Homeಅಂಕಣಗಳುರಾಜಕೀಯ ರಣಹದ್ದುಗಳಿಗೆ ಆಹಾರವಾಗಬೇಡಿ!

ರಾಜಕೀಯ ರಣಹದ್ದುಗಳಿಗೆ ಆಹಾರವಾಗಬೇಡಿ!

- Advertisement -
- Advertisement -

ಕುಮಾರಸ್ವಾಮಿಯವರ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ಸಂಯುಕ್ತ ಸರ್ಕಾರ ದಕ್ಷತೆಯಿಂದ ನಡೆಯಬೇಕೆಂಬುದು ನಮ್ಮೆಲ್ಲರ ಬಯಕೆ. ಎರಡೂ ಪಕ್ಷಗಳು ಕ್ಯಾತೆ ತೆಗೆದು ಬೀದಿ ಹಗರಣ ಮಾಡುವುದನ್ನು ಕೂಡಲೆ ಬಂದ್ ಮಾಡಬೇಕು. ಪ್ರಣಾಳಿಕೆಗಳ ಅನುಷ್ಠಾನ ಸಮಿತಿ ಹಾಗೂ ಸಮನ್ವಯ ಸಮಿತಿಗಳು ಅನುಷ್ಠಾನಕ್ಕೆ ಬಂದಿವೆ. ಈ ಎರಡು ಸಮಿತಿಗಳು ಕಾಲಕಾಲಕ್ಕೆ ಸಭೆ ಸೇರಿ ಮುಖ್ಯಮಂತ್ರಿಯವರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಯಾವುದೇ ಕಾರಣಕ್ಕೆ ಶಾಸಕರಾಗಲಿ, ಮಂತ್ರಿಗಳಾಗಲಿ, ಪುಢಾರಿಗಳಾಗಲಿ ಸುದ್ದಿ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಿಗೆ ದೂರುಕೊಡುವ ಹೇಳಿಕೆಗಳನ್ನು ನೀಡಬಾರದು. ಸಂಯುಕ್ತ ಸರ್ಕಾರದಲ್ಲಿ ತಪ್ಪುಗಳಾದಾಗ ಈ ಸಮಿತಿಗಳು ಮುಖ್ಯಮಂತ್ರಿಯವರನ್ನು ಕರೆದು ಕೂರಿಸಿಕೊಂಡು ಸೌಹಾರ್ದದಿಂದ ತಪ್ಪನ್ನು ಸರಿಪಡಿಸುವ ಕೆಲಸ ಆಗಬೇಕು.
ಈ ಸಂಯುಕ್ತ ಸರ್ಕಾರ ಆದರ್ಶ ರೀತಿಯಲ್ಲಿ ನಡೆಯಬೇಕು. ಉಭಯ ಪಕ್ಷಗಳಲ್ಲಿರುವ ಕಳಂಕಿತ ಶಾಸಕರಿಗೆ ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡದಂತೆ ತಾಕೀತು ಮಾಡಬೇಕು. ಕ್ರಿಮಿನಲ್ ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸಚಿವರಿಗೆ ತಪ್ಪುದಾರಿಗೆ ಹೋದರೆ, ಭ್ರಷ್ಟಾಚಾರದಲ್ಲಿ ತೊಡಗಿದರೆ ಅಧಿಕಾರಿಗಳನ್ನು ದಾರಿತಪ್ಪಿಸಿದರೆ, ಅವರಿಗೆ ಮಾಡಬಾರದ್ದನ್ನು ಮಾಡಲು ಯತ್ನಿಸಿದರೆ ಕೂಡಲೇ ಅಂತಹ ಕಳಂಕಿತರನ್ನು ಮಂತ್ರಿಮಂಡಲದಿಂದ ಹೊರದೂಡಲು ಹಿಂದು-ಮುಂದು ನೋಡಬಾರದು. ಆಗ ರಾಜ್ಯಾಡಳಿತಕ್ಕೆ ಒಳ್ಳೆಯ ಹೆಸರು ಬರುತ್ತದೆ ಮತ್ತು ಈ ಎರಡೂ ಸಂಸ್ಥೆಗಳ ಬಗೆಗೆ ಮತದಾರರು ಒಲವು ತೋರಿಸುತ್ತಾರೆ.
