Homeಅಂಕಣಗಳುಗಡಿ ವಿವಾದ, ನೆಹರು ವಿರೋಧ ಮತ್ತು ಲೋಹಿಯಾ

ಗಡಿ ವಿವಾದ, ನೆಹರು ವಿರೋಧ ಮತ್ತು ಲೋಹಿಯಾ

- Advertisement -
- Advertisement -

ಜಾತಿ ವ್ಯವಸ್ಥೆಯ ವಿರುದ್ಧ ಮತ್ತು ಹಿಂದುಳಿದ ಜಾತಿ ಜನಾಂಗಗಳ ಬೆಳವಣಿಗೆಯ ಬಗೆಗೆ ಭಾರತದ ರಾಜಕೀಯದಲ್ಲಿ ಹೋರಾಡಿದ ಪ್ರಮುಖರಲ್ಲಿ ಲೋಹಿಯಾ ಸಹ ಒಬ್ಬರು. ಜಾತಿ ಪದ್ಧತಿಯ ವಿವಿಧ ಆಯಾಮಗಳನ್ನೂ, ಅದು ಸೃಷ್ಟಿಸಿದ ವಿವಿಧ ಅಸಮಾನತೆ, ವಿಕಾರತೆ, ವಿಕೃತಗಳನ್ನೂ ಲೋಹಿಯಾರವರ ಬರವಣಿಗೆಯಲ್ಲಿ ಕಾಣಬಹುದು. ಲೋಹಿಯಾ ಸ್ವಲ್ಪ ಜನಜಂಗುಳಿ ಪ್ರಚೋದಕ () ಭಾಷೆಯನ್ನು ಉಪಯೋಗಿಸುತ್ತಾರೆ. ಅದನ್ನು ನಗಣ್ಯವಾಗಿ ಪರಿಗಣಿಸಿ, ಮುಖ್ಯ ಸತ್ವವನ್ನು ಮಾತ್ರ ನಾವು ಪರಿಗಣಿಸಬೇಕು. ಜಾತಿ ಪದ್ಧತಿಯ ನಾಶಕ್ಕಾಗಿ ಲೋಹಿಯಾ ಸಹಭೋಜನ, ಅಂತರ್ಜಾತಿಯ ವಿವಾಹ, ಸರಕಾರಿ ನೇಮಕಾತಿಗಳಿಗೆ ಅಂತರ್ಜಾತಿ ವಿವಾಹ ಕಾನೂನುಗಳ ರಚನೆ, ಜಾತಿಸೂಚಕ ಅಡ್ಡ ಹೆಸರುಗಳ ರದ್ದತಿ, ಹಿಂದುಳಿದ ಜಾತಿಗಳಿಗೆ ಆದ್ಯತಾ ಅವಕಾಶ, ಭೂಮಿಯ ವಿತರಣೆ, ಮಹಿಳಾ ಸಮಸ್ಯೆಗಳ ಪರಿಹಾರ,. ಜಾತಿ ಆಚರಣೆಯ ವಿರುದ್ಧ ಧಾರ್ಮಿಕ ರಂಗದ ಹೋರಾಟ ಮುಂತಾದವುಗಳನ್ನು ಪ್ರತಿಪಾದಿಸುತ್ತಾರೆ. ಎಲ್ಲವೂ ಸರಿಯಾದುದೇ.
