Homeಅಂಕಣಗಳುಗಾಂಧೀಜಿ 'ತತ್ವರಹಿತ ರಾಜಕೀಯ' ಪಾತಕವೆಂದರು, ಆದರೆ....

ಗಾಂಧೀಜಿ ‘ತತ್ವರಹಿತ ರಾಜಕೀಯ’ ಪಾತಕವೆಂದರು, ಆದರೆ….

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, "ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ.

- Advertisement -
- Advertisement -

| ಎಚ್. ಎಸ್. ದೊರೆಸ್ವಾಮಿ |

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ, “ನಿಮ್ಮದೂ ಕುಟುಂಬ ರಾಜಕೀಯ, ನಮ್ಮದೂ ಕುಟುಂಬ ರಾಜಕೀಯ. ಅಷ್ಟೇಅಲ್ಲ ಆಂಧ್ರದಲ್ಲಿ, ತೆಲಂಗಾಣದಲ್ಲಿ, ಹರಿಯಾಣದಲ್ಲಿ, ಮದ್ರಾಸ್ ಪ್ರಾಂತ್ಯದಲ್ಲಿ ನಡೆಯುತ್ತಿರುವುದು ಕುಟುಂಬ ರಾಜಕೀಯ. ಅದಕ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ನೀವು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಿರಿ’ ಎಂದು ಹೇಳಿ ಬಂದಿದ್ದಾರೆಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಕುಟುಂಬ ರಾಜಕೀಯ ನಮ್ಮ ದೇಶಕ್ಕೆ ಅಂಟಿರುವ ಮಹಾವ್ಯಾಧಿ. ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ ಎಂಬುದು ದೇಶದ ದುರ್ದೈವ.

ನಮ್ಮ ಸಂವಿಧಾನವನ್ನು ರಚಿಸಿದವರು ಭಾರತವು ಪ್ರಜಾತಂತ್ರವನ್ನು ಪಾಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ 562 ಸಂಸ್ಥಾನಿಕ ರಾಜರುಗಳಿದ್ದರು. ನಾವಷ್ಟೇ ಪೃಥ್ವೀಪತಿಗಳೆಂದು ಅವರು ಭಾವಿಸಿದ್ದರು. ಈ ಪೃಥ್ವೀಪತಿಗಳು ದೇವರ ಅಂಶ ಎಂದು ಅಂದಿನ ಸಮಾಜ ಒಪ್ಪಿಕೊಂಡಿತ್ತು. ಇಂಗ್ಲೆಂಡಿನಲ್ಲಿ ಒಂದು ಭಾವನೆಯಿತ್ತು. ಅದೆಂದರೆ The King does no wrong! ರಾಜನು ತಪ್ಪೇ ಮಾಡುವುದಿಲ್ಲ, ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಗಿಲ್ಲ ಎಂದೇ ಇದಕ್ಕೆ ಅರ್ಥ.

ಈ ರಾಜರುಗಳಿಗೆ, ತಾವು ಆಳ್ವಿಕೆ ಮಾಡುವ ಈ ರಾಜ್ಯವೆಲ್ಲ ತನ್ನ ಸ್ವತ್ತು, ಇದನ್ನು ಪ್ರಶ್ನಿಸುವ ಹಕ್ಕು ಯಾವ ಪ್ರಜೆಗೂ ಇಲ್ಲ ಎಂಬ ಭಾವನೆ ಇತ್ತು. ಸ್ವಾತಂತ್ರ್ಯ ಬಂದನಂತರ ಸರ್ದಾರ್ ಪಟೇಲರು ಈ 562 ರಾಜರಿಂದಲೂ ರಾಜತ್ವ ಅಧಿಕಾರ ಕಿತ್ತುಕೊಂಡು ಸಂಸ್ಥಾನಗಳಲ್ಲಿ ಪ್ರಜಾರಾಜ್ಯ ಸ್ಥಾಪಿಸಿದರು. ಸ್ವಾತಂತ್ರ್ಯ ಪ್ರಾಪ್ತವಾದ ಈ 72 ವರ್ಷಗಳಲ್ಲಿ ರಾಜಕೀಯ ಬದಲಾಗುತ್ತಾ ಬಂತು. ನೆಹರೂ ಸಂತತಿಯವರು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದರು. ಅವರನ್ನು ಅನುಸರಿಸಿ ಒಂದೊಂದು ರಾಜ್ಯದಲ್ಲೂ ಒಂದೊಂದು ಮನೆತನದವರೂ ತಾವು ರಚಿಸಿದ ರಾಜಕೀಯ ಪಕ್ಷವನ್ನು ತಮ್ಮ ಕುಟುಂಬ ರಾಜಕೀಯವಾಗಿ ಪರಿವರ್ತನೆ ಮಾಡಿದರು.

