Homeಅಂಕಣಗಳುಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

ಮಾದೇಗೌಡರ ಮಾನ ಮೂರು ಕಾಸಿಗೆ ಹೋಯ್ತಂತಲ್ಲಾ

- Advertisement -
 ಯಾಹೂ |
ನೇರ ನಡೆ ನುಡಿಗೆ ಹೆಸರಾಗಿದ್ದ ಜಿ. ಮಾದೇಗೌಡರು, ಜೆಡಿಎಸ್ ಕಡೆಯಿಂದ ಹಣ ಬರುತ್ತದೆಂದು ಮಂಡ್ಯದ ಗಾಂಧಿಭವನದ ಎದುರು ಕುಳಿತು ಕಾದು ಸಾಕಾಗಿ, ಕಡೆಗೆ ಪುಟ್ಟರಾಜನಿಗೆ ಫೋನು ಮಾಡಿ ‘ಎಲ್ಲೊದುಡ್ಡು’ ಎಂದರಂತಲ್ಲಾ, ಪುಟ್ಟರಾಜನಿಗೆ ಮಾದೇಗೌಡರಿಂದ ಸಾಲ ಪಡೆದು ಬಡ್ಡಿಯನ್ನು ಕೊಡದೆ ಕುಂತವನ ದನಿಯಲ್ಲಿ, “ಅಪ್ಪಾಜಿಆರೇಂಜ್ ಮಾಡ್ತಿನಿ” ಎಂದುಗೋಗರೆದಂತರಲ್ಲಾ.ಮಾದೇಗೌಡರು, ಮಂಡ್ಯದ ಸೊಗಡಿಗೆ ಹೆಸರಾದವರು, ಗಾಂಧಿಮಾರ್ಗಿ ಬೇರೆ, ಅದಕ್ಕಾಗಿ ಗಾಂಧಿ ಭವನ ನಿರ್ಮಿಸಿ ಇಳಿ ಹೊತ್ತಿನಲ್ಲಿ ಅದರ ಮುಂದೆ ಕುಳಿತು ಈ ನಾಡಿನ ಬಗ್ಗೆ ಚಿಂತಿಸದವರು. ಆದರೆ ಸ್ವಂತದ ಬಗ್ಗೆ ತುಂಬಾ ಯೋಚಿಸಿ ದವರು. ಈ ಹಿಂದೆ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ಎಂದು ದೂರಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಅವರಿಗೆ ಒಗ್ಗಲಿಲ್ಲ. ಮತ್ತೆ ಕಾಂಗ್ರೆಸ್‍ಗೆ ಮರಳಿ ಮಗನ ಕೈಲಿ ಹಣ ಕಳಿದು. ಇಲ್ಲ ಯಾರು ಕೊಡ್ತಾರೊ ಅವುರೆಸರೇಳು ನಾವೇ ವಸೂಲು ಮಾಡ್ತಿವಿ” ಎಂದಿರೋದು .ವಯಸ್ಸಾದಂತೆ ತಲೆಯೊಳಗಿನ ಸಿದ್ಧಾಂತಗಳು ಸಾಯುತ್ತ, ಕುಟುಂಬದ ವ್ಯಾಮೋಹ ಅಮರಿಕೊಳ್ಳುವುದು, ಈ ಮಾದೇಗೌಡನನ್ನ ಬಿಡಲಿಲ್ಲವಲ್ಲಾ. ಅದೇನಾದರಾಗಲಿ. ಕಡೇಗಳಿಗೆಯಲ್ಲಿ ಚಿಲ್ಲರೆ ಕಾಸಿಗೆ ಪುಟ್ಟರಾಜನನ್ನ ಕೇಳಿ ಮಾದೇಗೌಡನ ಮಾನ ಮೂರು ಕಾಸಿಗೆ ಹರಾಜಾಯ್ತಲ್ಲಾ ಥೂತ್ತೆರಿ.