ಆದರೆ ಜಾತಿ ಹೋರಾಟಗಳ ಐತಿಹಾಸಿಕ ಸತ್ವ ಏನೆಂದು ತಿಳಿಯುವುದರಲ್ಲಿ ಲೋಹಿಯಾ ವಿಫಲಗೊಂಡಂತೆ ಕಾಣುತ್ತದೆ. ಐತಿಹಾಸಿಕವಾಗಿ ಹಿಂದುಳಿದ ಜಾತಿಗಳ ಹೋರಾಟಗಳು ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ನಡೆಯುವ ತಮ್ಮ ಬಂಡವಾಳಶಾಹಿಪೂರ್ವ ಸ್ಥಿತಿಗತಿಗಳನ್ನು ಕೊನೆಗಾಣಿಸಿ ಪ್ರಜಾಸತ್ತಾತ್ಮಕ ಜೀವನಕ್ಕೆ ಅರಳುವ, ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ತಮ್ಮ ಹಿಂದುಳಿದಿರುವಿಕೆಯನ್ನು ಕೊನೆಗಾಣಿಸಿ ಮುಂದೆ ಬರುವ ಪ್ರಜಾಸತ್ತಾತ್ಮಕ ಹೋರಾಟಗಳೆಂದು ಅರ್ಥೈಸಿಕೊಳ್ಳದೆ, ಈ ಜಾತಿ ಹೋರಾಟಗಳೇ ಸಮಾಜವಾದಿ ಹೋರಾಟಗಳೆಂದು ತಿಳಿಯುತ್ತಾರೆ. ಆದ್ದರಿಂದ ತಮ್ಮ ಕಾಲ್ಪನಿಕ ಸಮಾಜವಾದಿ ಆದರ್ಶಗಳಿಗೆ ಹೊಂದಿಕೆಯಾಗಲಾರದ ಪ್ರವೃತ್ತಿಗಳು ಅವರನ್ನು ದಂಗುಬಡಿಸುತ್ತವೆ, ಹಾಗೂ ಈ ಪ್ರವೃತ್ತಿಗಳನ್ನು ವಿಷಕಾರಿ ಎಂದೂ, ತಿಳಿವಳಿಕೆಗೆ ಮೀರಿದ್ದೆಂದೂ ಹೇಳುತ್ತಾರೆ. ಈ ಜಾತಿ ಹೋರಾಟಗಳೇ ಸಮಾಜವಾದಿ ಶಕ್ತಿ ಎಂದು ತಿಳಿದ ಲೋಹಿಯಾ ತಮ್ಮ ಕಾರ್ಯಕ್ರಮವೆಲ್ಲಾ ಸೋಲು ಅನುಭವಿಸುವುದನ್ನು ಕಾಣುತ್ತಾರೆ. ಜಾತಿ ಹೋರಾಟಗಳನ್ನು ಐತಿಹಾಸಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳದ ಲೋಹಿಯಾ ಜಾತಿ ಕನ್ನಡಕದಲ್ಲಿಯೇ ಎಲ್ಲಾ ವಾಸ್ತವತೆಯನ್ನು ನೋಡಲು, ವಿವರಿಸಲು, ಅರ್ಥೈಸಲು ಪ್ರಯತ್ನಿಸುತ್ತಾರೆ. ಈ ದೃಷ್ಟಿಯೇ ಅಪರಿಮಿತವಾದ ಅನ್ವರ್ಥಗಳಿಗೂ, ಅಸಭ್ಯ ವಿಚಾರಗಳಿಗೂ ದಾರಿಯಾಗಿದೆ.
1954 ರಿಂದ 1962 ಹಾಗೂ ನಂತರದಲ್ಲೂ ಭಾರತ-ಚೈನಾ ಗಡಿವಿವಾದವು ಬಹಳ ಚರ್ಚೆಗೊಳಗಾದ ವಿಷಯ. ಆದರೆ ಚರ್ಚೆ ಆದದ್ದು ಸಂಪೂರ್ಣ ಅಜ್ಞಾನದಲ್ಲಿ. ಅಜ್ಞಾನ ಮತ್ತು ಭಾವುಕತೆ ಸೇರಿದಲ್ಲಿ ವೈಚಾರಿಕತೆ ಇಲ್ಲದ ಅರಾಜಕತೆ ಹುಟ್ಟುವುದು ಸಹಜ. ಗಡಿ ಸಮಸ್ಯೆ ಏನು ಎನ್ನುವುದರ ಬಗೆಗಾಗಲಿ, ಗಡಿ ಹಾಗೂ ಗಡಿಸಮಸ್ಯೆಯ ವಿಕಾಸದ ಇತಿಹಾಸದ ಬಗೆಗಾಗಲಿ ನೆಹರೂ ಬಿಟ್ಟರೆ ಬೇರಾವ ರಾಜಕಾರಣಿಗಳಿಗೂ ತಿಳಿದಿರಲಿಲ್ಲ. ಕಾಂಗ್ರೆಸ್ ವಿರೋಧದಲ್ಲಿ ವಿರೋಧ ಪಕ್ಷದ ರಾಜಕಾರಣಿಗಳು ಕೆಟ್ಟ ಹುಂಬರ ರೀತಿಯಲ್ಲಿ ವರ್ತಿಸಿದರು. ಲೋಹಿಯಾ ಇವರಿಂತ ಭಿನ್ನರಾಗಿರಲಿಲ್ಲ.
