Homeಅಂಕಣಗಳುಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

ಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

- Advertisement -
- Advertisement -

ಬಿ. ಶ್ರೀಪಾದ ಬಟ್ |

ಹಂಪಿ ವಿಶ್ವವಿದ್ಯಾಲಯದಲ್ಲಿನ ಇತ್ತೀಚಿನ ವಿವಾದವನ್ನು ಗಮನಿಸಿದಾಗ ಅಲ್ಲಿನ ಕುಲಪತಿಗಳಾದ ಮಲ್ಲಿಕಾ ಘಂಟಿಯವರಿಗೆ ಯಾರು ವಿದ್ಯಾಸಾದಕರು, ಯಾರು ವಿ

ದ್ವಂಸಕರು ಎಂಬುದರ ಅರಿವು ಇಲ್ಲದೆ ಹೋಯಿತೆ ಎನ್ನುವ ಪ್ರಶ್ನೆ ಮೂಡುತ್ತದೆ. ವಿಶಯವೇನೆಂದರೆ ಕನ್ನಡ ವಿವಿಯ ನುಡಿಹಬ್ಬದ ಪ್ರಯುಕ್ತ ಡಿಸೆಂಬರ್ 31, 2018-ಜನವರಿ 1, 2019 ರಂದು ಆಯೋಜಿಸಲಾಗಿದ್ದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಬಕ್ಕೆ ಸುಳ್ಳು ಬಿತ್ತಿ ದ್ವೇಶವನ್ನು ಬೆಳೆಸಿದ ಪತ್ರಕರ್ತ ವಿಶ್ವೇಶ್ವರ ಭಟ್ಟರನ್ನು ಅತಿಥಿಗಳನ್ನಾಗಿ ಕರೆದಿದ್ದು ಇಡೀ ವಿವಾದದ ಕೇಂದ್ರವಾಗಿದೆ. ಸದರಿ ಪತ್ರಕರ್ತರನ್ನು ಯಾವ ಅರ್ಹತೆಯ ಮೇಲೆ ಆಹ್ವಾನಿಸಿದ್ದೀರಿ ಎಂದು ಪ್ರಜ್ನಾವಂತರು ಪ್ರಶ್ನಿಸಿ

ಹಂಪಿ ವಿಶ್ವವಿದ್ಯಾಲಯ

ದ್ದಾರೆ. ಏಕೆಂದರೆ ವಿಶ್ವೇಶ್ವರ ಭಟ್ಟ ಎನ್ನುವ ಪತ್ರಕರ್ತ ಕನ್ನಡ ಪತ್ರಿಕೋದ್ಯಮವನ್ನು ಅದೋಗತಿಗಿಳಿಸಿದ, ಮಹಿಳೆಯರ ಕುರಿತು ಅತ್ಯಂತ ಕೀಳು ಮಟ್ಟದಲ್ಲಿ, ತುಚ್ಚವಾಗಿ ಬರೆದಂತಹ ವ್ಯಕ್ತಿ. ಹಿಂದುತ್ವ ಮತಾಂದತೆಯ ವಿಶವನ್ನು ತ

ನ್ನ ಪತ್ರಿಕೆಯಲ್ಲಿ ದಿನನಿತ್ಯ ಪ್ರಚಾರ ಮಾಡಿದ, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡೆಸಿದ ಈ ಭಟ್ಟರನ್ನು ವಿಶಭಟ್ಟ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ. ಈ ಮುಂಚೆ ಕನ್ನಡ ವಿವಿಯ ಕುಲಪತಿಗಳಾಗಿದ್ದ ಎಂ.ಎಂ. ಕಲ್ಬುರ್ಗಿಯವರ ವಿರುದ್ದ ಸುಳ್ಳುಗಳನ್ನು ಅಪಪ್ರಚಾರ ಮಾಡಲು ತಾನು ಸಂಪಾದಕನಾಗಿದ್ದ ದಿನಪತ್ರಿಕೆ ಮತ್ತು ಟಿವಿ ಚಾನಲ್ ನಲ್ಲಿ ಮತಾಂದರಿಗೆ ಸಂಪೂರ್ಣ ಅವಕಾಶವನ್ನು ಕೊಟ್ಟ ಈ ವಿ.ಭಟ್ಟರಿಗೆ ಸಂವಿದಾನ ಮೇಲೆಯೂ ಗೌರವವಿಲ್ಲ. ಸಂವಿದಾನದ ನೀತಿಸಂಹಿತೆಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸುತ್ತಿರುವ ಹಂಪಿ ವಿವಿಯು ಸಂವಿದಾನ ವಿರೋದಿಯಾದಂತಹ ವಿಶ್ವೇಶ್ವರ ಭಟ್ಟರನ್ನು ಅತಿಥಿಯನ್ನಾಗಿ ಆಯ್ಕೆ ಮಾಡುವುದು ಸಹ ಪ್ರಜಾತಾಂತ್ರಿಕ ವಿರೋದಿ ಎನಿಸಿಕೊಳ್ಳುತ್ತದೆ

