Homeಸುಳ್ಳಪ್ಪೋ ಸುಳ್ಳುಚಲಾನಾ... ಜಲಾನಾ... ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

ಚಲಾನಾ… ಜಲಾನಾ… ನೋಡಿದಿರಾ ‘ಬೆಂಕಿ ಹಚ್ಚುವ’ ಚಾನೆಲ್‌ನಾ?

- Advertisement -
- Advertisement -

ಮಿಥ್ಯ: ‘ಹಮ್ ಭಾರತ್ ಬಂದ್ ಕರನಾ ಜಾನತೆ ಹೈ, ತೊ ಹಮ್ ಭಾರತ್ ಜಲಾನಾ ಭೀ ಜಾನತೆ ಹೈ’
(ಭಾರತ್ ಬಂದ್ ಮಾಡುವುದು ಗೊತ್ತಿರುವ ನಮಗೆ ಭಾರತವನ್ನು ಸುಡುವುದೂ ಗೊತ್ತು)

ಭಾರತ ಸುಡುವ ಇಂತಹ ಪ್ರಚೋದನಾತ್ಮಕ ಹೇಳಿಕೆಯನ್ನು ಭೀಮ್ ಆರ್ಮಿ ಸಂಸ್ಥಾಪಕ, ದಲಿತ ನಾಯಕ ಚಂದ್ರಶೇಖರ್ ಅಜಾದ್ ರಾವಣ್ ಬಹಿರಂಗ ಸಭೆಯಲ್ಲಿ ಆಡಿರುವರೆಂದು ಮೂರು ದಿನಗಳ ಹಿಂದೆ ಝೀ ನ್ಯೂಸ್ (ಹಿಂದಿ) ಮತ್ತು ನ್ಯೂಸ್ 18 ಚಾನೆಲ್‌ಗಳು ಅಪಾದಿಸಿವೆ. ತಮ್ಮ ವೆಬ್‌ಸೈಟಿನಲ್ಲಿನ ಲೇಖನ ಮತ್ತು ಟ್ವಿಟರ್‌ನಲ್ಲಿ ಅವು, ‘ಮುಝಾಫರ್ ನಗರದಲ್ಲಿ ದಲಿತ ಸಭೆಯೊಂದರಲ್ಲಿ ಮಾತನಾಡುವಾಗ ಚಂದ್ರಶೇಖರ್ ಅವರು, ಜನರು ನನ್ನ ಸಿಗ್ನಲ್‌ಗೆ ಕಾಯುತ್ತಿದ್ದಾರೆ, ನಾವು ಭಾರತ್ ಬಂದ್ ಮಾಡಬಲ್ಲೆವಾದರೆ, ಭಾರತವನ್ನು ಸುಡಲೂಬಲ್ಲೆವು…,ನಮ್ಮ ಸಹನೆಗೂ ಒಂದು ಮಿತಿಯಿದೆ, ದೌರ್ಜನ್ಯಗಳಿಗೂ ಒಂದು ಮಿತಿ ಇದೆ ಎಂದು ಹೇಳಿಕೆ ನೀಡಿದರು’ ಎಂದಿವೆ.

ಸತ್ಯ: ಸತ್ಯ ಬೇರೇನೇ ಇದೆ. ಅದಕ್ಕೂ ಮೊದಲು ಝೀ ನ್ಯೂಸ್, ನ್ಯೂಸ್ 18ಗಳ ಈ ಸುದ್ದಿಗೆ ‘ಹಿಂದುತ್ವವಾದಿಗಳು’ ಸ್ಪಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಶೇಖರ್ ವಿರುದ್ಧ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಅತ್ಯಂತ ಪ್ರಚೋದನಾಕಾರಿ ಸಂದೇಶಗಳನ್ನು ಹಾಕಿದ್ದನ್ನು ನೋಡೋಣ.

ತನ್ನನ್ನು ರಾಷ್ಟ್ರೀಯವಾದಿ ಎಂದುಕೊಳ್ಳುವ ‘ಭಯ್ಯಾಜಿ’ (ಟ್ವಿಟರ್ ಹ್ಯಾಂಡಲ್ @shiraloksharma) ಎಂಬ ವ್ಯಕ್ತಿ ಟ್ವೀಟ್ ಮಾಡಿ, ‘ಹಾಗೆ ಭಾರತ ಸುಡುತ್ತೇನೆ ಎಂದು ಬೆದರಿಸುವವರನ್ನು ಅದೇ ಬೆಂಕಿಯಲ್ಲಿ ಹಾಕಿ ಬರ‍್ಯಾನಿ ಮಾಡಿ, ಬೀದಿನಾಯಿಗಳಿಗೆ ಹಾಕುತ್ತೇವೆ. ಪ್ರಯತ್ನ ಮಾಡಿ ನೋಡಿ, ಪರಿಣಾಮ ಏನಾಗುತ್ತೆ ನೋಡಿ’ ಎಂದು ಬೆದರಿಸುತ್ತಾನೆ. ಇದೇ ಬಗೆಯಲ್ಲಿ ಹಲವಾರು ‘ದೇಶಭಕ್ತರು’ ಚಂದ್ರಶೇಖರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದಾರೆ.

