HomeUncategorizedಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

ಥೂತ್ತೇರಿ : ಅಂಬರೀಶ್ ಮೃತ್ಯುಂಜಯ ಹೋಮ ಮಾಡಿಸಬೇಕಿತ್ತು

- Advertisement -
- Advertisement -

ಯಾಹೂ |

ಸಿನಿಮಾ ರಂಗದಲ್ಲಿ ಮತ್ತು ರಾಜಕಾರಣದಲ್ಲಿ ಹಾಗೂ ಖಾಸಗೀ ಬದುಕಿನಲ್ಲಿ ವೈರಿಗಳೇ ಇಲ್ಲದಂತೆ ಬದುಕಿದ ಅಂಬರೀಶ್‍ಗೆ ಗ್ರಹಗತಿಗಳು ಮುನಿಸಿಕೊಂಡಿದ್ದವು ಎಂದು ಟಿ.ವಿ.ಯೊಳಗೆ ಸೇರಿಕೊಂಡಿರುವ ಪುರೋಹಿತ ಪಿಂಡಗಳು ವಾದಿಸತೊಡಗಿವೆಯಂತಲ್ಲಾ. ಈ ಪಿಂಡಗಳ ವಿಶೇಷವೆಂದರೆ, ತ್ರಿಕಾಲಜ್ಞಾನಿಗಳಂತಾಡುವ ಇವು ಯಾವುದೇ ಘಟನೆ ನಡೆಯುವ ಮುನ್ನ ಬಾಯಿ ಬಿಡುವುದಿಲ್ಲ. ವಿಷ್ಣು ತೀರಿಕೊಂಡ ನಂತರವೇ ಅವರಿಗೆ ನಾಗವಲ್ಲಿ ಕಾಟ ಅಮರಿಕೊಂಡಿತ್ತು ಎಂದು ವದರಿದವು. ಸಕ್ಕರೆ ಕಾಯಿಲೆ ದೆಸೆಯಿಂದ ಹೃದಯಾಘಾತಕ್ಕೆ ತುತ್ತಾದ ವಿಷ್ಣುಗೆ ನಾಗವಲ್ಲಿ ಕಾಟವಿತ್ತು, ಯಾಗ ಮಾಡಿಸಿದ್ದರೆ ಸರಿಹೋಗುತ್ತಿತ್ತು ಎನ್ನುವ ಈ ಪಿಂಡಗಳು ಈಗ ಅಂಬರೀಶ್ ಸಾವಿಗೂ ಪುರೋಹಿತಶಾಹಿ ತಂತ್ರವನ್ನೇ ಬಳಸತೊಡಗಿರುವುದು ಕಂಡು ದಿಗಿಲಾಗಿ ಜ್ಯೋತಿಷ್ಯ ಬ್ರಹ್ಮ ಪ್ರಕಾಶ ಮಣ್ಣುರಾಯರಿಗೆ ಫೋನ್ ಮಾಡಲಾಗಿ ರಿಂಗಾಯ್ತು,
ರಿಂಗ್‍ಟೋನ್: “ಹೋನ್ಹೀ ತೋ ಹೋನ್ಹೀ ಹೀ ಹೈ, ಅನ್ಹೋಹ್ಹೀ ನಹೀಂ ಭವತ್ಯೇವ ಭವತವ್ಯಂ….. ಹಲೋ ಯಾರು.”
“ಗುರುಗಳೇ ನಾನು ಪತ್ರಕರ್ತ”
“ಯಾವ ಪತ್ರಿಕೆ.”
“ನ್ಯಾಯಪಥ.”
“ನ್ಯಾಯಪಥ ಅಂದರೆ ಸತ್ಯದ ದಾರಿ.”
“ಹೌದು ಸ್ವಾಮಿ, ನಿಮ್ಮ ಫೋನಿನ ರಿಂಗ್‍ಟೋನ್ ಅರ್ಥ ಆಗಲಿಲ್ಲ.”
“ನಡೆಯಬೇಕಾದದ್ದು ನಡೆದೇ ನಡೆಯುತ್ತದೆ, ನಡೆಯಬೇಕಾದ ರೀತಿಯಲ್ಲೇ ನಡೆಯುತ್ತದೆ ಅಂತ ಅರ್ಥ.”
