Homeನ್ಯಾಯ ಪಥನೇರಳೆ ಹಣ್ಣಿನ ಮರವೂ, ನರೇಂದ್ರ ಮೋದಿಯವರೂ?...ಡಿ.ಉಮಾಪತಿ

ನೇರಳೆ ಹಣ್ಣಿನ ಮರವೂ, ನರೇಂದ್ರ ಮೋದಿಯವರೂ?…ಡಿ.ಉಮಾಪತಿ

- Advertisement -
- Advertisement -

1960ರಲ್ಲಿ ಪ್ರಸಿದ್ಧ ಕತೆಗಾರ ಕೃಷ್ಣಚಂದರ್ ಅವರು ಬರೆದ ಹಿಂದೀ ಕತೆಯೊಂದರಲ್ಲಿ ಇಂದಿನ ಸರ್ಕಾರದ ಟೀಕೆ ಇದೆ ಎಂದು ಆಕ್ಷೇಪಿಸಿ ಆ ಕತೆಯನ್ನು ಮೊನ್ನೆ ಮೊನ್ನೆ ಹತ್ತನೆಯ ತರಗತಿಯ ಪಠ್ಯಕ್ರಮದಿಂದ ತೆಗೆದು ಹಾಕಲಾಗಿದೆ.

ಪ್ರಸಿದ್ಧ ಹಿಂದೀ ಲೇಖಕ ಕೃಷ್ಣ ಚಂದರ್ ಅವರ ‘ಜಾಮೂನ್ ಕಾ ಪೇಡ್’ (ನೇರಳೆ ಮರ) ಎಂಬ ವಿಡಂಬನಾತ್ಮಕ ಲಘು ಕತೆಯನ್ನು ಕೇಂದ್ರ ಸರ್ಕಾರ ಐಸಿಎಸ್‍ಇ ಹತ್ತನೆಯ ತರಗತಿ ಶಾಲಾ ಪಠ್ಯದಿಂದ ತೆಗೆದುಹಾಕಿದೆ. 2015ರಲ್ಲಿ ಈ ಕತೆ ಪಠ್ಯಕ್ರಮಕ್ಕೆ ಸೇರಿತ್ತು.

ಸರ್ಕಾರೀ ಸಚಿವಾಲಯದ ಮುಂದಿನ ಹಸಿರು ಅವರಣದ ನೇರಳೆ ಮರವೊಂದು ಬಿದ್ದು ಅದರ ಅಡಿಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯೊಬ್ಬನ ಕತೆಯಿದು. ಮುಂಜಾನೆ ಮಾಲಿಯ ಗಮನಕ್ಕೆ ಬರುವ ಈ ಸಂಗತಿ ಸರ್ಕಾರಿ ಕರ್ಮಚಾರಿಗಳು ಮತ್ತು ಅಧಿಕಾರಿಗಳಿಗೆ ತಿಳಿಯುತ್ತದೆ. ಆದರೆ ಅವರೆಲ್ಲ ಈ ವ್ಯಕ್ತಿಯನ್ನು ಹಿಡಿದೆತ್ತಿ ಪಾರು ಮಾಡುವುದಿಲ್ಲ. ಬದಲಾಗಿ ಹೊಣೆಯನ್ನು ಮತ್ತೊಬ್ಬರಿಗೆ ಹೊರಿಸಿ ತಾವು ಪಾರಾಗುವ ವ್ಯಂಗ್ಯವಿದು.