ಮಂತ್ರಿಗಳ, ಶಾಸಕರ ತಪ್ಪುಗಳನ್ನು ಮುಚ್ಚಿ ಹಾಕಲು ಸರ್ಕಾರ ತೊಡಗಿದರೆ ಈ ಸರ್ಕಾರದ ಬಗೆಗೆ ಜನ ತಿರಸ್ಕಾರ ಸೂಚಿಸುತ್ತಾರೆ ಮತ್ತು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ಇದು ಜ್ಞಾಪಕವಿರರಲಿ.
ಭಾರತೀಯ ಜನತಾ ಪಕ್ಷ ರಣಹದ್ದಿನಂತೆ ಕಾಯುತ್ತಿದೆ. ಸರ್ಕಾರದಲ್ಲಿ ಒಡಕು ಬಂದು ಛಿದ್ರವಾಗಿ ಬಿಡಲಿ ಎಂದು ಭಜನೆ ಮಾಡುತ್ತಿದ್ದಾರೆ. ಆ ರಣಹದ್ದುಗಳಿಗೆ ಆಹಾರವಾಗದಂತೆ ನಡೆÀದುಕೊಳ್ಳಿ. ನೀವು ಅಧಿಕಾರ ಕಳೆದುಕೊಳ್ಳುವುದಷ್ಟೇ ಆದರೆ ಪ್ರಜೆಗಳಿಗೆ ಅಷ್ಟೇನೂ ನಷ್ಟವಿಲ್ಲ. ಆದರೆ ನಿಮ್ಮ ಕಾರ್ಯವಿಧಾನದಿಂದ ಸಾರ್ವಜನಿಕರು ತಲೆತಗ್ಗಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬೇಡಿ.
ಮುಖ್ಯಮಂತ್ರಿಗಳಿಗೊಂದು ವಿನಂತಿ. ನೀವು ಯಾವುದೇ ಕಾರಣಕ್ಕೂ ನಿಮ್ಮ ಆಡಳಿತ ಕಳಂಕಿತವಾಗುವುದಕ್ಕೆ ಎಡೆ ಮಾಡಿಕೊಡಬೇಡಿ. ದುಷ್ಟ, ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಬೇಡಿ. ಲೋಕಾಯುಕ್ತರು, ಎಸಿಬಿ ಹಲವಾರು ಭ್ರಷ್ಟ ಅಧಿಕಾರಿಗಳು ನ್ಯಾಯಯುತರಾದವರಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವವರ ಮನೆಗಳ ಮೇಲೆ ದಾಳಿ ಮಾಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಅಧಿಕಾರಿಗಳ ಮೇಲೆ ಅಪರಾಧದ ಪಟ್ಟಿ ಸಿದ್ಧಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲು ಸರ್ಕಾರದ ಅನುಮತಿ ಕೇಳಿದ್ದಾರೆ. ಲೋಕಾಯುಕ್ತರ ಈ ಪಟ್ಟಿ ಸರ್ಕಾರಕ್ಕೆ ತಲುಪಿ ನಾಲ್ಕು ವರ್ಷಗಳೇ ಆಗಿದ್ದರೂ ಅವುಗಳನ್ನು ತಮ್ಮಲ್ಲೇ ಇಟ್ಟುಕೊಂಡು ಆ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಆ ಫೈಲುಗಳನ್ನು ತರಿಸಿ ಪರಾಂಬರಿಸಿ ಶೀಘ್ರದಲ್ಲೇ ಲೋಕಾಯುಕ್ತರಿಗೆ ಅವರ ಮೇಲೆ ಖಟ್ಲೆ ಹೂಡಬಹುದೆಂದು ಪತ್ರ ಬರೆಯಿರಿ. ಈ ಕೆಲಸ ಕೂಡಲೇ ನೀವು ಮಾಡಲಿಲ್ಲವಾದರೆ…? ನೀವೂ ಕೂಡ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದೀರಿ ಎಂಬ ಕಳಂಕ ಹೊರಬೇಕಾದೀತು.
