Homeಅಂಕಣಗಳುಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

ಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

- Advertisement -
- Advertisement -

ಬಿ. ಶ್ರೀಪಾದ ಬಟ್ |

ಹಂಪಿ ವಿಶ್ವವಿದ್ಯಾಲಯದಲ್ಲಿನ ಇತ್ತೀಚಿನ ವಿವಾದವನ್ನು ಗಮನಿಸಿದಾಗ ಅಲ್ಲಿನ ಕುಲಪತಿಗಳಾದ ಮಲ್ಲಿಕಾ ಘಂಟಿಯವರಿಗೆ ಯಾರು ವಿದ್ಯಾಸಾದಕರು, ಯಾರು ವಿ

ದ್ವಂಸಕರು ಎಂಬುದರ ಅರಿವು ಇಲ್ಲದೆ ಹೋಯಿತೆ ಎನ್ನುವ ಪ್ರಶ್ನೆ ಮೂಡುತ್ತದೆ. ವಿಶಯವೇನೆಂದರೆ ಕನ್ನಡ ವಿವಿಯ ನುಡಿಹಬ್ಬದ ಪ್ರಯುಕ್ತ ಡಿಸೆಂಬರ್ 31, 2018-ಜನವರಿ 1, 2019 ರಂದು ಆಯೋಜಿಸಲಾಗಿದ್ದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಬಕ್ಕೆ ಸುಳ್ಳು ಬಿತ್ತಿ ದ್ವೇಶವನ್ನು ಬೆಳೆಸಿದ ಪತ್ರಕರ್ತ ವಿಶ್ವೇಶ್ವರ ಭಟ್ಟರನ್ನು ಅತಿಥಿಗಳನ್ನಾಗಿ ಕರೆದಿದ್ದು ಇಡೀ ವಿವಾದದ ಕೇಂದ್ರವಾಗಿದೆ. ಸದರಿ ಪತ್ರಕರ್ತರನ್ನು ಯಾವ ಅರ್ಹತೆಯ ಮೇಲೆ ಆಹ್ವಾನಿಸಿದ್ದೀರಿ ಎಂದು ಪ್ರಜ್ನಾವಂತರು ಪ್ರಶ್ನಿಸಿ

ಹಂಪಿ ವಿಶ್ವವಿದ್ಯಾಲಯ

ದ್ದಾರೆ. ಏಕೆಂದರೆ ವಿಶ್ವೇಶ್ವರ ಭಟ್ಟ ಎನ್ನುವ ಪತ್ರಕರ್ತ ಕನ್ನಡ ಪತ್ರಿಕೋದ್ಯಮವನ್ನು ಅದೋಗತಿಗಿಳಿಸಿದ, ಮಹಿಳೆಯರ ಕುರಿತು ಅತ್ಯಂತ ಕೀಳು ಮಟ್ಟದಲ್ಲಿ, ತುಚ್ಚವಾಗಿ ಬರೆದಂತಹ ವ್ಯಕ್ತಿ. ಹಿಂದುತ್ವ ಮತಾಂದತೆಯ ವಿಶವನ್ನು ತ

ನ್ನ ಪತ್ರಿಕೆಯಲ್ಲಿ ದಿನನಿತ್ಯ ಪ್ರಚಾರ ಮಾಡಿದ, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡೆಸಿದ ಈ ಭಟ್ಟರನ್ನು ವಿಶಭಟ್ಟ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ. ಈ ಮುಂಚೆ ಕನ್ನಡ ವಿವಿಯ ಕುಲಪತಿಗಳಾಗಿದ್ದ ಎಂ.ಎಂ. ಕಲ್ಬುರ್ಗಿಯವರ ವಿರುದ್ದ ಸುಳ್ಳುಗಳನ್ನು ಅಪಪ್ರಚಾರ ಮಾಡಲು ತಾನು ಸಂಪಾದಕನಾಗಿದ್ದ ದಿನಪತ್ರಿಕೆ ಮತ್ತು ಟಿವಿ ಚಾನಲ್ ನಲ್ಲಿ ಮತಾಂದರಿಗೆ ಸಂಪೂರ್ಣ ಅವಕಾಶವನ್ನು ಕೊಟ್ಟ ಈ ವಿ.ಭಟ್ಟರಿಗೆ ಸಂವಿದಾನ ಮೇಲೆಯೂ ಗೌರವವಿಲ್ಲ. ಸಂವಿದಾನದ ನೀತಿಸಂಹಿತೆಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸುತ್ತಿರುವ ಹಂಪಿ ವಿವಿಯು ಸಂವಿದಾನ ವಿರೋದಿಯಾದಂತಹ ವಿಶ್ವೇಶ್ವರ ಭಟ್ಟರನ್ನು ಅತಿಥಿಯನ್ನಾಗಿ ಆಯ್ಕೆ ಮಾಡುವುದು ಸಹ ಪ್ರಜಾತಾಂತ್ರಿಕ ವಿರೋದಿ ಎನಿಸಿಕೊಳ್ಳುತ್ತದೆ

