Homeಪ್ರಪಂಚ'ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ' - ನ್ಯೂಯಾರ್ಕ್ ಟೈಮ್ಸ್

‘ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ’ – ನ್ಯೂಯಾರ್ಕ್ ಟೈಮ್ಸ್

- Advertisement -
(2018 ಏಪ್ರಿಲ್ 16ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ಆಯ್ದ ಭಾಗ)
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರಂತರವಾಗಿ ಟ್ವೀಟ್ ಮಾಡುತ್ತ ತಮ್ಮನ್ನು ತಾವು ಒಬ್ಬ ಪ್ರತಿಭಾವಂತ ವಾಗ್ಮಿ ಎಂದು ಸಾಬೀತುಪಡಿಸುತ್ತಲೇ ಇದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ಅಡಿಪಾಯದಲ್ಲಿ ಸದಾ ಸನ್ನದ್ಧವಾಗಿರುವ ಅದರ ಅಂಗಸಂಸ್ಥೆಗಳಾದ ಕೋಮುವಾದಿ ಸಂಘಟನೆಗಳು, ಉಗ್ರ ರಾಷ್ಟ್ರೀಯವಾದಿಗಳು ಅಲ್ಲಿನ ಅಲ್ಪಸಂಖ್ಯಾತರನ್ನು ಮಹಿಳೆಯರನ್ನು ಕ್ರೂರವಾಗಿ ಹಿಂಸಿಸುತ್ತಿರುವಾಗ ಮಾತ್ರ ಮೋದಿಯವರ ಬಾಯಿ ಕಟ್ಟಿಬಿಡುತ್ತದೆ, ಅವರ ಧ್ವನಿ ಹೊರಡುವುದೇ ಇಲ್ಲ. ಕಳೆದ ಜನವರಿಯಲ್ಲಿ ಜಮ್ಮುವಿನ ಎಂಟು ವರ್ಷದ ಬಾಲಕಿಯನ್ನು ಆರು ಜನ ಅತ್ಯಾಚಾರ ಮಾಡಿ ಕೊಂದು ಹಾಕಿದ್ದರು… ಇಂಥಾ ಭಯಾನಕ ಘಟನೆಗೆ ಕಾರಣರಾದವರನ್ನು ಸಮರ್ಥಿಸಲು ನರೇಂದ್ರ ಮೋದಿಯವರ ಪಕ್ಷದ ಮಂತ್ರಿಗಳೇ ಮೆರವಣಿಗೆ ಹೊರಟರು. ಭಾರತದ ಜನ ತಮ್ಮದೇ ಸರಕಾರದ ಈ ಕಠೋರ ನಿಲುವನ್ನು ಖಂಡಿಸಿ ಈಗ ಬೀದಿಗಿಳಿದಿದ್ದಾರೆ. ಆದರೆ ಮಿಸ್ಟರ್ ಮೋದಿ ಮಾತ್ರ ಈ ಹೀನ ಪ್ರಕರಣಗಳ ಹಿಂದಿರುವ ತಮ್ಮದೇ ಬೆಂಬಲರಿಗರ ಕುರಿತು ಮಾತನಾಡುತ್ತಲೇ ಇಲ್ಲ.
…. ಅಲೆಮಾರಿ ಕುರಿಗಾಹಿ ಸಮುದಾಯವನ್ನು ಹೆದರಿಸಿ ಓಡಿಸಲು ಆ ಎಂಟು ವರ್ಷದ ಬಾಲಕಿ ಆಸೀಫಾಳನ್ನು ಜನವರಿಯಲ್ಲಿ ಅಪಹರಿಸಲಾಗಿತ್ತು. ಆಕೆಯನ್ನು ಒಂದು ಹಿಂದೂ ದೇವಾಲಯದಲ್ಲಿ ಅನೇಕ ದಿನಗಳವರೆಗೆ ಕೂಡಿ ಹಾಕಿ ಅತ್ಯಾಚಾರ ಮಾಡಿ ನಂತರ ಕೊಂದು ಹಾಕಲಾಯಿತು. ಈ ಕೃತ್ಯ ಮಾನವನ ನೈತಿಕ ಭ್ರಷ್ಟತೆಯ ಅಧಃಪತನವನ್ನು ಸಂಕೇತಿಸುತ್ತದೆ. ಇಷ್ಟೆಲ್ಲ ನಡೆದರೂ, ಜನ ಬೀದಿಗೆ ಇಳಿಯುವವರೆಗೂ ಮೋದಿ ಈ ಭಯಾನಕ ಕೃತ್ಯದ ಕುರಿತು ಬಾಯಿಬಿಡಲು ಸಿದ್ಧರಿರಲಿಲ್ಲ.
