Homeಪ್ರಪಂಚ'ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ' - ನ್ಯೂಯಾರ್ಕ್ ಟೈಮ್ಸ್

‘ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ’ – ನ್ಯೂಯಾರ್ಕ್ ಟೈಮ್ಸ್

- Advertisement -
(2018 ಏಪ್ರಿಲ್ 16ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ಆಯ್ದ ಭಾಗ)
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರಂತರವಾಗಿ ಟ್ವೀಟ್ ಮಾಡುತ್ತ ತಮ್ಮನ್ನು ತಾವು ಒಬ್ಬ ಪ್ರತಿಭಾವಂತ ವಾಗ್ಮಿ ಎಂದು ಸಾಬೀತುಪಡಿಸುತ್ತಲೇ ಇದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ಅಡಿಪಾಯದಲ್ಲಿ ಸದಾ ಸನ್ನದ್ಧವಾಗಿರುವ ಅದರ ಅಂಗಸಂಸ್ಥೆಗಳಾದ ಕೋಮುವಾದಿ ಸಂಘಟನೆಗಳು, ಉಗ್ರ ರಾಷ್ಟ್ರೀಯವಾದಿಗಳು ಅಲ್ಲಿನ ಅಲ್ಪಸಂಖ್ಯಾತರನ್ನು ಮಹಿಳೆಯರನ್ನು ಕ್ರೂರವಾಗಿ ಹಿಂಸಿಸುತ್ತಿರುವಾಗ ಮಾತ್ರ ಮೋದಿಯವರ ಬಾಯಿ ಕಟ್ಟಿಬಿಡುತ್ತದೆ, ಅವರ ಧ್ವನಿ ಹೊರಡುವುದೇ ಇಲ್ಲ. ಕಳೆದ ಜನವರಿಯಲ್ಲಿ ಜಮ್ಮುವಿನ ಎಂಟು ವರ್ಷದ ಬಾಲಕಿಯನ್ನು ಆರು ಜನ ಅತ್ಯಾಚಾರ ಮಾಡಿ ಕೊಂದು ಹಾಕಿದ್ದರು… ಇಂಥಾ ಭಯಾನಕ ಘಟನೆಗೆ ಕಾರಣರಾದವರನ್ನು ಸಮರ್ಥಿಸಲು ನರೇಂದ್ರ ಮೋದಿಯವರ ಪಕ್ಷದ ಮಂತ್ರಿಗಳೇ ಮೆರವಣಿಗೆ ಹೊರಟರು. ಭಾರತದ ಜನ ತಮ್ಮದೇ ಸರಕಾರದ ಈ ಕಠೋರ ನಿಲುವನ್ನು ಖಂಡಿಸಿ ಈಗ ಬೀದಿಗಿಳಿದಿದ್ದಾರೆ. ಆದರೆ ಮಿಸ್ಟರ್ ಮೋದಿ ಮಾತ್ರ ಈ ಹೀನ ಪ್ರಕರಣಗಳ ಹಿಂದಿರುವ ತಮ್ಮದೇ ಬೆಂಬಲರಿಗರ ಕುರಿತು ಮಾತನಾಡುತ್ತಲೇ ಇಲ್ಲ.
…. ಅಲೆಮಾರಿ ಕುರಿಗಾಹಿ ಸಮುದಾಯವನ್ನು ಹೆದರಿಸಿ ಓಡಿಸಲು ಆ ಎಂಟು ವರ್ಷದ ಬಾಲಕಿ ಆಸೀಫಾಳನ್ನು ಜನವರಿಯಲ್ಲಿ ಅಪಹರಿಸಲಾಗಿತ್ತು. ಆಕೆಯನ್ನು ಒಂದು ಹಿಂದೂ ದೇವಾಲಯದಲ್ಲಿ ಅನೇಕ ದಿನಗಳವರೆಗೆ ಕೂಡಿ ಹಾಕಿ ಅತ್ಯಾಚಾರ ಮಾಡಿ ನಂತರ ಕೊಂದು ಹಾಕಲಾಯಿತು. ಈ ಕೃತ್ಯ ಮಾನವನ ನೈತಿಕ ಭ್ರಷ್ಟತೆಯ ಅಧಃಪತನವನ್ನು ಸಂಕೇತಿಸುತ್ತದೆ. ಇಷ್ಟೆಲ್ಲ ನಡೆದರೂ, ಜನ ಬೀದಿಗೆ ಇಳಿಯುವವರೆಗೂ ಮೋದಿ ಈ ಭಯಾನಕ ಕೃತ್ಯದ ಕುರಿತು ಬಾಯಿಬಿಡಲು ಸಿದ್ಧರಿರಲಿಲ್ಲ.