ಮಂಡ್ಯ ಚುನಾವಣೆಯ ರಂಗು ತಾರಕಕ್ಕೇರಿರುವುದರ ದ್ಯೋತಕವಾಗಿ, ಎನ್.ಡಿ.ಟಿ.ವಿ.ಯ ಮಾಯಾ ಶರ್ಮಾ ಸುಮಲತಾರ ಹಿಂದೆತಿರುಗುತ್ತಿರುವುದು ಗೊತ್ತಾಗಿ, ಮಾಯಾಗೆ ಫೋನ್ ಮಾಡಿದರೆ ಅವರು ಫೋನ್ ತೆಗೆಯಲಿಲ್ಲ. ಎನ್.ಡಿ ಟಿವಿ ಮಾಯಾ ಇವರಿಗಿಂತಲೂ ನಮ್ಮ ವಾಟಿಸ್ಸೆ ಸರಿಯಾಗಿ ಸುದ್ದಿ ನೀಡಲು ಸೂಕ್ತ ವ್ಯಕ್ತಿಯೆಂದು ಫೋನ್ ಮಾಡಲಾಗಿರಿಂಗಾಯ್ತು, ರಿಂಗ್‍ಟೂನ್ “ಬಲೆ ಚಾನ್ಸಿದೆ, ಲಕ್ಕಿ ಚಾನ್ಸಿದೆ, ಬಲೆ ಚಾನ್ಸಿದು’ ‘ಗುಡ್‍ಯುವುನಿಂಗ್ ಸಾರ್’
“ಎಲ್ಲಿದ್ದಿ ವಾಟಿಸ್ಸೆ”
“ಬಿಂಡಿಗನವಿಲೆ ಹೆಸರು ಕೇಳಿದ್ದಿರ ಸಾರ್.”
“ಗೊತ್ತು ಗರುಡಾಚಾರ್ರೂರು”
“ಅಷ್ಟೆ ಅಲ್ಲ ಸಾರ್. ಅಣು ವಿಜ್ಞಾನಿ, ರಾಜಾರಾಮಣ್ಣನ ಊರು. ಸಿನಿಮಾ ಡೈರೆಕ್ಟರು, ಬಿ.ಎಸ್.ರಂಗನ್‍ಊರಿದು”
“ಹೌದಾ”
“ಇಂತ ಪ್ರತಿಭಾವಂತ್ರೆ ಒಂದು ಡಜನ್ ಇರೊ ಊರಿದು”
“ಅಷ್ಟೊಂದು ಪ್ರತಿಭಾವಂತ್ರಿದ್ದರ”
“ನಾವಲ್ಲ ಸಾ ಅವುರ್ಯಲ್ಲ ಅಯ್ಯಂಗಾರ್ರು”
“ಸರಿ ಬುಡು”
“ಈ ಊರಿಗೆ ನಿಖಿಲ್ ಬತ್ತನೆಅಂತ ಭಾರಿಜನ ಸೇರ್ಯವುರೆ”
“ಅಷ್ಟೊಂದು ಜನ ಬಂದವುರಾ”
“ಪರೆಡ್‍ಗೆ ತವುಜೆಂಡಿಂದ ತ್ರೀ ಅಂಡ್ರೆಡ್‍ವರಿಗೂ ಬಟಾವಡೆ ಆಗ್ಯದೆ ಸಾ”
“ಇನ್ನ ಓಟಿಗೆಷ್ಟು ಕೊಡ್ತಾರಪ್ಪ”
“ಅದ ಹೇಳಕ್ಕೆ ಬರದಿಲ್ಲ ಸಾರ್. ಪ್ರತಿಎಮ್ಮೆಲ್ಲೆಗೂ 25 ಕೋಟಿ ಟಾರ್ಗೆಟ್ ಕೊಟ್ಟವುನಂತೆ ಕುಮಾರಣ್ಣ”
“ಅಂದ್ರೆ ಅವುರು ಕೈಯಿಂದ ಖರ್ಚು ಮಾಡಬೇಕಾ”