“ಹಾಗಿದ್ದರೆ ಜ್ಯೋತಿಷ್ಯದ ಅಗತ್ಯವೇನು.”
“ನೀವು ಆಸ್ತಿಕರೋ ನಾಸ್ತಿಕರೋ.”
“ಸದ್ಯಕ್ಕೆ ನಾಸ್ತಿಕ.”
“ಹಾಗಾದರೆ ನಿಮ್ಮೊಟ್ಟಿಗೆ ಮಾತನಾಡಿ ಪ್ರಯೋಜನ ಇಲ್ಲ.”
“ಹಾಗನ್ನಬೇಡಿ ಗುರುವೆ, ನಮ್ಮ ಅಂಬರೀಶಣ್ಣನ ಸಾವಿನ ಬಗ್ಗೆ ತಿಳಕೊಬೇಕು.”
“ನೋಡಿ, ಅಂಬರೀಶ್ ನಮ್ಮನ್ನು ಭೇಟಿಮಾಡಿ ನಾವು ಹೇಳಿದಂತೆ ಕೇಳಿದ್ದರೆ ಬದುಕುತ್ತಿದ್ದರು.”
“ಅದು ಹ್ಯೆಂಗೆ ಗುರುಗಳೇ.”
“ಒಂದು ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಮೃತ್ಯುಂಜಯ ಹೋಮ ಅಂದರೆ ಸಾವನ್ನ ಜಯಿಸುವ ಹೋಮ ಅಲ್ಲವೆ ಗುರು.”
“ಹೌದು.”
“ಈ ಮೃತ್ಯುಂಜಯ ಹೋಮ ಮಾಡಿಸಿದ್ರೆ ಎಷ್ಟು ದಿನ ಬದುಕಬಹುದು.”
“ನೋಡಿ, ನಮಗಿರುವ ಆಯಸ್ಸು ಬ್ರಹ್ಮನದಲ್ಲ ನಾವು ನಮ್ಮ ಆಯಸ್ಸನ್ನ ವೃದ್ಧಿಸಿಕೊಳ್ಳಬೇಕು. ಮರಣದಲ್ಲಿ ನೂರ ಒಂದು ಪ್ರಕಾರಗಳುಂಟು. ನೂರನ್ನ ಜಯಿಸಬಹುದು. ಒಂದನ್ನ ಮಾತ್ರ ಜಯಿಸಲಾಗುವುದಿಲ್ಲ.”
“ಅದ್ಯಾವುದು ಗುರುಗಳೇ.”
“ನಿಜವಾದ ಮರಣ!”
“ಈಗ ಅಂಬರೀಶ್‍ಗೆ ಸಂಭವಿಸಿದ್ದು ನಿಜವಾದ ಮರಣ ಅಲ್ಲವ.”
“ಇಲ್ಲ ಅವರದ್ದು ಭಾವೋದ್ವೇಗದ ಮರಣ. ಅದಕ್ಕಾಗಿ ನಾಗಾರಾಧನೆಯ ಮೃತ್ಯುಂಜಯ ಹೋಮ ಮಾಡಿಸಿದ್ದರೆ ಬದುಕುತ್ತಿದ್ದರು.”
“ಅದನ್ನ ಅವರಿಗೆ ಹೇಳಬೇಕಾಗಿತ್ತು.”
“ಅವರು ಬಂದು ಕೇಳಬಹುದಿತ್ತು, ನಾವು ಅವರ ಬಳಿಗೆ ಹೋಗುವುದಿಲ್ಲ.”
“ಅವರ ಜೀವ ಮುಖ್ಯ ಅಲ್ಲವೆ?”
“ಅದೌದು. ನಾವು ಸಂಸ್ಕಾರವಂತ ಜ್ಯೋತಿಷಿಗಳು. ಅವರಾಗಿ ಬಂದರೆ ಹೇಳ್ತೇವೆ.”
“ಅವುರಾಗಿ ಬಂದ್ರೆ ಹೇಳೋ ಅಂತವರು, ಈಗ ಟಿವಿಯೊಳಗಡೆ ಬಂದು ಯಾಕೇಳ್ತಿದೀರಿ”
“ನಾವು ಬಂದದ್ದಲ್ಲ ಟಿವಿಯವರು ಕರೆದದ್ದು.”
