Homeಅಂಕಣಗಳುಗಾಂಧೀಜಿ 'ತತ್ವರಹಿತ ರಾಜಕೀಯ' ಪಾತಕವೆಂದರು, ಆದರೆ....

ಗಾಂಧೀಜಿ ‘ತತ್ವರಹಿತ ರಾಜಕೀಯ’ ಪಾತಕವೆಂದರು, ಆದರೆ….

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, "ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ.

- Advertisement -
- Advertisement -

| ಎಚ್. ಎಸ್. ದೊರೆಸ್ವಾಮಿ |

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, “ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ. ಅಷ್ಟೇಅಲ್ಲ ಆಂಧ್ರದಲ್ಲಿ, ತೆಲಂಗಾಣದಲ್ಲಿ, ಹರಿಯಾಣದಲ್ಲಿ, ಮದ್ರಾಸ್ ಪ್ರಾಂತ್ಯದಲ್ಲಿ ನಡೆಯುತ್ತಿರುವುದು ಕುಟುಂಬ ರಾಜಕೀಯ. ಅದಕ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ನೀವು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಿರಿ’ ಎಂದು ಹೇಳಿ ಬಂದಿದ್ದಾರೆಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಕುಟುಂಬ ರಾಜಕೀಯ ನಮ್ಮ ದೇಶಕ್ಕೆ ಅಂಟಿರುವ ಮಹಾವ್ಯಾಧಿ. ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ ಎಂಬುದು ದೇಶದ ದುರ್ದೈವ.

ನಮ್ಮ ಸಂವಿಧಾನವನ್ನು ರಚಿಸಿದವರು ಭಾರತವು ಪ್ರಜಾತಂತ್ರವನ್ನು ಪಾಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ 562 ಸಂಸ್ಥಾನಿಕ ರಾಜರುಗಳಿದ್ದರು. ನಾವಷ್ಟೇ ಪೃಥ್ವೀಪತಿಗಳೆಂದು ಅವರು ಭಾವಿಸಿದ್ದರು. ಈ ಪೃಥ್ವೀಪತಿಗಳು ದೇವರ ಅಂಶ ಎಂದು ಅಂದಿನ ಸಮಾಜ ಒಪ್ಪಿಕೊಂಡಿತ್ತು. ಇಂಗ್ಲೆಂಡಿನಲ್ಲಿ ಒಂದು ಭಾವನೆಯಿತ್ತು. ಅದೆಂದರೆ The King does no wrong! ರಾಜನು ತಪ್ಪೇ ಮಾಡುವುದಿಲ್ಲ, ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಿಲ್ಲ ಎಂದೇ ಇದಕ್ಕೆ ಅರ್ಥ.

ಈ ರಾಜರುಗಳಿಗೆ, ತಾವು ಆಳ್ವಿಕೆ ಮಾಡುವ ಈ ರಾಜ್ಯವೆಲ್ಲ ತನ್ನ ಸ್ವತ್ತು, ಇದನ್ನು ಪ್ರಶ್ನಿಸುವ ಹಕ್ಕು ಯಾವ ಪ್ರಜೆಗೂ ಇಲ್ಲ ಎಂಬ ಭಾವನೆ ಇತ್ತು. ಸ್ವಾತಂತ್ರ್ಯ ಬಂದನಂತರ ಸರ್ದಾರ್ ಪಟೇಲರು ಈ 562 ರಾಜರಿಂದಲೂ ರಾಜತ್ವ ಅಧಿಕಾರ ಕಿತ್ತುಕೊಂಡು ಸಂಸ್ಥಾನಗಳಲ್ಲಿ ಪ್ರಜಾರಾಜ್ಯ ಸ್ಥಾಪಿಸಿದರು. ಸ್ವಾತಂತ್ರ್ಯ ಪ್ರಾಪ್ತವಾದ ಈ 72 ವರ್ಷಗಳಲ್ಲಿ ರಾಜಕೀಯ ಬದಲಾಗುತ್ತಾ ಬಂತು. ನೆಹರೂ ಸಂತತಿಯವರು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದರು. ಅವರನ್ನು ಅನುಸರಿಸಿ ಒಂದೊಂದು ರಾಜ್ಯದಲ್ಲೂ ಒಂದೊಂದು ಮನೆತನದವರೂ ತಾವು ರಚಿಸಿದ ರಾಜಕೀಯ ಪಕ್ಷವನ್ನು ತಮ್ಮ ಕುಟುಂಬ ರಾಜಕೀಯವಾಗಿ ಪರಿವರ್ತನೆ ಮಾಡಿದರು.