ಆದರೆ ಮಲ್ಲಿಕಾ ಘಂಟಿಯವರು ಸಿಂಡಿಕೇಟ್ ಸದಸ್ಯರ ಸಬೆ ನಡೆಸದೆ, ಹಿರಿಯ ಪ್ರಾದ್ಯಾಪಕರೊಂದಿಗೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಈ ನಿರ್ಣಯವನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ. ಸ್ವತಃ ಉಪಕುಲಪತಿಗಳೆ ಒಂದೆಡೆ ಇದು ನನ್ನ ನಿರ್ದಾರ ಎಂದು ಹೇಳಿದ್ದಾರೆ. ಅಕ್ಕ ಮಹಾದೇವಿ “ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಯ್ಯ, ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಯ್ಯ” ಎಂದು ಕೇಳುತ್ತಾಳೆ. ಪ್ರಜ್ನಾವಂತರು ಇದೇ ಪ್ರಶ್ನೆಯನ್ನು ಇಂದು ಕುಲಪತಿಗಳಿಗೆ ಕೇಳುತ್ತಿದ್ದಾರೆ.

ವಿವಿಯ ಆಡಳಿತ ಮಂಡಳಿ ಮತ್ತು ಕುಲಪತಿಗಳ ಈ ಆಯ್ಕೆಯನ್ನು ವಿರೋದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋದ ವ್ಯಕ್ತವಾಯಿತು. ಸಾಹಿತಿ, ಲೇಖಕ, ಪತ್ರಕರ್ತರು, ಹೋರಾಟಗಾರರು ವಿಶ್ವೇಶ್ವರ ಬಟ್ಟರಂತಹ ಜೀವವಿರೋದಿ ಪತ್ರಕರ್ತರನ್ನು ಆಹ್ವಾನಿಸಿದ್ದನ್ನು ಸಾಮೂಹಿಕವಾಗಿ ಖಂಡಿಸಿ ಪತ್ರವನ್ನು ಬರೆದರು. ವಿವಿಯ ಈ ನಡೆಯು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಶ್ವೇಶ್ವರ ಭಟ್ಟರ ಆಯ್ಕೆಯ ಈ ನಿರ್ದಾರವನ್ನ ಕೈಬಿಡಬೇಕು ಎಂದು ಆಗ್ರಹಿಸಿದರು. ಕವಿಗಳಿಗೆ ಕವಿ-ಕಾವ್ಯ ಗೋಶ್ಟಿಯಲ್ಲಿ ಬಾಗವಹಿಸಬಾರದೆಂದು ಮನವಿಯನ್ನು ಸಹ ಮಾಡಲಾಯಿತು.

ಮಲ್ಲಿಕಾ ಘಂಟಿ

ಕವಿ, ಲೇಖಕರಾದ ಲಕ್ಷ್ಮೀಪತಿ ಕೋಲಾರ, ಹನುಮಂತ ಹಾಲಗೇರಿ, ಕೆ.ಪಿ.ನಟರಾಜ, ರಮೇಶ್ ಗಬ್ಬೂರು, ಜಾಜಿ ದೇವೆಂದ್ರಪ್ಪ, ಅರುಣ್ ಜೋಳದ ಕೂಡ್ಲಿಗಿ ಅವರು ಕವಿಗೋಶ್ಟಿಯಲ್ಲಿ ಭಾಗವಹಿಸದಿರಲು ನಿರ್ದರಿಸಿದರು.

ಹಂಪಿ ವಿವಿಯ ಬಯಲು ಚಿಂತನ ಸಂಶೋದನ ವಿದ್ಯಾರ್ಥಿ ಬಳಗದವರು ಕುಲಪತಿ ಕಚೇರಿ ಎದುರು ಪ್ರತಿಬಟಿಸಿದರು. ಮುಂದೊದಗಬಹುದಾದ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಲೆಕ್ಕಿಸದೆ ನ್ಯಾಯದ ಪರವಾಗಿ ಬೆಂಬಲಿಸಿದ ಅಲ್ಲಿನ ಸ್ನಾತಕೋತ್ತರ, ಸಂಶೋದನ ವಿದ್ಯಾರ್ಥಿಗಳ ಈ ದಿಟ್ಟತೆ ಇಡೀ ವಿವಾದಕ್ಕೆ ಹೊಸ ತಿರುವನ್ನು ತಂದಿತು. ಮೌನವಾಗಿದ್ದೀರಿ ಯಾಕೆ ಎನ್ನುವ ಪ್ರಶ್ನೆಗೆ ಗುರಿಯಾಗಿದ್ದ ವಿ.ವಿ.ಯ ಪ್ರಾದ್ಯಾಪಕರು ಕುಲಪತಿಗಳ ಏಕಪಕ್ಷೀಯ ನಿರ್ದಾರದ ವಿರುದ್ದ ತಮ್ಮ ಪ್ರತಿಭಟನೆ ದಾಖಲಿಸಿದರು. (ಆದರೆ ಕೆಲ ಪ್ರಾದ್ಯಾಪಕರು ವಿ.ಭಟ್ಟನನ್ನು ಆಹ್ವಾನಿಸಿದ್ದು ಗೊತ್ತಾದ ತಕ್ಷಣ ಕುಲಪತಿಗಳಿಗೆ ತಮ್ಮ ವಿರೋದವನ್ನು ವ್ಯಕ್ತಪಡಿಸಿದ್ದರು)