…. ಜಮ್ಮು ಕಾಶ್ಮೀರದ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಪಕ್ಷದ ಇಬ್ಬರು ಮಂತ್ರಿಗಳು ಈ ಬಂಧಿತ ಆಪಾದಿತರ ಪರವಾಗಿ ನಡೆದ ರ್ಯಾಲಿಗಳಲ್ಲಿ ಪಾಲ್ಗೊಂಡು ಬೀದಿಗಿಳಿದರು. ಆಪಾದಿತರ ಪರವಾದ ಈ ರ್ಯಾಲಿಗಳ ಮುಖ್ಯ ಉದ್ದೇಶ, ಈ ಪ್ರಕರಣದ ತನಿಖೆಯನ್ನ ಸ್ಥಳೀಯ ಆಡಳಿತದಲ್ಲಿರುವ ಮುಸ್ಲಿಂ ಅಧಿಕಾರಿಗಳಿಗೆ ವಹಿಸದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸಿಬಿಐಗೆ ವಹಿಸಬೇಕು ಎಂಬುದೇ ಆಗಿತ್ತು. ಪೊಲೀಸರು ಸದರಿ ಪ್ರಕರಣದ ಪ್ರಥಮ ಮಾಹಿತಿ ವರದಿಯನ್ನು ಮತ್ತು ಕೋರ್ಟಿನಲ್ಲಿ ಚಾರ್ಜ್‍ಷೀಟ್ ಹಾಕುವುದನ್ನೂ ಅಲ್ಲಿನ ಹಿಂದೂ ವಕೀಲರು ತಡೆದಿದ್ದರು….
ತನ್ನದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಇನ್ನೊಂದು ಪ್ರಭಾವಿ ರಾಜ್ಯವಾದ ಉತ್ತರ ಪ್ರದೇಶದ ಉನ್ನಾವೋದಲ್ಲಿ ತನ್ನದೇ ಪಕ್ಷದ ಶಾಸಕನೊಬ್ಬ ಅತ್ಯಾಚಾರದ ಗಂಭೀರ ಪ್ರಕರಣದಲ್ಲಿ ಆಪಾದಿತನಾಗಿದ್ದರೂ ಮಿಸ್ಟರ್ ಮೋದಿ ಮಾತನಾಡಲು ಬಯಸಲಿಲ್ಲ…. ತನ್ನ ಮೇಲೆ ಸದರಿ ಶಾಸಕ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆ ಪುಟ್ಟ ಹುಡುಗಿ ಪೊಲೀಸರಿಗೆ ದೂರು ನೀಡಲು ಹೋದರೂ ಸಂಬಂಧಿಸಿದ ಠಾಣಾಧಿಕಾರಿ ಆ ಶಾಸಕನ ವಿರುದ್ಧದ  ದೂರನ್ನು ದಾಖಲಿಸಿಕೊಳ್ಳದೆ ನಿರ್ಲಕ್ಷಿಸಿದ. ಇಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯನ್ನು ಸುಳ್ಳು ಕೇಸಿನ ಮೇಲೆ ಅರೆಸ್ಟ್ ಮಾಡಲಾಯಿತು. ಪೊಲೀಸ್ ಕಸ್ಟಡಿಯಲ್ಲಿದ್ದ ಬಾಲಕಿಯ ತಂದೆಯನ್ನು ಅತ್ಯಾಚಾರಿ ಶಾಸಕ ಮತ್ತು ಅವನ ತಮ್ಮ ಹೊಡೆದು ಸಾಯಿಸಿದರು.
