Homeಸುಳ್ಳಪ್ಪೋ ಸುಳ್ಳುಚಲಾನಾ... ಜಲಾನಾ... ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

ಚಲಾನಾ… ಜಲಾನಾ… ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

- Advertisement -
- Advertisement -

ಮಿಥ್ಯ: ‘ಹಮ್ ಭಾರತ್ ಬಂದ್ ಕರನಾ ಜಾನತೆ ಹೈ, ತೊ ಹಮ್ ಭಾರತ್ ಜಲಾನಾ ಭೀ ಜಾನತೆ ಹೈ’
(ಭಾರತ್ ಬಂದ್ ಮಾಡುವುದು ಗೊತ್ತಿರುವ ನಮಗೆ ಭಾರತವನ್ನು ಸುಡುವುದೂ ಗೊತ್ತು)

ಭಾರತ ಸುಡುವ ಇಂತಹ ಪ್ರಚೋದನಾತ್ಮಕ ಹೇಳಿಕೆಯನ್ನು ಭೀಮ್ ಆರ್ಮಿ ಸಂಸ್ಥಾಪಕ, ದಲಿತ ನಾಯಕ ಚಂದ್ರಶೇಖರ್ ಅಜಾದ್ ರಾವಣ್ ಬಹಿರಂಗ ಸಭೆಯಲ್ಲಿ ಆಡಿರುವರೆಂದು ಮೂರು ದಿನಗಳ ಹಿಂದೆ ಝೀ ನ್ಯೂಸ್ (ಹಿಂದಿ) ಮತ್ತು ನ್ಯೂಸ್ 18 ಚಾನೆಲ್‌ಗಳು ಅಪಾದಿಸಿವೆ. ತಮ್ಮ ವೆಬ್‌ಸೈಟಿನಲ್ಲಿನ ಲೇಖನ ಮತ್ತು ಟ್ವಿಟರ್‌ನಲ್ಲಿ ಅವು, ‘ಮುಝಾಫರ್ ನಗರದಲ್ಲಿ ದಲಿತ ಸಭೆಯೊಂದರಲ್ಲಿ ಮಾತನಾಡುವಾಗ ಚಂದ್ರಶೇಖರ್ ಅವರು, ಜನರು ನನ್ನ ಸಿಗ್ನಲ್‌ಗೆ ಕಾಯುತ್ತಿದ್ದಾರೆ, ನಾವು ಭಾರತ್ ಬಂದ್ ಮಾಡಬಲ್ಲೆವಾದರೆ, ಭಾರತವನ್ನು ಸುಡಲೂಬಲ್ಲೆವು…,ನಮ್ಮ ಸಹನೆಗೂ ಒಂದು ಮಿತಿಯಿದೆ, ದೌರ್ಜನ್ಯಗಳಿಗೂ ಒಂದು ಮಿತಿ ಇದೆ ಎಂದು ಹೇಳಿಕೆ ನೀಡಿದರು’ ಎಂದಿವೆ.

ಸತ್ಯ: ಸತ್ಯ ಬೇರೇನೇ ಇದೆ. ಅದಕ್ಕೂ ಮೊದಲು ಝೀ ನ್ಯೂಸ್, ನ್ಯೂಸ್ 18ಗಳ ಈ ಸುದ್ದಿಗೆ ‘ಹಿಂದುತ್ವವಾದಿಗಳು’ ಸ್ಪಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ್ ವಿರುದ್ಧ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅತ್ಯಂತ ಪ್ರಚೋದನಾಕಾರಿ ಸಂದೇಶಗಳನ್ನು ಹಾಕಿದ್ದನ್ನು ನೋಡೋಣ.

ತನ್ನನ್ನು ರಾಷ್ಟ್ರೀಯವಾದಿ ಎಂದುಕೊಳ್ಳುವ ‘ಭಯ್ಯಾಜಿ’ (ಟ್ವಿಟರ್ ಹ್ಯಾಂಡಲ್ @shiraloksharma) ಎಂಬ ವ್ಯಕ್ತಿ ಟ್ವೀಟ್ ಮಾಡಿ, ‘ಹಾಗೆ ಭಾರತ ಸುಡುತ್ತೇನೆ ಎಂದು ಬೆದರಿಸುವವರನ್ನು ಅದೇ ಬೆಂಕಿಯಲ್ಲಿ ಹಾಕಿ ಬರ‍್ಯಾನಿ ಮಾಡಿ, ಬೀದಿನಾಯಿಗಳಿಗೆ ಹಾಕುತ್ತೇವೆ. ಪ್ರಯತ್ನ ಮಾಡಿ ನೋಡಿ, ಪರಿಣಾಮ ಏನಾಗುತ್ತೆ ನೋಡಿ’ ಎಂದು ಬೆದರಿಸುತ್ತಾನೆ. ಇದೇ ಬಗೆಯಲ್ಲಿ ಹಲವಾರು ‘ದೇಶಭಕ್ತರು’ ಚಂದ್ರಶೇಖರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

