Homeಅಂಕಣಗಳುರಾಮ, ಅಯ್ಯಪ್ಪನ ಹೆಸರಲ್ಲಿ ಬಿಜೆಪಿಯ ಕುತಂತ್ರಗಳು

ರಾಮ, ಅಯ್ಯಪ್ಪನ ಹೆಸರಲ್ಲಿ ಬಿಜೆಪಿಯ ಕುತಂತ್ರಗಳು

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ಬಿಜೆಪಿಯ ಬತ್ತಳಿಕೆಯಲ್ಲಿದ್ದ ಎಲ್ಲಾ ಆಯುಧಗಳು ಠುಸ್ಸೆಂದಿವೆ. ಅದರಿಂದ ಮಧ್ಯಪ್ರದೇಶ, ರಾಜಸ್ಥಾನ ಶಾಸನಸಭೆ ಚುನಾವಣೆಗಳನ್ನು ಎದುರಿಸಲು ಬಿಜೆಪಿಗೆ ನಡುಕ ಹುಟ್ಟಿದೆ. ರಫೇಲ್ ಡೀಲ್, ನೋಟುಗಳ ಅಮಾನ್ಯೀಕರಣ, ಸ್ವಚ್ಛ ಭಾರತ, ಜನರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುವುದು ಮುಂತಾದ ಮೋದಿಯ ಎಲ್ಲಾ ತಂತ್ರಗಾರಿಕೆಯೂ ವಿಫಲಗೊಂಡು ಮೋದಿ, ಷಾಗಳು ತತ್ತರಿಸ ಹತ್ತಿದ್ದಾರೆ. ಸೀಮಾಂದ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಎಲ್ಲ ವಿರೋಧ ಪಕ್ಷಗಳನ್ನು ಒಂದುಗೂಡಿಸಿ ಲೋಕಸಭೆಯ ಚುನಾವಣೆಯನ್ನು ಎದುರಿಸಲು ಭಾರಿ ಪ್ರಯತ್ನ ಮಾಡುತ್ತಿರುವುದೂ ಬಿಜೆಪಿಗೆ ಭಾರಿ ತಲೆನೋವಾಗಿದೆ. ಆದ್ದರಿಂದ ಮೋದಿ, ಷಾಗಳು ಚುನಾವಣೆ ಎದುರಿಸಲು ಹೊಸತಂತ್ರ ರೂಪಿಸಲು ಹೆಣಗುತ್ತಿದ್ದಾರೆ.

ಅವರಿಗೆ ರಾಮಚಂದ್ರ ಭೂಮಿಯ ನೆನಪಾಗಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೂಡಲೇ ಕಟ್ಟುವ ಮಾತನ್ನಾರಂಭಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಮುಂತಾದ ಹಿಂದೂ ಮತಾಂಧ ಸಂಸ್ಥೆಗಳ ನೆರವಂತೂ ಬಿಜೆಪಿಗೆ ಇದ್ದೇ ಇದೆ. ಆರೆಸ್ಸೆಸ್ ಏರ್ಪಡಿಸಿದ್ದ ಬೈಠಕ್‍ಗೆ ಬಿಜೆಪಿ ಅಧ್ಯಕ್ಷ ಷಾ ಹೋಗಿ ಅಯೋಧ್ಯೆಯಲ್ಲಿ ಒಂದು ಗದ್ದಲ ಎಬ್ಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲೇಬೇಕೆಂಬ ಉದ್ದೇಶ ಬಿಜೆಪಿಗಂತೂ ಇಲ್ಲ. ರಾಮಮಂದಿರ ನಿರ್ಮಾಣದ ಪ್ರಶ್ನೆಯನ್ನು ಜೀವಂತ ಇಟ್ಟು ಮತ ಕೀಳುವ ತಂತ್ರಗಾರಿಕೆ ಬಿಜೆಪಿಯದ್ದು. ಒಂದೊಮ್ಮೆ ರಾಮಚಂದ್ರನ ದೇವಾಲಯವನ್ನು ಕಟ್ಟಿಬಿಟ್ಟರೆ ಚುನಾವಣೆ ಎದುರಾದಾಗ ಅಯೋಧ್ಯೆ ಟ್ರಂಪ್‍ಕಾರ್ಡ್ ಬಳಸಲು ಎಲ್ಲಿ ಸಾಧ್ಯವಾದೀತು? ರಾಮ ಮಂದಿರದ ನೆಪದಲ್ಲಿ ಹಿಂದೂಗಳ ಮತಗಳನ್ನು ಕೀಳುತ್ತಾ ಹೋಗುವುದು ಬಿಜೆಪಿಯ ಹುನ್ನಾರ. ಇದಕ್ಕಾಗಿ ಅಯೋಧ್ಯೆಯಲ್ಲಿ ಒಂದು ಲಕ್ಷ ಹಿಂದೂಗಳ ಸಮಾವೇಶವನ್ನು ನಡೆಸಿದ್ದಾರೆ. ಮೋದಿಗೆ ಸಾಥ್ ಕೊಡಲು ಉತ್ತರ ಪ್ರದೇಶದ ಸನ್ಯಾಸದ ಛದ್ಮ ವೇಷಧಾರಿ ಮುಖ್ಯಮಂತ್ರಿ ಆದಿತ್ಯನಾಥ್ ಇದ್ದೇ ಇದ್ದಾನೆ. ಉತ್ತರಪ್ರದೇಶ ಸರ್ಕಾರ ಈ ಮಾರೀಚನ ಕೈಯಲ್ಲಿರುವುದರಿಂದ ಬಿಜೆಪಿ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳೂ ಸುಲಭ. ಅಯೋಧ್ಯೆಯಲ್ಲಿ ತಲೆತಲಾಂತರದಿಂದ ನೆಲೆಸಿರುವ ಮುಸ್ಲಿಂ ಜನಾಂಗಕ್ಕೆ ತಮಗೇನು ಕೇಡು ಕಾದಿದೆಯೋ ಎಂಬ ಆತಂಕ ಉಂಟಾಗಿದೆ. ಈ ಹಿಂದೂ ಮತಾಂಧರ ಸಮಾವೇಶದಲ್ಲಿ ಎಷ್ಟು ಹೆಣಗಳು ಬೀಳುವುದೋ ಎಂಬ ಆತಂಕ ಅಲ್ಲಿಯ ಮಹಮದೀಯರದಾಗಿದೆ. ಆದರೂ ಸಾಮೂಹಿಕವಾಗಿ ಸಮಾವೇಶ ನಡೆಯುವ ಕಾಲದಲ್ಲಿ ಅಯೋಧ್ಯೆ ಬಿಟ್ಟುಹೋಗುವುದಾಗಿ ಘೋಷಿಸಿದ್ದಾರೆ.

