Homeಅಂಕಣಗಳುಗಾಂಧೀಜಿ 'ತತ್ವರಹಿತ ರಾಜಕೀಯ' ಪಾತಕವೆಂದರು, ಆದರೆ....

ಗಾಂಧೀಜಿ ‘ತತ್ವರಹಿತ ರಾಜಕೀಯ’ ಪಾತಕವೆಂದರು, ಆದರೆ….

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, "ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ.

- Advertisement -
- Advertisement -

| ಎಚ್. ಎಸ್. ದೊರೆಸ್ವಾಮಿ |

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, “ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ. ಅಷ್ಟೇಅಲ್ಲ ಆಂಧ್ರದಲ್ಲಿ, ತೆಲಂಗಾಣದಲ್ಲಿ, ಹರಿಯಾಣದಲ್ಲಿ, ಮದ್ರಾಸ್ ಪ್ರಾಂತ್ಯದಲ್ಲಿ ನಡೆಯುತ್ತಿರುವುದು ಕುಟುಂಬ ರಾಜಕೀಯ. ಅದಕ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ನೀವು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಿರಿ’ ಎಂದು ಹೇಳಿ ಬಂದಿದ್ದಾರೆಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಕುಟುಂಬ ರಾಜಕೀಯ ನಮ್ಮ ದೇಶಕ್ಕೆ ಅಂಟಿರುವ ಮಹಾವ್ಯಾಧಿ. ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ ಎಂಬುದು ದೇಶದ ದುರ್ದೈವ.

ನಮ್ಮ ಸಂವಿಧಾನವನ್ನು ರಚಿಸಿದವರು ಭಾರತವು ಪ್ರಜಾತಂತ್ರವನ್ನು ಪಾಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ 562 ಸಂಸ್ಥಾನಿಕ ರಾಜರುಗಳಿದ್ದರು. ನಾವಷ್ಟೇ ಪೃಥ್ವೀಪತಿಗಳೆಂದು ಅವರು ಭಾವಿಸಿದ್ದರು. ಈ ಪೃಥ್ವೀಪತಿಗಳು ದೇವರ ಅಂಶ ಎಂದು ಅಂದಿನ ಸಮಾಜ ಒಪ್ಪಿಕೊಂಡಿತ್ತು. ಇಂಗ್ಲೆಂಡಿನಲ್ಲಿ ಒಂದು ಭಾವನೆಯಿತ್ತು. ಅದೆಂದರೆ The King does no wrong! ರಾಜನು ತಪ್ಪೇ ಮಾಡುವುದಿಲ್ಲ, ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಿಲ್ಲ ಎಂದೇ ಇದಕ್ಕೆ ಅರ್ಥ.

ಈ ರಾಜರುಗಳಿಗೆ, ತಾವು ಆಳ್ವಿಕೆ ಮಾಡುವ ಈ ರಾಜ್ಯವೆಲ್ಲ ತನ್ನ ಸ್ವತ್ತು, ಇದನ್ನು ಪ್ರಶ್ನಿಸುವ ಹಕ್ಕು ಯಾವ ಪ್ರಜೆಗೂ ಇಲ್ಲ ಎಂಬ ಭಾವನೆ ಇತ್ತು. ಸ್ವಾತಂತ್ರ್ಯ ಬಂದನಂತರ ಸರ್ದಾರ್ ಪಟೇಲರು ಈ 562 ರಾಜರಿಂದಲೂ ರಾಜತ್ವ ಅಧಿಕಾರ ಕಿತ್ತುಕೊಂಡು ಸಂಸ್ಥಾನಗಳಲ್ಲಿ ಪ್ರಜಾರಾಜ್ಯ ಸ್ಥಾಪಿಸಿದರು. ಸ್ವಾತಂತ್ರ್ಯ ಪ್ರಾಪ್ತವಾದ ಈ 72 ವರ್ಷಗಳಲ್ಲಿ ರಾಜಕೀಯ ಬದಲಾಗುತ್ತಾ ಬಂತು. ನೆಹರೂ ಸಂತತಿಯವರು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದರು. ಅವರನ್ನು ಅನುಸರಿಸಿ ಒಂದೊಂದು ರಾಜ್ಯದಲ್ಲೂ ಒಂದೊಂದು ಮನೆತನದವರೂ ತಾವು ರಚಿಸಿದ ರಾಜಕೀಯ ಪಕ್ಷವನ್ನು ತಮ್ಮ ಕುಟುಂಬ ರಾಜಕೀಯವಾಗಿ ಪರಿವರ್ತನೆ ಮಾಡಿದರು.