ಆದರೆ ಮಲ್ಲಿಕಾ ಘಂಟಿಯವರು ಸಿಂಡಿಕೇಟ್ ಸದಸ್ಯರ ಸಬೆ ನಡೆಸದೆ, ಹಿರಿಯ ಪ್ರಾದ್ಯಾಪಕರೊಂದಿಗೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಈ ನಿರ್ಣಯವನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ. ಸ್ವತಃ ಉಪಕುಲಪತಿಗಳೆ ಒಂದೆಡೆ ಇದು ನನ್ನ ನಿರ್ದಾರ ಎಂದು ಹೇಳಿದ್ದಾರೆ. ಅಕ್ಕ ಮಹಾದೇವಿ “ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಯ್ಯ, ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಯ್ಯ” ಎಂದು ಕೇಳುತ್ತಾಳೆ. ಪ್ರಜ್ನಾವಂತರು ಇದೇ ಪ್ರಶ್ನೆಯನ್ನು ಇಂದು ಕುಲಪತಿಗಳಿಗೆ ಕೇಳುತ್ತಿದ್ದಾರೆ.

ವಿವಿಯ ಆಡಳಿತ ಮಂಡಳಿ ಮತ್ತು ಕುಲಪತಿಗಳ ಈ ಆಯ್ಕೆಯನ್ನು ವಿರೋದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋದ ವ್ಯಕ್ತವಾಯಿತು. ಸಾಹಿತಿ, ಲೇಖಕ, ಪತ್ರಕರ್ತರು, ಹೋರಾಟಗಾರರು ವಿಶ್ವೇಶ್ವರ ಬಟ್ಟರಂತಹ ಜೀವವಿರೋದಿ ಪತ್ರಕರ್ತರನ್ನು ಆಹ್ವಾನಿಸಿದ್ದನ್ನು ಸಾಮೂಹಿಕವಾಗಿ ಖಂಡಿಸಿ ಪತ್ರವನ್ನು ಬರೆದರು. ವಿವಿಯ ಈ ನಡೆಯು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಶ್ವೇಶ್ವರ ಭಟ್ಟರ ಆಯ್ಕೆಯ ಈ ನಿರ್ದಾರವನ್ನ ಕೈಬಿಡಬೇಕು ಎಂದು ಆಗ್ರಹಿಸಿದರು. ಕವಿಗಳಿಗೆ ಕವಿ-ಕಾವ್ಯ ಗೋಶ್ಟಿಯಲ್ಲಿ ಬಾಗವಹಿಸಬಾರದೆಂದು ಮನವಿಯನ್ನು ಸಹ ಮಾಡಲಾಯಿತು.

ಮಲ್ಲಿಕಾ ಘಂಟಿ

ಕವಿ, ಲೇಖಕರಾದ ಲಕ್ಷ್ಮೀಪತಿ ಕೋಲಾರ, ಹನುಮಂತ ಹಾಲಗೇರಿ, ಕೆ.ಪಿ.ನಟರಾಜ, ರಮೇಶ್ ಗಬ್ಬೂರು, ಜಾಜಿ ದೇವೆಂದ್ರಪ್ಪ, ಅರುಣ್ ಜೋಳದ ಕೂಡ್ಲಿಗಿ ಅವರು ಕವಿಗೋಶ್ಟಿಯಲ್ಲಿ ಭಾಗವಹಿಸದಿರಲು ನಿರ್ದರಿಸಿದರು.

ಹಂಪಿ ವಿವಿಯ ಬಯಲು ಚಿಂತನ ಸಂಶೋದನ ವಿದ್ಯಾರ್ಥಿ ಬಳಗದವರು ಕುಲಪತಿ ಕಚೇರಿ ಎದುರು ಪ್ರತಿಬಟಿಸಿದರು. ಮುಂದೊದಗಬಹುದಾದ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಲೆಕ್ಕಿಸದೆ ನ್ಯಾಯದ ಪರವಾಗಿ ಬೆಂಬಲಿಸಿದ ಅಲ್ಲಿನ ಸ್ನಾತಕೋತ್ತರ, ಸಂಶೋದನ ವಿದ್ಯಾರ್ಥಿಗಳ ಈ ದಿಟ್ಟತೆ ಇಡೀ ವಿವಾದಕ್ಕೆ ಹೊಸ ತಿರುವನ್ನು ತಂದಿತು. ಮೌನವಾಗಿದ್ದೀರಿ ಯಾಕೆ ಎನ್ನುವ ಪ್ರಶ್ನೆಗೆ ಗುರಿಯಾಗಿದ್ದ ವಿ.ವಿ.ಯ ಪ್ರಾದ್ಯಾಪಕರು ಕುಲಪತಿಗಳ ಏಕಪಕ್ಷೀಯ ನಿರ್ದಾರದ ವಿರುದ್ದ ತಮ್ಮ ಪ್ರತಿಭಟನೆ ದಾಖಲಿಸಿದರು. (ಆದರೆ ಕೆಲ ಪ್ರಾದ್ಯಾಪಕರು ವಿ.ಭಟ್ಟನನ್ನು ಆಹ್ವಾನಿಸಿದ್ದು ಗೊತ್ತಾದ ತಕ್ಷಣ ಕುಲಪತಿಗಳಿಗೆ ತಮ್ಮ ವಿರೋದವನ್ನು ವ್ಯಕ್ತಪಡಿಸಿದ್ದರು)