‘ಭಯ್ಯಾಜಿ’ ಎನ್ನುವಾತನ ಆಕ್ರೋಶಭರಿತ, ದಲಿತವಿರೋಧಿ ಟ್ವೀಟ್

ಆದರೆ, ಆ ಸಭೆಯ ವಿಡಿಯೋವನ್ನು ಪಡೆದು ಪರೀಕ್ಷಿಸಿದಾಗ, ಚಂದ್ರಶೇಖರ್ ಹೇಳಿದ್ದು: ‘ಭಾರತ್ ಚಲಾನಾ’ (ಭಾರತ ನಡೆಸುವುದು, ಭಾರತ ಆಳುವುದು, ರನ್ನಿಂಗ್ ಇಂಡಿಯಾ) ಎಂದೇ ಹೊರತು, ‘ಭಾರತ್ ಜಲಾನಾ’ (ಭಾರತ ಸುಡುವುದು, ಬರ್ನಿಂಗ್ ಇಂಡಿಯಾ) ಎಂದು ಅಲ್ಲವೇ ಅಲ್ಲ.

ಝೀ ನ್ಯೂಸ್, ನ್ಯೂಸ್18 ಮಾಧ್ಯಮಗಳು ಬೇಕೆಂತಲೇ ‘ಚಲಾನಾ’ ಎಂಬುದನ್ನು ‘ಜಲಾನಾ’ ಎಂದು ತಿರುಚಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿವೆ. ಇಂತಹ ಬಹುತೇಕ ಮಾಧ್ಯಮಗಳ ಮಾಲಿಕರು ಮತ್ತು ಮ್ಯಾನೇಜ್‌ಮೆಂಟ್ ದಲಿತ ವಿರೋಧಿ ಆಗಿರುವುದೇ ಇದಕ್ಕೆಲ್ಲ ಕಾರಣ….

ವಿಡಿಯೊ ಲಿಂಕ್ ವಿಳಾಸ:  https://vimeo.com/315073201 (ವಿಡಿಯೊವನ್ನು ಸ್ಲೋ ಮಾಡಿ ಪರೀಕ್ಷಿಸಿದ್ದು)
ಇದಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ‘ಬೇಕೆಂತಲೇ ವಿಷಯ ತಿರುಚಿ ಗದ್ದಲ ಎಬ್ಬಿಸಲು ನೋಡಿದ ಈ ದಲಿತ ವಿರೋಧಿ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ’ ಎಂದಿದ್ದಾರೆ.

ಮಾನಗೇಡಿ ಚಾನೆಲ್‌ಗಳ ವಿರುದ್ಧ ಚಂದ್ರಶೇಖರ್ ಟ್ವೀಟ್

ಚಲಾನಾ ಎಂಬುದನ್ನು ಜಲಾನಾ ಮಾಡಿ ‘ಬೆಂಕಿ ಹಚ್ಚುವ’ ಇಂತಹ ಮಾಧ್ಯಮಗಳಿಗೆ ನಮ್ಮ ಧಿಕ್ಕಾರವಿರಲಿ. ಅಂದಂತೆ, ಜೆಎನ್‌ಯುನಲ್ಲಿ ಕನ್ಹಯ್ಯಕುಮಾರ್ ಮಾಡಿದ ಭಾಷಣದ ತಿರುಚಿದ ವಿಡಿಯೋವನ್ನು ಮೊದಲು ಪ್ರಸಾರ ಮಾಡಿದ್ದೇ ಇದೇ ಝೀ ನ್ಯೂಸ್ (ಹಿಂದಿ) ಚಾನೆಲ್. ಇದು ಮೋದಿ ಮತ್ತು ಬಿಜೆಪಿಯ ಕಾಲು ನೆಕ್ಕುವ ಚಾನೆಲ್ ಎಂದು ಪದೇ ಪದೇ ಸಾಬೀತಾಗಿದೆ.

(ಕೃಪೆ: ಅಲ್ಟ್ನ್ಯೂಸ್.ಕಾಮ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದ ಆಸ್ಟ್ರೇಲಿಯಾ ಸರ್ಕಾರ

16 ವರ್ಷದೊಳಗಿನ ಎಲ್ಲರಿಗೂ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ದೇಶಾದ್ಯಂತ ನಿಷೇಧಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನು ಬುಧವಾರ ಜಾರಿಗೆ ಬಂದಿದ್ದು, ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್, ಥ್ರೆಡ್ಸ್,...

