Homeರಾಜಕೀಯಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

ಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

- Advertisement -
- Advertisement -

ಸು-NIL |

2018 ರ ಚುನಾವಣೆ ಫಲಿತಾಂಶ ಅತಂತ್ರವಾಗುತ್ತಿದ್ದಂತೆಯೇ ತಂತ್ರ-ಕುತಂತ್ರಗಳು ಆರಂಭವಾಗಿವೆ. ಬಿಜೆಪಿ ಡೆಮಾಕ್ರಸಿಯನ್ನು ಹರಿದು ಮುಕ್ಕುವ ರಭಸಕ್ಕೆ ಬೆದರಿದ ಕಾಂಗ್ರೆಸ್, ಜೆಡಿಎಸ್ ಪಾರ್ಟಿಗಳು ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್ ರಾಜಕಾರಣದ ಮೊರೆ ಹೋಗಬೇಕಾಗಿ ಬಂದಿದೆ. ಇತ್ತ ಕುದುರೆ ವ್ಯಾಪಾರಕ್ಕೆ ಬೇಕಾದ ವೇದಿಕೆಯನ್ನು ಬಿಜೆಪಿ ಸಜ್ಜುಗೊಳಿಸಿಕೊಳ್ಳುತ್ತಿದೆ. ಕೇಸರಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅಖಾಡಕ್ಕೆ ಇಳಿದಾಗಿದೆ. ಪ್ರಧಾನ ಮಂತ್ರಿ ಸ್ಥಾನವನ್ನೇ ಕೆಳ ಮಟ್ಟಕ್ಕೆ ಇಳಿಸಿಕೊಂಡಿರುವ, ಸುಳ್ಳುಗಳನ್ನೇ ಸತ್ಯವೆಂದು ನಂಬಿಸುವ ಜಾದುಗಾರ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ತೊಡೆ ತಟ್ಟಿದ್ದಾರೆ.

ಜನರಿಂದ ಜನರಿಗೋಸ್ಕರ ಜನರೇ ಸೇರಿ ಕೊಳ್ಳೆ ಹೊಡೆಯುವ ಪ್ರಜಾಪ್ರಭುತ್ವದಲ್ಲಿ ನಡೆಯುವುದು ನಂಬರ್ ಗೇಮ್ ಆದ್ರೂ ಸಹ ಸಾಂವಿಧಾನಿಕ ಸ್ಥಾನಗಳಾದ ರಾಜಭವನದ ಮೂಲಕ ಅಧಿಕಾರ ಪಡೆಯುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿದೆ. ತಳ ಸಮುದಾಯದ, ಬಹುಜನರ ಹಿತ ಕಾಯಲು ಹೊರಟ ಸಿದ್ದರಾಮಯ್ಯ ಇನ್ನಿಲ್ಲದಂತೆ ನೆಲಕಚ್ಚಿದ್ದಾರೆ. ಅಹಿಂದದ ತಳ ಸಮುದಾಯದ ಮತ್ತು ಅಲ್ಪಸಂಖ್ಯಾತರನ್ನು ಉದ್ಧಾರ ಮಾಡುತ್ತೇನೆಂಬ ಧಾವಂತದಲ್ಲಿ ವಾಸ್ತವಿಕ ಸಂತುಲನೆಯನ್ನು ಕಳೆದುಕೊಂಡು ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಕಟು ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಅವರ ಕೈ ಹಿಡಿಯಲಿಲ್ಲ, ಜನಪ್ರಿಯ ಇಂದಿರಾ ಕ್ಯಾಂಟೀನ್, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಮತ್ತು ಕನ್ನಡದ ಅಸ್ಮಿತೆ ಯಾವುದೂ ಕೂಡ ಅಹಿಂದ ನಾಯಕನನ್ನು ಕೈ ಹಿಡಿಯಲಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರ ತಂದುಕೊಡಲಿಲ್ಲ. ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದ್ದು 2018ರ ಚುನಾವಣೆಯಲ್ಲಿ ಕೋಮು ಶಕ್ತಿಗಳನ್ನು ಹಿಂದಿಕ್ಕುವಲ್ಲಿ ಕನ್ನಡ ನಾಡು ಸಂಪೂರ್ಣ ವಿಫಲವಾಗಿದೆ. `ಭಾಗ್ಯ’ಗಳನ್ನು ನಂಬಿಕೊಂಡು ಅತಿ ಆತ್ಮವಿಶ್ವಾಸದಲ್ಲಿ ಹೊರಟಿದ್ದ ಕಾಂಗ್ರೆಸ್ ಗಾಡಿ ಹಳಿ ತಪ್ಪಿದ್ದೆಲ್ಲಿ ಅಂತ ನೋಡಲು ಹೊರಟರೆ ಕಾಣುವ ಸಂಗತಿಗಳು ಇಲ್ಲಿವೆ.

