Homeಅಂಕಣಗಳುಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

ಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

- Advertisement -
- Advertisement -

ಬಿ. ಶ್ರೀಪಾದ ಬಟ್ |

ಹಂಪಿ ವಿಶ್ವವಿದ್ಯಾಲಯದಲ್ಲಿನ ಇತ್ತೀಚಿನ ವಿವಾದವನ್ನು ಗಮನಿಸಿದಾಗ ಅಲ್ಲಿನ ಕುಲಪತಿಗಳಾದ ಮಲ್ಲಿಕಾ ಘಂಟಿಯವರಿಗೆ ಯಾರು ವಿದ್ಯಾಸಾದಕರು, ಯಾರು ವಿ

ದ್ವಂಸಕರು ಎಂಬುದರ ಅರಿವು ಇಲ್ಲದೆ ಹೋಯಿತೆ ಎನ್ನುವ ಪ್ರಶ್ನೆ ಮೂಡುತ್ತದೆ. ವಿಶಯವೇನೆಂದರೆ ಕನ್ನಡ ವಿವಿಯ ನುಡಿಹಬ್ಬದ ಪ್ರಯುಕ್ತ ಡಿಸೆಂಬರ್ 31, 2018-ಜನವರಿ 1, 2019 ರಂದು ಆಯೋಜಿಸಲಾಗಿದ್ದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಬಕ್ಕೆ ಸುಳ್ಳು ಬಿತ್ತಿ ದ್ವೇಶವನ್ನು ಬೆಳೆಸಿದ ಪತ್ರಕರ್ತ ವಿಶ್ವೇಶ್ವರ ಭಟ್ಟರನ್ನು ಅತಿಥಿಗಳನ್ನಾಗಿ ಕರೆದಿದ್ದು ಇಡೀ ವಿವಾದದ ಕೇಂದ್ರವಾಗಿದೆ. ಸದರಿ ಪತ್ರಕರ್ತರನ್ನು ಯಾವ ಅರ್ಹತೆಯ ಮೇಲೆ ಆಹ್ವಾನಿಸಿದ್ದೀರಿ ಎಂದು ಪ್ರಜ್ನಾವಂತರು ಪ್ರಶ್ನಿಸಿ

ಹಂಪಿ ವಿಶ್ವವಿದ್ಯಾಲಯ

ದ್ದಾರೆ. ಏಕೆಂದರೆ ವಿಶ್ವೇಶ್ವರ ಭಟ್ಟ ಎನ್ನುವ ಪತ್ರಕರ್ತ ಕನ್ನಡ ಪತ್ರಿಕೋದ್ಯಮವನ್ನು ಅದೋಗತಿಗಿಳಿಸಿದ, ಮಹಿಳೆಯರ ಕುರಿತು ಅತ್ಯಂತ ಕೀಳು ಮಟ್ಟದಲ್ಲಿ, ತುಚ್ಚವಾಗಿ ಬರೆದಂತಹ ವ್ಯಕ್ತಿ. ಹಿಂದುತ್ವ ಮತಾಂದತೆಯ ವಿಶವನ್ನು ತ

ನ್ನ ಪತ್ರಿಕೆಯಲ್ಲಿ ದಿನನಿತ್ಯ ಪ್ರಚಾರ ಮಾಡಿದ, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡೆಸಿದ ಈ ಭಟ್ಟರನ್ನು ವಿಶಭಟ್ಟ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ. ಈ ಮುಂಚೆ ಕನ್ನಡ ವಿವಿಯ ಕುಲಪತಿಗಳಾಗಿದ್ದ ಎಂ.ಎಂ. ಕಲ್ಬುರ್ಗಿಯವರ ವಿರುದ್ದ ಸುಳ್ಳುಗಳನ್ನು ಅಪಪ್ರಚಾರ ಮಾಡಲು ತಾನು ಸಂಪಾದಕನಾಗಿದ್ದ ದಿನಪತ್ರಿಕೆ ಮತ್ತು ಟಿವಿ ಚಾನಲ್ ನಲ್ಲಿ ಮತಾಂದರಿಗೆ ಸಂಪೂರ್ಣ ಅವಕಾಶವನ್ನು ಕೊಟ್ಟ ಈ ವಿ.ಭಟ್ಟರಿಗೆ ಸಂವಿದಾನ ಮೇಲೆಯೂ ಗೌರವವಿಲ್ಲ. ಸಂವಿದಾನದ ನೀತಿಸಂಹಿತೆಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸುತ್ತಿರುವ ಹಂಪಿ ವಿವಿಯು ಸಂವಿದಾನ ವಿರೋದಿಯಾದಂತಹ ವಿಶ್ವೇಶ್ವರ ಭಟ್ಟರನ್ನು ಅತಿಥಿಯನ್ನಾಗಿ ಆಯ್ಕೆ ಮಾಡುವುದು ಸಹ ಪ್ರಜಾತಾಂತ್ರಿಕ ವಿರೋದಿ ಎನಿಸಿಕೊಳ್ಳುತ್ತದೆ