1914-1977ರ ಅವಧಿಯಲ್ಲಿ ಜೀವಿಸಿದ್ದ ಕೃಷ್ಣ ಚಂದರ್ ಅವರು ಈ ಕತೆಯನ್ನು ಬರೆದದ್ದು 1960ರಲ್ಲಿ. ಕೆಲ ಸರ್ಕಾರಿ ಅಧಿಕಾರಿಗಳು ಈ ಕತೆಯಲ್ಲಿ ಹಾಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಯನ್ನು ಕಂಡರಂತೆ. ಹೀಗಾಗಿ ಕತೆಗೆ ಅರ್ಧಚಂದ್ರ ಪ್ರಯೋಗ ಆಗಿದೆ. 2020 ಮತ್ತು 2021ರ ಐ.ಸಿ.ಎಸ್.ಇ. ಪರೀಕ್ಷೆಗಳಲ್ಲಿ ಈ ಕತೆಯ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಎಂದು ನೋಟಿಸೊಂದರಲ್ಲಿ ತಿಳಿಯಪಡಿಸಲಾಗಿದೆ.
ಹತ್ತನೆಯ ತರಗತಿಯ ಶಾಲಾ ಮಕ್ಕಳು ಓದುವಂತಹ ಕತೆಯಲ್ಲ ಇದು ಎಂಬ ವಿವರಣೆಯನ್ನು ನೀಡಿರುವ ಐಸಿಎಸ್‍ಇ, ಯಾಕೆ ಏನು ಎಂಬ ಯಾವುದೇ ಸಮಜಾಯಿಷಿ ನೀಡಿಲ್ಲ.