ಎ.ಟಿ ರಾಮಸ್ವಾಮಿ ವರದಿಯನ್ನು ಸರ್ಕಾರ ಅಂಗೀಕರಿಸಿದ್ದರೂ ವರದಿಯಲ್ಲಿ ಉಲ್ಲೇಖಿತವಾಗಿರುವ ಯಾವ ಭೂಗಳ್ಳರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ. ಈ ಭೂಗಳ್ಳರಲ್ಲಿ ಶಾಸಕರಿದ್ದಾರೆ. ಸರ್ಕಾರದ ಉನ್ನತಾಧಿಕಾರಿಗಳಿದ್ದಾರೆ, ಬಿಲ್ಡರ್‍ಗಳಿದ್ದಾರೆ, ರಿಯಲ್‍ಎಸ್ಟೇಟ್ ಮಾಫಿಯಾದವರಿದ್ದಾರೆ. ಈ ಹತ್ತು ವರ್ಷಗಳ ಕಾಲದಿಂದ ಅಧಿಕಾರದಲ್ಲಿದ್ದ ಯಾವ ಮಂತ್ರಿಯಾಗಲಿ, ಮುಖ್ಯಮಂತ್ರಿಯಾಗÀಲಿ ಈ ಹಗರಣಗಳನ್ನು ತೀವ್ರವಾಗಿ ಗಮನಿಸಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಎ.ಟಿ ರಾಮಸ್ವಾಮಿಯವರ ನೇತೃತ್ವದಲ್ಲಿ ನಾವು 39 ದಿನ ಸತತ ಧರಣಿ ನಡೆಸಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಸಿದ್ದರಾಮಯ್ಯರನ್ನು ಒಪ್ಪಿಸಿದೆವು. ಅವರು ಅರೆಮನಸ್ಸಿನಿಂದ ನ್ಯಾಯಾಲಯ ಸ್ಥಾಪನೆ ಮಾಡಿಸಿ, ತಾವೇ ಅದರ ಉದ್ಘಾಟನೆಯನ್ನು ನೆರವೇರಿಸಿದರು. ಆದರೆ ಒಂದು ವರ್ಷಗಳ ಕಾಲ ನ್ಯಾಯಾಧೀಶರಿಗೆ ನೌಕರರಿಗೆ ಸಂಬಳವನ್ನೇ ನೀಡಲಿಲ್ಲ. ನ್ಯಾಯಾಲಯದ ಖರ್ಚಿಗೆ ಹಣ ಬಿಡುಗಡೆ ಮಾಡಲಿಲ್ಲ. ಅಷ್ಟೇ ಅಲ್ಲ, ಜಿಲ್ಲಾಧಿಕಾರಿಗಳು ಯಾವುದೇ ಕೇಸನ್ನು ಅವರ ಮುಂದೆ ಮಂಡಿಸಲಿಲ್ಲ. ಮೂರು ವರ್ಷದ ಅವಧಿಗೆ ನೇಮಕರಾದ ನ್ಯಾಯಾಧೀಶರು ಎರಡು ವರ್ಷಕಾಲ ನ್ಯಾಯಾಲಯವನ್ನು ನಡೆಸಲು ಸಾಧ್ಯವಾಯಿತು. ಈಗ ಈ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಅವಧಿ ಮುಗಿಯುತ್ತಾ ಬಂದಿದೆ. ಕುಮಾರಸ್ವಾಮಿಯವರು ಈ ಖಾಲಿಯಾಗುವ ಸ್ಥಾನಗಳಿಗೆ ದಕ್ಷರನ್ನು ಭರ್ತಿಮಾಡಿ ಎ.ಟಿ ರಾಮಸ್ವಾಮಿಯವರ ವರದಿಯಲ್ಲಿ ನಮೂದಾಗಿರುವ ಭೂಗಳ್ಳರ ವಿಚಾರಣೆಯನ್ನು ನಿಮ್ಮ ಅಧಿಕಾರದ ಅವಧಿಯಲ್ಲಿ ಮುಗಿಯಲು ಕ್ರಮ ಕೈಗೊಳ್ಳಬೇಕೆಂದು ಪ್ರಾರ್ಥನೆ.