ಆದರೆ ಮಲ್ಲಿಕಾ ಘಂಟಿಯವರು ಸಿಂಡಿಕೇಟ್ ಸದಸ್ಯರ ಸಬೆ ನಡೆಸದೆ, ಹಿರಿಯ ಪ್ರಾದ್ಯಾಪಕರೊಂದಿಗೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಈ ನಿರ್ಣಯವನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ. ಸ್ವತಃ ಉಪಕುಲಪತಿಗಳೆ ಒಂದೆಡೆ ಇದು ನನ್ನ ನಿರ್ದಾರ ಎಂದು ಹೇಳಿದ್ದಾರೆ. ಅಕ್ಕ ಮಹಾದೇವಿ “ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಯ್ಯ, ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಯ್ಯ” ಎಂದು ಕೇಳುತ್ತಾಳೆ. ಪ್ರಜ್ನಾವಂತರು ಇದೇ ಪ್ರಶ್ನೆಯನ್ನು ಇಂದು ಕುಲಪತಿಗಳಿಗೆ ಕೇಳುತ್ತಿದ್ದಾರೆ.

ವಿವಿಯ ಆಡಳಿತ ಮಂಡಳಿ ಮತ್ತು ಕುಲಪತಿಗಳ ಈ ಆಯ್ಕೆಯನ್ನು ವಿರೋದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋದ ವ್ಯಕ್ತವಾಯಿತು. ಸಾಹಿತಿ, ಲೇಖಕ, ಪತ್ರಕರ್ತರು, ಹೋರಾಟಗಾರರು ವಿಶ್ವೇಶ್ವರ ಬಟ್ಟರಂತಹ ಜೀವವಿರೋದಿ ಪತ್ರಕರ್ತರನ್ನು ಆಹ್ವಾನಿಸಿದ್ದನ್ನು ಸಾಮೂಹಿಕವಾಗಿ ಖಂಡಿಸಿ ಪತ್ರವನ್ನು ಬರೆದರು. ವಿವಿಯ ಈ ನಡೆಯು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಶ್ವೇಶ್ವರ ಭಟ್ಟರ ಆಯ್ಕೆಯ ಈ ನಿರ್ದಾರವನ್ನ ಕೈಬಿಡಬೇಕು ಎಂದು ಆಗ್ರಹಿಸಿದರು. ಕವಿಗಳಿಗೆ ಕವಿ-ಕಾವ್ಯ ಗೋಶ್ಟಿಯಲ್ಲಿ ಬಾಗವಹಿಸಬಾರದೆಂದು ಮನವಿಯನ್ನು ಸಹ ಮಾಡಲಾಯಿತು.

ಮಲ್ಲಿಕಾ ಘಂಟಿ

ಕವಿ, ಲೇಖಕರಾದ ಲಕ್ಷ್ಮೀಪತಿ ಕೋಲಾರ, ಹನುಮಂತ ಹಾಲಗೇರಿ, ಕೆ.ಪಿ.ನಟರಾಜ, ರಮೇಶ್ ಗಬ್ಬೂರು, ಜಾಜಿ ದೇವೆಂದ್ರಪ್ಪ, ಅರುಣ್ ಜೋಳದ ಕೂಡ್ಲಿಗಿ ಅವರು ಕವಿಗೋಶ್ಟಿಯಲ್ಲಿ ಭಾಗವಹಿಸದಿರಲು ನಿರ್ದರಿಸಿದರು.

ಹಂಪಿ ವಿವಿಯ ಬಯಲು ಚಿಂತನ ಸಂಶೋದನ ವಿದ್ಯಾರ್ಥಿ ಬಳಗದವರು ಕುಲಪತಿ ಕಚೇರಿ ಎದುರು ಪ್ರತಿಬಟಿಸಿದರು. ಮುಂದೊದಗಬಹುದಾದ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಲೆಕ್ಕಿಸದೆ ನ್ಯಾಯದ ಪರವಾಗಿ ಬೆಂಬಲಿಸಿದ ಅಲ್ಲಿನ ಸ್ನಾತಕೋತ್ತರ, ಸಂಶೋದನ ವಿದ್ಯಾರ್ಥಿಗಳ ಈ ದಿಟ್ಟತೆ ಇಡೀ ವಿವಾದಕ್ಕೆ ಹೊಸ ತಿರುವನ್ನು ತಂದಿತು. ಮೌನವಾಗಿದ್ದೀರಿ ಯಾಕೆ ಎನ್ನುವ ಪ್ರಶ್ನೆಗೆ ಗುರಿಯಾಗಿದ್ದ ವಿ.ವಿ.ಯ ಪ್ರಾದ್ಯಾಪಕರು ಕುಲಪತಿಗಳ ಏಕಪಕ್ಷೀಯ ನಿರ್ದಾರದ ವಿರುದ್ದ ತಮ್ಮ ಪ್ರತಿಭಟನೆ ದಾಖಲಿಸಿದರು. (ಆದರೆ ಕೆಲ ಪ್ರಾದ್ಯಾಪಕರು ವಿ.ಭಟ್ಟನನ್ನು ಆಹ್ವಾನಿಸಿದ್ದು ಗೊತ್ತಾದ ತಕ್ಷಣ ಕುಲಪತಿಗಳಿಗೆ ತಮ್ಮ ವಿರೋದವನ್ನು ವ್ಯಕ್ತಪಡಿಸಿದ್ದರು)