ಅಯೋಧ್ಯೆಯಲ್ಲಿ ಅನೇಕ ಕಾಲದಿಂದ ಹಿಂದೂ ಮುಸ್ಲಿಮರು ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಅಡ್ವಾಣಿಯವರ ನೇತೃತ್ವದಲ್ಲಿ ಕರಸೇವಕರು ಕೆಡಿಸಿದ ಸಂದರ್ಭ ಹೊರತುಪಡಿಸಿ, ಅದಕ್ಕೆ ಹಿಂದಿನ ದಿನಗಳಲ್ಲಾಗಲಿ, ಅನಂತರದ ದಿನಗಳಲ್ಲಾಗಲಿ ಅಯೋಧ್ಯೆಯಲ್ಲಿ ಕೋಮುಗಲಭೆ ಆಗಿಲ್ಲ. ಲೋಕಸಭೆ ಚುನಾವಣೆಯ ನಿಮಿತ್ತ ಈಗ ಮತ್ತೆ ಅಯೋಧ್ಯೆಯಲ್ಲಿ ಗದ್ದಲ ಎಬ್ಬಿಸಿ ಗೊಂದಲ ಉಂಟುಮಾಡಿ ಚುನಾವಣೆಯಲ್ಲಿ ಗೆದ್ದು ಬರುವ ಸಂಚನ್ನು ರೂಪಿಸಲಾಗಿದೆ.

ಎರಡನೆಯದಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯದ ಸಮಸ್ಯೆಯೊಂದನ್ನು ಬಿಜೆಪಿ ಹುಟ್ಟುಹಾಕಿ ಅದರ ದುರ್ಲಾಭ ಪಡೆಯುವ ಹುನ್ನಾರವೂ ರೂಪುಗೊಳ್ಳುತ್ತಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸ್ತ್ರೀಯರಿಗೂ ಪ್ರವೇಶ ಮಾಡುವ ಹಕ್ಕಿದೆಯೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪಿತ್ತಿದೆ. ದೇವಸ್ಥಾನದ ಮುಖ್ಯ ಅರ್ಚಕರು, ಆಡಳಿತ ಮಂಡಳಿಯವರು ಸರ್ವೋಚ್ಛ ನ್ಯಾಯಾಲಯದ ಈ ತೀರ್ಪನ್ನು ಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ. ಕೇರಳ ಸರ್ಕಾರಕ್ಕೆ ಈಗಂತೂ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸದೆ ಬೇರೆದಾರಿ ಇಲ್ಲವಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಈಗ ಮೋದಿಯೇ ಆದರ ಸರ್ವಾಧಿಕಾರಿ. ‘any stick is good to beat’ ಇದು ಮೋದಿಯ ನಿಲುವು. ಹೀಗಾಗಿ ಬೇಜವಾಬ್ದಾರಿಯ ಪ್ರಧಾನಮಂತ್ರಿ ಮೋದಿ ಚುನಾವಣೆ ದೃಷ್ಟಿಯಿಂದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ ನಡೆದುಕೊಳ್ಳಲು ಹೊರಟಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಕೇರಳೀಯ ಹಿಂದೂಗಳ ಮತಗಳನ್ನೆಲ್ಲ ತನ್ನದಾಗಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅಯ್ಯಪ್ಪ ಭಕ್ತರನ್ನು ಕೇರಳ ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಸಂಚು ಮಾಡಲಾಗಿದೆ. ಮಹಿಳೆಯರಿಗೂ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ದೊರೆಯಬೇಕು ಎಂಬುದು ಹಿಂದೂಗಳೆಲ್ಲರ ಅಭಿಮತವಾಗಿದೆ. ಹಿಂದೂ ಮತಾಂಧರು ಇದನ್ನು ಅರ್ಥಮಾಡಿಕೊಳ್ಳಬೇಕು. ಚುನಾವಣೆ ಗೆಲ್ಲುವುದಕ್ಕೆ ಇದು ಸಾಧನ ಎಂದು ಸರ್ವಾಧಿಕಾರಿ ಮೋದಿ ನಂಬಿದ್ದರೆ, ಬಿಜೆಪಿಯೇತರ ಹಿಂದೂಗಳು ದೇವಾಲಯ ಪ್ರವೇಶದ ವಿಚಾರದಲ್ಲಿ ಸ್ತ್ರೀ-ಪುರುಷರ ಭೇದ ಮಾಡಬಾರದೆಂದು ಘೋಷಣೆ ಮಾಡುತ್ತಾರೆ.