ಕರಾವಳಿ ಕರ್ನಾಟಕ

ಅಭಯ್ ಚಂದ್ರ ಜೈನ್

2013ರಲ್ಲಿ ಬಲಪಂಥೀಯ ಕೋಮುವಾದದ ಪ್ರಯೋಗ ಶಾಲೆಯಾದ ಕರಾವಳಿಯಲ್ಲಿ, ಹದಿಮೂರು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಈಗ ಕೇವಲ ಮೂರು ಸ್ಥಾನಗಳಿಗೆ ಕುಸಿದಿದೆ. ಎಲ್ಲಾ ಸಮೀಕ್ಷೆಗಳಲ್ಲಿ ಮುಂದಿದ್ದ ಹಲವು ನಾಯಕರು ಹೇಳಹೆಸರಿಲ್ಲದೇ ಕೊಚ್ಚಿಹೋಗಿದ್ದಾರೆ. ದುರ್ಬಲ ಅಭ್ಯರ್ಥಿಗಳ ಎದುರು ಖಾದರ್ ಬಿಟ್ಟರೆ ಉಳಿದ ಘಟಾನುಘಟಿ ಮಂತ್ರಿಗಳು ಮಂಡಿಯೂರಿದ್ದಾರೆ. ಮೇಲ್ವರ್ಗದ ಜನರ ಪೋಲರೈಜೇಶನ್, ಇದನ್ನು ಅರಿಯದ ತಳಸಮುದಾಯ ಅವರ ಸಂಚಿಗೆ ಬಲಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಶಕ್ತಿಶಾಲಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಮೊಗವೀರ ಮತ್ತು ಪೂಜಾರ್ ಸಮುದಾಯದ ಸಂಪೂರ್ಣ ಬೆಂಬಲ ಮತ್ತು ಆರೆಸ್ಸೆಸ್‍ನ ಕಾರ್ಯತಂತ್ರ ಜನಪರವಾಗಿರುವ ಅಭಯಚಂದ್ರ ಜೈನ್ ಮೋಹಿನುದ್ದಿನ ಭಾವಾ, ಲೋಬೋ ಮತ್ತು ರಮಾನಾಥ ರೈರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಎಸ್.ಎಸ್.ಮಲ್ಲಿಕಾರ್ಜುನ್

ಮಧ್ಯ ಕರ್ನಾಟಕ
ಈ ಬಾರಿ ಭಾರತೀಯ ಜನತಾ ಪಕ್ಷ ನೂರರ ಗಡಿ ದಾಟಲು ಮಹತ್ವದ ಕೊಡುಗೆ ನೀಡಿದ ಭಾಗವೆಂದರೆ ಅದು ಮಧ್ಯ ಕರ್ನಾಟಕ. 2013ರಲ್ಲಿ ಎರಡು ಸ್ಥಾನಕ್ಕೆ ಕುಸಿದಿದ್ದ ಕೇಸರಿ ಪಕ್ಷ 2018ಕ್ಕೆ 21ಕ್ಕೆ ಲಾಂಗ್‍ಜಂಪ್ ಮಾಡಿದೆ. ಕಾಂಗ್ರೆಸ್ 18ರಿಂದ 7ಕ್ಕೆ ಕುಸಿದರೆ ಜೆಡಿಎಸ್ ಹತ್ತರಿಂದ 4ಕ್ಕೆ ಇಳಿದಿದೆ. ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ್‍ನಂತಹ ಸಚಿವರುಗಳೇ ಇಲ್ಲಿ ನೆಲ ಕಚ್ಚಿದ್ದಾರೆ. ಕೈ ನಾಯಕರ ದರ್ಪ, ಲಿಂಗಾಯತರ ಪೋಲರೈಜೇಶನ್ ಮತ್ತು ಕೇಸರಿ ಪಕ್ಷಗಳ ಪರ ಮಠಗಳ ವಕಾಲತ್ತು ಜನ ಕೈ ಪಾಳಯದಿಂದ ಕಮಲ ಕಡೆ ಜಾರುವಂತೆ ಮಾಡಿದೆ.

