Homeಸಾಮಾಜಿಕಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

ಇಂಟರ್‌ಸೆಕ್ಸ್ ಮಕ್ಕಳೇಕೆ ಕ್ಷೋಭೆ ಅನುಭವಿಸಬೇಕಾಗಿ ಬರುತ್ತದೆ?

- Advertisement -
- Advertisement -

ಡಾ.ಕಾರ್ತಿಕ್ ಬಿಟ್ಟು |

ಇದುವರೆಗೆ ನಾವು ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಬಯಾಲಾಜಿಕಲ್ ಆಧಾರದ ಬಗ್ಗೆ ಮಾತನಾಡಿದ್ದೇವೆ, ಅದರೊಂದಿಗೆ ಟ್ರಾನ್ಸ್ಜೆಂಡರ್ ಮತ್ತು ಇಂಟರ್‌ಸೆಕ್ಸ್ ಮಧ್ಯೆ ಇರುವ ವ್ಯತ್ಯಾಸ ಹಾಗೂ ಹೋಲಿಕೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈಗ ಆ ವ್ಯಕ್ತಿಗಳು ಬಾಲ್ಯದಿಂದ ಹಿಡಿದು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಎಂತಹ ಸಾಮಾಜಿಕ ಮತ್ತು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ ಎನ್ನುವುದನ್ನು ಚರ್ಚಿಸೋಣ. ಇಂಟರ್‌ಸೆಕ್ಸ್ ಆಗಿರಲು ಜೈವಿಕವಾದ ಕಾರಣವಿದೆ ಎಂಬುದನ್ನು ನೋಡಿದ್ದೇವೆ. ಅದರಲ್ಲೂ ಈ ವ್ಯಕ್ತಿಗಳಲ್ಲಿ ಮೇಲ್ತೋರಿಕೆಗೇ ಅದು ಕಂಡುಬಂದರೂ ಸಹ ಅವರ ಸಾಮಾಜಿಕ ಅನುಭವದಲ್ಲಿ ಸಮಸ್ಯೆಗಳು ಏಕೆ ತಲೆದೋರುತ್ತವೆ? ಏಕೆಂದರೆ, ಗಂಡು ಅಥವಾ ಹೆಣ್ಣಿನ ದೇಹಕ್ಕಿರುವ ಸಾಮಾಜಿಕ ನಿರೀಕ್ಷೆಗಳಿಗಿಂತ ಅವರು ಭಿನ್ನವಾಗಿರುತ್ತಾರೆ ಮತ್ತು ನೀವು ನಿರ್ದಿಷ್ಟ ಜೆಂಡರ್‌ನ ಗುರುತಿನೊಂದಿಗೇ ಇರಬೇಕು ಎಂದು ಒತ್ತಾಯಿಸುವ ಸಾಮಾಜಿಕ ಮತ್ತು ವೈದ್ಯಕೀಯ ಒತ್ತಡಗಳು ಅವರನ್ನು ಕಾಡುತ್ತವೆ.