‘ಭಯ್ಯಾಜಿ’ ಎನ್ನುವಾತನ ಆಕ್ರೋಶಭರಿತ, ದಲಿತವಿರೋಧಿ ಟ್ವೀಟ್

ಆದರೆ, ಆ ಸಭೆಯ ವಿಡಿಯೋವನ್ನು ಪಡೆದು ಪರೀಕ್ಷಿಸಿದಾಗ, ಚಂದ್ರಶೇಖರ್ ಹೇಳಿದ್ದು: ‘ಭಾರತ್ ಚಲಾನಾ’ (ಭಾರತ ನಡೆಸುವುದು, ಭಾರತ ಆಳುವುದು, ರನ್ನಿಂಗ್ ಇಂಡಿಯಾ) ಎಂದೇ ಹೊರತು, ‘ಭಾರತ್ ಜಲಾನಾ’ (ಭಾರತ ಸುಡುವುದು, ಬರ್ನಿಂಗ್ ಇಂಡಿಯಾ) ಎಂದು ಅಲ್ಲವೇ ಅಲ್ಲ.

ಝೀ ನ್ಯೂಸ್, ನ್ಯೂಸ್18 ಮಾಧ್ಯಮಗಳು ಬೇಕೆಂತಲೇ ‘ಚಲಾನಾ’ ಎಂಬುದನ್ನು ‘ಜಲಾನಾ’ ಎಂದು ತಿರುಚಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿವೆ. ಇಂತಹ ಬಹುತೇಕ ಮಾಧ್ಯಮಗಳ ಮಾಲಿಕರು ಮತ್ತು ಮ್ಯಾನೇಜ್‌ಮೆಂಟ್ ದಲಿತ ವಿರೋಧಿ ಆಗಿರುವುದೇ ಇದಕ್ಕೆಲ್ಲ ಕಾರಣ….

ವಿಡಿಯೊ ಲಿಂಕ್ ವಿಳಾಸ:  https://vimeo.com/315073201 (ವಿಡಿಯೊವನ್ನು ಸ್ಲೋ ಮಾಡಿ ಪರೀಕ್ಷಿಸಿದ್ದು)
ಇದಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ‘ಬೇಕೆಂತಲೇ ವಿಷಯ ತಿರುಚಿ ಗದ್ದಲ ಎಬ್ಬಿಸಲು ನೋಡಿದ ಈ ದಲಿತ ವಿರೋಧಿ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ’ ಎಂದಿದ್ದಾರೆ.

ಮಾನಗೇಡಿ ಚಾನೆಲ್‌ಗಳ ವಿರುದ್ಧ ಚಂದ್ರಶೇಖರ್ ಟ್ವೀಟ್

ಚಲಾನಾ ಎಂಬುದನ್ನು ಜಲಾನಾ ಮಾಡಿ ‘ಬೆಂಕಿ ಹಚ್ಚುವ’ ಇಂತಹ ಮಾಧ್ಯಮಗಳಿಗೆ ನಮ್ಮ ಧಿಕ್ಕಾರವಿರಲಿ. ಅಂದಂತೆ, ಜೆಎನ್‌ಯುನಲ್ಲಿ ಕನ್ಹಯ್ಯಕುಮಾರ್ ಮಾಡಿದ ಭಾಷಣದ ತಿರುಚಿದ ವಿಡಿಯೋವನ್ನು ಮೊದಲು ಪ್ರಸಾರ ಮಾಡಿದ್ದೇ ಇದೇ ಝೀ ನ್ಯೂಸ್ (ಹಿಂದಿ) ಚಾನೆಲ್. ಇದು ಮೋದಿ ಮತ್ತು ಬಿಜೆಪಿಯ ಕಾಲು ನೆಕ್ಕುವ ಚಾನೆಲ್ ಎಂದು ಪದೇ ಪದೇ ಸಾಬೀತಾಗಿದೆ.

(ಕೃಪೆ: ಅಲ್ಟ್ನ್ಯೂಸ್.ಕಾಮ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...