Homeಕರ್ನಾಟಕಮಾಜಿ ‘ಅನರ್ಹ’ರ ಮಂತ್ರಿಗಿರಿ ವಿಳಂಬಕ್ಕೆ ಕಾರಣವಾಗಿರೋದು ‘ಧನುರ್ಮಾಸ’ವೋ? ಶಾ ಲೆಕ್ಕಾಚಾರವೋ?

ಮಾಜಿ ‘ಅನರ್ಹ’ರ ಮಂತ್ರಿಗಿರಿ ವಿಳಂಬಕ್ಕೆ ಕಾರಣವಾಗಿರೋದು ‘ಧನುರ್ಮಾಸ’ವೋ? ಶಾ ಲೆಕ್ಕಾಚಾರವೋ?

- Advertisement -
- Advertisement -

ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ತುದಿಗಾಲ ಮೇಲೆ ನಿಂತಿರುವ ಮಾಜಿ ಅನರ್ಹ ಕಂ ಹಾಲಿ ಅರ್ಹ ಶಾಸಕರಿಗೆ ಇನ್ನೂ ಒಂದು ತಿಂಗಳು ವಿರಹ ವೇದನೆ ತಪ್ಪಿದ್ದಲ್ಲ ಎಂಬ ಮಾತುಗಳು ಶಕ್ತಿಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಫಲಿತಾಂಶ ಬಂದು ಮೂರು ದಿನವಾದರು ಇದುವರೆಗೆ ಹೈಕಮಾಂಡ್‌ನಿಂದ ಯಡ್ಯೂರಪ್ಪನವರಿಗೆ ಬುಲಾವ್ ಬಂದಿಲ್ಲ. ದಿಲ್ಲಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಗದ ಹೊರತು ಸಂಪುಟ ವಿಸ್ತರಣೆಯಾಗದು. ಮಾಧ್ಯಮದವರ ಜೊತೆ ಮಾತನಾಡುತ್ತ ತಾನು ಇನ್ನೂ ಒಂದು ವಾರ ದಿಲ್ಲಿಗೆ ಹೋಗಲ್ಲ ಎಂಬ ಮಾತನ್ನು ಯಡ್ಯೂರಪ್ಪನವರು ಹೇಳಿದ್ದಾರೆ. ಮುಂದಿನ ವಾರದಿಂದ ಧನುರ್ಮಾಸ ಶುರುವಾಗಲಿರುವುದರಿಂದ, ಅಲ್ಲಿಂದ ಒಂದು ತಿಂಗಳು, ಅಂದರೆ ಜನವರಿ ಮೂರನೇ ವಾರದವರೆಗೆ ಯಾವ ಶುಭಕಾರ್ಯಗಳೂ ನಡೆಯುವುದು ಕ್ಷೇಮವಲ್ಲ ಎಂಬ ಮೂಢನಂಬಿಕೆ ಪಂಚಾಂಗದಲ್ಲಿದೆ. ಅದನ್ನು ಅಪಾರವಾಗಿ ನಂಬುವ ಯಡ್ಯೂರಪ್ಪ ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆಗೆ ಕೈಹಾಕಲಾರರು ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆಗಳು. ಹಾಗಾಗಿ ಉಪಚುನಾವಣೆಯಲ್ಲಿ ಗೆದ್ದು ಬಂದರು ಮಾಜಿ ಅನರ್ಹರು ಮಂತ್ರಿಗಳಾಗಲು ಇನ್ನು ಒಂದು ತಿಂಗಳು ಕಾಯಬೇಕಾಗಬಹುದು.