ಲೋಹಿಯಾ ಬರೆದರು: `ಟಿಬೆಟ್‍ನಲ್ಲಿರುವ ಮನ್ಸಾರ್ ಗ್ರಾಮದ ನನ್ನ ಶೋಧನೆ. ಪಾರ್ಲಿಮೆಂಟಿನಲ್ಲಿ ದಾಖಲೆಗಳ ಬಗೆಗೆ ಅನೇಕ ಅತ್ಯಂತ ಹುಂಬತನದ ಸಮರ್ಥನೆಗೆ ಕಾರಣವಾಯಿತು.’ `ಭಾರತ ಸರಕಾರ ಮೊದಲು ಮನ್ಸಾರ್ ಗ್ರಾಮದ ಮೇಲಿನ ಸಾರ್ವಭೌಮತ್ವವನ್ನು ಬಿಟ್ಟುಬಿಟ್ಟಿತು.’ ಗ್ರಾಮದ ಹೆಸರು ಮನ್ಸಾರ್ ಅಲ್ಲ ಮಿನ್ಸಾರ್. ಲೋಹಿಯಾ ಮಿನ್ಸಾರ್ ಗ್ರಾಮದ ಶೋಧಕರಲ್ಲ. ಭಾರತ ಸರಕಾರ ಮೊದಲು ಮನ್ಸಾರ್ ಗ್ರಾಮದ ಮೇಲಿನ ಸಾರ್ವಭೌಮತ್ವವನ್ನು ಬಿಟ್ಟುಬಿಟ್ಟಿತು ಎನ್ನುವುದೂ ಸಹ ಪಕ್ಕಾ ಸುಳ್ಳು. ಇದು ಬರೀ ಬೊಗಳೆ. ಲೋಹಿಯಾರವರಿಗಿಂತ ಮೊದಲೇ ನೆಹರೂರವರಿಗೆ ಮಿನ್ಸಾರ್ ಗ್ರಾಮದ ಬಗ್ಗೆ ಹೆಚ್ಚು ತಿಳಿದಿತ್ತು. ಬಹಳ ಹಿಂದೆ ಅದು ಟಿಬೆಟಿನಲ್ಲಿರುವ ಪರಾವೃತ (ಇಟಿಛಿಟಚಿve) ಪ್ರದೇಶ. ನೆಹರೂ ತಮ್ಮ ಅಧಿಕಾರಿಗಳೊಂದಿಗೆ ಚರ್ಚೆಸಿ ಚೀನಾದೊಂದಿಗಿನ ಮಾತುಕತೆಯಲ್ಲಿ ಮಿನ್ಸಾರ್‍ನ್ನು ಕೇಳಬೇಕು ಎಂದು ನಿರ್ದೇಶನ ನೀಡಿದ್ದರು. ಮಾತುಕತೆ ಫಲಪ್ರದವಾಗುವುದಾಗಿ ಕಂಡರೆ ನಾವು ನಮ್ಮ ಕೇಳಿಕೆಯನ್ನು ಬಿಡಬಹುದು, ಏಕೆಂದರೆ ಆಧುನಿಕ ಕಾಲದಲ್ಲಿ ಯಾವ ದೇಶವೂ ತನ್ನ ಭೂಭಾಗದೊಳಗೆ ಇನ್ನೊಂದು ದೇಶದ ಪರಾವೃತ ಪ್ರದೇಶಕ್ಕೆ ಅವಕಾಶ ಕೊಡುವುದಿಲ್ಲ. ನೆಹರೂ ಮಿನ್ಸಾರ್‍ನ್ನು ಕೇಳಿದ್ದಾರೆ. ಭಾರತ ಚೀನಾ ಅಧಿಕಾರಿಗಳ ಮಾತುಕತೆಯಲ್ಲಿ ಅನೇಕ ರುಜುವಾತುಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆ ವರದಿಯನ್ನು ಪ್ರಕಟಿಸಿ ಸಂಸದರಿಗೆ ಸಿಗುವ ಹಾಗೆ ಮಾಡಿದ್ದಾರೆ. ನೆಹರೂ ಸರಕಾರದ ಹತ್ತಿರ ದಾಖಲೆಗಳಿವೆ, ಲೋಹಿಯಾ ಹತ್ತಿರ ಏನೂ ದಾಖಲೆಗಳಿಲ್ಲ. ನೆಹರೂ ಮೇಲೆ ಏನಾದರೂ ಒಂದಷ್ಟು ಸುಳ್ಳು ಆರೋಪಗಳನ್ನು ಹೊರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಲೋಹಿಯಾರವರ ಪ್ರಯತ್ನ.