…. ಜಮ್ಮು ಕಾಶ್ಮೀರದ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಪಕ್ಷದ ಇಬ್ಬರು ಮಂತ್ರಿಗಳು ಈ ಬಂಧಿತ ಆಪಾದಿತರ ಪರವಾಗಿ ನಡೆದ ರ್ಯಾಲಿಗಳಲ್ಲಿ ಪಾಲ್ಗೊಂಡು ಬೀದಿಗಿಳಿದರು. ಆಪಾದಿತರ ಪರವಾದ ಈ ರ್ಯಾಲಿಗಳ ಮುಖ್ಯ ಉದ್ದೇಶ, ಈ ಪ್ರಕರಣದ ತನಿಖೆಯನ್ನ ಸ್ಥಳೀಯ ಆಡಳಿತದಲ್ಲಿರುವ ಮುಸ್ಲಿಂ ಅಧಿಕಾರಿಗಳಿಗೆ ವಹಿಸದೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸಿಬಿಐಗೆ ವಹಿಸಬೇಕು ಎಂಬುದೇ ಆಗಿತ್ತು. ಪೊಲೀಸರು ಸದರಿ ಪ್ರಕರಣದ ಪ್ರಥಮ ಮಾಹಿತಿ ವರದಿಯನ್ನು ಮತ್ತು ಕೋರ್ಟಿನಲ್ಲಿ ಚಾರ್ಜ್‍ಷೀಟ್ ಹಾಕುವುದನ್ನೂ ಅಲ್ಲಿನ ಹಿಂದೂ ವಕೀಲರು ತಡೆದಿದ್ದರು….
ತನ್ನದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವ ಇನ್ನೊಂದು ಪ್ರಭಾವಿ ರಾಜ್ಯವಾದ ಉತ್ತರ ಪ್ರದೇಶದ ಉನ್ನಾವೋದಲ್ಲಿ ತನ್ನದೇ ಪಕ್ಷದ ಶಾಸಕನೊಬ್ಬ ಅತ್ಯಾಚಾರದ ಗಂಭೀರ ಪ್ರಕರಣದಲ್ಲಿ ಆಪಾದಿತನಾಗಿದ್ದರೂ ಮಿಸ್ಟರ್ ಮೋದಿ ಮಾತನಾಡಲು ಬಯಸಲಿಲ್ಲ…. ತನ್ನ ಮೇಲೆ ಸದರಿ ಶಾಸಕ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆ ಪುಟ್ಟ ಹುಡುಗಿ ಪೊಲೀಸರಿಗೆ ದೂರು ನೀಡಲು ಹೋದರೂ ಸಂಬಂಧಿಸಿದ ಠಾಣಾಧಿಕಾರಿ ಆ ಶಾಸಕನ ವಿರುದ್ಧದ  ದೂರನ್ನು ದಾಖಲಿಸಿಕೊಳ್ಳದೆ ನಿರ್ಲಕ್ಷಿಸಿದ. ಇಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯನ್ನು ಸುಳ್ಳು ಕೇಸಿನ ಮೇಲೆ ಅರೆಸ್ಟ್ ಮಾಡಲಾಯಿತು. ಪೊಲೀಸ್ ಕಸ್ಟಡಿಯಲ್ಲಿದ್ದ ಬಾಲಕಿಯ ತಂದೆಯನ್ನು ಅತ್ಯಾಚಾರಿ ಶಾಸಕ ಮತ್ತು ಅವನ ತಮ್ಮ ಹೊಡೆದು ಸಾಯಿಸಿದರು.