ಮೇಲ್ನೋಟಕ್ಕೆ ಧನುರ್ಮಾಸವನ್ನು ಈ ವಿಳಂಬಕ್ಕೆ ಕಾರಣವಾಗಿ ತೋರಿಸಲಾಗುತ್ತಿದೆಯಾದರು, ಇದರ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಲೆಕ್ಕಾಚಾರಗಳೂ ಇವೆ  ಎನ್ನಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಿ, ಬೆಳ್ಳಂಬೆಳಗಿನ ಚುಮುಚುಮು ಛಳಿಯಲ್ಲೇ ಫಡ್ನವೀಸ್‌ಗೆ ಪ್ರಮಾಣವಚನ ಸ್ವೀಕರಿಸಲು ಗ್ರೀನ್‌ಸಿಗ್ನಲ್ ಕೊಡುವಷ್ಟ ಆತುರ ತೋರಿದ ಬಿಜೆಪಿಗೆ ಕರ್ನಾಟಕದ ಸಂಪುಟ ವಿಸ್ತರಣೆಗೆ ಅನುಮತಿ ಕೊಡಲು ಒಂದು ವಾರ ಕಾಯಿಸುವ ಯಾವ ಘನ ಕಾರಣಗಳೂ ಕಾಣುತ್ತಿಲ್ಲ. ಈಗಾಗಲೇ ಸಿಎಂ ಯಡ್ಯೂರಪ್ಪನವರು ಕೊಟ್ಟ ಮಾತಿನಂತೆ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಹೈಕಮಾಂಡ್‌ನ ಆಶ್ವಾಸನೆಯಿಂದಲೇ ಅವರು ಇಷ್ಟು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಮಂತ್ರಿ ಮಾಡುವುದೇ ದಿಟವೆಂದ ಮೇಲೆ ಕಾಯಿಸುವುದರಿಂದ ಏನು ಪ್ರಯೋಜನ? ಯಾವ ಲೆಕ್ಕಾಚಾರವನ್ನು ಶಾ ಈಡೇರಿಸಿಕೊಳ್ಳಬಹುದು? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ.

ಈ ಪ್ರಶ್ನೆಗಳಿಗೆ ಉತ್ತರವಾಗಿ ಹೀಗೊಂದು ವಿಶ್ಲೇಷಣೆ ಹರಿದಾಡುತ್ತಿದೆ. ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗುವುದು ಬಿಜೆಪಿ ಹೈಕಮಾಂಡ್‌ಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ಅವರು ತೋರಿದ ಅಸಹಕಾರ, ನಿರ್ಲಕ್ಷ್ಯಗಳೇ ಇದನ್ನು ಸಾಬೀತು ಮಾಡುತ್ತವೆ. ಇಂಥಾ ಸಮಯದಲ್ಲಿ ಎದುರಾದ ಉಪಚುನಾವಣೆಯ ಬಗ್ಗೆಯೂ ಹೈಕಮಾಂಡ್ ಹೆಚ್ಚಿನ ಆಸಕ್ತಿಯನ್ನೇನೂ ತೋರಲಿಲ್ಲ. ನೀವು ಮುಖ್ಯಮಂತ್ರಿಯಾಗಿ ನಿಮ್ಮ ಸರ್ಕಾರ ಉಳಿಯಬೇಕೆಂದರೆ ಅನರ್ಹರನ್ನು ನೀವೇ ಗೆಲ್ಲಿಸಿಕೊಳ್ಳಿ ಎಂಬ ವರ್ತನೆಯಷ್ಟೆ ಹೈಕಮಾಂಡ್‌ನಿಂದ ಯಡ್ಯೂರಪ್ಪಗೆ ಸಿಕ್ಕಿದ್ದು.

ಆ ಸವಾಲಿನಲ್ಲಿ ಯಡ್ಯೂರಪ್ಪ ಭರ್ಜರಿಯಾಗೇ ಗೆದ್ದು ತೋರಿಸಿದ್ದಾರೆ. ನಾಯಕರ ಅಸಹಕಾರ, ಟಿಕೇಟ್ ತಪ್ಪಿದವರ ಬಂಡಾಯದ ನಡುವೆಯೂ ಏಕಾಂಗಿಯಾಗಿ ‘ತಂತ್ರ’ಗಾರಿಕೆ ನಡೆಸಿ, ಹದಿನೈದು ಕ್ಷೇತ್ರಗಳ ಪೈಕಿ ಹನ್ನೆರಡರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಸಂಖ್ಯಾಬಲವನ್ನು 117ಕ್ಕೆ ಏರಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಗೆ ಈಗಲೂ ನಾನೇ ವರ್ಚಸ್ವಿ ನಾಯಕ ಎಂಬುದನ್ನಷ್ಟೇ ಅಲ್ಲ, ಲಿಂಗಾಯತ ಓಟ್ ಬ್ಯಾಂಕ್‌ಗೆ ಈಗಲೂ ನಾನೇ ಅಧಿನಾಯಕ ಅನ್ನೋದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಉಪಚುನಾವಣೆಯ ಫಲಿತಾಂಶ ಯಡ್ಯೂರಪ್ಪನವರನ್ನು ಪಕ್ಷದೊಳಗೆ ಮತ್ತಷ್ಟು ಬಲಿಷ್ಠಗೊಳಿಸಿದೆ. ಅವರನ್ನು ಮೂಲೆಗುಂಪು ಮಾಡುವ ಹಾದಿಯಲ್ಲಿದ್ದ ಹೈಕಮಾಂಡ್ ಕೊಂಚ ಯೋಚಿಸುವಂತೆ ಮಾಡಿದೆ.