ಹಲವು ವಾರಗಳ ನಂತರ, ಮೊನ್ನೆ ಶುಕ್ರವಾರ ಮೋದಿ `ಈ ಪ್ರಕರಣಗಳು ದೇಶಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ, ಇವು ಅತ್ಯಂತ ನಾಚಿಕೆಗೇಡಿನ ಪ್ರಕರಣಗಳು, ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ’ ಎಂಬ ಲೋಕಾಭಿರಾಮದ ಮಾತುಗಳನ್ನು ಆಡಿದ್ದಾರೆ. ಗಾಳಿಯಲ್ಲಿ ಕಡ್ಡಿಯಾಡಿಸಿದಂತಹ ಮೋದಿಯ ಮಾತುಗಳು ಈ ಕ್ರೂರ ಹಿಂಸೆಯ ಪ್ರಕರಣಗಳನ್ನು ಸಾಮಾನ್ಯ ಕ್ರೈಮ್ ಮಟ್ಟಕ್ಕೆ ಇಳಿಸಿದ್ದವು. ಬಿಜೆಪಿ ಪಕ್ಷದ ಅಂಗಸಂಘಟನೆಗಳಾದ ಹಿಂದೂ ಮಿಲಿಟಂಟ್ ಗುಂಪುಗಳಿಗೆ ಸೇರಿದ ಹಂತಕರು, ತಾವು ಪವಿತ್ರವೆಂದು ಭಾವಿಸುವ ಹಸುಗಳನ್ನು ಕೊಂದು ತಿಂದಿದ್ದಾರೆ ಎಂದು ಭಾರತದ ಶ್ರೇಣೀಕರಣದ ಕೆಳಹಂತದಲ್ಲಿರುವ ದಲಿತರ ಮೇಲೆ ಮತ್ತು ಮುಸ್ಲಿಮರ ಮೇಲೆ ಸುಳ್ಳು ಆರೋಪ ಹೊರಿಸಿ ಅನೇಕರನ್ನು ಕೊಂದು ಹಾಕಿದ್ದಾರೆ. ಇಂತಹ ಭೀಕರ ಹಿಂಸಾ ಕೃತ್ಯಗಳು ನಡೆದರೂ ಮೋದಿ ತಮ್ಮ ದಿವ್ಯ ಮೌನದ ಆಚೆಗೆ ಬರುವುದಿಲ್ಲ.
ಮೋದಿಯ ಈ ಮೌನ ಅತ್ಯಂತ ಗೊಂದಲಮಯ ಮತ್ತು ಅವರ ಶೋಚನೀಯ ಮನಃಸ್ಥಿತಿಯ ದ್ಯೋತಕ. 2012-13ರಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಮೋದಿಗಿಂತ ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರದ ಮುಖ್ಯಸ್ಥರು ಜನ ಬೀದಿಗಿಳಿಯುವ ಮುನ್ನವೇ ಘಟನೆಯನ್ನು ಖಂಡಿಸಿದ್ದರು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು. ತಮ್ಮ ಹಿಂದಿನ ಸರ್ಕಾರದ ಒಳ್ಳೆಯ ನಡವಳಿಕೆಗಳನ್ನು ಮಿಸ್ಟರ್ ಮೋದಿ ಅನುಸರಿಸಲು ಮುಂದಾದ ಉದಾಹರಣೆಗಳೇ ಇಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಅನೇಕ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತು ಮತ್ತು ಮೋದಿಯ ಬಿಜೆಪಿ ಪಕ್ಷ 2014ರ ಚುನಾವಣೆಯಲ್ಲಿ ಹಿಂದೆಂದೂ ಪಡೆಯದಷ್ಟು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತು. ಹಿಂದಿನ ಸರ್ಕಾರದ ಹೊಣೆಗೇಡಿತನ, ಪ್ರಚ್ಛನ್ನ ಭ್ರಷ್ಟಾಚಾರಗಳನ್ನು ಟೀಕಿಸುತ್ತಲೇ ಮೋದಿ ಚುನಾವಣಾ ಪ್ರಚಾರ ಮಾಡಿದರು. ಮತ್ತು ಸಾಮಾನ್ಯ ಜನರ ಉತ್ತರದಾಯಿತ್ವವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದುಕೊಂಡಿದೆ ಎನ್ನುತ್ತಲೇ ಮಿಸ್ಟರ್ ಮೋದಿ ಅಧಿಕಾರಕ್ಕೆ ಬಂದರು.
