Homeಅಂಕಣಗಳುಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

ಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

- Advertisement -
- Advertisement -

ಸಿನೆಮಾ ಕುರಿತ ವಿಶೇಷ ಒಳನೋಟ ಇರುವ ಗೆಳೆಯರೊಬ್ಬರು ಅಮೀರ್ ಖಾನ್‍ರ ‘ಪಿಕೆ’ ಸಿನೆಮಾ ಬಂದ ಸಂದರ್ಭದಲ್ಲಿ ಹೇಳಿದ ಮಾತು ಆಶ್ಚರ್ಯಕರವಾಗಿತ್ತು. ‘ಈ ಸಿನೆಮಾ ನನಗೆ ಇಷ್ಟವಾಗಲಿಲ್ಲ’, ‘ಅಲ್ಲಾರೀ ಇಷ್ಟೊಂದು ಪಾಪ್ಯುಲರ್ ಶೈಲಿಯಲ್ಲಿ ಹುಸಿ ಧಾರ್ಮಿಕತೆಯನ್ನು ಬಯಲುಗೊಳಿಸಿದೆ. ನಿಮಗೆ ಇಷ್ಟವಾಗದ ಅಂಶ ಏನು ಇದರಲ್ಲಿ?’, ‘ಅದೇ ನನಗೆ ಸಮಸ್ಯೆ ಅನ್ನಿಸಿದ್ದು. ಇದನ್ನು ಹೊಗಳುತ್ತಿರುವ ಸೆಕ್ಯುಲರ್‍ಗಳೆಲ್ಲರೂ, ತಮ್ಮ ಜವಾಬ್ದಾರಿಯನ್ನು ಮರೆತು ಅವೆಲ್ಲವನ್ನೂ ಅಮೀರ್ ಖಾನ್ ಮೇಲೆ ಅಥವಾ ಸಿನೆಮಾ ನಿರ್ದೇಶಕರ ಮೇಲೆ ಹಾಕುತ್ತಿದ್ದಾರೆ. ಸಿನೆಮಾ ಒಂದರಿಂದ ಇದನ್ನು ಮಾಡಲು ಸಾಧ್ಯವೇ?’ ಸಿನೆಮಾ ಚೆನ್ನಾಗಿದ್ದರೆ ಮೆಚ್ಚಿಕೊಳ್ಳಬೇಕು. ಇದ್ಯಾಕೋ ವಿಚಿತ್ರ ವಾದ ಎನಿಸಿತ್ತು.

ಈಗ ಇದು ನೆನಪಾಗಲು ಕಾರಣವಿದೆ. ಉತ್ತರ ದೇಶದಿಂದ ಹೊರಟಿರುವ ಬಿಜೆಪಿಯ ರಥವನ್ನು ಮತ್ತು ಫ್ಯಾಸಿಸ್ಟರ ಓಟವನ್ನು ದಕ್ಷಿಣಾಪಥದಲ್ಲಿ ಕಟ್ಟಿಹಾಕಲು ಸಿದ್ದರಾಮಯ್ಯ ವಿಫಲರಾದರು ಎಂದು ನಾವು ದೂರುತ್ತಾ ಕೂತರೆ? ಈ ಸಂಚಿಕೆಯ ಒಂದು ವರದಿಯಲ್ಲಿ ಸಿದ್ದರಾಮಯ್ಯನವರ ಮಿತಿಗಳೇನಾಗಿದ್ದವು ಮತ್ತು ಬಿಜೆಪಿಯ ಅನೈತಿಕ ಆಕ್ರಮಣಕಾರಿ ನಡೆಗಳೇನಾಗಿದ್ದವು ಎಂಬುದನ್ನು ವಿಸ್ತಾರವಾಗಿ ಬರೆಯಲಾಗಿದೆ. ಸಿದ್ದರಾಮಯ್ಯನವರ ಮಿತಿಗಳ ಬಗ್ಗೆ ಅದರಲ್ಲಿ ಬರೆದಿರುವ ಅಂಶಗಳು ಸರಿಯಾಗಿಯೇ ಇವೆ. ಅವರೂ ಮಿತಿಗಳಿರುವ ಮನುಷ್ಯರೇ. ಆ ಮಿತಿಗಳು ಅವರಲ್ಲಿ ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆಯಿಂದಲೂ ಇತ್ತು, ಬಹುಶಃ ರಾಜಕಾರಣಕ್ಕೆ ಬಂದಾಗಿನಿಂದಲೂ ಇದ್ದವು. ಅವೆಲ್ಲದರ ನಡುವೆಯೂ, ಕಳೆದ ಮೂರ್ನಾಲ್ಕು ದಶಕಗಳ ಈ ರಾಜ್ಯದ ಮುಖ್ಯಮಂತ್ರಿಗಳಲ್ಲೇ ಉತ್ತಮ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ತಮ್ಮ ಆಡಳಿತವನ್ನು ಘನತೆಯಿಂದಲೇ ನಡೆಸಿದ್ದಾರೆ.