“ಬಂದು-ಬಳಗದೋರು ಕರೆದ್ರೆ ಹೊಗಬೇಕಾಗತ್ತೆ ಬಿಡಿ. ತಮ್ಮ ಪ್ರಕಾರ ಅಂಬರೀಶ್ ಜಾತಕ ಹೇಗಿತ್ತು ಗುರುಗಳೇ.”
“ಅಂಬರೀಶ್ ಜಾತಕದಲ್ಲಿ ಗುರುವಿನ ಬಲವಿತ್ತು. ಶನಿ ದೂರವಿದ್ದ. ಈಗ ಅವರ ಬಳಿ ಶನಿ ಸಂಚಾರ ಆರಂಭವಾಗಿತ್ತು. ಮೃತ್ಯುಂಜಯ ಹೋಮದಿಂದ ಶನಿಯನ್ನ ದೂರ ಮಾಡಬಹುದಿತ್ತು.”
“ಬ್ರಹ್ಮರ್ಷಿಗಳೇ ನಾಗನ ಆರಾಧನೆ ಯಾಕೆ ಮಾಡ್ತರೆ ಗೊತ್ತೆ.”
“ನಾಗದೋಷ ಪರಿಹಾರಕ್ಕೆ.”
“ಅದಲ್ಲ, ಹಾವುಗಳ ಪೈಕಿ ನಾಗರಹಾವಿಗೆ ವಿಷ ಇದೆ. ಅದು ಕಡುದ್ರೆ ಮನುಷ್ಯ ಸತ್ತೋಗ್ತನೆ. ಪೂಜೆ ಮಾಡಿದ್ರೆ ಅದು ಕಡಿಯಲ್ಲ ಅನ್ನೋ ಕಾರಣಕ್ಕೆ. ಅಂದ್ರೆ ಭಯ ಭಕ್ತಿ ಮೂಡಿಸುತ್ತೆ ಅಲ್ಲವಾ.”
“ಅದೌದು. ಭಯ ನಿವಾರಣೆ ನಮ್ಮ ಕೆಲಸ.”
“ನಿಮ್ಮ ಮೃತ್ಯುಂಜಯ ಹೋಮದಿಂದ ಅರ್ಭುದ ರೋಗ ನಿವಾರಿಸಬಹುದಾ?”
“ಹೌದು.”
“ಹಾಗಾದ್ರೆ ಅನಂತಕುಮಾರ್ ಅದರಲ್ಲೇ ಹೋದರಲ್ಲ. ಅವರ ಸಂಬಂಧಿಯಾದ ನೀನು ಆಗ ಕತ್ತೆ ಕಾಯ್ತಾಯಿದ್ದ?”
“ಯಾಕೆ ಹಾಗೆ ಕೆಟ್ಟ ಮಾತನ್ನಾಡುವುದು ನೀವು.”
“ಸಾರಿ, ಗೋವು ಕಾಯ್ತಾಯಿದ್ರ.”
“ನೋಡಿ ಇವರೆ, ನಿಮ್ಮಂತ ಅಸಂಸ್ಕೃತ ಅಹಂಕಾರಿಗಳನ್ನ ನಾವು ಸಹಿಸಿಕೊಂಡು ಉತ್ತರ ಕೊಡಬೇಕಾಗ್ತದೆ, ಅಂಬರೀಶರು ಭಾವೋದ್ವೇಗದ ವ್ಯಕ್ತಿ. ಆನೆ ನಡೆದದ್ದೇ ದಾರಿ ಅಂತ ಹೇಳುವ ಹಾಗೆ ಅವರು ಯಾರ ಮಾತನ್ನ ಕೇಳಲಿಲ್ಲ. ಕೇಳಿದ್ದರೆ ನಮ್ಮಲ್ಲಿ ಪರಿಹಾರವಿತ್ತು.”
“ಏನು ಪರಿಹಾರ ಹೇಳಿ.”
“ನೋಡಿ ಮನುಷ್ಯನ ಬಾಹ್ಯ ವರ್ತನೆಗೆ ಆಂತರ್ಯದ ಸಮಸ್ಯೆಗಳು ಕಾರಣ. ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳಿವೆ. ಅವುಗಳ ಸಮತೋಲನ ಮುಖ್ಯ. ಅವುಗಳ ಏರುಪೇರಿನಿಂದ ಮನುಷ್ಯ ಕೀಳರಿಮೆಗೆ ತುತ್ತಾಗುವುದುಂಟು. ಆಗ ನಾವು ಆತ್ಮವಿಶ್ವಾಸ ಮೂಡಿಸುತ್ತೇವೆ.”