ಯಡ್ಯೂರಪ್ಪ ಎಂಥಾ ಡಾಮಿನೇಟ್ ವ್ಯಕ್ತಿತ್ವದವರು ಅನ್ನೋದು ಅಮಿತ್ ಶಾಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಕೊಂಚ ಅವಕಾಶ ಸಿಕ್ಕರೂ ಹೈಕಮಾಂಡ್‌ನ ಅಳತೆಮೀರಿ ಬೆಳೆದುಬಿಡುವ ಸಾಧ್ಯತೆಯೂ ಗೊತ್ತಿದೆ.

ಈ ಫಲಿತಾಂಶದಿಂದ ಯಡ್ಯೂರಪ್ಪ ಮೇಲುಗೈ ಸಾಧಿಸಿರೋದ್ರಿಂದ ಪಕ್ಷದೊಳಗೇ ಅವರತ್ತ ಸರಿದುಕೊಳ್ಳುವ ಬೆಂಬಲಿಗರ ಸಂಖ್ಯೆ ಹಿಗ್ಗಲಿದೆ. ಇನ್ನು ತಮ್ಮತಮ್ಮ ಮಾತೃಪಕ್ಷಗಳಿಗೆ ರಾಜೀನಾಮೆ ಕೊಟ್ಟು ಬಂದಿರುವ ಹದಿನೇಳು ಮಂದಿಯೂ ಯಡ್ಯೂರಪ್ಪನವರನ್ನು ನಂಬಿ, ಅವರ ಮೇಲೆ ವಿಶ್ವಾಸವಿಟ್ಟು ಬಂದಿದ್ದಾರೆಯೇ ವಿನಾಃ ಬಿಜೆಪಿ ಪಕ್ಷವನ್ನು ಇಡಿಯಾಗಿ ನಂಬಿಯಾಗಲಿ ಅಥವಾ ಮೋದಿ-ಶಾ ಜೋಡಿಯ ನೇರ ಮಧ್ಯಸ್ಥಿಕೆಯಿಂದಾಗಲಿ ಅಲ್ಲ. ಅವರಿಗೆ ಯಾವ ತ್ರಾಸೂ ಇಲ್ಲದೆ, ಏಕಾಏಕಿ ಮಂತ್ರಿಭಾಗ್ಯ ಕರುಣಿಸಿಬಿಟ್ಟರೆ ಅವರು ತಮ್ಮನ್ನು ಮಂತ್ರಿ ಮಾಡಿದ್ದೇ ಯಡ್ಯೂರಪ್ಪನವರು ಅಂತ ಅವರ ಪಾಳೆಯವನ್ನೇ ಸೇರಿಬಿಡುವ ಸಾಧ್ಯತೆ ಹೆಚ್ಚು. ಯಾಕೆಂದರೆ ತಮ್ಮ ಗೆಲುವಿನಲ್ಲಿ ಯಡ್ಯೂರಪ್ಪನವರ ಮುತುವರ್ಜಿಯನ್ನು ಅವರು ಹತ್ತಿರದಿಂದ ಕಂಡಿದ್ದಾರೆ. ಹುಣಸೂರಿನಲ್ಲಿ ಸೋತಿರುವ ಅನರ್ಹ ಶಾಸಕ ಎಚ್.ವಿಶ್ವನಾಥ್ ’ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ನಮಗೆ ಯಡ್ಯೂರಪ್ಪನವರೇ ಹೈಕಮಾಂಡ್’ ಎಂದು ಹೇಳಿರೋದು ಈ ಸಾಧ್ಯತೆಯನ್ನು ರುಜುವಾತು ಮಾಡುತ್ತೆ.

ಹಾಗೇನಾದರು ಆದಲ್ಲಿ, ಸಂಪುಟದ ಮುಕ್ಕಾಲು ಭಾಗ ಯಡ್ಯೂರಪ್ಪನವರ ಬೆಂಬಲಿಗರೇ ತುಂಬಿಕೊಂಡಂತಾಗುತ್ತೆ. ಸರ್ಕಾರದ ಮೇಲಷ್ಟೆ ಅಲ್ಲ, ಪಕ್ಷದ ಮೇಲೂ ಯಡ್ಯೂರಪ್ಪನವರ ಹಿಡಿತ ಬಿಗಿಗೊಳ್ಳುತ್ತದೆ. ಆಗ ಮೂವರು  ಡಿಸಿಎಂಗಳನ್ನು ನೇಮಿಸಿ, ನಳಿನ್ ಕುಮಾರ್ ಕಟೀಲ್ ಥರದ ಅಧ್ಯಕ್ಷರನ್ನು ಆಯ್ಕೆ ಮಾಡಿ ಯಡ್ಯೂರಪ್ಪರನ್ನು ಕಟ್ಟಿಹಾಕಲು ತಾವು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿಬಿಡುತ್ತವೆ ಎಂಬುದು ಹೈಕಮಾಂಡ್‌ಗೆ ಚೆನ್ನಾಗಿಯೇ ಗೊತ್ತು.

