Homeಸಿನಿಮಾಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ....

ಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ….

- Advertisement -
- Advertisement -
ಕನ್ನಡಿಗರು ಭಾವನಾ ಜೀವಿಗಳು, ಕರ್ನಾಟಕದಲ್ಲಿ ಭಾವನೆಗಳಿಗೆ ಬೆಲೆ ಜಾಸ್ತಿ ಎಂಬ ಮಾತುಗಳು ಚಿತ್ರರಂಗದಲ್ಲಿ ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಅಂತೆಯೇ ಕೆಲವು ಸಿನಿಮಾಗಳಲ್ಲಿ ಕನ್ನಡಿಗರು ಸೆಂಟಿಮೆಂಟಲ್ ಫೂಲ್ಸ್ ಎಂದೂ ಸಹ ನಯವಾಗಿ ಬೈಸಿಕೊಂಡಿರುವುದೂ ಇದೆ. ಕನ್ನಡ ಚಿತ್ರರಂಗವು ಸೆಂಟಿಮೆಂಟ್‍ಗೆ ಹೆಚ್ಚು ಹೊತ್ತು ಕೊಡುತ್ತಾ ಬಂದಿದೆ, ಸಂಬಂಧಗಳ ಭಾವನೆಗಳನ್ನಿಟ್ಟುಕೊಂಡು ಮಾಡಿದ ಸಿನಿಮಾಗಳು ಫೈಲ್ ಆಗಿದ್ದೇ ಇಲ್ಲ.
ಅದರಲ್ಲೂ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದಷ್ಟು ಅನುಕಂಪ. ಅಮ್ಮ ಎಂದರೆ ಸ್ಥೈರ್ಯ, ಅಮ್ಮಾ ಎಂದರೆ ಅನುಕಂಪ, ತಾಯಿಯೇ ಸ್ಫೂರ್ತಿ ಎಂಬ ಹೆಗ್ಗಳಿಕೆ ಕನ್ನಡಿಗರದು. ಹೆತ್ತವಳು ಕಣ್ಣೆದುರೇ ಮರೆಯಾಗುತ್ತಾಳೆಂದಾಗ ಅವಳನ್ನು ಉಳಿಸಿಕೊಳ್ಳಲು ಮಗನ ಒದ್ದಾಟ ಹಾಗೂ ತಳಮಳವನ್ನು ಕಥೆಯನ್ನಾಗಿಟ್ಟುಕೊಂಡು ನಿರ್ದೇಶಕ ಕೆ.ಎಂ.ಚೈತನ್ಯ ‘ಅಮ್ಮ ಐ ಲವ್ ಯೂ’ ಸಿನಿಮಾ ಮಾಡಿದ್ದಾರೆ.
ಪ್ರೀತಿಯ ಪ್ರಜ್ಞೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರ ಅಮ್ಮ ಮಗನ ಸೆಂಟಿಮೆಂಟ್ ಅಷ್ಟೇ ಅಲ್ಲದೆ ಸಮಾಜದ ಹಲವು ಸಂಬಂಧಗಳನ್ನು ಬೆಸೆಯುವ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಭಿಕ್ಷುಕರ ಬದುಕಿನ ತೊಳಲಾಟದೊಂದಿಗೆ ಬದುಕಿನ ಅರ್ಥವನ್ನು ಕಟ್ಟಿಕೊಟ್ಟಿದೆ.
ಸಿದ್ದಾರ್ಥ್ ತನ್ನ ಹೆತ್ತ ತಾಯಿ ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವಳನ್ನು ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳನ್ನು ಸುತ್ತಿದರು ತಾಯಿ ಗುಣಮುಖಳಾಗದಿದ್ದ ಚಿಂತೆಯಲ್ಲಿದ್ದವನು ಒಬ್ಬ ಸನ್ಯಾಸಿಯ ಮಾತು ಕೇಳಿ ತನ್ನ ವೈಚಾರಿಕತೆಯನ್ನು ಬದಿಗೊತ್ತಿ ಶ್ರೀಮಂತಿಯ ವೇಷ ಮರೆಸಿ ಭಿಕ್ಷುಕನ ವೇಷ ಧರಿಸಿ ಭಿಕ್ಷಾಟನೆಯ ಅಜ್ಞಾತವಾಸಕ್ಕೆ ತೆರಳುತ್ತಾನೆ, ಇಲ್ಲಿ ತಾಯಿಯ ಮೇಲಿನ ಮಮತೆ ಔಷಧಿಗಳಿಂದ ಸಾಧ್ಯವಾಗದ್ದು ಹರಕೆಯಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಲಾರದು. ಇಂತಹ ಸಂದರ್ಭಗಳು ಜನರು ಮೌಢ್ಯದ ಮೊರೆಹೊಗುವ ಪರಿಸ್ಥಿತಿಗೆ ಕನ್ನಡಿ ಇಟ್ಟಂತೆ ತಿಳಿಸುತ್ತವೆ.
