Homeಸಾಮಾಜಿಕವಾಸ್ತುಶಾಸ್ತ್ರ ಅನ್ನೋದು ವಂಚನೆಯ ಹೊಸ ಫ್ಯಾಶನ್

ವಾಸ್ತುಶಾಸ್ತ್ರ ಅನ್ನೋದು ವಂಚನೆಯ ಹೊಸ ಫ್ಯಾಶನ್

- Advertisement -
- Advertisement -

ಈ ಜೋಯಿಸರ ಪ್ರವರ ಬರೆದಷ್ಟು ಮುಗಿಯುವಂತದಲ್ಲ. ಎಲ್ಲಿಯವರೆಗೆ ಸೂರ್ಯ, ಚಂದ್ರ, ಗ್ರಹ ನಕ್ಷತ್ರಗಳಿರುತ್ತವೋ, ಎಲ್ಲಿಯವರೆಗೆ ಈ ಪುರೋಹಿತರು ಇರುತ್ತಾರೋ ಅಲ್ಲಿಯವರೆಗೆ ಅವರು ಕಾಲ್ಪನಿಕ ರಾಹು-ಕೇತುಗಳಂತೆ ಅಮಾಯಕ ಜನರನ್ನು ಕಾಡುತ್ತಲೇ ಇರುತ್ತಾರೆ. ಇದನ್ನು ಬರೆದು ಬರೆದು ರೋಸಿಹೋಗಿ ಕಳೆದ ಸಂಚಿಕೆಯಲ್ಲಿ ನಿಲ್ಲಿಸಿಯೇ ಬಿಡೋಣ ಎಂದು ನಿರ್ಧರಿಸಿದ್ದೆ. ಆದರೆ ಇನ್ನೆರಡು ಕಂತುಗಳನ್ನು ಬರೆಯಲೇಬೇಕು ಎಂದು ಅನಿಸಿದೆ, ಓದುಗರು ಕ್ಷಮಿಸಬೇಕು.
ಇಂದು ಜ್ಯೋತಿಷ್ಯದ ಹೆಸರಿನಲ್ಲಿ ಎಷ್ಟು ವಂಚನೆಗಳು ನಡೆಯುತ್ತಿವೆ ಎಂದರೆ ಬೆಳಗೆದ್ದು ಟಿ.ವಿ ನೋಡಿದರೆ ನಿಮ್ಮ ಕಣ್ಣಿಗೆ ಬೀಳುವುದೇ ಜ್ಯೋತಿಷಿಗಳು. ಪ್ರಳಯ ಆಗುತ್ತದೆ ಎಂದು ಬಹಿರಂಗವಾಗಿ ಟಿವಿಯಲ್ಲಿ ಘೋಷಿಸಿ ಜನರನ್ನು ಬೆದರಿಸಿದ್ದ ಬ್ರಹ್ಮಾಂಡನ ಅಂಡವನ್ನು ಯಾರೂ ಒಡೆಯದಿರುವುದರಿಂದ ಆತ ಇನ್ನೂ ತನ್ನ ಕಾಯಕ ಮುಂದುವರಿಸಿದ್ದಾನೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇರುವಷ್ಟು ಖಗೋಳದ ಪರಿಚಯ ಇಲ್ಲದಿರುವ ಈತ ಬಿಡುವ ಬರುಡೆಗಳು ಹಾಸ್ಯ ಕಾರ್ಯಕ್ರಮಗಳಂತಿವೆ. ಕೆಲವರು ಇಂತಹ ಜ್ಯೋಯಿಸರುಗಳ ಲೇವಡಿ ಮಾಡುವ ವಿಡಿಯೋಗಳನ್ನು ಯೂಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದು, ಅವು ವೈರಲ್ ಆಗಿದ್ದರೂ ನಂಬುವ ಪೆದ್ದರು ಸಾವಿರರು ಸಂಖ್ಯೆಯಲ್ಲಿದ್ದಾರೆ. ಅದಕ್ಕಾಗಿಯೇ ಸುದ್ದಿವಾಹಿನಿಗಳು ಇವೆಲ್ಲಾ ಬುರುಡೆಗಳನ್ನು ಗೊತ್ತಿದ್ದೂ ಪ್ರಸಾರ ಮಾಡಿ ಮೂಢನಂಬಿಕೆಗಳಿಗೆ ಇನ್ನಷ್ಟು ಇಂಬು ನೀಡುತ್ತಿವೆ.