ಹಳೇ ಮೈಸೂರು
ಮುಖ್ಯಮಂತ್ರಿಯವರ ತವರು ಭಾಗದಲ್ಲಿ ಕಾಂಗ್ರೆಸ್‍ಗೆ 2013ಕ್ಕಿಂತ ಹೆಚ್ಚಿನ ಬಲ ಬರಬೇಕಾಗಿತ್ತು. ಆದರೆ ಅದು 24ರಿಂದ 17ಕ್ಕೆ ಕುಸಿತ ಕಂಡಿದೆ. ಇಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ಎರಡು ಕ್ಷೇತ್ರಗಳು ಸೇರಿದಂತೆ ಮಹದೇವಪ್ಪ, ಜಯಚಂದ್ರ, ಮಂಜುರಂತಹ ಸಚಿವರು ಮಾತ್ರವಲ್ಲದೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಸೋತಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ಪುತ್ರ ವ್ಯಾಮೋಹ ಒಂದು ಕಾರಣವಾದರೆ, ಕೆಳಜಾತಿಯ ನಾಯಕತ್ವದ ವಿರುದ್ಧ ಕುದಿಯುತ್ತಿರುವ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳು ಒಂದಾದ ಸಮೀಕರಣವೂ ಇನ್ನೊಂದು ಕಾರಣ,

ಮಂಬೈ ಕರ್ನಾಟಕ
ಕರಾವಳಿ ಕೋಮುವಾದದ ಪ್ರಯೋಗಶಾಲೆ, ಆದರೆ ಮುಂಬೈ ಕರ್ನಾಟಕ ಪ್ರಾಂತ್ಯ ಕೇಸರಿ ಪಕ್ಷದ ಭದ್ರಕೋಟೆ. ಲಿಂಗಾಯತರ ಪ್ರಾಬಲ್ಯವಿರುವ ಇಲ್ಲಿ ಕಳೆದ ಬಾರಿ ಕಾಂಗ್ರೆಸ್ 31 ಸ್ಥಾನ ಗೆದ್ದು ಹೊಸ ಅಲೆ ಹುಟ್ಟು ಹಾಕಿತ್ತು. ಈ ಬಾರಿ ಅದು ಕೇವಲ ಹದಿನೇಳಕ್ಕೆ ಕುಸಿತ ಕಂಡಿದೆ. ಬಿಜೆಪಿ ಹದಿಮೂರರಿಂದ ಮೂವತ್ತಕ್ಕೆ ಏರಿಕೆ ಕಂಡಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೊಡೆತ ಕೈ ಪಕ್ಷಕ್ಕೆ ಬಿದ್ದಿದೆ. ಮಹಾದಾಯಿ ವಿಚಾರವನ್ನು ಬಳಸಿಕೊಳ್ಳುವಲ್ಲಿ ಕೈ ನಾಯಕರು ವಿಫಲರಾಗಿದ್ದಾರೆ. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಠಗಳ ತಟಸ್ಥ ನಿಲುವು ಕೈ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ. ಪಂಚಪೀಠಗಳ ಬಹಿರಂಗ ಕಾರ್ಯಾಚರಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.

ಹೈದ್ರಾಬಾದ್ ಕರ್ನಾಟಕ
ಕಾಂಗ್ರೆಸ್‍ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಿಂದಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕೈ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿಲ್ಲ. ಕೇವಲ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಆದರೆ ಕೆಜೆಪಿ ಮತ್ತು ಬಿಅಸ್ ಆರ್ ಪಕ್ಷಗಳಿಂದ ಹರಿದು ಹಂಚಿ ಹೋಗಿದ್ದ ಸ್ಥಾನಗಳನ್ನು ಮರಳಿ ಪಡೆದ ಬಿಜೆಪಿ ಪಕ್ಷ ಐದು ಸ್ಥಾನಗಳಿಂದ ಹದಿನೈದಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿಯೂ ಸಹ ಮೇಲ್ಜಾತಿಗಳ ಒಂದುಗೂಡುವಿಕೆ ಕೆಲಸ ಮಾಡಿದೆ.