ವೈದ್ಯರು ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ ಪೋಷಕರಿಗೆ ನೀಡುವ ಸಲಹೆಯೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅವರು ಆ ಮಗುವನ್ನು ಒಂದು ನಿರ್ದಿಷ್ಟ ಜೆಂಡರ್‌ಗೆ (ಜನನದ ಸಮಯದಲ್ಲಿ ವೈದ್ಯರು ನಿರ್ಧರಿಸಿದ ಜೆಂಡರ್) ಒತ್ತಾಯಪೂರ್ವಕವಾಗಿ ಒಳಗೊಳ್ಳುವಂತೆ ಸೂಚಿಸುತ್ತಾರೆ. ಹಾಗೂ ಕೆಲಸಲ ಅದಕ್ಕಿಂತ ಮುಂದೆ ಹೋಗಿ ಆ ಮಕ್ಕಳ ಜೀವನವನ್ನೇ ಬದಲಿಸಬಹುದಾದಂತಹ ಯಾತನಾಮಯ ಹಾಗೂ ಜೀವನದುದ್ದಕ್ಕೂ ಗಾಯದ ಕಲೆಗಳನ್ನು ಮಾಡಬಹುದಾದ ಶಸ್ತ್ರಚಿಕಿತ್ಸೆ ಮಾಡುವಂತೆಯೂ ಸೂಚಿಸುತ್ತಾರೆ. ಶಸ್ತ್ರಚಿಕಿತ್ಸೆಯಿಂದ ಆ ಮಕ್ಕಳ ದೇಹಗಳು ಅವರಿಗೆ ನೀಡಿದ ಜೆಂಡರ್‌ಗೆ ಅನುಗುಣವಾಗಿ ಬದಲಿಸಬಹುದು ಎನ್ನುವ ನಂಬಿಕೆಯಲ್ಲಿ ಈ ಶಸ್ತ್ರಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ ಇತ್ತೀಚಿಗೆ ಮುಂಬಯಿಯಲ್ಲಿ ಇಂಟರ್‌ಸೆಕ್ಸ್ ಮಗುವಿನ ಮೇಲೆ ಇಂತಹ ಒಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎನ್ನುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಂಟರ್‌ಸೆಕ್ಸ್ ಆಗಿರುವ ವಯಸ್ಕರು ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗೊಳ್ಳುವಂತೆ ಮಾಡುವುದನ್ನು ತಾವು ಒಪ್ಪುವುದಿಲ್ಲ ಹಾಗೂ ತಂದೆತಾಯಿಗಳು ತಮ್ಮ ಇಂಟರ್‌ಸೆಕ್ಸ್ ಮಕ್ಕಳಿಗೆ ಅವರ ವಾಸ್ತವವನ್ನು ಮುಚ್ಚುಮರೆಯಿಲ್ಲದೇ ಹೇಳಬೇಕು ಹಾಗೂ ಅದರಿಂದ ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಅರಿವು ಮೂಡಬಹುದು ಹಾಗೂ ತಮ್ಮ ಮನಸ್ಸನ್ನೂ ಅರ್ಥೈಸಿಕೊಳ್ಳಬಹುದು ಹಾಗೂ ತಾವು ಇತರರಿಗಿಂತ ಹೇಗೆ ಭಿನ್ನ ಮತ್ತು ಹೇಗೆ ಸಮಾನ ಎನ್ನುವುದನ್ನು ತಿಳಿಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆ ಮಕ್ಕಳು ಬೆಳೆದ ನಂತರ ಯಾವ ಜೆಂಡರ್‌ನೊಂದಿಗೆ ತಮ್ಮನ್ನು ತಾವು ಜೆಂಡರ್‌ನೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವರು ಎಂದು, ಅದು ಸ್ಪಷ್ಟವಾಗಿ ವ್ಯಕ್ತವಾಗುವ ಸಮಯಕ್ಕೆ ಮುಂಚೆಯೇ ಯಾರಿಗೂ ಹೇಳಲಾಗುವುದಿಲ್ಲ.

ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳ ಪೋಷಕರು ಮತ್ತು ವೈದ್ಯರು ಗಮನಿಸಬೇಕಾದ ಮುಖ್ಯವಾದ ಸಂಗತಿ ಏನೆಂದರೆ, ತಪ್ಪು ಮಾಹಿತಿಯ ಆಧಾರದ ಮೇಲೆ ಆ ಇಂಟರ್‌ಸೆಕ್ಸ್ ಮಕ್ಕಳ ಮೇಲೆ ಜನನೇಂದ್ರೀಯದ ಶಸ್ತ್ರಚಿಕಿತ್ಸೆ ಮಾಡಲು ಆತುರಪಡಬಾರದು. ಹಾಗೆ ಮಾಡಿ ಆ ಮಗುವಿನ ಜೆಂಡರ್ ಅನ್ನು ಬದಲಿಸಲು ಪ್ರಯತ್ನ ಮಾಡಬಾರದು. ನೀವು ನಿಮ್ಮ ಇಂಟರ್‌ಸೆಕ್ಸ್ ಮಗುವನ್ನೂ ಇತರೆ ಮಕ್ಕಳಂತೆ ಒಪ್ಪಿಕೊಳ್ಳಿ, ಅಷ್ಟೇ ಪ್ರೀತಿಸಿ ಹಾಗೂ ಅವರನ್ನು ವಯಸ್ಕರಾಗಲು ಬಿಡಿ. ಆಗ ಮಾತ್ರ ಅವರು ತಾವು ಗುರುತಿಸಿಕೊಳ್ಳಲು ಇಚ್ಛಿಸುವ ಜೆಂಡರ್ ಬಗ್ಗೆ ನಿರ್ಣಯ ತಾವೇ ತೆಗೆದುಕೊಳ್ಳುವರು. ಅದರೊಂದಿಗೆ ತಮ್ಮ ದೇಹವನ್ನು ಮಾರ್ಪಡಿಸಲು ವೈದ್ಯಕೀಯ ನೆರವು ಅಗತ್ಯವೋ ಇಲ್ಲವೋ ಎಂತಲೂ ತಾವೇ ನಿರ್ಣಯಿಸಬಹುದು. ಅನೇಕ ಸಲ ಇಂಟರ್‌ಸೆಕ್ಸ್ ಮಕ್ಕಳ, ಅಂದರೆ ಯಾರ ದೇಹ ಪುರುಷ ಅಥವಾ ಸ್ತ್ರೀಯರ ದೇಹಕ್ಕೆ ಪೂರಕವಾಗಿರುವುದಿಲ್ಲವೋ ಅಂತಹ ಮಕ್ಕಳ ತಂದೆತಾಯಿಗಳು ಆ ಮಕ್ಕಳನ್ನು ಪರಿತ್ಯಜಿಸಿ ಬಿಡುತ್ತಾರೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಇಂತಹ ಒಂದು ಮಗುವನ್ನು ಯಾರಾದರೂ ದತ್ತು ತೆಗೆದುಕೊಳ್ಳಲಿ ಎಂದು ಆ ಮಗುವಿನ ಪೋಷಕರು ಬಿಟ್ಟಿದ್ದು ವರದಿಯಾಗಿತ್ತು. ಹಾಗಾಗಿ ಇಂಟರ್‌ಸೆಕ್ಸ್ ಮಕ್ಕಳಿಗೆ ತಮ್ಮ ಉಳಿವಿಗಾಗಿ ಹಾಗೂ ತಾರತಮ್ಯದ ವಿರುದ್ಧದ ಹೆಣಗಾಟ ಹುಟ್ಟಿದ ಸಮಯದಿಂದಲೇ ಪ್ರಾರಂಭವಾಗುವುದು ಅತ್ಯಂತ ದುಃಖಕರ ಸಂಗತಿ.

ವೈದ್ಯರು ಇಂಟರ್‌ಸೆಕ್ಸ್ ಮಕ್ಕಳಿಗೆ ಗಂಡು ಅಥವಾ ಹೆಣ್ಣು ಎನ್ನುವ ಒಂದು ಜೆಂಡರ್ ಅನ್ನು ನಿರ್ಣಯಿಸಿಬಿಡುತ್ತಾರೆ. ಆದರೆ ಇಂಟರ್‌ಸೆಕ್ಸ್ ಆಗಲು ಒಂದು ನಿರ್ದಿಷ್ಟ ಮೂಲಕಾರಣ ಹೊಂದಿದ ಮಕ್ಕಳು, ಹುಟ್ಟಿನ ಸಂದರ್ಭದಲ್ಲಿ ತಮಗೆ ಆರೋಪಿಸಲಾದ ಜೆಂಡರ್‌ಗೆ ಅನುಗುಣವಾಗಿ ಬೆಳೆಯದೇ ಇರಬಹುದು ಎನ್ನುವುದನ್ನು ಪರಿಗಣಿಸದೇ ಮಗುವಿನ ಜೆಂಡರ್ ನಿರ್ಣಯಿಸುತ್ತಾರೆ. ಒಂದು ವೇಳೆ ಆ ಇಂಟರ್‌ಸೆಕ್ಸ್ ಮಕ್ಕಳು ತಮಗೆ ವಹಿಸಿರುವ ಜೆಂಡರ್‌ದೊಂದಿಗೆ ಹೊಂದಾಣಿಕೆಯಾದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುವುದಿಲ್ಲ, ಅವರು ಸಿಸ್‌ಜೆಂಡರ್ ಆಗುತ್ತಾರೆ. ಹಾಗೂ ಒಂದು ವೇಳೆ ತಮಗೆ ನೀಡಿರುವ ಜೆಂಡರ್‌ನೊಂದಿಗೆ ಹೊಂದಾಣಿಕೆ ಆಗದಿದ್ದಲ್ಲಿ ಅವರು ಟ್ರಾನ್ಸ್ಜೆಂಡರ್ ಆಗುತ್ತಾರೆ. ಹಾಗಾಗಿ ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎನ್ನುವ ಎರಡೂ ಬೇರೆಯ ಬಗೆಗಳೇ ಆಗಿದ್ದು, ಎರಡೂ ತನ್ನದೇ ಆದ ಆರ್ಥ ಮತ್ತು ಸಾಮಾಜಿಕ ಪಯಣಗಳನ್ನು ಹೊಂದಿರುತ್ತವೆ. ಆದರೆ ಕೆಲವರು ಇಂಟರ್‌ಸೆಕ್ಸ್ ಮತ್ತು ಟ್ರಾನ್ಸ್ಜೆಂಡರ್ ಎರಡೂ ಒಟ್ಟಿಗೇ ಆಗಿರಲೂ ಸಾಧ್ಯ.