ರಾತ್ರಿ ಬೀಸಿದ ಭಾರೀ ಬಿರುಗಾಳಿಯ ಕಾರಣ ಸಚಿವಾಲಯದ ಹುಲ್ಲುಹಾಸಿನ ನೇರಳೆ ಮರವೊಂದು ನೆಲಕ್ಕುರುಳುತ್ತದೆ. ಪ್ರಸಿದ್ಧ ಕವಿಯೊಬ್ಬನು ಅದರ ಕೆಳಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಮುಂಜಾನೆ ಈ ಸಂಗತಿಯನ್ನು ಗಮನಿಸುವ ಮಾಲಿ ಧಾವಿಸಿ ಹೋಗಿ ಚಪರಾಸಿಗೆ ತಿಳಿಸುತ್ತಾನೆ. ಚಪರಾಸಿ ಗುಮಾಸ್ತನ ಬಳಿ ತೆರಳುತ್ತಾನೆ. ಗುಮಾಸ್ತ ಸೂಪರಿಂಟಿಂಡೆಂಟ್ ಬಳಿಗೆ ಧಾವಿಸುತ್ತಾನೆ. ತುಸು ಹೊತ್ತಿನ ನಂತರ ಮರದ ಕೆಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಸುತ್ತಮುತ್ತ ಗುಂಪು ಜಮಾಯಿಸುತ್ತದೆ. ಮರ ಬಿಡುತ್ತಿದ್ದ ರಸಭರಿತ ನೇರಳೆ ಹಣ್ಣಿನ ಚರ್ಚೆ ನಡೆಯುತ್ತದೆ. ಇನ್ನಷ್ಟು ಮಾಲಿಗಳು, ಚಪರಾಸಿಗಳು ಹಾಗೂ ಗುಮಾಸ್ತರೆಲ್ಲ ಕೈ ಹಾಕಿದರೆ ಮರದಡಿಯ ವ್ಯಕ್ತಿಯನ್ನು ಹೊರಗೆಳೆಯಬಹುದು ಎನ್ನುತ್ತಾನೆ ಮಾಲಿ. ಮಾಲಿ ಹೇಳುವುದು ಸರಿಯೆಂದು ಬಹಳಷ್ಟು ಮಂದಿ ಮರವನ್ನು ಸರಿಸಲು ಮುಂದಾಗುತ್ತಾರೆ. ನಿಲ್ಲಿ, ನಾನು ಅಂಡರ್ ಸೆಕ್ರೆಟರಿ ಅವರನ್ನು ಕೇಳಬೇಕು ಎನ್ನುತ್ತಾನೆ ಸೂಪರಿಂಟಿಂಡೆಂಟ್. ಅಂಡರ್ ಸೆಕ್ರೆಟರಿಯು ಡೆಪ್ಯೂಟಿ ಸೆಕ್ರೆಟರಿ ಬಳಿ ಹೋಗುತ್ತಾನೆ. ಡೆಪ್ಯೂಟಿ ಸೆಕ್ರೆಟರಿ ಜಾಯಿಂಟ್ ಸೆಕ್ರೆಟರಿ ಮುಂದೆ ಹಾಜರಾಗುತ್ತಾನೆ. ಜಾಯಿಂಟ್ ಸೆಕ್ರೆಟರಿಯು ಚೀಫ್ ಸೆಕ್ರೆಟರಿ ಬಳಿಗೆ ತೆರಳುತ್ತಾನೆ. ಚೀಫ್ ಸೆಕ್ರೆಟರಿಯು ಜಾಯಿಂಟ್ ಸೆಕ್ರೆಟರಿಗೆ ಏನೋ ಹೇಳುತ್ತಾನೆ. ಜಾಯಿಂಟ್ ಸೆಕ್ರೆಟರಿ ಡೆಪ್ಯೂಟಿ ಸೆಕ್ರೆಟರಿಗೆ, ಡೆಪ್ಯೂಟಿಯು ಅಂಡರ್ ಸೆಕ್ರೆಟರಿಗೆ ಅದನ್ನು ಹೇಳುತ್ತಾನೆ. ಕಡತ ಕಾಲ್ಚೆಂಡಾಗುತ್ತದೆ. ಅರ್ಧ ದಿನ ಕಳೆದೇ ಹೋಗಿರುತ್ತದೆ. ಊಟದ ವಿರಾಮ. ಮರದ ಬಳಿ ಸೇರಿದ ಗುಂಪು ಪುನಃ ವ್ಯಕ್ತಿಯನ್ನು ಪಾರು ಮಾಡಲು ತಾನೇ ಮುಂದಾಗುತ್ತದೆ. ಅಷ್ಟರಲ್ಲಿ ಸೂಪರಿಂಟಿಂಡೆಂಟ್ ಕಡತ ಹಿಡಿದು ಓಡಿಬರುತ್ತಾನೆ. ಈ ಮರವನ್ನು ನಾವಾಗಿಯೇ ಸರಿಸುವಂತಿಲ್ಲ. ನಾವು ವಾಣಿಜ್ಯ ಇಲಾಖೆಯವರು. ಮರ ಕೃಷಿ ಇಲಾಖೆಯಡಿ ಬರುತ್ತದೆ. ಕಡತದ ಮೇಲೆ ತುರ್ತು ಎಂದು ಬರೆದು ಕೃಷಿ ಇಲಾಖೆಗೆ ಕಳಿಸುತ್ತೇನೆ. ಅಲ್ಲಿಂದ ಜವಾಬು ಬರುತ್ತಲೇ ಮರವನ್ನು ಸರಿಸೋಣ ಎಂದು ಜನರನ್ನು ತಡೆಯುತ್ತಾನೆ. ಮರವನ್ನು ಸರಿಸುವ ಜವಾಬ್ದಾರಿ ನಿಮ್ಮದೇ ಎಂದು ವಾಣಿಜ್ಯ ಮತ್ತು ಕೃಷಿ ಇಲಾಖೆ ಪರಸ್ಪರ ದೂಷಿಸುತ್ತವೆ.