ಕೇವಲ ಮುಗ್ಧ ಜನರಷ್ಟೇ ಇಂತಹ ಜ್ಯೋತಿಷಿಗಳ ಬಲೆಗೆ ಬೀಳುತ್ತಾರೆ ಎಂದಲ್ಲ. ನಾವು ಆಳಲೆಂದು ಆರಿಸಿಕಳುಹಿಸುವ ರಾಜಕಾರಣಿಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ. ದೇವಾಲಯ, ಮಸೀದಿಗಳನ್ನು, ಚರ್ಚುಗಳನ್ನು ಸುತ್ತುವುದು ವೈಯಕ್ತಿಕ ನಂಬಿಕೆ ಎಂದುಕೊಂಡರೂ ಕೂಡಾ ಇವರು ಅನಿಷ್ಟ ಪರಿಹಾರಕ್ಕೆ ಗ್ರಹಶಾಂತಿ, ಹೋಮಹವನಗಳನ್ನು ಮಾಡಿಸುವುದು ವಾಸ್ತುವಿನ ಹೆಸರಿನಲ್ಲಿ ಲಕ್ಷಾಂತರ ವೆಚ್ಚಮಾಡಿ ಕೊಠಡಿಗಳ ನವೀಕರಣ ಮಾಡಿಸುವುದು, ಅಲ್ಲಿ ಪುರೋಹಿತರುಗಳನ್ನು ಕರೆಸಿ ಹೋಮಹವನಗಳನ್ನು ಮಾಡಿಸುತ್ತಿರುವಾಗ ನೂರಾರು ತರಲೆ ತಾಪತ್ರಯಗಳಿಂದ ಬಳಲುತ್ತಿರುವ ಸಾಮಾನ್ಯ ಜನರ ಪಾಡೇನು?
ಜನರ ಮತದಿಂದ ಆಯ್ಕೆಯಾಗಿರುವ ಸರಕಾರವೊಂದು ಹಾಗೆಂದು ಹೇಳದೆ ‘ದೇವರ ದಯದಿಂದ ಅಧಿಕಾರಕ್ಕೆ ಬಂದಿದ್ದೇವೆ’, ದೇವರ ದಯೆ ನಮಗಿರುವ ಕಾರಣದಿಂದ ನಮ್ಮ ಸರಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುರೋಹಿತರ ನಾಯಕತ್ವದ ಪಕ್ಷದವರನ್ನು ಮೀರಿಸುವಂತೆ ಬಹಿರಂಗ ಹೇಳಿಕೆ ನೀಡುವುದು, ಅದಕ್ಕಾಗಿ ಜ್ಯೋತಿಷ್ಯಗಳ ಬಳಿ ಓಡುವುದು, ಇವರು ಜನರಿಗೆ, ಜನಶಕ್ತಿಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದನ್ನು ತೋರಿಸುವುದಿಲ್ಲವೆ? ಒಬ್ಬರಂತೂ ಮುಖ್ಯಮಂತ್ರಿಯಾಗುವ ಆಸೆಯಿಂದ ತನ್ನ ಹೆಸರಿನ ಇಂಗ್ಲೀಷ್ ಅಕ್ಷರಗಳನ್ನೇ ನ್ಯೂಮೆರಾಲಜಿ(ಸಂಖ್ಯಾಶಾಸ್ತ್ರ) ಎಂಬ ಬುರುಡೆಯ ಹೆಸರಲ್ಲಿ ಬದಲಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಇಲ್ಲಿ ಸಂಖ್ಯಾಶಾಸ್ತ್ರ ಎಂದರೆ ಸ್ಟಾಟಸ್ಟಿಕ್ಸ್ ಎಂಬುದು ವಿಜ್ಞಾನದಾವಿಷ್ಕಾರವಾದರೆ ಅಂಕೆ, ಸಂಖ್ಯೆ, ಅಕ್ಷರಗಳನ್ನು ನಿಮ್ಮ ಭವಿಷ್ಯವಾದ ಬ್ರಹ್ಮಾಂಡದಲ್ಲಿ ಇರುವ ಲೆಕ್ಕಹಾಕಿದರೇ ತಲೆ ಕೆಡಬಹುದಾದ ಕೋಟಿಕೋಟ್ಯಂತರ ನಕ್ಷತ್ರ ಗ್ರಹಪುಂಜಗಳ ನಡುವೆ ಇರುವ ಅಶ್ವಿನಿ, ಭರಣಿ……., ಇತ್ಯಾದಿಯಾಗಿ ಖಗೋಳಶಾಸ್ತ್ರಜ್ಞರು