“ಯಾವ ತರ.”
“ನಮ್ಮ ಹೆಂಡತಿಗೆ ಒಂದಿಷ್ಟು ಉಬ್ಬು ಹಲ್ಲುಗಳಿದ್ದವು.”
“ಹಲ್ಲಿಗೇ ಮುತ್ತು ಕೊಡೋತರ.”
“ಹಾಗಂದುಕೊಳ್ಳಬಹುದು. ಆಗ ನಾನು ಆಕೆಗೆ ಆತ್ಮವಿಶ್ವಾಸ ತುಂಬಿದೆ. ನಿನ್ನ ಹಲ್ಲುಗಳ ಬಗ್ಗೆ ಕೀಳರಿಮೆ ಬೇಡ. ಮನೆಯ ಮೆಟ್ಟಿಲು ಕಲ್ಲುಗಳು, ಮನೆಯ ಹೊರಗಿರುತ್ತವೆ, ಒಳಗಲ್ಲ ಅಂತ ಹಾಸ್ಯ ಮಾಡಿ ಹೇಳಿದೆ. ಆಕೆಗೆ ಕೀಳರಿಮೆ ಹೋಯ್ತು. ನಮ್ಮ ಬದುಕು ಸರಾಗವಾಯ್ತು. ಹೀಗೆ ನಾವು ಮನುಷ್ಯನ ಆಂತರ್ಯದಲ್ಲಿನ ಕೀಳರಿಮೆ ಹೋಗಲಾಡಿಸಿಬಿಡ್ತೇವೆ.”
“ಇದಕ್ಕೂ ಅಂಬರೀಶ್ ವಿಷಯಕ್ಕೂ ಏನು ಸಂಬಂಧ.”
“ಸಂಬಂಧವುಂಟು, ಅಂಬರೀಶ್ರಲ್ಲಿದ್ದ ಭಾವೋದ್ವೇಗ ಕಡಿಮೆ ಮಾಡಿ, ಇನ್ನೂ ಬದುಕುವಂತೆ ಮಾಡ್ತಾಯಿದ್ದೆ.”
“ಮಿಸ್ಟರ್ ಬ್ರಹ್ಮ, ನಿಮ್ಮ ಜೋತಿಷ್ಯ ಪ್ರಧಾನವಾಗಿ ಹೊಟ್ಟೆ ಪಾಡಿಂದು, ಈ ದೇಶದ ಮುಗ್ಧ ಮನಸ್ಸುಗಳ ತಲೆಗೆ ಪುರಾಣ ತುಂಬಿ ದೇಶನೆ ಬಾಳೆಎಲೆ ಮಾಡಿಕೊಂಡು ಉಂಡ್ರಿ ಅಂತ ನಮ್ಮ ತೇಜಸ್ವಿ ಹೇಳತಿದ್ರು. ಏನಾದ್ರು ಮಾಡಿಕೊಂಡು ಹಾಳಾಗೋಗಿ. ಆದ್ರೆ ಅಂಬರೀಶ್ ವಿಷಯದಲ್ಲಿ ಪುರಾಣ ಶುರುಮಾಡಿದ್ರೆ ಸರಿಯಾಗಿ ಮಾಡಬೇಕಾಯ್ತದೆ.”
“ಯಂತ ಮಾಡ್ತಿರಿ.”
“ನಿನ್ನ ರಿಂಗ್‍ಟೋನಿದೆಯಲ್ಲ ಆ ತರ ನಡೆಯಬೇಕಾದ್ದು ನಡದೇ ನಡೆಯುತ್ತೆ. ನಡೆಯಬೇಕಾದ ರೀತಿಯಲ್ಲೇ ನಡೆಯುತ್ತೆ.”
“ನನ್ನನ್ನ ಬೆದರಿಸುತ್ತೀಯ, ಶಾಪ ಕೊಡ್ತೇನೆ.”
“ನಿನ್ನ ಶಾಪ ನನ್ನ ಕೂದಲಿಗೆ ಸಮ.”
“ಛೇ ಕೆಟ್ಟವನೆ.”
ಥೂತ್ತೇರಿ….!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...