ಆದರೆ ಇಂದು ಮಿಸ್ಟರ್ ಮೋದಿಯವರು ಒಂದು ಬಗೆಯ ಆತ್ಮವಂಚಕ ಮೌನಕ್ಕೆ ಮರೆಹೋಗಿದ್ದಾರೆ. ಜಗತ್ತಿನ ಬಹುದೊಡ್ಡ ಪ್ರಜಾತಂತ್ರ ದೇಶದ ಆರೋಗ್ಯವನ್ನು ಬಯಸುವ ಎಲ್ಲರೂ ಈ ಕಾರಣಕ್ಕಾಗಿ ಚಿಂತಿತರಾಗಿದ್ದಾರೆ.
ಮಿಸ್ಟರ್ ಮೋದಿ ತನ್ನ ಬೆಂಬಲಿಗರು ನಡೆಸುವ ಎಲ್ಲ ಅಪರಾಧಗಳ ಕುರಿತು ಮಾತಾಡಲೇಬೇಕೆಂದೇನೂ ಇಲ್ಲ. ಆದರೆ ಇತ್ತೀಚೆಗೆ ನಡೆಯುತ್ತಿರುವ ಹಿಂಸಾಕೃತ್ಯಗಳು ಮತ್ತು ಅತ್ಯಾಚಾರಗಳು ವೈಯಕ್ತಿಕ ದ್ವೇಷಗಳಿಂದ ನಡೆದಂತವುಗಳಲ್ಲ ಮತ್ತು ನಿತ್ಯ ನಡೆಯಬಹುದಾದ ಮಾಮೂಲು ಕ್ರಿಮಿನಲ್ ಕೃತ್ಯಗಳೂ ಅಲ್ಲ. ಈ ಹಿಂಸಾಚಾರಗಳು ಯೋಜನಾಬದ್ಧ ಸಂಘಟಿತ ಅಪರಾಧ ಕೃತ್ಯಗಳು. ಈ ಕೃತ್ಯಗಳ ಹಿಂದೆ ಉಗ್ರ ರಾಷ್ಟ್ರವಾದಿ ಗುಂಪುಗಳ ಸ್ಪಷ್ಟ ಕೈವಾಡಗಳಿವೆ. ಈ ಸಂಘಟಿತ ಜನವಿರೋಧಿ ಗುಂಪುಗಳು ಮಹಿಳೆಯರಲ್ಲಿ, ದಲಿತರಲ್ಲಿ, ಮುಸ್ಲಿಮರಲ್ಲಿ ಮತ್ತು ಬಡವರಲ್ಲಿ ಭಯದ ವಾತಾವರಣವನ್ನು ಮೂಡಿಸಲೆಂದೇ ಕಾರ್ಯಾಚರಣೆಗಿಳಿದಿವೆ.
ಮಿಸ್ಟರ್ ಪ್ರಧಾನ ಮಂತ್ರಿಯವರು ಸುತ್ತಲು ನೆರೆದಿರುವ ತನ್ನ ರಾಜಕೀಯ ಬೆಂಬಲಿಗರ ಕೃತ್ಯಗಳನ್ನು ನೋಡಿ ಸುಮ್ಮನಿರುವುದಲ್ಲ, ದೇಶದ ಎಲ್ಲ ಜನರ ಹಿತ ಕಾಪಾಡಲು ಮಾತಾಡಬೇಕಿದೆ ಮತ್ತು ಮುಂದಾಗಬೇಕಿದೆ.
ಸಂಪಾದಕೀಯ ಮಂಡಳಿ
ನ್ಯೂಯಾರ್ಕ್ ಟೈಮ್ಸ್, ಅಮೆರಿಕ
ಅನುವಾದ: ಎ ಎಸ್ ಪ್ರಭಾಕರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...