ಅದಕ್ಕೋಸ್ಕರವೇ ಈ ವಿಳಂಬ ನೀತಿ ಎನ್ನಲಾಗುತ್ತಿದೆ. ಹೊಸದಾಗಿ ಮಂತ್ರಿಯಾಗುವವರಿಗೆ ‘ಯಡ್ಯೂರಪ್ಪನವರಿಗಿಂತಲೂ ಹೈಕಮಾಂಡ್ ಕೃಪಾಕಟಾಕ್ಷವೇ ತುಂಬಾ ಮುಖ್ಯ’ ಎಂಬ ಬಿಜೆಪಿ ಸಂಸ್ಕೃತಿಯನ್ನು ಮನದಟ್ಟು ಮಾಡಿಸಿ ಅವರು ಸಾರಾಸಗಟು ಯಡ್ಯೂರಪ್ಪನವರ ಹಿಂಬಾಲಕರಾಗದಂತೆ ಸತಾಯಿಸಲು ನಿರ್ಧರಿಸಲಾಗಿದೆ ಎನ್ನುತ್ತಿವೆ ಮೂಲಗಳು.

ಇಲ್ಲಿ ಇನ್ನೂ ಒಂದು ಲೆಕ್ಕಾಚಾರವಿದ್ದಿರಬಹುದು. ಗೆದ್ದ ಕೂಡಲೇ ಅವರನ್ನು ಅನಾಯಾಸವಾಗಿ ಮಂತ್ರಿಮಾಡಿಬಿಟ್ಟರೆ ಪೊಗದಸ್ತಾದ ಖಾತೆಗೇ ಬೇಡಿಕೆ ಇಟ್ಟುಬಿಡುತ್ತಾರೆ. ಈ ಸಂದರ್ಭದಲ್ಲಿ ಇಲ್ಲ ಎನ್ನುವುದೂ ಕಷ್ಟ. ತುಸು ಸತಾಯಿಸಿ, ‘ಮಂತ್ರಿ ಮಾಡಿದರೆ ಸಾಕು, ಖಾತೆ ಯಾವುದಾದರೇನು’ ಎನ್ನುವಲ್ಲಿಗೆ ಬಗ್ಗಿಸಿ ಮಂತ್ರಿಗಿರಿ ಕರುಣಿಸುವ ಆಲೋಚನೆಯೂ ಇರಬಹುದು. ಉಪಚುನಾವಣೆಯಲ್ಲಿ ಗೆದ್ದ ವಲಸಿಗರೆಲ್ಲ ಭರಪೂರ ಖಾತೆಗಳ ಮೇಲೆ ಕಣ್ಣಿಟ್ಟು ಕೂತಿದ್ದಾರೆ. ಅವರಿಗೆ ಅವುಗಳನ್ನು ಬಿಟ್ಟುಕೊಟ್ಟರೆ, ಮೂಲ ಬಿಜೆಪಿಗರಲ್ಲಿ ಬಂಡಾಯ ಶುರುವಾಗುತ್ತೆ. ಅದನ್ನು ತಡೆಯಬೇಕೆಂದರೆ, ಹೀಗೆ ಒಂದಷ್ಟು ಸತಾಯಿಸಿ ಮಂತ್ರಿ ಮಾಡುವುದು ಒಳಿತು ಎಂಬ ತಂತ್ರವೂ ಇದ್ದಿರಬಹುದು. ಬಹುಶಃ ಈ ತಂತ್ರೋಪದೇಶ ಮಾಡಿಯೇ ಯಡ್ಯೂರಪ್ಪನವರನ್ನೂ ಬಿಜೆಪಿ ಹೈಕಮಾಂಡ್ ವಿಳಂಬ ನೀತಿಗೆ ಒಪ್ಪಿಸಿರಲೂಬಹುದು. ಇದು ದಿಟವೇ ಆಗಿದ್ದರೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸುವ ಹುನ್ನಾರ ಹೈಕಮಾಂಡ್‌ನದ್ದು. ಯಾವುದನ್ನೂ ತಳ್ಳಿಹಾಕಲಿಕ್ಕಾಗುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...