ಗುರುತಿಸಿರುವ ಕೆಲವೇ ಕೆಲವು ನಕ್ಷತ್ರಗಳು ನಮ್ಮ ಭವಿಷ್ಯ ನಿರ್ಧರಿಸುತ್ತವೆ ಎನ್ನುವಷ್ಟೇ ಅವೈಜ್ಞಾನಿಕ ಭಾರತೀಯ ಪರಂಪರೆಯ ಭಾಗ ಈ ಬುರುಡೆ ಜೋತಿಷ್ಯ ಎನ್ನುವ ಈ ಮಹಾನ್ ನಾಯಕ ಭಾರತೀಯನಾದ ತನ್ನ ಭವಿಷ್ಯವನ್ನು ಕೆಲವೇ ಶತಮಾನಗಳ ಹಿಂದೆ ನಮಗೆಲ್ಲಾ ಪರಿಚಯವಾದ ಇಂಗ್ಲೀಷ್ ಭಾಷೆಯ ಅಕ್ಷರಗಳು ತನ್ನ ಹೆಸರಿಲ್ಲಿ ಆಚೆ ಈಚೆ ಆಗಿರುವುದು ತನ್ನ ಭವಿಷ್ಯ ನಿರ್ಧರಿಸುತ್ತದೆ ಎಂದು ನಂಬಿದರೆ, ನಾವು ಮೋಸಕ್ಕೆ ಒಳಗಾಗುವ ಜನಸಾಮಾನ್ಯರನ್ನು ಯಾಕೆ ದೂರಬೇಕು?! ಅವರನ್ನು ರಕ್ಷಿಸಬೇಕಾದ ಅಗತ್ಯವಿದೆ. ಆದರೆ, ಅದನ್ನು ಮಾಡಬೇಕಾದ ಶಾಸಕ ಅಂದರೆ ಶಾಸನ ಮಾಡಬೇಕಾದ ಬುದ್ಧಿವಂತರೇ ಮೂರ್ಖರಾಗಿರುವಾಗ ಜನರಿಗೆ ಇದನ್ನೇ ಬರೆದು ಪ್ರಯೋಜನ ಎನ್ನುತ್ತೀರಾ?
ಸರಿ! ವಿಜ್ಞಾನದ ಪ್ರತಿಯೊಂದು ಆವಿಷ್ಕಾರಗಳಿಗೆ ಪ್ರತಿಸ್ಪಂದಿಯಾಗಿ ಜೋಯಿಸರುಗಳು ತಮ್ಮದೇ ಆದ ಪ್ರತಿಸ್ಪಂದಿ ಶಾಖೆಗಳನ್ನು ತೆಗೆದಿದ್ದಾರೆ. ಸಂಖ್ಯಾಶಾಸ್ತ್ರಕ್ಕೆ ನ್ಯುಮೆರಾಲಜಿ, ಆರ್ಕಿಟೆಕ್ಟರ್‍ಗೆ ವಾಸ್ತು ಇತ್ಯಾದಿ ಬುರುಡೆಗಳನ್ನು ಗಮನಿಸಬಹುದು. ಇವುಗಳಲ್ಲಿ ಬಡಜನರನ್ನು ಬಹುವಾಗಿ ಆಕರ್ಷಿಸುವುದು ಮನಶಾಸ್ತ್ರದ ಕಾಪಿಯಾಗಿರುವ ವಶೀಕರಣ ವಿದ್ಯೆ. ಯಾವುದೇ ದಿನಪತ್ರಿಕೆಯನ್ನು ತೆರೆದು ನೋಡಿದರೆ ನಿಮಗೆ ಗಂಡು-ಹೆಣ್ಣಿನ ವಶೀಕರಣ ಮಾಡುವುದಾಗಿ ನಂಬಿಸಿ ಕೊರಳು ಕೊಯ್ಯುವ ಜಾಹೀರಾತುಗಳು ಕಾಣಸಿಗುತ್ತವೆ. ಇಂತಹ ವಂಚಕರು ಗಂಡು-ಹೆಣ್ಣಿನ ಪ್ರೇಮ-ಕಾಮವನ್ನೇ ಬಂಡವಾಳ ಮಾಡಿಕೊಂಡು ಕೇವಲ ಒಂದು ಹೆಂಚಿನ ರೂಮು ಮತ್ತು ಮೊಬೈಲ್ ನಂಬರನ್ನೇ ಬಳಸಿಕೊಂಡು ತಮ್ಮ ದಂಧೆ ನಡೆಸುತ್ತಾರೆ. ತಾವು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮಂತ್ರಶಕ್ತಿಯಿಂದ ಮತ್ತು ಪೂಜೆ ಮಾಡಿಸಿ ವಶೀಕರಣ ಅಥವಾ ಹಿಪ್ನೋಟಿಸಂ ಮಾಡಿ ಹೆಣ್ಣು-ಗಂಡುಗಳನ್ನು ವಶಮಾಡಿಕೊಡುವುದಾಗಿ ಬುರುಡೆ ಬಿಡುತ್ತಾರೆ. ಜೊತೆಗೆ ಮಹಿಳೆಯರಿಗೆ ವಿಶೇಷ ರಿಯಾಯತಿಯನ್ನೂ ಘೋಷಿಸುತ್ತಾರೆ.