ಮರುದಿನವೂ ಕಡತ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ, ಒಬ್ಬ ಅಧಿಕಾರಿಯಿಂದ ಮತ್ತೊಬ್ಬ ಅಧಿಕಾರಿಗೆ ಸುತ್ತಾಡುತ್ತಲೇ ಇರುತ್ತದೆ. ಹಣ್ಣು ಬಿಡುವ ಮರವಾದ ಕಾರಣ ತೋಟಗಾರಿಕೆ ಇಲಾಖೆಗೆ ಹೊತ್ತು ಹಾಕುವ ಹೊತ್ತಿಗೆ ಸಂಜೆಯಾಗಿರುತ್ತದೆ. ಜನ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಮರವನ್ನು ಕತ್ತರಿಸುವ ಪರಿಸ್ಥಿತಿಯನ್ನು ತಡೆಯಲು ಸುತ್ತ ಪೆÇಲೀಸ್ ಕಾವಲು ಹಾಕಲಾಗಿರುತ್ತದೆ. ಮರದಡಿ ಸಿಕ್ಕಿ ಹಾಕಿಕೊಂಡ ವ್ಯಕ್ತಿಯ ಕುರಿತು ದಯೆ ತೋರುವ ಪೆÇಲೀಸ್ ಪೇದೆಯೊಬ್ಬ, ಆತನಿಗೆ ಉಣ್ಣಿಸಲು ಮಾಲಿಗೆ ಅನುಮತಿ ನೀಡುತ್ತಾನೆ. ನಿಮ್ಮ ಕಡತ ಸಂಚರಿಸುತ್ತಿದೆ. ನಾಳೆ ತೀರ್ಮಾನ ಆಗುವ ವಿಶ್ವಾಸ ಇದೆ ಎಂದು ಮಾಲಿ ಮರದಡಿಯ ವ್ಯಕ್ತಿಗೆ ತಿಳಿಸುತ್ತಾನೆ. ಮೂರನೆಯ ದಿನ ತೋಟಗಾರಿಕೆ ಇಲಾಖೆಯಿಂದ ಕಡತ ವಾಪಸು ಬರುತ್ತದೆ. ಫಲ ಬಿಡುವ ಮರವನ್ನು ಕಡಿಯಲಾಗದು ಎಂದಿರುತ್ತದೆ.

ಆದರೆ ವ್ಯಕ್ತಿಯನ್ನು ಪಾರು ಮಾಡಲು ಯಾರೂ ಮುಂದಾಗುವುದಿಲ್ಲ. ಅತ್ತ ಇತ್ತ ಜಗ್ಗಾಡುವ ಈ ಸಂಗತಿ ನಾಲ್ಕು ದಿನಗಳ ನಂತರ ಮುಖ್ಯಕಾರ್ಯದರ್ಶಿಯವರ ಮೇಜನ್ನು ತಲುಪುತ್ತದೆ. ಆ ನಂತರವೂ ಜವಾಬ್ದಾರಿಯನ್ನು ಒಂದು ಸರ್ಕಾರಿ ಇಲಾಖೆಯು ಮತ್ತೊಂದು ಸರ್ಕಾರಿ ಇಲಾಖೆಗೆ ದಾಟಿಸಿ ಕೈ ತೊಳೆದುಕೊಳ್ಳುವ ಪ್ರಯತ್ನಗಳು ನಡೆದಿರುತ್ತವೆ. ಕೃಷಿವನ ಇಲಾಖೆಯಿಂದ ಸಂಸ್ಕೃತಿ ಇಲಾಖೆಗೆ ತಲುಪುತ್ತದೆ. ಮರದ ಕೆಳಗೆ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿ ಒಬ್ಬ ಪ್ರಸಿದ್ಧ ಕವಿಯಾಗಿದ್ದ ಕಾರಣ ವಿಷಯ ಸಂಸ್ಕೃತಿ ಇಲಾಖೆಗೆ ರವಾನೆಯಾಗಿರುತ್ತದೆ.