ಟ್ರಾನ್ಸ್ಜೆಂಡರ್ ಮಕ್ಕಳ ಅನುಭವಗಳೇನು? ಕೆಲವು ಟ್ರಾನ್ಸ್ಜೆಂಡರ್ ಮಕ್ಕಳು ತಮಗೆ ವಹಿಸಿದ ಜೆಂಡರ್‌ಗಿಂತ ತಾವು ಭಿನ್ನ ಎಂದು 3 ವರ್ಷದ ಚಿಕ್ಕ ವಯಸ್ಸಿನಲ್ಲೇ ಗುರುತಿಸಿಬಿಡುತ್ತಾರೆ. ಇನ್ನಿತರರು ತಾವು ಪ್ರೌಢಾವಸ್ಥೆಗೆ ಬಂದಾಗ ಗುರುತಿಸುತ್ತಾರೆ ಹಾಗೂ ಇನ್ನೂ ಕೆಲವರು ಇನ್ನಷ್ಟು ತಡವಾಗಿಯೂ ಗುರುತಿಸುವುದುಂಟು. ಇಂತಹ ಒಂದು ಪ್ರಸಂಗವನ್ನು ಊಹಿಸಿ, ಒಬ್ಬ ಟ್ರಾನ್ಸ್ಜೆಂಡರ್ ಮಗು, ಆ ಮಗುವನ್ನು ಪೋಷಕರು ಗಂಡು ಎಂದು ನೋಡುತ್ತಿರುವ ಆ ಮಗು ಅಳುತ್ತ ಬಂದು ತನ್ನ ತಂದೆತಾಯಿಗಳಿಗೆ ತನ್ನ ಶಿಶ್ನವನ್ನು ತೆಗೆದುಹಾಕಬಹುದೇ ಎಂದು ಕೇಳುತ್ತದೆ ಅಥವಾ, ಹೆಣ್ಣುಮಗು ಎಂದು ನಿರ್ಧರಿಸಲಾದ ಆ ಮಗು, ತನ್ನ ತಂದೆತಾಯಿಗೆ ನಾಳೆ ನಾನು ನಿದ್ರೆಯಿಂದ ಎದ್ದಾಗ ಒಬ್ಬ ಹುಡುಗನಾಗಿ ಏಳಬಹುದೇ ಎಂದು ಕೇಳುತ್ತದೆ. ಇದರಿಂದ ತಂದೆತಾಯಿಗಳಿಗೆ ತುಂಬಾ ಗೊಂದಲವುಂಟಾಗಬಹುದು ಹಾಗೂ ಆ ಮಗುವಿನ ಬೆಳವಣಿಗೆಯ ಒಂದು ಹಂತ ಎಂತಲೋ ಅಥವಾ ಆ ಮಗುವಿನ ‘ಜೆಂಟರ್ ಐಡೆಂಟಿಟಿ ಡಿಸ್‌ಫೋರಿಯಾ’ ಎಂದು ಕರೆಯಲಾಗುವ ಕ್ಷೋಭೆ ತನ್ನಿಂತಾನೆ ಕಡಿಮೆಯಾಗಬಹುದು ಎಂದು ಭಾವಿಸುತ್ತಾರೆ. ತನ್ನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸರಿಯಾದ ವಾತಾವರಣ ಸಿಗದಾಗ ಆ ಮಕ್ಕಳು ತಮ್ಮ ಭಾವನೆಗಳನ್ನು ಪ್ರಕಟಿಸಿದೇ ತಮ್ಮಲ್ಲೇ ಹುದುಗಿಸಿಡಲು ಪ್ರಯತ್ನಿಸುತ್ತಾರೆ. ಹಾಗೂ ಅದರ ಬಗ್ಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಡಿಸ್‌ಫೋರಿಯಾ ಹೊಂದಿರುವ ಕೆಲವು ಮಕ್ಕಳು ತಾವು ಗುರುತಿಸಿಕೊಳ್ಳಲಿಚ್ಛಿಸುವ ಜೆಂಡರ್‌ನಂತೆ ತುಂಬಾ ತೀವ್ರವಾಗಿ ವರ್ತಿಸುತ್ತಾರೆ, ಹಾಗಾದಾಗ ಕೆಲವು ಪೋಷಕರು ಆ ಮಗುವಿನ ಜೆಂಡರ್ ಇದೇ ಇರಬಹುದು ಎಂದು ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಪೋಷಕರು ಮಗುವಿನೊಂದಿಗೆ ತುಂಬಾ ಅಹಿತವಾಗಿ ಹಾಗೂ ಕೆಲವು ಸಲ ಹಿಂಸಾತ್ಮಕವಾಗಿ ವರ್ತಿಸುತ್ತಾರೆ.