ಮೇಲಿನ ಎಲ್ಲಾ ಒತ್ತಡಗಳಿಗೆ ಮಣಿದ ಮಲ್ಲಿಕಾ ಘಂಟಿಯವರು ಎರಡು ದಿನದ ಸಮಾರೋಪ ಸಮಾರಂಬವನ್ನೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಆದರೂ ಸಹ ತಮ್ಮದೇನು ತಪ್ಪಿಲ್ಲ ಎಂಬಂತೆ ವಿ.ಭಟ್ಟರನ್ನು ಕರೆಸುವ ತಮ್ಮ ನಿರ್ದಾರವನ್ನು ಪದೆ ಪದೆ ಸಮರ್ಥಿಸಿಕೊಂಡರು. ಈ ಸಮರ್ಥನೆಯ ಭರದಲ್ಲಿ ಇಡೀ ವಿವಾದವನ್ನು ಎಡಪಂಥೀಯ ವರ್ಸಸ್ ಬಲಪಂಥೀಯ ಎಂದು ಶರಾ ಬರೆದುಬಿಟ್ಟರು. ತಮ್ಮ ಈ ಹತಾಶ ಹೇಳಿಕೆಯ ಮೂಲಕ ಜನತೆಯನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮಾಡಿದರು. ಆದರೆ ಪತ್ರಕರ್ತ ವೇಶದ ಒಬ್ಬ ಜೀವವಿರೋದಿ ವ್ಯಕ್ತಿಯನ್ನು ಹಂಪಿ ವಿವಿಯಂತಹ ಉನ್ನತ ಶಿಕ್ಷಣ ಸಂಸ್ಥೆಗೆ ಅತಿಥಿಯಾಗಿ ಆಹ್ವಾನಿಸುವುದರ ವಿರುದ್ದ ಮಾತ್ರ ಇಲ್ಲಿ ಪ್ರತಿಬಟನೆ ಇತ್ತು ಹೊರತಾಗಿ ಯಾವುದೆ ಸಿದ್ದಾಂತಗಳ ನಡುವಿನ ಜಗಳವಂತೂ ಅಲ್ಲವೆ ಅಲ್ಲ . ಕನ್ನಡ ವಿವಿಯ ಘನತೆ ಮತ್ತು ವೈಚಾರಿಕ ಪರಂಪರೆಯನ್ನು ಕಾಪಾಡುವ ಕಳಕಳಿಯೂ ಇಲ್ಲಿನ ಪ್ರಜ್ನಾವಂತರ ಪ್ರತಿಭಟನೆಯ ಮೂಲ ಆಶಯವಾಗಿತ್ತು. ಮುಂದಿನ ಪೀಳಿಗೆಗೆ ಕನ್ನಡ ವಿವಿ ಒಂದು ಅರ್ಥಪೂರ್ಣ ಮಾದರಿಯಾಗಿರಬೇಕು ಎಂಬುದೆ ಈ ಪ್ರತಿರೋದದ ಪ್ರಜ್ನೆಯಾಗಿತ್ತು. ಬಲಪಂಥೀಯರನ್ನು ಕರೆಸುವುದಕ್ಕೆ ಯಾವುದೆ ಬಗೆಯ ವಿರೋದ ವ್ಯಕ್ತಪಡಿಸುವುದು ಪ್ರಜಾಪ್ರಬುತ್ವ ವಿರೋದಿ ನಡವಳಿಕೆಯಾಗುತ್ತದೆ ಎನ್ನುವ ಸ್ಪಶ್ಟ ತಿಳುವಳಿಕೆ ಮೇಲಿನ ಪ್ರಜ್ನಾವಂತರಿಗಿದೆ. ಮತ್ತು ಇಂತಹ ಫ್ಯಾಸಿಸ್ಟ್ ವರ್ತನೆಯನ್ನು ಕಾಲಕಾಲಕ್ಕೆ ಖಂಡಿಸುತ್ತಲೆ ಬಂದಿದ್ದಾರೆ.

ಕಡೆಗೂ ಕಾಡುವುದೇನೆಂದರೆ “ಎಲ್ಲಾ ಬಿಟ್ಟ ಮಗ ಭಂಗಿ ಯಾಕೆ ನೆಟ್ಟ” ??

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...