“ಪುಟ್ಟರಾಜ ತಮ್ಮಣ್ಣ ನಾವೇ ಹಾಯ್ಕಂಡು ಖರ್ಚು ಮಾಡ್ತಿವಿ ಅಂದಿದ್ದರಂತೆ”
“ಅನ್ನಲೇಬೇಕು ಬುಡು. ಇದೇ ತಮ್ಮಣ್ಣನ ಆಸ್ತಿ ವಿಷಯದಲ್ಲಿ ಮಾದೇಗೌಡ್ರು ಹಿಂದೆನೆ ಹೋರಾಡಿದ್ರು”
“ಮಾದೇಗೌಡ ಬುಡಿ ಸಾ. ಅವುನು ಮಾತಾಡಿದ್ರೆ ಅಂಬರೀಶು “ಲೇ ಮುದುಕ ಸುಮ್ಮನಿರು ಇಲ್ಲ ಅಂದ್ರೆ ನಿನ್ನ  ಕತ್ತಿಸಗತಿನಿ ಅಂತಿದ್ನಂತೆ”
“ತಮಾಸಿಗೆ ಅಂಗಂತಿದ್ರು”
“ತಮಾಸಿನೆ ಆದ್ರು ಈ ಮುದುಕ ಹಾಳಾದನಲ್ಲ ಸಾ”
“ಏನು ಹಾಳಾಗಿಲ್ಲ. ಚುನಾವಣೆ ಕರ್ಚಿಗೆ ದುಡ್ಡು ಕೇಳ್ಯವುರೆ ಅಷ್ಟೆ”
“ಮಾದೇಗೌಡ ಪುಟ್ಟರಾಜನ್ನ ಕೇಳಿದಕ್ಕಿಂತ, ಕುಮಾರಣ್ಣನ್ನ ಕೇಳಬೇಕಾಗಿತ್ತು ಸಾ”
“ಕುಮಾರಣ್ಣ ಯಮ್ಮೆಲ್ಲೆಗಳಿಗೆ ವಯಿಸಿಬುಟ್ಟವುನೆ”
“ಮಗನ್ನ ಗೆಲ್ಲಿಸಿಕೊಂಡು ಬರೊ ಜವಾಬ್ದಾರಿಯ ಎಮ್ಮೆಲ್ಲೆಗಳೇ ವಯಿಸಿಕೊಂಡವಂತಲ್ಲ ಸಾ. ಪಾಪ ಆ ಹುಡುಗನಿಗೆ ಬಾಸಣ ಬರವಿಲ್ಲ”
“ವ ಪರವಾಗಿಲ್ಲ ಮಾತಾಡ್ತನೆ”
“ಏನು ಮಾತಾಡ್ತನೆ ಸಾ. ನಾನು ಕುಮಾರಸ್ವಾಮಿ ಹೊಟ್ಟೆಲುಟ್ಟಕ್ಕೆ ಪುಣ್ಯ ಮಾಡಿದ್ದೆಅಂತದೆ.ನಮ್ಮಪ್ಪ ಮಂಡ್ಯಕೆಎಂಟು ಸಾವುರ ಕೋಟಿ ಕೊಟ್ಟವುನೆ ಅಂತದೆ. ನಮ್ಮ ಪಾರ್ಟಿ ಕಾರ್ಯಕರ್ತರಿಗೆ ಯಾರಾದ್ರು ಮೈ ಮುಟ್ಟಿದ್ರೆ ಹುಶಾರು ಅಂದರೆ. ಎಲ್ಲಿತ್ತು ಈ ಕರ್ಮ”
“ಇನ್ನು ಮುಂದೈತೆ ನಿಮಗ್ಯಲ್ಲ”
“ಯಾಕೊ ಅಂಗೆ ಕಾಣ್ತದೆ ಸಾ. ಈ ದ್ಯಾವೇಗೌಡ ಮಕ್ಕಳು ಮರಿನ್ಯಲ್ಲ ರಾಜಕಾರಣಕ್ಕೆ ತರದೇ ಆಗಿದ್ರೆ, ಅವುಕೆ ಒಳ್ಳೆ ಮಾತು, ನಡವಳಿಕೆ, ವಿದ್ಯೆ, ಬುದ್ಧಿ, ಕಲಿಸಿ ಕಳಿಸಬೇಕಾಗಿತ್ತು ಸಾ”