ಆದರೆ ಹಾಗೆಂದು ಅವರ್ಯಾರು ಇದನ್ನು ಜಗಜ್ಜಾಹೀರು ಮಾಡಲಿಲ್ಲ. ಚಾಣಾಕ್ಷತೆಯಿಂದ ಕುಟುಂಬ ರಾಜಕೀಯವನ್ನು ಬೆಳೆಸುತ್ತಾ ಬಂದರು. ಮೊದಮೊದಲು ನಮ್ಮದು ಕುಟುಂಬ ರಾಜಕೀಯ ಎಂಬುದನ್ನು ಸಮರ್ಥನೆ ಮಾಡುತ್ತಲೂ ಹಿಂಜರಿಯುತ್ತಿದ್ದರು. ಪ್ರಜಾಪ್ರಭುತ್ವ ತತ್ವಗಳನ್ನೇ ಆಚರಣೆಗೆ ತಂದಿದ್ದೇವೆ ಎಂಬ ಭ್ರಾಂತಿ ಹುಟ್ಟಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲೂ ಮುಂದಾದರು. ನಮ್ಮ ಮನೆಯವರಿಗೆ ಒಬ್ಬಿಬ್ಬರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕೊಟ್ಟ ಮಾತ್ರಕ್ಕೆ ಇದನ್ನು ಕುಟುಂಬ ರಾಜಕೀಯ ಎಂದು ಏಕೆ ಬೊಬ್ಬೆ ಹೊಡೆಯುತ್ತೀರಿ ಎಂದರು. ಕಾಲಕ್ರಮೇಣ ಮನೆಮಂದಿಗೆಲ್ಲ ಚುನಾವಣೆಗೆ ಸೀಟು ನೀಡಲು ಆರಂಭಿಸಿದಾಗ ಜನಕ್ಕೆ ಇವರ ಹುನ್ನಾರ ಗೊತ್ತಾಯಿತು.

ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಜನ ತಿರುಗಿಬಿದ್ದರು. ಚುನಾವಣೆಯಲ್ಲಿ ಆ ಮನೆತನದ ಕೆಲವರನ್ನು ಪರಾಭವಗೊಳಿಸಲು ಉದ್ಯುಕ್ತರಾದರು. ಈಗ ಲೋಕಕ್ಕೆ ಗೊತ್ತಾಯಿತು, ಇವರೆಲ್ಲ ಕುಟುಂಬ ರಾಜಕೀಯಕ್ಕೆ ಪ್ರಜಾಪ್ರಭುತ್ವವನ್ನು ಬಲಿ ಕೊಡುತ್ತಿದ್ದಾರೆಂಬುದು. ಆದರೆ ಕುಟುಂಬ ರಾಜಕೀಯ ನಡೆಸಿದವರಿಗೆ ಈಗ ತಮ್ಮನ್ನು ಸಮರ್ಥಿಸಿಕೊಳ್ಳುವ ಧೈರ್ಯ ಬಂದಿದೆ. ರಾಹುಲ್ ಗಾಂಧಿಗೆ ಕುಮಾರಸ್ವಾಮಿಯವರು ಕುಟುಂಬ ರಾಜಕಾರಣದ ಧೈರ್ಯ ತುಂಬಿ ಬಂದಿದ್ದಾರೆ ಎನ್ನುವ ಸುದ್ದಿ ಇದನ್ನು ಸಾಬೀತು ಮಾಡುತ್ತದೆ.

ಇದು ನಿಜವೇ ಆಗಿದ್ದರೆ, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ದೊಡ್ಡ ದುರಂತವಾಗಲಿದೆ. ಜನ ಅಜ್ಞಾನಿಗಳು, ಅಸಹಾಯಕರು, ಅವರನ್ನು ತುಳಿದಷ್ಟು ನಮ್ಮ ಬೇಳೆ ಬೇಯಿಸಿ ಕೊಳ್ಳಬಹುದು ಎಂದು ಈ ಕುಟುಂಬ ರಾಜಕಾರಣದ ಫಲಾನುಭವಿಗಳು ಭಾವಿಸಿರುವಂತಿದೆ.

ಬಹುಶಃ ದೇವೇಗೌಡರಿಗೆ ತಮ್ಮ ಸೋಲಿಗೆ ಕಾರಣ ತಮ್ಮ ಕುಟುಂಬ ರಾಜಕಾರಣ ಎಂಬುದು ಈಗ ಮನವರಿಕೆಯಾಗಿರಬಹುದು. ಆದರೆ ಅದನ್ನು ಅವರೆಲ್ಲು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲವಷ್ಟೆ. ಅವರು ಇತ್ತೀಚಿನ ಸಭೆ ಸಮ್ಮೇಳನಗಳಲ್ಲಿ ಅಧಿಕಾರವನ್ನು ಎಲ್ಲ ಕೋಮಿನ ನಾಯಕರೊಡನೆ ಹಂಚಿಕೊಳ್ಳುವ ಮಾತನಾಡುತ್ತಿದ್ದಾರೆ. ಕುಟುಂಬ ರಾಜಕೀಯ ಮುಂದುವರೆಸುತ್ತಾ, ಈ ಸೋಗಲಾಡಿ ನೀತಿಯನ್ನು ಅನುಷ್ಠಾನಕ್ಕೆ ತರುವ ಉದ್ದೇಶ ಅವರದಾಗಿರಬಹುದು. ಜನರನ್ನು ಒಂದು ಸಾರಿಯೋ, ಎರಡು ಸಾರಿಯೋ ಯಾಮಾರಿಸಬಹುದು. ಅವರನ್ನು ಸದಾಕಾಲ ವಂಚಿಸಲು ಸಾಧ್ಯವಿಲ್ಲ ಎಂಬ ಗಾದೆ ಇದೆ.