ಆ ದಿನಗಳಲ್ಲಿ ಭಿಕ್ಷುಕರ ನೋವು-ನಲಿವು, ಅವರು ಎದುರಿಸುವ ಮಾನಸಿಕ ದೈಹಿಕ ಹಿಂಸೆಗಳನ್ನು ಬಿಡಿಸಿಟ್ಟಿರುವ ಚಿತ್ರ, ಭಿಕ್ಷುಕರೆಂದರೆ ಅಸಹ್ಯ ಪಡುವ ಜನರು ಹಾಗೂ ಕೆಲವು ಸಿನಿಮಾಗಳನ್ನು ನೋಡಿ ಭಿಕ್ಷುಕರು ಭಾರಿ ಸಂಪಾದಿಸುತ್ತಾರೆಂದು ಅವರನ್ನು ದೂಷಿಸುವ ಜನರಿಗೆ ಭಿಕ್ಷುಕರನ್ನು ಕಾಮೆಡಿ ಸೀನ್‍ಗಳಾಗಿ ತೋರುವ ಬೇರೆಲ್ಲ ಸಿನಿಮಾಗಳಿಗಿಂತ ಭಿಕ್ಷುಕರ ಬದುಕಿನ ನೈಜತೆಯನ್ನು ಚಿತ್ರಿಸಿದೆ. ಭಿಕ್ಷುಕರೂ ಮನುಷ್ಯರೇ ಅವರಿಗೂ ಒಂದು ಬದುಕಿದೆ, ಉಳ್ಳವರ ಮಧ್ಯೆ ಅವರ ದೌರ್ಜನ್ಯಗಳಿಂದ ತೊಳಲಾಡುವ ಇಲ್ಲದವರ ಬದುಕಿನ ಪ್ರತಿಬಿಂಬವಾಗಿ ಭಿಕ್ಷುಕರ ಬದುಕು ಕಾಣದೆ ಇರಲಾರದು.
ಮಾಲೀಕನ ಕೈ ಕೆಳಗೆ ದುಡಿದು ಕಷ್ಟದ ದಿನಗಳಲ್ಲಿ ಎದುರಿಸಿ ಉದ್ಯಮಿಯಾಗಿ ಬೆಳೆದುಬಂದ ಸಿದ್ದಾರ್ಥನ ತಾಯಿ, ಕಂಪನಿಯ ಮಾಲಕಿಯಾಗಿ, ದುಡಿಯುವ ಜನರ ಸ್ನೇಹಿತೆಯಾಗಿದ್ದು, ನೌಕರರನ್ನು ರೋಬೋಟ್‍ಗಳಂತೆ ದುಡಿಸಿಕೊಳ್ಳುವ ವ್ಯವಸ್ಥೆಯೊಳಗೆ ಕಷ್ಟದ ಅರಿವಿರುವ ತಾಯಿ ತನ್ನ ಕಂಪನಿಯಲ್ಲಿ ದುಡಿಯುವ ಶ್ರಮಿಕರ ಹಿತವನ್ನೂ ಕಾಯುವ, ಅವರ ಬದುಕಿನಲ್ಲಿ ನೆರವಾಗುತ್ತಾ ಎಲ್ಲರನ್ನೂ ನಿಸ್ವಾರ್ಥವಾಗಿ ಒಳಗೊಳ್ಳುವಳು, ಈ ಒಳಗೊಳ್ಳುವಿಕೆ ಇಲ್ಲದವರ ಶ್ರಮದಿಂದ ಉಳ್ಳವರು ಕಟ್ಟಿಕೊಳ್ಳುವ ಮೊಹಲ್ಲಗಳ ಮಧ್ಯೆ ಸದೃಢ ಸಮಾಜದಲ್ಲಿ ದುಡಿಯುವ ಕೈಗಳಿಸಿ ತಮ್ಮ ಶ್ರಮಕ್ಕೆ ಸಿಗಬೇಕಾದ ಪಾಲಿನ ಸಂಕೇತವಾಗಿದೆ. ತಮ್ಮ ದುಡಿವ ಕೈಗಳಿಗೆ ಕೆಲಸಕೊಟ್ಟ ಅವಳ ಉಳಿವಿಗಾಗಿ ಪ್ರಾರ್ಥಿಸುವ ಸಿಬ್ಬಂದಿಗಳು, ಮಾಲಿಕ ಮತ್ತು ಶ್ರಮಿಕರ ಹೊಂದಾಣಿಕೆಗೆ ಸ್ಪೂರ್ತಿ ತುಂಬುತ್ತದೆ.