ಆದರೆ ಹಾಗೆಂದು ಅವರ್ಯಾರು ಇದನ್ನು ಜಗಜ್ಜಾಹೀರು ಮಾಡಲಿಲ್ಲ. ಚಾಣಾಕ್ಷತೆಯಿಂದ ಕುಟುಂಬ ರಾಜಕೀಯವನ್ನು ಬೆಳೆಸುತ್ತಾ ಬಂದರು. ಮೊದಮೊದಲು ನಮ್ಮದು ಕುಟುಂಬ ರಾಜಕೀಯ ಎಂಬುದನ್ನು ಸಮರ್ಥನೆ ಮಾಡುತ್ತಲೂ ಹಿಂಜರಿಯುತ್ತಿದ್ದರು. ಪ್ರಜಾಪ್ರಭುತ್ವ ತತ್ವಗಳನ್ನೇ ಆಚರಣೆಗೆ ತಂದಿದ್ದೇವೆ ಎಂಬ ಭ್ರಾಂತಿ ಹುಟ್ಟಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲೂ ಮುಂದಾದರು. ನಮ್ಮ ಮನೆಯವರಿಗೆ ಒಬ್ಬಿಬ್ಬರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕೊಟ್ಟ ಮಾತ್ರಕ್ಕೆ ಇದನ್ನು ಕುಟುಂಬ ರಾಜಕೀಯ ಎಂದು ಏಕೆ ಬೊಬ್ಬೆ ಹೊಡೆಯುತ್ತೀರಿ ಎಂದರು. ಕಾಲಕ್ರಮೇಣ ಮನೆಮಂದಿಗೆಲ್ಲ ಚುನಾವಣೆಗೆ ಸೀಟು ನೀಡಲು ಆರಂಭಿಸಿದಾಗ ಜನಕ್ಕೆ ಇವರ ಹುನ್ನಾರ ಗೊತ್ತಾಯಿತು.

ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಜನ ತಿರುಗಿಬಿದ್ದರು. ಚುನಾವಣೆಯಲ್ಲಿ ಆ ಮನೆತನದ ಕೆಲವರನ್ನು ಪರಾಭವಗೊಳಿಸಲು ಉದ್ಯುಕ್ತರಾದರು. ಈಗ ಲೋಕಕ್ಕೆ ಗೊತ್ತಾಯಿತು, ಇವರೆಲ್ಲ ಕುಟುಂಬ ರಾಜಕೀಯಕ್ಕೆ ಪ್ರಜಾಪ್ರಭುತ್ವವನ್ನು ಬಲಿ ಕೊಡುತ್ತಿದ್ದಾರೆಂಬುದು. ಆದರೆ ಕುಟುಂಬ ರಾಜಕೀಯ ನಡೆಸಿದವರಿಗೆ ಈಗ ತಮ್ಮನ್ನು ಸಮರ್ಥಿಸಿಕೊಳ್ಳುವ ಧೈರ್ಯ ಬಂದಿದೆ. ರಾಹುಲ್ ಗಾಂಧಿಗೆ ಕುಮಾರಸ್ವಾಮಿಯವರು ಕುಟುಂಬ ರಾಜಕಾರಣದ ಧೈರ್ಯ ತುಂಬಿ ಬಂದಿದ್ದಾರೆ ಎನ್ನುವ ಸುದ್ದಿ ಇದನ್ನು ಸಾಬೀತು ಮಾಡುತ್ತದೆ.

ಇದು ನಿಜವೇ ಆಗಿದ್ದರೆ, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ದೊಡ್ಡ ದುರಂತವಾಗಲಿದೆ. ಜನ ಅಜ್ಞಾನಿಗಳು, ಅಸಹಾಯಕರು, ಅವರನ್ನು ತುಳಿದಷ್ಟು ನಮ್ಮ ಬೇಳೆ ಬೇಯಿಸಿ ಕೊಳ್ಳಬಹುದು ಎಂದು ಈ ಕುಟುಂಬ ರಾಜಕಾರಣದ ಫಲಾನುಭವಿಗಳು ಭಾವಿಸಿರುವಂತಿದೆ.

ಬಹುಶಃ ದೇವೇಗೌಡರಿಗೆ ತಮ್ಮ ಸೋಲಿಗೆ ಕಾರಣ ತಮ್ಮ ಕುಟುಂಬ ರಾಜಕಾರಣ ಎಂಬುದು ಈಗ ಮನವರಿಕೆಯಾಗಿರಬಹುದು. ಆದರೆ ಅದನ್ನು ಅವರೆಲ್ಲು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲವಷ್ಟೆ. ಅವರು ಇತ್ತೀಚಿನ ಸಭೆ ಸಮ್ಮೇಳನಗಳಲ್ಲಿ ಅಧಿಕಾರವನ್ನು ಎಲ್ಲ ಕೋಮಿನ ನಾಯಕರೊಡನೆ ಹಂಚಿಕೊಳ್ಳುವ ಮಾತನಾಡುತ್ತಿದ್ದಾರೆ. ಕುಟುಂಬ ರಾಜಕೀಯ ಮುಂದುವರೆಸುತ್ತಾ, ಈ ಸೋಗಲಾಡಿ ನೀತಿಯನ್ನು ಅನುಷ್ಠಾನಕ್ಕೆ ತರುವ ಉದ್ದೇಶ ಅವರದಾಗಿರಬಹುದು. ಜನರನ್ನು ಒಂದು ಸಾರಿಯೋ, ಎರಡು ಸಾರಿಯೋ ಯಾಮಾರಿಸಬಹುದು. ಅವರನ್ನು ಸದಾಕಾಲ ವಂಚಿಸಲು ಸಾಧ್ಯವಿಲ್ಲ ಎಂಬ ಗಾದೆ ಇದೆ.