`ಮುಖ್ಯ ಅಂಶ ದಾಖಲೆಗಳ ಬಗೆಗಲ್ಲ. ಮೆಕ್‍ಮಹೋನ್ ರೇಖೆಯ 60-70 ಮೈಲು ಉತ್ತರಕ್ಕಿರುವ ಮನ್ಸಾರ್ ಗ್ರಾಮ ಏಕೆ ಭಾರತಕ್ಕೆ ಸೇರಿದ್ದೆಂದು’. ಇಲ್ಲಿ ಲೋಹಿಯಾರವರ ಮೂರ್ಖ ತಿಳಿವಳಿಕೆ ಬಹಳ ಸ್ಪಷ್ಟವಾಗಿದೆ. ಮೆಕ್‍ಮಹೋನ್ ರೇಖೆ ಎನ್ನುವುದು ಭೂತಾನ ದೇಶದ ಪೂರ್ವಗಡಿಯಿಂದ ಪ್ರಾರಂಭವಾಗಿ ಪೂರ್ವದ ಕಡೆ ಹೋಗುವಂತಹದು. ನೇಫಾ (ಈಗಿನ ಅರುಣಾಚಲ ಪ್ರದೇಶ)ದ ಉತ್ತರದ ಗಡಿರೇಖೆಗೆ ಸಂಬಂಧಪಟ್ಟಿದ್ದು. ಮಿನ್ಸಾರ್ ಉತ್ತರ ಪ್ರದೇಶದ (ಈಗಿನ ಉತ್ತರಾಖಂಡ ರಾಜ್ಯದ) ಗರ್ಹವಾಲ್ ಮತ್ತು ಕುಮಾವೂನ್ ಗಡಿಗೆ ಉತ್ತರದಲ್ಲಿ ಇರುವ ಗ್ರಾಮ. ಈ ಗಡಿ ರೇಖೆಗೂ, ಮೆಕ್‍ಮಹೋನ್ ರೇಖೆಗೂ ಏನೂ ಸಂಬಂಧವಿಲ್ಲ. ಮೆಕ್‍ಮಹೋನ್ ರೇಖೆಯ ಪಶ್ಚಿಮ ತುದಿಯಿಂದ ಸುಮಾರು ಸಾವಿರ ಮೈಲುಗಳ ದೂರ. ಮಧ್ಯದಲ್ಲಿ ಭೂತಾನ, ಸಿಕ್ಕಿಂ, ನೇಪಾಳದ ಗಡಿಗಳೆಲ್ಲ ಬರುತ್ತವೆ. ಇಂತಹ ಅಜ್ಞಾನ ಅಥವಾ ಮೂರ್ಖ ತಿಳಿವಳಿಕೆಯಿಂದ ಎಂಥ ಜ್ಞಾನವನ್ನು ಬೇರೆಯವರಿಗೆ ನೀಡಬಹುದು ಲೋಹಿಯಾ?