ಹಲವು ವಾರಗಳ ನಂತರ, ಮೊನ್ನೆ ಶುಕ್ರವಾರ ಮೋದಿ `ಈ ಪ್ರಕರಣಗಳು ದೇಶಕ್ಕೆ ಒಳ್ಳೆಯ ಹೆಸರನ್ನು ತರುವುದಿಲ್ಲ, ಇವು ಅತ್ಯಂತ ನಾಚಿಕೆಗೇಡಿನ ಪ್ರಕರಣಗಳು, ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ’ ಎಂಬ ಲೋಕಾಭಿರಾಮದ ಮಾತುಗಳನ್ನು ಆಡಿದ್ದಾರೆ. ಗಾಳಿಯಲ್ಲಿ ಕಡ್ಡಿಯಾಡಿಸಿದಂತಹ ಮೋದಿಯ ಮಾತುಗಳು ಈ ಕ್ರೂರ ಹಿಂಸೆಯ ಪ್ರಕರಣಗಳನ್ನು ಸಾಮಾನ್ಯ ಕ್ರೈಮ್ ಮಟ್ಟಕ್ಕೆ ಇಳಿಸಿದ್ದವು. ಬಿಜೆಪಿ ಪಕ್ಷದ ಅಂಗಸಂಘಟನೆಗಳಾದ ಹಿಂದೂ ಮಿಲಿಟಂಟ್ ಗುಂಪುಗಳಿಗೆ ಸೇರಿದ ಹಂತಕರು, ತಾವು ಪವಿತ್ರವೆಂದು ಭಾವಿಸುವ ಹಸುಗಳನ್ನು ಕೊಂದು ತಿಂದಿದ್ದಾರೆ ಎಂದು ಭಾರತದ ಶ್ರೇಣೀಕರಣದ ಕೆಳಹಂತದಲ್ಲಿರುವ ದಲಿತರ ಮೇಲೆ ಮತ್ತು ಮುಸ್ಲಿಮರ ಮೇಲೆ ಸುಳ್ಳು ಆರೋಪ ಹೊರಿಸಿ ಅನೇಕರನ್ನು ಕೊಂದು ಹಾಕಿದ್ದಾರೆ. ಇಂತಹ ಭೀಕರ ಹಿಂಸಾ ಕೃತ್ಯಗಳು ನಡೆದರೂ ಮೋದಿ ತಮ್ಮ ದಿವ್ಯ ಮೌನದ ಆಚೆಗೆ ಬರುವುದಿಲ್ಲ.
ಮೋದಿಯ ಈ ಮೌನ ಅತ್ಯಂತ ಗೊಂದಲಮಯ ಮತ್ತು ಅವರ ಶೋಚನೀಯ ಮನಃಸ್ಥಿತಿಯ ದ್ಯೋತಕ. 2012-13ರಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಮೋದಿಗಿಂತ ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರದ ಮುಖ್ಯಸ್ಥರು ಜನ ಬೀದಿಗಿಳಿಯುವ ಮುನ್ನವೇ ಘಟನೆಯನ್ನು ಖಂಡಿಸಿದ್ದರು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು. ತಮ್ಮ ಹಿಂದಿನ ಸರ್ಕಾರದ ಒಳ್ಳೆಯ ನಡವಳಿಕೆಗಳನ್ನು ಮಿಸ್ಟರ್ ಮೋದಿ ಅನುಸರಿಸಲು ಮುಂದಾದ ಉದಾಹರಣೆಗಳೇ ಇಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಅನೇಕ ತಪ್ಪುಗಳಿಂದ ಅಧಿಕಾರ ಕಳೆದುಕೊಂಡಿತು ಮತ್ತು ಮೋದಿಯ ಬಿಜೆಪಿ ಪಕ್ಷ 2014ರ ಚುನಾವಣೆಯಲ್ಲಿ ಹಿಂದೆಂದೂ ಪಡೆಯದಷ್ಟು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿತು. ಹಿಂದಿನ ಸರ್ಕಾರದ ಹೊಣೆಗೇಡಿತನ, ಪ್ರಚ್ಛನ್ನ ಭ್ರಷ್ಟಾಚಾರಗಳನ್ನು ಟೀಕಿಸುತ್ತಲೇ ಮೋದಿ ಚುನಾವಣಾ ಪ್ರಚಾರ ಮಾಡಿದರು. ಮತ್ತು ಸಾಮಾನ್ಯ ಜನರ ಉತ್ತರದಾಯಿತ್ವವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದುಕೊಂಡಿದೆ ಎನ್ನುತ್ತಲೇ ಮಿಸ್ಟರ್ ಮೋದಿ ಅಧಿಕಾರಕ್ಕೆ ಬಂದರು.
