ್ನು ಬಳಸುವವರಲ್ಲಿ ವಿಶ್ವಾದಾದ್ಯಂತ ಯಾವುದೇ ಬದಲಾವಣೆ ಆಗಲಿ ಇವರಿಗೆ ಗೊತ್ತಿರಲೇಬೇಕು.

ಇಂದು 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮೋದಿಯ ಬಿಜೆಪಿ ಇನ್ನೊಮ್ಮೆ ಗೆಲ್ಲುತ್ತಿದೆ. ಅಧಿಕಾರದ ಎರಡನೇ ಅವಧಿಯಲ್ಲಿ ಅವರು ಏನೆಲ್ಲಾ ಮಾಡಬಹುದು, ನಮ್ಮ ಪ್ರಜಾಪ್ರಭುತ್ವಕ್ಕೆ ಕಾದಿರುವ ಗಂಡಾಂತರ, ನಮ್ಮ ಬಹುತ್ವದ ಸಂಸ್ಕೃತಿಗೆ ಕಾದಿರುವ ಗಂಡಾಂತರ, ಅಲ್ಪಸಂಖ್ಯಾತರು, ದಲಿತರು ಮತ್ತು ಮುಖ್ಯವಾಗಿ ಮಹಿಳೆಯರು ಅನುಭವಿಸಬೇಕಾದ ಸಂಕಷ್ಟಗಳ ಬಗ್ಗೆಯೂ ನಾವೆಲ್ಲ ಚರ್ಚಿಸಿದ್ದೇವೆ. ಇದರ ಬಗ್ಗೆ ನಮ್ಮ ಬುದ್ಧಿಜೀವಿಗಳು ಬರೆದಿದ್ದಾರೆ, ನಮ್ಮನ್ನು ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ.

ಆದರೆ ನಮ್ಮ ಲೀಡಿಂಗ್ ಬುದ್ಧಿಜೀವಿಗಳು ಬಿಜೆಪಿ ಮತ್ತು ಸಂಘಪರಿವಾರ ಎಸೆದ ಸವಾಲನ್ನು ಎದುರಿಸಲು ಸಶಕ್ತರಾಗಿದ್ದಾರೆಯೇ? ಇದು ಚುನಾವಣೆಯಲ್ಲಿನ ಗೆಲುವು ಸೋಲಿನ ಪ್ರಶ್ನೆಯಲ್ಲ. ಅವರು ದೇಶದ ಮುಂದೆ ಇರಿಸಿದ ಸೈದ್ಧಾಂತಿಕ ಸವಾಲಿಗೆ ಸೈದ್ಧಾಂತಿಕ ಉತ್ತರಗಳು ನಮ್ಮ ಬುದ್ಧಿಜೀವಿಗಳು ಕಂಡುಕೊಂಡಿದ್ದಾರೆಯೇ? ಕಳೆದ ಎರಡೂವರೆ ದಶಕಗಳಲ್ಲಿ ಬಿಜೆಪಿ ಮತ್ತು ಬಲಪಂಥೀಯ ಶಕ್ತಿಗಳು ಅಪಾರ ಯಶಸ್ಸನ್ನು ಕಂಡಿದ್ದಾರೆ. ಅದರೆದುರಿಗೆ ಇವರ ಪಾತ್ರವೇನಾಗಿತ್ತು?

ಇಂಟಲೆಕ್ಚುವಲಿಸಂ ಎನ್ನುವುದೂ ರಾಜಕೀಯದ ಒಂದು ಭಾಗ. ನಮ್ಮ ಬುದ್ಧಿಜೀವಿಗಳು ರಾಜಕೀಯಕ್ಕೆ ತಮ್ಮ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಸ್ವಾತಂತ್ರಪೂರ್ವದ ಸಂದರ್ಭದಲ್ಲಿ ಬುದ್ಧಿಜೀವಿಗಳೇ ರಾಜಕಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅನೇಕ ರಾಜಕಾರಣಿಗಳು ಹಲವಾರು ಪುಸ್ತಕಗಳನ್ನು ಬರೆದಿದ್ದರು. ಸ್ವಾತಂತ್ರ್ಯಾ ನಂತರದ ಮೊದಲ ಕೆಲವು ದಶಕಗಳವರೆಗೆ ದೇಶದ ರಾಜಕಾರಣಿಗಳಲ್ಲಿ ಅನೇಕ ಚಿಂತಕರು ಮತ್ತು ಬುದ್ಧಿಜೀವಿಗಳಿದ್ದರು.