`ಮನ್ಸಾರ್ ಗ್ರಾಮದ ಬಗೆಗೆ ನನ್ನ ನಿಲುವಿಗೆ ಭಾರತ ಸರಕಾರದ ಒಪ್ಪಿಗೆಯು, ಚೈನಾ ಭಾರತದ ಒಂದು ಲಕ್ಷ ಚದುರ ಮೈಲಿ ಪ್ರದೇಶವನ್ನು ದುರಾಕ್ರಮಣ ಮಾಡಿದೆ ಎಂದು ಸ್ಪಷ್ಟಪಡಿಸುತ್ತದೆ. ಮೂರು ಅಥವಾ ನಾಲ್ಕು ವರ್ಷಗಳ ಹಿಂದೆ ಲಡಾಖ್‍ನಲ್ಲಿ 15 ಸಾವಿರ ಚದುರ ಮೈಲಿ, 11 ವರ್ಷಗಳ ಹಿಂದೆ ಕೈಲಾಸ ಮಾನಸ ಸರೋವರ ಪ್ರದೇಶದಲ್ಲಿ 80 ಸಾವಿರ ಚದುರಮೈಲಿಗೂ ಮಿಕ್ಕಿ. ಕೈಲಾಸ ಮಾನಸ ಸರೋವರ ಪ್ರದೇಶ ಒಮ್ಮೆ ಭಾರತಕ್ಕೆ ಸೇರಿದ್ದು, ಭಾರತೀಯ ಆಳ್ವಿಕೆದಾರ ಒಬ್ಬ ಟಿಬೆಟ್ಟಿನ ಸನ್ಯಾಸಿಗೆ ದಾನಮಾಡಿದ್ದರು ಹಾಗೂ ದಾನ ಖಂಡಿತಾ ವರ್ಗಾಯಿಸುವಂತದ್ದಲ್ಲ ಅಥವಾ ಚೈನಾಕ್ಕೆ ಸಂಬಂಧಿಸಿದಂತೆ ವರ್ಗಾಯಿಸುವಂತಾದ್ದಲ್ಲ’. ಎಂಬುದು ಲೋಹಿಯಾರ ವಾದ. ಇದು ಲೋಹಿಯಾರವರ ಇನ್ನೊಂದು ಕಳಪೆ ತಿಳಿವಳಿಕೆಯ ವಿಚಾರ. ಮಿನ್ಸಾರ್ ಬರೇ ಒಂದು ಗ್ರಾಮ. ಅದರ ವಿಸ್ತೀರ್ಣ ಕೆಲವು ಚದುರ ಮೈಲಿಗಳು. ಲೋಹಿಯಾ ತಿಸೆ(ಕೈಲಾಸ) ಪರ್ವತ, ಮಾನಸ ಸರೋವರದ ಪ್ರದೇಶಗಳನ್ನೆಲ್ಲಾ ಸೇರಿಸಿ 11 ವರ್ಷಗಳ ಹಿಂದೆ ಭಾರತದ 80 ಲಕ್ಷ ಚದುರ ಮೈಲಿ ಪ್ರದೇಶವನ್ನು ಚೈನಾ ಆಕ್ರಮಿಸಿಕೊಂಡಿದೆ ಎಂಬ ಆಧಾರರಹಿತ ಊಹೆ ಮಾಡುತ್ತಾರೆ. ಯಾವ ಭಾರತದ ರಾಜ, ಯಾವ ಟಿಬೆಟಿಯನ್ ಸನ್ಯಾಸಿಗೆ ದಾನ ಮಾಡಿದ? ಎಂಬ ಕುರಿತು ದಾಖಲೆಗಳೇ ಇಲ್ಲದೆ ಲೋಹಿಯಾ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.