ಆದರೆ ಇಂದು ಮಿಸ್ಟರ್ ಮೋದಿಯವರು ಒಂದು ಬಗೆಯ ಆತ್ಮವಂಚಕ ಮೌನಕ್ಕೆ ಮರೆಹೋಗಿದ್ದಾರೆ. ಜಗತ್ತಿನ ಬಹುದೊಡ್ಡ ಪ್ರಜಾತಂತ್ರ ದೇಶದ ಆರೋಗ್ಯವನ್ನು ಬಯಸುವ ಎಲ್ಲರೂ ಈ ಕಾರಣಕ್ಕಾಗಿ ಚಿಂತಿತರಾಗಿದ್ದಾರೆ.
ಮಿಸ್ಟರ್ ಮೋದಿ ತನ್ನ ಬೆಂಬಲಿಗರು ನಡೆಸುವ ಎಲ್ಲ ಅಪರಾಧಗಳ ಕುರಿತು ಮಾತಾಡಲೇಬೇಕೆಂದೇನೂ ಇಲ್ಲ. ಆದರೆ ಇತ್ತೀಚೆಗೆ ನಡೆಯುತ್ತಿರುವ ಹಿಂಸಾಕೃತ್ಯಗಳು ಮತ್ತು ಅತ್ಯಾಚಾರಗಳು ವೈಯಕ್ತಿಕ ದ್ವೇಷಗಳಿಂದ ನಡೆದಂತವುಗಳಲ್ಲ ಮತ್ತು ನಿತ್ಯ ನಡೆಯಬಹುದಾದ ಮಾಮೂಲು ಕ್ರಿಮಿನಲ್ ಕೃತ್ಯಗಳೂ ಅಲ್ಲ. ಈ ಹಿಂಸಾಚಾರಗಳು ಯೋಜನಾಬದ್ಧ ಸಂಘಟಿತ ಅಪರಾಧ ಕೃತ್ಯಗಳು. ಈ ಕೃತ್ಯಗಳ ಹಿಂದೆ ಉಗ್ರ ರಾಷ್ಟ್ರವಾದಿ ಗುಂಪುಗಳ ಸ್ಪಷ್ಟ ಕೈವಾಡಗಳಿವೆ. ಈ ಸಂಘಟಿತ ಜನವಿರೋಧಿ ಗುಂಪುಗಳು ಮಹಿಳೆಯರಲ್ಲಿ, ದಲಿತರಲ್ಲಿ, ಮುಸ್ಲಿಮರಲ್ಲಿ ಮತ್ತು ಬಡವರಲ್ಲಿ ಭಯದ ವಾತಾವರಣವನ್ನು ಮೂಡಿಸಲೆಂದೇ ಕಾರ್ಯಾಚರಣೆಗಿಳಿದಿವೆ.
ಮಿಸ್ಟರ್ ಪ್ರಧಾನ ಮಂತ್ರಿಯವರು ಸುತ್ತಲು ನೆರೆದಿರುವ ತನ್ನ ರಾಜಕೀಯ ಬೆಂಬಲಿಗರ ಕೃತ್ಯಗಳನ್ನು ನೋಡಿ ಸುಮ್ಮನಿರುವುದಲ್ಲ, ದೇಶದ ಎಲ್ಲ ಜನರ ಹಿತ ಕಾಪಾಡಲು ಮಾತಾಡಬೇಕಿದೆ ಮತ್ತು ಮುಂದಾಗಬೇಕಿದೆ.
ಸಂಪಾದಕೀಯ ಮಂಡಳಿ
ನ್ಯೂಯಾರ್ಕ್ ಟೈಮ್ಸ್, ಅಮೆರಿಕ
ಅನುವಾದ: ಎ ಎಸ್ ಪ್ರಭಾಕರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...