ಟ್ರಾನ್ಸ್ಜೆಂಡರ್ ಮಗುವೊಂದು ವಯಸ್ಕರಾಗುವ ಅನುಭವವನ್ನು ತಿಳಿದುಕೊಳ್ಳಲು ನಾವು ಈ ಡಿಸ್‌ಫೋರಿಯಾ ಅನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ, ವಿಶೇಷವಾಗಿ ಪ್ರೌಢಾವಸ್ಥೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದಾಗ. ಡಿಸ್‌ಫೋರಿಯಾ ಅಂದರೆ, ತನಗೆ ನೀಡಿರುವ ಜೆಂಡರ್‌ನೊಂದಿಗಿರುವ ಕ್ಷೋಭೆಯ ಭಾವನೆ ಅಥವಾ ಬೇರ್ಪಡಿಕೆ. ಈ ಡಿಸ್‌ಫೋರಿಯಾ ವಿವಿಧ ಸ್ವರೂಪಗಳನ್ನು ಪಡೆದುಕೊಳ್ಳಬಹುದು ಹಾಗೂ ಟ್ರಾನ್ಸ್ಜೆಂಡರ್ ಆಗಿ ಜೀವನ ಸಾಗಿಸುವ ಒಬ್ಬ ವ್ಯಕ್ತಿಯ ಅನುಭವ ಈ ಡಿಸ್‌ಫೋರಿಯಾದ ಅನುಭವವೇ ಆಗಿರುತ್ತದೆ. ನಮ್ಮ ಸಮಾಜವು ಟ್ರಾನ್ಸ್ಜೆಂಡರ್ ವ್ಯಕ್ತಿಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸದೇ ಈ ಸಮುದಾಯಕ್ಕೆ ಹೇಗೆ ಸಹಕಾರಿಯಾಗಬಲ್ಲದು ಎನ್ನುವುದನ್ನು ನಾವೆಲ್ಲರೂ ಸೇರಿ ಚಿಂತಿಸಬೇಕಿದೆ.

(ಅನುವಾದ: ಡಾ.ರಾಜಶೇಖರ್ ಅಕ್ಕಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ

ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ದ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. "ಪತ್ರಿಕಾಗೋಷ್ಠಿಯ ಮೂಲಕ...

ಕೇರಳದಲ್ಲಿ ಸರ್ಕಾರ ಬದಲಾವಣೆಗೆ ಕವಿ ಸಚ್ಚಿದಾನಂದನ್ ಕರೆಗೆ ಎಡಪಕ್ಷಗಳ ತೀವ್ರ ವಿರೋಧ; ಇದು ಸಾರ್ವಜನಿಕ ಭಾವನೆ ಎಂದ ವಿಪಕ್ಷಗಳು

ಕೇರಳದಲ್ಲಿ ನಿರಂತರ ಆಡಳಿತ ಅಪೇಕ್ಷಣೀಯವಲ್ಲ ಮತ್ತು ಅಧಿಕಾರವು ರಾಜಕೀಯ ರಂಗಗಳ ನಡುವೆ ಪರ್ಯಾಯವಾಗಿರಬೇಕು ಎಂದು ಹಿರಿಯ ಕವಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಸಚ್ಚಿದಾನಂದನ್ ಹೇಳಿದ್ದಾರೆ. ಈ ಹೇಳಿಕೆ ಆಡಳಿತಾರೂಢ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಣೆ; ದೀಪಕ್ ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿ ಬಂಧನ

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಿಸಿದ್ದ ಜಿಮ್ ಮಾಲೀಕ ದೀಪಕ್ ಕುಮಾರ್ (ಮೊಹಮ್ಮದ್ ದೀಪಕ್) ಅವರನ್ನು ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಪೊಲೀಸರು ಸೋಮವಾರ (ಫೆ.9) ಬಂಧಿಸಿದ್ದಾರೆ. ಬಿಹಾರದ...