ಪ್ರಜಾತಂತ್ರವನ್ನು ನಾಶ ಮಾಡಲು ಹೊರಟಿರುವ ಬಿಜೆಪಿಯ ರಥವನ್ನು ಕಟ್ಟಿ ಹಾಕುವ ಜವಾಬ್ದಾರಿ, ಅದನ್ನು ಬಯಸುವ ನಮ್ಮೆಲ್ಲರದ್ದೂ ಆಗಿದೆ. ಸಾಮಾಜಿಕ ನ್ಯಾಯ, ಜಾತ್ಯಾತೀತ ಮೌಲ್ಯಗಳ ಬಗ್ಗೆ ಬದ್ಧತೆಯಿಟ್ಟುಕೊಂಡಿರುವ ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರಿಗೂ ಅದರಲ್ಲಿ ಒಂದು ಮುಖ್ಯ ಪಾತ್ರವಿರುತ್ತದೆ. ಆದರೆ, ಸಿದ್ದರಾಮಯ್ಯನವರು ನಡೆಸಿದ ಈ ಪ್ರಯೋಗವು ನಮಗೆ ಒಂದು ಬಹುಮುಖ್ಯವಾದ ಅಂಶವನ್ನು ಮನವರಿಕೆ ಮಾಡಿಕೊಟ್ಟಿದೆ. ಅದೇನೆಂದರೆ, ಈ ಚುನಾವಣೆ ಮತ್ತು ಚುನಾವಣೋತ್ತರ ಬೆಳವಣಿಗೆಗಳು ನಮ್ಮ ಇಂದಿನ ಪರಿಸ್ಥಿತಿಯನ್ನು, ನಮ್ಮ ಮುಂದಿರುವ ಕರ್ತವ್ಯವನ್ನು ಸ್ಫುಟವಾಗಿ ತೆರೆದಿಟ್ಟಿವೆ. ನಾವು ಎಚ್ಚೆತ್ತುಕೊಳ್ಳಲೇ ಬೇಕಾದ ಅಂತಿಮ ಕರೆ ಕೇಳುತ್ತಿದೆ.