ಆದರೆ ಹಾಗೆಂದು ಅವರ್ಯಾರು ಇದನ್ನು ಜಗಜ್ಜಾಹೀರು ಮಾಡಲಿಲ್ಲ. ಚಾಣಾಕ್ಷತೆಯಿಂದ ಕುಟುಂಬ ರಾಜಕೀಯವನ್ನು ಬೆಳೆಸುತ್ತಾ ಬಂದರು. ಮೊದಮೊದಲು ನಮ್ಮದು ಕುಟುಂಬ ರಾಜಕೀಯ ಎಂಬುದನ್ನು ಸಮರ್ಥನೆ ಮಾಡುತ್ತಲೂ ಹಿಂಜರಿಯುತ್ತಿದ್ದರು. ಪ್ರಜಾಪ್ರಭುತ್ವ ತತ್ವಗಳನ್ನೇ ಆಚರಣೆಗೆ ತಂದಿದ್ದೇವೆ ಎಂಬ ಭ್ರಾಂತಿ ಹುಟ್ಟಿಸಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲೂ ಮುಂದಾದರು. ನಮ್ಮ ಮನೆಯವರಿಗೆ ಒಬ್ಬಿಬ್ಬರಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಕೊಟ್ಟ ಮಾತ್ರಕ್ಕೆ ಇದನ್ನು ಕುಟುಂಬ ರಾಜಕೀಯ ಎಂದು ಏಕೆ ಬೊಬ್ಬೆ ಹೊಡೆಯುತ್ತೀರಿ ಎಂದರು. ಕಾಲಕ್ರಮೇಣ ಮನೆಮಂದಿಗೆಲ್ಲ ಚುನಾವಣೆಗೆ ಸೀಟು ನೀಡಲು ಆರಂಭಿಸಿದಾಗ ಜನಕ್ಕೆ ಇವರ ಹುನ್ನಾರ ಗೊತ್ತಾಯಿತು.

ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಜನ ತಿರುಗಿಬಿದ್ದರು. ಚುನಾವಣೆಯಲ್ಲಿ ಆ ಮನೆತನದ ಕೆಲವರನ್ನು ಪರಾಭವಗೊಳಿಸಲು ಉದ್ಯುಕ್ತರಾದರು. ಈಗ ಲೋಕಕ್ಕೆ ಗೊತ್ತಾಯಿತು, ಇವರೆಲ್ಲ ಕುಟುಂಬ ರಾಜಕೀಯಕ್ಕೆ ಪ್ರಜಾಪ್ರಭುತ್ವವನ್ನು ಬಲಿ ಕೊಡುತ್ತಿದ್ದಾರೆಂಬುದು. ಆದರೆ ಕುಟುಂಬ ರಾಜಕೀಯ ನಡೆಸಿದವರಿಗೆ ಈಗ ತಮ್ಮನ್ನು ಸಮರ್ಥಿಸಿಕೊಳ್ಳುವ ಧೈರ್ಯ ಬಂದಿದೆ. ರಾಹುಲ್ ಗಾಂಧಿಗೆ ಕುಮಾರಸ್ವಾಮಿಯವರು ಕುಟುಂಬ ರಾಜಕಾರಣದ ಧೈರ್ಯ ತುಂಬಿ ಬಂದಿದ್ದಾರೆ ಎನ್ನುವ ಸುದ್ದಿ ಇದನ್ನು ಸಾಬೀತು ಮಾಡುತ್ತದೆ.