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಈ ಸಾರಿ ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿ ಕರ್ನಾಟಕದ ಜನ (ಇದ್ದಕ್ಕಿದ್ದ ಹಾಗೆ) ಮತಾಂಧರಾಗಿ ಬಿಟ್ಟಿದ್ದಾರೆ ಎಂಬ ತೀರ್ಮಾನಕ್ಕೆ ಬರಬೇಡಿ. ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಅನೇಕ ಶ್ರೇಷ್ಠ ಕವಿಗಳು, ಬರಹಗಾರರು, ವಿಚಾರವಂತರು, ಕಲಾವಿದರು, ಕರ್ನಾಟಕದಲ್ಲಿದ್ದಾರೆ. ಇವರ್ಯಾರು partian ಗಳಲ್ಲ. ಇಂದಿರಾಗಾಂಧಿ ತನ್ನ ಪ್ರಧಾನಿ ಸ್ಥಾನ ಅಭದ್ರವೆಂದೆನಿಸಿದಾಗ ತನ್ನ ಮಕ್ಕಳನ್ನೇ ಅಧಿಕಾರಕ್ಕೆ ತರುವ ವಿಚಾರ ಮಾಡಿದರು. ಅಲ್ಲಿಂದ ಆರಂಭವಾಯಿತು ಕುಟುಂಬ ರಾಜಕಾರಣ. ದೇವೇಗೌಡರು ತನ್ನ ಮಗನನ್ನು ರಾಜಕೀಯಕ್ಕೆ ತಂದಿದ್ದು ಅವರನ್ನು ಗದ್ದುಗೆಗೆ ಕೂಡಿಸುವ ದೃಷ್ಟಿಯಿಂದ. ಭಾಜಪ ಜೊತೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಏಕೈಕ ಉದ್ದೇಶದಿಂದ. ಆಮೇಲೆ ತಮ್ಮ ಕುಟುಂಬದ ರೇವಣ್ಣ, ಅನಿತಾ, ಭವಾನಿ, ಪ್ರಜ್ವಲ್, ನಿಖಿಲ್ ಕುಮಾರಸ್ವಾಮಿ ಹೀಗೆ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ರಾಜಕೀಯಕ್ಕೆ ಎಳೆದರು. ರಾಜಕೀಯ ಸಮ್ಮೇಳನ ನಡೆಸಿ, ಅಲ್ಲಿ ‘ನನ್ನನ್ನೂ ಜನ ಕುಟುಂಬ ರಾಜಕೀಯ ಮಾಡುವವನು ಎಂದು ಜರಿಯುತ್ತಾರೆ’ ಎಂದು ಹೇಳಿ ‘ಗಳಗಳ’ ಅತ್ತುಬಿಟ್ಟರು. ಪತ್ರಿಕಾಗೋಷ್ಠಿಯ ಮುಂದೆಯೂ ದೃಶ್ಯ ಮಾಧ್ಯಮಗಳ ಮುಂದೆಯೂ ಅಳುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಮುಂದೆ ಪಾರ್ಲಿಮೆಂಟ್ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ಮಧ್ಯೆ ಘರ್ಷಣೆ ಆರಂಭವಾಯಿತು. ಇದು ಸಾಲದೆಂಬಂತೆ, ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಸರ್ಕಾರದ ಇರುವಿಗೆ ಭಂಗ ಬರುವಂತೆ ರೆಸಾರ್ಟ್ ರಾಜಕೀಯಕ್ಕೆ ಮುಂದಾದರು. ಇದೆಲ್ಲ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಅಭ್ಯರ್ಥಿಗಳೆಲ್ಲರೂ ಚುನಾವಣೆಯಲ್ಲಿ ಸೋತರು.

ಈ ಯಾದವಿ ಕಲಹ ಕರ್ನಾಟಕದ ಘಟಾನುಘಟಿ ನಾಯಕರೆಲ್ಲರನ್ನು ಆಹುತಿ ತೆಗೆದುಕೊಂಡಿತು.

ತತ್ವ ರಹಿತ ರಾಜಕೀಯ ಮಾಡುವುದು ಸಪ್ತ ಸಾಮಾಜಿಕ ಪಾತಕಗಳಲ್ಲಿ ಒಂದು ಎಂದು ಗಾಂಧೀಜಿ ಹೇಳಿದ್ದಾರೆ. ಆದರೆ, ಈಗ ಭಾರತದಲ್ಲಿ ಆಚರಣೆಯಲ್ಲಿರುವುದು ಅದೇ ತತ್ವರಹಿತ, ಸ್ವಾರ್ಥಹಿತದ ರಾಜಕೀಯ ಎನ್ನುವ ದುರಂತವನ್ನು ನಾವೆಲ್ಲರೂ
ಒಪ್ಪಿಕೊಳ್ಳಲೇಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...