Homeಅಂಕಣಗಳುನಾವು ದಕ್ಷಿಣ ಭಾರತೀಯರು ಕಪಿಗಳಾ?

ನಾವು ದಕ್ಷಿಣ ಭಾರತೀಯರು ಕಪಿಗಳಾ?

- Advertisement -
- Advertisement -

ಗೌರಿ ಲಂಕೇಶ್ |

ರಾಮಸೇತುವಿನ ಸುತ್ತ ನಡೆಯುವ ವಾದವಿವಾದಗಳಲ್ಲಿ ನನ್ನದೊಂದು ಪ್ರಶ್ನೆಗೆ ಯಾರಾದರೂ ಉತ್ತರ ನೀಡುತ್ತಾರಾ? ಪ್ರಶ್ನೆ ಏನೆಂದರೆ ರಾಮ ಸೇತುವನ್ನು ರಾಮನೇ ಕಟ್ಟಿದ್ದು-ನಂಬಿಕೆ/ಪುರಾಣ/ಚರಿತ್ರೆ ಅಥವಾ ಇನ್ನಾವುದೋ ಕಾಗಕ್ಕ-ಗುಬ್ಬಕ್ಕ ಕತೆಯ ಪ್ರಕಾರ ಎಂಬುದನ್ನು ಸತ್ಯ ಎಂದು ಒಪ್ಪಿಕೊಳ್ಳುವುದಾದರೆ, ಅದೇ ಪ್ರಕರಣ ಕುರಿತಂತೆ ನಾವು ದಕ್ಷಿಣ ಭಾರತದ ಜನ ವಾನರರು-ಅಂದರೆ ಕಪಿಗಳು, ಮಂಗಗಳು ಎಂಬುದನ್ನು ಒಪ್ಪಿಕೊಳ್ಳಬೇಕಲ್ಲವೇ?

ಈ ಪ್ರಶ್ನೆ ಯಾಕೆಂದರೆ ರಾಮಾಯಣದ ಪ್ರಕಾರ ರಾಮನ ಸೈನ್ಯದಲ್ಲಿ ಇದ್ದದ್ದು ಕಪಿಗಳು. ಆ ಕಾಲದಲ್ಲೇ ರಾಮ ಆದರ್ಶ ಪುರುಷನಾಗಿದ್ದರೂ, ಏಕಪತ್ನಿವ್ರತಸ್ಥನಾಗಿದ್ದರೂ ದಕ್ಷಿಣ ಭಾರತದ ‘ಜನ’ ಇನ್ನೂ ಮಂಗಗಳಾಗಿಯೇ ಉಳಿದಿದ್ದರಲ್ಲದೆ, ಪಕ್ಕಾ ಕಾಡುಪ್ರಾಣಿಗಳಂತೆ ಜೀವಿಸುತ್ತಿದ್ದರು. ಒಬ್ಬರ ಹೆಂಡಂದಿರನ್ನು ಇನ್ನೊಬ್ಬರು ಲಪಟಾಯಿಸುತ್ತಿದ್ದರು, ವಿವೇಚನಾ ಶಕ್ತಿ ಇಲ್ಲದವರಾಗಿದ್ದರು!

ಕತೆ, ಪುರಾಣ, ಚರಿತ್ರೆ, ಇತಿಹಾಸ, ವಿಜ್ಞಾನ ಇವುಗಳ ನಡುವಿನ ವ್ಯತ್ಯಾಸವನ್ನು ಅರಿಯದ ಜನ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮನ ವಾನರ ಸೈನ್ಯ ಈ ಸೇತುವೆಯನ್ನು ನಿರ್ಮಿಸಿತ್ತು’ ಎಂದು ವಾದಿಸುತ್ತಾರಲ್ಲವೆ, ಬೀದಿಗಿಳಿದು ಮಂಗಗಳಂತೆ ವರ್ತಿಸುತ್ತಾರೆ.
ಎಲ್ಲಾ ಧರ್ಮಗಳಲ್ಲೂ ಅತಿಶಯೋಕ್ತಿ ಎನಿಸುವ ಮೆಟಫರ್‌ಗಳಿರುತ್ತವೆ. ಅಥವಾ ಆ ಧರ್ಮ ಜನಿಸಿದ್ದ ಕಾಲದ ಮರ್ತಮಾನದಲ್ಲಿ ಮನುಷ್ಯನ ಅರಿವಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ಹಲವು ಕತೆಗಳನ್ನು, ನೀತಿಪಾಠಗಳನ್ನು ಕಟ್ಟಿ ಕೊಡುತ್ತವಲ್ಲದೆ ಮನುಷ್ಯನ ಕಲ್ಪನೆಗೆ ಅರೋಪಿಸಿ ದೈವಶಕ್ತಿಯ ಬಗ್ಗೆ ನಂಬಿಕೆ ಜನಿಸುವಂತೆ ಮಾಡಿರಲಾಗುತ್ತದೆ.