ಇದು ನಿಜವೇ ಆಗಿದ್ದರೆ, ಭಾರತದ ಪ್ರಜಾಪ್ರಭುತ್ವಕ್ಕೆ ಇದೊಂದು ದೊಡ್ಡ ದುರಂತವಾಗಲಿದೆ. ಜನ ಅಜ್ಞಾನಿಗಳು, ಅಸಹಾಯಕರು, ಅವರನ್ನು ತುಳಿದಷ್ಟು ನಮ್ಮ ಬೇಳೆ ಬೇಯಿಸಿ ಕೊಳ್ಳಬಹುದು ಎಂದು ಈ ಕುಟುಂಬ ರಾಜಕಾರಣದ ಫಲಾನುಭವಿಗಳು ಭಾವಿಸಿರುವಂತಿದೆ.

ಬಹುಶಃ ದೇವೇಗೌಡರಿಗೆ ತಮ್ಮ ಸೋಲಿಗೆ ಕಾರಣ ತಮ್ಮ ಕುಟುಂಬ ರಾಜಕಾರಣ ಎಂಬುದು ಈಗ ಮನವರಿಕೆಯಾಗಿರಬಹುದು. ಆದರೆ ಅದನ್ನು ಅವರೆಲ್ಲು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲವಷ್ಟೆ. ಅವರು ಇತ್ತೀಚಿನ ಸಭೆ ಸಮ್ಮೇಳನಗಳಲ್ಲಿ ಅಧಿಕಾರವನ್ನು ಎಲ್ಲ ಕೋಮಿನ ನಾಯಕರೊಡನೆ ಹಂಚಿಕೊಳ್ಳುವ ಮಾತನಾಡುತ್ತಿದ್ದಾರೆ. ಕುಟುಂಬ ರಾಜಕೀಯ ಮುಂದುವರೆಸುತ್ತಾ, ಈ ಸೋಗಲಾಡಿ ನೀತಿಯನ್ನು ಅನುಷ್ಠಾನಕ್ಕೆ ತರುವ ಉದ್ದೇಶ ಅವರದಾಗಿರಬಹುದು. ಜನರನ್ನು ಒಂದು ಸಾರಿಯೋ, ಎರಡು ಸಾರಿಯೋ ಯಾಮಾರಿಸಬಹುದು. ಅವರನ್ನು ಸದಾಕಾಲ ವಂಚಿಸಲು ಸಾಧ್ಯವಿಲ್ಲ ಎಂಬ ಗಾದೆ ಇದೆ.

ದೇವೇಗೌಡರು ಇನ್ನು ಮುಂದಾದರೂ ಕುಟುಂಬ ರಾಜಕೀಯಕ್ಕೆ ವಿದಾಯ ಹಾಡಿ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಗೆ ತೊಡಗುವುದು ಅವರ ರಾಜಕೀಯ ಇಳಿ ಜೀವನವನ್ನು ಕೊಂಚ ಮುತ್ಸದ್ಧಿತನಕ್ಕೆ ತಂದು ನಿಲ್ಲಿಸಬಹುದು. ಹಾಗೆಂದೇ ನಾನು ವಿನಂತಿಸಿಕೊಳ್ಳುತ್ತೇನೆ.