ಬೆಂಗಳೂರು ಮಹಾನಗರ
ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಹೆಚ್ಚಿನ ಬಲ ಬಂದಿದ್ದರೆ ಅದು ಮಹಾನಗರದಲ್ಲಿ ಮಾತ್ರ.. ಕಳೆದ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಹದಿಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಕೇವಲ ಇಪ್ಪತ್ತಾರು ಸ್ಥಾನಗಳಲ್ಲಿ ಚುನಾವಣೆ ನಡೆದರೂ ಅದರಲ್ಲಿ ಹದಿಮೂರು ಸ್ಥಾನವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಡಿಮೆ ಪ್ರಮಾಣದ ವೋಟಿಂಗ್ ಸಹ ಕಾಂಗ್ರೆಸ್ ಗೆಲುವನ್ನು ತಡೆಯುವಲ್ಲಿ ವಿಫಲವಾಗಿದೆ. ನಗರದ ಜನರು, ಮಧ್ಯಮ ವರ್ಗದವರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ಎಂಬ ಈವರೆಗಿನ ನಂಬಿಕೆಯನ್ನು ಈ ಇಲೆಕ್ಷನ್ ಸುಳ್ಳು ಮಾಡಿದೆ. ಇಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಹನ್ನೊಂದು ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಒಟ್ಟಾರೆ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗೆ ವಿಶ್ಲೇಷಿಸಬಹುದು. 1. ಕರ್ನಾಟಕ ಸರಕಾರದ ಕಳೆದ ಐದು ವರ್ಷಗಳ ಸಫಲತೆ ಮತ್ತು ವೈಫಲ್ಯಗಳು ಜನರ ಆದ್ಯತೆಯೇ ಆಗಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರ ಹಗರಣಗಳಿಲ್ಲದೆ, ಭ್ರಷ್ಟಾಚಾರದ ಪ್ರಕರಣಗಳಿಲ್ಲದೆ, ಜಾರಿ ಮಾಡಿದ ಹಲವು ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಪರಾಮರ್ಶೆ ಮಾಡಲು ಹೋಗಿಲ್ಲ. 2. ದೇಶದ ವರ್ತಮಾನದ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳು ಜನರ ಮೇಲೆ ಯಾವ ಪರಿಣಾಮ ಬೀರಿಲ್ಲ. 3. ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮನುಷ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದು ಮತ್ತು ಆತ ಜನಪ್ರಿಯನಾಗಿದ್ದು ಹಲವು ಪಾಳೇಗಾರಿ ಮನಸ್ಥಿತಿಯ ಜನಸಮುದಾಯಗಳಿಗೆ ಇರಸುಮುರುಸು ಉಂಟು ಮಾಡಿತ್ತು. 4. ಲಿಂಗಾಯ್ತ ಪ್ರತ್ಯೇಕ ಧರ್ಮ ಮತ್ತು ಒಳಮೀಸಲಾತಿ ವಿಷಯಗಳು ಭೂತಾಕಾರ ತಾಳಿ ಜನರ ಮನಸ್ಸಿನಾಳಕ್ಕಿಳಿದವು. ದಲಿತರನ್ನು, ಶೂದ್ರರನ್ನು ನಾಯಿ ನರಿಗಳಿಗೆ ಹೋಲಿಸದ್ದು, ಮುಸ್ಲಿಮರ ಓಟನ್ನೇ ನಿರಾಕರಿಸಿದ್ದು, ಬೆಂಕಿ ಹಚ್ಚುವ, ದಾಂದಲೆ ಮಾಡುತ್ತೇವೆಂದ ಪಕ್ಷಗಳ ಗುಂಡಾ ವರ್ತನೆಗಳು ಜನರನ್ನು ಒಂದಿಂಚೂ ಕದಲಿಸಲಿಲ್ಲ. 5. ರಾಜ್ಯದ ಎರಡು ಪ್ರಬಲ ಜಾತಿಗಳು, ಮುಖ್ಯಮಂತ್ರಿಯಾದರೆ ಅದು `ನಮ್ಮ’ ಸಮುದಾಯದವರೇ ಆಗಬೇಕು ಎಂದು ಹಠ ಹಿಡಿದವರಂತೆ ಹಳೆಮೈಸೂರು ಮತ್ತು ಉತ್ತರ ಕರ್ನಾಕಟದಲ್ಲಿ ಓಟು ಮಾಡಿದವು. ಈ ಪ್ರಬಲ ಸಮುದಾಯಗಳ ಕುರುಡು ನಡೆಯು ಚುನಾವಣೆಯನ್ನು ಮತ್ತೆಲ್ಲಿಗೋ ನಡೆಸಿಕೊಂಡು ಹೋಯಿತು. 6. ಅತಂತ್ರ ಫಲಿತಾಂಶ ಬಂದಿದೆ. ಮತ್ತೆ ರಾಜ್ಯದ ಪ್ರಬಲ ಜಾತಿಗಳ ರಾಜಕಾರಣಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿವೆ. ಈ ಚುನಾವಣೆ ಮತ್ತೆ ಪ್ರಬಲ ಜಾತಿಗಳ ದೃವೀಕರಣಕ್ಕೆ ದಾರಿ ಮಾಡಿಕೊಟ್ಟಿಡಿದ್ದನ್ನು ಬಿಟ್ಟರೆ, ಜಾತ್ಯಾತೀತ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ನಾಶ ಮಾಡಿದೆ. ಮರೆತಿದ್ದೆ, ಈ ಚುನಾವಣಾ ಫಲಿತಾಂಶ 24/7 ಟಿವಿ ನ್ಯೂಸ್ ಚಾನಲ್ ಗಳಿಗೆ ಯಥೇಚ್ಚ ಆಹಾರವನ್ನು ತಿಂಗಳುಗಟ್ಟಲೆ ತಿನ್ನಲು ಮತ್ತು ಮೆಲುಕು ಹಾಕಲು ಉತ್ಪಾದನೆ ಮಾಡಿಕೊಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...