ಹಾಗೆ ನೋಡಿದರೆ ಬಿಜೆಪಿ ಪಕ್ಷ ಮುಖ್ಯಮಂತ್ರಿಯಾಗಿ ಮುಂದುವರೆದರೆ ಕರ್ನಾಟಕಕ್ಕೆ, ದೇಶಕ್ಕೆ ಎಷ್ಟು ಅಪಾಯ ಎಂಬುದರ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ. ಈ ವಿಷಯ ಮಂಡನೆಯಲ್ಲಿ ಪಟ್ಟು ಸಾಧಿಸಿರುವ ಡಜನ್‍ಗಟ್ಟಲೆ ಚಿಂತಕರು, ವಾಗ್ಮಿಗಳು ನಮ್ಮ ನಡುವೆ ಇದ್ದಾರೆ. ಅಸಲಿ ಪ್ರಶ್ನೆ ಇರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅದು ಉಂಟುಮಾಡಬಹುದಾದ ಅಪಾಯದ ಕುರಿತಾದದ್ದು. ಇಲ್ಲಿ ಸಮಸ್ಯೆಯಿರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೂ ಅಲ್ಲ; ಸರ್ಕಾರ ರಚಿಸುವುದು ಅಲ್ಲ. ಅದು ನಾಡಿನ ಪ್ರಜಾತಂತ್ರವಾದಿಗಳಲ್ಲಿ, ಸಾಮಾಜಿಕ ಕಾರ್ಯಕರ್ತರಲ್ಲಿ ತರುವ ನಿರಾಳತೆಗೆ ಹಾಗೂ ಆ ಮೂಲಕ ಬರಬಹುದಾದ ನಿಷ್ಕ್ರಿಯತೆಗೆ ಸಂಬಂಧಿಸಿದ್ದು. ಫ್ಯಾಸಿಸಂನ ಅಪಾಯಗಳ ಕುರಿತು ಇತಿಹಾಸದ ಉದಾಹರಣೆಗಳನ್ನೂ ಹೆಕ್ಕಿ ಹೆಕ್ಕಿ ಮಾತನಾಡುತ್ತಾ ಹೋಗುವ ನಾವು, ಅದನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳುವಲ್ಲಿ ಮಾತ್ರ ಪದೇ ಪದೇ ಸೋಲುತ್ತಿದ್ದೇವೆ. ಇದು ನಮ್ಮೆಲ್ಲರ ಮುಂದಿರುವ ಕಟು ಸತ್ಯ.

ಇಂಗ್ಲಿಷಿನಲ್ಲೊಂದು ಪದ-ಪರಿಕಲ್ಪನೆ ಇದೆ. wishful thinking ಎಂದು. ಕನ್ನಡದಲ್ಲಿ ಇದಕ್ಕೆ ಸೂಕ್ತ ಪದವಿಲ್ಲ. ಗೂಗಲ್ ಟ್ರಾನ್ಸ್‍ಲೇಟ್‍ನ ಮೂರನೇ ಆಯ್ಕೆ ಆಶಾಭ್ರಾಂತಿ ಎಂದಿತ್ತು. ಬಹಳ ಸೂಕ್ತವಾದ ಅನುವಾದ. 2014ರ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ನಾವು ತರ್ಕಬದ್ಧವಾಗಿÀ ವಾದಗಳನ್ನು ಮಂಡಿಸಿದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪುನರಾಯ್ಕೆ ಬಗ್ಗೆ ಕೂಡ ನಾವು ವಾದ, ತರ್ಕಗಳನ್ನು ಮುಂದಿಟ್ಟೆವು. ತರ್ಕ ಸರಿಯಿರಲಿಲ್ಲವೆಂದೇನಲ್ಲ. ಜೊತೆಗೆ ಇವಿಎಂನ ಕುರಿತು ಇನ್ನೂ ಅಂತಿಮ ಅನಿಸಿಕೆಗೆ ಬರುವುದಕ್ಕೂ ಸಾಧ್ಯವಾಗಿಲ್ಲ. ಆದರೂ, ಅವು ತರ್ಕಕ್ಕಿಂತಲೂ ನಮ್ಮ ನಿರೀಕ್ಷೆ ಅಥವಾ ಬಯಕೆಯಾಗಿತ್ತು. Actually the writing on the wall was clear in one way or the other.
.