ಈ ಸಾರಿ ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿ ಕರ್ನಾಟಕದ ಜನ (ಇದ್ದಕ್ಕಿದ್ದ ಹಾಗೆ) ಮತಾಂಧರಾಗಿ ಬಿಟ್ಟಿದ್ದಾರೆ ಎಂಬ ತೀರ್ಮಾನಕ್ಕೆ ಬರಬೇಡಿ. ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಅನೇಕ ಶ್ರೇಷ್ಠ ಕವಿಗಳು, ಬರಹಗಾರರು, ವಿಚಾರವಂತರು, ಕಲಾವಿದರು, ಕರ್ನಾಟಕದಲ್ಲಿದ್ದಾರೆ. ಇವರ್ಯಾರು partian ಗಳಲ್ಲ. ಇಂದಿರಾಗಾಂಧಿ ತನ್ನ ಪ್ರಧಾನಿ ಸ್ಥಾನ ಅಭದ್ರವೆಂದೆನಿಸಿದಾಗ ತನ್ನ ಮಕ್ಕಳನ್ನೇ ಅಧಿಕಾರಕ್ಕೆ ತರುವ ವಿಚಾರ ಮಾಡಿದರು. ಅಲ್ಲಿಂದ ಆರಂಭವಾಯಿತು ಕುಟುಂಬ ರಾಜಕಾರಣ. ದೇವೇಗೌಡರು ತನ್ನ ಮಗನನ್ನು ರಾಜಕೀಯಕ್ಕೆ ತಂದಿದ್ದು ಅವರನ್ನು ಗದ್ದುಗೆಗೆ ಕೂಡಿಸುವ ದೃಷ್ಟಿಯಿಂದ. ಭಾಜಪ ಜೊತೆ ಮೈತ್ರಿ ಮಾಡಿಕೊಂಡಿದ್ದು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಏಕೈಕ ಉದ್ದೇಶದಿಂದ. ಆಮೇಲೆ ತಮ್ಮ ಕುಟುಂಬದ ರೇವಣ್ಣ, ಅನಿತಾ, ಭವಾನಿ, ಪ್ರಜ್ವಲ್, ನಿಖಿಲ್ ಕುಮಾರಸ್ವಾಮಿ ಹೀಗೆ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ರಾಜಕೀಯಕ್ಕೆ ಎಳೆದರು. ರಾಜಕೀಯ ಸಮ್ಮೇಳನ ನಡೆಸಿ, ಅಲ್ಲಿ ‘ನನ್ನನ್ನೂ ಜನ ಕುಟುಂಬ ರಾಜಕೀಯ ಮಾಡುವವನು ಎಂದು ಜರಿಯುತ್ತಾರೆ’ ಎಂದು ಹೇಳಿ ‘ಗಳಗಳ’ ಅತ್ತುಬಿಟ್ಟರು. ಪತ್ರಿಕಾಗೋಷ್ಠಿಯ ಮುಂದೆಯೂ ದೃಶ್ಯ ಮಾಧ್ಯಮಗಳ ಮುಂದೆಯೂ ಅಳುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಮುಂದೆ ಪಾರ್ಲಿಮೆಂಟ್ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ಮಧ್ಯೆ ಘರ್ಷಣೆ ಆರಂಭವಾಯಿತು. ಇದು ಸಾಲದೆಂಬಂತೆ, ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಸರ್ಕಾರದ ಇರುವಿಗೆ ಭಂಗ ಬರುವಂತೆ ರೆಸಾರ್ಟ್ ರಾಜಕೀಯಕ್ಕೆ ಮುಂದಾದರು. ಇದೆಲ್ಲ ಕಾರಣದಿಂದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಅಭ್ಯರ್ಥಿಗಳೆಲ್ಲರೂ ಚುನಾವಣೆಯಲ್ಲಿ ಸೋತರು.

ಈ ಯಾದವಿ ಕಲಹ ಕರ್ನಾಟಕದ ಘಟಾನುಘಟಿ ನಾಯಕರೆಲ್ಲರನ್ನು ಆಹುತಿ ತೆಗೆದುಕೊಂಡಿತು.

ತತ್ವ ರಹಿತ ರಾಜಕೀಯ ಮಾಡುವುದು ಸಪ್ತ ಸಾಮಾಜಿಕ ಪಾತಕಗಳಲ್ಲಿ ಒಂದು ಎಂದು ಗಾಂಧೀಜಿ ಹೇಳಿದ್ದಾರೆ. ಆದರೆ, ಈಗ ಭಾರತದಲ್ಲಿ ಆಚರಣೆಯಲ್ಲಿರುವುದು ಅದೇ ತತ್ವರಹಿತ, ಸ್ವಾರ್ಥಹಿತದ ರಾಜಕೀಯ ಎನ್ನುವ ದುರಂತವನ್ನು ನಾವೆಲ್ಲರೂ
ಒಪ್ಪಿಕೊಳ್ಳಲೇಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...