ಮೇಲಿನ ಎಲ್ಲಾ ಒತ್ತಡಗಳಿಗೆ ಮಣಿದ ಮಲ್ಲಿಕಾ ಘಂಟಿಯವರು ಎರಡು ದಿನದ ಸಮಾರೋಪ ಸಮಾರಂಬವನ್ನೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಆದರೂ ಸಹ ತಮ್ಮದೇನು ತಪ್ಪಿಲ್ಲ ಎಂಬಂತೆ ವಿ.ಭಟ್ಟರನ್ನು ಕರೆಸುವ ತಮ್ಮ ನಿರ್ದಾರವನ್ನು ಪದೆ ಪದೆ ಸಮರ್ಥಿಸಿಕೊಂಡರು. ಈ ಸಮರ್ಥನೆಯ ಭರದಲ್ಲಿ ಇಡೀ ವಿವಾದವನ್ನು ಎಡಪಂಥೀಯ ವರ್ಸಸ್ ಬಲಪಂಥೀಯ ಎಂದು ಶರಾ ಬರೆದುಬಿಟ್ಟರು. ತಮ್ಮ ಈ ಹತಾಶ ಹೇಳಿಕೆಯ ಮೂಲಕ ಜನತೆಯನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮಾಡಿದರು. ಆದರೆ ಪತ್ರಕರ್ತ ವೇಶದ ಒಬ್ಬ ಜೀವವಿರೋದಿ ವ್ಯಕ್ತಿಯನ್ನು ಹಂಪಿ ವಿವಿಯಂತಹ ಉನ್ನತ ಶಿಕ್ಷಣ ಸಂಸ್ಥೆಗೆ ಅತಿಥಿಯಾಗಿ ಆಹ್ವಾನಿಸುವುದರ ವಿರುದ್ದ ಮಾತ್ರ ಇಲ್ಲಿ ಪ್ರತಿಬಟನೆ ಇತ್ತು ಹೊರತಾಗಿ ಯಾವುದೆ ಸಿದ್ದಾಂತಗಳ ನಡುವಿನ ಜಗಳವಂತೂ ಅಲ್ಲವೆ ಅಲ್ಲ . ಕನ್ನಡ ವಿವಿಯ ಘನತೆ ಮತ್ತು ವೈಚಾರಿಕ ಪರಂಪರೆಯನ್ನು ಕಾಪಾಡುವ ಕಳಕಳಿಯೂ ಇಲ್ಲಿನ ಪ್ರಜ್ನಾವಂತರ ಪ್ರತಿಭಟನೆಯ ಮೂಲ ಆಶಯವಾಗಿತ್ತು. ಮುಂದಿನ ಪೀಳಿಗೆಗೆ ಕನ್ನಡ ವಿವಿ ಒಂದು ಅರ್ಥಪೂರ್ಣ ಮಾದರಿಯಾಗಿರಬೇಕು ಎಂಬುದೆ ಈ ಪ್ರತಿರೋದದ ಪ್ರಜ್ನೆಯಾಗಿತ್ತು. ಬಲಪಂಥೀಯರನ್ನು ಕರೆಸುವುದಕ್ಕೆ ಯಾವುದೆ ಬಗೆಯ ವಿರೋದ ವ್ಯಕ್ತಪಡಿಸುವುದು ಪ್ರಜಾಪ್ರಬುತ್ವ ವಿರೋದಿ ನಡವಳಿಕೆಯಾಗುತ್ತದೆ ಎನ್ನುವ ಸ್ಪಶ್ಟ ತಿಳುವಳಿಕೆ ಮೇಲಿನ ಪ್ರಜ್ನಾವಂತರಿಗಿದೆ. ಮತ್ತು ಇಂತಹ ಫ್ಯಾಸಿಸ್ಟ್ ವರ್ತನೆಯನ್ನು ಕಾಲಕಾಲಕ್ಕೆ ಖಂಡಿಸುತ್ತಲೆ ಬಂದಿದ್ದಾರೆ.

ಕಡೆಗೂ ಕಾಡುವುದೇನೆಂದರೆ “ಎಲ್ಲಾ ಬಿಟ್ಟ ಮಗ ಭಂಗಿ ಯಾಕೆ ನೆಟ್ಟ” ??

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...