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಈ ಸಾರಿ ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿ ಕರ್ನಾಟಕದ ಜನ (ಇದ್ದಕ್ಕಿದ್ದ ಹಾಗೆ) ಮತಾಂಧರಾಗಿ ಬಿಟ್ಟಿದ್ದಾರೆ ಎಂಬ ತೀರ್ಮಾನಕ್ಕೆ ಬರಬೇಡಿ. ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಅನೇಕ ಶ್ರೇಷ್ಠ ಕವಿಗಳು, ಬರಹಗಾರರು, ವಿಚಾರವಂತರು, ಕಲಾವಿದರು, ಕರ್ನಾಟಕದಲ್ಲಿದ್ದಾರೆ. ಇವರ್ಯಾರು partian ಗಳಲ್ಲ. ಇಂದಿರಾಗಾಂಧಿ ತನ್ನ ಪ್ರಧಾನಿ ಸ್ಥಾನ ಅಭದ್ರವೆಂದೆನಿಸಿದಾಗ ತನ್ನ ಮಕ್ಕಳನ್ನೇ ಅಧಿಕಾರಕ್ಕೆ ತರುವ ವಿಚಾರ ಮಾಡಿದರು. ಅಲ್ಲಿಂದ ಆರಂಭವಾಯಿತು ಕುಟುಂಬ ರಾಜಕಾರಣ. ದೇವೇಗೌಡರು ತನ್ನ ಮಗನನ್ನು ರಾಜಕೀಯಕ್ಕೆ ತಂದಿದ್ದು ಅವರನ್ನು ಗದ್ದುಗೆಗೆ ಕೂಡಿಸುವ ದೃಷ್ಟಿಯಿಂದ. ಭಾಜಪ ಜೊತೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಏಕೈಕ ಉದ್ದೇಶದಿಂದ. ಆಮೇಲೆ ತಮ್ಮ ಕುಟುಂಬದ ರೇವಣ್ಣ, ಅನಿತಾ, ಭವಾನಿ, ಪ್ರಜ್ವಲ್, ನಿಖಿಲ್ ಕುಮಾರಸ್ವಾಮಿ ಹೀಗೆ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ರಾಜಕೀಯಕ್ಕೆ ಎಳೆದರು. ರಾಜಕೀಯ ಸಮ್ಮೇಳನ ನಡೆಸಿ, ಅಲ್ಲಿ ‘ನನ್ನನ್ನೂ ಜನ ಕುಟುಂಬ ರಾಜಕೀಯ ಮಾಡುವವನು ಎಂದು ಜರಿಯುತ್ತಾರೆ’ ಎಂದು ಹೇಳಿ ‘ಗಳಗಳ’ ಅತ್ತುಬಿಟ್ಟರು. ಪತ್ರಿಕಾಗೋಷ್ಠಿಯ ಮುಂದೆಯೂ ದೃಶ್ಯ ಮಾಧ್ಯಮಗಳ ಮುಂದೆಯೂ ಅಳುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಮುಂದೆ ಪಾರ್ಲಿಮೆಂಟ್ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ಮಧ್ಯೆ ಘರ್ಷಣೆ ಆರಂಭವಾಯಿತು. ಇದು ಸಾಲದೆಂಬಂತೆ, ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಸರ್ಕಾರದ ಇರುವಿಗೆ ಭಂಗ ಬರುವಂತೆ ರೆಸಾರ್ಟ್ ರಾಜಕೀಯಕ್ಕೆ ಮುಂದಾದರು. ಇದೆಲ್ಲ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಅಭ್ಯರ್ಥಿಗಳೆಲ್ಲರೂ ಚುನಾವಣೆಯಲ್ಲಿ ಸೋತರು.

ಈ ಯಾದವಿ ಕಲಹ ಕರ್ನಾಟಕದ ಘಟಾನುಘಟಿ ನಾಯಕರೆಲ್ಲರನ್ನು ಆಹುತಿ ತೆಗೆದುಕೊಂಡಿತು.

ತತ್ವ ರಹಿತ ರಾಜಕೀಯ ಮಾಡುವುದು ಸಪ್ತ ಸಾಮಾಜಿಕ ಪಾತಕಗಳಲ್ಲಿ ಒಂದು ಎಂದು ಗಾಂಧೀಜಿ ಹೇಳಿದ್ದಾರೆ. ಆದರೆ, ಈಗ ಭಾರತದಲ್ಲಿ ಆಚರಣೆಯಲ್ಲಿರುವುದು ಅದೇ ತತ್ವರಹಿತ, ಸ್ವಾರ್ಥಹಿತದ ರಾಜಕೀಯ ಎನ್ನುವ ದುರಂತವನ್ನು ನಾವೆಲ್ಲರೂ
ಒಪ್ಪಿಕೊಳ್ಳಲೇಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...