ಭಾಜಪ ಸರ್ಕಾರ ನಡೆದಾಗ ವಿಶೇಷ ಜಿಲ್ಲಾಧಿಕಾರಿಗಳನ್ನು ಸರ್ಕಾರ ನೇಮಿಸಿತು. ಅವರೆಲ್ಲ ಬೆಂಗಳೂರು ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರಕ್ಕೆ ಸೇರಿದ ಸುಮಾರು 40 ಸಾವಿರ ಎಕರೆ ಹುಲ್ಲುಗಾವಲು, ಕೆರೆ ಅಂಗಳ, ಗುಂಡುತೋಪು, ಖರಾಬ್ ಜಮೀನು ಕೊನೆಗೆ ಸ್ಮಶಾನಗಳನ್ನೂ ಹಂಚಿಬಿಟ್ಟರು. ಉಚ್ಛನ್ಯಾಯಾಲಯಕ್ಕೆ ವಿಶೇಷ ಜಿಲ್ಲಾಧಿಕಾರಿಗಳನ್ನು ಸೃಷ್ಟಿಸಿ ಅವರಿಗೆ ಜಿಲ್ಲಾಧಿಕಾರಿಗಳ ಅಧಿಕಾರ ನೀಡುವ ಅಧಿಕಾರವೇ ಇಲ್ಲ. ಅಲ್ಲದೆ ಕಾನೂನು ಮೀರಿ ನಡೆಯುವ ಈ ವಿಶೇಷ ಜಿಲ್ಲಾಧಿಕಾರಿಗಳು, cordoned the limelight in a prominent way. The frequency of their indulgence in passing arbitrary, whimsical and utracious orders have been passed ಎಂದು ಕರ್ನಾಟಕ ಉಚ್ಛನ್ಯಾಯಾಲಯ ತಿಳಿಸಿದೆ.
ಈಗ ಈ ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಗಳು ರದ್ದಾಗಿವೆ, ಅವರ ಸ್ಥಾನದಲ್ಲಿ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಅವರು ಮಂದಗತಿಯಲ್ಲಿ ತೆರವು ಕಾರ್ಯ ನಡೆಸುತ್ತಿದ್ದಾರೆ. ಅವರಿಗೆ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಈ ಕೆಲಸ ಮುಗಿಸಬೇಕೆಂದು ಕುಮಾರಸ್ವಾಮಿಯವರು ಅವರಿಗೆ ಆಜ್ಞೆ ಮಾಡಬೇಕು. ಈ ವಿಶೇಷ ಜಿಲ್ಲಾಧಿಕಾರಿಗಳನ್ನು ಪದೇಪದೇ ವರ್ಗಾವಣೆ ಮಾಡುತ್ತಿರುವುದೂ, ಶನಿವಾರ ದಿನ ಮಾತ್ರ ತೆರವುಗೊಳಿಸುವ ಕೆಲಸ ನಡೆಯುತ್ತಿರುವುದೂ ಈ ಕೆಲಸ ಸುಸೂತ್ರವಾಗಿ ನಡೆಯದಿರಲು ಕಾರಣವಾಗಿದೆ. ಈ ವಿಶೇಷ ಜಿಲ್ಲಾಧಿಕಾರಿಗಳನ್ನು ಈ ಕೆಲಸ ಮುಗಿಸುವವರೆಗೂ ವರ್ಗ ಮಾಡದೆ ಬಿಟ್ಟರೆ ಕ್ಷಿಪ್ರವಾಗಿ ಗುರಿಮುಟ್ಟಬಹುದು ಎಂಬುದು ನನ್ನ ಅನಿಸಿಕೆ.

– ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...