ಬಿಜೆಪಿ ಮತ್ತದರ ಪರಿವಾರವು ಸ್ವಾತಂತ್ರ್ಯೋತ್ತರ ಭಾರತದ ಅತೀ ದೊಡ್ಡ ದುಷ್ಟಕೂಟವಾಗಿ ರೂಪುತಳೆದಿದೆ. ಲಕ್ಷಾಂತರ ಕೋಟಿಗಳ ಅಕ್ರಮ ಸಂಪತ್ತನ್ನು ಬಾಚಿ ಗುಡ್ಡೆ ಹಾಕಿಕೊಂಡಿರುವ ಕಾರ್ಪೊರೇಟ್ ಕುಳಗಳು ಇವರ ಬೆನ್ನೆಲುಬಾಗಿ ನಿಂತಿವೆ. ಒಂದಲ್ಲಾ ಒಂದು ರೀತಿಯಲ್ಲಿ ಇದೇ ಕಾರ್ಪೊರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕಿರುವ ಮಾಧ್ಯಮಗಳು ಈ ದುಷ್ಟಕೂಟದ ಪರವಾಗಿ ಸಾಮಾಜದ ಮನೋಭೂಮಿಕೆಯನ್ನು ಸಿದ್ಧಪಡಿಸಲು ಬಹಿರಂಗವಾಗಿಯೇ ಇಳಿದಿವೆ. ಫ್ಯಾಸಿಸ್ಟರು ಏನೆಲ್ಲಾ ಮಾಡಬಹುದೆಂಬುದನ್ನು ಇತಿಹಾಸವು ನಮಗೆ ತೋರಿಸಿಕೊಟ್ಟಿದೆಯೋ ಅವೆಲ್ಲವನ್ನೂ ಮಾಡಲು ಅವರು ಇಳಿದಾಗಿದೆ. ಹಾಗಾಗಿ ನಾವು ಕೂಡಲೇ ಕಾರ್ಯೋನ್ಮುಖರಾಗಬೇಕು; ಮುಂದಿನ ಚುನಾವಣೆಗೆ ನಾವು ಈಗಿನಿಂದಲೇ ತಯಾರಿ ನಡೆಸಬೇಕಿದೆ. ಇದು ಕೇವಲ ಚುನಾವಣೆಯ ವಿಚಾರವೂ ಅಲ್ಲ. ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಚಟುವಟಿಕೆಗಳು ವಿಪರೀತವಿದ್ದ 2013ರ ಸಂದರ್ಭದಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಎಲ್ಲಾ ಸೋತಿದ್ದ ಬಿಜೆಪಿ, 5 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಕೋಮುದ್ವೇಷದ ಚಟುವಟಿಕೆಗಳು ಸಾಪೇಕ್ಷವಾಗಿ ಕಡಿಮೆಯಿರುವ 2018ರ ಈ ಚುನಾವಣೆಯಲ್ಲಿ ಒಂದನ್ನು ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಿದೆ. ಅದೂ ಹೊಸ, ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿ! ಹೊರಗೆ ಕೋಮುಗಲಭೆಗಳು ಎಷ್ಟು ನಡೆಯುತ್ತಿವೆ ಎಂಬುದಕ್ಕಿಂತ ವಿಷ ಹಾಗೂ ವಿಷಪೂರಿತ ಸಂಘಟನೆಯನ್ನು ಎಷ್ಟು ಸಬಲವಾಗಿ ಹಾಗೂ ವ್ಯಾಪಕವಾಗಿ ಹರಡುವುದು ಸಾಧ್ಯವಾಗಿದೆ ಎಂಬುದೇ ನಿರ್ಣಾಯಕವಾಗುತ್ತಿದೆ.

ಅದಕ್ಕೆ ವಿರುದ್ಧವಾಗಿ ಪ್ರಜಾತಂತ್ರದ – ಅಂದರೆ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಯ – ಅರಿವನ್ನು ಸಮಾಜದ ತಳಮಟ್ಟದಿಂದ ಬೆಳೆಸುವ ಮತ್ತು ಬಲಿಷ್ಢ ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ನಾವೆಷ್ಟು ಕಾರ್ಯಪ್ರವೃತ್ತಾರಾಗಿದ್ದೇವೆ ಅಥವ ಕಾರ್ಯಪ್ರವೃತ್ತರಾಗಲಿದ್ದೇವೆ? ನಮ್ಮ ಪ್ರಜಾತಂತ್ರವಾದಿಗಳಲ್ಲಿ ಗಣನೀಯ ವಿಭಾಗದ ಕಾಳಜಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾರಿಕೊಳ್ಳುವುದು ಅಥವಾ ನಮ್ಮದೇ ವರ್ತುಲದಲ್ಲಿ ತಂತಮ್ಮ ವಾದವನ್ನು ಗೆಲ್ಲಿಸಿಕೊಳ್ಳುವುದು ಅಥವ ಇನ್ನಾವುದೋ ವಾದವನ್ನು ಸೋಲಿಸುವುದರಲ್ಲಿ ಪರ್ಯಾವಸಾನಗೊಳ್ಳುತ್ತಿವೆ. ಹೀಗೆ ನಮ್ಮ ಶಕ್ತಿ ಸಾಮಥ್ರ್ಯ ಹರಿದು ಹಳ್ಳಹಿಡಿಯುತ್ತಿದೆ ಅನಿಸುತ್ತಿದೆ.