ಎಸ್.ನಿಜಲಿಂಗಪ್ಪನವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಎಸ್. ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 10ರಂದು, ಮಾಜಿ ಮುಖ್ಯಮಂತ್ರಿ ದಿ| ಎಸ್. ನಿಜಲಿಂಗಪ್ಪರವರ...

ನಕಲಿ ತುಪ್ಪ ವಿವಾದದ ಬಳಿಕ ಮತ್ತೊಂದು ಹಗರಣ; ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಹೆಸರಿನಲ್ಲಿ ‘ಪಾಲಿಯೆಸ್ಟರ್‌’ ದುಪಟ್ಟಾ ಪೂರೈಕೆ

ಲಡ್ಡು ಪ್ರಸಾದಕ್ಕೆ ನಕಲಿ ತುಪ್ಪ ಪೂರೈಕೆ ವಿವಾದದ ಬಳಿಕ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. 2015 ರಿಂದ 2025 ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ರೇಷ್ಮೆ ದುಪಟ್ಟಾಗಳ ಖರೀದಿಯಲ್ಲಿ...

‘ಶಾಶ್ವತ ವಿಪತ್ತು ನಿಧಿಯನ್ನು ಏಕೆ ರಚಿಸಿಲ್ಲ’: ಸಿಎಂ ಸಿದ್ದರಾಮಯ್ಯ ಅವರಿಗೆ ಆರ್. ಅಶೋಕ್ ಪ್ರಶ್ನೆ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಮತ್ತು ರೈತರಿಗೆ 'ದ್ರೋಹ' ಮಾಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಆರ್. ಅಶೋಕ ಮಂಗಳವಾರ ಆರೋಪಿಸಿದ್ದಾರೆ. ಉತ್ತರ ಕರ್ನಾಟಕವನ್ನು ಕಾಡುತ್ತಿರುವ...

ಆಂಧ್ರ ಪ್ರದೇಶ| ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕರ ಬಂಧನ; ಭುಗಿಲೆದ್ದ ಪ್ರತಿಭಟನೆ

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇಡಿ ದಲಿತ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ್ ಕುಮಾರ್ ಮತ್ತು ಶೇಖರ್ ರೆಡ್ಡಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ...

ಝೀ ನ್ಯೂಸ್‌ನಿಂದ 18 ಕೋಟಿ ರೂ. ಪರಿಹಾರ ಕೇಳಿದ ಫೋಟೋಗ್ರಾಫರ್…ಕಾರಣ?

ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳ ಸಾಗಣೆಯನ್ನು ದಾಖಲಿಸಿರುವ ತನ್ನ ಅತ್ಯಮೂಲ್ಯ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿಕೊಂಡಿದ್ದಕ್ಕೆ ಝೀ ನ್ಯೂಸ್‌ ಚಾನೆಲ್‌ ವಿರುದ್ದ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶಿತರಾದ ಚಲನಚಿತ್ರ ನಿರ್ಮಾಪಕ ಮತ್ತು ಛಾಯಾಗ್ರಾಹಕ ರೋನಿ ಸೇನ್ ಹಕ್ಕುಸ್ವಾಮ್ಯ...

ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್‌ಗೆ ಚಪ್ಪಲಿಯಿಂದ ಹಲ್ಲೆ

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್ ಅವರಿಗೆ ಮಂಗಳವಾರ (ಡಿಸೆಂಬರ್ 9) ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಸಂಕೀರ್ಣದೊಳಗೆ ಅಪರಿಚಿತ ವ್ಯಕ್ತಿಗಳು...

ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟಿದ್ದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ 

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಯನ್ನು ಶಿಫಾರಸು ಮಾಡುವ ಆಯ್ಕೆ...

ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು : ಸೋನಿಯಾ ಗಾಂಧಿಗೆ ದೆಹಲಿ ಕೋರ್ಟ್ ನೋಟಿಸ್

ಭಾರತದ ಪೌರತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರು ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರಿಗೆ ದೆಹಲಿಯ ವಿಶೇಷ ನ್ಯಾಯಾಲಯ ಮಂಗಳವಾರ (ಡಿಸೆಂಬರ್...

‘ಕಾನೂನುಗಳು ನಾಗರಿಕರ ಅನುಕೂಲಕ್ಕಾಗಿ ಇರಬೇಕು, ಕಿರುಕುಳ ನೀಡಬಾರದು’: ಪ್ರಧಾನಿ ಮೋದಿ 

ಪ್ರಧಾನಿ ನರೇಂದ್ರ ಮೋದಿ ಅವರು ಶಾಸಕರು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ‘ದೇಶದ ಯಾವುದೇ ವ್ಯಕ್ತಿ ಕಾನೂನು ಅಥವಾ ನಿಯಮಗಳಿಂದಾಗಿ ಕಿರುಕುಳ, ಅನಾನುಕೂಲತೆಯನ್ನು ಎದುರಿಸಬಾರದು. ಅಂತಹ...