ಸಮಯ ಕಳೆದಂತೆ ಪರಿಸ್ಥಿತಿ ಬದಲಾಗಿ ಬುದ್ಧಿಜೀವಿಗಳೆಂದರೆ ಯುನಿವರ್ಸಿಟಿಗಳಲ್ಲಿ ಕೆಲಸ ಮಾಡುವವರು, ಪತ್ರಕರ್ತರು, ಬರಹಗಾರರೇ ವೃತ್ತಿಪರ ಬುದ್ಧಿಜೀವಿಗಳಾದರು. ಈ ಬುದ್ಧಿಜೀವಿಗಳು ನೀಡಿದ ಕೊಡುಗೆಯೂ ಕಡಿಮೆಯೇನಿಲ್ಲ. ಆದರೆ ಕಳೆದೆರಡು ದಶಕಗಳಿಂದ ಇವರೆಲ್ಲರು ತಮ್ಮನ್ನು ತಾವು ಅಪ್‍ಡೇಟ್ ಮಾಡಿಕೊಂಡಿದ್ದಾರೆಯೇ? ತಮ್ಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆಯೇ? ಹೌದು ಮತ್ತು ಇಲ್ಲ.

ನಮ್ಮ ಬುದ್ಧಿಜೀವಿಗಳು ಬಿಜೆಪಿ ಸಂಘಪರಿವಾರದ ಮಾರಕ ಅಜೆಂಡಾಗೆ ವಿರುದ್ಧವಾಗಿ ದಿಟ್ಟವಾಗಿ ಎದ್ದು ನಿಂತಿದ್ದಾರೆ. ಬಿಜೆಪಿಯ ಕಥನವನ್ನು ಮುರಿಯಲು, ಅವರ ಕಥನದ ಪೊಳ್ಳುತನ ಮತ್ತು ಸುಳ್ಳುಗಳನ್ನು ಬಯಲಿಗೆಳೆದಿದ್ದಾರೆ. ಅದಕ್ಕಾಗಿ ಅವರು ತೆಗೆದುಕೊಂಡ ರಿಸ್ಕ್ ಸಹ ಅಂತಿಂಥದ್ದಲ್ಲ. ಅಕ್ಷರಶಃ ಪ್ರಾಣವನ್ನೇ ತೆತ್ತಿದ್ದಾರೆ. ಮುಖ್ಯವಾಹಿನಿ ರಾಜಕೀಯ ಪಕ್ಷಗಳು ದನಿ ಕಳೆದುಕೊಂಡಾಗ ಗಟ್ಟಿಯಾಗಿ ಮಾತನಾಡಿದ್ದಾರೆ. ಆದರೂ ಸೋತಿದ್ದಾರೆ.

ಇದನ್ನು ಓದಿ: ದೇಶವನ್ನು ಕಾಂಗ್ರೆಸ್ ಏಕೆ ರಕ್ಷಿಸಲಾರದು? – ಯೋಗೇಂದ್ರ ಯಾದವ್

ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ನಮ್ಮ ಬುದ್ಧಿಜೀವಿಗಳಿಗೆ ತಮ್ಮ ಮಾತುಗಳು ಜನರ ತನಕ ತಲುಪಿಸುವ ಜವಾಬ್ದಾರಿ ಇದ್ದಿಲ್ಲ. ತಮ್ಮ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರೂ, ತಲುಪುತ್ತಿದೆಯೋ, ಇಲ್ಲವೋ ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡರೆ? ಹಾಗೂ ಈ ಪ್ರಗತಿಪರ ಬುದ್ಧಿಜೀವಿಗಳ ಮಾತುಗಳು ಜನರಿಗೆ ತಲುಪಿದರೂ, ಇವರ ಮಾತುಗಳು ಜನರಿಗೆ ಅರ್ಥವಾಗುವ ಮಾತುಗಳಾಗಿದ್ದವೇ? ಖಂಡಿತವಾಗಿಯೂ ಇಲ್ಲ.

ನನ್ನ ಸಂಪರ್ಕದಲ್ಲಿರುವ ಯಾರಿಗೂ (ಚಳವಳಿಯ ಬಳಗದವರನ್ನು ಹೊರತುಪಡಿಸಿ) ಕೋಮುವಾದ ಮತ್ತು ಜಾತ್ಯತೀತತೆ ಎನ್ನುವಂತಹ ಪದಗಳ ಅರ್ಥಗಳೇ ಗೊತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಹಲವಾರು ದಶಕಗಳಿಂದ ಬಳಸುತ್ತಿರುವ ಪದಗಳನ್ನೇ, ಭಾಷೆಯನ್ನೇ ಬಳಸುತ್ತ ಬಂದ ಬುದ್ಧಿಜೀವಿಗಳು ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ.

ಎರಡನೆಯದು, ಬಿಜೆಪಿ ಎಸೆದ ಸವಾಲಿಗೆ ತಕ್ಕ ಉತ್ತರಗಳನ್ನಾದರೂ ಕಂಡುಕೊಂಡಿದ್ದಾರೆಯೇ? ಇದು ಚಿಂತಕರ ಮೂಲಕರ್ತವ್ಯ. ಕಳೆದೆರಡು ದಶಕಗಳಲ್ಲಿ ನಮ್ಮ ದೇಶಕ್ಕೆ ಒದಗಿರುವ ವಿಪತ್ತನ್ನು ಎದುರಿಸಲು ಯಾವುದೇ ಹೊಸ ಉತ್ತರಗಳನ್ನು ಕಂಡುಕೊಂಡಿದ್ದಾರೆಯೇ? ಮೂಲಭೂತವಾದದ ವಿರುದ್ಧ ಸೈದ್ಧಾಂತಿಕವಾಗಿ ಹಲವು ದಶಕಗಳ ಹಿಂದಿನ ನಮ್ಮ ಉತ್ತರಗಳು ಹೇಗೆ ಕೆಲಸ ಮಾಡಿಯಾವು?