ಮೇಲಿನ ಎಲ್ಲಾ ಒತ್ತಡಗಳಿಗೆ ಮಣಿದ ಮಲ್ಲಿಕಾ ಘಂಟಿಯವರು ಎರಡು ದಿನದ ಸಮಾರೋಪ ಸಮಾರಂಬವನ್ನೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಆದರೂ ಸಹ ತಮ್ಮದೇನು ತಪ್ಪಿಲ್ಲ ಎಂಬಂತೆ ವಿ.ಭಟ್ಟರನ್ನು ಕರೆಸುವ ತಮ್ಮ ನಿರ್ದಾರವನ್ನು ಪದೆ ಪದೆ ಸಮರ್ಥಿಸಿಕೊಂಡರು. ಈ ಸಮರ್ಥನೆಯ ಭರದಲ್ಲಿ ಇಡೀ ವಿವಾದವನ್ನು ಎಡಪಂಥೀಯ ವರ್ಸಸ್ ಬಲಪಂಥೀಯ ಎಂದು ಶರಾ ಬರೆದುಬಿಟ್ಟರು. ತಮ್ಮ ಈ ಹತಾಶ ಹೇಳಿಕೆಯ ಮೂಲಕ ಜನತೆಯನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮಾಡಿದರು. ಆದರೆ ಪತ್ರಕರ್ತ ವೇಶದ ಒಬ್ಬ ಜೀವವಿರೋದಿ ವ್ಯಕ್ತಿಯನ್ನು ಹಂಪಿ ವಿವಿಯಂತಹ ಉನ್ನತ ಶಿಕ್ಷಣ ಸಂಸ್ಥೆಗೆ ಅತಿಥಿಯಾಗಿ ಆಹ್ವಾನಿಸುವುದರ ವಿರುದ್ದ ಮಾತ್ರ ಇಲ್ಲಿ ಪ್ರತಿಬಟನೆ ಇತ್ತು ಹೊರತಾಗಿ ಯಾವುದೆ ಸಿದ್ದಾಂತಗಳ ನಡುವಿನ ಜಗಳವಂತೂ ಅಲ್ಲವೆ ಅಲ್ಲ . ಕನ್ನಡ ವಿವಿಯ ಘನತೆ ಮತ್ತು ವೈಚಾರಿಕ ಪರಂಪರೆಯನ್ನು ಕಾಪಾಡುವ ಕಳಕಳಿಯೂ ಇಲ್ಲಿನ ಪ್ರಜ್ನಾವಂತರ ಪ್ರತಿಭಟನೆಯ ಮೂಲ ಆಶಯವಾಗಿತ್ತು. ಮುಂದಿನ ಪೀಳಿಗೆಗೆ ಕನ್ನಡ ವಿವಿ ಒಂದು ಅರ್ಥಪೂರ್ಣ ಮಾದರಿಯಾಗಿರಬೇಕು ಎಂಬುದೆ ಈ ಪ್ರತಿರೋದದ ಪ್ರಜ್ನೆಯಾಗಿತ್ತು. ಬಲಪಂಥೀಯರನ್ನು ಕರೆಸುವುದಕ್ಕೆ ಯಾವುದೆ ಬಗೆಯ ವಿರೋದ ವ್ಯಕ್ತಪಡಿಸುವುದು ಪ್ರಜಾಪ್ರಬುತ್ವ ವಿರೋದಿ ನಡವಳಿಕೆಯಾಗುತ್ತದೆ ಎನ್ನುವ ಸ್ಪಶ್ಟ ತಿಳುವಳಿಕೆ ಮೇಲಿನ ಪ್ರಜ್ನಾವಂತರಿಗಿದೆ. ಮತ್ತು ಇಂತಹ ಫ್ಯಾಸಿಸ್ಟ್ ವರ್ತನೆಯನ್ನು ಕಾಲಕಾಲಕ್ಕೆ ಖಂಡಿಸುತ್ತಲೆ ಬಂದಿದ್ದಾರೆ.

ಕಡೆಗೂ ಕಾಡುವುದೇನೆಂದರೆ “ಎಲ್ಲಾ ಬಿಟ್ಟ ಮಗ ಭಂಗಿ ಯಾಕೆ ನೆಟ್ಟ” ??

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....