ಈ ವೈದ್ಯಕೀಯ ಪರಿಭಾಷೆಯಾಗಿರುವ ಮನಶಾಸ್ತ್ರಜ್ಞರು ಸೂಕ್ತ ಅರ್ಹತಾಪತ್ರದೊಂದಿಗೆ ಚಿಕಿತ್ಸೆಗಾಗಿ ಬಳಸಬಹುದಾದ ‘ವಶೀಕರಣ’ ಅಥವಾ ‘ಸೈಕೋಥೆರಪಿ’ ಎಂಬ ಪದಬಳಕೆಯೇ ಪೊಲೀಸರಿಗೆ ಕೇಸು ಜಡಿಯಲು ಸಾಕು. ಪತ್ರಿಕೆಗಳು ಯಾವುದೇ ಸಾಮಾಜಿಕ ಜವಬ್ದಾರಿ ಇಲ್ಲದ ಹಣದಾಸೆಗಾಗಿ ಇಂತಹ ಕಳ್ಳ ಜ್ಯೋತಿಷಿಗಳು-ಮಾಟಮಂತ್ರವಾದಿಗಳ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದರೂ, ಪೊಲೀಸರು ಸ್ವಯಂಆಗಿ ಕೇಸು ದಾಖಲಿಸಲು ಸಾಧ್ಯವಿದ್ದರೂ ಇಂತಹ ಕಪ್ಪು ದಂಧೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಮುಖ್ಯವಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ಪ್ರೇಮ-ಕಾಮ ಸಂಬಂಧಿ ಸಮಸ್ಯೆಗಳಿಂದ ಬಳಲುವ ಪೆದ್ದ ಜನರು ಇವರಿಗೆ ಬಲಿಪಶುಗಳಾಗುತ್ತಾರೆ.
ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕ್ ಅವರು ತಮ್ಮ ಶಿಷ್ಯೆಯೊಬ್ಬರನ್ನು ಮಗಳೆಂದು ಹೇಳಿಕೊಂಡು ಇಂತಹ ಕಳ್ಳ ಜ್ಯೋಯಿಸನ ಬಳಿಗೆ ಹೋಗಿ ವಿಡಿಯೋ ರೆಕಾರ್ಡಿಂಗ್ ಮಾಡಿ ಪೊಲೀಸರಿಗೆ ದೂರು ನೀಡಿ ಆತನ ಬಣ್ಣ ಬಯಲು ಮಾಡಿದ್ದರು! ವಿಶೇಷವೆಂದರೆ ಊರವರಿಗೆ ‘ಭವಿಷ್ಯ’ ಹೇಳುವ ಈ ಕಳ್ಳನಿಗೆ ತನಗೆ ಪೊಲೀಸರ ಅತಿಥಿಯಾಗುವ ಭಾಗ್ಯ ಲಭಿಸಲಿದೆ ಎಂದು ಗೊತ್ತಿರಲಿಲ್ಲ!