ಮೋದಿ ಅಮಿತ್ ಷಾಗಳಿಗೆ ಅಂತಿಮ ತೀರ್ಪು ಬರುವವರೆಗೂ ಕಾಯುವ ವ್ಯವಧಾನ ಇಲ್ಲ. ಮತದಾರರ ಮನಸ್ಸುಗಳನ್ನು ಕೆಡಿಸಿ, ಮತ ಕಸಿಯುವ ಏಕೈಕ ಗುರಿಯನ್ನೇ ಹೊಂದಿರುವ ಅವರು ಕಿವಿಗೆ ಕಣಜ ಹೊಕ್ಕವರಂತೆ ನಡೆದುಕೊಳ್ಳುತ್ತಿದ್ದಾರೆ. ಶಬರಿಮಲೆಗೆ ಹರಕೆ ಹೊತ್ತು ಹೋಗುವ ಜನ ದಕ್ಷಿಣ ರಾಜ್ಯಗಳಲ್ಲಂತೂ ತುಂಬ ಇದ್ದಾರೆ. ಇವರಿರುವ ಸ್ಥಳಗಳಲ್ಲಿ ಅಯ್ಯಪ್ಪನ ದೇವಾಲಯಗಳನ್ನೂ ಕಟ್ಟಲಾಗಿದೆ. ಅದರ ಮೇಲ್ವಿಚಾರಣೆಗೆ ಇರುವವರನ್ನೆಲ್ಲಾ ಕರೆದು ಸಭೆ ಮಾಡಿ ಅಯ್ಯಪ್ಪ ಭಕ್ತರ ಎಲ್ಲ ಓಟನ್ನೂ ನಮಗೆ ಹಾಕಿಸಿ ಎಂದು ಕೇಳುವ ಪ್ರಸ್ತಾಪವನ್ನು ಮೋದಿ, ಷಾ ಜೋಡಿ ಈಗಾಗಲೇ ಮಾಡಿದೆ. ಈ ಮುಗ್ಧ ಭಕ್ತರ ಧಾರ್ಮಿಕ ಭಾವನೆಯನ್ನು ಕೆರಳಿಸಿ ಅವರಲ್ಲಿ ವಿಷ ತುಂಬಿ ಅವರ ಮತಗಳನ್ನೆಲ್ಲ ಕಸಿಯುವ ತಂತ್ರಗಾರಿಕೆಗೆ ಈಗಾಗಲೇ ಕೈಹಾಕಿದ್ದಾರೆ.

ತಮ್ಮದೇ ಪಕ್ಷ ಇಡೀ ದೇಶದಲ್ಲಿ ಮತ್ತು ಅಯೋಧ್ಯೆ ವಿವಾದವಿರುವ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದರು ಇಷ್ಟು ದಿನ ತೆಪ್ಪಗಿದ್ದು ಚುನಾವಣೆಯ ಹೊಸ್ತಿಲಲ್ಲಿ ಅಯೋಧ್ಯೆ, ಅಯ್ಯಪ್ಪರನ್ನು ಭಜಿಸುತ್ತಿರುವ ಬಿಜೆಪಿಯವರ ಈ ಎರಡೂ ಹುನ್ನಾರಗಳನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ. ಮೋದಿ-ಷಾ-ಆರೆಸ್ಸೆಸ್, ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೇಗೆ ಈ ಮುಗ್ಧ ಜನರನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಮೇಲಿರುವ ಹೊಣೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...