ಲೋಹಿಯಾ ಮಿಥ್ಯಾಶಾಸ್ತ್ರದ ಆಧಾರದ ಮೇಲೂ ತಮ್ಮ ಕೇಳಿಕೆಯನ್ನು ಸಮರ್ಥಿಸುತ್ತಾರೆ `ಯಾವ ಜನರೂ ತಮ್ಮ ಮುಖ್ಯ ದೇವರಾದ ಶಂಕರ, ಪಾರ್ವತಿಯರನ್ನು ವಿದೇಶದ ಭೂಭಾಗದಲ್ಲಿ ಇರಿಸಲು ಸಾಧ್ಯವಿಲ್ಲ.’ `ಯಾವ ಜನರೂ ಸಹ ತಮ್ಮ ಕೈಲಾಸವಾಸಿಯಾಗಿರುವ ಪ್ರಾಥಮಿಕ ದೇವರಾದ ಶಿವಪಾರ್ವತಿಯರನ್ನು ವಿದೇಶಿ ಭೂಮಿಯಲ್ಲಿ ಅವರ ಬಗ್ಗೆ ಕಥೆ ಕಟ್ಟಲು ಸಾಧ್ಯವಿಲ್ಲ.’ ತಿಸೆ ಪರ್ವತ ಅಥವಾ ಕೈಲಾಸ ಪರ್ವತದಲ್ಲಿ ಯಾವ ಕಾಲದಲ್ಲೂ ಶಂಕರ ಅಥವಾ ಶಿವಪಾರ್ವತಿಯವರ ದೇವಸ್ಥಾನವಾಗಲಿ, ಮೂರ್ತಿಗಳಾಗಲಿ ಇರಲಿಲ್ಲ. ಅಲ್ಲಿ ನಿಜವಾಗಿ ಇದ್ದದ್ದು ಟಿಬೆಟಿಯನ್ ದೇವತೆಗಳು. ಶಿವ, ಶಂಕರ, ಪಾರ್ವತಿ ಕೈಲಾಸದಲ್ಲಿದ್ದರೆಂದು ಹೇಳಿದ್ದು ಹಿಂದೂ ಪುರಾಣಗಳಲ್ಲಿ () ಮಾತ್ರ. ಪುರಾಣಗಳು ಮತ್ತು ದಂತಕಥೆಗಳು ಗಡಿಸಮಸ್ಯೆಗಳಿಗೆ ಸಾಕ್ಷಿಗಳಾಗಲು ಸಾಧ್ಯವಿಲ್ಲ. ಇತಿಹಾಸದ ದಾಖಲೆಗಳು ಮಾತ್ರ ರುಜುವಾತುಗಳಾಗುತ್ತವೆ. ಮಿನ್ಸಾರ ಗ್ರಾಮದ ವಿಚಾರದಲ್ಲಿ ಲೋಹಿಯಾ ಇತಿಹಾಸದ ಇರ್ರೆಡೆಂಟಿಸ್ಟ್ (). ಶಿವ ಪಾರ್ವತಿಯರ ಮೊರೆಯಿಡುವುದರ ಮೂಲಕ ಲೋಹಿಯಾ ಪುರಾಣಶಾಸ್ತ್ರದ ಇರ್ರೆಡೆಂಟಿಸ್ಟ್ (Iಆಗುತ್ತಾರೆ. ಅತ್ಯಂತ ಕೆಟ್ಟ ಹಿಂದೂ ಪುನರುತ್ಥಾನವಾದಿಗಳಾದ ರಾಮರಾಜ್ಯ ಪರಿಷತ್ತು, ಹಿಂದೂ ಮಹಾಸಭಾ, ಜನಸಂಘ ಪಕ್ಷಗಳೂ ಹೇಳದಿದ್ದನ್ನು ಕೇಳದಿದ್ದನ್ನು ಲೋಹಿಯಾ ಹೇಳುವುದು ಕೇಳುವುದು ಅತ್ಯಂತ ಖೇದಕರ ವಿಷಯ.