ಮತ್ತೊಂದೆಡೆ ಇಂದಿನ ಯುವಜನರು ಸಮಾಜದಲ್ಲಿ ಮಾಡಬೇಕಾದ ಸಹಾಯಾಸ್ತದ ಕನಿಷ್ಟ ಮೌಲ್ಯವನ್ನು ತೋರಿಸುವ ನಾಯಕಿಯ ಪಾತ್ರ, ತಾಯಿಗಾಗಿ ಭಿಕ್ಷೆ ಬೇಡುವ ಪ್ರೇಮಿಯ ಪ್ರೀತಿ ಬಯಸುವ ಪ್ರೇಯಸಿ. ಈ ಎಲ್ಲಾ ಪಾತ್ರಗಳೂ ಜೀವನ ಸಂಗ್ರಾಮದ ಹಲವು ದಿಕ್ಕುಗಳನ್ನು ತೋರುತ್ತವೆ.

ಪ್ರೀತಿ, ಮಮತೆಯ ಹುಡುಕಾಟದೊಂದಿಗೆ ಸಾಗುವ ಚಿತ್ರ ನೋಡುಗರ ಮನತಟ್ಟುವ ಕಥಾಹಂದರವನ್ನು ಒಳಗೊಂಡಿದೆ. ಆದರೆ ಇಂತಹ ಕತೆಯನ್ನು ತೆರೆಯ ಮೇಲೆ ನಿರೂಪಿಸುವಾಗ ಪ್ರೇಕ್ಷಕರ ಮನಸಲ್ಲಿ ಕ್ಯೂರಿಯಾಸಿಟಿಯನ್ನಾಗಲಿ ಅಥವಾ ನೋಡುಗರ ಗಮನ ಮತ್ತೊಂದೆಡೆಗೆ ಜಾರದಂತೆ ತನ್ನತ್ತ ಸೆಳೆದಿಟ್ಟುಕೊಳ್ಳುವಲ್ಲಿ ತಂಡ ಕೊಂಚ ಎಡವಿದೆಯಾದರೂ, ಭಿಕ್ಷುಕನ ಪಾತ್ರದಲ್ಲಿ ಚಿರು, ಹಾಗೂ ನಾಯಕಿಯಾಗಿ ಹೊಸ ನಟಿ ನಿಶ್ಚಿಕಾ ಸೌಂದರ್ಯ ಉತ್ತಮ ಅಭಿನಯ ನೀಡಿದ್ದಾರೆ.


ಕಳೆದುಹೋದ ಖಳನಾಯಕ

ವಿಷ್ಣುವರ್ಧನ್, ಅಂಬರೀಶ್, ಶಿವರಾಜ್‍ಕುಮಾರ್‍ರಂಥಹ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಖಳನಾಯಕನಾಗಿ ಅಭಿನಯಿಸುತ್ತಿದ್ದ ಧೀಮಂತ ಕಲಾವಿದ, ಖ್ಯಾತ ನಾಟಕಕಾರ ಸದಾಶಿವ ಸಾಲ್ಯನ್ ಇಹಲೋಕ ತ್ಯಜಿಸಿದ್ದಾರೆ. 1988ರಲ್ಲಿ ತುಳು ಭಾಷೆಯ ‘ಭಾಗ್ಯವಂತೆದಿ” ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸಾಲ್ಯನ್ ಕನ್ನಡ, ತುಳು, ಹಿಂದಿ, ಮರಾಠಿ ಭಾಷೆಯಲ್ಲಿ ಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿದ್ದರು, 500ಕ್ಕೂ ಹೆಚ್ಚು ರಂಗ ಪ್ರಯೋಗಗಳಲ್ಲ್ಲಿ ಅಭಿನಯಿಸಿದ ಮುಂಬೈ-ಕರ್ನಾಟಕದ ಏಕೈಕ ರಂಗಕಲಾವಿದನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮುಂಬೈನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯೂ ಆಗಿದ್ದ ಇವರು 2004ಅಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲಿನ ಸ್ವಾಧಿನ ಕಳೆದುಕೊಂಡು ಕಷ್ಟದ ಜೀವನ ಸಾಗಿಸುತ್ತಿದ್ದವರು.