ಸಂಸ್ಕೃತಿ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡುತ್ತಾನೆ. ಮರದ ಕೆಳಗೆ ಸಿಕ್ಕಿ ಹಾಕಿಕೊಂಡಿರುವ ಪ್ರಸಿದ್ಧ ಕವಿಗೆ ಪ್ರಶಸ್ತಿ ಗಳಿಸಿಕೊಟ್ಟಿದ್ದ ಪುಸ್ತಕವನ್ನು ಹೊಗಳುತ್ತಾನೆ. ಮತ್ತು ಕವಿಯನ್ನು ಪಾರು ಮಾಡುವುದು ತನ್ನ ಕೆಲಸ ಅಲ್ಲವೆಂದು ಖುದ್ದು ಕವಿಗೇ ಹೇಳುತ್ತಾನೆ. ಆ ನಂತರ ಕವಿ ಮರದ ಕೆಳಗೆ ಸಿಕ್ಕಿಹಾಕಿಕೊಂಡಿರುವ ಕಡತ ಆರೋಗ್ಯ ಇಲಾಖೆಯನ್ನು ತಲುಪುತ್ತದೆ. ಈ ಇಲಾಖೆ ಕಡತವನ್ನು ವಿದೇಶ ಮಂತ್ರಾಲಯಕ್ಕೆ ಸಾಗ ಹಾಕುತ್ತದೆ. ಈ ನೇರಳೆ ಮರವನ್ನು ನೆರೆಯ ದೇಶದ ಪ್ರಧಾನಮಂತ್ರಿ ಇಲ್ಲಿಗೆ ಬಂದಾಗ ನೆಟ್ಟಿದ್ದೇ ಅದಕ್ಕೆ ಕಾರಣ.

ಈ ಮರವನ್ನು ಕತ್ತರಿಸಲು ವಿದೇಶೀ ಮಂತ್ರಾಲಯ ಒಪ್ಪುವುದಿಲ್ಲ. ನೆರೆಯ ದೇಶದ ಪ್ರಧಾನಿ ನೆಟ್ಟಿದ್ದ ಈ ಮರವನ್ನು ಕಡಿದರೆ ಉಭಯ ದೇಶಗಳ ನಡುವಣ ಸೌಹಾರ್ದ ಸಂಬಂಧ ಕೆಟ್ಟು ಹೋಗಬಹುದು ಎನ್ನುತ್ತದೆ. ಕಡೆಗೆ ಈ ವಿಷಯ ಪ್ರಧಾನಮಂತ್ರಿಯವರ ಸನ್ನಿಧಾನಕ್ಕೆ ಬರುತ್ತದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮರವನ್ನು ಕತ್ತರಿಸಲು ಒಪ್ಪಿಗೆ ನೀಡುತ್ತಾರೆ. ಈ ಆದೇಶದ ಕಡತವನ್ನು ಖುದ್ದು ಸೂಪರಿಂಟಿಂಡೆಂಟ್ ನೇರಳೆ ಮರದಡಿ ಸಿಕ್ಕಿ ಹಾಕಿಕೊಂಡಿದ್ದ ಕವಿಯ ಬಳಿಗೆ ಬರುತ್ತಾನೆ. ನೋಡಪ್ಪಾ, ಪ್ರಧಾನಿ ಎಲ್ಲ ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ಮರ ಕತ್ತರಿಸಲು ಅನುಮತಿ ಕೊಟ್ಟಿದ್ದಾರೆ, ನಾಳೆ ಈ ಮರವನ್ನು ಕತ್ತರಿಸಿ ನಿನ್ನನ್ನು ಬಚಾವು ಮಾಡಲಾಗುವುದು ಎಂದು ಕೂಗಿ ಹೇಳುತ್ತಾನೆ. ಬಳಿ ಬಂದು ಅವನ ಭುಜ ಅಲುಗಿಸಿ ಮತ್ತೆ ಹೇಳುತ್ತಾನೆ. ಆದರೆ ಕವಿಯ ಕೈ ತಣ್ಣಗಾಗಿರುತ್ತದೆ. ಕಣ್ಣು ಗುಡ್ಡೆಗಳ ಬೆಳಕು ಆರಿರುತ್ತದೆ. ಇರುವೆಗಳ ದೊಡ್ಡ ಸಾಲೊಂದು ಆತನ ಬಾಯಿಯೊಳಕ್ಕೆ ಹೊಗುತ್ತಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...