ಉದಾಹರಣೆಗೆ ಕ್ರೈಸ್ತ ಧರ್ಮ ಎರಡು ಸಾವಿರ ವರ್ಷಗಳ ಹಿಂದೆ ಜನಿಸಿದಾಗ ಮಾನವನ ವಿಕಸನದ ಬಗ್ಗೆ ಗೊತ್ತಿರಲಿಲ್ಲ. ಆದ್ದರಿಂದ ಆ ಧರ್ಮದಲ್ಲಿ ಈಡನ್ ಗಾರ್ಡನ್‌ನ ಕಲ್ಪನೆ ಇದೆಯಲ್ಲದೆ, ಭೂಮಿ ಚಪ್ಪಟೆ ಆಗಿದೆ ಎಂದೂ, ಅದರ ಸುತ್ತ ಸೂರ್ಯನೆ ಚಲಿಸುತ್ತಾನೆಂದೂ ಅದರ ಧರ್ಮಗ್ರಂಥ ಬೈಬಲ್‌ನಲ್ಲಿ ದಾಖಲಿಸಲಾಗಿದೆ. ಅಂದಮಾತ್ರಕ್ಕೆ ಇವತ್ತು ಸತ್ಯ ಎಂದು ಸಾಬೀತುಪಡಿಸಲಾಗಿರುವ ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದವನ್ನು, ಕೊಪರ್ ನಿಕಸ್‌ನ ಸೌರ ಮಂಡಲದ ರೂಪವನ್ನು ನಿರಾಕರಿಸಲಾಗುತ್ತದೆಯೇ?

ಅಂದಹಾಗೆ ಹದಿನಾರನೇ ಶತಮಾನದಲ್ಲಿ ಕೊಪರ್‌ನಿಕಸ್ ಮತ್ತು 19ನೇ ಶತಮಾನದಲ್ಲಿ ಚಾರ್ಲ್ಸ್ ಡಾರ್ವಿನ್ ಇಬ್ಬರೂ ಅಂದಿನ ಮೂಲಭೂತವಾದಿ ಕ್ರೈಸ್ತರ ನಿಂದನೆಗೆ ಗುರಿಯಾಗಿದ್ದರು. ನಮ್ಮ ವಿಪರ್ಯಾಸ ಎಂತಹದ್ದೆಂದರೆ ಇವತ್ತು 21ನೇ ಶತಮಾನದಲ್ಲಿ ವೈಜ್ಞಾನಿಕವಾಗಿ ಲಭ್ಯವಿರುವ ಸಾಕ್ಷ್ಯಯಗಳನ್ನು ಆಧರಿಸಿ ರಾಮಸೇತುವನ್ನು ರಾಮನಾಗಲಿ, ಕಪಿಸೈನ್ಯವಾಗಲಿ ನಿರ್ಮಿಸಿದ್ದಲ್ಲ ಎಂದು ಹೇಳಿದರೆ ‘ಹಿಂದೂ ನಂಬಿಕೆಗಳಿಗೆ ಅವಮಾನ’ ಎಂದು ಕೂಗಾಡುವವರು, ಪ್ರತಿಭಟನೆಗೆ ಇಳಿಯುವವರು ನಮ್ಮ ಸುತ್ತಲೂ ಇದ್ದಾರೆ.
ಹೋಗಲಿ, ಇಲ್ಲಿಯವರೆಗೂ ಲಭ್ಯವಾಗಿರುವ ಮಾಹಿತಿ ಏನನ್ನು ಹೇಳುತ್ತದೆ ಎಂಬುದಕ್ಕೆ ಹಲವು ಅಂಕಿಅಂಶಗಳನ್ನು ಗಮನಿಸೋಣ. ಭೂಖಂಡ ಚದುರುವಿಕೆ ಸಂಭವಿಸಿ ಇಂದಿನ ವಿವಿಧ ಖಂಡಗಳು ನಿರ್ಮಿತವಾಗಿದ್ದು ಸುಮಾರು 2,00,000,000 ವರ್ಷಗಳ ಹಿಂದೆ. ಅಷ್ಟೇ ಅಲ್ಲ, ಆಧುನಿಕ ಮಾನವ ರೂಪಗೊಂಡಿದ್ದೂ 1,00,000 ವರ್ಷಗಳ ಹಿಂದೆ. ಅದರಲ್ಲೂ ತೀರಾ ಇತ್ತೀಚೆಗೆ ಎನಿಸುವ 10,000 ವರ್ಷಗಳ ಹಿಂದಷ್ಟೇ ಆತ ಕಾಡುಪ್ರಾಣಿಯಂತೆ ಜೀವಿಸುವುದನ್ನು ನಿಲ್ಲಿಸಿ ಕೃಷಿಕನಾಗಿದ್ದು. ಅಂದರೆ ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಭೂಮಿಯ ಮೇಲೆ ರಾಜರು, ರಾಜವಂಶಗಳು, ಇಂಥದ್ದು ಯಾವುದೂ ಇರಲಿಲ್ಲ.