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ. ಹೊಸ ತಲೆಮಾರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಪ್ರಾಣ ಬೆದರಿಕೆ, ಕ್ಯಾಂಪಸ್ಸುಗಳಲ್ಲೇ ದಾಳಿ, ಟ್ರೋಲಿಂಗ್ ಎಲ್ಲವನ್ನೂ ಎದುರಿಸಿ ನಿಂತ ಇವರುಗಳು ತಮ್ಮ ಬುದ್ಧಿಜೀವಿತ್ವಕ್ಕೇ ಒದಗಿ ಬಂದ ಕುತ್ತನ್ನು, ಇಂಟಲೆಕ್ಚುಯಲಿಸಂ ಮೂಲಕವೇ ಪರಿಣಾಮಕಾರಿಯಾಗಿ ಎದುರಿಸಲಿಲ್ಲ. ಪರ್ಯಾಯ ಕಥನದ ನಿರ್ಮಾಣ ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವ ಪರಿ ಎರಡನ್ನೂ ಶೋಧಿಸುವ ಕೆಲಸ ಅವರಿಂದ ನಡೆಯಲಿಲ್ಲ.

ಬಿಜೆಪಿಯ ಸವಾಲಿಗೆ ನಮ್ಮಲ್ಲಿ ಕೆಲವರು ತಂತ್ರಗಾರಿಕೆಯಿಂದ ಎದುರಿಸುವ ಪ್ರಯತ್ನ ಮಾಡಿದರು. ಖಂಡಿತ ಶ್ಲಾಘನೀಯವೇ. ಅದರಲ್ಲಿ ಕೆಲವರು ಸರ್ಕಾರವು ಜನರ ಕುತ್ತಿಗೆಗೆ ತಂದ ಕೆಲವು ಆರ್ಥಿಕ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡಿದರು. ಕೆಲವರು ಬಿಜೆಪಿ ಧರ್ಮವನ್ನು ಬಳಸಿದರೆ ಜಾತಿ ಸಮೀಕರಣವನ್ನು ಬಳಸುವ ತಂತ್ರಗಾರಿಕೆ ಮಾಡಿದರು. ಆದರೆ ತಂತ್ರಗಾರಿಕೆ ಸೈದ್ಧಾಂತಿಕ ಉತ್ತರವಲ್ಲ. ಅವರು ಒಡ್ಡಿರುವ ಸೈದ್ಧಾಂತಿಕ ಸವಾಲಿಗೆ ಹೊಸ ಸೈದ್ಧಾಂತಿಕ ಉತ್ತರವನ್ನು ಕಂಡುಕೊಂಡ ನಂತರವೇ ತಂತ್ರಗಾರಿಕೆಯ ಉಪಾಯಗಳನ್ನು ಹುಡುಕಬಹುದು.

ನಮ್ಮಲ್ಲಿ ಅನೇಕರು ಇಂಟಲೆಕ್ಚುವಲಿಸಂ ಅನ್ನು ಹೋರಾಟ ಮತ್ತು ತಂತ್ರಗಾರಿಕೆಯೊಂದಿಗೆ ಕನ್ಫೂಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಮೂರು ಬೇರೆ ಬೇರೆ ವಿಷಯಗಳೆಂದು ತಿಳಿದುಕೊಳ್ಳುವುದು ಅತ್ಯವಶ್ಯಕ.

ಇದನ್ನು ಓದಿ: ಈ ಚುನಾವಣೆಯಲ್ಲಿ ಮಹಿಳೆಯರಿಗೆ ಸಿಕ್ಕಿದ್ದೆಷ್ಟು? ಮಮತಾ ಮತ್ತು ನವೀನ್ ಪಟ್ನಾಯಕ್ ಮಾದರಿ ಮೆಚ್ಚುವಂತದ್ದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೌದು. ಬುದ್ಧಿ ಜೀವಿಗಳು ಜನರನ್ನು ತಲುಪಲು ವಿಫಲರಾಗಿದ್ದಾರೆ.
    ಬುದ್ಧಿ ಜೀವಿಗಳು ಕೇವಲ ಬೌದ್ಧಿಕ ಚರ್ಚೆಯಲ್ಲಿ ತೃಪ್ತಿ ಪಡೆಯುತ್ತಿದ್ದಾರೆ.
    ಜೂನ್ ಸಾಮಾನ್ಯರೊಡನೆ ಬದುಕದ ಬುದ್ಧಿ ಜೀವಿಗಳು ನಿರಾಸೆಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...