Homeಅಂಕಣಗಳುಯಾವ ಧರ್ಮವೂ ಮಹಿಳೆಯರ ಪರವಲ್ಲ....

ಯಾವ ಧರ್ಮವೂ ಮಹಿಳೆಯರ ಪರವಲ್ಲ….

- Advertisement -
- Advertisement -

ಕಳೆದ ವಾರ ತೀರಿಕೊಂಡ ಪೋಪ್ ಜಾನ್ ಪಾಲ್ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆಯ ಶ್ರದ್ಧಾಂಜಲಿಗಳೇ ಕೇಳಿಬರುತ್ತಿವೆ. ಆತ ಶಾಂತಿಪ್ರಿಯರಾಗಿದ್ದರು ಎಂದೂ, ಮಾನವತಾವಾದಿಯಾಗಿದ್ದರು ಎಂದೂ, ಶೋಷಿತರ ಪರವಾಗಿದ್ದರೆಂದೂ ಅವರನ್ನು ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಆದರೆ ಅದೇ ಜಾನ್ ಪಾಲ್ ಮಹಿಳಾ ಹಕ್ಕುಗಳ ವಿರೋಧಿಯಾಗಿದ್ದರೆಂದೂ, ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ನಿರಾಕರಿಸಿದ್ದರೆಂದೂ, ಕ್ರಿಶ್ಚಿಯನ್ ಧರ್ಮದ ಮೂಲಭೂತವಾದಿಗಳಿಗೆ ಬೆಂಬಲ ನೀಡಿದ್ದರೆಂದೂ ಯಾರೂ ಹೇಳುತ್ತಿಲ್ಲ! ಹಾಗೆ ಯಾರಾದರೂ ಹೇಳಿದ್ದರೂ ಹೊಗಳುಭಟ್ಟರ ಆರ್ಭಟದಲ್ಲಿ ಈ `ಅಪಸ್ವರ’ ಗಳು ಯಾರ ಕಿವಿಗೂ ಬಿದ್ದಂತಿಲ್ಲ!

ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡ ಧರ್ಮಾಧಿಕಾರಿಗಳಲ್ಲಿ ಪೋಪ್ ಮೊದಲನೆ ಯವರೂ ಅಲ್ಲ; ಖಂಡಿತವಾಗಿ ಕೊನೆಯವರೂ ಅಲ್ಲ. ಏಕೆಂದರೆ ಕ್ರಿಶ್ಚಿಯನ್ ಧರ್ಮ ಮಾತ್ರವಲ್ಲ, ಜಗತ್ತಿನ ಬಹಳಷ್ಟು ಪ್ರಮುಖ ಧರ್ಮಗಳೂ ಮಹಿಳಾ ವಿರೋಧಿಯೇ ಆಗಿವೆ.

ಪೈಗಂಬರದು ಮಹಿಳೆಯರನ್ನು ಬುರ್ಕಾಗಳಲ್ಲಿ ಇರಿಸಿ ಅವರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ಕಾಣಿ ಎಂದು ಹೇಳಿರಲಿಲ್ಲ. ಒಂದು ದಿನ ಪೈಗಂಬರರು ಬಹಳ ದಣಿದಿದ್ದರೂ ಅವರೊಂದಿಗೆ ಮಾತುಕತೆಗೆಂದು ಬಂದಿದ್ದ ಇಬ್ಬರು ಅತಿಥಿ ಗಳು ಅದೆಷ್ಟೇ ಹೊತ್ತಾದರೂ ಹೊರಡಲಿಲ್ಲ ವಾದ್ದರಿಂದ, ಪೈಗಂಬರರು ತಮ್ಮ ಓರ್ವ ಮಡದಿ ಇದ್ದ ಕೋಣೆಯ ಬಾಗಿಲಿಗೆ ಪರದೆಯನ್ನು ಹಾಕಿ ನಿದ್ದೆಗೆ ಸಜ್ಜಾದರು. ಅದನ್ನೇ ನೆಪವಾಗಿಸಿಕೊಂಡು ಇವತ್ತು ಮುಸ್ಲಿಂ ಮಹಿಳೆಯರನ್ನು ಬುರ್ಕಾಗಳಲ್ಲಿ ಇರಿಸಿ ಅವರನ್ನು ಶೋಷಿಸಲಾಗುತ್ತಿದೆ.