“ದ್ಯಾವೇಗೌಡ್ರೆ ಅಂಗಿದ್ದ ಮೇಲೆ ಅವುಕೆಲ್ಲಿ ಕಲಿಸ್ಯಾರು”
“ಅದು ಸರಿನೆ ಬುಡಿ, ಗೌಡ್ರು ಪಾರ್ಟಿ ಸಿದ್ಧಾಂತಕ್ಕೆ ಒಗ್ಗಿಕಳೊ ಬದ್ಲು ಪಾರ್ಟಿನೆತನಿಗೆ ಬೇಕಾದಂತೆ ಬಗ್ಗಿಸಿಗಂಡ್ರು”
“ಪರವಾಗಿಲ್ಲ ಗೌಡ್ರು ಬಗ್ಗೆ ತಿಳಿಕಂಡಿದ್ದಿ”
“ಯಾವುದಾದ್ರು ಯೂನಿವರ್ಸಿಟಿ ಪರಮಿಷನ್ ಕೊಟ್ರೆ ಡಾಕ್ಟರೇಟ್ ಮಾಡನ ಅಂತ ಇದ್ದಿನಿ ಸಾ”
“ಹಂಪೆ ಯೂನಿವರ್ಸಿಟಿಲಿ ನೊಂದಾಯಿಸಿ ಮಾಡು”
“ಹಂಪೆ ಅಂದೇಟಿಗೆ ಗೆಪ್ತಿಗೆ ಬತ್ತು ಸಾ. ಅಲ್ಲೊಬ್ಬಳು ಮಲ್ಲಿಕಾಗಂಟಿ ಅಂತ ಇದ್ಲು ಈಗ್ಲು ಇದ್ದಳಾ”
“ಇಲ್ಲ ಹೋದ್ಲು. ವಿಶಭಟ್ಟಗೊತ್ತ ನಿಂಗೆ”
“ಗೊತ್ತು ಸಾ. ಇಲ್ಲೆ ನಮ್ಮ ನಾಗ್ತಳ್ಳಿ ಚಂದ್ರನ ಬಗ್ಗೆ ಮಾತಾಡಕ್ಕೆರ ಬಂದಿದ್ದ. ಹುಟ್ಟ ಕಳ್ಳಿದ್ದಂಗಿದ್ದ”
“ಅವುನ್ನ ಈ ನಿಮ್ಮಗಂಟೆ ಸಮಾರಂಭಕ್ಕೆ ಕರೆದಿದ್ಲು”
“ಕರಿಬಾರ್ದ”
“ಕಳ್ಳನಂಗಿದ್ದ ಅಂತಿ ಕರಿಬಾರ್ದ ಅಂತಿ ಯಲ್ಲಯಾ. ಆ ಹುಟ್ಟು ಸುಳ್ಳಪ್ಪ ಕ್ಯಟ್ಟಚೆಡ್ಡಿ”
“ಚೆಡ್ಡಿಲಿ ವಳ್ಳೆ ಚೆಡ್ಡಿನೂ ಇದ್ದವಾ”
“ಅವೆ ಆದ್ರೆ ಇವುನು ಮಾತ್ರ ವಿಶಪಾತಕ .ಇಂಥೊನ್ನ ಆ ಗಂಟಿ ಸಮಾರಂಬಕ್ಕೆ ಕರಿಸಿಗಂಡು ಸರಿಯಾಗಿ ಉಗಿಸಿಗಂಡ್ಳು”
“ನಾವು ಯಾರ ಪರನೂ ಮಾತಾಡಂಗಿಲ್ಲ ಸಾ. ಯಾರು ಯಾವಟೈಮಲ್ಲಿ ಬದ್ಲಾಯ್ತಾರೊ ಏನೊ”
“ಬದಲಾವಣೆ ಕಾಲದ ನಿಯಮ”
“ಅದು ಮನುಸುನ ಮನಸಿಗೂ ಅನ್ವಯಿಸ್ತದಾ”
“ಊ ಮತ್ತೆ ಕರ್ನಾಟಕದಲ್ಲಿ ಈಗ ಯಂತ ಬದಲಾವಣೆ ಆಗ್ಯದೆಗೊತ್ತ”