ಇದೇ ರೀತಿ ವಿದ್ಯಾವಂತರೂ ನಂಬಿಕೊಂಡು ಹಣ ಚೆಲ್ಲುತ್ತಿರುವ ವಾಸ್ತುಶಾಸ್ತ್ರ. ಕಟ್ಟಡ ನಿರ್ಮಾಣ ಮತ್ತು ಇಂಟೀರಿಯರ್ ಡೆಕೋರೇಷನ್ ಎಂಬ ವಿಜ್ಞಾನ ಮತ್ತು ಕಲೆಯನ್ನು ವಂಚನೆಗಾಗಿ ಬಳಸುವುದು ಇತ್ತೀಚೆಗೆ ಒಂದು ದೊಡ್ಡ ದಂಧೆ ಮತ್ತು ಫ್ಯಾಷನ್ ಆಗಿಬಿಟ್ಟಿದೆ. ಅಡುಗೆ ಕೋಣೆ ಅಲ್ಲಿರಬಾರದು-ಇಲ್ಲಿರಬೇಕು ಈ ಮೇಜು ಅಲ್ಲಿದ್ದರೆ ದೋಷ-ಇಲ್ಲಿರಬೇಕು, ಬಾಗಿಲು ಈ ಕಡೆ ಇರಬೇಕಿತ್ತು……. ಇತ್ಯಾದಿ ಕತೆಗಳನ್ನು ಹೆಣೆದು ಹಣ ಮಾಡುವುದು ಇಂತವರ ಚಾಳಿ. ಇಂತಹ ವಾಸ್ತು ಕಳ್ಳರನ್ನು ನಂಬಿ ಹಾಳಾದ ಗೆಳೆಯನೊಬ್ಬನ ವಿಷಯವನ್ನು ಹಿಂದೆ ಬರೆದಿದದ್ದೆ. ನನ್ನ ನೆರೆಮನೆಯ ಕಿರಿಯ ಗೆಳೆಯನೊಬ್ಬ ಬಂದು ಹೊಸಮನೆ ಕಟ್ಟಿದ. ಅನುಕೂಲ ಮತ್ತು ಸೌಂಧರ್ಯದ ದೃಷ್ಟಿಯಿಂದ ಅಚ್ಚುಕಟ್ಟಾಗಿದ್ದ ಮನೆಯದು. ಯಾರೋ ಅವನ ಮನಸ್ಸಿಗೆ ವಾಸ್ತುದೋಷದ ಹುಳಬಿಟ್ಟರು. ಒಂದು ದಿನ ಒಬ್ಬ ವಾಸ್ತುತಜ್ಞ ಬಂದ. ಇವನಿಗೆ ಪೂರ್ಣ ನಂಬಿಕೆ ಇಲ್ಲದೇ ಇದ್ದುದ್ದರಿಂದ ನನ್ನನ್ನು ಕರೆದಿದ್ದ. ಆತ ನಿರೀಕ್ಷೆಯಂತೆ ಅದು ಆ ದಿಕ್ಕಿನಲ್ಲಿ ಇರಬೇಕು-ಇದು ಈ ದಿಕ್ಕಿನಲ್ಲಿ ಇರಬೇಕಿತ್ತು ಎಂದು ತಗಾದೆ ತೆಗೆದು-ಅದು ಒಡೆಯಬೇಕು-ಇದು ಒಡೆಯಬೇಕು ಎಂದು ಹೇಳತೊಡಗಿದ ಆಪೂಜೆ-ಈ ಪೂಜೆ ಎಂದು ಕೆಲವು ಖರ್ಚಿನ ಬಾಬತ್ತು ಹೇಳತೊಡಗಿ, ಕೊನೆಗೆ ಕೆಲವು ಕನ್ನಡಿಗಳನ್ನು ಅಲ್ಲಲ್ಲಿ ಆಳವಡಿಸಬೇಕೆಂದು ಹೇಳಿ ಕೆಲವು ಸಾವಿರಗಳ ಕೊಟೇಷನ್ ಕೊಟ್ಟ! ಒಂದು ಕನ್ನಡಿ ಹೇಗೆ ಈ ಮನೆಯ ಭವಿಷ್ಯ ಬದಲಿಸುತ್ತದೆ ಎಂದು ನಾನು ತಗಾದೆ ತೆಗೆದು ಚರ್ಚೆಗಿಳಿದಾಗ ಸುಣ್ಣವಾದ. ಆತನನ್ನು ಕರೆದ ಕರ್ಮಕ್ಕೆಂದು 500ರೂ ಕೊಟ್ಟು ನನ್ನ ಗೆಳೆಯ ಸಾಗಹಾಕಿದ.
ಮುಂದೆ ಇಂತಹ ಕೆಲವು ಕತೆಗಳನ್ನು ಮತ್ತು ವರ್ಚುವಲ್ ಭವಿಷ್ಯ ಮತ್ತು ಪೂಜೆಯ ಬಗ್ಗೆ ನೋಡೋಣ.

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...