ಬಾಂಗ್ಲಾದೇಶ: ಚುನಾವಣೆಗೂ ಮುನ್ನ 62 ವರ್ಷದ ಹಿಂದೂ ಅಕ್ಕಿ ವ್ಯಾಪಾರಿ ಸುಶೇನ್ ಚಂದ್ರ ಸರ್ಕಾರ್ ಹತ್ಯೆ

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು, ಸೋಮವಾರ ತಡರಾತ್ರಿ ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಅಕ್ಕಿ ವ್ಯಾಪಾರಿಯೊಬ್ಬರನ್ನು ಅವರ ಅಂಗಡಿಯೊಳಗೆ ಹತ್ಯೆಯಾಗಿದೆ.  ತ್ರಿಶಾಲ್ ಉಪಜಿಲಾದ ಬೋಗರ್ ಬಜಾರ್ ಛೇದಕದಲ್ಲಿರುವ "ಮೆಸರ್ಸ್ ಭಾಯ್...

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಮಸೀದಿ ಕೆಡವಿದ ಉತ್ತರ ಪ್ರದೇಶ ಸರ್ಕಾರ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಉತ್ತರ ಪ್ರದೇಶ ಆಡಳಿತವು ಬರೇಲಿ ಜಿಲ್ಲೆಯ ಮಸೀದಿಯನ್ನು ನೆಲಸಮಗೊಳಿಸಿದೆ. ಮಸೀದಿ ನಿರ್ಮಾಣ ಕುರಿತಾದ ಪ್ರಕರಣ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಪಾರಿಯಾ...

‘ನಾನು ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ’ : ಜನರಲ್ ನರವಾಣೆ ಪುಸ್ತಕದ ಕುರಿತ ಪ್ರಕಾಶಕರ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆಯ ಪ್ರಕಾಶಕರ ವಿರುದ್ಧ ರಾಹುಲ್ ಗಾಂಧಿ ಮಂಗಳವಾರ (ಫೆ.10) ಗಂಭೀರ ಆರೋಪ ಮಾಡಿದ್ದಾರೆ. ನರವಾಣೆ ಅವರ ನೆನಪುಗಳ ಆಧಾರಿತ ಪುಸ್ತಕವು ಈಗಾಗಲೇ ಮಾರಾಟಕ್ಕೆ...

‘ಆದಿತ್ಯನಾಥನ ಆಡಳಿತದಲ್ಲಿ ಬ್ರಾಹ್ಮಣರು ಅಸುರಕ್ಷಿತರು, ಸನಾತನಿಗಳು ಎಂದಿಗೂ ಮರೆಯುವುದಿಲ್ಲ’ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನ ಬಂಧನ

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಪತ್ರಕರ್ತರೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು...

ಹಿಮಂತ ಬಿಸ್ವಾ ಶರ್ಮಾ ‘ಗುಂಡು ಹಾರಿಸುವ’ ವಿಡಿಯೋ ವಿರುದ್ಧದ ಅರ್ಜಿ; ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಿರ್ದಿಷ್ಟ ಸಮುದಾಯದ ಸದಸ್ಯರ ಮೇಲೆ ಗುರಿಯಿಟ್ಟು ರೈಫಲ್‌ನಿಂದ ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಡಪಂಥೀಯ...

ನರವಾಣೆಯ ಅಪ್ರಕಟಿತ ಆತ್ಮಚರಿತ್ರೆ ಪ್ರಸಾರ ಆರೋಪ : ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸರು

ಮಾಜಿ ಭೂಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ"ಯ ಪ್ರಸಾರ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಪುಸ್ತಕದ ವಿಷಯಗಳನ್ನು ಪ್ರತಿಪಕ್ಷ...

ನರವಾಣೆ ಅವರ ಆತ್ಮಚರಿತ್ರೆಯ ಯಾವುದೇ ಪ್ರತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ: ಪೆಂಗ್ವಿನ್ ಪ್ರಕಾಶನ ಸ್ಪಷ್ಟನೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಗೆ ವಿಶೇಷ ಪ್ರಕಾಶನ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ) ಹೇಳಿದ್ದು,...