ನೇಫಾ (ಓಇಈಂ): ಇದಕ್ಕೆ ಲೋಹಿಯಾ ಊರ್ವಶಿಯಂ ಎಂದು ಹೆಸರಿಟ್ಟುಕೊಳ್ಳುತ್ತಾರೆ. `ಊರ್ವಶಿಯಂ ಆದಿವಾಸಿಗಳು-ಮಿಸ್ಮೀಸ್, ದಫ್ಲಾಸ್, ಅಹೋಂಮ್ಸ್-.’ ಅಹೋಮ್ಸ್ ನೇಫಾದ ಆದಿವಾಸಿಗಳಲ್ಲ. 13ನೇ ಶತಮಾನದಿಂದ 19ನೇ ಶತಮಾನದ ಆದಿಭಾಗದವರೆಗೂ ಅಸ್ಸಾಂನ್ನು ಆಳಿದ ರಾಜಮನೆತನದ ಕುಲದವರು. ಲೋಹಿಯಾ ಅವರನ್ನು ಆದಿವಾಸಿಗಳೆಂದು ತಪ್ಪಾಗಿ ಭಾವಿಸುತ್ತಾರೆ. ಅಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳ ಕುರಿತು ಯಾವ ಅಂದಾಜೂ ಇಲ್ಲದೆ ಲೋಹಿಯಾ ಕೇವಲ ಊಹೆಗಳನ್ನೇ ಸತ್ಯಗಳೆಂದು ಭಾವಿಸಿ ತಮ್ಮ ವಾದ ಮಂಡಿಸುತ್ತಾರೆ. `ಊರ್ವಶಿಯಂನ ಅತಿಸುಂದರ ಸ್ಥಳ ನಿರ್ವಿವಾದವಾಗಿ ಲಾಂಗ್ಜು ಕಣಿವೆ ಹಾಗೂ ಮಾಚುಕ ಮತ್ತು ಟ್ಯೂಟಿಂಗ್ ಕಣಿವೆಗಳು, ನಾನು ತಪ್ಪು ತಿಳಿದಿರದಿದ್ದಲ್ಲಿ ಎಲ್ಲವೂ ದಿಬಾಂಗ್‍ಕಣಿವೆಯ ಮುಂದುವರಿಕೆ.’ ಎನ್ನುತ್ತಾರೆ ಲೋಹಿಯಾ. ಯಾವುದನ್ನು ಲೋಹಿಯಾ ಲಾಂಗ್ಜುವನ್ನು ಸುಂದರ ಕಣಿವೆ ಎನ್ನುತ್ತಾರೋ ಅದು ಕಣಿವೆಯ ಹೆಸರಲ್ಲ, ಅದು ಒಂದು ಉಪಗ್ರಾಮ . ಅದು ದಿಬಾಂಗ್ ಕಣಿವೆಗೆ ಸಂಬಂಧವಿಲ್ಲ, ಸಾರಿ  ಅಥವಾ ಸುಭಾನ್‍ಸಿರಿ ಕಣಿವೆಯಲ್ಲಿ ಇರುವುದು. ಮೇಚುಕ ಟ್ಯ್ಯೂಟಿಂಗ್‍ಗಳೂ ಕಣಿವೆಯ ಹೆಸರಲ್ಲ, ಅವು ಗ್ರಾಮಗಳು. ಅವು ದಿಬಾಂಗ್ ಕಣಿವೆಯಲ್ಲಿಲ್ಲ, ಬದಲು ದಿಹಾಂಗ್ ಕಣಿವೆಯಲ್ಲಿವೆ. ಪ್ರಧಾನಮಂತ್ರಿ ಸಂಸತ್ತಿನಲ್ಲಿ ತಿಳಿಸಿದಂತೆ ಲಾಂಗ್ಜು ಎರಡು ಅಥವಾ ಮೂರು ಚದುರ ಮೈಲಿಯ ನಿರ್ವಸಿತ ಪ್ರದೇಶವೆಂದು ಹೇಳಿದರು ಎಂದು ಸುಳ್ಳು ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಒಟ್ಟನಲ್ಲಿ ಆ ನೆಹರೂಗೆ ಒಂದಷ್ಟು ಬೈಯಬೇಕು, ದೂಷಣೆ, ಆರೋಪಗಳನ್ನು ಮಾಡಬೇಕು. ಅದಕ್ಕೆ ಏನಾದರೊಂದಿಷ್ಟು ಸುಳ್ಳುಗಳನ್ನು ಕಲ್ಪಿಸಿಕೊಂಡು ದೂರುವುದು. ನೆಹರೂ ಎಂದೂ ಲಾಂಗ್ಜು ನಿರ್ವಸಿತ ಪ್ರದೇಶ ಅಂತ ಹೇಳಿಲ್ಲ, ವಾಸಿತ ಪ್ರದೇಶ ಅಂತಾನೇ ಪದೇ ಪದೇ ಭಾಷಣದಲ್ಲಿ ಹೇಳಿದ್ದಾರೆ.
(ಮುಂದುವರಿಯುವುದು)

 

ಯಡೂರು ಮಹಾಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...