“ಗೊತ್ತು ಸಾ. ಈ ಡಿಕೆಶಿ, ಕುಮಾರಸ್ವಾಮಿ ಹೊಡದಾಡಿಕಂಡೆ ಸತ್ತೊಯ್ತರೆ ಅನಕಂಡಿದ್ದೆ. ಈಗ ನೋಡಿದ್ರೆ ದ್ಯಾವೇಗೌಡನ ಹಣೆಗೆ ಅಕ್ಷತೆ ಆಗ್ಯವುರೆ”
“ಅಕ್ಷತೆನೆ”
“ಊ ಸಾ. ಡಿಕೆಶಿ ಹರಸಣ ಅಕ್ಕಿ ಸೇರಿದ್ರೆ ಅಕ್ಷತೆ ಅಂದ. ಅದ ಯಾರಿಗಿಡಬೇಕು ದ್ಯಾವೇಗೌಡನಿಗೆ ತಾನೆ”
“ನಿಜಕಣಯ್ಯ”
“ಇನ್ನ ಅಹಿಂದ ಸಭೆಲಿ ಈ ಸಿದ್ದರಾಮಯ್ಯ ದ್ಯಾವೇಗೌಡರನ್ನ ಬೋದಿದ್ದ ನೋಡಿದ್ರೆ, ಇನ್ನ ಮುಗಿತು. ಈ ಜಲುಮದಲ್ಲಿ ಇವುರು ಹಿಂಗೇ ಸತ್ತೋಯ್ತರೆ ಅನ್ನಕಂಡಿದ್ದೆ. ತೀರ ಇತ್ತೀಚಿಗೆ, ಈ ಸಿದ್ದರಾಮಯ್ಯನಂತ ನೀಚ ಮುಕ್ಯಮಂತ್ರಿನ ನೋಡೇ ಇಲ್ಲ ಅಂದ ದ್ಯಾವೇಗೌಡ, ಈಗ ನೋಡಿದ್ರೆ ಜಾತ್ರೆಗೆ ರೆಡಿಯಾಗಿರೋ ಜೋಡೆತ್ತಿನಂಗೆ ಜ್ವತೆಲೆ ನಿಂತವುರೆ ಇದಕೇನೇಳ್ತಿರಿ”
“ಒಳ್ಳೆ ಬದಲಾವಣೆ”
“ಯಾಕೆ ಸಾರ್’
“ಮೋದಿ ಟೀಮಂಗೆ ಯಲ್ಲ ಒಂದಾಗಬೇಕಾಗಿದೆ”
“ಅದೇನೂ ನಿಜಸಾ. ಈ ಹಾಳು ಚೆಡ್ಡಿಗಳು ಈಗ ಏನೇಳ್ತ ಅವುರೆಗೊತ್ತೆ, ಮೋದಿ ಏನಾರ ಸೋತ್ರೆ ಆ ಪಾಕೀಸ್ತಾನದೋರು ನಮ್ಮ ಮ್ಯಾಲೆ ಬಿದ್ದು ಇಚಿಡಿ ಯಾದೇಸನೆಗೆದ್ದ ಕತ್ತರಂತೆ”
“ವಳ್ಳೆದಾಯ್ತಲ್ಲಯ್ಯ”
“ಇದೇನ್ ಸಾ ಹಿಂಗೇಳ್ತಿರಿ”
“ಪಾಕಿಸ್ತಾನ ದೂರು ಇಂಡಿಯಾಗೆದ್ದು ಕೂಡ್ಳೆ ಅದೂ ಇಂಡಿಯಾ ಆಯ್ತದಲ್ಲಯ್ಯ”
“ಅಂಗಾದ್ರೆ ಗೆದ್ಕಳ್ಳಿ ಬುಡಿ ಸಾ”
“ಥೂತ್ತೆರಿ”
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...