ಭಾರತದ ಬಗ್ಗೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮಧ್ಯೆಪ್ರದೇಶದ ಭೀಮ್‌ಬೆಟ್ಟ ಎಂಬಲ್ಲಿ ಲಭ್ಯವಾಗಿರುವ ಮಾಹಿತಿಯ ಪ್ರಕರ 9,000 ವರ್ಷಗಳ ಹಿಂದೆ ಇಲ್ಲಿ ಕಾಡುಮಾನವ ವಾಸಿಸುತ್ತಿದ್ದ, ಅದಕ್ಕಿಂತ ಪುರಾತನ ಕಾಲದಲ್ಲಿ ಇಲ್ಲಿ ಮಾನವ ಇದ್ದನೆಂಬುದಕ್ಕೆ ಯಾವುದೇ ಪುರಾವೆಗಳೂ ಸಿಕ್ಕಿಲ್ಲ. ಅಷ್ಟು ಮಾತ್ರವಲ್ಲ, ಹರಪ್ಪ ನಾಗರಿಕತೆ ಇದ್ದದ್ದು ಸುಮಾರು 4,000 ವರ್ಷಗಳ ಹಿಂದೆ; ಋಗ್ವೇದ ರಷಿತವಾಗಿದ್ದು 3.000 ವರ್ಷಗಳ ಹಿಂದೆ, ರಾಮಾರಣವನ್ನು ವಾಲ್ಮೀಕಿ ರಚಿಸಿದ್ದು 2,300 ವರ್ಚಗಳ ಕೆಳಗೆ. ತುಳಸಿದಾಸ ತನ್ನ ರಾಮಚರಿತ ಮಾನಸ ಸೃಷ್ಟಿಸಿದ್ದು 400 ವರ್ಷಗಳ ಹಿಂದೆ.

ಈ ಎಲ್ಲಾ ಅಂಕಿ, ಅಂಶಗಳನ್ನು ಗಣನೆಗೆ ತೆಗೆದುಕೊಂಡು ನೋಡಿದಾಗ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮ ಈ ಸೇತುವೆಯನ್ನು ನಿರ್ಮಿಸಿದ್ದ’ ಎಂದು ಚೆಡ್ಡಿಗಳು ಅರಚುತ್ತಿರುವುದು ಎಷ್ಟು ಹಾಸ್ಯಾಸ್ಪದವಾಗಿ ಕಾಣಿಸುತ್ತದಲ್ಲವೇ?!

26 ಸೆಪ್ಟೆಂಬರ್, 2007 (‘ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...