ಕುಂಬಳಕಾಯಿ ಕಳ್ಳ ಕೋಕಿಲ?
ಸಿನಿಮಾ ರಂಗದ ಸ್ಟಾರ್‍ಗಳು, ನಿರ್ದೇಶಕರು, ನಿರ್ಮಾಪಕರಿಗಾಗಲೀ ಭೂಗತ ಪಾತಕಿಗಳೊಂದಿಗಿನ ಒಡನಾಟ ಮಾಮೂಲಿಯಾದದ್ದು. ಎಷ್ಟೋ ನಿರ್ಮಾಪಕರೇ ರೌಡಿ ಶೀಟರ್ ಬ್ಯಾಗ್ರೌಂಡ್ ಹೊಂದಿರುತ್ತಾರೆ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಲ್ಲ. ಅಂತೆಯೇ ಬೆಂಗಳೂರಿನ ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿಯನ್ನು ಬಹಳ ದಿನಗಳಿಂದ ಹುಡುಕುತ್ತಿದ್ದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ರೌಡಿ ರವಿ ಜತೆ ಹಾಸ್ಯನಟ ಸಾಧುಕೋಕಿಲ ಒಡನಾಟ ಇಟ್ಟುಕೊಂಡಿದ್ದರೆಂದು ಯಾರೋ ಹಬ್ಬಿಸಿದ
ಗಾಳಿಸುದ್ದಿಯನ್ನು ಕೇಳಿ ಹೆದರಿದ ಸಾಧು ಸಿಸಿಬಿ ಕಚೇರಿಗೆ ದೌಡಾಯಿಸಿದ್ದಾರೆ. ನನಗೂ ರೌಡಿಗೂ ಯಾವ ಸಂಬಂಧವೂ ಇಲ್ಲ, ಈ ಪ್ರಕರಣದಲ್ಲಿ ನನ್ನ ಹೆಸರು ಬರುತ್ತಿದೆಯಂತೆ ಎಂದು ಅಧಿಕಾರಿಯ ಎದುರು ಕುಂಯ್ಯೋಮರ್ರೋ ಎಂದರಂತೆ. ಅದಕ್ಕೆ ಆ ಅಧಿಕಾರಿ ನಿನಗೆ ರೌಡಿಯ ಜತೆ ಒಡನಾಟವಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ, ಹೇಳೋಕೆ ಯಾವ ಪುರಾವೆಯೂ ಇಲ್ಲ, ‘ಕುಂಬಳಕಾಯಿ ಕಳ್ಳ ಅಂದ್ರೆ ನೀನ್ಯಾಕೆ ಹೆಗಲು ಮುಟ್ಟಿ ನೋಡ್ಕೋತೀಯಾ’, ಹಾಗೇನಾದರೂ ಇದ್ದರೆ ನಾವೆ ಕರೆಯುತ್ತಿದ್ದೆವು ಎಂದು ಮಂಗಳಾರತಿ ಮಾಡಿ ಕಳಿಸಿದ್ದಾರೆ. ಸಾಧುವಿನ ಈ ಅತಿಗಾಬರಿಯ ವರ್ತನೆ ಅದ್ಯಾವುದೋ ಕೆಟ್ಟ ಕ್ಷಣಗಳ ಮುನ್ಸೂಚನೆಯಂತೆ ಕಾಣುತ್ತಿದೆ. ಹಾಗೇನಾದರೂ ಸಾಧು ಇಂತಹ ಕ್ರಿಮಿನಲ್‍ಗಳ ಒಡನಾಟ ಇಟ್ಟುಕೊಂಡಿದ್ದರೆ, ಅಂತಹವುಗಳನ್ನು ಕತ್ತರಿಸಿಕೊಂಡು ಹೊರಬರಲಿ. ಯಾಕೆಂದರೆ, ಅವರ ಪ್ರತಿಭೆಗೆ ಈ ಬಗೆಯ ಮಸಿ ಹತ್ತಿಕೊಂಡು ಮಂಕಾಗುವುದು ಯಾರಿಗೂ ಇಷ್ಟವಿಲ್ಲ.
– ಸೋಮಶೇಖರ್ ಚಲ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...