ಇವೆಲ್ಲದರ ಅರ್ಥ, ಪರಿಸ್ಥಿತಿ ಅತ್ಯಂತ ನಿರಾಶಾದಾಯಕವಾಗಿದೆ ಎಂದೇನೂ ಅಲ್ಲ. ಬಿಜೆಪಿ ನಡೆಸಿದ ಬಹುಮುಖೀ ಆಕ್ರಮಣಕಾರಿ ದಾಳಿಯ ನಂತರವೂ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮತ ಪಡೆದ ಪಕ್ಷ ಅದಾಗಲಿಲ್ಲ. ಆಯಾ ಕ್ಷೇತ್ರದಲ್ಲಿ ಗೆಲುವಾಗಿ ಪರಿಣಮಿಸುವ ರೀತಿಯಲ್ಲಿ ಮತಗಳು ಕ್ರೋಢೀಕೃತವಾಗಲಿಲ್ಲ ಅಷ್ಟೇ. ಈ ಸನ್ನಿವೇಶದಲ್ಲಿ ಜೆಡಿಎಸ್‍ನೊಂದಿಗೆ ಕಾಂಗ್ರೆಸ್ ಹೃತ್ಪೂರ್ವಕವಾಗಿ ಕೈ ಜೋಡಿಸಿರುವುದು ಒಂದು ಒಳ್ಳೆಯ ಬೆಳವಣಿಗೆಯೇ. ಈ ರಾಜ್ಯದ ರಾಜಕಾರಣದಲ್ಲಿ ಜಾತ್ಯತೀತತೆಯನ್ನು ನೆಲೆಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಸಿಗಲಾರದು. ಆದರೆ ಇಂದಿನ ಪರಿಸ್ಥಿತಿಯನ್ನು ಅಂತಿಮ ಕರೆಗಂಟೆ ಎಂದು ಗಂಭೀರವಾಗಿ ಪರಿಗಣಿಸಬೇಕು ಅಷ್ಟೇ. ಹಾಗೆಯೇ ಯಾವ ರೀತಿಯ ಆಶಾಭ್ರಾಂತಿಯೂ ನಮ್ಮನ್ನು ಆವರಿಸದಂತೆ ಕಾಪಾಡಿಕೊಳ್ಳಬೇಕು.

ಪರ್ಯಾಯ ಮಾಧ್ಯಮಗಳನ್ನು ಕಟ್ಟಲು ಬೇಕಾದ ಸಂವಾದವನ್ನು ಶುರು ಮಾಡೋಣವೆಂಬ ಕರೆಯನ್ನು ಈ ನಿಮ್ಮ ಪತ್ರಿಕೆ ಕೊಟ್ಟಿದೆ. ಅದನ್ನು ಓದಬೇಕೆಂದು ಕೋರುತ್ತೇವೆ ಮತ್ತು ಕಟ್ಟುವ ಪ್ರಕ್ರಿಯೆಯಲ್ಲಿ ಮುಂದೆ ಬರುವವರನ್ನು ಉತ್ತೇಜಿಸಲು, ಸೂಕ್ತ ಅವಕಾಶ ಕಲ್ಪಿಸಿಕೊಡಲು ಗೌರಿ ಮೀಡಿಯಾ ಟ್ರಸ್ಟ್ ಪ್ರಯತ್ನ ಹಾಕುತ್ತದೆಂದು ಹೇಳಬಯಸುತ್ತೇವೆ. ಗೌರಿ ಲಂಕೇಶರಿಗೆ ಇದಕ್ಕಿಂತ ಉತ್ತಮವಾದ ಶ್ರದ್ಧಾಂಜಲಿ ಇನ್ನೇನಿರಲು ಸಾಧ್ಯ?

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...