ಅಂತಹ ಮೇಧಾವಿ ಗೌತಮ ಬುದ್ಧ ಕೂಡ ಒಂದು ರೀತಿಯಲ್ಲಿ ಮಹಿಳಯರ ಬಗ್ಗೆ ತಾರತಮ್ಯ ನೀತಿ ಅನುಸರಿಸಿದ್ದ. ಆತ ತನ್ನ ಮಡದಿ ಯಶೋಧರೆ ಸೇರಿದಂತೆ ಇತರ ಮಹಿಳೆಯರನ್ನು ಅನುಯಾಯಿ ಗಳಾಗಿ ಸ್ವೀಕರಿಸಿದರೂ, ಮಹಿಳೆಯರು ಬಿಕ್ಕುಗಳಾ ಗಲು ಪ್ರಾರಂಭದಲ್ಲಿ ಅನುಮತಿ ನೀಡಿರಲಿಲ್ಲ. ಬುದ್ಧನ ಚಿಕ್ಕಮ್ಮ ಮಹಾಪ್ರಜಾಪತಿ ತಾನು ಬಿಕ್ಕು ಆಗಬೇಕೆಂದು ಕೇಳಿಕೊಂಡಾಗ ಬುದ್ಧ ನಿರಾಕರಿಸಿದ. ಕೊನೆಗೆ ಬುದ್ಧನ ಆಪ್ತ ಶಿಷ್ಯ ಆನಂದ ಮಹಿಳೆಯರ ಪರವಾಗಿ ವಾದಿಸಿದ ನಂತರ “ಪುರುಷ ಬಿಕ್ಕುಗಳಿಗೆ ಮಹಿಳಾ ಬಿಕ್ಕುಗಳನ್ನು ಹಿರಿಯರು-ಕಿರಿಯರು ಎಂಬ ಭೇದಭಾವವಿಲ್ಲದೆ ಗೌರವಿಸಬೇಕು; ಪುರುಷ ಬಿಕ್ಕುಗಳನ್ನು ಯಾವುದೇ ಕಾರಣಕ್ಕೂ ಮಹಿಳಾ ಬಿಕ್ಕುಗಳು ಟೀಕಿಸಬಾರದು” ಎಂಬಂತಹ ಷರತ್ತುಗಳನ್ನು ಹೇರಿದ ನಂತರವೇ ಒಪ್ಪಿಗೆ ನೀಡಿದ್ದ ಗೌತಮ ಬುದ್ಧ.

ಇನ್ನು ಮನುವಾದಿ `ಹಿಂದೂ’ ಧರ್ಮದ ಬಗ್ಗೆ ಇಲ್ಲಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಪುರೋಹಿತಶಾಹಿ ವ್ಯವಸ್ಥೆಯಲ್ಲಿ ಶೂದ್ರರಿಗೂ, ದಲಿತರಿಗೂ, ಮಹಿಳೆಯ ರಿಗೂ ಒಂದು ಸ್ಥಾನ, ಮೇಲುಜಾತಿಯ ಪುರುಷರಿಗೆ ಮಾತ್ರ ಮತ್ತೊಂದು ಸ್ಥಾನ….

ಹಾಗೆ ನೋಡಿದರೆ ಮಹಿಳೆಯರನ್ನು ಸಮಾನರೆಂದು ಕಾಣುವ ಒಂದೇ ಒಂದು ಧರ್ಮವೂ ಇದ್ದಂತಿಲ್ಲ. ಮಹಿಳಾ ಹಕ್ಕುಗಳು, ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬಿ ತನ… ಇವೆಲ್ಲವನ್ನು ಗುರುತಿಸಿ, ಅವರನ್ನು ಸಮಾನರಾಗಿ ಕಾಣುವ ಒಂದೇ ಒಂದು ಗ್ರಂಥ ಯಾವುದು ಗೊತ್ತಾ?

ನಮ್ಮ ದೇಶದ ಸಂವಿಧಾನ! ಅದನ್ನೇ ಇನ್ನು ಮುಂದೆ ಎಲ್ಲಾ ಭಾರತೀಯ ನಾರಿಯರು ತಮ್ಮ ಧರ್ಮ ಗ್ರಂಥವನ್ನಾಗಿಸಿಕೊಂಡರೆ ಹೇಗೆ?!

ಗೌರಿ ಲಂಕೇಶ್
ಏಪ್ರಿಲ್ 20, 2005 (`ಕಂಡಹಾಗೆ’ ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...